Headlines

ತುಮಕೂರು: ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ, ಗೋಮಾಳದಲ್ಲಿ ಪತ್ತೆ – Kannada News | Tumakuru: Govt Hospital Meds Found Dumped in Koratagere, Water Pollution Risk

ಕೊರಟಗೆರೆ, ಜು.15: ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ ಹಾಗೂ ಜಾನುವಾರುಗಳು ಮೇಯುವ ಗೋಮಾಳದಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿಯಲ್ಲಿ ನಡೆದಿದೆ. ಇನ್ನೂ ಬಳಸಲು ಯೋಗ್ಯವಾಗಿದ್ದ ಸಾವಿರಾರು ಮಾತ್ರೆಗಳನ್ನು ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರೆಗಳು ಸಿಕ್ಕ ಜಾಗದ ಸಮೀಪದಲ್ಲೇ ಪ್ರಮುಖ ಕೆರೆಯೊಂದಿದ್ದು, ಮಳೆ ಬಂದರೆ ಈ ಮಾತ್ರೆಗಳ ರಾಸಾಯನಿಕ ನೀರು ಕೆರೆ ಸೇರಿ ಇಡೀ ಗ್ರಾಮದ…

Read More

Vastu Shastra: ಬೇರೆಯವರ ಬಟ್ಟೆಗಳನ್ನು ಧರಿಸುವ ಅಭ್ಯಾಸ ನಿಮಗಿದ್ಯಾ? ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Vastu Shastra: Why Wearing Others’ Clothes Can Impact Your Energy and Well being

ಇಂದಿನ ದಿನಗಳಲ್ಲಿ ಸ್ನೇಹಿತರ, ಒಡಹುಟ್ಟಿದವರ ಅಥವಾ ಸಂಬಂಧಿಕರ ಬಟ್ಟೆಗಳನ್ನು ಧರಿಸುವುದು ಅತ್ಯಂತ ಸಾಮಾನ್ಯವಾಗಿದೆ. ಕೆಲವೊಮ್ಮೆ ಅನುಕೂಲಕ್ಕಾಗಿ ಅಥವಾ ಫ್ಯಾಷನ್‌ಗಾಗಿ ಬೇರೆಯವರ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಬಟ್ಟೆಗಳು ಕೇವಲ ದೇಹವನ್ನು ಮುಚ್ಚುವ ಸಾಧನಗಳಲ್ಲ. ಅವು ವ್ಯಕ್ತಿಯ ಶಕ್ತಿ (Energy), ಆಲೋಚನೆ ಮತ್ತು ಜೀವನಶೈಲಿಯೊಂದಿಗೆ ನಿಕಟ ಸಂಬಂಧ ಹೊಂದಿರುತ್ತವೆ. ಆದ್ದರಿಂದ, ವಾಸ್ತು ನಿಯಮಗಳನ್ನು ತಿಳಿಯದೆ ಬೇರೆಯವರ ಬಟ್ಟೆಗಳನ್ನು ಧರಿಸುವುದು ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಶಕ್ತಿಯ ಪ್ರಭಾವ ಮತ್ತು ವಾಸ್ತು…

Read More

ಈಗಿನ ಮೊಬೈಲ್‌ಗಳಲ್ಲಿ ತೆಗೆದು ಬದಲಾಯಿಸಬಹುದಾದ ಬ್ಯಾಟರಿ ಏಕೆ ಇಲ್ಲ? ಇಲ್ಲಿದೆ ಅಚ್ಚರಿಯ ಕಾರಣ – Kannada News | Why modern smartphones no longer have removable batteries explained

ಒಂದು ಕಾಲದಲ್ಲಿ ನೋಕಿಯಾ (Nokia) ಸೇರಿದಂತೆ ಹೆಚ್ಚಿನ ಮೊಬೈಲ್‌ಗಳಲ್ಲಿ ಬ್ಯಾಟರಿಯನ್ನು ಸುಲಭವಾಗಿ ತೆಗೆದು ಹೊಸದನ್ನು ಹಾಕಬಹುದಾಗಿತ್ತು. ಹಲವರು ಒಂದು ಫೋನ್‌ಗೆ ಎರಡು-ಮೂರು ಬ್ಯಾಟರಿಗಳನ್ನು ಇಟ್ಟುಕೊಂಡೇ ಬಳಸುತ್ತಿದ್ದರು. ಆದರೆ ಈಗಿನ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ನಾನ್-ರಿಮೂವಬಲ್ (Sealed) ಬ್ಯಾಟರಿ ಮಾತ್ರವೇ ಇರುತ್ತದೆ. ಹಾಗಾದರೆ ಕಂಪನಿಗಳು ಈ ಬದಲಾವಣೆ ಏಕೆ ಮಾಡಿವೆ? ಇದಕ್ಕೆ ಕೇವಲ ಒಂದು ಕಾರಣವಲ್ಲ, ಹಲವು ತಾಂತ್ರಿಕ ಕಾರಣಗಳಿವೆ. ಮೊದಲನೆಯದಾಗಿ, ಇಂದಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ತೆಳುವಾಗಿದ್ದು, ಬಲಿಷ್ಠ ವಿನ್ಯಾಸದೊಂದಿಗೆ ಬರುತ್ತಿವೆ. ಜೊತೆಗೆ ದೊಡ್ಡ ಕ್ಯಾಮೆರಾ ಮಾಡ್ಯೂಲ್‌, ವೈರ್‌ಲೆಸ್ ಚಾರ್ಜಿಂಗ್‌,…

