ಟಿಎಂಸಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ, ಎಚ್‌ಡಿಎಫ್‌ಸಿಗೆ ಟಿಎಂಸಿ ಪತ್ರ – Kannada News | TMC Freezes Bank Accounts: Rebels Feared to Loot Funds Amid Internal Crisis

ಕೋಲ್ಕತ್ತಾ , ಜೂನ್ 18: ಟಿಎಂಸಿ(TMC)ಯ ಬಂಡಾಯ ನಾಯಕರು ಹಣ ಲೂಟಿ ಮಾಡಬಹುದು, ಹಾಗಾಗಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ ಎಚ್​ಡಿಎಫ್​ಸಿಗೆ ತೃಣಮೂಲ ಕಾಂಗ್ರೆಸ್ ಪತ್ರ ಬರೆದಿದೆ. ಪಶ್ಚಿಮ ಬಂಗಾಳ ವಿಧಾನಸಬಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮತ್ತು ಬಂಡಾಯ ಬಾವುಟ ಎದ್ದಿದೆ.

ಇದರ ನಡುವೆ ಬಂಡಾಯಗಾರರು ಪಕ್ಷದ ಬಹುಕೋಟಿ ನಿಧಿಯನ್ನು ಲೂಟಿ ಮಾಡಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ಭೀತಿಯಿಂದ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋಲ್ಕತ್ತಾದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಟಿಎಂಸಿ ನಾಯಕರು ಪತ್ರ ಬರೆದಿದ್ದಾರೆ.

ಬ್ಯಾಂಕ್‌ಗೆ ಸಲ್ಲಿಕೆಯಾಗಿರುವ ಪತ್ರದ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ನಾಯಕತ್ವವು ತನ್ನ ಜನಪ್ರತಿನಿಧಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.
ಪಕ್ಷದ ಒಟ್ಟು 28 ಸಂಸದರಲ್ಲಿ ಕೇವಲ 8 ಸಂಸದರು ಮಾತ್ರ ಸದ್ಯ ನಾಯಕತ್ವದ ಜತೆಗಿದ್ದಾರೆ, ಉಳಿದ 20 ಸಂಸದರು ಬಂಡಾಯ ಬಣ ಸೇರಿದ್ದಾರೆ. ಪಕ್ಷದ ಒಟ್ಟು 60 ಶಾಸಕರಲ್ಲಿ ಕೇವಲ ಇಬ್ಬರು ಮಾತ್ರ ಮಮತಾ ಬಣದಲ್ಲಿದ್ದು, ಉಳಿದ 58 ಶಾಸಕರು ಬಂಡಾಯವೆದ್ದಿದ್ದಾರೆ.

ಮತ್ತಷ್ಟು ಓದಿ: ‘ಎನ್‌ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ

ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರು ಬ್ಯಾಂಕ್‌ಗೆ ಬರೆದಿರುವ ಪತ್ರದಲ್ಲಿ ಪ್ರಮುಖ ಕಳವಳಗಳನ್ನು ಹಂಚಿಕೊಂಡಿದ್ದಾರೆ: ಪಕ್ಷದ ದೈನಂದಿನ ಕಚೇರಿ ವೆಚ್ಚಗಳಿಗಾಗಿ ಟಿಎಂಸಿ ಪ್ರಧಾನ ಕಚೇರಿಯಲ್ಲಿ ಮೊದಲೇ ಸಹಿ ಮಾಡಿ ಇಡಲಾಗಿದ್ದ ಹಲವಾರು ಖಾಲಿ ಚೆಕ್‌ಗಳು (Blank Cheques) ಇವೆ. ಬಂಡಾಯಗಾರರು ಈ ಚೆಕ್‌ಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳಿಂದ ಹಣವನ್ನು ಅನಧಿಕೃತವಾಗಿ ಹಿಂಪಡೆಯಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ತೀವ್ರ ಆತಂಕ ಪಕ್ಷದ ನಾಯಕತ್ವಕ್ಕಿದೆ.

ಪಕ್ಷದೊಳಗಿನ ಅಧಿಕಾರ ಮತ್ತು ನಾಯಕತ್ವದ ವಿವಾದ ಸಂಪೂರ್ಣವಾಗಿ ಬಗೆಹರಿಯುವವರೆಗೆ ಬ್ಯಾಂಕ್ ಖಾತೆಗಳಲ್ಲಿ ‘ಯಥಾಸ್ಥಿತಿ’ (Status Quo) ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಯಾವುದೇ ರೀತಿಯ ಹಣ ವರ್ಗಾವಣೆ, ಡೆಬಿಟ್ ವಹಿವಾಟುಗಳು ಅಥವಾ ಖಾತೆಯ ಕಾರ್ಯಾಚರಣೆಯ ಆದೇಶಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಬಾರದು ಎಂದು ಬ್ಯಾಂಕ್ ಅನ್ನು ಒತ್ತಾಯಿಸಲಾಗಿದೆ.

ಚುನಾವಣಾ ಸೋಲಿನ ನಂತರ ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರು ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿ ಹುದ್ದೆಯಿಂದ ತೆಗೆದುಹಾಕಿ, ಸುಭಾಷಿಶ್ ಚಕ್ರವರ್ತಿ ಅವರನ್ನು ನೇಮಿಸಿದ್ದರು. ಆದರೆ ತುರ್ತು ಪರಿಸ್ಥಿತಿಯ ಕಾರಣ ಹಳೆಯ ಹುದ್ದೆಯ ಹೆಸರಿನಲ್ಲೇ ಈ ಪತ್ರ ವ್ಯವಹಾರ ನಡೆದಿದೆ ಎನ್ನಲಾಗಿದ್ದು, ಟಿಎಂಸಿ ಆಂತರಿಕ ಜಗಳ ಈಗ ಬ್ಯಾಂಕ್ ಅಂಗಳ ತಲುಪಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 80 ಡಾಲರ್​ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ? – Kannada News | Crude Oil selling at price below 80 USD, expectations of decrease in petrol, diesel rates

ನವದೆಹಲಿ, ಜೂನ್ 18: ಕೆಲ ದಿನಗಳ ಹಿಂದೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಘೋಷಣೆಯಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಸತತವಾಗಿ ಇಳಿಮುಖವಾಗುತ್ತಿವೆ. ಮಾರ್ಚ್ ಮಧ್ಯಭಾಗದಲ್ಲಿ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ $145 ದಾಟಿದ್ದ ಭಾರತದ ಕಚ್ಚಾ ತೈಲ ಖರೀದಿ ದರ (Indian crude oil basket), ಈಗ ಗಣನೀಯವಾಗಿ ಕುಸಿದು ಬ್ಯಾರೆಲ್‌ಗೆ $80 ಕ್ಕಿಂತಲೂ ಕೆಳಗೆ ಬಂದಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಇದು ಸಾಮಾನ್ಯ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಹೊಸ ಭರವಸೆಯನ್ನು ಮೂಡಿಸಿದೆ.

