Ratha Saptami: ರಥಸಪ್ತಮಿ ಹಬ್ಬದಂದು ಈ ಮಂತ್ರವನ್ನು ತಪ್ಪದೇ ಪಠಿಸಿ; ಪ್ರಯೋಜನ ಸಾಕಷ್ಟಿವೆ – Kannada News | Ratha Saptami: Importance of Surya Puja, Mantras, and Charity for Prosperity

ಹಿಂದೂ ಧರ್ಮದಲ್ಲಿ ರಥಸಪ್ತಮಿಯ ಹಬ್ಬವನ್ನು ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಈ ಪುಣ್ಯ ದಿನದಂದು ನವಗ್ರಹ ಹೋಮ, ಸೂರ್ಯ ಶಾಂತಿ, ಸೂರ್ಯ ಹೋಮ ಅಥವಾ ಸರಳವಾದ ಅಗ್ನಿಹೋತ್ರವನ್ನು ಮಾಡಿಕೊಳ್ಳುವುದು ಆರೋಗ್ಯದಲ್ಲಿ ಚೇತರಿಕೆ ಮತ್ತು ಆಯುಷ್ಯ ವೃದ್ಧಿಗೆ ಸಹಕಾರಿ ಎಂದು ನಂಬಲಾಗಿದೆ.

ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಬೆಳಗಿನ ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಿಸುವುದು ಮತ್ತು ಮಂತ್ರಗಳನ್ನು ಜಪಿಸುವುದು ಶುಭ ಫಲಗಳನ್ನು ತರುತ್ತದೆ. “ಓಂ ಸೂರ್ಯನಾರಾಯಣಾಯ ನಮಃ”, “ಓಂ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೆ ಆಯುರಾರೋಗ್ಯ ಐಶ್ವರ್ಯಂ ದೇಹಿ ದೇವ ಜಗತ್ಪತಯೇ”, “ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ” ಅಥವಾ “ಓಂ ಗೃಣಿ ಸೂರ್ಯಾಯ” ಮುಂತಾದ ಮಂತ್ರಗಳನ್ನು ಜಪಿಸುವುದರ ಜೊತೆಗೆ ದ್ವಾದಶ ನಾಮಗಳನ್ನು ಪಠಿಸುವುದು ಶ್ರೇಷ್ಠ. ಆದಿತ್ಯ ಹೃದಯಂ ಸ್ತೋತ್ರ ಪಠನೆಯೂ ಕೂಡ ಈ ದಿನದ ಪ್ರಮುಖ ಆಚರಣೆಯಾಗಿದೆ.

ದಾನ ಮತ್ತು ಐತಿಹಾಸಿಕ ಮಹತ್ವ:

ರಥಸಪ್ತಮಿಯಂದು ಬಡವರಿಗೆ ಮತ್ತು ಅಶಕ್ತರಿಗೆ ಸಹಾಯ ಮಾಡುವುದು, ವಿಶೇಷವಾಗಿ ಔಷಧಿಗಳನ್ನು ದಾನ ಮಾಡುವುದರಿಂದ ಮಹಾ ಯೋಗಗಳು ಪ್ರಾಪ್ತವಾಗುತ್ತವೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಭಗವಾನರು ಧರ್ಮರಾಜನಿಗೆ ರಥಸಪ್ತಮಿಯ ಮಹತ್ವದ ಬಗ್ಗೆ ವಿವರಿಸಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಲ್ಲದೆ, ಪಾಂಡವರು ವನವಾಸದಲ್ಲಿದ್ದಾಗಲೂ ರಥಸಪ್ತಮಿಯನ್ನು ಆಚರಿಸಿದ್ದರು.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಸೂರ್ಯ ಭಗವಾನರು ಏಳು ಕುದುರೆಗಳ ರಥವನ್ನು ಏರಿ ಬರುವಂತೆ, ಈ ದಿನ ಸೂರ್ಯ ನಮಸ್ಕಾರ, ಸೂರ್ಯ ಪ್ರಾರ್ಥನೆ ಮತ್ತು ಸೂರ್ಯ ಜಪಕ್ಕೆ ವಿಶೇಷ ಮಹತ್ವವಿದೆ. “ಸಪ್ತಸಪ್ತ ಮಹಾಸಪ್ತ ಸಪ್ತದ್ವೀಪ ವಸುಂಧರಾ ಸಪ್ತಾರ್ಕ ಪರ್ಣ ಮಾದಾಯ ಸಪ್ತಮಿ ರಥ ಸಪ್ತಮಿ” ಎಂಬ ಶ್ಲೋಕವನ್ನು ಪಠಿಸುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ರಥಸಪ್ತಮಿಯ ಆಚರಣೆಯ ಮೂಲಕ ಸೂರ್ಯ ಭಗವಾನರ ಅನುಗ್ರಹದಿಂದ ಸರ್ವರಿಗೂ ಆಯುರಾರೋಗ್ಯ, ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​​​ಗೆ ಕೈ ಕೊಟ್ಟರೆ ಪಾಕಿಸ್ತಾನ್ ತಂಡ ಬ್ಯಾನ್..! – Kannada News | ICC could ban Pakistan if they withdrew from T20 World Cup 2026

