Headlines

ಆಷಾಢ ಶುಕ್ರವಾರಕ್ಕೆ ದಿನಗಣನೆ: ಚಾಮುಂಡಿ ಬೆಟ್ಟಕ್ಕೆ ಬರುವ ವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ, ಸಮಯ ನಿಗದಿ – Kannada News | Ashada Friday 2026: Mysuru Chamundi Hill Introduces VIP Darshan Timings, Special Entry Rules Announced

ಮೈಸೂರು, ಜುಲೈ 15: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜುಲೈ 17 ರಿಂದ ಆಷಾಢ ಶುಕ್ರವಾರದ ಪೂಜೆ ಆರಂಭವಾಗಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು (ಬುಧವಾರ) ಬೆಟ್ಟಕ್ಕೆ ಭೇಟಿ ನೀಡಿ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನವನ್ನು ಪರಿಶೀಲಿಸಿದರು. ವಿಐಪಿ ದರ್ಶನಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಬೆಳಗ್ಗೆ 5:30ರಿಂದ 9:30ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಶಿಫಾರಸ್ಸು ಪತ್ರ ತಂದವರಿಗೆ ಕೂಡ ಬೆಟ್ಟಕ್ಕೆ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ. ಎಂಎಲ್‌ಎಗಳು, ನ್ಯಾಯಾಧೀಶರು,…

Read More

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್: 34 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ! – Kannada News | Bengaluru Drug Bust: Hebbal Police Arrest 4 Peddlers Who Challenged Khaki, Seize MDMA Worth Rs 34 Crore

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಬೆಂಗಳೂರು, ಜುಲೈ 15: “ಕರ್ನಾಟಕ ಪೊಲೀಸರು ಎಷ್ಟೇ ಕಣ್ಗಾವಲು ಇಟ್ಟರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ” ಎಂದು ಸೋಷಿಯಲ್ ಮೀಡಿಯಾ ಮೂಲಕ ಸವಾಲು ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳ (Drug Peddlers) ಜಾಲವನ್ನು ಹೆಬ್ಬಾಳ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ನೈಜೀರಿಯಾ ಪ್ರಜೆ ಸೇರಿ ನಾಲ್ವರು ಕುಖ್ಯಾತ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 580…

Read More

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ ರದ್ದುಪಡಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ – Kannada News | Karnataka Permanent Resident Certificate Row: BJP Urges Governor to Revoke State Government Decision

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಈ ನಿರ್ಧಾರವು ಅಕ್ರಮ ಬಾಂಗ್ಲಾದೇಶೀಯರನ್ನು ರಾಜ್ಯದ ಶಾಶ್ವತ ಮತದಾರರನ್ನಾಗಿ ಮಾಡುವ ಹುನ್ನಾರ ಎಂದು ಅಶೋಕ್ ಆರೋಪಿಸಿದ್ದಾರೆ. ರಾಜ್ಯದಲ್ಲಿ 20 ರಿಂದ 30 ಲಕ್ಷ ಬಾಂಗ್ಲಾದೇಶೀಯರಿದ್ದಾರೆ ಎಂಬ ಮಾಹಿತಿ ಇದ್ದು, ಇವರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದರಿಂದ ಅವರಿಗೆ ರೇಷನ್ ಕಾರ್ಡ್, ಆರೋಗ್ಯ ಕಾರ್ಡ್ ಮತ್ತು ಮನೆಗಳಂತಹ…

Read More

ವೈಭವ್ ವಿಷಯದಲ್ಲಿ ಎಡವಿತೇ ಟೀಮ್ ಇಂಡಿಯಾ? ದಿನೇಶ್ ಕಾರ್ತಿಕ್ ಕಿಡಿ!

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಪಾದಾರ್ಪಣೆಯ ನಿರ್ವಹಣೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದು, “ಅವರು ಸಂಪೂರ್ಣವಾಗಿ ತಪ್ಪು ದಾರಿ ತುಳಿದಿದ್ದಾರೆ” ಎಂದು ಹೇಳಿದ್ದಾರೆ. ಡಿಕೆ ಆಕ್ರೋಶ: ಸ್ಕೈ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು…

Read More

ರಷ್ಯಾ ತೈಲ ಖರೀದಿ: ಭಾರತ ಮತ್ತು ಚೀನಾ ವಿರುದ್ಧ ಶೇ. 100 ಸುಂಕ ವಿಧಿಸಲು ಅಮೆರಿಕ ಮುಂದು; ಬಂತು ಹೊಸ ವಿಧೇಯಕ – Kannada News | US brings a revised bill that proposes upto 100pc tariffs on India, China and few other countries