ಇತ್ತೀಚಿನ ತೈಲ ಬೆಲೆಗಳ ವಿವರ

ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿ ಬರುವ ಪಿಪಿಎಸಿ (PPAC) ದತ್ತಾಂಶದ ಪ್ರಕಾರ, ಜೂನ್ 16 ರ ವೇಳೆಗೆ ಭಾರತದ ಕಚ್ಚಾ ತೈಲ ಬಾಸ್ಕೆಟ್ ಬೆಲೆ $78.66 ಕ್ಕೆ ತಲುಪಿದೆ. ಯುದ್ಧ ಆರಂಭವಾಗುವ ಮುನ್ನ (ಫೆಬ್ರವರಿ 19 ರಂದು) ಇದು $70.70 ರಷ್ಟಿತ್ತು. ಅಂದರೆ ಬೆಲೆಗಳು ಈಗ ಯುದ್ಧದ ಪೂರ್ವದ ಮಟ್ಟಕ್ಕೆ ವೇಗವಾಗಿ ಮರಳುತ್ತಿವೆ.

ಗರಿಷ್ಠ ಮಟ್ಟದಿಂದ ಭಾರಿ ಕುಸಿತ

ಮಾರ್ಚ್ 17 ರಂದು ತೈಲ ದರವು ಸರಾಸರಿ $146.09 ರಷ್ಟು ಗರಿಷ್ಠ ಮಟ್ಟ ಮುಟ್ಟಿತ್ತು. ಆ ಬಳಿಕ ಏಪ್ರಿಲ್‌ನಲ್ಲಿ $114.48 ಮತ್ತು ಮೇ ತಿಂಗಳಲ್ಲಿ $106.23 ರಷ್ಟಿದ್ದ ತೈಲ ದರ, ಪ್ರಸ್ತುತ ಜೂನ್‌ನಲ್ಲಿ ಭಾರಿ ಇಳಿಕೆ ಕಂಡಿದೆ.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ತಕ್ಷಣವೇ ಬೆಲೆ ಕಡಿತಕ್ಕೆ ಇರುವ ಅಡ್ಡಿಗಳು ಯಾವುವು?

ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಪೆಟ್ರೋಲ್, ಡೀಸಲ್​ನ ರೀಟೇಲ್ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಕಡಿಮೆ. ಅದಕ್ಕೂ ಕೆಲ ಪ್ರಮುಖ ಕಾರಣಗಳಿವೆ.

ಕಚ್ಚಾ ತೈಲ ಅಗ್ಗಗೊಂಡರೆ ಅದು ತೈಲ ಕಂಪನಿಗಳ ಹಿಂದಿನ ನಷ್ಟ ಭರ್ತಿ ಮಾಡಲು ಸರಿಹೋಗಬಹುದು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತೈಲ ಬೆಲೆ ಗಗನಕ್ಕೇರಿದ್ದಾಗ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದ್ದರಿಂದ ಅನುಭವಿಸಿದ ನಷ್ಟವನ್ನು ಭರಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳಬಹುದು.

ಸರ್ಕಾರ ಕೂಡ ತನ್ನ ಆದಾಯ ನಷ್ಟ ಸರಿದೂಗಿಸಲು ಯತ್ನಿಸಬಹುದು. ಸರ್ಕಾರ ಈ ಹಿಂದೆ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ 10 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗಿದೆ. ಹೀಗಾಗಿ, ಸರ್ಕಾರವು ಅಬಕಾರಿ ಸುಂಕ ಹೆಚ್ಚಿಸಬಹುದು.

ಹಾಗೆಯೇ, ಸರ್ಕಾರವ ಗೊಬ್ಬರ ಸಬ್ಸಿಡಿ ಹೊರೆಯನ್ನು ಸರಿದೂಗಿಸಲು ಈ ಸಮಯಾವಕಾಶ ಬಳಸಬಹುದು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ರಸಗೊಬ್ಬರ ಸಬ್ಸಿಡಿ ವೆಚ್ಚವು ₹1.71 ಲಕ್ಷ ಕೋಟಿಯಿಂದ ₹3.4 ಲಕ್ಷ ಕೋಟಿಗಿಂತಲೂ ಹೆಚ್ಚಾಗುವ ಅಂದಾಜಿದೆ. ಈ ಹೊರೆಯನ್ನು ನಿಭಾಯಿಸಲು ಸರ್ಕಾರ ತೈಲದ ಮೇಲಿನ ಆದಾಯವನ್ನು ಬಳಸಬಹುದು.

ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

ಪೆಟ್ರೋಲ್ ಬೆಲೆ ಇಳಿಕೆಯಿಂದ ದೇಶಕ್ಕಾಗುವ ಲಾಭಗಳೇನು?

ಒಂದು ವೇಳೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಿದರೆ, ಅದರಿಂದ ಪರೋಕ್ಷವಾಗಿ ದೇಶದ ಆರ್ಥಿಕತೆಗೆ ದೊಡ್ಡ ಲಾಭವಾಗುವ ನಿರೀಕ್ಷೆ ಇದೆ.

  • ಬಳಕೆ ಹೆಚ್ಚಳ: ತೈಲ ದರ ಇಳಿಕೆಯಾದರೆ ಜನರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿ, ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚುತ್ತದೆ.
  • ಹಣದುಬ್ಬರ ನಿಯಂತ್ರಣ: ಮುಂಬರುವ ತಿಂಗಳುಗಳಲ್ಲಿ ‘ಎಲ್ ನಿನೋ’ (El Nino) ಪ್ರಭಾವ ಹಾಗೂ ಕಡಿಮೆ ಮಳೆಯ ಮುನ್ಸೂಚನೆಯಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಇಂಧನ ದರ ಇಳಿಕೆಯಾದರೆ ಚಿಲ್ಲರೆ ಹಣದುಬ್ಬರ (Inflation) ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
  • ಉದ್ಯೋಗ ಮತ್ತು ಪ್ರಗತಿ: ಯುದ್ಧದ ಕಾರಣದಿಂದ ಮಂಕಾಗಿದ್ದ ದೇಶದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಇದು ಉತ್ತೇಜನ ನೀಡಬಲ್ಲದು.

