ದೀಪಾವಳಿಗೆ ದೊಡ್ಡ ಕ್ಲ್ಯಾಶ್: ‘ಜೈಲರ್ 2’ vs ‘ರಾಮಾಯಣ’, ಸಿಂಬು ಕೂಡ ರೇಸ್‌ನಲ್ಲಿ ಭಾಗಿ – Kannada News | Jailer 2 vs Ramayana: Rajinikanth’s Diwali Box Office Clash with Ranbir Kapoor and Yash

ಸೂಪರ್‌ಸ್ಟಾರ್ ರಜಿನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಜೈಲರ್ 2’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಚಿತ್ರತಂಡ ದೀಪಾವಳಿ ಹಬ್ಬದ ಸಮಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿದೆ. ಆದರೆ, ಇದೇ ದೀಪಾವಳಿಗೆ ಭಾರತೀಯ ಚಿತ್ರರಂಗದ ಮತ್ತೊಂದು ದೊಡ್ಡ ಸಿನಿಮಾ ‘ರಾಮಾಯಣ’ ಸಿನಿಮಾ ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ನಡೆಯುವುದು ಖಚಿತವಾಗಿದೆ.

ದೀಪಾವಳಿ ರೇಸ್‌ನಲ್ಲಿ ತಲೈವಾ ವರ್ಸಸ್ ರಾಮಾಯಣ

ಆರಂಭದಲ್ಲಿ ‘ಜೈಲರ್ 2’ ಚಿತ್ರವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿತ್ತು. ಆದರೆ, ಈಗ ದೀಪಾವಳಿ ಹಬ್ಬದ ಸೀಸನ್‌ಗೆ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ರಜಿನಿಕಾಂತ್ ಅವರ ‘ಜೈಲರ್ 2’ ಹಾಗೂ ಮತ್ತೊಂದು ಕಡೆ ಭಾರಿ ಬಜೆಟ್‌ನ ‘ರಾಮಾಯಣ’ ಸಿನಿಮಾ ಒಂದೇ ಸಮಯಕ್ಕೆ ಚಿತ್ರಮಂದಿರಗಳಿಗೆ ಬರಲಿವೆ. ಇದರ ಜೊತೆಗೆ ಸಿಂಬು ನಟನೆಯ, ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಚಿತ್ರವೂ ಇದೇ ರೇಸ್‌ನಲ್ಲಿದೆ. ಈ ಮೂರು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ಬಂದರೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದು ಗ್ಯಾರಂಟಿ.

‘ಜೈಲರ್ 2’ ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸೀಕ್ವೆಲ್‌ನಲ್ಲಿ ರಜಿನಿಕಾಂತ್ ಮತ್ತೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಹಾಗೂ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಚಿತ್ರದಲ್ಲೂ ಅತಿಥಿ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಮೊದಲು ಈ ಚಿತ್ರದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ತಮ್ಮ ‘ಕಿಂಗ್’ ಚಿತ್ರದಲ್ಲಿ ಬ್ಯುಸಿ ಇರುವುದರಿಂದ ಈ ಆಫರ್ ನಿರಾಕರಿಸಿದ್ದಾರೆ. ಹೀಗಾಗಿ ಚಿತ್ರತಂಡ ಈಗ ಹೃತಿಕ್ ರೋಶನ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಇನ್ನು’ಅರಸನ್’ ಧನುಷ್ ನಟನೆಯ ‘ವಡಾ ಚೆನ್ನೈ’ ಚಿತ್ರದ ಸ್ಪಿನ್ ಆಫ್ ಆಗಿದ್ದು, ಆ ಸಿನಿಮಾ ಹಿನ್ನೆಲೆಯಲ್ಲೇ ಸಾಗಲಿದೆ. ಚಿತ್ರದಲ್ಲಿ ಸಿಂಬು ಜೊತೆಗೆ ವಿಜಯ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಚೈತ್ರಾ ಜೆ. ಆಚಾರ್ ಹಾಗೂ ಪ್ರಿಯಾಂಕಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಬಿಡುಗಡೆ ಮುಂದೂಡಿಕೆ? ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ!

ಇನ್ನು, ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು ನಟಿಸಿದ್ದಾರೆ. ಬಿಗ್ ಬಜೆಟ್​​ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಠಾಕ್ರೆ ಬಣದಲ್ಲಿ ಮತ್ತೊಂದು ಬಿರುಕು ದೃಢ, ಉದ್ಧವ್ ಕರೆದಿದ್ದ ಸಭೆಗೆ 6 ಸಂಸದರು ಗೈರು – Kannada News | Uddhav Thackeray Faces New Shiv Sena Split: 6 MPs Boycott Key Meeting, Rebellion Confirmed

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಪಕ್ಷಾಂತರ ಪರ್ವ ಅಧಿಕೃತಗೊಂಡಿದೆ. ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಇಂದು ಬೆಳಗ್ಗೆ ದೆಹಲಿಯಲ್ಲಿ ಕರೆದಿದ್ದ ಅತ್ಯಂತ ನಿರ್ಣಾಯಕ ಸಂಸದರ ಸಭೆಗೆ ಆರು ಲೋಕಸಭಾ ಸಂಸಅದರು ಗೈರಾಗುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಇರೊಂದಿಗೆ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿನ ಒಡಕು ಈಗ ಸ್ಪಷ್ಟವಾದಂತಾಗಿದೆ.
ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಸಂಸದರು ಪಕ್ಷಾಂತರ ಮಾಡಿದ್ದ ಬೆನ್ನಲ್ಲೇ, ಈಗ ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದಲ್ಲೂ ಭಾರಿ ವಿಭಜನೆ ದೃಢಪಟ್ಟಿದೆ.

ಏನಿದು ‘ಆಪರೇಷನ್ ಟೈಗರ್’? ಯಾಕೆ ಈ ರಾಜಕೀಯ ಭೂಕಂಪ?
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ‘ಆಪರೇಷನ್ ಟೈಗರ್’ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು. ಉದ್ಧವ್ ಠಾಕ್ರೆ ಬಣದ ಸಂಸದರನ್ನು ಸೆಳೆದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿಸಿಕೊಳ್ಳುವ ರಹಸ್ಯ ಕಾರ್ಯಾಚರಣೆಗೆ ಈ ಹೆಸರು ಇಡಲಾಗಿದೆ.

ಈ ಬಿರುಕಿಗೆ ಮುಖ್ಯ ಕಾರಣಗಳು ಇಲ್ಲಿವೆ
ಕೇಂದ್ರದಲ್ಲಿರುವ ಎನ್‌ಡಿಎ (NDA) ಸರ್ಕಾರಕ್ಕೆ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇತ್ತೀಚೆಗಷ್ಟೇ ಬಂಗಾಳದ ಟಿಎಂಸಿ ಸಂಸದರು ಬಂದ ನಂತರವೂ ಎನ್‌ಡಿಎಗೆ ಇನ್ನೂ 46 ಸಂಸದರ ಕೊರತೆಯಿತ್ತು. ಈಗ ಉದ್ಧವ್ ಬಣದ 6 ಸಂಸದರನ್ನು ಸೆಳೆಯುವ ಮೂಲಕ ಶಿಂಧೆ ಮತ್ತು ಬಿಜೆಪಿ ಮೈತ್ರಿಕೂಟ ಕೇಂದ್ರದಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.

