ಆಟ ಆಡೋ ವಯಸ್ಸಲ್ಲಿ ಇಡೀ ಸಂಸಾರದ ಜವಾಬ್ದಾರಿ!: ತಂಗಿ-ತಮ್ಮಂದಿರಿಗಾಗಿ ಬಾಲ್ಯವನ್ನೇ ತ್ಯಾಗ ಮಾಡಿದ 9ನೇ ತರಗತಿ ಬಾಲಕಿ

ಕೆಲವರಿಗೆ ಬಾಲ್ಯ ಸವಿಯುವ ಮುನ್ನವೇ ಅನಿವಾರ್ಯವಾಗಿ ದೊಡ್ಡವರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಮಾತಿಗೆ ಇಲ್ಲೊಂದು ಜೀವಂತ ಸಾಕ್ಷಿಯಿದೆ. ಓದುವ, ಗೆಳೆಯರೊಂದಿಗೆ ಆಟ ಆಡುವ ವಯಸ್ಸಿನಲ್ಲಿಯೇ ವಿಧಿಯ ಕ್ರೂರ ಆಟಕ್ಕೆ ಸಿಲುಕಿ, ತನ್ನ ಮೂವರು ಪುಟ್ಟ ಒಡಹುಟ್ಟಿದವರ (Siblings) ತಾಯಿಯಾಗಿ ಇಡೀ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ 9ನೇ ತರಗತಿಯ ವಿದ್ಯಾರ್ಥಿನಿ ಅಸ್ಮಿತಾ ತಮಾಂಗ್. ತನ್ನ ವಯಸ್ಸನ್ನು ಮೀರಿದ ಜವಾಬ್ದಾರಿಯನ್ನು ಆಕೆ ಹೊತ್ತುಕೊಂಡಿದ್ದಾಳೆ. ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಅಸ್ಮಿತಾಗೆ ಈಗ ಮನೆಯೇ ಒಂದು ದೊಡ್ಡ ಪಾಠಶಾಲೆ. ಹೆತ್ತವರು ಇಲ್ಲದ ಕಾರಣ ಆಕೆಯ ಹೆಗಲಿಗೆ ಇಡೀ ಮನೆಯ ಜವಾಬ್ದಾರಿ ಬಿದ್ದಿದೆ. ಬೆಳಿಗ್ಗೆ ಎದ್ದ ತಕ್ಷಣ ತನ್ನ ಮೂವರು ಪುಟ್ಟ-ಪುಟ್ಟ ತಂಗಿ-ತಮ್ಮಂದಿರಿಗೆ ಅಡುಗೆ ಮಾಡುವುದು, ಅವರನ್ನು ಶಾಲೆಗೆ ಸಿದ್ಧಪಡಿಸುವುದು, ಮನೆಯ ಕೆಲಸಗಳನ್ನು ಮುಗಿಸುವುದು ಅಸ್ಮಿತಾಳ ದಿನಚರಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಆಕೆ ತನ್ನ ಓದನ್ನು ಮಾತ್ರ ಎಲ್ಲೂ ಕೈಬಿಟ್ಟಿಲ್ಲ. ಒಂದು ಕೈಯಲ್ಲಿ ತನ್ನ ಪುಟ್ಟ ತಂಗಿಯನ್ನು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಆಕೆ ಸಾಗುತ್ತಿರುವ ಹಾದಿ ನಿಜಕ್ಕೂ ಶ್ಲಾಘನೀಯ.ಮಕ್ಕಳು ಅಳುತ್ತಾ ಹಠ ಹಿಡಿದರೆ ಕೋಪಗೊಳ್ಳುವ ಪೋಷಕರಿರುವ ಇಂದಿನ ಜಗತ್ತಿನಲ್ಲಿ, ಅಸ್ಮಿತಾ ತನಗಾಗಿ ಏನನ್ನೂ ಕೇಳುತ್ತಿಲ್ಲ. ತನಗೆ ಸಿಗದ ಬಾಲ್ಯ ತನ್ನ ಒಡಹುಟ್ಟಿದವರಿಗಾದರೂ ಸಿಗಲಿ ಎಂಬುದು ಆಕೆಯ ಆಶಯ. ಹಸಿವು, ಬಡತನ ಮತ್ತು ಜವಾಬ್ದಾರಿಯ ನಡುವೆ ಆಕೆಯ ಮುಗ್ಧ ಬಾಲ್ಯ ಎಲ್ಲೋ ಕಳೆದುಹೋಗಿದೆ. ಆಕೆಯ ಕಣ್ಣುಗಳಲ್ಲಿ ಭವಿಷ್ಯದ ಕನಸುಗಳಿಗಿಂತ ಹೆಚ್ಚಾಗಿ, “ನಾಳೆ ನನ್ನ ತಂಗಿ-ತಮ್ಮಂದಿರಿಗೆ ಏನು ಮಾಡಬೇಕು?” ಎಂಬ ಆತಂಕವೇ ಎದ್ದು ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕಿಯ ಹೋರಾಟದ ಕಥೆ ಭಾರಿ ವೈರಲ್ ಆಗುತ್ತಿದ್ದು, “ಈ ಪುಟ್ಟ ಹುಡುಗಿಯ ಧೈರ್ಯದ ಮುಂದೆ ನಮ್ಮ ಕಷ್ಟಗಳೆಲ್ಲಾ ತೃಣ ಸಮಾನ. ಈಕೆಗೆ ಸರ್ಕಾರ ಹಾಗೂ ದಾನಿಗಳು ನೆರವಾಗಬೇಕು” ಎಂದು ನೆಟ್ಟಿಗರು ಭಾವುಕರಾಗಿ ಒತ್ತಾಯಿಸುತ್ತಿದ್ದಾರೆ. ಇನ್ನು ಈ ವಿಡಿಯೋ ನೇಪಾಳದಿಂದ ವೈರಲ್​ ಆಗಿದೆ ಎಂದು ಹೇಳಲಾಗುತ್ತಿದೆ. ಎಕ್ಸ್​​​ನಲ್ಲಿ ಈ ಬಗ್ಗೆ ಭಾರೀ ವೈರಲ್​​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು? ಇದು ಬರದಂತೆ ತಡೆಯಲು ಏನು ಮಾಡಬೇಕು?

