Headlines

Neevu Heliddu Naavu Keliddu: ಬಿವೈ ವಿಜಯೇಂದ್ರ ಆರ್ ಅಶೋಕ್​ ಕಾಮಿಡಿ – Kannada News | Neevu Heliddu Naavu Keliddu: BY Vijayendra And R Ashok Comedy 15 07 2026

“Neevu Heliddu Naavu Keliddu” (ನೀವು ಹೇಳಿದ್ದು ನಾವು ಕೇಳಿದ್ದು) ಇದು ಟಿವಿ9 ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ರಾಜಕೀಯ ವಿಡಂಬನೆ ಮತ್ತು ಹಾಸ್ಯ ಕಾರ್ಯಕ್ರಮ. ಕರ್ನಾಟಕದ ಪ್ರಮುಖ ರಾಜಕಾರಣಿಗಳು ವಿವಿಧ ಸಮಯಗಳಲ್ಲಿ ನೀಡಿದ ಹೇಳಿಕೆಗಳನ್ನು ಸೇರಿಸಿ ಮಿಮಿಕ್ರಿ ಮತ್ತು ಧ್ವನಿಮುದ್ರಿಕೆಗಳ ರೂಪದಲ್ಲಿ ಹಾಸ್ಯಮಯವಾಗಿ ತೋರಿಸುವ ಕಾರ್ಯಕ್ರಮವಾಗಿದೆ Source link

Read More

CWRC ಸಭೆ: ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ಪಟ್ಟು; ಸಾಧ್ಯವೇ ಇಲ್ಲ ಎಂದ ಕರ್ನಾಟಕ – Kannada News | CWRC Meeting: Tamil Nadu Demands Cauvery Water Share; Karnataka Refuses Citing Severe Drought and Drinking Water Crisis

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆImage Credit source: cwma cwc X account ದೆಹಲಿ, ಜುಲೈ 15: ನೈರುತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ಕರ್ನಾಟಕ  ನೀರಿಲ್ಲದೆ ಅಕ್ಷರಶಃ ತತ್ತರಿಸತೊಡಗಿದೆ. ಬರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಡಿಕೆಶಿ ಪತ್ರ ಕೂಡ ಬರೆದಿದ್ದಾರೆ. ಈ ನಡುವೆ ಇಂದು (ಜುಲೈ 15) ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಮಹತ್ವದ ಸಭೆ ನಡೆದಿದ್ದು, ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿಯನ್ನು…

Read More

ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ – Kannada News | Bidadi Township Controversy: Karnataka Government Issues Final Land Acquisition Notification Amid Opposition

ಬಿಡದಿ ಟೌನ್​ಶಿಪ್ ಯೋಜನೆImage Credit source: tv9 kannada ರಾಮನಗರ, ಜುಲೈ 15: ಬಿಡದಿ ಟೌನ್​ಶಿಪ್​​​ ಯೋಜನೆ ವಿವಾದ (Bidadi Township Row) ಸಂಘರ್ಷ ಜೋರಾಗಿದೆ. ಇತ್ತೀಚೆಗೆ ಸರ್ವೆ ಮಾಡಲು ಬಂದಿದ್ದ ಜಿಬಿಎ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿದ್ದರು. ಕಲ್ಲು ತೂರಿ ಕಾರು ಜಖಂ ಗೊಳಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಪತ್ರ ಬರೆಯುವ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ….

Read More

ಏಕದಿನ ವಿಶ್ವಕಪ್​ನಿಂದ 2 ತಂಡಗಳನ್ನು ಕೈ ಬಿಡಲು ಮುಂದಾದ ಐಸಿಸಿ! – Kannada News | ICC explores 12 team ODI World Cup 2027

