‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

ಭಾರತ ಚಿತ್ರರಂಗದ (Indian Film) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆ ಆಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ಇದೀಗ ಬಿಡುಗಡೆ ಆಗಿರುವ 2:38 ನಿಮಿಷದ ಟೀಸರ್​ನ ಪ್ರತಿ ದೃಶ್ಯದಲ್ಲಿಯೂ ಆ ಅದ್ಧೂರಿತನ ಎದ್ದು ಕಾಣುತ್ತಿದೆ. ಅದ್ಧೂರಿತನದ ಜೊತೆಗೆ ನಿರ್ದೇಶಕರು ವಾಲ್ಮಿಕಿ ರಾಮಾಯಣದ ಕತೆಗೆ ನಿಷ್ಠವಾಗಿರುವುದು ಸಹ ಗೋಚರಿಸುತ್ತಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ರಾಮನ ಪಾತ್ರವನ್ನಷ್ಟೆ ಪ್ರಮುಖವಾಗಿ ತೋರಿಸಲಾಗಿದೆ. ಶ್ರೀರಾಮನ ಬಾಲಕಾಂಡ, ಅರಣ್ಯಕಾಂಡದ ಕತೆಯ ಭಾಗಗಳನ್ನು ಮಾತ್ರವೇ ಟೀಸರ್​​ನಲ್ಲಿ ಸೇರಿಸಿರುವುದು ತಿಳಿದು ಬರುತ್ತಿದೆ. ರಾಮನ ಪಟ್ಟಾಭಿಷೇಕದ ಮುಂಚಿನ ಕತೆ, ವನವಾಸ, ಅರಣ್ಯದಲ್ಲಿ ಸಾಹಸಗಳು ಇನ್ನಿತರೆ ದೃಶ್ಯಗಳು ಟೀಸರ್​​ನಲ್ಲಿವೆ. ವಿಶೇಷವಾಗಿ ರಾಮನ ವಿಚಿತ್ರ ಜೀವಿಗಳೊಟ್ಟಿಗೆ ಸೆಣೆಸಾಡುತ್ತಿರುವ ಕೆಲವು ದೃಶ್ಯಗಳು ಸಹ ಟೀಸರ್​​ನಲ್ಲಿವೆ.

ರಣ್​​ಬೀರ್ ಕಪೂರ್, ಶ್ರೀರಾಮನ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಮುಖ, ಮೈಕಟ್ಟು ರಾಮನ ಪಾತ್ರಕ್ಕೆ ಚೆನ್ನಾಗಿ ಹೊಂದಿರುವಂತೆ ತೋರುತ್ತಿದೆ. ಆದರೆ ಟೀಸರ್​​ನಲ್ಲಿ ಅವರ ಪಾತ್ರದ ಹೊರತಾಗಿ ಇನ್ಯಾರ ಪಾತ್ರವನ್ನೂ ಸಹ ತೋರಿಸಿಲ್ಲ. ಸೀತೆ, ಲಕ್ಷ್ಮಣನ ಪಾತ್ರವನ್ನೂ ಸಹ ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ತೋರಿಸಿಲ್ಲ. ಯಶ್ ಅವರ ರಾವಣನ ಪಾತ್ರ ಟೀಸರ್​ನ ಅಂತ್ಯದಲ್ಲಿ ಬರುತ್ತದೆಯಾದರೂ ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರವೇ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ.

ಒಟ್ಟಾರೆಯಾಗಿ ಈಗ ಬಿಡುಗಡೆ ಆಗಿರುವ ಟೀಸರ್​​, ‘ರಾಮಾಯಣ’ ಕತೆ ಭಾರತೀಯ ಈ ಹಿಂದೆ ನೋಡಿದ ಇನ್ಯಾವುದೇ ರಾಮಾಯಣ ಸಿನಿಮಾ ಅಥವಾ ಧಾರಾವಾಹಿಗಳಿಗಿಂತಲೂ ಬಲು ಅದ್ಧೂರಿಯಾಗಿ ಇರಲಿದೆ ಎಂಬುದಂತೂ ಖಾತ್ರಿ. ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿ ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ನಂಬಿ ಮಗಳನ್ನೇ ಬಲಿಕೊಟ್ಟ ತಾಯಿ