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್Image Credit source: PTI ವಾಷಿಂಗ್ಟನ್, ಜುಲೈ 15: ರಷ್ಯಾದಿಂದ ಕಚ್ಚಾ ತೈಲವನ್ನು (Russian Crude Oil) ಖರೀದಿಸುತ್ತಿರುವವರನ್ನು ಬೆದರಿಸಲು ಅಮೆರಿಕದ ಪ್ರಯತ್ನಸುತ್ತಲೇ ಇದೆ. ಅದರಲ್ಲೂ ಚೀನಾ, ಭಾರತ ಸೇರಿ ಐದು ದೇಶಗಳನ್ನು ಗುರಿ ಮಾಡಿ ಹೊಸ ನಿರ್ಬಂಧ ವಿಧೇಯಕವನ್ನು ಅಮೆರಿಕದ ಸಂಸತ್ತು ಹೊರತಂದಿದೆ. ಈ ವಿಧೇಯಕದ ಪ್ರಕಾರ ಅತಿಹೆಚ್ಚು ರಷ್ಯನ್ ತೈಲ ಖರೀದಿಸುತ್ತಿರುವ ಐದು ದೇಶಗಳ ಮೇಲೆ ಶೇ. 100ರವರೆಗೆ ಟ್ಯಾರಿಫ್ ವಿಧಿಸಲು ಪ್ರಸ್ತಾಪ ಮಾಡಲಾಗಿದೆ. ಅಮೆರಿಕದ ಎರಡು ಪ್ರಮುಖ…

Read More

‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ: ವಿದ್ಯುತ್ ದೀಪಾಲಂಕಾರದ ವೈಭವ – Kannada News | Sigandur Bridge Anniversary: Sagara’s Cable Bridge Lights Up Sharavathi Backwaters, Viral Drone Views

ಸಾಗರ, ಜು.15: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸಂಪರ್ಕಿಸುವ ಹಾಗೂ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆಯು ಸಾರ್ವಜನಿಕ ಸೇವೆಗೆ ಮುಕ್ತವಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ದಿನವನ್ನು ಮಲೆನಾಡಿನ ಗಡಿಭಾಗದ ಜನತೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಈ ಸುಂದರ ಕೇಬಲ್ ಸೇತುವೆಯು, ಇದೀಗ ಮೊದಲ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಮೈದುಂಬಿ ಕಂಗೊಳಿಸುತ್ತಿದೆ. ಸೇತುವೆಯ ಮೊದಲ…

Read More

ಹಲವು ಕತೆಗಳಿವೆ ಡಾಲಿ ಧನಂಜಯ್ ಬಳಿ, ಹೇಳಲು ಕಾತರ: ವಿಡಿಯೋ ನೋಡಿ – Kannada News | Daali Dhananjay says he has lot of stories to tell through cinema

ಡಾಲಿ ಧನಂಜಯ್ (Daali Dhananjay), ನಟನಾಗಿ ಜೊತೆಗೆ ನಿರ್ಮಾಪಕನಾಗಿಯೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ನಿರ್ಮಾಪಕನಾಗಿ ಹೊಸ ರೀತಿಯ ಧ್ವನಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಡುತ್ತಿದ್ದಾರೆ. ಹೊಸ-ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸುತ್ತಿದ್ದಾರೆ. ಹೊಸ ರೀತಿಯ ಸಿನಿಮಾಗಳನ್ನು ಕೊಡು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ‘ಮದರ್ ಪ್ರಾಮಿಸ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟ ಡಾಲಿ, ತಮ್ಮ ಬಳಿ ಹಲವಾರು ಕತೆಗಳಿದ್ದು, ಅವುಗಳನ್ನು ಹೇಳಲು ಕಾತರವಾಗಿರುವುದಾಗಿ ಹೇಳಿದ್ದಾರೆ. ವಿಡಿಯೋ…

Read More

ಸಂಬಂಧ ಹಾಳಾಗದಿರಲು 35 ವರ್ಷದೊಳಗೆ ಈ 4 ವೈವಾಹಿಕ ಪಾಠಗಳನ್ನು ಕಲಿಯಿರಿ – Kannada News | 4 marriage rules every couple should learn before age 35