ಮತ್ತಷ್ಟು ಓದಿ: ಶಿವಸೇನೆಯಲ್ಲಿ ಮತ್ತೊಂದು ಬಿರುಕು? ಆಪರೇಷನ್ ಟೈಗರ್ ವದಂತಿ ಬೆನ್ನಲ್ಲೇ ಉದ್ಧವ್ ಠಾಕ್ರೆ ತುರ್ತು ಸಭೆ

ಸಭೆಗೆ ಹಾಜರಾದವರು ಯಾರು?
ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ನಿನ್ನೆಯೇ ‘ಮೂರು ಸಾಲಿನ ವಿಪ್’ ಜಾರಿ ಮಾಡಲಾಗಿತ್ತು. ಆದರೂ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾದಾಗ ಕೇವಲ ನಾಲ್ಕು ಜನ ಸಂಸದರು ಮಾತ್ರ ಹಾಜರಿದ್ದರು.

ಸಂಜಯ್ ರಾವತ್
ಅನಿಲ್ ದೇಸಾಯಿ
ಅರವಿಂದ್ ಸಾವಂತ್
ರಾಜಭಾವು ವಾಜೆ

ಬಂಡಾಯವೆದ್ದ ಆರು ಸಂಸದರು ಯಾರು?
ವಿಪ್ ಜಾರಿಯಾಗಿದ್ದರೂ ಪಕ್ಷದ ಆದೇಶವನ್ನು ಧಿಕ್ಕರಿಸಿ ಸಭೆಯಿಂದ ದೂರ ಉಳಿದ 6 ಸಂಸದರ ಪಟ್ಟಿ ಇಲ್ಲಿದೆ:

ಸಂಜಯ್ ದಿನಾ ಪಾಟೀಲ್

ಸಂಜಯ್ ದೇಶಮುಖ್

ಸಂಜಯ್ (ಬಂದು) ಜಾಧವ್

ಓಂರಾಜೆ ನಿಂಬಾಳ್ಕರ್

ಸಂಜಯ್ ವಕ್ಚೌರೆ

ನಾಗೇಶ್ ಪಾಟೀಲ್ ಅಶ್ಟಿಕರ್

ಉದ್ಧವ್ ಸೇನೆಯ ಮುಂದಿನ ನಡೆ ಏನು?
ಅನರ್ಹತೆ ತೂಗುಗತ್ತಿ: ಪಕ್ಷದ ವಿಪ್ ಉಲ್ಲಂಘಿಸಿ ಸಭೆಗೆ ಗೈರಾದ ಆರು ಸಂಸದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಬಣ ಸಜ್ಜಾಗಿದೆ.

ಮೂಲಗಳ ಪ್ರಕಾರ, ಉದ್ಧವ್ ಸೇನೆಯು ಮೊದಲು ಈ ಬಂಡಾಯ ಸಂಸದರಿಗೆ ‘ಶೋಕಾಸ್ ನೋಟಿಸ್’ (ಕಾರಣ ಕೇಳಿ ನೋಟಿಸ್) ಜಾರಿ ಮಾಡಲಿದೆ. ಅದಾದ ಬಳಿಕ ಇವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತವಾಗಿ ದೂರು ನೀಡುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಈ ರಾಜಕೀಯ ಹೈಡ್ರಾಮಾ ಈಗ ದೆಹಲಿಯ ಸಂಸತ್ತಿನ ಅಂಗಳ ತಲುಪಿದೆ.

ಉದ್ಧವ್ ಬಣದಲ್ಲಿ ಒಟ್ಟು 9 ಲೋಕಸಭಾ ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಬೇಕಾದರೆ 3ನೇ 2ರಷ್ಟು ಅಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಹೊರಬರಬೇಕಿತ್ತು. ಬಂಡಾಯಗಾರರು ನಿಖರವಾಗಿ ಇದೇ ಸಂಖ್ಯೆಯನ್ನು ತಲುಪಿದ್ದಾರೆ. 2022 ರಲ್ಲಿ ಶಿಂಧೆ ಶಾಸಕರನ್ನು  ವಿಭಜಿಸಿದ ಮಾದರಿಯಲ್ಲೇ, ಈಗ ಸಂಸದರನ್ನೂ ಒಡೆದು ಉದ್ಧವ್‌ಗೆ ಮತ್ತೊಂದು ಭಾರಿ ಪೆಟ್ಟು ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಣ್ಣಿಗೆ ಸನ್​ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!

ಲಂಡನ್‌ನ ಓವಲ್ ಮೈದಾನದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಜೋಫ್ರಾ ಆರ್ಚರ್ ನಡುವೆ ನಡೆದ ರೋಚಕ ಹಣಾಹಣಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಝಿಲೆಂಡ್ ತಂಡದ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಿ, ಇಂಗ್ಲೆಂಡ್‌ನ ಅತ್ಯಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೌನ್ಸರ್‌ಗಳನ್ನು ಎದುರಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್​ಗ್ಲಾಸ್ ಧರಿಸಲು ಕಾರಣವೇನು?

ಪಂದ್ಯದ 67ನೇ ಓವರ್​ ವೇಳೆ ಓವಲ್ ಮೈದಾನದ ಸೈಟ್‌ಸ್ಕ್ರೀನ್‌ನಿಂದ ಸೂರ್ಯನ ಬೆಳಕು ತೀವ್ರವಾಗಿ ಕಣ್ಣಿಗೆ ಬಡಿಯುತ್ತಿದ್ದ ಕಾರಣ, ಚೆಂಡನ್ನು ಸ್ಪಷ್ಟವಾಗಿ ಗುರುತಿಸಲು ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಲು ನಿರ್ಧರಿಸಿದರು.

ಫಿಲಿಪ್ಸ್ ಹೆಲ್ಮೆಟ್ ಒಳಗಡೆ ದೊಡ್ಡ ಕನ್ನಡಕ ಧರಿಸಿ ಕ್ರೀಸ್‌ನಲ್ಲಿ ನಿಂತಾಗ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಲೇವಡಿ ಮಾಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದನ್ನು ಫಿಲಿಪ್ಸ್ ಅವರ ಅಪ್ರತಿಮ “ಸ್ವಾಗ್” ಮತ್ತು ಧೈರ್ಯ ಎಂದು ಬಣ್ಣಿಸಿದ್ದಾರೆ.

ಜೋಫ್ರಾ ಆರ್ಚರ್ vs ಗ್ಲೆನ್ ಫಿಲಿಪ್ಸ್:

ವೇಗವಾಗಿ ರನ್ ಗಳಿಸುತ್ತಿದ್ದ ಗ್ಲೆನ್ ಫಿಲಿಪ್ಸ್ (23 ಎಸೆತಗಳಲ್ಲಿ 33 ರನ್) ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ನಾಯಕ ಜೋ ರೂಟ್, ಜೋಫ್ರಾ ಆರ್ಚರ್ ಅವರನ್ನು ಮರಳಿ ಬೌಲಿಂಗ್‌ಗೆ ತಂದರು. ಆರ್ಚರ್ ಸನ್‌ಗ್ಲಾಸ್ ಧರಿಸಿದ್ದ ಫಿಲಿಪ್ಸ್ ವಿರುದ್ಧ ಸತತ 8 ಓವರ್‌ಗಳ ಕಾಲ ಕೇವಲ ಶಾರ್ಟ್-ಪಿಚ್ ಎಸೆತಗಳ ಮೂಲಕ ದಾಳಿ ನಡೆಸಿದರು. ಫಿಲಿಪ್ಸ್ ಸನ್‌ಗ್ಲಾಸ್ ಧರಿಸಿದ ತಕ್ಷಣ ಎದುರಿಸಿದ ಆರ್ಚರ್ ಅವರ ಮೊದಲ ಬೌನ್ಸರ್ ನೇರವಾಗಿ ಅವರ ಹೆಗಲಿಗೆ ಬಡಿಯಿತು.

