ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ: ರಾಷ್ಟ್ರಪತಿ ಭವನದಲ್ಲಿ ಮೋದಿ-ತಕೈಚಿ ಅವರಿಂದ ಸಚಿವರು, ಗಣ್ಯರ ಪರಸ್ಪರ ಪರಿಚಯ – Kannada News | PM Modi and Japanese PM Sanae Takaichi Introduce Delegations at Rashtrapati Bhavan Ceremony

ನವದೆಹಲಿ, ಜುಲೈ 02: ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಹಾಗೂ ಅದ್ಧೂರಿ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ತಕೈಚಿ ಅವರು ತಮ್ಮ ತಮ್ಮ ದೇಶಗಳ ಕೇಂದ್ರ ಸಚಿವರು ಹಾಗೂ ರಾಜತಾಂತ್ರಿಕ ನಿಯೋಗದ ಪ್ರಮುಖ ಸದಸ್ಯರನ್ನು ಪರಸ್ಪರ ಅತ್ಯಂತ ಗೌರವದಿಂದ ಪರಿಚಯಿಸಿದರು.

ಇಬ್ಬರು ನಾಯಕರು 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಐತಿಹಾಸಿಕ ಭೇಟಿಯು ಉಭಯ ದೇಶಗಳ ನಡುವಿನ ವಿಶೇಷ ಜಾಗತಿಕ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋನು ಶ್ರೀನಿವಾಸ್ ಗೌಡಗೆ ಇನ್ನೂ ಕಾಡುತ್ತಿದೆ ಬಾಯ್​​ಫ್ರೆಂಡ್ ನೆನಪು?

ಸೋನು ಶ್ರೀನಿವಾಸ್ ಗೌಡ ಅವರು ಈಗ ನಟಿಯಾಗಿ ಬಡ್ತಿ ಪಡೆದಿದ್ದಾರೆ. ಅವರಿಗೆ ಓರ್ವ ಬಾಯ್​ಫ್ರೆಂಡ್ ಇದ್ದ. ಅಪಘಾತದಲ್ಲಿ ಆತ ಮೃತಪಟ್ಟ. ಈ ವೇಳೆ ಸೋನು ಸಾಕಷ್ಟು ನೊಂದಿದ್ದರು. ತಮ್ಮ ಮಾಜಿ ಬಾಯ್‌ಫ್ರೆಂಡ್‌ನ ನೆನಪಿನಿಂದ ಹೊರಬಂದಿದ್ದಾರೆಯೇ ಎಂಬ ಪ್ರಶ್ನೆಗೆ, ‘ಹೊರಗಿನಿಂದ ಹೌದು, ಆದರೆ ಒಳಗಿನಿಂದ ಇಲ್ಲ’ ಎಂದು ಸೋನು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಇನ್ನೊಬ್ಬರ ಬಗ್ಗೆ ಬರೆದಿದ್ದನ್ನು ನಂಬುತ್ತಾರೆ, ಆದರೆ ಹತ್ತಿರದವರ ಮಾತನ್ನು ಕೇಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾವು ಭಾವನಾತ್ಮಕ ವ್ಯಕ್ತಿ ಎಂದು ಒಪ್ಪಿಕೊಂಡಿರುವ ಸೋನು, ‘ನೇರವಾಗಿ ಭೇಟಿ ಮಾಡಿ ಮಾತನಾಡಿದರೆ, ನಾವು ಯಾರು ಎಂದು ತಿಳಿಯುತ್ತದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

EPF Scheme 2026: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ – Kannada News | EPF scheme 2026, mandatory PF deduction limit, withdrawal limit, eligibility and other rules

ನವದೆಹಲಿ, ಜುಲೈ 2: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದಶಕಗಳ ಹಳೆಯ 1952ರ ಇಪಿಎಫ್ ಕಾಯ್ದೆಯನ್ನು ಬದಲಾಯಿಸಿ, ಹೊಸ ‘ಇಪಿಎಫ್ ಯೋಜನೆ 2026’ (EPF Scheme 2026) ಅನ್ನು ಜಾರಿಗೆ ತಂದಿದೆ. ಸಾಮಾಜಿಕ ಭದ್ರತಾ ಸಂಹಿತೆ 2020ರ (Code on Social Security) ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ದೇಶದ ಸುಮಾರು 8 ಕೋಟಿ ಸಕ್ರಿಯ ಉದ್ಯೋಗಿಗಳಿಗೆ ಇದು ನೇರವಾಗಿ ಅನ್ವಯಿಸಲಿದೆ. ಮಹತ್ವದ ನಿಯಮ ಬದಲಾವಣೆಯಲ್ಲಿ ಕಡ್ಡಾಯ ಪಿಎಫ್ ಕಡಿತವೂ ಸೇರಿದೆ. ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಿಂದ ಪಿಎಫ್​ಗಾಗಿ ಹಣ ಕಡಿತಗೊಳಿಸುವ ಸಂಬಂಧದ ನಿಯಮ ಇದು.