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿಯುವ ಸಾಧ್ಯತೆಯಿದೆ. ಈ ಸಾಧ್ಯತೆಗಳ ಸುದ್ದಿಯ ಬೆನ್ನಲ್ಲೇ ಐಸಿಸಿ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟ ಬೆನ್ನಲ್ಲೇ ಪಾಕ್ ತಂಡ ಮುಂದಿನ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪಾಕ್ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ನಿರ್ಧಾರ ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟದ್ದು. ಹೀಗಾಗಿ ಪಾಕಿಸ್ತಾನ್ ಸರ್ಕಾರ ಏನು ಹೇಳುತ್ತದೆಯೋ ಅದರ ಮೇಲೆ ಪಾಕ್ ತಂಡದ ವಿಶ್ವಕಪ್ ಭವಿಷ್ಯ ನಿಂತಿದೆ ಮೊಹ್ಸಿನ್ ನಖ್ವಿ ಹೇಳಿದ್ದರು.

ಈ ಮೂಲಕ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಬೆಂಬಲ ಸೂಚಿಸಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಪರೋಕ್ಷವಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದ್ದಾರೆ.

ಇತ್ತ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಟೂರ್ನಿಯು ಆರ್ಥಿಕ ನಷ್ಟ ಅನುಭವಿಸಲಿದೆ ಎಂಬ ಲೆಕ್ಕಾಚಾರವನ್ನು ಪಿಸಿಬಿ ಹಾಕಿಕೊಂಡಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದಿದ್ದರೆ ವಿಶ್ವಕಪ್ ಟೂರ್ನಿಯು ಬಹುತೇಕ ವಿಫಲವಾದಂತೆ. ಹೀಗಾಗಿಯೇ ಬಿಸಿಸಿಐ ಹಾಗೂ ಐಸಿಸಿಗೆ ಬಿಗ್ ಶಾಕ್ ನೀಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆರೆ ಮರೆಯ ಪ್ರಯತ್ನಕ್ಕೆ ಕೈ ಹಾಕಿದೆ.

ಐಸಿಸಿ ಎಚ್ಚರಿಕೆ:

ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ಗೆ ಕೈ ಕೊಡುವ ಸೂಚನೆ ನೀಡಿದ ಬೆನ್ನಲ್ಲೇ ಐಸಿಸಿ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದು ಕೂಡ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವ ಸೂಚನೆಯೊಂದಿಗೆ ಎಂಬುದು ವಿಶೇಷ.

ಅಂದರೆ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಕೈ ಬಿಡುವುದಾಗಿ ಐಸಿಸಿ ಎಚ್ಚರಿಸಿದೆ.

ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿ ಆಡಲು ಕೂಡ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.

ಇದರ ಜೊತೆಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್​ಒಸಿ ನೀಡುವುದಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದೆ.

ಇಷ್ಟೇ ಅಲ್ಲದೆ ಏಷ್ಯಾಕಪ್ ಟೂರ್ನಿಯಿಂದಲೂ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ರವಾನಿಸಲಾಗಿದೆ. ಅಂದರೆ ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮಾನ್ಯತೆ ರದ್ದಾಗಲಿದೆ.

ಇದನ್ನೂ ಓದಿ: ಸೋತ RCB ತಂಡದ ಫೈನಲ್​ ಲೆಕ್ಕಾಚಾರ ಹೀಗಿದೆ

ಇತ್ತ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಕೌಂಟರ್ ಅಟ್ಯಾಕ್ ನೀಡಿದ್ದು, ಈ ಮೂಲಕ ಪಿಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮಾನ್ಯತೆಯ ರದ್ದತಿಯ ಸೂಚನೆ ನೀಡಿರುವ ಕಾರಣ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿಯುವುದು ಅನುಮಾನ ಎಂದೇ ಹೇಳಬಹುದು.

Source link

Ratha Saptami: ಇಂದು ರಥಸಪ್ತಮಿ; ಹಬ್ಬದ ಆಚರಣೆ ಮತ್ತು ಮಹತ್ವವನ್ನು ತಿಳಿಯಿರಿ – Kannada News | Ratha Saptami: Surya’s Birthday, Rituals and Immense Significance

ಹಿಂದೂ ಧರ್ಮದಲ್ಲಿ ರಥಸಪ್ತಮಿಯು ಅತ್ಯಂತ ಮಹತ್ವದ ಹಾಗೂ ಮಂಗಳಕರವಾದ ಪರ್ವ ಕಾಲಗಳಲ್ಲಿ ಒಂದಾಗಿದೆ. ಇದನ್ನು ಜಗದ ಚಕ್ಷು ಮತ್ತು ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಉದಾಹರಣೆಗೆ, 2026ರ ಜನವರಿ 25ರ ಭಾನುವಾರದಂದು ಬೆಳಗ್ಗೆ 12:39 ರಿಂದ ರಾತ್ರಿ 11:10ರ ತನಕ ಸಪ್ತಮಿ ತಿಥಿ ಇರುತ್ತದೆ.