ಅದೇನೇ ಇರಲಿ, ಕಚ್ಚಾ ತೈಲದ ದರ ಇಳಿಕೆಯಿಂದ ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಆಗದಿದ್ದರೂ ಬೇರೆ ಬೇರೆ ರೀತಿಯಲ್ಲಿ ಆರ್ಥಿಕತೆಗೆ ಅದು ಪುಷ್ಟಿ ನೀಡುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ – Kannada News | Rakesh Bedi Slams ‘Dhurandhar 2’ Propaganda Claims: PMO Can’t Write Such Dialogues

ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿದೆ. ಆದರೆ, ಈ ಚಿತ್ರದ ವಿರುದ್ಧ ‘ಪ್ರೊಪೊಗಾಂಡ ಸಿನಿಮಾ’ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ತೋರಿಸಿರುವುದು, ಅವರು ಕೈಗೊಂಡ ನೋಟು ಅಮಾನ್ಯೀಕರಣ ಕ್ರಮವನ್ನು ಶ್ಲಾಘಿಸಿರುವುದು ಮತ್ತು ಅದರ ಅಸಲಿ ಕಾರಣವನ್ನು ವಿವರಿಸಿರುವುದೇ ಈ ಆರೋಪಕ್ಕೆ ಮುಖ್ಯ ಕಾರಣವಾಗಿತ್ತು. ಈ ಸಿನಿಮಾದ ಸ್ಕ್ರಿಪ್ಟ್ ಅನ್ನು ಸ್ವತಃ ಮೋದಿಯವರೇ ಫೈನಲ್ ಮಾಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರಂತೂ ಈ ಕಥೆ ಸಿದ್ಧವಾಗಿದ್ದೇ ಪ್ರಧಾನಿ ಕಚೇರಿಯಲ್ಲಿ ಎಂದು ಆರೋಪಿಸಿದ್ದರು. ಇದೀಗ ಈ ಎಲ್ಲಾ ಆರೋಪಗಳಿಗೆ ಚಿತ್ರದ ಹಿರಿಯ ನಟ ರಾಕೇಶ್ ಬೇಡಿ ಅವರು ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಹಾಗೂ ಖಡಕ್ ಆಗಿ ಉತ್ತರಿಸಿದ್ದಾರೆ.

ಪಿಎಂಒ ಕಚೇರಿಯಲ್ಲಿ ಇಂತಹ ಡೈಲಾಗ್ ಬರೆಯಲು ಸಾಧ್ಯವೇ?

ರಾಕೇಶ್ ಬೇಡಿ ಅವರು ‘ಧುರಂಧರ್ 2’ ಚಿತ್ರದಲ್ಲಿ ಜಮೀಲ್ ಜಮಾಲಿ ಹೆಸರಿನ ಪಾಕಿಸ್ತಾನ ರಾಜಕಾರಣಿ ಪಾತ್ರ ಮಾಡಿದ್ದಾರೆ. ಚಿತ್ರದ ಯಶಸ್ಸಿನ ನಂತರ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ, ‘ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಕೆಲವರು ಈ ಚಿತ್ರದ ಸ್ಕ್ರಿಪ್ಟ್ ನೇರವಾಗಿ ಪ್ರಧಾನಿ ಕಚೇರಿಯಿಂದಲೇ ಬರೆದು ಬಂದಿದೆ ಎಂದು ಹೇಳಲಾರಂಭಿಸಿದರು. ಆದರೆ ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ; ಚಿತ್ರದಲ್ಲಿ ನಾನು ಬಾತುಕೋಳಿಗಳ ಗುಂಪನ್ನು ನೋಡಿ ‘ನಿಮ್ಮ ವೃಷಣಗಳು ತುಂಬಾ ಬಿಳಿಯಾಗಿವೆ’ ಎನ್ನುತ್ತೇನೆ. ಪಿಎಂಒ ಕಚೇರಿಯಲ್ಲಿ ಕುಳಿತು ಇಂತಹ ಲೈನ್‌ಗಳನ್ನು ಬರೆಯುವ ವ್ಯಕ್ತಿ ಯಾರಿದ್ದಾರೆ ಹೇಳಿ? ಇಂತಹ ಡೈಲಾಗ್ ಅನ್ನು ಅಲ್ಲಿನವರು ಯೋಚಿಸಲು ಕೂಡ ಸಾಧ್ಯವಿಲ್ಲ’ ಎಂದು ಹಾಸ್ಯಭರಿತವಾಗಿ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಸ್ಕ್ರಿಪ್ಟ್‌ಗೆ ಕಾಮಿಡಿ ಟಚ್ ನೀಡಿದ ರಾಕೇಶ್:

‘ನಾನು ಮೊದಲು ಚಿತ್ರದ ಸ್ಕ್ರಿಪ್ಟ್ ಓದಿದಾಗ ಅದು ಕೇವಲ ಟೆನ್ಷನ್ ಅಷ್ಟೇ ಅಲ್ಲ, ಅತ್ಯಂತ ಗಂಭೀರವಾದ ಕಥೆ ಎಂದು ತಿಳಿಯಿತು. ನಾನು ಮೂಲತಃ ಕಾಮಿಡಿ ಕಲಾವಿದನಾದ್ದರಿಂದ, ಇಷ್ಟು ಗಂಭೀರವಾದ ಕಥೆಯ ಮಧ್ಯೆ ಪ್ರೇಕ್ಷಕರಿಗೆ ಸ್ವಲ್ಪ ರಿಲೀಫ್ ನೀಡಲು ಕೆಲವು ಕಾಮಿಡಿ ದೃಶ್ಯಗಳನ್ನು ಸೇರಿಸಬಹುದೇ ಎಂದು ನಿರ್ದೇಶಕ ಆದಿತ್ಯ ಧರ್ ಅವರನ್ನು ಕೇಳಿದೆ. ಆರಂಭದಲ್ಲಿ ಅವರು ಸ್ವಲ್ಪ ಹಿಂಜರಿದರೂ, ಶೂಟಿಂಗ್ ಪ್ರಗತಿಯಾದಂತೆ ಆ ಕಾಮಿಡಿ ಟಚ್ ಅನ್ನು ಅವರೂ ಇಷ್ಟಪಟ್ಟರು, ನಾನೂ ಎಂಜಾಯ್ ಮಾಡಿದೆ’ ಎಂದು ರಾಕೇಶ್ ಬೇಡಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

ಸೋಶಿಯಲ್ ಮೀಡಿಯಾ ಪವರ್ ಬಿಚ್ಚಿಟ್ಟ ನಟ:

‘ಹಿಂದಿನ ಕಾಲದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಜನರಿಗೆ ತಿಳಿಯಲು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿತ್ತು. ಆದರೆ ಇಂದು ಒಂದೇ ಒಂದು ಬಟನ್ ಒತ್ತಿದರೆ ಸಾಕು, ಕೇವಲ ಒಂದು ಸೆಕೆಂಡ್‌ನಲ್ಲಿ ಕೋಟ್ಯಂತರ ಜನರಿಗೆ ಮಾಹಿತಿ ತಲುಪುತ್ತದೆ. ಇನ್‌ಸ್ಟಾಗ್ರಾಮ್ ಮತ್ತು ಇತರೆ ಸೋಷಿಯಲ್ ಮೀಡಿಯಾಗಳಿಂದಾಗಿ ‘ಧುರಂಧರ್’ ಚಿತ್ರಕ್ಕೆ ಜಗತ್ತಿನಾದ್ಯಂತ ಸಿಕ್ಕ ಪ್ರತಿಕ್ರಿಯೆ ಕೋಟ್ಯಂತರ ಪಟ್ಟು ಹೆಚ್ಚಾಗಿದೆ. ಈ ಹಿಂದೆ ನನ್ನ ‘ಚಶ್ಮೇ ಬದ್ದೂರ್’ ಮತ್ತು ‘ಯೇ ಜೋ ಹೈ ಜಿಂದಗಿ’ ಸೀರಿಯಲ್ ಸಮಯದಲ್ಲೂ ನನಗೆ ಇಷ್ಟೇ ಪ್ರೀತಿ ಸಿಕ್ಕಿತ್ತು. ಆದರೆ ಇಂದಿನ ರೀಚ್ ಮತ್ತು ಸಕ್ಸಸ್‌ನ ತೀವ್ರತೆ ಹಳೆಯ ಕಾಲಕ್ಕಿಂತ ಲಕ್ಷಾಂತರ ಪಟ್ಟು ದೊಡ್ಡದಾಗಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶದಲ್ಲೇ ಮೊದಲು: ಜವಳಿ ವ್ಯಾಪಾರಿಗಳ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ, ಎಲ್ಲಿದೆ? ಏನಿದರ ವೈಶಿಷ್ಟ್ಯ – Kannada News | Surat: India’s First Textile Police Station Boosts Trader Safety and Fights Fraud

ಸೂರತ್, ಜೂನ್ 18: ಜವಳಿಗೆ ಹೆಸರಾಗಿರುವ ಗುಜರಾತ್‌ನ ಸೂರತ್ ನಗರದ ಮುಕುಟಕ್ಕೆ ಮತ್ತೊಂದು ಹೊಸ ಗರಿ ಸೇರಲಿದೆ. ಬಹುಕೋಟಿ ಮೌಲ್ಯದ ಜವಳಿ(Textile) ಉದ್ಯಮಕ್ಕೆ ಕಾನೂನು ರಕ್ಷಣೆ ನೀಡಲು ಮತ್ತು ವ್ಯಾಪಾರಿಗಳ ಸುರಕ್ಷತೆಯನ್ನು ಹೆಚ್ಚಿಸಲು, ದೇಶದ ಅತ್ಯಂತ ಮೊದಲ ‘ ಜವಳಿ ಪೊಲೀಸ್ ಠಾಣೆ’ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಸೂರತ್‌ನ ಜವಳಿ ಮಾರುಕಟ್ಟೆಯ ವ್ಯಾಪಾರಿಗಳು ಬಹಳ ದಿನಗಳಿಂದ ಇಂತಹದೊಂದು ಪ್ರತ್ಯೇಕ ಪೊಲೀಸ್ ಠಾಣೆಗಾಗಿ ಬೇಡಿಕೆ ಇಟ್ಟಿದ್ದರು. ಮುಂದಿನ 1 ರಿಂದ 2 ವರ್ಷಗಳಲ್ಲಿ ಈ ವಿಶೇಷ ಯೋಜನೆಯು ಪೂರ್ಣಗೊಳ್ಳಲಿದೆ. ಸೂರತ್‌ನ ಸಲಬತ್‌ಪುರ, ಮಹೀಧರ್‌ಪುರ, ವರಾಚಾ, ಪೂನಾ ಸೇರಿದಂತೆ ವಿವಿಧ 7 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಜವಳಿ ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ವಂಚನೆ ಮತ್ತು ಅಪರಾಧಗಳ ದೂರುಗಳನ್ನು ಇನ್ಮುಂದೆ ಈ ಒಂದೇ ವಿಶೇಷ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

ಸದ್ಯಕ್ಕೆ ಜವಳಿ ವಂಚನೆ ಪ್ರಕರಣಗಳು ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗುತ್ತಿರುವುದರಿಂದ, ಒಬ್ಬನೇ ಆರೋಪಿಯ ಹಳೇ ಇತಿಹಾಸವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. ಆದರೆ ಹೊಸ ಠಾಣೆಯಿಂದಾಗಿ ಎಲ್ಲಾ ಆರೋಪಿಗಳ ಸಂಪೂರ್ಣ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರಲಿದ್ದು, ತನಿಖೆ ವೇಗವಾಗಿ ನಡೆಯಲಿದೆ.

ಮತ್ತಷ್ಟು ಓದಿ: ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​: ರೆಡಿಮೇಡ್ ಉಡುಪುಗಳ ಬೆಲೆ ಏರಿಕೆ ಸಾಧ್ಯತೆ

ಈ ಪ್ರತ್ಯೇಕ ಠಾಣೆಯಿಂದಾಗಿ ವ್ಯಾಪಾರಸ್ಥರಿಗೆ ಪದೇ ಪದೇ ಮೋಸ ಮಾಡುವ ವಂಚಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ. ಜೊತೆಗೆ ವ್ಯಾಪಾರಿಗಳ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ. ಜವಳಿ ಉದ್ಯಮಕ್ಕೆ ಸಂಬಂಧಿಸಿದ ಉದ್ಯಮಿಗಳ ಪ್ರಕಾರ, ಸರ್ಕಾರದ ಈ ಮಹತ್ವದ ಹೆಜ್ಜೆಯು ಸೂರತ್‌ನ ಬೃಹತ್ ಜವಳಿ ಮಾರುಕಟ್ಟೆಯನ್ನು ಮತ್ತಷ್ಟು ಸುರಕ್ಷಿತ, ಸಂಘಟಿತ ಮತ್ತು ನಂಬಿಕಸ್ಥ ವ್ಯಾಪಾರ ಕೇಂದ್ರವನ್ನಾಗಿ ಬದಲಾಯಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:56 pm, Thu, 18 June 26

Source link

Vastu Tips: ಮನೆಯಲ್ಲಿ ಪೂರ್ವಜರ ಫೋಟೋ ಈ ದಿಕ್ಕಿನಲ್ಲಿಟ್ಟರೆ ಕಷ್ಟ ತಪ್ಪಿದ್ದಲ್ಲ! – Kannada News | Ancestor Photo Vastu: Place Safely to Attract Blessings and Avoid Pitra Dosha