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದಲ್ಲಿ ಕಲ್ಲು (Gall Bladder Stone) ಕಂಡುಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫಾಸ್ಟ್ ಫುಡ್ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ. ತಜ್ಞರ ಪ್ರಕಾರ, ಪಿತ್ತಕೋಶದಲ್ಲಿ ಪಿತ್ತರಸ (Bile) ಒಳಗೆ ಕೊಲೆಸ್ಟ್ರಾಲ್ ಅಥವಾ ಬಿಲಿರೂಬಿನ್ ಅತಿಯಾಗಿ ಜಮೆಯಾಗುವಾಗ ಕಲ್ಲು ರೂಪಗೊಳ್ಳುತ್ತದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ಸಮಸ್ಯೆ ಉಂಟಾದರೆ ಹೊಟ್ಟೆಯ ಮಧ್ಯಭಾಗ ಮತ್ತು ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಗಾಲ್ ಸ್ಟೋನ್‌ಗಳ ವಿಧಗಳು:

ವೈದ್ಯರ ಪ್ರಕಾರ ಗಾಲ್ ಸ್ಟೋನ್‌ಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಕೊಲೆಸ್ಟ್ರಾಲ್ ಸ್ಟೋನ್ ಮತ್ತು ಪಿಗ್ಮೆಂಟ್ ಸ್ಟೋನ್. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅಥವಾ ಪಿತ್ತಕೋಶದ ಒಳಪದರದಲ್ಲಿ ದೋಷ ಉಂಟಾದಾಗ ಕೊಲೆಸ್ಟ್ರಾಲ್ ಸ್ಟೋನ್ ರೂಪಗೊಳ್ಳುತ್ತದೆ. ಕೆಲವರಲ್ಲಿ ಇದು ವಂಶಪಾರಂಪರ್ಯ ಕಾರಣಗಳಿಂದಲೂ ಕಾಣಿಸಬಹುದು. ಪಿಗ್ಮೆಂಟ್ ಸ್ಟೋನ್‌ಗಳು ಸಾಮಾನ್ಯವಾಗಿ ರಕ್ತಕಣಗಳ ಒಡೆತ (Hemolysis) ಹೆಚ್ಚಾದಾಗ ಉಂಟಾಗುತ್ತವೆ. ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಈ ರೀತಿಯ ಕಪ್ಪು ಬಣ್ಣದ ಸಣ್ಣ ಕಲ್ಲುಗಳು ಕಂಡುಬರುತ್ತವೆ.

ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಅನಿಯಮಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆ, ತ್ವರಿತವಾಗಿ ತೂಕ ಇಳಿಸುವ ಕ್ರ್ಯಾಶ್ ಡಯಟ್ ಮತ್ತು ದೇಹದಲ್ಲಿ ನೀರಿನ ಕೊರತೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಜಿಮ್‌ಗೆ ಹೋಗುವವರು, ಹೆಚ್ಚು ಹೊರಗಡೆ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!

ತಪ್ಪದೇ ಗಮನಿಸಬೇಕಾದ ಲಕ್ಷಣಗಳು:

  • ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು
  • ವಾಂತಿ ಅಥವಾ ಅಜೀರ್ಣ
  • ಊಟದ ನಂತರ ಹೊಟ್ಟೆ ಉಬ್ಬರ
  • ಜ್ವರ ಅಥವಾ ಅಸ್ವಸ್ಥತೆ

ಪಿತ್ತಕೋಶದ ಕಲ್ಲು ತಡೆಯಲು ಏನು ಮಾಡಬೇಕು?

ತಜ್ಞರ ಪ್ರಕಾರ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಎಣ್ಣೆಯಲ್ಲಿ ಕರಿದ ಆಹಾರ, ಪಿಜ್ಜಾ, ಬರ್ಗರ್, ಸಮೋಸಾ ಮೊದಲಾದ ಫಾಸ್ಟ್ ಫುಡ್ ಕಡಿಮೆ ಮಾಡಬೇಕು. ಓಟ್ಸ್, ಹಣ್ಣುಗಳು, ಹಸಿ ತರಕಾರಿ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಫೈಬರ್ ಅಂಶವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಜೊತೆಗೆ ಉಪಹಾರವನ್ನು ಬಿಟ್ಟುಬಿಡದೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ವಿಡಿಯೋ ನೋಡಿದ್ರೆ ಇಂದಿಗೂ ಮೈ ರೋಮಾಂಚನವಾಗುತ್ತೆ!: ಮತ್ತೆ ವೈರಲ್​​ ಆಯಿತು ಅಂದು ಸಿದ್ದರಾಮಯ್ಯ ಗುಡುಗಿದ ದೃಶ್ಯ!

ಬೆಂಗಳೂರು, ಮೇ.28: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅವರ ಅತ್ಯಂತ ರೋಚಕ ರಾಜಕೀಯ ಹೋರಾಟದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ದಾವಣಗೆರೆಯಂತೆ ಮತ್ತೆ ಭಾರಿ ವೈರಲ್ ಆಗುತ್ತಿದೆ. ಅಂದು ಬಳ್ಳಾರಿಯ ಗಣಿ ಧಣಿಗಳು ಹಾಗೂ ರೆಡ್ಡಿ ಸಹೋದರರ (Reddy Brothers) ಸಾಮ್ರಾಜ್ಯದ ವಿರುದ್ಧ ಸಿದ್ದರಾಮಯ್ಯ ಅವರು ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಿಂಹದಂತೆ ಗುಡುಗಿದ್ದ ಆ ಐತಿಹಾಸಿಕ ದೃಶ್ಯಗಳು ಇಂದಿಗೂ ಕೋಟ್ಯಂತರ ಕನ್ನಡಿಗರ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತಿವೆ. ಅದು 2010ರ ಸಮಯ, ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ವಿರುದ್ಧ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸಿಡಿದೆದ್ದಿದ್ದರು. “ಧೈರ್ಯವಿದ್ದರೆ ಬಳ್ಳಾರಿಗೆ ಕಾಲಿಟ್ಟು ತೋರಿಸಿ” ಎಂದು ರೆಡ್ಡಿ ಬ್ರದರ್ಸ್ ಹಾಕಿದ್ದ ಸವಾಲನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ, ಸದನದಲ್ಲಿ ಮೇಜು ಕುಟ್ಟಿ ಗರ್ಜಿಸಿದ್ದರು. ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರ ಆವೇಶ, ಕಣ್ಣುಗಳಲ್ಲಿನ ಧೀರತೆ ಮತ್ತು ಗಡಸು ಧ್ವನಿಯ ಹೆದರಿಕೆಯಿಲ್ಲದ ಮಾತುಗಳು ಇಂದಿನ ಯುವ ಪೀಳಿಗೆಗೂ ನೆಚ್ಚಿನ ‘ಮಾಸ್ ಡೈಲಾಗ್’ನಂತೆ ಕಾಣಿಸುತ್ತಿವೆ.