ಚಹಾ ವಿರಾಮದ ನಂತರ ಆರ್ಚರ್ ಎಸೆದ 40 ಎಸೆತಗಳಲ್ಲಿ 33 ಎಸೆತಗಳು ಶಾರ್ಟ್-ಪಿಚ್ ಆಗಿದ್ದವು. ಸುಮಾರು 138 ಕಿ.ಮೀ ವೇಗದಲ್ಲಿ ಬಂದ ಕುತ್ತಿಗೆ ಮಟ್ಟದ ಬೌನ್ಸರ್ ಒಂದರಿಂದ ತಪ್ಪಿಸಿಕೊಳ್ಳಲು ಫಿಲಿಪ್ಸ್ ಕ್ರೀಸ್‌ನಲ್ಲಿ ಮಲಗಬೇಕಾಯಿತು.

ಆರ್ಚರ್ ಎಸೆದ ಈ ಭೀಕರ ಬೌನ್ಸರ್‌ನಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದ ಫಿಲಿಪ್ಸ್, ಹಾಗೆಯೇ ಮಲಗಿ ನ್ಯೂಝಿಲೆಂಡ್ ಡ್ರೆಸ್ಸಿಂಗ್ ರೂಮ್ ಕಡೆಗೆ ‘ಥಂಬ್ಸ್-ಅಪ್’ ತೋರಿಸಿದರು. ಇದನ್ನು ಕಂಡು ಸಹ ಆಟಗಾರ ಡೆರಿಲ್ ಮಿಚೆಲ್ ಸೇರಿದಂತೆ ಇಡೀ ಕಿವೀಸ್ ಬಳಗ ನಗೆಗಡಲಲ್ಲಿ ತೇಲಿದರು.

ಇದಾಗ್ಯೂ ಸನ್​ಗ್ಲಾಸ್ ಧರಿಸಿಯೇ ಏಕಾಂಗಿ ಹೋರಾಟ ಮುಂದುವರೆಸಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ 74 ಎಸೆತಗಳಲ್ಲಿ 9 ಫೋರ್​ ಬಾರಿಸಿ ಅಜೇಯ 49 ರನ್ ಕಲೆಹಾಕಿದ್ದಾರೆ. ಇತ್ತ ಫಿಲಿಪ್ಸ್ ಅವರ ಈ ಕೆಚ್ಚೆದೆಯ ಪ್ರದರ್ಶನದ ಫಲವಾಗಿ ನ್ಯೂಝಿಲೆಂಡ್ ತಂಡವು ಮೊದಲ ದಿನದಲ್ಲೇ ಆಲೌಟ್ ಆಗುವುದರಿಂದ ಬಚಾವಾಗಿದೆ. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.

 

 

Source link

Jwarahareshwara Temple: ಜ್ವರ ಮತ್ತು ದೀರ್ಘಕಾಲದ ಕಾಯಿಲೆ ಗುಣಪಡಿಸುವ ಜ್ವರಹರೇಶ್ವರ ದೇವಸ್ಥಾನದ ಬಗ್ಗೆ ಗೊತ್ತಾ? – Kannada News | Jvarahareshwara Temple Kanchipuram: Shiva’s Divine Power for Fever and Ailment Healing

ಕಾಂಚೀಪುರಂನ ಜ್ವರಹರೇಶ್ವರ ದೇವಸ್ಥಾನImage Credit source: Templesofindia

ಸನಾತನ ಧರ್ಮದಲ್ಲಿ, ಶಿವನು ಕೇವಲ ವಿನಾಶಕನಲ್ಲ, ಭಕ್ತರ ಕಷ್ಟಗಳನ್ನು ನಿವಾರಿಸುವ ಕರುಣಾಮಯಿಯೂ ಆಗಿದ್ದಾನೆ. ವಿಶೇಷವಾಗಿ, ಶಿವನನ್ನು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುವ ದೇವರಾಗಿ ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅಂತಹ ಅಪರೂಪದ ಶೈವ ಸ್ಥಳಗಳಲ್ಲಿ, ತಮಿಳುನಾಡಿನ ಕಾಂಚೀಪುರಂನಲ್ಲಿರುವ ‘ಜುರಹರೇಶ್ವರ ದೇವಸ್ಥಾನ’ (ಜ್ವರಹರೇಶ್ವರ) ವಿಶೇಷ ಸ್ಥಾನವನ್ನು ಹೊಂದಿದೆ. ಜ್ವರ, ದೀರ್ಘಕಾಲದ ಕಾಯಿಲೆಗಳು ಮತ್ತು ದೈಹಿಕ ನೋವುಗಳಿಂದ ಮುಕ್ತಿ ಪಡೆಯಲು ಬಯಸುವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಜ್ವರಹರೇಶ್ವರ ಯಾರು ಮತ್ತು ಆ ಹೆಸರಿನ ಅರ್ಥವೇನು?

ಶಿವನನ್ನು ಇಲ್ಲಿ ‘ಜ್ವರಹರೇಶ್ವರ’ ಎಂದು ಪ್ರತಿಷ್ಠಾಪಿಸಲಾಗಿದೆ, ಅಂದರೆ “ಜ್ವರವನ್ನು ನಿವಾರಿಸುವವನು”. ನಾವು ನೋಡುವ ಶಿವಲಿಂಗದ ಸಾಮಾನ್ಯ ರೂಪಕ್ಕಿಂತ ಭಿನ್ನವಾಗಿ, ಇಲ್ಲಿನ ಆಧ್ಯಾತ್ಮಿಕ ತತ್ವಶಾಸ್ತ್ರವು ಶಿವನನ್ನು ವಿಶೇಷ ಗುಣಪಡಿಸುವ ಶಕ್ತಿಯಾಗಿ ಪರಿಗಣಿಸುತ್ತದೆ. ಈ ರೂಪವು ದೈಹಿಕ ಕಾಯಿಲೆಗಳನ್ನು ಮಾತ್ರವಲ್ಲದೆ ಮಾನಸಿಕ ಚಿಂತೆಗಳು, ಭಯಗಳು ಮತ್ತು ನಕಾರಾತ್ಮಕ ಆಲೋಚನೆಗಳನ್ನು ಸಹ ದೂರವಾಗಿಸುವ ದೈವಿಕ ಶಕ್ತಿಯನ್ನು ಹೊಂದಿದೆ ಎಂದು ಭಕ್ತರು ನಂಬುತ್ತಾರೆ.