ಕಡ್ಡಾಯ ಪಿಎಫ್ ಕಡಿತ ರೂ. 1,800ಕ್ಕೆ ಸೀಮಿತ

ಹೊಸ ನಿಯಮದ ಪ್ರಕಾರ, ಉದ್ಯೋಗಿ ಹಾಗೂ ಉದ್ಯೋಗದಾತರ (Employer) ಕಡ್ಡಾಯ ಪಿಎಫ್ ಕೊಡುಗೆಗೆ ಮಿತಿ ಹೇರಲಾಗಿದೆ. ಸರ್ಕಾರದ ನಿಯಮದಂತೆ ಮಾಸಿಕ ರೂ. 15,000 ಮೂಲ ವೇತನದ (Basic Wage Ceiling) ಮೇಲೆ ಶೇ. 12 ರಷ್ಟು ಅಂದರೆ ಗರಿಷ್ಠ ರೂ. 1,800 ಮಾತ್ರ ಕಡ್ಡಾಯವಾಗಿ ಪಿಎಫ್ ಕಡಿತಗೊಳಿಸಲಾಗುತ್ತದೆ.

ನಿಮ್ಮ ಮೂಲ ವೇತನ (Basic Salary) ತಿಂಗಳಿಗೆ ರೂ. 1 ಲಕ್ಷ ಇದ್ದರೂ ಸಹ, ರೂ. 1,800 ಮಾತ್ರ ಕಡಿತವಾಗುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸಲು ಬಯಸಿದರೆ ಅದನ್ನು ‘ಸ್ವಯಂಪ್ರೇರಿತ ಪಿಎಫ್ ಕೊಡುಗೆ’ (Voluntary Contribution) ಎಂದು ಪರಿಗಣಿಸಲಾಗುತ್ತದೆ. ಉದ್ಯೋಗಿಗಳು ಈ ಸೌಲಭ್ಯ ಆಯ್ಕೆ ಮಾಡಿಕೊಳ್ಳಬಹುದು.

ಉದ್ಯೋಗಿಗಳು ತಮಗೆ ಬೇಡವೆಂದಾಗ ಈ ಸ್ವಯಂಪ್ರೇರಿತ ಕೊಡುಗೆಯನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಸ್ವಾಯತ್ತತೆಯನ್ನು ಹೊಂದಿದ್ದಾರೆ. ಇದರಿಂದ ಉದ್ಯೋಗಿಗಳ ಕೈಗೆ ಸಿಗುವ ಸಂಬಳ (In-hand Salary) ಹೆಚ್ಚಾಗಲು ಮತ್ತು ಹಣಕಾಸಿನ ಯೋಜನೆಗಳನ್ನು ತಾವೇ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ.

ಶೇ. 25 ರಷ್ಟು ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ

ಇಪಿಎಫ್ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯುವಾಗ ಉದ್ಯೋಗಿಗಳು ತಮ್ಮ ಖಾತೆಯಲ್ಲಿ ಕನಿಷ್ಠ ಶೇ. 25 ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು.

ಇದನ್ನೂ ಓದಿ: mAadhaar ನಿರ್ಗಮನ, ಹೊಸ ಆಧಾರ್ ಆ್ಯಪ್ ಆಗಮನ; ನೂತನ ಆ್ಯಪ್​ನಲ್ಲಿನ ವಿಶೇಷತೆಗಳೇನು?

ಉದಾಹರಣೆಗೆ, ನಿಮ್ಮ ಪಿಎಫ್ ಖಾತೆಯಲ್ಲಿ ಒಟ್ಟು ರೂ. 1 ಲಕ್ಷ ಇದ್ದರೆ, ಅದರಲ್ಲಿ ರೂ. 25,000 ಖಾತೆಯಲ್ಲೇ ಉಳಿಯಬೇಕು. ಉಳಿದ ರೂ. 75,000 ಮೊತ್ತವನ್ನು ಮಾತ್ರ ‘ಅರ್ಹ ಬ್ಯಾಲೆನ್ಸ್’ ಎಂದು ಪರಿಗಣಿಸಿ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ. ಇದು ಉದ್ಯೋಗಿಗಳ ನಿವೃತ್ತಿ ಉಳಿತಾಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ.

ಹಣ ಹಿಂಪಡೆಯುವಿಕೆ ನಿಯಮಗಳ ಸರಳೀಕರಣ

ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇಪಿಎಫ್‌ಒ ಈ ಹಿಂದೆ ಇದ್ದ 13 ಅಡ್ವಾನ್ಸ್ (Advance) ವಿಭಾಗಗಳನ್ನು ಕೇವಲ 3 ಪ್ರಮುಖ ವಿಭಾಗಗಳಿಗೆ ಇಳಿಸಿದೆ:

  1. ಅತ್ಯಗತ್ಯ ಅಗತ್ಯಗಳು: ಅನಾರೋಗ್ಯ/ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆ.
  2. ವಸತಿ ಅಗತ್ಯಗಳು: ಮನೆ ಅಥವಾ ಸೈಟ್ ಖರೀದಿ, ಮನೆ ನಿರ್ಮಾಣ, ನವೀಕರಣ ಅಥವಾ ಗೃಹ ಸಾಲದ ಮರುಪಾವತಿ.
  3. ವಿಶೇಷ ಸಂದರ್ಭಗಳು: ಇಪಿಎಫ್ ನಿಯಮಾವಳಿಗಳ ಅಡಿಯಲ್ಲಿ ಅನುಮೋದನೆ ಪಡೆದ ವಿಶೇಷ ಪರಿಸ್ಥಿತಿಗಳು.