ಅಷ್ಟಕ್ಕೇ ನಿಲ್ಲದ ಸಿದ್ದರಾಮಯ್ಯ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಬರೋಬ್ಬರಿ 320 ಕಿಲೋಮೀಟರ್‌ಗಳ ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯು ಅಂದಿನ ಬಿಜೆಪಿ ಸರ್ಕಾರದ ಪತನಕ್ಕೆ ಭದ್ರ ಬುನಾದಿ ಹಾಕಿದ್ದಲ್ಲದೆ, 2013 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಅತ್ಯಂತ ಪ್ರಮುಖ ಕಾರಣವಾಗಿತ್ತು. ಸದ್ಯ ಸಿದ್ದರಾಮಯ್ಯ ಅವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಸಿಎಂ ಸ್ಥಾನಕ್ಕೆ ವಿದಾಯ ಹೇಳಿರುವ ಈ ಭಾವುಕ ಸಂದರ್ಭದಲ್ಲಿ, ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಆ ಹಳೇ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. “ಕುರ್ಚಿ ಇರಲಿ, ಬಿಡಲಿ.. ಸಿದ್ದರಾಮಯ್ಯ ಅವರ ಈ ಗತ್ತನ್ನು ಮತ್ತು ಧೈರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಇವರೊಬ್ಬರೇ ನಿಜವಾದ ಮಾಸ್ ಲೀಡರ್” ಎಂದು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ಭಾವುಕರಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್

Source link

ಯಕ್ಷಗಾನ ಕಲಾವಿದನ ತಾಯಿಗೆ ನಿಂದನೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು!

ಬೆಂಗಳೂರು, ಮೇ.28: ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸುದೀರ್ಘ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ತಿಮರೋಡಿ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ಅಧ್ಯಕ್ಷತೆಯ ರಜಾ ಕಾಲದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ದೂರುದಾರರು ಹಾಗೂ ಆರೋಪಿ ಪರ ವಕೀಲರ ಸುದೀರ್ಘ ಮತ್ತು ಕೂಲಂಕಷ ವಾದಗಳನ್ನು ಆಲಿಸಿದ ನ್ಯಾಯಪೀಠವು ಕೊನೆಗೂ ಔಪಚಾರಿಕವಾಗಿ ಪರಿಹಾರವನ್ನು ಮಂಜೂರು ಮಾಡಿದೆ.

ಮಾನ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡುವ ವೇಳೆ ಕೆಲವು ಕಠಿಣ ಕಾನೂನು ಷರತ್ತುಗಳನ್ನು ವಿಧಿಸಿದೆ. ಅದರಂತೆ, ಆರೋಪಿತ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರತಿ ವಾರಕ್ಕೊಮ್ಮೆ ಕಡ್ಡಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಅಲ್ಲಿನ ಪೊಲೀಸ್ ರಿಜಿಸ್ಟರ್‌ನಲ್ಲಿ ಸಹಿ ಹಾಕಬೇಕು ಎಂದು ಪೀಠವು ಕಟ್ಟುನಿಟ್ಟಾಗಿ ಸೂಚಿಸಿದೆ.