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಎರಡು ತಂಡಗಳನ್ನು ಕೈ ಬಿಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಗಂಭೀರ ಚಿಂತನೆ ನಡೆಸಿದೆ. ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಮುಖ ಪ್ರಸ್ತಾಪದ ಬಗ್ಗೆ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಿದ್ದು, ಈ ಚರ್ಚೆಯಂತೆ ಮುಂದಿನ ವಿಶ್ವಕಪ್​ನಿಂದ ಎರಡು ತಂಡಗಳನ್ನು ಕೈ ಬಿಡುವ ಸಾಧ್ಯತೆಯಿದೆ. ಏಕಪಕ್ಷೀಯ ಪಂದ್ಯಗಳ ಕಡಿತ: ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಾದಾಗ ಬಲಿಷ್ಠ ತಂಡಗಳು ಹಾಗೂ ತೀರಾ ಕೆಳಹಂತದ ತಂಡಗಳ ನಡುವೆ…

Read More

ತಾಜ್​ ಮಹಲ್​ನಲ್ಲಿ ಅರ್ಜೆಂಟೀನಾ ಮಹಿಳೆಗೆ ಸೀರೆ ಉಡಿಸಿದ ಮಹಿಳಾ ಪೊಲೀಸ್ – Kannada News | Taj Mahal Saree Moment: UP Police Helps Argentine Tourist, Video Goes Viral

ಆಗ್ರಾ, ಜುಲೈ 15: ತಾಜ್​ಮಹಲ್(Taj Mahal)​ಗೆ ಬಂದಿದ್ದೀನಿ ಭಾರತೀಯ ಮಹಿಳೆಯಂತೆ ಸೀರೆಯುಟ್ಟು ಫೋಟೊ ತೆಗೆಸಿಕೊಳ್ಳಬೇಕೆಂಬುದು ಅರ್ಜೆಂಟೀನಾ ಮಹಿಳೆಯ ಆಸೆ. ಆದರೆ ಸೀರೆಯುಡಲು ಬರದೆ ಪರದಾಡುತ್ತಿದ್ದ ಆಕೆಯ ಸಹಾಯಕ್ಕೆ ಬಂದಿದ್ದು ಮಹಿಳೆ ಪೊಲೀಸ್(Police) ಕಾನ್​ಸ್ಟೆಬಲ್.ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ತವ್ಯದ ಜೊತೆಗೆ ಆತಿಥ್ಯ ಮೆರೆದ ಕಾನ್‌ಸ್ಟೆಬಲ್ ವಿದೇಶಿ ಮಹಿಳೆ ಸೀರೆ ಧರಿಸಲು ಮುಜುಗರ ಹಾಗೂ ಅನನುಕೂಲ ಅನುಭವಿಸುತ್ತಿರುವುದನ್ನು ತಾಜ್ ಭದ್ರತೆಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಗುಡ್ಡಿ ದೇವಿ ತಕ್ಷಣವೇ ಗಮನಿಸಿದ್ದಾರೆ. ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬಂದ…

Read More

ಬೆಳಗಾವಿಯಲ್ಲಿ ಮತ್ತೊಂದು ಬಹುಕೊಟಿ ವಂಚನೆ ಪ್ರಕರಣ: 165 ಕೋಟಿ ರೂ. ದೋಖಾ – Kannada News | Belagavis ₹165 Crore Investment Scam: Apex Bizcorp LLP Owners Flee, Investors Duped

ಬೆಳಗಾವಿ, ಜುಲೈ 15: ನಗರದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆಚ್ಚಿ‌ನ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ 165 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP  ಸಂಸ್ಥೆಯಿಂದ ಮೋಸ ನಡೆದಿರೋದಾಗಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ಹೇಳಿಕೆ ನೀಡಿದ್ದಾರೆ. ವಂಚನೆ ಬಗ್ಗೆ ಅಶೋಕ ಬಿಸಗುಪ್ಪಿ ಎಂಬವರು ಜುಲೈ 13ರಂದು ಬೆಳಗಾವಿಯ ಟಿಳಕವಾಡಿ ಠಾಣೆ ದೂರು ನೀಡಿದ್ದರು. ಅಪೆಕ್ಸ್ ಕಂಪನಿಯಲ್ಲಿ ಸಾವಿರಾರು ಜನರು ಇನ್ವೆಸ್ಟ್ ಮಾಡಿದ್ದು, ಶೇ.4ರಷ್ಟು ಬಡ್ಡಿ…

Read More

Apply Now: ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್; ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ – Kannada News | Bank of Baroda AVP Recruitment 2026: Specialist Officer Jobs, Apply Online Now!