ದೇವಾಲಯದ ಸ್ಥಾಪನೆಯ ಹಿಂದಿನ ಪೌರಾಣಿಕ ಕಥೆ:

ದಂತಕಥೆಗಳ ಪ್ರಕಾರ, ಒಂದು ಕಾಲದಲ್ಲಿ ತೀವ್ರವಾದ ಜ್ವರ ಮತ್ತು ರೋಗಗಳು ಭೂಮಿಯಾದ್ಯಂತ ಹರಡಿ, ಜನರಿಗೆ ತೀವ್ರ ಸಂಕಷ್ಟವನ್ನುಂಟುಮಾಡುತ್ತಿದ್ದವು. ಆಗ ದೇವತೆಗಳು ರಕ್ಷಣೆಗಾಗಿ ಶಿವನನ್ನು ಪ್ರಾರ್ಥಿಸಿದಾಗ, ಈತನು ತನ್ನ ದೈವಿಕ ಶಕ್ತಿಯಿಂದ ಜ್ವರದ ರೂಪದಲ್ಲಿದ್ದ ದುಷ್ಟ ಶಕ್ತಿಯನ್ನು ನಿಗ್ರಹಿಸಿದನೆಂದು ಹೇಳಲಾಗುತ್ತದೆ. ಅದರ ನಂತರ, ಆತನು “ಜ್ವರಹರೇಶ್ವರ” ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷನಾಗಿ ಭೂಮಿಯ ಆರೋಗ್ಯ ರಕ್ಷಕನಾದನೆಂಬ ನಂಬಿಕೆಯಿದೆ.

ಮೂರು ಮುಖಗಳು ಮತ್ತು ಮೂರು ಕಾಲುಗಳ ರಹಸ್ಯ:

ಜ್ವರಹರೇಶ್ವರನ ವಿಶಿಷ್ಟತೆಯು ಅವನ ಸಾಂಕೇತಿಕ ರೂಪದಲ್ಲಿದೆ. ಈ ಮೂರ್ತಿಯ ಮೂರು ಮುಖಗಳು ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ ಮತ್ತು ಅವನತಿಯನ್ನು ಸಂಕೇತಿಸುತ್ತವೆ. ಇನ್ನು ಆತನ ಮೂರು ಕಾಲುಗಳು ಆಯುರ್ವೇದದಲ್ಲಿ ಉಲ್ಲೇಖಿಸಲಾದ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಆತನ ಬೆಂಕಿಯಂತಹ ಕಣ್ಣುಗಳು ದೇಹದಲ್ಲಿನ ರೋಗಕಾರಕ ಶಕ್ತಿಗಳನ್ನು ಸುಟ್ಟುಹಾಕುವ ದೈವಿಕ ಶಕ್ತಿಯ ಸಂಕೇತವಾಗಿದೆ. ನಮ್ಮ ಪೂರ್ವಜರು ಈ ರೂಪದ ಮೂಲಕ ಆರೋಗ್ಯದ ರಹಸ್ಯವನ್ನು ಆಧ್ಯಾತ್ಮಿಕವಾಗಿ ವಿವರಿಸಿದ್ದಾರೆ.

ಕಾಂಚೀಪುರಂನ ಅಪರೂಪದ ಪಲ್ಲವ ವಾಸ್ತುಶಿಲ್ಪದ ವೈಭವ:

ತಮಿಳುನಾಡಿನ ಕಾಂಚೀಪುರಂ ಅನೇಕ ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಜ್ವರಹರೇಶ್ವರ ದೇವಾಲಯವೂ ಅಲ್ಲಿನ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪಲ್ಲವ ಕಾಲದ ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪದ ವೈಭವವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದ ಗರ್ಭಗುಡಿಯನ್ನು ಅತ್ಯಂತ ವಿಶಿಷ್ಟ ಆಕಾರದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿನ ಶಾಂತಿಯುತ ವಾತಾವರಣ ಮತ್ತು ಶಿಲ್ಪಗಳ ಮೇಲೆ ಕೆತ್ತಲಾದ ಆಧ್ಯಾತ್ಮಿಕ ಸಂದೇಶಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪವಿತ್ರ ಪುಷ್ಕರಿಣಿ ಮತ್ತು ವಿಶೇಷ ಪೂಜಾ ವಿಧಾನಗಳು:

ದೇವಾಲಯದ ಆವರಣದಲ್ಲಿರುವ ಪವಿತ್ರ ಪುಷ್ಕರಿಣಿಯೂ ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲಿ ಸ್ನಾನ ಮಾಡಿ ಭಗವಂತನನ್ನು ದರ್ಶನ ಪಡೆಯುವ ಭಕ್ತರು ತಮ್ಮ ಆರೋಗ್ಯ ಸಮಸ್ಯೆಗಳಿಂದ ಗುಣಮುಖರಾಗುತ್ತಾರೆ ಎಂದು ನಂಬಲಾಗಿದೆ. ಇತರ ಶಿವನ ದೇವಾಲಯಗಳಿಗೆ ಹೋಲಿಸಿದರೆ ಇಲ್ಲಿನ ದೈನಂದಿನ ಪೂಜೆ, ಅಭಿಷೇಕಗಳು, ದೀಪಾರಾಧನೆ ಮತ್ತು ಪ್ರಾರ್ಥನೆಗಳು ಸ್ವಲ್ಪ ಭಿನ್ನವಾಗಿರುತ್ತವೆ. ಸೋಮವಾರದಂದು, ಪ್ರದೋಷ ಕಾಲದಲ್ಲಿ ಹಾಗೂ ಮಹಾಶಿವರಾತ್ರಿಯಂದು ಇಲ್ಲಿಗೆ ಸಾವಿರಾರು ಭಕ್ತರು ಹರಿದುಬರುತ್ತಾರೆ.

ಮೆಣಸಿನ ಪ್ರಸಾದ ದಾನದ ಹಿಂದಿನ ಆಯುರ್ವೇದದ ಅರ್ಥ:

ಇಲ್ಲಿನ ದೇವರಿಗೆ ಮೆಣಸಿನಿಂದ (ಕಾಳುಮೆಣಸು) ಮಾಡಿದ ಪ್ರಸಾದವನ್ನು ಅರ್ಪಿಸುವುದು ಅತ್ಯಂತ ವಿಶಿಷ್ಟವಾದ ಸಂಪ್ರದಾಯವಾಗಿದೆ. ಆಯುರ್ವೇದದಲ್ಲಿ ಮೆಣಸಿನಕಾಯಿ ಅಥವಾ ಕಾಳುಮೆಣಸಿನ ಆರೋಗ್ಯಕರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಆಚರಣೆಯನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನು ದೇಹದಲ್ಲಿನ ಶಾಖ ಮತ್ತು ಶೀತದ ಸಮತೋಲನವನ್ನು ಕಾಯ್ದುಕೊಳ್ಳುವ ಸಂಕೇತವೆಂದು ಸಹ ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 am, Thu, 18 June 26

Source link

ನಟಿ ಸಂಚಿತಾ ಸಾವು: ‘ಅವಳ ಆತ್ಮ ದೆವ್ವಗಳಂತೆ ಅಲೆದಾಡುತ್ತವೆ’ ಎಂದ ಖ್ಯಾತ ನಟ – Kannada News | Sanchita Ugale death: Harassment Allegations Emerge; Ravi Kishan Condemns Act