ಇದನ್ನೂ ಓದಿ:ಕೊನೆಯುಸಿರಿರುವವರೆಗೂ ನೀನೇ ನನ್ನವಳು!: ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ

ಇದಲ್ಲದೆ, ಈ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ನಡೆಸುತ್ತಿರುವ ಕಾನೂನು ತನಿಖೆಗೆ ಆರೋಪಿಯು ಸಂಪೂರ್ಣವಾಗಿ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶಪಡಿಸುವ ಅಥವಾ ದೂರುದಾರರಿಗೆ ಬೆದರಿಕೆ ಹಾಕುವ ಪ್ರಯತ್ನ ಮಾಡಬಾರದು ಎಂದು ಹೈಕೋರ್ಟ್ ಬಿಗಿಯಾದ ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹೈಪ್ರೊಫೈಲ್ ನಿಂದನೆ ಪ್ರಕರಣಕ್ಕೆ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ: ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು?

ಇಂದಿನ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಮತ್ತು ಹಾರ್ಮೋನ್ ಬದಲಾವಣೆಗಳ ಕಾರಣದಿಂದ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ (Low Calcium) ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಯಾಲ್ಸಿಯಂ ದೇಹಕ್ಕೆ ಅತ್ಯವಶ್ಯಕ ಖನಿಜವಾಗಿದ್ದು, ಎಲುಬುಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಬಲವಾಗಿ ಇಡಲು ಪ್ರಮುಖ ಪಾತ್ರವಹಿಸುತ್ತದೆ. ದೇಹದಲ್ಲಿ ಇದರ ಕೊರತೆ ಉಂಟಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ವಿಶೇಷವಾಗಿ ಗರ್ಭಧಾರಣೆ, ಮಗುವಿಗೆ ತಾಯಿ ಹಾಲುಣಿಸುವ ಅವಧಿ ಮತ್ತು ಮೆನೋಪಾಸ್ ಸಮಯದಲ್ಲಿ ಮಹಿಳೆಯರ ದೇಹಕ್ಕೆ ಹೆಚ್ಚುವರಿ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಸರಿಯಾದ ಪೋಷಕಾಂಶಗಳು ಸಿಗದಿದ್ದರೆ ಎಲುಬುಗಳ ದುರ್ಬಲತೆ, ದೇಹದ ಅಲ್ಲಲ್ಲಿ ನೋವು ಮತ್ತು ಆಯಾಸದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಕ್ಯಾಲ್ಸಿಯಂ ಕೊರತೆಯಿಂದ ಕಂಡುಬರಬಹುದಾದ ಸಮಸ್ಯೆಗಳು

ಕ್ಯಾಲ್ಸಿಯಂ ಕೊರತೆಯಿಂದ ಎಲುಬುಗಳು ನಿಧಾನವಾಗಿ ದುರ್ಬಲವಾಗುತ್ತವೆ. ಇದರ ಪರಿಣಾಮವಾಗಿ ಸಂಧಿ ನೋವು, ಸ್ನಾಯುಗಳಲ್ಲಿ ದುರ್ಬಲತೆ, ದೇಹದಲ್ಲಿ ಭಾರವಾಗಿರುವ ಅನುಭವ ಮತ್ತು ಬೇಗ ಆಯಾಸವಾಗುವ ಸಮಸ್ಯೆಗಳು ಕಾಣಿಸಬಹುದು. ಕೆಲವು ಮಹಿಳೆಯರಲ್ಲಿ ಸ್ನಾಯು ಎಳೆತ, ಕಾಲುಗಳಲ್ಲಿ ನೋವು ಮತ್ತು ಕೈಕಾಲುಗಳಲ್ಲಿ ಕಂಪನ ಕೂಡ ಕಾಣಿಸಬಹುದು. ಈ ಕೊರತೆ ದೀರ್ಘಕಾಲ ಮುಂದುವರಿದರೆ ‘ಆಸ್ಟಿಯೋಪೊರೋಸಿಸ್’ ಅಪಾಯ ಹೆಚ್ಚಾಗುತ್ತದೆ. ಈ ಸ್ಥಿತಿಯಲ್ಲಿ ಎಲುಬುಗಳು ತುಂಬಾ ಬಲಹೀನವಾಗಿ ಸಣ್ಣ ಗಾಯವಾದರೂ ಮುರಿಯುವ ಸಾಧ್ಯತೆ ಇರುತ್ತದೆ. ಜೊತೆಗೆ ಹಲ್ಲು ದುರ್ಬಲವಾಗುವುದು, ನೇಗಿಲುಗಳು ಬೇಗ ಮುರಿಯುವುದು ಮತ್ತು ದೇಹದಲ್ಲಿ ಶಕ್ತಿಯ ಕೊರತೆ ಕಾಣಿಸಬಹುದು.