ಹಣ ಹಿಂಪಡೆಯುವಿಕೆಯ ಅರ್ಹತೆಗಳು ಮತ್ತು ಮಿತಿಗಳು

  • ವೈದ್ಯಕೀಯ ಚಿಕಿತ್ಸೆ: ಈ ಕಾರಣ ನೀಡಿ ಅರ್ಹ ಬ್ಯಾಲೆನ್ಸ್​ನ ಎಲ್ಲಾ ಹಣವ ವಿತ್​ಡ್ರಾ ಮಾಡಬಹುದು. ಪಿಎಫ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದ್ದಾಗ ಈ ಹಣ ಪಡೆಯಬಹುದು. ಆದರೆ, ಕನಿಷ್ಠ 12 ತಿಂಗಳ ಪಿಎಫ್ ಸದಸ್ಯತ್ವ ಇರಬೇಕು.
  • ಶಿಕ್ಷಣ: ಈ ಕಾರಣ ನೀಡಿ 10 ಬಾರಿ ಮುಂಗಡವಾಗಿ ಹಣ ವಿತ್​ಡ್ರಾ ಮಾಡಬಹುದು. ಎಲಿಜಿಬಲ್ ಬ್ಯಾಲನ್ಸ್​ನಲ್ಲಿ ನೂರಕ್ಕೆ ನೂರು ಹಣ ಪಡೆಯಬಹುದು. ಇಲ್ಲಿಯೂ 12 ತಿಂಗಳಗಿಂತ ಹೆಚ್ಚು ಪಿಎಫ್ ಸದಸ್ಯತ್ವ ಇರಬೇಕು.
  • ಮದುವೆ: ಅರ್ಹ ಬ್ಯಾಲನ್ಸ್​ನ ಎಲ್ಲಾ ಹಣ ಪಡೆಯಬಹುದು. ಒಟ್ಟು ಐದು ಬಾರಿ ಮಾತ್ರ ಈ ಕಾರಣದಿಂದ ಹಣ ಹಿಂಪಡೆಯಲು ಅವಕಾಶ ಇದೆ.
  • ಗೃಹ ನಿರ್ಮಾಣ: ಮನೆ ಕಟ್ಟಲು, ಖರೀದಿಸಲು, ನವೀಕರಿಸಲು ಅಥವಾ ಗೃಹ ಸಾಲ ಮರುಪಾವತಿಸಲು ಹಣ ಹಿಂಪಡೆಯಬಹುದು.
  • ವಿಶೇಷ ಸಂದರ್ಭ: ನಿರ್ದಿಷ್ಟಪಡಿಸದ ಯಾವುದಾದರೂ ವಿಶೇಷ ಅಥವಾ ತುರ್ತು ಸಂದರ್ಭ ಇದ್ದಾಗ ಪಿಎಫ್ ಹಣ ಹಿಂಪಡೆಯಬಹುದು. ಆದರೆ, ಇಪಿಎಫ್ ನಿಯಮಗಳ ಪ್ರಕಾರ ಅನುಮೋದನೆ ಸಿಗಬಹುದು.
  • ಉದ್ಯೋಗನಷ್ಟ: ಉದ್ಯೋಗ ನಷ್ಟವಾದಾಗ ಪಿಎಫ್ ಹಣ ಹಿಂಪಡೆಯಬಹುದು. ಪಿಎಫ್ ಸದಸ್ಯತ್ವ 12 ತಿಂಗಳು ದಾಟುವವರೆಗೂ ಕಾಯಬೇಕಿಲ್ಲ. ಆದರೆ, ಒಂದು ಹಣಕಾಸು ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಈ ಕಾರಣದಿಂದ ಹಣ ಹಿಂಪಡೆಯಲು ಆಗುವುದಿಲ್ಲ.

ಇದನ್ನೂ ಓದಿ: ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2

ಗುತ್ತಿಗೆ ನೌಕರರಿಗೂ ರಕ್ಷಣೆ: ಹೊಸ ಯೋಜನೆಯಡಿ ಗುತ್ತಿಗೆ ನೌಕರರ (Contract workers) ಪಿಎಫ್ ಕೊಡುಗೆಗಳನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯ ಉದ್ಯೋಗದಾತರ (Principal Employer) ಮೇಲೆಯೇ ಹೊರಿಸಲಾಗಿದೆ. ಗುತ್ತಿಗೆ ಸಂಸ್ಥೆಯು ಸ್ವತಂತ್ರವಾಗಿ ನೋಂದಾಯಿಸಿಕೊಳ್ಳದಿದ್ದರೆ, ಮುಖ್ಯ ಸಂಸ್ಥೆಯೇ ಪಿಎಫ್ ಪಾವತಿಗೆ ಹೊಣೆಯಾಗಿರುತ್ತದೆ.