ಹಿಂದೂ ಧರ್ಮದಲ್ಲಿ ಅಗಲಿದ ಹಿರಿಯರನ್ನು (ಪೂರ್ವಜರನ್ನು) ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಅವರ ನೆನಪಿಗಾಗಿ ಮತ್ತು ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂಬ ಕಾರಣಕ್ಕೆ ಮನೆಯಲ್ಲಿ ಅವರ ಫೋಟೋಗಳನ್ನು ಇಡುವುದು ಸಾಮಾನ್ಯ. ಆದರೆ, ಗರುಡ ಪುರಾಣ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಜರ ಫೋಟೋಗಳನ್ನು ಎಲ್ಲೆಂದರಲ್ಲಿ ಇಡುವುದು ಮಹಾ ತಪ್ಪು. ತಪ್ಪಾದ ಜಾಗ ಅಥವಾ ದಿಕ್ಕಿನಲ್ಲಿ ಫೋಟೋ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಆರ್ಥಿಕ ನಷ್ಟ ಹಾಗೂ ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು. ಹಾಗಾದರೆ, ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಹಿರಿಯರ ಫೋಟೋಗಳನ್ನು ಎಲ್ಲಿ ಮತ್ತು ಹೇಗೆ ಇಡಬೇಕು? ಗರುಡ ಪುರಾಣ ಸೂಚಿಸುವ ಪ್ರಮುಖ ನಿಯಮಗಳು ಇಲ್ಲಿವೆ.

ಫೋಟೋ ಇಡಲು ಅತ್ಯಂತ ಶುಭ ದಿಕ್ಕು ಯಾವುದು?

ಗರುಡ ಪುರಾಣ ಮತ್ತು ವಾಸ್ತು ನಿಯಮಗಳ ಪ್ರಕಾರ, ಪೂರ್ವಜರ ಫೋಟೋವನ್ನು ಯಾವಾಗಲೂ ಮನೆಯ ದಕ್ಷಿಣ (South) ಅಥವಾ ಪಶ್ಚಿಮ (West) ದಿಕ್ಕಿನ ಗೋಡೆಗೆ ಹಾಕಬೇಕು. ಈ ದಿಕ್ಕಿನಲ್ಲಿ ಫೋಟೋ ಇಟ್ಟಾಗ, ಅವರ ಮುಖವು ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ದೇವತೆಗಳ ಸಕಾರಾತ್ಮಕ ಶಕ್ತಿಯ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ರೀತಿ ಇಡುವುದರಿಂದ ಪಿತೃಗಳ ಆಶೀರ್ವಾದ ಸದಾ ಕುಟುಂಬದ ಮೇಲಿರುತ್ತದೆ.

ದೇವರ ಕೋಣೆಯಲ್ಲಿ ಹಿರಿಯರ ಫೋಟೋ ಇಡಬೇಡಿ:

ಅನೇಕರು ಭಕ್ತಿ ಮತ್ತು ಗೌರವದಿಂದಾಗಿ ದೇವರ ಫೋಟೋಗಳ ಜೊತೆಯಲ್ಲೇ ಹಿರಿಯರ ಫೋಟೋಗಳನ್ನೂ ಇಟ್ಟು ಪೂಜಿಸುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ ಇದು ತಪ್ಪು. ಪೂರ್ವಜರು ನಮಗೆ ಎಷ್ಟೇ ಗೌರವಾನ್ವಿತರಾಗಿದ್ದರೂ, ಅವರಿಗೆ ದೇವತೆಗಳಿಗೆ ಸಮಾನವಾದ ಸ್ಥಾನವನ್ನು ನೀಡಲು ಬರುವುದಿಲ್ಲ. ದೇವರನ್ನು ಮತ್ತು ಪಿತೃಗಳನ್ನು ಒಂದೇ ಜಾಗದಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ‘ಪಿತೃ ದೋಷ’ ಉಂಟಾಗಬಹುದು ಮತ್ತು ದೇವರ ಅನುಗ್ರಹ ಸಿಗುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ.

ಈ ಜಾಗಗಳಲ್ಲಿ ಫೋಟೋ ಇಟ್ಟರೆ ದಾರಿದ್ರ್ಯ ಗ್ಯಾರಂಟಿ:

ಬೆಡ್‌ರೂಮ್‌ನಲ್ಲಿ ಅಥವಾ ಮೆಟ್ಟಿಲುಗಳ ಕೆಳಗೆ ಹಿರಿಯರ ಫೋಟೋ ಹಾಕಬಾರದು. ಇದು ಮನೆಯ ವಾತಾವರಣವನ್ನು ಕೆಡಿಸಿ, ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಬಹುದು. ಇದಲ್ಲದೇ ಮನೆಗೆ ಬರುವ ಹೊರಗಿನವರ ಕಣ್ಣಿಗೆ ನೇರವಾಗಿ ಕಾಣಿಸುವ ಜಾಗದಲ್ಲಿ ಅಥವಾ ಲಿವಿಂಗ್ ರೂಮ್‌ನ ಮಧ್ಯಭಾಗದಲ್ಲಿ ಫೋಟೋ ಇಡಬೇಡಿ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮನೆಯ ಮಧ್ಯಭಾಗವನ್ನು ‘ಬ್ರಹ್ಮಸ್ಥಾನ’ ಎನ್ನಲಾಗುತ್ತದೆ, ಇಲ್ಲಿ ಫೋಟೋ ಇಟ್ಟರೆ ಕುಟುಂಬದ ಸದಸ್ಯರ ಗೌರವಕ್ಕೆ ಧಕ್ಕೆ ಬರಬಹುದು. ಇನ್ನು ಅಡುಗೆ ಮನೆಯಲ್ಲಿ ಫೋಟೋ ಇಟ್ಟರೆ ದಿನನಿತ್ಯ ಜಗಳ ಹಾಗೂ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ.

ಬದುಕಿರುವವರ ಜೊತೆ ಸತ್ತವರ ಫೋಟೋ ಫ್ರೇಮ್ ಮಾಡಬೇಡಿ:

ಜನರು ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪೆಂದರೆ, ಜೀವಂತವಾಗಿರುವ ವ್ಯಕ್ತಿಗಳ ಫೋಟೋದೊಂದಿಗೆ ಮರಣ ಹೊಂದಿದ ಹಿರಿಯರ ಫೋಟೋವನ್ನು ಸೇರಿಸಿ ಒಂದೇ ಫ್ರೇಮ್ ಮಾಡಿಸುವುದು. ಗರುಡ ಪುರಾಣದಲ್ಲಿ ಇದಕ್ಕೆ ಸ್ಪಷ್ಟ ನಿಷೇಧವಿದೆ. ಹೀಗೆ ಮಾಡುವುದರಿಂದ ಆ ಫೋಟೋದಲ್ಲಿರುವ ಜೀವಂತ ವ್ಯಕ್ತಿಗಳ ಆಯುಷ್ಯ ಮತ್ತು ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಅವರಲ್ಲಿ ನಿರಾಶಾವಾದ ಮೂಡುತ್ತದೆ.