ಇದನ್ನೂ ಓದಿ: ಉಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆಯೇ?

ಯಾವ ಲಕ್ಷಣಗಳು ಕಂಡರೆ ಪರೀಕ್ಷೆ ಅಗತ್ಯ?

ನಿರಂತರ ಆಯಾಸ, ಸಂಧಿ ಅಥವಾ ಎಲುಬು ನೋವು, ಸ್ನಾಯುಗಳಲ್ಲಿ ಎಳೆತ, ದೇಹ ದುರ್ಬಲತೆ ಅಥವಾ ಸಣ್ಣ ಗಾಯಕ್ಕೂ ಹೆಚ್ಚು ನೋವು ಕಂಡುಬಂದರೆ ವೈದ್ಯರ ಸಲಹೆ ಪಡೆದು ಕ್ಯಾಲ್ಸಿಯಂ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಹಾಲು, ಮೊಸರು, ಪನ್ನೀರ್, ಮಜ್ಜಿಗೆ ಮೊದಲಾದ ಹಾಲಿನಿಂದ ಮಾಡಿದ ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿವೆ. ಜೊತೆಗೆ ಹಸಿರು ಸೊಪ್ಪು, ಎಳ್ಳು, ಬಾದಾಮಿ ಮತ್ತು ಸೋಯಾ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉಪಯುಕ್ತ. ವಿಟಮಿನ್ ಡಿ ಕೂಡ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ಇರುವುದು ಆರೋಗ್ಯಕ್ಕೆ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲ್ಕತ್ತಾದಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು; ‘ದಾದಾ’ ಆಟಕ್ಕೆ ಮೈದಾನ ಸಜ್ಜು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ (Biopic) ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ’ (Dada: The Sourav Ganguly Story) ಹೆಸರಿನ ಈ ಬಹುನಿರೀಕ್ಷಿತ ಚಿತ್ರದಲ್ಲಿ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್​ಕುಮಾರ್ ರಾವ್ (Rajkummar Rao)ಅವರು ಸದ್ಯ ಕೋಲ್ಕತ್ತಾದಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ‘ಮಿಡ್ ಡೇ’ ವರದಿಯ ಪ್ರಕಾರ, ಈ ಸಿನಿಮಾದ ಮುಂಬೈ ಶೆಡ್ಯೂಲ್ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಕೋಲ್ಕತ್ತಾದಲ್ಲಿ 15 ದಿನಗಳ ಕಾಲ ಬೀಡುಬಿಟ್ಟಿದ್ದು, ನಗರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದೆ. ಗಂಗೂಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಈ ಭಾಗದಲ್ಲಿ ಸೆರೆಹಿಡಿಯಲಾಗುತ್ತಿದೆ.

ರಾಜ್​ಕುಮಾರ್ ರಾವ್ ಈ ವಾರದ ಆರಂಭದಲ್ಲೇ ಕೋಲ್ಕತ್ತಾ ತಲುಪಿದ್ದು, ಬುಧವಾರದಂದು (ಮೇ 27) ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಮುಂಜಾನೆ ವರ್ಕೌಟ್ ಮುಗಿಸಿದ ಅವರು, ತದನಂತರ ಬಯೋಪಿಕ್‌ನ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದರು. ಗಂಗೂಲಿ ಅವರ ಹುಟ್ಟೂರಾದ ಬೆಹಾಲಾದ ಸಣ್ಣ ಗಲ್ಲಿಗಳಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವವರೆಗಿನ ರೋಚಕ ಜರ್ನಿಯನ್ನು ಈ ಸಿನಿಮಾ ಒಳಗೊಳ್ಳಲಿದೆ.