ಮದುವೆ (Marriage) ಎಂದರೆ ಕೇವಲ ಒಟ್ಟಿಗೆ ಬದುಕುವುದು ಮಾತ್ರವಲ್ಲ, ಪರಸ್ಪರ ಅರ್ಥೈಸಿಕೊಳ್ಳುವುದು, ಗೌರವಿಸುವುದು ಮತ್ತು ವಿಶ್ವಾಸ ಬೆಳೆಸಿಕೊಳ್ಳುವುದೂ ಆಗಿದೆ. ಅನೇಕ ದಂಪತಿಗಳು ಸಣ್ಣ-ಪುಟ್ಟ ವಿಚಾರಗಳಿಂದ ಸಂಬಂಧದಲ್ಲಿ ಅಂತರವನ್ನು ಉಂಟುಮಾಡಿಕೊಳ್ಳುತ್ತಾರೆ. ಸಂಬಂಧ ತಜ್ಞೆ ಕೋಮಲ್ ಅವರ ಪ್ರಕಾರ, 35 ವರ್ಷ ತುಂಬುವ ವೇಳೆಗೆ ಪ್ರತಿಯೊಬ್ಬ ದಂಪತಿಯೂ ಕೆಲವು ಪ್ರಮುಖ ವೈವಾಹಿಕ ಪಾಠಗಳನ್ನು ಕಲಿತಿರಬೇಕು. ಇವು ಸಂಬಂಧವನ್ನು ದೀರ್ಘಕಾಲ ಗಟ್ಟಿಯಾಗಿಡಲು ಸಹಾಯ ಮಾಡುತ್ತವೆ. ದೈಹಿಕ ಸನಿಹ ಮಾತ್ರ ಸಾಕಾಗುವುದಿಲ್ಲ ಗಂಡ-ಹೆಂಡತಿಯ ನಡುವೆ ಭಾವನಾತ್ಮಕ ಅಂತರ ಉಂಟಾದರೆ, ಕೇವಲ ದೈಹಿಕ ಸನಿಹದಿಂದ…

Read More

‘ಯಾರೂ ಮತಾಂತರವಾಗಿಲ್ಲ’: ಲವ್ ಜಿಹಾದ್ ಆರೋಪ ತಳ್ಳಿಹಾಕಿದ ಆಮೀರ್ ಖಾನ್ – Kannada News | Aamir Khan rejects love jihad allegations, says his wives never converted

ಬಾಲಿವುಡ್ ಸ್ಟಾರ್ ನಟ, ನಿರ್ಮಾಪಕ ಆಮೀರ್ ಖಾನ್ (Aamir Khan) ಇತ್ತೀಚೆಗಷ್ಟೆ ಮೂರನೇ ಬಾರಿ ಮದುವೆ ಆಗಿದ್ದಾರೆ. ಬೆಂಗಳೂರಿನ ನಿವಾಸಿ ಗೌರಿ ಸ್ಪ್ರಾಟ್ ಅವರು ಆಮಿರ ಖಾನ್ ಅವರ ಮೂರನೇ ಪತ್ನಿ. ಈ ಹಿಂದೆ ಅವರು ರೀನಾ ದತ್ತಾ ಮತ್ತು ಕಿರಣ್ ರಾವ್ ಅವರುಗಳನ್ನು ವಿವಾಹವಾಗಿದ್ದರು. ಆಮಿರ್ ಅವರ ಮೂರನೇ ಮದುವೆ ಬಳಿಕ ಆಮಿರ್ ವಿರುದ್ಧ ಲವ್ ಜಿಹಾದ್ ಆರೋಪಗಳನ್ನು ಕೆಲವರು ಹೊರಿಸಿದ್ದರು. ಅನ್ಯ ಧರ್ಮೀಯರನ್ನು ಮದುವೆ ಆಗಿರುವುದಕ್ಕೆ ಆಮಿರ್ ವಿರುದ್ಧ ಫತ್ವಾ ಸಹ ಹೊರಡಿಸಲಾಗಿತ್ತು. ಇದೀಗ…

Read More

IND vs ENG ನಡುವಣ 2ನೇ ಪಂದ್ಯ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | India vs England 2nd ODI Date and Venue

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಕಾರ್ಡಿಫ್​ನಲ್ಲಿ ನಡೆಯಲಿರುವ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಗೆದ್ದರೆ 2-0 ಅಂತರದಿಂದ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ನಾಳಿನ (ಜು.16) ಪಂದ್ಯದಲ್ಲಿ ಆಂಗ್ಲರ ಪಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇನ್ನು ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಪಂದ್ಯ ನಡೆಯುವುದು…

Read More