Read More

ಉಪವಾಸ ನಿರತ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ಬಲವಂತವಾಗಿ ದ್ರವಾಹಾರ ನೀಡಿ; ಹೈಕೋರ್ಟ್‌ಗೆ ತುರ್ತು ಅರ್ಜಿ – Kannada News | Plea in Delhi High Court seeks Force feed to Sonam Wangchuk on hunger strike

ನವದೆಹಲಿ, ಜುಲೈ 15: ಪ್ರಸಿದ್ಧ ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು 18ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಅವರು ಹೀಗೆಯೇ ಉಪವಾಸ ಮುಂದುವರಿಸಿದರೆ ಇನ್ನೆರಡು ದಿನಗಳಿಗಿಂತ ಹೆಚ್ಚು ಕಾಲ ಬದುಕುವುದು ಅನುಮಾನ” ಎಂದು ಕಳವಳ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್‌ಗೆ ತುರ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಈ ಅರ್ಜಿಯ ತುರ್ತು ವಿಚಾರಣೆಯನ್ನು ನಾಳೆಗೆ (ಗುರುವಾರ) ಹೈಕೋರ್ಟ್ ನಿಗದಿಪಡಿಸಿದೆ. ದೆಹಲಿ…

Read More

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್! – Kannada News | Good News for Bengaluru: HPCL Partners with Instamart for On Demand LPG Cylinder Delivery

ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!Image Credit source: deccanherald.com ಬೆಂಗಳೂರು, ಜುಲೈ 15: ತ್ವರಿತ ವಿತರಣಾ (Quick Commerce) ವೇದಿಕೆ ಇನ್‌ಸ್ಟಾಮಾರ್ಟ್ (Instamart) ಮೂಲಕ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಅವಕಾಶವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪರಿಚಯಿಸಿದೆ. ಈ ಸೇವೆ ಆರಂಭವಾಗುತ್ತಿರುವ ದೇಶದ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದೆ. ಬುಧವಾರ ಘೋಷಿಸಲಾದ ಈ ಸೇವೆಯಲ್ಲಿ ಆರಂಭಿಕ ಹಂತದಲ್ಲಿ HPCLನ ಹೊಸ 10 ಕೆ.ಜಿ. ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ‘HP Navya’ ಹಾಗೂ…

Read More

ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ – Kannada News | Gulf Ship Attack: Bantwal’s Rachan Pujari Rescued After Iranian Missile Strike

ಮಂಗಳೂರು, ಜು.15: ಕೊಲ್ಲಿ ವಲಯದಲ್ಲಿ ಹಡಗುಗಳ ಮೇಲಿನ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೊಬ್ಬ ಪಾರಾಗಿದ್ದಾರೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಯನ್ನು ಸದ್ಯ ರಕ್ಷಿಸಲಾಗಿದ್ದು, ಇವರಲ್ಲಿ ಜಿಲ್ಲೆಯ ಪೆರ್ನೆ ನಿವಾಸಿ ರಚನ್ ಪೂಜಾರಿ ಕೂಡ ಸೇರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮರ್ಚೆಂಟ್ ನೇವಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ನಿವಾಸಿ ರಚನ್…

Read More

‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಸಿಎಂ ಡಿಕೆ ಶಿವಕುಮಾರ್​​ – Kannada News | If I Have Made a Mistake, Beat Me With a Broom: CM DK Shivakumar