ಜಾರ್ಖಂಡ್, ಏಪ್ರಿಲ್ 02: ಮಾಟಗಾತಿಯ ಮಾತು ಕೇಳಿ ಮಹಿಳೆಯೊಬ್ಬಳು ಮಗನ ರೋಗ(Disease) ಗುಣಪಡಿಸಲು ಮಗಳನ್ನೇ ಬಲಿಕೊಟ್ಟಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಬಾಲಕಿಯ ತಾಯಿ ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. ಮಾರ್ಚ್​ 24ರ ರಾತ್ರಿ ಕುಸುಂಭ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ದಿನ ಸಂಜೆ ರಾಮ ನವಮಿ ಮೆರವಣಿಗೆ ನಡೆಯುತ್ತಿತ್ತು ಅಂದು ಬಾಲಕಿ ಕಾಣೆಯಾಗಿದ್ದಳು. ಮರುದಿನ ಬೆಳಗ್ಗೆ 8.30 ರ ಸುಮಾರಿಗೆ ಸ್ಥಳೀಯ ಮಾಧ್ಯಮಿಕ ಶಾಲೆಯ ಹಿಂಭಾಗದ ಬಿದಿರಿನ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಸಂತ್ರಸ್ತೆಯ ತಾಯಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಆರಂಭದಲ್ಲಿ ಧನೇಶ್ವರ ಪಾಸ್ವಾನ್ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಆದಾಗ್ಯೂ, ತನಿಖೆ ಶೀಘ್ರದಲ್ಲೇ ಬೇರೆಯದೇ ತಿರುವು ಪಡೆದುಕೊಂಡಿತು.

ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕರು ಮತ್ತು ಹಜಾರಿಬಾಗ್ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದ ಮೇರೆಗೆ ಮಾರ್ಚ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು. ತನಿಖೆಯ ಸಮಯದಲ್ಲಿ, ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿದ್ದು, ಬಾಳಕಿ ಸಾವಿಗೆ ಆಕೆಯ ತಾಯಿಯೇ ಮೂಲ ಕಾರಣ ಎಂಬುದು ಅರಿವಾಗಿದೆ.

ಮತ್ತಷ್ಟು ಓದಿ: ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

‘ಭಗ್ತಿನ್’ ಎಂದೂ ಕರೆಯಲ್ಪಡುವ 55 ವರ್ಷದ ಶಾಂತಿ ದೇವಿ ಎಂಬಾಕೆ, ತಾಂತ್ರಿಕ ಆಚರಣೆಗಳನ್ನು ನಡೆಸುವುದಾಗಿ ಹೇಳಿಕೊಂಡಿದ್ದು, ಆರೋಪಿ ಮಹಿಳೆ ಬಳಿ ನಿನ್ನ ಮಗನ ಅನಾರೋಗ್ಯವನ್ನು ಗುಣಪಡಿಸಲು ಮತ್ತು ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ನರಬಲಿ ಕೊಡಲೇಬೇಕು ಎಂದು ತಾಂತ್ರಿಕ ಹೇಳಿದಾಗ ಅದನ್ನೇ ಸತ್ಯ ಎಂದು ಬಾಲಕಿ ತಾಯಿ ನಂಬಿದ್ದಳು.

ಕೊನೆಗೆ ಮಗಳನ್ನೇ ಬಲಿಕೊಟ್ಟಿದ್ದಾಳೆ. ಮೂರು ತಿಂಗಳಿನಿಂದ ತಂತ್ರಿಯೊಂದಿಗೆ ಸಂಪರ್ಕದಲ್ಲಿದ್ದಳು.
ಪ್ರಿಯಕರ ಭೀಮ್ ರಾಮ್ (40) ಜೊತೆ, ಪೂಜೆಯ ನೆಪದಲ್ಲಿ ಬಾಲಕಿಯನ್ನು ತಂತ್ರಿಯ ಮನೆಗೆ ಕರೆದೊಯ್ದರು. ಆರಂಭಿಕ ವಿಧಿವಿಧಾನಗಳ ನಂತರ, ಮಗುವನ್ನು ಹತ್ತಿರದ ಬಿದಿರಿನ ತೋಪಿಗೆ ಕರೆದೊಯ್ಯಲಾಯಿತು. ಭೀಮ್ ರಾಮ್ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ತಾಯಿ ಬಾಲಕಿ ಕಷ್ಟಪಡುತ್ತಿದ್ದಂತೆ ಆಕೆಯ ಕಾಲುಗಳನ್ನು ಹಿಡಿದಿದ್ದಾಳೆ ಎಂದು ಆರೋಪಿಸಲಾಗಿದೆ.

ಬಾಲಕಿಯ ಗುಪ್ತಾಂಗಗಳೊಳಗೆ ಮರದ ಕೋಲನ್ನು ಹಾಕಿದ್ದಾರೆ. ಭೀಮ್ ರಾಮ್ ಆಕೆಯ ತಲೆಗೆ ಹೊಡೆದು ರಕ್ತವನ್ನು ತೆಗೆದುಕೊಂಡಿದ್ದಾನೆ. ನಂತರ ಶವವನ್ನು ಸ್ಥಳದಲ್ಲಿಯೇ ಬಿಡಲಾಯಿತು. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುರುಡು ನಂಬಿಕೆ ಮತ್ತು ಹಾನಿಕಾರಕ ಮೂಢನಂಬಿಕೆಗಳಿಂದ ಉಂಟಾಗುವ ಅಪಾಯಗಳಿಗೆ ಈ ಅಪರಾಧವು ಒಂದು ಭೀಕರ ಉದಾಹರಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Tulasi Puja: ತುಳಸಿ ಗಿಡ ನೆಡುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಈ ಗಿಡವನ್ನು ನೆಡಲು ಗುರುವಾರ ಮತ್ತು ಶುಕ್ರವಾರಗಳು ಅತ್ಯಂತ ಶ್ರೇಷ್ಠವಾದ ದಿನಗಳಾಗಿವೆ. ಗುರುವಾರವು ಜಗತ್ಪಾಲಕನಾದ ವಿಷ್ಣುವಿಗೆ ಹಾಗೂ ಶುಕ್ರವಾರವು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ಸಮರ್ಪಿತವಾಗಿರುವುದರಿಂದ, ಈ ದಿನಗಳಲ್ಲಿ ತುಳಸಿಯನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದು ಅನಂತ ಪುಣ್ಯವನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ನಿಷೇಧಿತ ದಿನಗಳು ಮತ್ತು ಮುನ್ನೆಚ್ಚರಿಕೆ:

ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಾ ದಿನಗಳಲ್ಲೂ ತುಳಸಿಯನ್ನು ನೆಡುವುದು ಶುಭವಲ್ಲ. ಸೋಮವಾರ, ಬುಧವಾರ ಮತ್ತು ಶನಿವಾರದಂದು ಹೊಸದಾಗಿ ಗಿಡವನ್ನು ನೆಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಭಾನುವಾರ ಮತ್ತು ಏಕಾದಶಿ ತಿಥಿಗಳಂದು ತುಳಸಿ ಗಿಡವನ್ನು ಸ್ಪರ್ಶಿಸಬಾರದು ಅಥವಾ ಹೊಸದಾಗಿ ನೆಡಬಾರದು. ಈ ನಿಯಮಗಳನ್ನು ಪಾಲಿಸುವುದರಿಂದ ಗಿಡದ ಪಾವಿತ್ರ್ಯತೆ ಉಳಿಯುತ್ತದೆ ಮತ್ತು ದೇವಿಯ ಕೃಪೆಗೆ ಪಾತ್ರರಾಗಬಹುದು.

ದೈನಂದಿನ ಪೂಜಾ ನಿಯಮಗಳು:

ಮನೆಯಲ್ಲಿ ತುಳಸಿ ಗಿಡ ಇದ್ದರೆ ಪ್ರತಿದಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರವೇ ತುಳಸಿಗೆ ನೀರನ್ನು ಅರ್ಪಿಸಬೇಕು. ಆದರೆ, ಭಾನುವಾರ ಮತ್ತು ಏಕಾದಶಿಯ ದಿನಗಳಲ್ಲಿ ತುಳಸಿ ಗಿಡಕ್ಕೆ ನೀರು ಸುರಿಯುವುದನ್ನು ಶಾಸ್ತ್ರಗಳು ನಿರ್ಬಂಧಿಸಿವೆ. ಪ್ರತಿದಿನ ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ, ಸಕಾರಾತ್ಮಕ ಶಕ್ತಿಯು ಆಕರ್ಷಿತವಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಸ್ಥಾನ ಮತ್ತು ನಿರ್ವಹಣೆ:

ತುಳಸಿ ಗಿಡವನ್ನು ಯಾವಾಗಲೂ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಶ್ರೇಷ್ಠ. ತುಳಸಿ ಕಟ್ಟೆಯ ಸುತ್ತಮುತ್ತಲಿನ ಜಾಗವು ಸದಾ ಸ್ವಚ್ಛವಾಗಿರಬೇಕು; ಅಲ್ಲಿ ಪಾದರಕ್ಷೆಗಳನ್ನಾಗಲಿ ಅಥವಾ ಯಾವುದೇ ಕೊಳಕು ವಸ್ತುಗಳನ್ನಾಗಲಿ ಇಡಬಾರದು. ಒಂದು ವೇಳೆ ಗಿಡವು ಒಣಗಿ ಹೋದರೆ, ಅದನ್ನು ಮನೆಯಲ್ಲಿಯೇ ಇಟ್ಟುಕೊಳ್ಳದೆ ತಕ್ಷಣ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು, ಏಕೆಂದರೆ ಒಣಗಿದ ಗಿಡವನ್ನು ಮನೆಯಲ್ಲಿ ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ಮತ್ತು ನಾರಾಯಣರ ಆಶೀರ್ವಾದ ಸದಾ ಇರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್​ಝಾದ ಫರ್ಹಾನ್

Source link

ಜೈಲಿಂದ ಬಂದ್ರೂ ಬುದ್ಧಿ ಬಂದಿಲ್ಲ, ಜಾಮೀನಿನ ಮೇಲೆ ಹೊರ ಬಂದ ದಿನವೇ ಆಭರಣದಂಗಡಿಯಲ್ಲಿ ಕಳವು ಮಾಡಿದ ಮಹಿಳೆ