ರಥಸಪ್ತಮಿಯ ಆಚರಣೆ ಮತ್ತು ಮಹತ್ವ:

ರಥಸಪ್ತಮಿಯಂದು ಅನುಸರಿಸಬೇಕಾದ ಪ್ರಮುಖ ಆಚರಣೆಗಳಿಂದ ಹಲವಾರು ಪ್ರಯೋಜನಗಳಿವೆ. ಈ ದಿನ ಬೆಳಗಿನ ಜಾವ ಏಳು ಎಕ್ಕದ ಎಲೆಗಳನ್ನು (ಎಕ್ಕೆ ಗಿಡದ ಎಲೆಗಳು) ತಲೆ, ಭುಜಗಳು, ಮೊಣಕಾಲುಗಳು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯ ಭಗವಾನರನ್ನು ಸ್ಮರಿಸುತ್ತಾ ಪೂರ್ವಾಭಿಮುಖವಾಗಿ ಸ್ನಾನ ಮಾಡಬೇಕು. ಈ ಕ್ರಿಯೆಯು ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞೆ ವೃದ್ಧಿಗೆ ಸಹಕಾರಿ. ಅಲ್ಲದೆ, ಇದು ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡಿ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಎಕ್ಕದ ಎಲೆಗಳು ಸೂರ್ಯ ಭಗವಾನರಿಗೆ ಅತ್ಯಂತ ಪ್ರಿಯವಾದುದರಿಂದ, ಈ ಸ್ನಾನವು ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧಗೊಳಿಸುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ನದಿಸ್ನಾನ ಮತ್ತು ಪವಿತ್ರ ಸ್ಥಳಗಳು:

ರಥಸಪ್ತಮಿ ದಿನದಂದು ಭೂಮಿ ಮತ್ತು ಜೀವರಾಶಿಗಳಿಗೆ ಚೈತನ್ಯ ನೀಡುವ ಸೂರ್ಯನ ಶಕ್ತಿಯು ಸಪ್ತ ನದಿಗಳಲ್ಲಿ ವಿಶೇಷವಾಗಿ ಪ್ರವಹಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನದಿಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಶ್ರೀರಂಗಪಟ್ಟಣ, ಹೇಮಗಿರಿ, ಶಿಕಾರಿಪುರ, ಇಡಗುಂಜಿ, ಕೊಪ್ಪಳ ಮುಂತಾದ ನದಿಗಳಿರುವ ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡುವುದು ಉತ್ತಮ. ಈ ಸ್ಥಳಗಳಲ್ಲಿ ಬ್ರಹ್ಮರಥೋತ್ಸವಗಳನ್ನೂ ಸಹ ನಿರ್ವಹಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Voters Day 2026: ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸುವ ಜವಾಬ್ದಾರಿ ದೇಶದ ಪ್ರಜೆಗಳ ಮೇಲಿದೆ – Kannada News | National Voters Day 2026: Know the history and significance of National Voters Day

ರಾಷ್ಟ್ರೀಯ ಮತದಾರರ ದಿನImage Credit source: Pinterest

ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತಪೆಟ್ಟಿಗೆಯಲ್ಲಿದೆ. ನಾಗರಿಕನು ಹಾಕುವಂತರ ಒಂದು ಮತದಿಂದ (Vote) ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಮತದಾನ ಸಂವಿಧಾನ ನಾಗರಿಕರಿಗೆ ನೀಡಿರುವ ಅತ್ಯಮೂಲ್ಯ ಹಕ್ಕಾಗಿದ್ದು, ಈ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮತದಾನ ಪ್ರಾಮುಖ್ಯತೆ ಹಾಗೂ ಮತದಾನವೆಂಬ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಅಂದರೆ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನುಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಮತದಾರರ ದಿನದ ಇತಿಹಾಸವೇನು?

ಭಾರತದ ಎಲ್ಲಾ ನಾಗರಿಕರಿಗೆ ರಾಷ್ಟ್ರದ ಅಭಿವೃದ್ಧಿ, ಏಳಿಗೆಯ ಕಡೆಗೆ ಅವರ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರವು 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ 2011 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಜನವರಿ 25 ರಂದು ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ.

2026 ಮತದಾರರ ದಿನದ ಥೀಮ್ ಏನು?