ಹಿರಿಯರ ಫೋಟೋ ಹೇಗಿರಬೇಕು?

ಹಿರಿಯರ ಫೋಟೋವನ್ನು ಗೋಡೆಗೆ ತಗಲಿಸುವುದಕ್ಕಿಂತ, ಒಂದು ಸಣ್ಣ ಸ್ಟ್ಯಾಂಡ್ ಅಥವಾ ಶೆಲ್ಫ್ (Shelf) ಮೇಲೆ ಗೌರವಪೂರ್ವಕವಾಗಿ ಇಡುವುದು ಉತ್ತಮ. ಯಾವಾಗಲೂ ಅವರ ಮುಖದಲ್ಲಿ ನಗು ಇರುವ, ಶಾಂತವಾಗಿರುವ ಫೋಟೋವನ್ನೇ ಆಯ್ದುಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು; ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್ – Kannada News | Bengaluru Train Disruptions: Vande Bharat, Kaveri Express Services Affected Till August

ಬೆಂಗಳೂರು, ಜೂ.18: ರೈಲ್ವೆ ಹಳಿಗಳ ಸುಧಾರಣೆ, ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ (KSR) ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ರಿಂದ ಆಗಸ್ಟ್ ತಿಂಗಳವರೆಗೆ ಹಲವು ಪ್ರಮುಖ ರೈಲುಗಳನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಹೊಳೆನರಸೀಪುರ ಮಾರ್ಗ: ಜೂನ್ 18 ಮತ್ತು 23 ರಂದು ಸಂಪೂರ್ಣ ರದ್ದಾದ ರೈಲುಗಳು:

ರಸ್ತೆ ಕೆಳಸೇತುವೆ ಕಾಮಗಾರಿಯಿಂದಾಗಿ ಕೆಳಗಿನ ರೈಲುಗಳ ಸಂಚಾರ ಇರಲ್ಲ. ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206)

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16205)

ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267)

ಭಾಗಶಃ ರದ್ದು ಮತ್ತು ವಿಳಂಬವಾಗುವ ರೈಲುಗಳು:

ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225): ಈ ರೈಲು ಜೂನ್ 18 ಮತ್ತು 23 ರಂದು ಮೈಸೂರಿನಿಂದ ಹೊರಡುವ ಬದಲಾಗಿ ಅರಸೀಕೆರೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇದರಿಂದ ಮೈಸೂರು, ಕೆ.ಆರ್.ನಗರ ಮತ್ತು ಹಾಸನದ ಪ್ರಯಾಣಿಕರಿಗೆ ಸೇವೆ ಲಭ್ಯವಿರುವುದಿಲ್ಲ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208): ಈ ರೈಲು ಮಾರ್ಗ ಮಧ್ಯೆ ನಿಯಂತ್ರಣಕ್ಕೊಳಗಾಗಲಿದ್ದು, ನಿಗದಿತ ಸಮಯಕ್ಕಿಂತ 30 ರಿಂದ 120 ನಿಮಿಷಗಳಷ್ಟು ತಡವಾಗಿ ಸಂಚರಿಸಲಿದೆ.

ಜುಲೈ-ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ರದ್ದು

ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕೆಎಸ್‌ಆರ್ (ಮೆಜೆಸ್ಟಿಕ್) ನಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುವ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು-ಕೇರಳ ವಂದೇ ಭಾರತ್ ರದ್ದು: ಜುಲೈ 31 ಮತ್ತು ಆಗಸ್ಟ್ 3 ರಂದು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26652) ರೈಲು ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ಬದಲಾಗಿ ಕೃಷ್ಣರಾಜಪುರಂ (ಕೆ.ಆರ್.ಪುರಂ) ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಲಾಲ್‌ಬಾಗ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಜುಲೈ 31 ರಿಂದ ಆಗಸ್ಟ್ 3 ರವರೆಗೆ ಚೆನ್ನೈ-ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿಯಿಂದಲೇ ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.

ಆಗಸ್ಟ್‌ನಲ್ಲಿ ಸಂಪೂರ್ಣ ರದ್ದಾಗಲಿರುವ ಪ್ರಮುಖ ರೈಲುಗಳು:

ಆಗಸ್ಟ್ 1: ಕೆಎಸ್‌ಆರ್ ಬೆಂಗಳೂರು ಟು ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12658) – ರದ್ದು

ಆಗಸ್ಟ್ 2: ಚೆನ್ನೈ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12657) – ರದ್ದು

ಆಗಸ್ಟ್ 2 ಮತ್ತು 3: ಚೆನ್ನೈ-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲು – ರದ್ದು

ಇದನ್ನೂ ಓದಿ:‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

ರೈಲ್ವೆ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು ಈ ಮಹತ್ವದ ಕಾಮಗಾರಿ ಅಗತ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್‌ಲೈನ್ ಅಥವಾ ಆಪ್‌ಗಳ ಮೂಲಕ ರೈಲಿನ ಇಂದಿನ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು? – Kannada News | Sudeep acting along with Prabhas in Spirit movie

ಸುದೀಪ್ (Sudeep), ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು. ಅವರ ನಟನಾ ಪ್ರತಿಭೆಗೆ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ದೊಡ್ಡ ಅವಕಾಶಗಳೇ ಬಂದಿದ್ದವು. ಅಮಿತಾ ಬಚ್ಚನ್ ಸೇರಿದಂತೆ ಇನ್ನೂ ಹಲವರೊಟ್ಟಿಗೆ ಸಮನಾದ ಪಾತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ಸುದೀಪ್ ಅವರು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಸುದೀಪ್ ಅವರು ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುದೀಪ್ ಅವರು ಪ್ರಭಾಸ್ ನಟನೆಯ ಹೊಸ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾಸ್, ಪ್ರಸ್ತುತ ಫೌಜಿ, ಸ್ಪಿರಿಟ್ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮೂರರಲ್ಲಿ ಸುದೀಪ್ ಅವರು ‘ಸ್ಪಿರಿಟ್’ ಸಿನಿಮಾನಲ್ಲಿ ಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ‘ಸ್ಪಿರಿಟ್’ ಸಿನಿಮಾನಲ್ಲಿ ಸುದೀಪ್ ಅವರು ಸೈನ್ಯಾಧಿಕಾರಿ ಪಾತ್ರದಲ್ಲಿ ಕಾಣೀಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸುದೀಪ್ ಅಭಿಮಾನಿಗಳು, ಪ್ರಭಾಸ್ ಹಾಗೂ ಸುದೀಪ್ ಅವರು ಸೈನ್ಯದ ಸಮವಸ್ತ್ರದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ

ಆದರೆ ಸುದೀಪ್ ಕುರಿತಾಗಿ ಇಂಥಹಾ ಸುದ್ದಿಗಳು ಪದೇ ಪದೇ ಹರಿದಾಡುತ್ತಲೇ ಇರುತ್ತವೆ. ಈ ಬಾರಿಯೂ ಸಹ ‘ವಾರಣಾಸಿ’ ಮತ್ತು ‘ಸ್ಪಿರಿಟ್’ ಎರಡೂ ಸಿನಿಮಾಗಳಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಎರಡೂ ಸುದ್ದಿಗಳು ಇನ್ನೂ ಖಾತ್ರಿ ಆಗಿಲ್ಲ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಾದ ಬಳಿಕ ಕೆಆರ್​​ಜಿ ನಿರ್ಮಾಣದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅವರೇ ಹೇಳಿರುವಂತೆ ಅವರು ಒಟ್ಟು ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಒಂದಾದ ಮೇಲೆ ಒಂದನ್ನು ಮುಗಿಸಲಿದ್ದಾರಂತೆ.