ಫರಿದಾಬಾದ್, ಏಪ್ರಿಲ್ 02: ಜೈಲಿಂದ ಹೊರಬಂದ ದಿನವೇ ಮಹಿಳೆಯೊಬ್ಬಳು ಆಭರಣದಂಗಡಿ(Jewellery Shop)ಯಲ್ಲಿ ಕಳವು ಮಾಡಿ ಮತ್ತೆ ಜೈಲಿಗೆ ಹೋಗಿರುವ ಘಟನೆ ಫರಿದಾಬಾದ್​ನಲ್ಲಿ ನಡೆದಿದೆ. ಆರೋಪಿ ಮಹಿಳೆ ಕಾಜಲ್ (30) ವಿವಾಹಿತಳಾಗಿದ್ದು, ಅಪರಾಧಿಯಾಗಿದ್ದಾಳೆ. ಮೂರು ತಿಂಗಳ ಹಿಂದೆ ಫರಿದಾಬಾದ್ ಜಿಲ್ಲೆಯ ನೀಮ್ಕಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆಕೆ ಮತ್ತೆ ಅಪರಾಧ ಎಸಗಿದ್ದಾಳೆ.
ಕಾಜಲ್‌ಳನ್ನು ಬುಧವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಫರಿದಾಬಾದ್‌ನ ಭಗತ್ ಸಿಂಗ್ ಕಾಲೋನಿಯ ರಾಜೇಶ್ ಕುಮಾರ್ ಎಂಬವರು ಬಲ್ಲಬ್‌ಗಢ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಫೆಬ್ರವರಿ 27 ರಂದು ಮಹಿಳೆಯೊಬ್ಬರು ಚಿನ್ನಾಭರಣ ನೋಡುವ ನೆಪದಲ್ಲಿ ತಮ್ಮ ಆಭರಣ ಅಂಗಡಿಗೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಆಕೆ ಮೊದಲು ಆಭರಣಗಳನ್ನು ತೋರಿಸಲು ಕೇಳಿಕೊಂಡಿದ್ದಾಳೆ, ರಾಜೇಶ್ ಎಂಬುವವರ ಜತೆ ಸಂಭಾಷಣೆಯಲ್ಲಿ ತೊಡಗಿ, ಇನ್ನಷ್ಟು ಹೆಚ್ಚು ಆಭರಣಗಳನ್ನು ತೆಗೆಯಲು ಬೇರೆ ಕಡೆ ತಿರುಗಿದಾಗ ಆಕೆ ಆಭರಣವನ್ನು ದೋಚಿದ್ದಾಳೆ. ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಮಂಗಳವಾರ ಫರಿದಾಬಾದ್‌ನ ಸೆಕ್ಟರ್ 8 ರ ಇಂದಿರಾ ಕಾಲೋನಿಯ ಕಾಜಲ್ ಅವರನ್ನು ಬಂಧಿಸಿದೆ. ಆಕೆಯ ವಿಚಾರಣೆ ನಡೆಯುತ್ತಿದೆ ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: 25 ಕಳ್ಳರಿಂದ ಆಭರಣದಂಗಡಿ ದರೋಡೆ, ಗ್ರಾಹಕರಾ, ಕಳ್ಳರಾ ನೋಡುವಷ್ಟರಲ್ಲಿ ಆಭರಣಗಳು ಮಂಗಮಾಯ

ಆಕೆ ಜೈಲಿಂದ ಬಂದಿದ್ದರೂ ಆಕೆ ತನ್ನ ನಿಜವಾದ ವರಸೆ ಬಿಟ್ಟಿರಲಿಲ್ಲ, ಇದೀಗ ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Chaitra Pournami: ಇಂದು ಚೈತ್ರ ಪೌರ್ಣಮಿ; ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ

ಚೈತ್ರ ಪೌರ್ಣಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಬರುತ್ತವೆ, ಆದರೆ ಕೆಲವು ಪರ್ವಕಾಲ ಮತ್ತು ಪರ್ವ ತಿಥಿಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಚೈತ್ರ ಪೌರ್ಣಮಿಯು ಅಂತಹ ಒಂದು ಪವಿತ್ರ ದಿನವಾಗಿದೆ. ಕೇವಲ ಒಂದು ಕ್ಷಣದ ಪೂಜೆ ಅಥವಾ ಒಂದು ನಿಮಿಷದ ಪ್ರಾರ್ಥನೆಯಿಂದ ಭಗವಂತನ ಕೃಪೆಯನ್ನು ಪಡೆಯಲು ಇದು ಸೂಕ್ತವಾದ ಸಮಯ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