ಒಟ್ಟಾರೆಯಾಗಿ, ಇಪಿಎಫ್ ಯೋಜನೆ 2026 ಉದ್ಯೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣಕಾಸಿನ ನಮ್ಯತೆಯನ್ನು ನೀಡುವ ಜೊತೆಗೆ, ಅವರ ದೀರ್ಘಕಾಲೀನ ನಿವೃತ್ತಿ ಭದ್ರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್: ಹೇಳಿದ್ದೇನು ನೋಡಿ! – Kannada News | BY Vijayendra Reacts to DV Sadananda Gowda Alleged Viral Audio Leak Case in Bengaluru

ಬೆಂಗಳೂರು, ಜುಲೈ 2: ರಾಜ್ಯ ರಾಜಕೀಯ ವಲಯದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರದ್ದು ಎನ್ನಲಾದ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ತಮ್ಮದಲ್ಲ ಎಂದು ಸದಾನಂದ ಗೌಡರೇ ಹೇಳಿದ್ದಾರೆ ಎಂದಿದ್ದಾರೆ. ವೈರಲ್ ಆಗಿರುವ ಆಡಿಯೋ ಸಂಭಾಷಣೆ ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನು ಕೂಡ ಅಧಿಕೃತವಾಗಿ ದೃಢಪಟ್ಟಿಲ್ಲ. ತಮ್ಮದಲ್ಲ ಎಂದು ಸದಾನಂದ ಗೌಡರೇ ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕರೊಬ್ಬರ ಹೆಸರನ್ನು ಒಳಗೊಂಡಿರುವ ಇಂತಹ ಸೂಕ್ಷ್ಮ ವಿಚಾರದಲ್ಲಿ ಯಾವುದೇ ತನಿಖೆ ಅಥವಾ ಖಚಿತ ಮಾಹಿತಿ ಇಲ್ಲದೆ ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲು ಕ್ವಾರಿ ದುರಂತ: ಬಂಡೆ ಬಿದ್ದ ರಭಸಕ್ಕೆ ಮೃತದೇಹ ಚೆಲ್ಲಾಪಿಲ್ಲಿ, ಟ್ರ್ಯಾಕ್ಟರ್​​ಗಳು ಪೀಸ್​​ ಪೀಸ್​ – Kannada News | Ramanagara Quarry Disaster: 7 Dead identified, Tractors Crushed; CM DK Shivakumar Assures Strict Action

ಕಾವೇರಿ ಕ್ರಷರ್‌ನಲ್ಲಿ ದುರಂತImage Credit source: Tv9 Kannada

ರಾಮನಗರ, ಜುಲೈ 02: ಮಾದಪಟ್ಟಣ ಗ್ರಾಮದ ಬಳಿಯ ಕಾವೇರಿ ಕ್ರಷರ್‌ನಲ್ಲಿ ನಡೆದ ದುರಂತದಲ್ಲಿ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗ್ಗಿನ ಜಾವ ಏಕಾಏಕಿ ಬಂಡೆ ಕುಸಿದ ಪರಿಣಾಮ ಅವಶೇಷಗಳಡಿ ಕಾರ್ಮಿಕರು ಸಿಲುಕಿದ ಪ್ರಮಾಣ ಸಾವು ನೋವುಗಳು ಹೆಚ್ಚಿವೆ. ಅವಘಡದಲ್ಲಿ ಮೃತಪಟ್ಟವರನ್ನು ರಾಮು (46), ರಾಜಪಾಲ್​​ ಸಿಂಗ್​ (35), ಸತ್ಯನಾರಾಯಣ ಸಿಂಗ್​ (31), ರಾಮ ವತಾರ್​ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್​ ಸಿಂಗ್​​ ಮತ್ತು ಭುವನೇಶ್ವರ ಸಿಂಗ್​ ಎಂದು ಗುರುತಿಸಲಾಗಿದೆ.

ಗಾಯಳುಗಳಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ

ದುರಂತದಲ್ಲಿ ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್​​ (30) ಅವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್.ಆಸ್ಪತ್ರೆಗೆ ದಾಖಲಸಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಓರ್ವ ಕೂಲಿ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಮೂರು ಟ್ಯಾಕ್ಟರ್​​ಳು ಸಂಪೂರ್ಣ ಜಖಂಗೊಂಡಿವೆ.

ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ; 7 ಮಂದಿ ಬಲಿ, ಐವರು ಕೂಲಿ ಕಾರ್ಮಿಕರಿಗೆ ಗಾಯ

16 ಕಾರ್ಮಿಕರ ಪೈಕಿ 7 ಮಂದಿ ಸಾವು

ಘಟನಾ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್, ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದವರು ಹೇಳಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಕಲ್ಲು ಕ್ವಾರಿ ದುರಂತಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. 7 ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಎಕ್ಸ್‌ ಮೂಲಕ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:40 pm, Thu, 2 July 26

Source link

ಹೇಮಾವತಿ ಲಿಂಕಿಂಗ್ ಕೆನಾಲ್ ಕದನ: ‘ನಾಲ್ಕು ಗೋಡೆಗಳ ಮಧ್ಯೆ ವಿರೋಧಿಸಿದ್ದೇನೆ’ ಎಂದ ಗುಬ್ಬಿ ಶಾಸಕ, ರಾಮಲಿಂಗಾರೆಡ್ಡಿ ಹೇಳಿದ್ದೇನು? – Kannada News | Karnataka Hemavathi Canal Dispute: Congress MLA Challenges Govt; Minister Responds

ತುಮಕೂರು ಜು 2: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ವಿವಾದಿತ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಕನಸಿನ ಯೋಜನೆ ಎನ್ನಲಾದ ಈ ಕಾಮಗಾರಿಗೆ ಪ್ರಭಾವಿ ನಾಯಕರೇ ಅಪಸ್ವರ ಎತ್ತಿದ್ದಾರೆ.