ಇನ್ನು ‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಸೈನ್ಯಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ತೃಪ್ತಿ ದಿಮ್ರಿ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:45 am, Thu, 18 June 26

Source link

Karnataka MLC Elections: ವಿಧಾನಸೌಧದಲ್ಲಿ ಮತದಾನಕ್ಕೂ ಮುನ್ನ ಜೆಡಿಎಸ್ ಮೀಟಿಂಗ್! – Kannada News | JDS MLAs Meet in Vidhana Soudha Ahead of MLC Elections to Prevent Cross Voting

ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಜೆಡಿಎಸ್ ತನ್ನ ಶಾಸಕರ ಮೇಲೆ ವಿಶೇಷ ನಿಗಾ ವಹಿಸಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದು ಒಂದು ಭಾಗವಾದರೆ, ಅತಿ ಮುಖ್ಯವಾಗಿ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಉದ್ದೇಶವಾಗಿತ್ತು.

ಜೆಡಿಎಸ್‌ನ ಲೆಕ್ಕಾಚಾರದ ಪ್ರಕಾರ, ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು, ಎಲ್ಲಾ ಜೆಡಿಎಸ್ ಮತಗಳು ತಮ್ಮ ಅಭ್ಯರ್ಥಿಗೆ ಬೀಳುವಂತೆ ಮಾಡುವುದು ಮತ್ತು ಪಕ್ಷದ ಮತಗಳು ಚದುರಿ ಹೋಗದಂತೆ ತಡೆಯುವುದು ಈ ಸಭೆಯ ಹಿಂದಿನ ಮುಖ್ಯ ಕಾರಣ. ಒಟ್ಟು 18 ಶಾಸಕರನ್ನು ಒಟ್ಟುಗೂಡಿಸಿಕೊಂಡು ಮತದಾನಕ್ಕೆ ಸಜ್ಜುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರನ್ನು ಈ ಹಿಂದೆ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು ಮತ್ತು ನಂತರ ಬಸ್‌ನಲ್ಲಿ ವಿಧಾನಸೌಧಕ್ಕೆ ಕರೆತರಲಾಗಿತ್ತು. ಸಭೆಯಲ್ಲಿ ಮತ ಚಲಾವಣೆ ಮಾಡುವ ವಿಧಾನಗಳ ಬಗ್ಗೆಯೂ ಈಗಾಗಲೇ ಶಾಸಕರಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಬಯಲು; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ – Kannada News | PM Kisan scheme 23rd installment to be released in Tarakeshwar, West Bengal on June 20th

ನವದೆಹಲಿ, ಜೂನ್ 18: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 23ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕ ಬಹಿರಂಗಗೊಂಡಿದೆ. ಜೂನ್ 20, ಶನಿವಾರದಂದು 2,000 ರೂಗಳ ಕಂತು ಬಿಡುಗಡೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್​ನಿಂದ ಇದು ಟ್ವೀಟ್ ಆಗಿದೆ. ಮಾರ್ಚ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ವೇಳೆ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9.32 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 18,640 ಕೋಟಿ ರೂ ಹಣ ಜಮೆಯಾಗಿತ್ತು. ಈಗ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್​ನಲ್ಲಿ ಪ್ರಧಾನಿಗಳು 23ನೇ ಕಂತಿನ ಹಣ ಬಿಡುಗಡೆ ಘೋಷಿಸಲಿದ್ದಾರೆ.

ಸರ್ಕಾರ ಜಮೀನು ಹೊಂದಿರುವ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಈವರೆಗೆ 22 ಕಂತುಗಳಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಹಣ 4.25 ಲಕ್ಷ ಕೋಟಿ ರೂ ದಾಟಿದೆ. ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಹಾಕಲಾಗುತ್ತದೆ. ಹೀಗಾಗಿ, ಹಣ ಪೋಲಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಪಿಎಂ ಕಿಸಾನ್ ಸ್ಕೀಮ್​ನ ಎಕ್ಸ್ ಖಾತೆಯಿಂದ ಆದ ಟ್ವೀಟ್

ಇದನ್ನೂ ಓದಿ: ಎನ್​ಎಸ್​ಇ ಮೂಲಕ ಬರಲಿದೆ ಭಾರತದ ಅತಿದೊಡ್ಡ ಐಪಿಒ; ಹಣ ಹೂಡುವ ಮುನ್ನ ಈ ಪ್ರಮುಖ ಸಂಗತಿಗಳನ್ನು ತಿಳಿದಿರಿ

ಪಿಎಂ ಕಿಸಾನ್ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು

  • ಭಾರತೀಯ ಪ್ರಜೆಯಾಗಿರಬೇಕು
  • ಸ್ವಂತ ಕೃಷಿ ಭೂಮಿ ಇರಬೇಕು

ಯೋಜನೆಗೆ ಅನರ್ಹರಾಗಿರುವವರು

  • ಸಾಂಸ್ಥಿಕ ಭೂಒಡೆಯರು
  • ಆದಾಯ ತೆರಿಗೆ ಪಾವತಿದಾರರು
  • ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರು
  • ಸರ್ಕಾರಿ ನೌಕರರು ಮತ್ತು 10,000 ರೂಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರವವರು
  • ಹಾಲಿ ಮತ್ತು ಮಾಜಿ ಶಾಸಕರು, ಸಂಸದರು

ಯೋಜನೆಗೆ ಅರ್ಹರಾಗಿದ್ದೂ ಹಣ ಬರದಿರಲು ಕಾರಣಗಳಿವು…

ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾಯಿಸಿದ್ದರೂ ಕೆಲ ರೈತರಿಗೆ ಹಣ ಸಿಗುತ್ತಿಲ್ಲ. ಇದಕ್ಕೆ ವಿವಿಧ ಕಾರಣಗಳಿವೆ:

  • ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಹಣ ಸಿಗುವುದಿಲ್ಲ.
  • ಯೋಜನೆಗೆ ನೊಂದಾಯಿಸುವಾಗ ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್​ಗಳು ಹೊಂದಿಕೆಯಾಗದಿದ್ದರೆ ಹಣ ಬರುವುದಿಲ್ಲ.
  • ಬ್ಯಾಂಕ್ ಅಕೌಂಟ್ ನಂಬರ್ ಸರಿ ಇರಬೇಕು. ಐಎಫ್​ಎಸ್​ಸಿ ಕೋಡ್ ಸರಿಯಾಗಿ ನಮೂದಿಸಬೇಕು. ಇಲ್ಲದಿದ್ದರೆ ಹಣ ಬರೋದಿಲ್ಲ.
  • ಅಪ್ಪ ಅಥವಾ ಅಮ್ಮ ಬದುಕಿರುವಾಗಲೇ ಅವರಿಂದ ಜಮೀನು ವರ್ಗಾವಣೆ ಆಗಿದ್ದರೆ ಆಗಲೂ ಹಣ ಸಿಗೋದಿಲ್ಲ.
  • 2019ರ ನಂತರ ಕೃಷಿ ಜಮೀನು ಖರೀದಿಸಿರುವವರಿಗೂ ಸದ್ಯಕ್ಕೆ ಫಲಾನುಭವಿಯಾಗುವ ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಫಲಾನುಭವಿಗಳ ಪಟ್ಟಿ ವೀಕ್ಷಿಸಿ…

ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ್ದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇರುತ್ತದೆ. ಇದೆಯಾ ಇಲ್ಲವಾ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಬಹುದು:

  • ಪಿಎಂ ಕಿಸಾನ್ ಅಧಿಕೃತ ವೆಬ್​​ಸೈಟ್​ಗೆ ಹೋಗಿ: pmkisan.gov.in/
  • ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಿ
  • ಗೆಟ್ ರಿಪೋರ್ಟ್ ಟ್ಯಾಬ್ ಕ್ಲಿಕ್ ಮಾಡಿ.

ಇಲ್ಲಿ ನೀವು ಆಯ್ದುಕೊಂಡ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ – Kannada News | Florida Hero: ICE Officer Saves Drowning Child with CPR in Pool

ಸ್ವಿಮ್ಮಿಂಗ್ ಪೂಲ್ -ಸಾಂದರ್ಭಿಕ ಚಿತ್ರImage Credit source: Districts

ಫ್ಲೋರಿಡಾ, ಜೂನ್ 18: ಸ್ವಿಮ್ಮಿಂಗ್​ ಪೂಲ್​(Swimming Pool)ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ಕಸ್ಟಮ್ಸ್​ ಜಾರಿ ಅಧಿಕಾರಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಪಾಸ್ಕೊ ಕೌಂಟಿಯ ಈಜುಕೊಳದಲ್ಲಿ ಮುಳುಗಿದ್ದ ಬಾಲಕ ಪ್ರಜ್ಞಾಹೀನನಾಗಿ ತೇಲುತ್ತಿದ್ದ. ಅದೇ ಪೂಲ್ ಬಳಿ ಇದ್ದ ಐಸಿಇ ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಇದನ್ನು ಗಮನಿಸಿದ್ದಾರೆ, ಬಾಲಕ ಸಂಕಷ್ಟದಲ್ಲಿರುವುದನ್ನು ಕಂಡ ತಕ್ಷಣ ಅವರು ಸೆಕೆಂಡ್ ಕೂಡ ಯೋಚಿಸದೆ, ಧರಿಸಿದ್ದ ಬಟ್ಟೆ ಹಾಗೂ ಶೂಗಳೊಂದಿಗೇ ನೇರವಾಗಿ ನೀರಿಗೆ ಜಿಗಿದಿದ್ದಾರೆ.

ಬಾಲಕನನ್ನು ನೀರಿನಿಂದ ಹೊರತೆಗೆದ ಸಿಮಂಡ್ಸ್, ಅದಕ್ಕೆ ಪ್ರಜ್ಞೆ ಬರುವವರೆಗೂ ನಿರಂತರವಾಗಿ ಸಿಪಿಆರ್ (ಕೃತಕ ಉಸಿರಾಟ) ನೀಡಿದ್ದಾರೆ. ತಕ್ಷಣದ ಈ ಚಿಕಿತ್ಸೆಯಿಂದಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈಗ ಸಂಪೂರ್ಣ ಗುಣಮುಖವಾಗಿದ್ದಾನೆ.

ಈ ಧೈರ್ಯದ ಕೆಲಸಕ್ಕೆ ಫೆಡರಲ್ ಮತ್ತು ಸ್ಥಳೀಯ ಅಧಿಕಾರಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಧಿಕಾರಿ ಸಿಮಂಡ್ಸ್ ಅವರ ನಿಸ್ವಾರ್ಥತೆ ಮತ್ತು ಧೈರ್ಯದ ನಿರ್ಧಾರವೇ ಮಗುವಿನ ಜೀವ ಉಳಿಸಿದೆ.

ವಿಡಿಯೋ

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಲಸೆ ಬಂಧನ ನೀತಿಗಳಿಗಾಗಿ ಐಸಿಇ ಸಂಸ್ಥೆಯು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಗೃಹ ಭದ್ರತಾ ಇಲಾಖೆಯ ಹಂಗಾಮಿ ಸಹಾಯಕ ಕಾರ್ಯದರ್ಶಿ ಲಾರೆನ್ ಬಿಸ್ ಮಾತನಾಡಿ, ನಮ್ಮ ಅಧಿಕಾರಿಗಳು ಕೆಟ್ಟ ಅಪರಾಧಿಗಳನ್ನು ಹಿಡಿಯಲು ಪ್ರಾಣ ಪಣಕ್ಕಿಡುತ್ತಾರೆ.

ರಾಜಕಾರಣಿಗಳು ಇಂತಹ ಸಂಸ್ಥೆಯನ್ನು ಕೆಟ್ಟದಾಗಿ ನೋಡುವ ಬದಲು, ಇವರ ಸೇವೆಯನ್ನು ಗುರುತಿಸಿ ಧನ್ಯವಾದ ಹೇಳಬೇಕು ಎಂದಿದ್ದಾರೆ. ಅಮೆರಿಕದಲ್ಲಿ ಚಿಕ್ಕ ಮಕ್ಕಳ ಸಾವಿನ ಪ್ರಕರಣಗಳಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಪ್ರಾಣ ಬಿಟ್ಟಿರುವ ಪ್ರಕರಣಗಳೇ ಹೆಚ್ಚಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:47 pm, Thu, 18 June 26

Source link

Exit mobile version