2026ರ ಏಪ್ರಿಲ್ 2ರಂದು, ಗುರುವಾರದಂದು ಬರುವ ಈ ಚೈತ್ರ ಪೌರ್ಣಮಿಯು ಪರಾಭವನಾಮ ಸಂವತ್ಸರದ ಪ್ರಥಮ ಮಾಸದ ಪ್ರಥಮ ಉತ್ತಮ ಹುಣ್ಣಿಮೆಯಾಗಿದೆ. ಈ ದಿನದಂದು ವಿಷ್ಣು ಪೂಜೆಯೊಂದಿಗೆ, ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನ ಪೂಜೆಯನ್ನೂ ಮಾಡಬೇಕು. ಚಿತ್ರಗುಪ್ತನು ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಕರ್ಮಗಳನ್ನು ಪ್ರತಿಕ್ಷಣವೂ ದಾಖಲಿಸುತ್ತಾನೆ. ವಿಷ್ಣು ಮತ್ತು ಚಿತ್ರಗುಪ್ತನನ್ನು ಸ್ಮರಿಸುವುದರಿಂದ ನಮ್ಮ ಕರ್ಮಗಳ ಋಣಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಚಿತ್ರಗುಪ್ತನು ಯಮನ ಸಹೋದರನಾಗಿದ್ದಾನೆ.

ಈ ದಿನವನ್ನು ಆಚರಿಸಲು ಪವಿತ್ರ ಸ್ನಾನ, ಅದು ಮನೆಯಲ್ಲೇ ಇರಬಹುದು, ನದಿಯಲ್ಲಿ ಅಥವಾ ದೇವಸ್ಥಾನದ ಸಮೀಪದ ಜಲಮೂಲದಲ್ಲಿ ಇರಬಹುದು. ಶುದ್ಧೀಕರಣದ ನಂತರ, ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸುವುದು ಉತ್ತಮ. ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ಪಾಪಗಳ ನಿವಾರಣೆಯಾಗುತ್ತದೆ. ಅನ್ನದಾನ ಮತ್ತು ವಸ್ತ್ರದಾನದಂತಹ ದಾನ ಕಾರ್ಯಗಳನ್ನು ಕೈಗೊಳ್ಳುವುದು ಸಹ ಪುಣ್ಯಕರ.

ಪುರಾಣಗಳ ಪ್ರಕಾರ, ಸಾಕ್ಷಾತ್ ಇಂದ್ರನು ಕೂಡ ಚೈತ್ರ ಪೌರ್ಣಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ತನ್ನ ಪಾಪಗಳನ್ನು ಪರಿಹರಿಸಿಕೊಂಡಿದ್ದನು. ಪರಶಿವನು ಇಂದ್ರನಿಗೆ ತನ್ನ ಪಾಪಗಳನ್ನು ಕಳೆದುಕೊಳ್ಳಲು ಚೈತ್ರ ಪೌರ್ಣಮಿಯನ್ನು ಆಚರಿಸಲು ಸಲಹೆ ನೀಡಿದ್ದನು. ಈ ದಿನ ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರು ಮತ್ತು ಪೋಷಕರ ದರ್ಶನ ಪಡೆದು ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಅತ್ಯಂತ ಶುಭಕರ.