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್Image Credit source: Getty Images ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಮಟ್ಟದ ಕಾರ್ಯನಿರ್ವಾಹಕ ಹುದ್ದೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್ ಆಫ್ ಬರೋಡಾ ಒಂದು ಸುವರ್ಣಾವಕಾಶವನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಹಿಂದಿನ ನೇಮಕಾತಿ ಅಭಿಯಾನದ ಸಮಯದಲ್ಲಿ ಖಾಲಿ ಉಳಿದಿದ್ದ ಸಹಾಯಕ ಉಪಾಧ್ಯಕ್ಷ (AVP) ಮಟ್ಟದ ವಿವಿಧ ತಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಜುಲೈ 11 ರಿಂದಲೇ ಪ್ರಾರಂಭವಾಗಿದ್ದು,…

Read More

‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್ – Kannada News | The Odyssey advance booking status in India

ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶಿಸಿ ಹಲವು ಸೂಪರ್ ಸ್ಟಾರ್ ಹಾಲಿವುಡ್ ನಟ-ನಟಿಯರು ನಟಿಸಿರುವ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆಗೆ ಎರಡು ದಿನಗಳಷ್ಟೆ ಬಾಕಿ ಇದೆ. ಕೆಲ ದಿನಗಳ ಹಿಂದಷ್ಟೆ ಕ್ರಿಸ್ಟೊಫರ್ ನೋಲನ್ ಅವರು ಮುಂಬೈನ ಐಮ್ಯಾಕ್ಸ್ ನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಆದರೆ ಸಿನಿಮಾ ಅಧಿಕೃತವಾಗಿ ಜುಲೈ 17ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಈಗಾಗಲೇ ಹಲವು ದಿನಗಳಾಗಿದ್ದು, ಬಿಡುಗಡೆ ದಿನ ಹತ್ತಿರ ಬಂದಷ್ಟೂ ಬುಕಿಂಗ್ ಜೋರಾಗುತ್ತಿದೆ. ‘ದಿ…

Read More

ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ – Kannada News | Air India Crash CVR: AAIB Tells SC Audio is Confidential Under Law

ನವದೆಹಲಿ, ಜುಲೈ 15: ಅಹಮದಾಬಾದಿನಲ್ಲಿ 2025ರ ಜೂನ್ 12ರಂದು ನಡೆದ ಏರ್ ಇಂಡಿಯಾ(Air India) ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಆಡಿಯೋ ಸೇರಿದಂತೆ ಯಾವುದೇ ನಿರ್ಣಾಯಕ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ. ಅಪಘಾತದಲ್ಲಿ ಮೃತಪಟ್ಟ ಪೈಲಟ್‌ನ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು ತನಿಖೆಯ ವಿವರಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಎಐಬಿ ಸುಪ್ರೀಂ…

Read More

ಅಪಾರ್ಟ್‌ಮೆಂಟ್ ಮಾಲೀಕರೊಂದಿಗೆ ಸಿಎಂ ಸಂವಾದ: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು ಎಂದ ಡಿ.ಕೆ.ಶಿವಕುಮಾರ್ – Kannada News | DK Shivakumar Interacts with Apartment Associations, Promises Absolute Ownership Rights to Buyers

ಬೆಂಗಳೂರು, ಜುಲೈ 15: “ಕಷ್ಟಪಟ್ಟು ಗಳಿಸಿದ ಆಸ್ತಿಯ ಸಂಪೂರ್ಣ ಹಕ್ಕು ಅದರ ಮಾಲೀಕರಿಗೇ ಸೇರಬೇಕು. ಆಸ್ತಿ ಖರೀದಿ ಮತ್ತು ನಿರ್ವಹಣೆಯಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ನಡೆದ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಕರಡು ವಿಧೇಯಕ 2026’ ಕುರಿತಾದ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಈ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ,…

Read More