ರಾಷ್ಟ್ರೀಯ ಮತದಾರರ ದಿನದ ಅಧಿಕೃತ ಧ್ಯೇಯವಾಕ್ಯವನ್ನು ಪ್ರತಿ ವರ್ಷ ಭಾರತೀಯ ಚುನಾವಣಾ ಆಯೋಗ ಘೋಷಿಸುತ್ತದೆ. 2026 ರ ಮತದಾರರ ದಿನದ ಧ್ಯೇಯವಾಕ್ಯವು ನನ್ನ ಭಾರತ, ನನ್ನ ಮತ (My India, My Vote).  ಮತದಾರರ ದಿನದ ಧ್ಯೇಯವಾಕ್ಯವು ಈ ಕೆಳಗಿನ ಮೇಲೆ ಕೇಂದ್ರೀಕರಿಸುತ್ತದೆ,

  • ಯುವ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
  • ಮಾಹಿತಿಯುಕ್ತ ಮತ್ತು ಜವಾಬ್ದಾರಿಯುತ ಮತದಾನ
  • ಅಂತರ್ಗತ ಪ್ರಜಾಪ್ರಭುತ್ವ
  • ನೈತಿಕ ಮತ್ತು ನ್ಯಾಯಯುತ ಚುನಾವಣೆಗಳು

ಇದನ್ನೂ ಓದಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸವುದರ ಹಿಂದಿನ ಉದ್ದೇಶವೇನು?

ಮತದಾರರ ದಿನದ  ಮಹತ್ವವೇನು?

  • ದೇಶದ ಉತ್ತಮ ಸರ್ಕಾರ ಮತ್ತು ಅಭಿವೃದ್ಧಿಗಾಗಿ ಮತದಾನ ಮಾಡುವುದು ನಾಗರಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಪ್ರಜೆಯ ಈ ಜವಾಬ್ದಾರಿಯನ್ನು ಶ್ಲಾಘಿಸಲು, ಚುನಾವಣೆಯ ಮಹತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
  • ಮತದಾರರ ದಿನವನ್ನು ಆಚರಿಸುವ ಗುರಿಯು 18 ವರ್ಷ ವಯಸ್ಸಿನ ಎಲ್ಲರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅವರ ಮತದಾನದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.
  • ಪ್ರತಿಯೊಂದು ಪ್ರಜ್ಞಾಪೂರ್ವಕ ಮತವು ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ ಎಂಬುದರ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡುವುದು ಈ ದಿನದ ಉದ್ದೇಶವಾಗಿದೆ.
  • ಮತದಾನದ ಪ್ರಕ್ರಿಯೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನೂ ಈ ದಿನ ಹೊಂದಿದೆ.
  • ಈ ದಿನ ಮತದಾನವು ಕೇವಲ ಹಕ್ಕಲ್ಲ, ಅದು ದೇಶದ ಕಡೆಗೆ ಜವಾಬ್ದಾರಿಯೂ ಆಗಿದೆ ಎಂಬುದನ್ನು ನಮಗೆಲ್ಲರಿಗೂ ನೆನಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:48 am, Sun, 25 January 26

Source link

ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ – Kannada News | Mouni Roy reveals she faced harassment during an event by family members

ಬಾಲಿವುಡ್ ನಟಿ ಮೌನಿ ರಾಯ್ ಅವರಿಗೆ ಕೆಟ್ಟ ಅನುಭವ ಆಗಿದೆ. ಮನರಂಜನಾ ಕಾರ್ಯಕ್ರಮ ನೀಡಲು ಅತಿಥಿಯಾಗಿ ಹೋಗಿದ್ದಾಗ ಅವರಿಗೆ ಕಿರುಕುಳ ನೀಡಲಾಗಿದೆ. ಬಹಿರಂಗ ವೇದಿಕೆಯಲ್ಲೇ ಈ ರೀತಿ ಆಗಿದೆ. ಹಿರಿ ವಯಸ್ಸಿನ ಅಂಕಲ್​ಗಳು ಈ ರೀತಿ ಮಾಡಿದ್ದಾರೆ ಎಂದು ಮೌನಿ ರಾಯ್ ಅವರು ಆರೋಪಿಸಿದ್ದಾರೆ. ಹರಿಯಾಣದಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಮೌನಿ ರಾಯ್ (Mouni Roy) ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆಯಿಂದ ತಮಗೆ ಬಹಳ ನೋವಾಗಿದೆ ಎಂದು ಅವರು ಹೇಳಿದ್ದಾರೆ.