ಇತ್ತೀಚೆಗೆ ಸೌರವ್ ಗಂಗೂಲಿ ಅವರ ಬೆಹಾಲಾದ ಸ್ವಗೃಹದಲ್ಲೇ ಶೂಟಿಂಗ್‌ಗೆ ಚಾಲನೆ ನೀಡಲಾಗಿತ್ತು. ಆ ಬಳಿಕ ಕೋಲ್ಕತ್ತಾದ ಐತಿಹಾಸಿಕ ‘ಈಸ್ಟ್ ಬೆಂಗಾಲ್ ಕ್ಲಬ್’ ಮೈದಾನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಗಂಗೂಲಿ ಅವರು ಆರಂಭಿಕ ದಿನಗಳಲ್ಲಿ ‘ಆರ್ಯನ್ ಕ್ಲಬ್’ ಪರ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಕೋಲ್ಕತ್ತಾದ ಪ್ರತಿಷ್ಠಿತ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲೂ ಭರ್ಜರಿ ಶೂಟಿಂಗ್ ನಡೆಸಲಾಗಿದೆ.

‘ದಾದಾ’ ಬಯೋಪಿಕ್​ಗೆ ಖ್ಯಾತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್‌ನ ಹಿಟ್ ಮ್ಯೂಸಿಕ್ ಡೈರೆಕ್ಟರ್ ಪ್ರೀತಮ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ನಟಿ ತಾನ್ಯಾ ಮಾಣಿಕ್ತಲ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಬದುಕಿನ ಜೊತೆಗೆ ಡೋನಾ ಅವರೊಂದಿಗಿನ ಪ್ರೇಮ ಜೀವನದ ಕಥೆಯೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸ್ತಾರಾ? ಈ ಸುದ್ದಿ ಹಬ್ಬಲು ಕಾರಣ ಇಲ್ಲಿದೆ..

ಚಿತ್ರದಲ್ಲಿ ಬಂಗಾಳಿ ನೇಟಿವಿಟಿಯನ್ನು ಕಾಪಾಡಿಕೊಳ್ಳಲು ಬಂಗಾಳಿ ಚಿತ್ರರಂಗದ ಪ್ರಮುಖ ನಟರನ್ನು ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರವ್ ಗಂಗೂಲಿ ಅವರ ತಾಯಿ ನಿರುಪಾ ಗಂಗೂಲಿ ಪಾತ್ರದಲ್ಲಿ ಅಪರಾಜಿತಾ ಆಧ್ಯಾ ಹಾಗೂ ತಂದೆ ಚಂಡಿ ಗಂಗೂಲಿ ಪಾತ್ರದಲ್ಲಿ ಹಿರಿಯ ನಟ ಶಾಶ್ವತ ಚಟರ್ಜಿ ನಟಿಸುತ್ತಿದ್ದಾರೆ. ಮಾಜಿ ಬಿಸಿಸಿಐ ಅಧ್ಯಕ್ಷರೂ ಆಗಿರುವ ಗಂಗೂಲಿ ಅವರ ಬಯೋಪಿಕ್ ಸದ್ಯ ಕ್ರಿಕೆಟ್ ಮತ್ತು ಸಿನಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: 1 ರನ್​​ ಬಾರಿಸಲು ರಿಷಭ್ ಪಂತ್ ಪಡೆದ ಸಂಬಳ ಬರೋಬ್ಬರಿ 9 ಲಕ್ಷ ರೂ..!

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More

Source link

ದೆಹಲಿ ಬದಲು ಜೈಪುರದಲ್ಲಿ ಇಳಿದ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ, ಆಗಿದ್ದೇನು?

ಬೆಂಗಳೂರು, (ಮೇ 28): ದೆಹಲಿಗೆ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ (Siddaramaiah) ಇದ್ದ ವಿಮಾನ ಜೈಪುರದಲ್ಲಿ ತುರ್ತು ಲ್ಯಾಂಡ್ ಆಗಿರುವ ಘಟನೆ ನಡೆದಿದೆ. ಇಂದು (ಮೇ 28) ಮಧ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಗೋಷ್ಠಿ ಬಳಿಕ ಸಂಜೆ ಬೆಂಗಳೂರಿನ ಎಚ್​​​​​​ಎಎಲ್ ಏರ್​​ಪೋರ್ಟ್​​​​ನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳುತ್ತಿದ್ದರು. ಆದ್ರೆ, ಮಾರ್ಗಮಧ್ಯೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಶೇಷ ವಿಮಾನ, ದೆಹಲಿ ಬದಲು ಜೈಪುರದಲ್ಲಿ ಲ್ಯಾಂಡ್ ಆಗಿದೆ. ಇದರಿಂದ ಕೆಲವೊತ್ತು ಆತಂಕಕ್ಕೆ ಕಾರಣವಾಯ್ತು.