ಮುಂಬೈ (ಜೂನ್​ 18): ‘ಕುಂಕುಮ ಭಾಗ್ಯ’ ಧಾರಾವಾಹಿ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಖ್ಯಾತಿಯ ಯುವ ನಟಿ ಸಂಚಿತಾ ಉಗ್ಲೆ ಅವರ ಹಠಾತ್ ಆತ್ಮಹತ್ಯೆ ಪ್ರಕರಣವು ಇಡೀ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜೂನ್ 14 ರಂದು ಅವರು ನಲಸೋಪಾರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಚಿತ್ರರಂಗ ಹಾಗೂ ರಾಜಕೀಯ ವಲಯದಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಈ ಮಧ್ಯೆ, ಪ್ರಸಿದ್ಧ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರು ಈ ಘಟನೆಗೆ ನೀಡಿರುವ ಪ್ರತಿಕ್ರಿಯೆಯು ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆತ್ಮಹತ್ಯೆ ಪರಿಹಾರವಲ್ಲ, ಅದು ಮಹಾಪಾಪ: ರವಿ ಕಿಶನ್

ಸಂಚಿತಾ ಆತ್ಮಹತ್ಯೆ ಕುರಿತು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರವಿ ಕಿಶನ್, ‘ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೇವಲ 22 ವರ್ಷದ ಯುವ ಟಿವಿ ನಟಿಯೊಬ್ಬರು ಹೀಗೆ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಅದಕ್ಕಾಗಿಯೇ ಜೀವನದಲ್ಲಿ ಧ್ಯಾನ, ಆಧ್ಯಾತ್ಮಿಕತೆ ಮತ್ತು ಪ್ರಾರ್ಥನೆ ಬಹಳ ಮುಖ್ಯ. ಇವು ನಮಗೆ ಎಂತಹ ಕಷ್ಟದ ಸಂದರ್ಭದಲ್ಲೂ ಬದುಕುವ ಶಕ್ತಿಯನ್ನು ನೀಡುತ್ತವೆ’ ಎಂದಿದ್ದಾರೆ.

‘ಈ ಜಗತ್ತಿನಲ್ಲಿ ಕಷ್ಟ, ದುಃಖ ಇಲ್ಲದ ಮನುಷ್ಯನೇ ಇಲ್ಲ. ಆದರೆ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ, ಅದೊಂದು ದೊಡ್ಡ ಪಾಪ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತ್ಮಕ್ಕೆ ಎಂದಿಗೂ ಮೋಕ್ಷ ಸಿಗುವುದಿಲ್ಲ. ಅವರ ಸಾವು ನಿಗದಿತ ಸಮಯದಲ್ಲಿ ಸಂಭವಿಸದೇ ಇರುವುದರಿಂದ, ಅಂತಹ ತೀವ್ರ ಹೆಜ್ಜೆ ಇಟ್ಟವರ ಆತ್ಮಗಳು ಇಲ್ಲೇ ಭೂಮಿಯ ಮೇಲೆ ದೆವ್ವಗಳಂತೆ ಅಲೆದಾಡುತ್ತವೆ. ಜೀವನದಲ್ಲಿ ಸುಖ-ದುಃಖಗಳು ಬಂದು ಹೋಗುವುದು ಸಹಜ, ಆ ಸಂದರ್ಭಗಳನ್ನು ಎದುರಿಸಿ ನಾವು ಬದುಕಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ’ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆಗೆ ಕಿರುಕುಳವೇ ಕಾರಣ’; ತಂದೆಯ ಆರೋಪ

ಸಹನಟನಿಂದ ಕಿರುಕುಳ? ವಾಟ್ಸಾಪ್ ಚಾಟ್ಸ್ ಸೋರಿಕೆ!

ಮತ್ತೊಂದೆಡೆ, ಸಂಚಿತಾ ಅವರ ನಿಗೂಢ ಸಾವಿನ ಹಿಂದೆ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಸಂಚಿತಾ ಅವರ ಕುಟುಂಬಸ್ಥರು ಈ ವಿಷಯವನ್ನು ದೃಢಪಡಿಸಿದ್ದು, ತಮ್ಮ ಮಗಳು ಕಳೆದ ಕೆಲವು ಸಮಯದಿಂದ ನಿರಂತರವಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ದೂರಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಚಿತಾ ಅವರ ವಾಟ್ಸಾಪ್ ಚಾಟ್‌ಗಳು ಸಹ ಸೋರಿಕೆಯಾಗಿದ್ದು, ಸಹನಟ ಉಜ್ವಲ್ ಶರ್ಮಾ ಎಂಬುವವರು ಆಕೆಗೆ ತೀವ್ರ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:10 am, Thu, 18 June 26

Source link

ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನಂಗೆ ಇಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕೆ ಹೋದ್ರಿ, ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸುವವರ್ಯಾರು? – Kannada News | Father Lost to Alcohol: Heartbreaking Viral Video Highlights Family Devastation

ಕುಡಿತದ ಚಟ ಹೇಗೆ ಒಂದು ಸುಂದರ ಸಂಸಾರವನ್ನು ಸರ್ವನಾಶ ಮಾಡುತ್ತದೆ, ಅದರ ಜತೆಗೆ ಮಕ್ಕಳ ಮನಸ್ಸಿನ ಮೇಲೆ ಎಂಥಾ ದುಷ್ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಪುಟ್ಟ ಹೆಣ್ಣುಮಗುವೊಂದು ಅಪ್ಪ, ಅಮ್ಮನ ಜತೆ ತಾನು ನಿಂತಿರುವ ಫೋಟೊದ ಬಳಿ ಹೋಗಿ ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನನಗೆ ಮಾತ್ರ ಇಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕಪ್ಪಾ ನಮ್ಮನ್ನು ಬಿಟ್ಟು ಹೋದ್ರಿ ಎಂದು ಕೇಳುವ ಪ್ರಶ್ನೆಗೆ ಉತ್ತರಿಸುವವರ್ಯಾರು?.

‘@flix.indian’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಬಾಲಕಿಯೊಬ್ಬಳು ಅಪ್ಪನ ಫೋಟೊದೆದುರು ನಿಂತು ತುಂಬಾ ಭಾವುಕಳಾಗಿ ಹಾಗೂ ಕೋಪದಿಂದ ಮಾತನಾಡುತ್ತಿರುವುದನ್ನು ಕಾಣಬಹುದು.
ತನ್ನ ತಂದೆ ಫೋಟೋದಲ್ಲಿದ್ದರೂ, ಅವರು ತನ್ನೆದುರೇ ಇದ್ದಾರೆ ಎಂಬಂತೆ ಮಾತನಾಡಿದ ಬಾಲಕಿ, ಮದ್ಯದ ವ್ಯಸನದ ವಿನಾಶಕಾರಿ ಮುಖವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾಳೆ.

ಅಪ್ಪಾ, ಅಮ್ಮ ನಿಮ್ಮನ್ನು ಕುಡಿಯಬೇಡಿ ಅಂತ ತಡೆಯುತ್ತಿದ್ದರು. ಆದ್ರೂ ನೀವು ಯಾಕೆ ಅಷ್ಟೊಂದು ಕುಡಿದ್ರಿ? ಇವತ್ತು ಬೇರೆ ಎಲ್ಲಾ ಮಕ್ಕಳಿಗೂ ಅಪ್ಪ ಇದ್ದಾರೆ. ಆದ್ರೆ ನೀವು ಮಾತ್ರ ಮದ್ಯಪಾನ ಮಾಡಿ ನಮ್ಮನ್ನು ಬಿಟ್ಟು ಹೋಗಿದ್ದೀರಿ.