‘ಕರ್ನಾಲ್​ನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ತಾತನ ವಯಸ್ಸಿನ ಇಬ್ಬರು ಅಂಕಲ್​​ಗಳ ವರ್ತನೆಯಿಂದ ಅಸಹ್ಯ ಆಗಿದೆ. ನಾನು ವೇದಿಕೆಗೆ ಹೋದಾಗ ಆ ಕುಟುಂಬದ ಸದಸ್ಯರು ನನ್ನ ಜೊತೆ ಫೋಟೋ ತೆಗೆದುಕೊಳ್ಳಲು ಬಂದು ಸೊಂಟಕ್ಕೆ ಕೈ ಹಾಕಿದರು. ನಾನು ವಿರೋಧಿಸಿದ್ದು ಅವರಿಗೆ ಇಷ್ಟ ಆಗಲಿಲ್ಲ. ಇಬ್ಬರು ಅಂಕಲ್​ಗಳು ನನ್ನ ಎದುರು ನಿಂತು ಕೆಟ್ಟದಾಗಿ ಸನ್ನೆ ಮಾಡುತ್ತಿದ್ದರು’ ಎಂದು ಮೌನಿ ರಾಯ್ ಹೇಳಿದ್ದಾರೆ.

‘ಅವರು ಮಾಡಿದ್ದು ಸರಿ ಎನಿಸಲಿಲ್ಲ. ಆ ರೀತಿ ಮಾಡಬೇಡಿ ಎಂದು ನಾನು ನಯವಾಗಿಯೇ ಹೇಳಿದೆ. ಆಗ ಅವರು ನನ್ನ ಕಡೆಗೆ ಹೂವು ಎಸೆಯಲು ಶುರು ಮಾಡಿದರು. ಮಧ್ಯದಲ್ಲೇ ನಾನು ಹೊರಟು ಹೋಗಲು ನಿರ್ಧರಿಸಿದೆ. ಆದರೆ ಕಾರ್ಯಕ್ರಮ ಪೂರ್ಣಗೊಳಿಸಬೇಕು ಅಂತ ವಾಪಸ್ ಬಂದೆ. ಆಗಲೂ ಅವರು ನಿಲ್ಲಿಸಲಿಲ್ಲ’ ಎಂದಿದ್ದಾರೆ ಮೌನಿ ರಾಯ್.

‘ನನ್ನಂಥವರಿಗೆ ಈ ರೀತಿ ಆಗುತ್ತದೆ ಎಂದರೆ, ಈಗತಾನೇ ಬಂದಿರುವ ನಟಿಯರಿಗೆ ಏನಾಗಿರಬಹುದು ಅಂತ ಊಹಿಸಿ. ನನಗೆ ಕಿರುಕುಳ ಆಗಿದೆ. ಬಹಳ ನೋವಾಗಿದೆ. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರ ಮಗಳ ಜೊತೆ, ಸಹೋದರಿಯರ ಜೊತೆ ಇದೇ ರೀತಿ ಯಾರಾದರೂ ನಡೆದುಕೊಂಡರೆ ಏನು ಮಾಡುತ್ತಾರೆ ಅಂತ ನನಗೆ ಆಶ್ಚರ್ಯ ಆಗುತ್ತಿದೆ’ ಎಂದು ಮೌನಿ ರಾಯ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಮೌನಿ ರಾಯ್ ಭರ್ಜರಿ ಡ್ಯಾನ್ಸ್

‘ಆ ವೇದಿಕೆ ಬಹಳ ಎತ್ತರದಲ್ಲಿ ಇತ್ತು. ಈ ಅಂಕಲ್​​ಗಳು ಕೆಳಗಿನಿಂದ ವಿಡಿಯೋ ಮಾಡುತ್ತಿದ್ದರು. ಅದನ್ನು ನಿಲ್ಲಿಸಿ ಅಂತ ಹೇಳಲು ಬಂದವರಿಗೆ ಬೈಯ್ದರು. ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಆದರೆ ಇದು? ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ನಾನು ಪೋಸ್ಟ್ ಮಾಡಲ್ಲ. ಆದರೆ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ವಧು-ವರರನ್ನು ಹರಸಲು ನಾವು ಅವರ ಅತಿಥಿಯಾಗಿ ಹೋಗಿರುತ್ತೇನೆ. ಆದರೆ ಅವರು ನಮಗೆ ಕಿರುಕುಳ ನೀಡುತ್ತಾರೆ’ ಎಂದು ಮೌನಿ ರಾಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

2 ವರ್ಷಗಳ ಬಳಿಕ ಏಕದಿನ ಪಂದ್ಯ ಗೆದ್ದ ಇಂಗ್ಲೆಂಡ್! – Kannada News | England snapped an 11 match losing streak away

ಇಂಗ್ಲೆಂಡ್ ತಂಡವು ಬರೋಬ್ಬರಿ 2 ವರ್ಷಗಳ ಬಳಿಕ ವಿದೇಶದಲ್ಲಿ ಏಕದಿನ ಪಂದ್ಯ ಗೆದ್ದುಕೊಂಡಿದೆ. ಅಂದರೆ 2024ರ ಬಳಿಕ ಆಂಗ್ಲರ ಪಡೆ ವಿದೇಶಿ ಪಿಚ್​ನಲ್ಲಿ ಒಂದೇ ಒಂದು ಏಕದಿನ ಪಂದ್ಯ ಗೆದ್ದಿರಲಿಲ್ಲ. ಈ ಎರಡು ವರ್ಷಗಳ ನಡುವೆ ಸೋತಿರುವುದು ಬರೋಬ್ಬರಿ 11 ಪಂದ್ಯಗಳನ್ನು.