ಬೆಂಗಳೂರು, ಜುಲೈ 15: ‘‘ತಾಯಂದಿರು ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅವಶ್ಯಕತೆ ಇಲ್ಲ, ಬೇಕಾದರೆ ನನಗೆ ಹೊಡೆಯಿರಿ’’ ಎಂದು ಸಿಎಂ ಡಿ.ಕೆ.ಶಿವಕುಮಾರ್​​ ಹೇಳಿದ್ದಾರೆ. ಬಿಡದಿ ಟೌನ್​ಶಿಪ್ (Bidadi Township)​ ಕುರಿತ ಸರ್ವೆಗೆ ಹೋಗಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಬಿಡದಿಯಲ್ಲಿ ನಡೆದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಪೊರಕೆಯಿಂದ ಅಧಿಕಾರಿಗಳಿಗೆ ಹೊಡೆಯುವ ಅವಶ್ಯಕತೆ ಇಲ್ಲ. ಬೇಕಾದರೆ ನನಗೆ ಹೊಡೆಯಲಿ, ನಾನು ಹೊಡಿಸಿಕೊಳ್ಳುವುದಕ್ಕೆ ರೆಡಿ ಇದ್ದೇನೆ. ಬಲವಂತವಾಗಿ ಜಮೀನು ತೆಹೆದುಕೊಳ್ಳುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ’’ ಎಂದು…

Read More

ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD? – Kannada News | DRDO completes military field trial of Quantum Key Distribution system

ಕ್ವಾಂಟಮ್ QKD ಸಿಸ್ಟಂ ಪ್ರಯೋಗImage Credit source: Instagram @dpi.drdo ನವದೆಹಲಿ, ಜುಲೈ 15: ಭವಿಷ್ಯವು ಕ್ವಾಂಟಮ್ ಕಾಲ. ಅದು ನೀಡುವ ಲಾಭ ಬಹಳ ದೊಡ್ಡದು. ಹಾಗೆಯೇ, ಎದುರಾಗುವ ಸವಾಲುಗಳು ಬಹಳ ದೊಡ್ಡವು ಮತ್ತು ಸಂಕೀರ್ಣವಾದುವು. ಇದನ್ನು ಎದುರಿಸಲು ರಕ್ಷಣಾ ಕ್ಷೇತ್ರದ ಸಂಶೋಧನಾ ಸಂಸ್ಥೆಯಾದ ಡಿಆರ್​ಡಿಒ ಇರಿಸಿದ ಒಂದು ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ. ದೇಶದ ತಂತ್ರಾತ್ಮಕ ಸಂವಹನ ಜಾಲವನ್ನು (Strategic Communication Networks) ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಾಧನೆಯೊಂದನ್ನು ಡಿಆರ್​ಡಿಒ ಮಾಡಿದೆ….

Read More

Video: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ – Kannada News | An elderly man fanning a sleeping dog

ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ (dog). ಹೀಗಾಗಿ ನಾಯಿ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಕೆಲವರು ತಮ್ಮ ಮಕ್ಕಳಂತೆ ಈ ಶ್ವಾನವನ್ನು ನೋಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಇದೀಗ ಬೀದಿ ಬದಿಯಲ್ಲಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುವುದರಲ್ಲಿ ವೃದ್ಧ ವ್ಯಕ್ತಿ ಬ್ಯುಸಿಯಾಗಿದ್ದಾನೆ. ನೆಟ್ಟಿಗರು ಶ್ವಾನದ ಮೇಲೆ ಈ ವೃದ್ಧ ವ್ಯಕ್ತಿಗಿರುವ ಕಾಳಜಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಯಾಗ್ (Prayag) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ…

Read More

ಚಿನ್ನಸ್ವಾಮಿ ಸ್ಟೇಡಿಯಲ್ಲಿ ಕಾಲ್ತುಳಿತ ದುರಂತ: 11 ಜನರ ಸಾವಿಗೆ ಹೊಣೆ ಯಾರು? ಅಶೋಕ್​​ ಪ್ರಶ್ನೆ – Kannada News | ‘Where Is Justice for the 11 Victims?’ R. Ashoka Criticises Government over Chinnaswamy stadium stampede Case

ಬೆಂಗಳೂರು, ಜುಲೈ 15: ಚಿನ್ನಸ್ವಾಮಿ ಸ್ಟೇಡಿಯಲ್ಲಿ ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್​ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪತ್ನಿ, ಮಕ್ಕಳ ಜತೆ ಸ್ಟೇಜ್ ಮೇಲೆ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಆದರೆ 11 ಜನರ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಲು ಸರ್ಕಾರ ಹೊರಟಿದೆ. ನಮ್ಮ ಸರ್ಕಾರ ಬಂದರೆ ಪ್ರಕರಣದ ತನಿಖೆಯನ್ನು…

Read More