ಈ ವೀಡಿಯೊ ಎಲ್ಲಿಯದು ಮತ್ತು ಬಾಲಕಿಯ ಹೆಸರೇನು ಎಂಬ ಮಾಹಿತಿ ಲಭ್ಯವಿಲ್ಲದಿದ್ದರೂ, ಅವಳು ವ್ಯಕ್ತಪಡಿಸಿದ ನೋವು ಮಾತ್ರ ಪ್ರತಿಯೊಬ್ಬರ ಹೃದಯವನ್ನು ತಟ್ಟುವಂತಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಬಾಲ್ಯದ ಕಹಿ ನೆನಪುಗಳು ಮತ್ತು ಆಘಾತಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋ

ನನ್ನ ತಂದೆ ಇಂದಿಗೂ ಮದ್ಯಪಾನ ಮಾಡುತ್ತಾರೆ. ಅವರ ವರ್ತನೆ ಕಂಡು ಬೇಸತ್ತು ನಾನು ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನನ್ನ ಬಾಲ್ಯದ ನೆಮ್ಮದಿಯ ದಿನ ಯಾವುದು ಗೊತ್ತಾ? ನನ್ನ ತಂದೆ ಕುಡಿದು ಗಲಾಟೆ ಮಾಡಿ ಊರು ಬಿಟ್ಟು ಹೋಗಿದ್ದ ದಿನಗಳು. ನಿಮಗೆ ಮದ್ಯದ ವ್ಯಸನವಿದ್ದರೆ ದಯವಿಟ್ಟು ಮದುವೆಯಾಗಬೇಡಿ, ಮಕ್ಕಳನ್ನು ಪಡೆದು ಅವರ ಜೀವನ ಹಾಳು ಮಾಡಬೇಡಿ ಎಂದು ಬರೆದಿದ್ದಾರೆ.

ಪ್ರತಿಯೊಂದು ಮಗುವಿಗೂ ಒಬ್ಬರು ಒಳ್ಳೆಯ ಪೋಷಕರು ಬೇಕು. ಆದರೆ ಪ್ರತಿಯೊಬ್ಬ ಪೋಷಕರೂ ಮಗುವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ನನ್ನ ತಂದೆಯನ್ನೂ ನಾನು ಇದೇ ಮದ್ಯದ ವ್ಯಸನದಿಂದ ಕಳೆದುಕೊಂಡೆ. ಈ ಪುಟ್ಟ ಹುಡುಗಿಯ ನೋವು ಏನೆಂದು ನನಗೆ ಗೊತ್ತು ಎಂದು ಹೇಳಿಕೊಂಡಿದ್ದಾರೆ. ಈ ಪುಟ್ಟ ಬಾಲಕಿಯ ಕಣ್ಣೀರು ಮತ್ತು ಪ್ರಾಮಾಣಿಕ ಮಾತುಗಳು, ಮದ್ಯದ ದಾಸರಾಗಿರುವ ಎಷ್ಟೋ ಪೋಷಕರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುವಂತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫುಟ್​ಬಾಲ್ ವಿಶ್ವಕಪ್​ ಜೊತೆಗೆ ಅಮೆರಿಕದಲ್ಲಿ ಟಿ20 ಲೀಗ್..!

Source link

ನನಗೆ ಇನ್ನೊಂದು ಚಾನ್ಸ್ ಕೊಡಿ: ತೆಲುಗು ಚಿತ್ರರಂಗದಲ್ಲಿ ಅವಕಾಶ ಕೇಳಿದ ದಿಗಂತ್ – Kannada News | Actor Diganth asked for another movie chance in Tollywood

ಕನ್ನಡದ ಜನಪ್ರಿಯ ನಟ ದಿಗಂತ್ (Diganth), ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ದೊರೆತಿಲ್ಲ. ಕೆಲ ದಿನಗಳ ಹಿಂದಷ್ಟೆ ಅವರದ್ದೇ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಬಾಡಿಗೆ ಹಣದಿಂದ ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದು ಹೇಳಿದ್ದರು. ಕನ್ನಡದಲ್ಲಿ ಅವಕಾಶಗಳು ಕಡಿಮೆ, ಪ್ರೇಕ್ಷಕರು ಸಿನಿಮಾ ನೋಡುತ್ತಿಲ್ಲ ಎಂಬ ನೋವನ್ನು ದಿಗಂತ್ ಅಂದು ತೋಡಿಕೊಂಡಿದ್ದರು. ಇದೀಗ ನಟ ದಿಗಂತ್ ಪರ ಭಾಷೆ ಸಿನಿಮಾ ಒಂದರಲ್ಲಿ ನಟಿಸಿದ್ದು, ಅಲ್ಲಿಯೇ ಮತ್ತೊಂದು ಸಿನಿಮಾ ಅವಕಾಶ ಕೊಡಿ ಎಂದು ಬಹಿರಂಗವಾಗಿ ಕೇಳಿದ್ದಾರೆ.

ದಿಗಂತ್ ಅವರು ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಜೂನ್ 19ಕ್ಕೆ ಬಿಡುಗಡೆ ಆಗಲಿದೆ. ನಿನ್ನೆಯಷ್ಟೆ (ಜೂನ್ 17) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದಿಗಂತ್ ಸಹ ಭಾಗಿ ಆಗಿದ್ದರು. ಈ ವೇಳೆ ಅವರು ತೆಲುಗು ಚಿತ್ರರಂಗದಲ್ಲಿ ಮತ್ತೆ ಅವಕಾಶ ನೀಡುವಂತೆ ಕೇಳಿಕೊಂಡರು.

‘ನಾನು ಬೆಂಗಳೂರಿನವನು, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀನಿ. ನನಗೆ ಈ ಸಿನಿಮಾನಲ್ಲಿ ನಟಿಸಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ವಿಶೇಷವಾಗಿ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ಸಮಂತಾ ಋತ್ ಪ್ರಭು ಅವರಿಗೆ ಧನ್ಯವಾದ. ನಾನು ಸಮಂತಾ ಅವರ ನಟನೆಯನ್ನು ಅವರು ಮಾಡುವ ಕೆಲಸವನ್ನು ನೋಡುತ್ತಾ ಪ್ರಶಂಸಿಸುತ್ತಾ ಬಂದವನು. ನಂದಿನಿ ಮತ್ತು ಸಮಂತಾರ ‘ಓಹ್ ಬೇಬಿ’ ನನಗೆ ಬಹಳ ಇಷ್ಟ ಎಂದ ದಿಗಂತ್, ‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಕೆಲಸ ಮಾಡಿದ ಪ್ರಮುಖ ತಂತ್ರಜ್ಞರು ನಿರ್ಮಾಪಕರು, ಎಕ್ಸಿಕ್ಯೂಟಿವ್ ನಿರ್ಮಾಪಕರುಗಳ ಹೆಸರು ಹೇಳಿ ಎಲ್ಲರಿಗೂ ಧನ್ಯವಾದ ಹೇಳಿದರು.