ದೇಶದ ವಿವಿಧ ಭಾಗಗಳಲ್ಲಿ ಈ ದಿನ ವಿಭಿನ್ನ ಆಚರಣೆಗಳಿವೆ. ತಮಿಳುನಾಡಿನಲ್ಲಿ ಮುರುಗನ ದೇವಾಲಯಗಳಿಗೆ ಭೇಟಿ ನೀಡಿದರೆ, ಕರ್ನಾಟಕದಂತಹ ಪ್ರದೇಶಗಳಲ್ಲಿ ತಮ್ಮ ಆಯಾ ದೇವಸ್ಥಾನಗಳಲ್ಲಿ ದರ್ಶನ ಪಡೆಯುತ್ತಾರೆ. ಕೆಲವರು ತಿರುಕಲ್ಯಾಣೋತ್ಸವವನ್ನು ನಡೆಸಿದರೆ, ಅಯ್ಯಪ್ಪ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕೆಲವು ಕಡೆ ಭಗವಂತನಿಗೆ ಕಾವಡಿಗಳನ್ನು ಒಯ್ಯುವ ಪದ್ಧತಿಯೂ ಇದೆ. ಈ ದಿನ ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡಲಾಗುತ್ತದೆ. ಚಿತ್ರಗುಪ್ತನಿಗೆ ಪ್ರತ್ಯೇಕ ದೇವಾಲಯಗಳಿಲ್ಲದ ಕಾರಣ, ಭಕ್ತರು ಹನುಮಂತ ಅಥವಾ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಚೈತ್ರ ಪೌರ್ಣಮಿಯಂದು ಸಾಬುದಾನಿ, ಗೆಣಸು, ಕುಂಬಳಕಾಯಿ ಆಹಾರಗಳು, ಹಾಲು, ಬೆಲ್ಲ, ಮತ್ತು ಡ್ರೈ ಫ್ರೂಟ್ಸ್ ಸೇವಿಸುವುದು ರೂಢಿ. ಕೆಲವರು ಈ ದಿನ ಉಪವಾಸವನ್ನೂ ಆಚರಿಸುತ್ತಾರೆ. “ಓಂ ನಮೋ ಭಗವತೇ ವಾಸುದೇವಾಯ” ಅಥವಾ “ಓಂ ನಮೋ ನಾರಾಯಣಾಯ” ಮಂತ್ರಗಳ ಜಪದೊಂದಿಗೆ, ಒಂದು ವಿಶೇಷ ತಂತ್ರವನ್ನು ಅನುಸರಿಸಿದರೆ ವರ್ಷದೊಳಗೆ ಸಂಕಲ್ಪಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಈ ತಂತ್ರವು ಹೀಗಿದೆ: ಒಂದು ಶುದ್ಧ ಬಿಳಿ ಬಟ್ಟೆಯನ್ನು ಅರಿಶಿನದಿಂದ ಹಳದಿ ಬಟ್ಟೆಯಾಗಿ ಪರಿವರ್ತಿಸಿ. ಅದನ್ನು ನಿಮ್ಮ ದೇವರ ಕೋಣೆಯಲ್ಲಿ ಇರಿಸಿ. ನಿಮ್ಮ ಕೈಗೆ ಹಿಡಿಸುವಷ್ಟು ಅಕ್ಕಿಯನ್ನು ಅದರ ಮೇಲೆ ಹಾಕಿ. ಅದರ ಮೇಲೆ ಒಂದು ಅಡಿಕೆ, ಒಂದು ಅರಿಶಿನದ ಕೊಂಬು ಮತ್ತು ಒಂದು ನಾಣ್ಯವನ್ನು ಇಡಿ. ನಂತರ ಅದರ ಮೇಲೆ ಕೈ ಇಟ್ಟು ನಿಮ್ಮ ಸಂಕಲ್ಪವನ್ನು ಹೇಳಿ ಪ್ರಾರ್ಥಿಸಿ. ಈ ವಸ್ತುಗಳನ್ನು ಬಟ್ಟೆಯಲ್ಲಿ ಕಟ್ಟಿ ಅಲ್ಲಿಯೇ ಇರಿಸಿ. ಮುಂದಿನ ಹುಣ್ಣಿಮೆಯ ಸಮಯದಲ್ಲಿ ಆ ಅಕ್ಕಿಯಿಂದ ಪಾಯಸ ಮಾಡಿ ನಾಲ್ಕು ಜನರಿಗೆ ಹಂಚಿದರೆ ನಿಮ್ಮ ಸಂಕಲ್ಪಗಳು ಶೀಘ್ರವಾಗಿ ಈಡೇರುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಸ್ತಾನ್​ಸಾಬ್ ದರ್ಗಾದಲ್ಲಿ ಕರಗಕ್ಕೆ ಸಲ್ಲಿಸೋ ಪೂಜೆ ಹೇಗಿರುತ್ತೆ? ಮುಜಾವರ್ ಹೇಳಿದ್ದೇನು ನೋಡಿ

ಬೆಂಗಳೂರು, ಏಪ್ರಿಲ್ 2: ಬೆಂಗಳೂರು ಕರಗ ಮಹೋತ್ಸವದ ಮೆರವಣಿಗೆ ಕರಗವು ಕಾಟನ್‌ಪೇಟೆಯ ಹಜರತ್ ಮಸ್ತಾನ್​ಸಾಬ್ ದರ್ಗಾಗೆ ಭೇಟಿ ನೀಡುತ್ತದೆ. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯ ಪ್ರತೀಕವಾಗಿದೆ. ದರ್ಗಾದ ಮುಜಾವರ್ ಫರೋಜ ಮೋಶ್ರಫ್ ಅವರು ಈ ಭೇಟಿಯ ಮಹತ್ವ ಮತ್ತು ಆಚರಣೆಯ ಕುರಿತು ಮಾತನಾಡಿದ್ದಾರೆ. ಪ್ರತಿವರ್ಷವೂ ಕರಗವು ದರ್ಗಾಕ್ಕೆ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭದಲ್ಲಿ ಹೂವಿನ ಹಾರಗಳನ್ನು ಅರ್ಪಿಸಲಾಗುತ್ತದೆ ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಆಚರಣೆಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಮತ್ತು ದರ್ಗಾದಲ್ಲಿ ಯಾವುದೇ ರೀತಿಯ ಭೇದಭಾವವಿಲ್ಲದೆ ಎರಡೂ ಸಮುದಾಯದ ಜನರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಭೇಟಿಯು ಬೆಂಗಳೂರಿನಲ್ಲಿ ಸಾಮರಸ್ಯದ ಸಂದೇಶವನ್ನು ಸಾರುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ತಾಯಿ-ಮಗನಿಗೆ ಗಾಯ