ಆದರೆ ಈ ಬಾರಿ ಶ್ರೀಲಂಕಾ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 49.3 ಓವರ್​ಗಳಲ್ಲಿ 219 ರನ್​ಗಳಿಸಿ ಆಲೌಟ್ ಆಗಿತ್ತು.

ಈ ಗುರಿಯನ್ನು ಇಂಗ್ಲೆಂಡ್ ತಂಡವು 46.5 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವಿದೇಶಿ ಪಿಚ್​ನಲ್ಲಿ ಸತತ 11 ಸೋಲುಗಳ ಸರಪಳಿಯನ್ನು ಕಳಚಿಕೊಂಡಿದೆ.

ಇನ್ನು 2023ರ ಬಳಿಕ ಇಂಗ್ಲೆಂಡ್ ಆಡಿರುವ 27 ಏಕದಿನ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 7 ಮ್ಯಾಚ್​ಗಳನ್ನು ಮಾತ್ರ. ಇದೀಗ 2026 ರಲ್ಲಿ ಸಿಕ್ಕಿರುವ ಮೊದಲ ಗೆಲುವಿನೊಂದಿಗೆ ಆಂಗ್ಲರ ಪಡೆ ಮತ್ತೆ ಲಯಕ್ಕೆ ಮರಳುವ ನಿರೀಕ್ಷೆಯಿದೆ.

Source link

ಟಿ20 ವಿಶ್ವಕಪ್​ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವು ಹೊರಬಿದ್ದಿದೆ. ಭಾರತದಲ್ಲಿ ಟೂರ್ನಿ ಆಡಲು ನಿರಾಕರಿಸಿರುವ ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್​ನಿಂದ ಐಸಿಸಿ ಕೈ ಬಿಟ್ಟಿದೆ. ಬದಲಾಗಿ ಸ್ಕಾಟ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಇದೀಗ ಟಿ20 ವಿಶ್ವಕಪ್​ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಿದೆ.

ಈ ಹಿಂದೆ ಬಾಂಗ್ಲಾದೇಶ್ ತಂಡವು ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿತ್ತು. ಇದೀಗ ಗ್ರೂಪ್ ಸಿ ನಲ್ಲಿ ಸ್ಕಾಟ್ಲೆಂಡ್ ತಂಡ ಕಾಣಿಸಿಕೊಂಡಿದೆ. ಅದರಂತೆ ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ತಂಡವು ಇಂಗ್ಲೆಂಡ್, ಇಟಲಿ, ವೆಸ್ಟ್ ಇಂಡೀಸ್ ಹಾಗೂ ನೇಪಾಳ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಈ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಟಿ20 ವಿಶ್ವಕಪ್ ವೇಳಾಪಟ್ಟಿ:

ದಿನಾಂಕ ಪಂದ್ಯ ಸ್ಥಳ
ಫೆಬ್ರವರಿ 7
ಪಾಕಿಸ್ತಾನ vs ನೆದರ್​ಲೆಂಡ್ಸ್ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 7 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 7 ಭಾರತ vs ಅಮೆರಿಕ ಮುಂಬೈ
ಫೆಬ್ರವರಿ 8 ನ್ಯೂಝಿಲೆಂಡ್ vs ಅಫ್ಘಾನಿಸ್ತಾನ್ ಚೆನ್ನೈ
ಫೆಬ್ರವರಿ 8 ಇಂಗ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 8 ಶ್ರೀಲಂಕಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 9 ಸ್ಕಾಟ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 9 ಝಿಂಬಾಬ್ವೆ vs ಓಮನ್ ಎಸ್‌ಎಸ್‌ಸಿ, ಕೊಲಂಬೊ
 ಫೆಬ್ರವರಿ 9 ಸೌತ್ ಆಫ್ರಿಕಾ vs ಕೆನಡಾ ಅಹಮದಾಬಾದ್
ಫೆಬ್ರವರಿ 10 ನೆದಲೆಂಡ್ಸ್ vs ನಮೀಬಿಯಾ ದೆಹಲಿ
ಫೆಬ್ರವರಿ 10 ನ್ಯೂಝಿಲೆಂಡ್ vs ಯುಎಇ ಚೆನ್ನೈ
ಫೆಬ್ರವರಿ 10 ಪಾಕಿಸ್ತಾನ್ vs ಅಮೆರಿಕ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 11 ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ ಅಹಮದಾಬಾದ್
ಫೆಬ್ರವರಿ 11 ಆಸ್ಟ್ರೇಲಿಯಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 11 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮುಂಬೈ
ಫೆಬ್ರವರಿ 12 ಶ್ರೀಲಂಕಾ vs ಒಮಾನ್ ಕ್ಯಾಂಡಿ
ಫೆಬ್ರವರಿ 12 ನೇಪಾಳ vs ಇಟಲಿ ಮುಂಬೈ
ಫೆಬ್ರವರಿ 12 ಭಾರತ vs ನಮೀಬಿಯಾ ದೆಹಲಿ
ಫೆಬ್ರವರಿ 13 ಆಸ್ಟ್ರೇಲಿಯಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 13 ಕೆನಡಾ vs ಯುಎಇ ದೆಹಲಿ
ಫೆಬ್ರವರಿ 13 ಅಮೆರಿಕ vs ನೆದಲೆಂಡ್ಸ್ ಚೆನ್ನೈ
ಫೆಬ್ರವರಿ 14 ಐರ್ಲೆಂಡ್ vs ಒಮಾನ್ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 14 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 14 ನ್ಯೂಝಿಲೆಂಡ್ vs ಸೌತ್ ಆಫ್ರಿಕಾ ಅಹಮದಾಬಾದ್
ಫೆಬ್ರವರಿ 15 ವೆಸ್ಟ್ ಇಂಡೀಸ್ vs ನೇಪಾಳ ಮುಂಬೈ
ಫೆಬ್ರವರಿ 15 ಅಮೆರಿಕ vs ನಮೀಬಿಯಾ ಚೆನ್ನೈ
ಫೆಬ್ರವರಿ 15 ಭಾರತ vs ಪಾಕಿಸ್ತಾನ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 16 ಅಫ್ಘಾನಿಸ್ತಾನ vs ಯುಎಇ ದೆಹಲಿ
ಫೆಬ್ರವರಿ 16 ಇಂಗ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 16 ಆಸ್ಟ್ರೇಲಿಯಾ vs ಶ್ರೀಲಂಕಾ ಕ್ಯಾಂಡಿ
ಫೆಬ್ರವರಿ 17 ನ್ಯೂಝಿಲೆಂಡ್ vs ಕೆನಡಾ ಚೆನ್ನೈ
ಫೆಬ್ರವರಿ 17 ಐರ್ಲೆಂಡ್ vs ಝಿಂಬಾಬ್ವೆ ಕ್ಯಾಂಡಿ
ಫೆಬ್ರವರಿ 17 ಸ್ಕಾಟ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 18 ಸೌತ್ ಆಫ್ರಿಕಾ vs ಯುಎಇ ದೆಹಲಿ
ಫೆಬ್ರವರಿ 18 ಪಾಕಿಸ್ತಾನ್ vs ನಮೀಬಿಯಾ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 18 ಭಾರತ vs ನೆದರ್​ಲೆಂಡ್ಸ್ ಅಹಮದಾಬಾದ್
ಫೆಬ್ರವರಿ 19 ವೆಸ್ಟ್ ಇಂಡೀಸ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 19 ಶ್ರೀಲಂಕಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 19 ಅಫ್ಘಾನಿಸ್ತಾನ vs ಕೆನಡಾ ಚೆನ್ನೈ
ಫೆಬ್ರವರಿ 20 ಆಸ್ಟ್ರೇಲಿಯಾ vs ಒಮಾನ್ ಕ್ಯಾಂಡಿ

ಸೂಪರ್-8 ಮತ್ತು ನಾಕೌಟ್ ಪಂದ್ಯಗಳು:

ಲೀಗ್ ಹಂತದಲ್ಲಿ ಕಣಕ್ಕಿಳಿಯುವ 20 ತಂಡಗಳಲ್ಲಿ  ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸುತ್ತದೆ.
  • ಸೂಪರ್ 8 ಹಂತದ ಪಂದ್ಯಗಳು: ಫೆಬ್ರವರಿ 21 ರಿಂದ ಮಾರ್ಚ್ 1, 2026 ರವರೆಗೆ ನಡೆಯಲಿದೆ. ಇದಾದ ಬಳಿಕ ಸೆಮಿಫೈನಲ್ ಜರುಗಲಿದೆ.
  • ಸೆಮಿಫೈನಲ್  ಪಂದ್ಯಗಳು: ಮಾರ್ಚ್ 4 ರಂದು ಮೊದಲ ಸೆಮಿಫೈನಲ್ ಹಾಗೂ ಮಾರ್ಚ್ 5 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.
  • ಫೈನಲ್: ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಸೋತ RCB ತಂಡದ ಫೈನಲ್​ ಲೆಕ್ಕಾಚಾರ ಹೀಗಿದೆ

ತಂಡಗಳ ಗ್ರೂಪ್:

  • ಗುಂಪು A: ಭಾರತ, ಪಾಕಿಸ್ತಾನ್, ನೆದರ್‌ಲೆಂಡ್ಸ್, ನಮೀಬಿಯಾ, ಯುಎಸ್‌ಎ.
  • ಗುಂಪು B: ಶ್ರೀಲಂಕಾ, ಆಸ್ಟ್ರೇಲಿಯಾ, ಝಿಂಬಾಬ್ವೆ, ಐರ್ಲೆಂಡ್, ಒಮಾನ್.
  • ಗುಂಪು C: ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ , ನೇಪಾಳ, ಇಟಲಿ.
  • ಗುಂಪು D: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ. 