ಇದನ್ನೂ ಓದಿ:ಐಂದ್ರಿತಾ-ದಿಗಂತ್ ಪ್ಲ್ಯಾನ್ ಅಂತು ಸೆಟ್ ಆಗಿದೆ, ಏನದು ಪ್ಲ್ಯಾನ್ ನೋಡಿ

ಬಳಿಕ ಭಾಷಣ ಮುಗಿಸುವಾಗ, ‘ನನಗೆ ಮತ್ತೆ ಅವಕಾಶ ನೀಡುತ್ತೀರ ತಾನೇ?’ ಎಂದು ಪ್ರಶ್ನಿಸಿದರು. ಹಲವರು ಇದಕ್ಕೆ ಹೌದು ಎಂದರು. ಬಳಿಕ ದಿಗಂತ್, ‘ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಇನ್ನೊಂದು ಅವಕಾಶ ಕೊಡಿ’ ಎಂದು ವೇದಿಕೆ ಮೇಲಿಂದ ಕೇಳಿ ಭಾಷಣ ಮುಗಿಸಿದರು.

ಅಸಲಿಗೆ ಬಹಳ ವರ್ಷಗಳ ಹಿಂದೆಯೇ ದಿಗಂತ್ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸಬೇಕಿತ್ತು. ವಿಜಯ್ ದೇವರಕೊಂಡ ಜೊತೆಗೆ ದಿಗಂತ್ ಬೈಕರ್​​ಗಳ ಬಗೆಗಿನ ಕತೆಯುಳ್ಳ ಸಿನಿಮಾ ಮಾಡಬೇಕಿತ್ತು. ಸಿನಿಮಾಕ್ಕಾಗಿ ತರಬೇತಿ ಸಹ ವಿಜಯ್ ದೇವರಕೊಂಡ ಜೊತೆ ಸೇರಿ ದಿಗಂತ್ ಮಾಡಿದ್ದರು ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ತೆಲುಗಿಗೆ ಹೋಗಿದ್ದಾರೆ. ಅವರ ಕೇಳಿ ಕೊಂಡಂತೆ ತೆಲುಗು ಸಿನಿಮಾ ಅವಕಾಶಗಳು ಸಿಗುತ್ತವೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಆಭರಣ ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ – Kannada News | Gold Price Today on 18th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 18: ಭಾರತದಲ್ಲಿ ಬಂಗಾರದ ಬೆಲೆ (Gold Rates) ಇತ್ತೀಚಿನ ವಾರಗಳಿಂದ ಬಹಳ ಏರಿಳಿತಗಳನ್ನು ಕಾಣುತ್ತಿದೆ. ಸತತವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಸತತ ಇಳಿಕೆಗೊಂಡಿದೆ. ಆಭರಣ ಚಿನ್ನದ ಬೆಲೆ 13,850 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 15,110 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಇಂದು ಗುರುವಾರ ಗ್ರಾಮ್​ಗೆ 5 ರೂ ತಗ್ಗಿದೆ. ಇದರೊಂದಿಗೆ ಭಾರತದಲ್ಲಿ ಇದರ ಬೆಲೆ 260 ಮತ್ತು 270 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,100 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 18ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,332 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,850 ರೂ
  • ಚೆನ್ನೈ: 14,060 ರೂ
  • ಮುಂಬೈ: 13,850 ರೂ
  • ದೆಹಲಿ: 13,865 ರೂ
  • ಕೋಲ್ಕತಾ: 13,850 ರೂ
  • ಕೇರಳ: 13,850 ರೂ
  • ಅಹ್ಮದಾಬಾದ್: 13,855 ರೂ
  • ಜೈಪುರ್: 13,865 ರೂ
  • ಲಕ್ನೋ: 13,865 ರೂ
  • ಭುವನೇಶ್ವರ್: 13,850 ರೂ

ಇದನ್ನೂ ಓದಿ: ಭಾರತ-ಬ್ರಿಟನ್​ನ 60,000 ಕೋಟಿ ರೂ ಮೌಲ್ಯದ ವ್ಯಾಪಾರ ಒಪ್ಪಂದ ಜುಲೈ 15ಕ್ಕೆ ಜಾರಿ ಸಾಧ್ಯತೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 581 ರಿಂಗಿಟ್ (13,438 ರುಪಾಯಿ)
  • ದುಬೈ: 526.50 ಡಿರಾಮ್ (13,561 ರುಪಾಯಿ)
  • ಅಮೆರಿಕ: 143.50 ಡಾಲರ್ (13,571 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (14,001 ರುಪಾಯಿ)
  • ಕತಾರ್: 524.50 ಕತಾರಿ ರಿಯಾಲ್ (13,608 ರೂ)
  • ಸೌದಿ ಅರೇಬಿಯಾ: 539 ಸೌದಿ ರಿಯಾಲ್ (13,583 ರುಪಾಯಿ)
  • ಓಮನ್: 55.25 ಒಮಾನಿ ರಿಯಾಲ್ (13,573 ರುಪಾಯಿ)
  • ಕುವೇತ್: 44.01 ಕುವೇತಿ ದಿನಾರ್ (13,559 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Guru Pushya Mahayoga 2026: ಇಂದಿನಿಂದ 61 ದಿನಗಳ ವರೆಗೆ ಈ 6 ರಾಶಿಗೆ ಅದೃಷ್ಟದ ಸುರಿಮಳೆ! – Kannada News | Guru Pushya Mahayoga 2026: Auspicious 61 Day Period and its Impact on Zodiac Signs

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ, ಯುತಿ ಹಾಗೂ ದೃಷ್ಟಿಯಿಂದ ಕೆಲವು ಮಹಾ ಯೋಗಗಳು ನಿರ್ಮಾಣವಾಗುತ್ತವೆ. ಅಂತಹ ಒಂದು ಅಪರೂಪದ ಮತ್ತು ಅತ್ಯಂತ ಶುಭಕರ ಯೋಗವೇ ಗುರು ಪುಷ್ಯ ಮಹಾಯೋಗ. 2026 ರಲ್ಲಿ ಈ ಗುರು ಪುಷ್ಯ ಯೋಗವು 61 ದಿನಗಳ ಕಾಲ ಇರಲಿದ್ದು, ಇದು ಪ್ರಮುಖ ಜ್ಯೋತಿಷ್ಯ ಘಟನೆಯಾಗಿದೆ. ಜೂನ್ 18 ರಂದು ಗುರುವಾರ ರಾತ್ರಿ 9:32 ಕ್ಕೆ ಆರಂಭವಾಗಿ, ಆಗಸ್ಟ್ 19 ರ ಬುಧವಾರ ಬೆಳಗಿನ ಜಾವ 3:37 ರವರೆಗೆ ಗುರುವು ಪುಷ್ಯ ನಕ್ಷತ್ರದಲ್ಲಿ ಸಂಚರಿಸಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಗುರು ಪುಷ್ಯ ಯೋಗದ ಮಹತ್ವ:

ಗುರುವು ಧರ್ಮ ಕಾರಕನಾಗಿರುತ್ತಾನೆ, ಪುಷ್ಯ ನಕ್ಷತ್ರಾಧಿಪತಿ ಶನಿ ಭಗವಾನನು ಕರ್ಮ ಕಾರಕನಾಗಿರುತ್ತಾನೆ. ಧರ್ಮ ಕಾರಕ ಮತ್ತು ಕರ್ಮ ಕಾರಕರು ಒಟ್ಟಾಗಿ ಸಂಚರಿಸುವುದು ನ್ಯಾಯ ಮತ್ತು ಅದೃಷ್ಟದ ದೇವತೆಗಳ ಸಂಯೋಗಕ್ಕೆ ಸಮ. ಈ ಯೋಗದ ಪ್ರಭಾವದಿಂದ ಪ್ರಕೃತಿ, ಪಂಚಭೂತಗಳು, ಮನುಷ್ಯರು, ದ್ವಾದಶ ರಾಶಿಗಳು ಮತ್ತು ಪ್ರಾಣಿಗಳಲ್ಲಿಯೂ ಶುಭ ಫಲಗಳು ಗೋಚರಿಸುತ್ತವೆ. ವಿವಾಹ, ಗೃಹಪ್ರವೇಶ, ಹೊಸ ಉದ್ಯಮ ಆರಂಭ ಮತ್ತು ಇತರೆ ಎಲ್ಲಾ ಶುಭ ಕಾರ್ಯಗಳಿಗೆ ಈ 61 ದಿನಗಳ ಅವಧಿ ಅತ್ಯಂತ ಪ್ರಶಸ್ತವಾಗಿದೆ. ಇದು ವಿದ್ಯಾರ್ಥಿಗಳು, ಗುರುಗಳು, ಶಿಕ್ಷಕರು, ಮಠಾಧೀಶರು, ಪುರೋಹಿತರು ಹಾಗೂ ಧರ್ಮ ಕಾರ್ಯಗಳಲ್ಲಿ ತೊಡಗಿರುವವರಿಗೆ ಪರ್ವಕಾಲವಾಗಿದೆ.

ದ್ವಾದಶ ರಾಶಿಗಳ ಮೇಲೆ ಗುರು ಪುಷ್ಯ ಯೋಗದ ಪ್ರಭಾವ:

ತುಲಾ ರಾಶಿ:

ಈ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಗುರು ಪುಷ್ಯ ಯೋಗ ಸಂಚಾರ ನಡೆಯುವುದರಿಂದ ಅತೀವ ಶುಭ ಫಲಗಳು ಸಿಗುತ್ತವೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಉದ್ಯೋಗದಲ್ಲಿ ಪ್ರಗತಿ, ಬಡ್ತಿ, ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ಶನಿವಾರದಂದು ಶನಿ ಭಗವಾನರ ದರ್ಶನ ಮಾಡುವುದರಿಂದ ಮತ್ತಷ್ಟು ಶುಭವಾಗುತ್ತದೆ.

ವೃಶ್ಚಿಕ ರಾಶಿ:

ಒಂಬತ್ತನೇ ಮನೆಯಾದ ಭಾಗ್ಯ ಸ್ಥಾನದಲ್ಲಿ ಈ ಯೋಗ ಸಂಭವಿಸುವುದರಿಂದ ಆಕಸ್ಮಿಕ ಧನಲಾಭ, ಅದೃಷ್ಟ, ಕಾನೂನು ವಿಚಾರಗಳಲ್ಲಿ ಜಯ, ಮನೆ-ಆಸ್ತಿ ಖರೀದಿ ಯೋಗ, ಶುಭ ಕಾರ್ಯಗಳ ಯೋಗವಿರುತ್ತದೆ. ಧರ್ಮ ಕಾರ್ಯಗಳು ನೆರವೇರುತ್ತವೆ. ಗುರುವಾರ ಗುರುಗಳನ್ನು ದರ್ಶನ ಮಾಡಿ ಅನ್ನದಾನ ಮಾಡುವುದು ಉತ್ತಮ.

ಧನುಸ್ಸು ರಾಶಿ:

ಅಷ್ಟಮ ಸ್ಥಾನದಲ್ಲಿ ಈ ಯೋಗವು ಧನು ರಾಶಿಯವರಿಗೆ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮನಸ್ಸಿನ ಭಾವನೆಗಳು ಸುಧಾರಿಸುತ್ತವೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರ ಆಸ್ತಿಗಳ ಸಂಪಾದನೆ, ಅಪವಾದಗಳಿಂದ ಮುಕ್ತಿ ಸಿಗುತ್ತದೆ. ಶನಿವಾರ ಎಳ್ಳೆಣ್ಣೆಯನ್ನು ಶನಿ ದೇವರಿಗೆ ಅರ್ಪಿಸುವುದು ಉತ್ತಮ.

ಮಕರ ರಾಶಿ:

ಸಪ್ತಮ ಸ್ಥಾನದಲ್ಲಿ ಈ ಯೋಗವು ಪಾಲುದಾರಿಕೆಯಲ್ಲಿ ಶುಭ, ವಿವಾಹ ವಿಷಯಗಳಲ್ಲಿ ಪ್ರಗತಿ, ವೃತ್ತಿಯಲ್ಲಿ ಬದಲಾವಣೆ, ಕೋರ್ಟ್ ಕೇಸ್ ವಿಚಾರಗಳಲ್ಲಿ ಶುಭ ಮತ್ತು ಕೆಲವರಿಗೆ ಸ್ಥಾನ ಪಲ್ಲಟವನ್ನು ತರುತ್ತದೆ. ಗುರುವಾರ ಗುರುಗಳಿಗೆ ವಸ್ತ್ರದಾನ ಮಾಡುವುದು, ಅನ್ನದಾನ ಮಾಡುವುದು ಶುಭ.

ಕುಂಭ ರಾಶಿ:

ಷಷ್ಠ ಸ್ಥಾನದಲ್ಲಿ ಗುರು ಪುಷ್ಯ ಯೋಗ ಸಂಭವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ, ಸಾಲ ತೀರಿಸುವ ಯೋಗ, ಲೋನ್ ಮಂಜೂರಾತಿ, ಕೆಲಸ ಕಾರ್ಯಗಳಲ್ಲಿ ಶುಭ, ವಿದೇಶ ಪ್ರಯಾಣ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮೀನ ರಾಶಿ:

ಪಂಚಮ ಸ್ಥಾನದಲ್ಲಿ ಈ ಯೋಗವು ಶಿಕ್ಷಣ ಕ್ಷೇತ್ರದಲ್ಲಿ ರಾರಾಜಿಸಲು, ಮಕ್ಕಳಿಂದ ಶುಭ, ರೈತರು ಮತ್ತು ವ್ಯಾಪಾರಸ್ಥರಿಗೆ ಲಾಭ, ಅಪವಾದಗಳಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಮನೆ ಅಥವಾ ಸೈಟ್ ಖರೀದಿ ಯೋಗವನ್ನು ನೀಡುತ್ತದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆಯಿದೆ.

ಇತರ ರಾಶಿಗಳಿಗೂ ಲಾಭ:

ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಈ ಯೋಗವು ನೇರವಾಗಿ ಮಹಾ ಶುಭ ಫಲಗಳನ್ನು ನೀಡದಿದ್ದರೂ, ಧರ್ಮ ಮಾರ್ಗದಲ್ಲಿ, ಶಿಸ್ತಿನಿಂದ ನಡೆದುಕೊಂಡರೆ ಅವರಿಗೂ ಅದೃಷ್ಟ ಮತ್ತು ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಎಲ್ಲಾ ಜ್ಯೋತಿಷ್ಯ ಫಲಿತಾಂಶಗಳು ನಂಬಿಕೆ ಮತ್ತು ಶಾಸ್ತ್ರ ಆಧಾರಿತವಾಗಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version