ಸರ್ಕಾರಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಹಿರಂಗ ಸವಾಲು

ಈ ಯೋಜನೆಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿರುವ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ), ಸರ್ಕಾರದ ವಿರುದ್ಧವೇ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. “ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ನಡೆಯಲು ಬಿಡುವುದಿಲ್ಲ” ಎಂದು ಅವರು ಆಕ್ರೋಶದಿಂದ ಹೇಳಿದ್ದಾರೆ.

“ನಾನು ಈ ಹಿಂದೆ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಇದೇ ಯೋಜನೆಗೆ ತಡೆಯೊಡ್ಡುವ ಉದ್ದೇಶಕ್ಕಾಗಿ. ನನ್ನ ಕ್ಷೇತ್ರದ ಹಿತ ಹಾಗೂ ರೈತರ ಹೋರಾಟವೇ ನನಗೆ ಮುಖ್ಯ. ಈಗಾಗಲೇ ಈ ವಿಚಾರವಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ, ನಾಲ್ಕು ಗೋಡೆಗಳ ಮಧ್ಯೆ ನನ್ನ ತೀವ್ರ ವಿರೋಧವನ್ನು ಮಾಡುತ್ತೇನೆ. ಹಾಗಾಗಿ ಕಾಮಗಾರಿ ಆರಂಭವಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಶ್ರೀನಿವಾಸ್ ಖಡಕ್ ಆಗಿ ಹೇಳಿದ್ದಾರೆ. ಕಾಮಗಾರಿ ಏನಾದರೂ ಮುಂದುವರಿದರೆ ಅವರು ಪಕ್ಷ ತೊರೆಯಲಿದ್ದಾರಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಶಾಸಕರ ಭಿನ್ನಮತ ಶಮನಗೊಳಿಸಲು ಸರ್ಕಾರ ನಡೆಸಿದ ಸಂಧಾನ ಸಫಲವಾಗಿಲ್ಲ ಎಂಬ ಸುಳಿವು ಇದರಿಂದ ಸಿಕ್ಕಿದೆ.

ಇದನ್ನೂ ಓದಿ: ಹಿರಿಯೂರು ಬೈಎಲೆಕ್ಷನ್ ಅಖಾಡ ರಂಗು: ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್; ದಿವಂಗತ ಸುಧಾಕರ್ ಪುತ್ರನಿಗೆ ಟಿಕೆಟ್​​​ಗೆ ಒತ್ತಡ

ಯೋಜನೆ ಜಾರಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪಟ್ಟು:

ಆದರೆ ಮತ್ತೊಂದೆಡೆ, ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಯೋಜನೆ ಜಾರಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಮಾಗಡಿ ಮತ್ತು ಕುಣಿಗಲ್ ಭಾಗದವರು ತಮಗೆ ನೀರು ತಲುಪುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಎಷ್ಟು ನೀರು ಬೇಕೋ ಅಷ್ಟನ್ನು ನಾಲೆಯಲ್ಲೇ ಪಡೆದುಕೊಳ್ಳಲಿ. ಈ ಬಗ್ಗೆ ಸಚಿವ ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸಿ, ಬಳಿಕ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲರೂ ಒಂದೇ ಜಿಲ್ಲೆಯವರಾಗಿದ್ದು (ತುಮಕೂರು/ರಾಮನಗರ ಭಾಗ), ಪರ-ವಿರೋಧದ ನಡುವೆಯೂ ಎಲ್ಲಾ ಪಕ್ಷದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕೆನಾಲ್ ಲಿಂಕಿಂಗ್ ಯೋಜನೆಯು ಕಾಂಗ್ರೆಸ್ ಪಕ್ಷದ ಒ ನಾಯಕರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುವತಿ ಮೇಲೆ ಮೊಸಳೆ ಭೀಕರ ದಾಳಿ, ಪ್ರೇಯಸಿಯನ್ನು ಬಚಾವ್ ಮಾಡಲು ಹೋರಾಡಿದ ಪ್ರಿಯಕರ, ಆದ್ರೂ ಉಳೀಲಿಲ್ಲ ಜೀವ – Kannada News | Florida Alligator Attack: Woman Dies After Boyfriend’s Heroic Rescue Attempt

ಒರ್ಲ್ಯಾಂಡೊ, ಜುಲೈ 02: ಅಮೆರಿಕದ ಫ್ಲೋರಿಡಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಈಜಲು ಹೋದ 31 ವರ್ಷದ ಯುವತಿಯೊಬ್ಬರು ಬೃಹತ್ ಮೊಸಳೆಯ (ಅಲಿಗೇಟರ್) ಭೀಕರ ದಾಳಿಗೆ ಬಲಿಯಾಗಿದ್ದಾರೆ. ಪ್ರೇಯಸಿಯನ್ನು ಮೊಸಳೆಯ ಬಾಯಿಂದ ಬಿಡಿಸಲು ಆಕೆಯ ಪ್ರಿಯಕರ ಪ್ರಾಣದ ಹಂಗು ತೊರೆದು ಹೋರಾಡಿದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