ಮುಖ್ಯಾಂಶಗಳು

  • ರಾಜೀನಾಮೆ ಬಳಿಕ ದೆಹಲಿಗೆ ತೆರಳುತ್ತಿದ್ದ ಸಿದ್ದರಾಮಯ್ಯನನ್ನು ಜೈಪುರದಲ್ಲಿ ಇಳಿಸಿದ ವಿಮಾನ
  • ದೆಹಲಿ ಬದಲು ಜೈಪುರದಲ್ಲಿ ಇಳಿದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ
  • ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜೈಪುರದಲ್ಲಿ ವಿಮಾನ ಲ್ಯಾಂಡಿಂಗ್
  •  ಬೆಂಗಳೂರಿನ HAL ಏರ್​ಪೋರ್ಟ್​ನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ,
ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಶಾಸಕ ಎ.ಎಸ್.ಪೊನ್ನಣ್ಣ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಯತೀಂದ್ರ ವಿಮಾನದಲ್ಲಿದ್ದರು. ಸದ್ಯ ಯಾವುದೇ ಅವಘಡ ಸಂಭವಿಸಿಲ್ಲ. ವಿಮಾನದಲ್ಲಿದ್ದವರು ಎಲ್ಲರೂ ಸುರಕ್ಷಿತವಾಗಿದ್ದಾರೆ.

ರಾಜೀನಾಮೆ ಬಳಿಕ ದಿಲ್ಲಿ ವಿಮಾನ ಹತ್ತಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ್ಕಕೆ ರಾಜೀನಾಮೆ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಇಂದು (ಮೇ 28) ಸಂಜೆ ತಮ್ಮ ಆಪ್ತರ ಜೊತೆ ಬೆಂಗಳೂರಿನ ಎಚ್​​​ಎಎಲ್ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಹೊರಟರು. ಆದ್ರೆ, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಪೈಲೆಟ್, ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೆಹಲಿ ಬರುವಂತೆ ರಾಹುಲ್ ಗಾಂಧಿ ಅವರು ಸೂಚಿಸಿದ್ದರು. ಅದರಂತೆ ಸಿದ್ದರಾಮಯ್ಯ ದೆಹಲಿಯತ್ತ ಹೊರಟ್ಟಿದ್ದು, ಹೈಕಮಾಂಡ್ ನಾಯಕರ ಜೊತೆ ಮುಂದಿನ ಆಡಳಿತದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂದರೆ ಯಾರ್ಯಾರು ಸಚಿವರಾಗಬೇಕು? ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು? ಕೆಪಿಸಿಸಿ ಜವಾಬ್ದಾರಿ ಯಾರಿಗೆ ನೀಡಬೇಕು? ಹೀಗೆ ಹಲವು ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರ ಜತೆ ಚರ್ಚಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಬೆನ್ನಲ್ಲೇ ದೆಹಲಿಗೆ ಹೊರಟ ಡಿಸಿಎಂ ಡಿ.ಕೆ. ಶಿವಕುಮಾರ್​​: ಕಾರಣ ಇಲ್ಲಿದೆ

ಬೆಂಗಳೂರು, ಮೇ 28: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ರಾಷ್ಟ್ರ ರಾಜಧಾನಿಯತ್ತ ತೆರಳಿದ್ದಾರೆ. ರಾಜ್ಯ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ನೂತನ ಮುಖ್ಯಮಂತ್ರಿ ನೇಮಕ, ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನಾರಚನೆ ಮತ್ತು ಇತರ ಆಂತರಿಕ ರಾಜಕೀಯ ಚರ್ಚೆಗಳ ಕುರಿತು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ಅವರು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version