ಬೆಳಗಾವಿ, ಏ. 2: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭೀಕರ ಬಿರುಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಮನೆಯಲ್ಲಿದ್ದ ತಾಯಿ ಮತ್ತು ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಅನಿಗೋಳ ಗ್ರಾಮದ ನಿವಾಸಿ ನೀಲವ್ವ ಯಲ್ಲಯ್ಯನವರ (70) ಮತ್ತು ಅವರ ಮಗ ಉಳವಪ್ಪ (37) ಮನೆಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಬುಡಮೇಲಾಗಿ ಮನೆ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ನಾಶವಾಗಿವೆ.ಮರ ಬಿದ್ದ ಸದ್ದನ್ನು ಕೇಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ಸ್ಥಳೀಯರು ಸಾಹಸಪಟ್ಟು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಎಂಎಸ್ ಧೋನಿ ಕಮ್​ಕ್ಯಾಕ್: ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್​ ನ್ಯೂಸ್

ಬೆಂಗಳೂರು (ಏ. 02): ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿಯ 19ನೇ ಸೀಸನ್‌ನಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಸಿಎಸ್‌ಕೆ ತನ್ನ ಸೀಸನ್‌ನ ಆರಂಭಿಕ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್‌ಕೆ ಋತುವಿನ ಆರಂಭಿಕ ಪಂದ್ಯಗಳಲ್ಲಿ ಕೆಲವು ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಮುಖ್ಯವಾಗಿ ತಂಡದ ಸ್ಟಾರ್ ಪ್ಲೇಯರ್, ಮಾಜಿ ನಾಯಕ ಎಂಎಸ್ ಧೋನಿ.

ಧೋನಿ ಐಪಿಎಲ್ 2026 ರ ಸೀಸನ್‌ನ ಮೊದಲ ಎರಡು ವಾರಗಳ ಕಾಲ ಕಣಕ್ಕಿಳಿಯುವುದಿಲ್ಲ. ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಪುನರ್ವಸತಿಗೆ ಒಳಗಾಗಿದ್ದಾರೆ. ಪರಿಣಾಮವಾಗಿ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಅವರು ಸಿಎಸ್‌ಕೆ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಲಿಲ್ಲ. ಇದರಿಂದ ಅವರ ಅಭಿಮಾನಿಗಳು ತೀರ್ವ ಬೇಸರಗೊಂಡಿದ್ದರು. ಆದರೀಗ ಧೋನಿಯ ಫಿಟ್‌ನೆಸ್‌ಗೆ ಸಂಬಂಧಿಸಿದ ವಿಡಿಯೋ ಹೊರಬಂದಿದೆ, ಇದನ್ನು ಕಂಡು ಸಿಎಸ್‌ಕೆ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ನೆಟ್ ಪ್ರಾಕ್ಟೀಸ್ ಶುರು ಮಾಡದ ಧೋನಿ

ಐಪಿಎಲ್ 2026 ರ ಸೀಸನ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಅವರ ಫಿಟ್ನೆಸ್ ಬಗ್ಗೆ ಸಿಎಸ್‌ಕೆ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯಲ್ಲಿ, ಧೋನಿ ಅವರಿಗೆ ಕಾಲಿನ ಸ್ನಾಯು ಸೆಳೆತವಿದ್ದು, ಮೊದಲ ಎರಡು ವಾರಗಳ ಅವರು ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಧೋನಿ ಅನುಪಸ್ಥಿತಿ ಸಿಎಸ್‌ಕೆಗೆ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಅದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಂಡುಬಂತು ಕೂಡ.

PSL 2026: ಪಾಕ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಭಾರೀ ಬಿರುಗಾಳಿ: ಕಂಟ್ರೋಲ್ ತಪ್ಪಿ ಏನೆಲ್ಲ ಆಯಿತು ನೋಡಿ

ಸಿಎಸ್‌ಕೆ ಈಗ ತನ್ನ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 3 ರಂದು ತನ್ನ ತವರು ಮೈದಾನದಲ್ಲಿ ಆಡಲಿದೆ. ಇದಕ್ಕೂ ಮುನ್ನ ಏಪ್ರಿಲ್ 1 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್​ಕೆ ಅಭ್ಯಾಸ ನಡೆಸಿತು, ವಿಶೇಷ ಎಂದರೆ ಈ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಎಂಎಸ್ ಧೋನಿ ಕೂಡ ಭಾಗವಹಿಸಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ನೆಟ್ಸ್‌ಗೆ ಮರಳಿರುವುದು ಸಿಎಸ್‌ಕೆ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಧೋನಿ ಶೀಘ್ರದಲ್ಲೇ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಲು ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಧೋನಿ ಅಭ್ಯಾಸಕ್ಕೆ ಆಗಮನಿಸಿದ ವಿಡಿಯೋ:

 