ಬ್ರಿಟಾನಿ ಕ್ಲಾರ್ಕ್ ಎಂಬ ಯುವತಿ ಜೂನ್ 28 ರ ಭಾನುವಾರ ತನ್ನ ಗೆಳೆಯ ಚಾನ್ಸ್ ಆಲಿಸನ್ ಮತ್ತು ಮತ್ತೊಬ್ಬ ಆತ್ಮೀಯ ಸ್ನೇಹಿತನೊಂದಿಗೆ ಒರ್ಲ್ಯಾಂಡೊ ನಗರದ ಸಮೀಪವಿರುವ ‘ಲಿಟಲ್ ಬಿಗ್ ಎಕಾನ್ ಸ್ಟೇಟ್ ಫಾರೆಸ್ಟ್’ ಕಾಡಿಗೆ ಪಾದಯಾತ್ರೆ ಹೋಗಿದ್ದರು. ಅಲ್ಲಿನ ಎಕಾನ್ಲಾಕ್‌ಹ್ಯಾಚೀ ನದಿಯ ಕೇವಲ ಮೂರು ಅಡಿ ಆಳದ ನೀರಿನಲ್ಲಿ ಇವರು ಈಜುತ್ತಿದ್ದಾಗ, ದೈತ್ಯ ಮೊಸಳೆಯೊಂದು ಇದ್ದಕ್ಕಿದ್ದಂತೆ ಬ್ರಿಟಾನಿ ಮೇಲೆ ದಾಳಿ ಮಾಡಿದೆ.

ಮೊಸಳೆಯು ಯುವತಿಯ ಒಂದು ತೋಳನ್ನು ಕಚ್ಚಿ ಹಿಡಿದು, ನೀರೊಳಗೆ ಬೇಟೆಯನ್ನು ಮಲಗಿಸುವ ತನ್ನ ಪ್ರಸಿದ್ಧ ‘ಡೆತ್ ರೋಲ್’ (ಸುತ್ತು ಹೊಡೆಯುವ ತಂತ್ರ) ಆರಂಭಿಸಿದೆ. ಈ ವೇಳೆ ಬ್ರಿಟಾನಿ ಮತ್ತು ಆಕೆಯನ್ನು ರಕ್ಷಿಸಲು ಹೋದ ಗೆಳೆಯ ಆಲಿಸನ್ ಇಬ್ಬರೂ ನೀರೊಳಗೆ ಎಳೆಯಲ್ಪಟ್ಟಿದ್ದಾರೆ.

ಗೆಳೆಯ ಆಲಿಸನ್ ಧೈರ್ಯ ಮಾಡಿ ಮೊಸಳೆಯ ಬಾಯಿಂದ ಬ್ರಿಟಾನಿಯ ಒಂದು ಕೈಯನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಆದರೆ, ಕ್ರೂರ ಮೊಸಳೆ ತಕ್ಷಣವೇ ಆಕೆಯ ಇನ್ನೊಂದು ತೋಳನ್ನು ಕಚ್ಚಿ ಹಿಡಿಯಿತು. ಘಟನೆಯ ನಂತರ ರಕ್ಷಣಾ ಪಡೆಗೆ (911) ಮಾಡಿದ ಫೋನ್ ಕರೆಯಲ್ಲಿ ಅಲ್ಲಿನ ಭೀಕರತೆ ಸೆರೆಯಾಗಿದೆ.

ಮತ್ತಷ್ಟು ಓದಿ: Video: ಕೊಳದಿಂದ ಮೊಸಳೆಯನ್ನು ಎತ್ತಿ ಬಿಸಾಕಿದ ಆನೆ; ವಿಡಿಯೋ ನೋಡಿ

ಕೊನೆಗೂ ಮೊಸಳೆ ಹಿಡಿತ ಸಡಿಲಗೊಳಿಸಿದಾಗ ಆಲಿಸನ್ ಬ್ರಿಟಾನಿಳನ್ನು ನದಿಯ ದಡಕ್ಕೆ ಎಳೆದುಕೊಂಡು ಬಂದು ಉಸಿರಾಟ (CPR) ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲೇ ಆಕೆಯ ಎರಡೂ ತೋಳುಗಳು ಭೀಕರವಾಗಿ ಹಾನಿಗೊಳಗಾಗಿದ್ದವು.

ಘಟನೆಯ ನಂತರ ಫ್ಲೋರಿಡಾ ವನ್ಯಜೀವಿ ಸಂರಕ್ಷಣಾ ಆಯೋಗ (FWC) ತಕ್ಷಣವೇ ಕಾರ್ಯಪ್ರವೃತ್ತರಾಗಿ ಆ ನದಿಯ ವಲಯದಿಂದ 12 ಅಡಿ ಮತ್ತು 13 ಅಡಿ ಉದ್ದದ ಎರಡು ಬೃಹತ್ ಮೊಸಳೆಗಳನ್ನು ಸೆರೆಹಿಡಿದಿದೆ. ಯುವತಿಯ ಮೇಲೆ ದಾಳಿ ಮಾಡಿದ್ದು ಇದೇ ಪ್ರಾಣಿಯೇ ಎಂದು ಪತ್ತೆಹಚ್ಚಲು ಅವುಗಳ ಡಿಎನ್‌ಎ (DNA) ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಯಾಗಲಿ ಅಥವಾ ಆಕೆಯ ಸ್ನೇಹಿತರಾಗಲಿ ಮೊಸಳೆಯನ್ನು ಕೆರಳಿಸಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ ತಿಂಗಳಿನಿಂದ ಮೊಸಳೆಗಳ ಸಂತಾನೋತ್ಪತ್ತಿಯ ಅವಧಿ ಆರಂಭವಾಗುವುದರಿಂದ, ಈ ದಿನಗಳಲ್ಲಿ ಅವು ಅತ್ಯಂತ ಕ್ರಿಯಾಶೀಲ ಹಾಗೂ ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದೇ ಸಮಯದಲ್ಲಿ ನದಿಯಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಿದ್ದಿದ್ದರಿಂದ ಮತ್ತು ಪ್ರಾಣಿಗಳ ಪ್ರಾದೇಶಿಕ ನಡವಳಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಫ್ಲೋರಿಡಾದ ಸರೋವರ ಮತ್ತು ನದಿಗಳ ಸುತ್ತ ಇಂತಹ ಹಲವು ಘಟನೆಗಳು ವರದಿಯಾಗುತ್ತಿದ್ದು, ಸಿಹಿನೀರಿನ ಜಲಮೂಲಗಳ ಬಳಿ ಜನರು ತೀವ್ರ ಜಾಗರೂಕರಾಗಿರಬೇಕು ಎಂದು ವನ್ಯಜೀವಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯಡಿಯೂರಪ್ಪ, ವಿಜಯೇಂದ್ರರ ಕಡೆಗಣಿಸಿದರೆ ಪಕ್ಷಕ್ಕೆ ಭಾರಿ ನಷ್ಟ: ಬಿಜೆಪಿಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ – Kannada News | Rambhapuri Swamiji Warns BJP: Ignoring BSY and BY Vijayendra Will Lead to Huge Political Loss in Karnataka