 

 

Source link

Bengaluru Traffic Advisory: ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ – Kannada News | Whitefield Traffic Alert: Varthur Road Closures for Channarayaswamy Festival January 25th to January 27th

ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ

ಬೆಂಗಳೂರು, ಜನವರಿ 25: ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ  (Traffic Advisory) ವರ್ತೂರಿನಲ್ಲಿ ಮೂರು ದಿನ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆ ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ವಾಹನ ಸವಾರರು ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಂಚಾರದ ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.

ಜನವರಿ 25 ಭಾನುವಾರದಿಂದ ಜನವರಿ 27ರವರೆಗೆ ಮೂರು ದಿನ ನಡೆಯಲಿರುವ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಜಾತ್ರಾ ಸ್ಥಳದಲ್ಲಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಪಾರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಕ್ಸ್ ಪೋಸ್ಟ್ ಇಲ್ಲಿದೆ

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು

ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಬರುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ ಸೂರಹುಣಸೆ ರಸ್ತೆಯಿಂದ ಮಧುರನಗರದ ಮೂಲಕ ಹಲಸಹಳ್ಳಿ ಗುಂಜೂರು ಕಡೆಗೆ ಹಾಗೂ ವರ್ತೂರು ಪೊಲೀಸ್ ಠಾಣೆ ಕಡೆಯಿಂದ ಸಂಚರಿಸಬಹುದಾಗಿದೆ.

ಗುಂಜೂರಿನಿಂದ ವೈಟ್‌ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರದ ಮೂಲಕ ಸೂರಹುಣಸೆ ಮತ್ತು ವಾಲೇಪುರ ಮೂಲಕ ಹಾಗೂ ವರ್ತೂರು ಕಾಲೇಜು ಮೂಲಕ ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದು.

ಗುಂಜೂರು ಕಡೆಯಿಂದ ಬರುವ ವಾಹನ ಸವಾರರು ಕುಂದಲಹಳ್ಳಿ ಮತ್ತು ಮಾರತ್ ಹಳ್ಳಿ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರು ಕೆ.ಎಫ್.ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮೂಲಕ ಹಾಗೂ ವಿಬ್ ಗಯಾರ್ ಕಡೆಯಿಂದ ಸಂಚರಿಸವಂತೆ ಸಂಚಾರ ಪೊಲೀಸರು ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋತ RCB ತಂಡದ ಫೈನಲ್​ ಲೆಕ್ಕಾಚಾರ ಹೀಗಿದೆ – Kannada News | RCB’s Final Qualification Scenarios in WPL 2026

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್​ಸಿಬಿ ತಂಡದ ಫೈನಲ್​ ಲೆಕ್ಕಾಚಾರ ಕೂಡ ಬದಲಾಗಿದೆ.

Source link

Bengaluru Air Quality: ಅಂತೂ ಇಂತೂ ಸುಧಾರಿಸುತ್ತಿದೆ ಬೆಂಗಳೂರಿನ ವಾಯು ಗುಣಮಟ್ಟ! – Kannada News | Bangalore Air Pollution Crisis: Bengaluru Air quality got better today

ಅಂತೂ ಇಂತೂ ಸುಧಾರಿಸುತ್ತಿದೆ ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಜನವರಿ 25: ರಾಜ್ಯದೆಲ್ಲೆಡೆ ಏರ್ ಕ್ವಾಲಿಟಿ (Bengaluru Air Quality) ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.ಕೆಲ ತಿಂಗಳ ಹಿಂದೆಯೂ ಒಮ್ಮೆ ಬೆಂಗಳೂರಿನ ವಾಯ ಗುಣಮಟ್ಟ 200ಕ್ಕೇರಿತ್ತು. ನಂತರ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು. ಆದರೆ ಇಂದು ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಸುಧಾರಣೆ ಬಂದಿದೆ.

ಬೆಂಗಳೂರಿನ ಏರ್ ಕ್ವಾಲಿಟಿ 144 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೂ ಇಂದಿಗೂ ಗಾಳಿಯು ಕಲುಷಿತವಾಗಿಯೇ ಇದ್ದು, ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –144
  • ಮಂಗಳೂರು-157
  • ಮೈಸೂರು –127
  • ಬೆಳಗಾವಿ – 96
  • ಕಲಬುರ್ಗಿ-136
  • ಶಿವಮೊಗ್ಗ – 162
  • ಬಳ್ಳಾರಿ – 164
  • ಹುಬ್ಬಳ್ಳಿ- 154
  • ಉಡುಪಿ –150
  • ವಿಜಯಪುರ –141

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version