ಲಯ ಕಳೆದುಕೊಂಡ ಚೆನ್ನೈ

ಕಳೆದ ಕೆಲವು ಐಪಿಎಲ್ ಋತುಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ನೀಡಿಲ್ಲ. ಐಪಿಎಲ್‌ 2026 ರಲ್ಲಿ ಸಿಎಸ್​ಕೆ ತನ್ನ ಮುಂದಿನ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಇವರ ವಿರುದ್ಧವೂ ಸಿಎಸ್‌ಕೆ ತಂಡದ ದಾಖಲೆ ಅದ್ಭುತ ಎಂಬಂತಿಲ್ಲ. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 32 ಪಂದ್ಯಗಳು ನಡೆದಿದ್ದು, ಸಿಎಸ್‌ಕೆ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ 16 ಪಂದ್ಯಗಳಲ್ಲಿ ಗೆದ್ದಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಒಂಬತ್ತು ಪಂದ್ಯಗಳು ನಡೆದಿದ್ದು, ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೈಜ್ ಎಷ್ಟು’ ಎಂದು ಕೇಳಿದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ

ನಟಿ ಅದಾ ಶರ್ಮಾ (Adah Sharma) ಅವರು ಕನ್ನಡ ಚಿತ್ರರಂಗದವರಿಗೂ ಪರಿಚಿತರು. ಪುನೀತ್ ರಾಜ್​​ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ಅವರು ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ‘ದಿ ಕೇರಳ ಸ್ಟೋರಿ’ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಅವರು ಬಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರೋ ಅದಾ ಶರ್ಮಾ ಅವರು ಆಗಾಗ ವಿವಿಧ ರೀತಿಯ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಅಶ್ಲೀಲವಾಗಿ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದ್ದಾರೆ.

ಸೆಲೆಬ್ರಿಟಿಗಳು ಕೆಲವೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡು ಫೋಟೋ ಹಾಕುತ್ತಾರೆ. ಈ ಪೋಸ್ಟ್​​ಗಳ ಕಮೆಂಟ್ ಸೆಕ್ಷನ್​​ಗೆ ತೆರಳಿದರೆ ಸಾಕಷ್ಟು ಕೆಟ್ಟ​ ಕಮೆಂಟ್​​​ಗಳನ್ನು ಕಾಣಬಹುದು. ಕೆಲವು ನಟಿಯರು ಇದಕ್ಕೆ ಉತ್ತರ ಕೊಡದೆ ಸುಮ್ಮನೆ ಇದ್ದರೆ ಇನ್ನೂ ಕೆಲವರು ಈ ರೀತಿಯ ಪ್ರಶ್ನೆ ಕೇಳಿದವರಿಗೆ ಖಡಕ್ ಆಗಿ ಉತ್ತರ ನೀಡುತ್ತಾರೆ. ಅದಾ ಶರ್ಮಾ ಕೂಡ ಹಾಗೆಯೇ ಮಾಡಿದ್ದಾರೆ.

ಅದಾ ಶರ್ಮಾ ಅವರು ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಈ ವೇಳೆ ಅದಾ ಶರ್ಮಾ ಅವರಿಗೆ ‘ನಿಮ್ಮ ಸೈಜ್ ಎಷ್ಟು’ ಎಂದು ಕೇಳಲಾಗಿದೆ. ಇದು ಕೆಟ್ಟ ಉದ್ದೇಶದಿಂದ ಕೇಳಿದ ಪ್ರಶ್ನೆ ಎಂಬುದು ಅದಾಗೆ ಗೊತ್ತಾಗಿದೆ. ಹೀಗಾಗಿ, ಅವರು ‘ಸೈಜ್ 9, ನನ್ನ ಚಪ್ಪಲಿಯದ್ದು’ ಎಂದಿದ್ದಾರೆ. ಈ ವೇಳೆ ಅವರು ಪರೋಕ್ಷವಾಗಿ ಮಧ್ಯ ಬೆಟ್ಟನ್ನು ತೋರಿಸಿದ್ದಾರೆ. ಈ ಮೂಲಕ ಪ್ರಶ್ನೆ ಕೇಳಿದವನಿಗೆ ಅದಾ ಮಂಗಳಾರತಿ ಮಾಡಿದ್ದಾರೆ. ಅವರ ಕ್ರಮಕ್ಕೆ ಎಲ್ಲರೂ ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ: ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ? ಪಕ್ಕಾ ಟ್ರೆಡಿಷನಲ್

ಸಾಮಾನ್ಯವಾಗಿ ಮುಜುಗರ ತರುವ ಪ್ರಶ್ನೆ ಅಥವಾ ಅಶ್ಲೀಲ ಪ್ರಶ್ನೆ ಕೇಳಿದಾಗ ಸೆಲೆಬ್ರಿಟಿಗಳು ಆ ಬಗ್ಗೆ ಉತ್ತರ ನೀಡಲು ಹಿಂದೇಟು ಹಾಕುತ್ತಾರೆ. ಆ ರೀತಿಯ ಪ್ರಶ್ನೆಗಳನ್ನು ಸ್ಕಿಪ್ ಮಾಡುತ್ತಾರೆ. ಆದರೆ, ಅದಾ ಶರ್ಮಾ ಅವರು ಆ ರೀತಿ ಮಾಡಿಲ್ಲ. ಅವರು ಈ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿ, ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version