ರಂಭಾಪುರಿ ಶ್ರೀ, ವಿಜಯೇಂದ್ರ, ಯಡಿಯೂರಪ್ಪImage Credit source: tv9

ದಾವಣಗೆರೆ, ಜುಲೈ 2: ರಾಜ್ಯ ಬಿಜೆಪಿಯಲ್ಲಿ (BJP) ಆಂತರಿಕ ಬೇಗುದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರೋಧಿಗಳಿಗೆ ರಂಭಾಪುರಿ ಜಗದ್ಗುರುಗಳು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತೇರಿಸಿದ ಮುತ್ಸದ್ದಿ ಬಿಎಸ್ ಯಡಿಯೂರಪ್ಪ. ಅಂತಹ ನಾಯಕರನ್ನು ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಕಡೆಗಣಿಸಿ, ವೀರಶೈವ ಲಿಂಗಾಯತ ಸಮುದಾಯವನ್ನು ಅಲಕ್ಷ್ಯ ಮಾಡಿದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ ಎಂದು ಪರೋಕ್ಷವಾಗಿ ದೆಹಲಿ ನಾಯಕರಿಗೂ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗಲೂ ಕಾಲು ಎಳೆಯುವವರಿದ್ದರು!

ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಪರಿಪೂರ್ಣವಾಗಿ ಅಧಿಕಾರ ನಡೆಸಲು ಪಕ್ಷದ ಒಳಗಿನವರೇ ಬಿಡಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಕಾಲು ಎಳೆಯುವ ಜನರಿದ್ದರು, ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೂ ಅಂತಹದ್ದೇ ಪಿತೂರಿಗಳು ಪಕ್ಷದೊಳಗೆ ಮುಂದುವರಿದಿವೆ ಎಂದು ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದಾಗ ಚುನಾವಣೆಯಲ್ಲಿ ಯಾವ ರೀತಿ ದುಷ್ಪರಿಣಾಮ ಎದುರಿಸಬೇಕಾಯಿತೋ, ಈಗಲೂ ಅದೇ ತಪ್ಪು ಮರುಕಳಿಸಿದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ.

ಕೇಂದ್ರ ನಾಯಕರು ಬೇಗುದಿ ತಣ್ಣಗಾಗಿಸಲಿ: ರಂಭಾಪುರಿ ಶ್ರೀ

ಬಿಜೆಪಿಯಲ್ಲಿ ಎರಡು-ಮೂರು ಗುಂಪುಗಳಾಗದೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಇದರ ನೇರ ಲಾಭವನ್ನು ವಿರೋಧ ಪಕ್ಷಗಳು ಪಡೆಯಲಿವೆ ಎಂದು ಎಚ್ಚರಿಸಿದರು. ಕೇಂದ್ರ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಿ ಈ ಬೇಗುದಿಯನ್ನು ತಣ್ಣಗಾಗಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಮ ಮಂದಿರ ದೇಣಿಗೆ ದುರ್ಬಳಕೆ: ಕಠಿಣ ಶಿಕ್ಷೆಗೆ ಒತ್ತಾಯ

ಇದೇ ವೇಳೆ ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರ್ಬಳಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ರಂಭಾಪುರಿ ಶ್ರೀಗಳು, ‘ಜಗತ್ತಿನಾದ್ಯಂತ ಇರುವ ಎಲ್ಲಾ ವರ್ಗದ ಭಕ್ತರು ಭಕ್ತಿ-ಭಾವದಿಂದ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. ಆದರೆ ಅಲ್ಲಿನ ಕೆಲವು ವ್ಯಕ್ತಿಗಳು ಅಡ್ಡದಾರಿಯಲ್ಲಿ ಹೋಗಿ ಪವಿತ್ರವಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವುದು ವಿಷಾದನೀಯ. ಇಂತಹ ಪವಿತ್ರ ಸ್ಥಳದಲ್ಲಿ ಭ್ರಷ್ಟಾಚಾರದ ಕೃತ್ಯಗಳು ನಡೆಯಬಾರದು. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಲೂಟಿ ಮಾಡಲಾದ ಹಣವನ್ನು ಅವರಿಂದಲೇ ವಸೂಲಿ ಮಾಡಿ ಮರಳಿ ಮಂದಿರದ ನಿಧಿಗೆ ಜಮಾ ಮಾಡುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPLಗೆ ಗುಡ್ ಬೈ ಹೇಳಿದ ಹ್ಯಾರಿ ಬ್ರೂಕ್..!

Source link

ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡು ಸಿನಿಮಾಗಳು ರಿಲೀಸ್; ಅಭಿಮಾನಿಗಳಿಗೆ ಡಬಲ್ ಹಬ್ಬ – Kannada News | Ganesh Double Dhamaka Pinaka and Krishna Vihari to release in October

ಸ್ಯಾಂಡಲ್‌ವುಡ್‌ನ ಜನಪ್ರೀಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಂದು (ಜುಲೈ 2) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಚಿತ್ರತಂಡಗಳು ಭರ್ಜರಿ ಉಡುಗೊರೆ ನೀಡಿವೆ. 2026ರ ಅಕ್ಟೋಬರ್ ತಿಂಗಳೊಂದರಲ್ಲೇ ಗಣೇಶ್ ನಟನೆಯ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಅವರ ಜನ್ಮದಿನಕ್ಕೆ ಈ ಘೋಷಣೆ ಆಗಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

14 ದಿನಗಳ ಅಂತರದಲ್ಲಿ ಎರಡು ಚಿತ್ರಗಳು

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ, ಗಣೇಶ್ ಅವರ ವಿಭಿನ್ನ ಲುಕ್‌ನ ‘ಪಿನಾಕ’ ಸಿನಿಮಾ ಅಕ್ಟೋಬರ್ 2ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಬಗ್ಗೆ ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಇದಾಗಿದ್ದು, ಕೊರಿಯೋಗ್ರಫರ್ ಆಗಿದ್ದ ಧನಂಜಯ್ ನಿರ್ದೇಶನ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ ವಿಶ್ವಪ್ರಸಾದ್ ಹಾಗೂ ಟಿ.ಜಿ ಕೃತಿ ಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

ಶ್ರೀನಿವಾಸ್ ರಾಜು ನಿರ್ದೇಶನದ ಹಾಗೂ ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಗಣೇಶ್ ಅವರ ‘ಬೃಂದವಿಹಾರಿ’ ಬಹುನಿರೀಕ್ಷಿತ ಸಿನಿಮಾ ಅಕ್ಟೋಬರ್ 16ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಕರ್ನಾಟಕದಾದ್ಯಂತ ಬಿಡುಗಡೆ ಮಾಡುತ್ತಿದೆ. ಕೇವಲ ಎರಡು ವಾರಗಳ ಅಂತರದಲ್ಲಿ ನೆಚ್ಚಿನ ನಟನ ಎರಡು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವುದು ಸದ್ಯದ ಮಟ್ಟಿಗೆ ಅಭಿಮಾನಿಗಳಿಗೆ ಅತೀವ ಖುಷಿ ತಂದಿದ್ದು, ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ.

‘ಕನಿಷ್ಠ ಒಂದು ತಿಂಗಳ ಗ್ಯಾಪ್ ಇರಬೇಕಿತ್ತು’ ಎಂದ ಸಿನಿಪ್ರೇಮಿಗಳು

ಒಂದೇ ತಿಂಗಳಲ್ಲಿ ಗಣೇಶ್ ಅವರ ಎರಡು ಸಿನಿಮಾಗಳು ಬರುತ್ತಿರುವುದು ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದ್ದರೂ, ಚಿತ್ರರಂಗದ ಕೆಲವು ವಿಶ್ಲೇಷಕರು ಮತ್ತು ಸಾಮಾನ್ಯ ಸಿನಿಪ್ರೇಮಿಗಳು ಬೇರೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎರಡು ದೊಡ್ಡ ಸಿನಿಮಾಗಳ ನಡುವೆ ಕನಿಷ್ಠ ಒಂದು ತಿಂಗಳ ಗ್ಯಾಪ್ ಕೊಟ್ಟಿದ್ದರೆ ಎರಡೂ ಚಿತ್ರಗಳ ಬಿಸಿನೆಸ್, ಪ್ರಚಾರ ಹಾಗೂ ಕಲೆಕ್ಷನ್‌ಗೆ ಒಳ್ಳೆಯದಾಗುತ್ತಿತ್ತು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಒಂದೇ ನಟನ ಸಿನಿಮಾಗಳು ಇಷ್ಟು ಬೇಗ ಮುಖಾಮುಖಿಯಾದರೆ ಥಿಯೇಟರ್‌ಗಳ ಹಂಚಿಕೆಯಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಪ್ರೇಕ್ಷಕರು ಹಂಚಿಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಅಕ್ಟೋಬರ್ ಹಬ್ಬದ ಸೀಸನ್‌ನಲ್ಲಿ ಗೋಲ್ಡನ್ ಸ್ಟಾರ್ ಬ್ಯಾಕ್-ಟು-ಬ್ಯಾಕ್ ಧಮಾಕಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version