ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು – Kannada News | Mangalore Chemical and Fertilizers: Name Change Row Ignites Public Protest

ಮಂಗಳೂರು, ಜನವರಿ 22: ಎಂಸಿಎಫ್​​ ಅಂದರೆ Mangaluru chemical and Fertilizer. ಮಂಗಳೂರಿನ (Mangaluru) ಪಣಂಬೂರಿನಲ್ಲಿ ಕಳೆದ 55 ವರ್ಷದಿಂದ ಇದೇ ಹೆಸರಿನಲ್ಲಿ ‌ಕಾರ್ಖಾನೆ‌ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇದೀಗ ಕಾರ್ಖಾನೆಯ ಹೆಸರು ಬದಲಾವಣೆ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರು ಬದಲಾವಣೆ ಮಾಡದಂತೆ ಆಡಳಿತ ಮಂಡಳಿಗೆ ಹೇಳಿದರೂ ಖ್ಯಾರೆ ಅನ್ನುತ್ತಿಲ್ಲ. ಹೀಗಾಗಿ ಜನ ಪ್ರತಿನಿಧಿಗಳು, ಸಾರ್ವಜನಿಕರು ಹೋರಾಟಕ್ಕೆ ಮುಂದಾಗಿದ್ದಾರೆ.

ಏನಿದು ವಿವಾದ?

ಎಂಸಿಎಫ್ ಕಾರ್ಖಾನೆ 1971ರಲ್ಲಿ ಮಂಗಳೂರಿನಲ್ಲಿ ಆರಂಭವಾಗಿದೆ. ಕೆಮಿಕಲ್ಸ್ ಮತ್ತು ರಸಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗೆ 55 ವರ್ಷಗಳೇ ಕಳೆದಿವೆ. ಇದರಲ್ಲಿ 15 ವರ್ಷ ಸರ್ಕಾರಿ, 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ Manglore chemical & Fertilizer ಎಂಬ ಹೆಸರು ಮಾತ್ರ ಬದಲಾಗಿರಲಿಲ್ಲ. ಆದರೆ ಕಳೆದ ಆರು ತಿಂಗಳುಗಳಿಂದ 55 ವರ್ಷದಿಂದ ಇದ್ದ ಕಾರ್ಖಾನೆಯ ಹೆಸರಿಗೆ ಇದೀಗ ತಿಲಾಂಜಲಿ ಇಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಉಡುಪಿ-ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್​​

ಕಂಪನಿಯ ಹೆಚ್ಚಿನ ಷೇರು ಪಡೆದ ಒಡಿಶಾ ಮೂಲದ ಪ್ಯಾರಾದೀಪ್ ಪಾಸ್ಫೇಟ್ ಕಂಪನಿ ಅರ್ಧ ಶತಮಾನದ ಹೆಸರನ್ನು ಅಳಿಸಿ ‘ಪ್ಯಾರಾದೀಪ್ ಪಾಸ್ಫೇಟ್ ಕಂಪನಿ’ ಎಂದು ಹೆಸರು ಬದಲಾವಣೆ ಮಾಡಿದೆ. ಆ ಮೂಲಕ ಮಂಗಳೂರಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮಂಗಳೂರಿನ ಮಣ್ಣು, ಗಾಳಿ, ನೀರು, ಹಣ ಎಲ್ಲವೂ ಬೇಕು ಆದರೆ ಹೆಸರು ಮಾತ್ರ ಇಲ್ಲಿಯದ್ದು ಬೇಡ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಡಿತ ಸಾಧಿಸುತ್ತಿದ್ದಂತೆಯೇ ಮೂಲ ಹೆಸರಗೇ ಕೈಹಾಕಿದ ಕಂಪನಿ

1976ರಲ್ಲಿ ಎಂಸಿಎಫ್ ಕಂಪನಿ ಅಮೋನಿಯಾ ಮತ್ತು ಯೂರಿಯಾ ಉತ್ಪಾದನೆಯನ್ನು ಆರಂಭಿಸಿತ್ತು. ಆ ಬಳಿಕ ವಿದ್ಯುತ್ ಅಭಾವದಿಂದ ಕಂಪನಿ ನಷ್ಟಕ್ಕೆ ಸಿಲುಕಿತ್ತು. ನಷ್ಟದ ನಡುವೆಯೇ 1991ರಲ್ಲಿ ಆಡಳಿತವನ್ನು ವಿಜಯ ಮಲ್ಯ ನೇತೃತ್ವದ ಯುಬಿ ಕಂಪನಿ ವಹಿಸಿಕೊಂಡಿತ್ತು. ಅಲ್ಲಿಂದ ಮತ್ತೆ ಏಳುಬೀಳುಗಳನ್ನು ಕಂಡ ಕಂಪನಿ 2015 ರಿಂದ ಉತ್ತಮ ಲಾಭದೊಂದಿಗೆ ಪ್ಯಾರಾದೀಪ್ ಕಂಪನಿ ಷೇರುಗಳನ್ನು ಪಡೆದುಕೊಂಡಿದೆ. ಆದರೆ ಪ್ಯಾರಾದೀಪ್ ಕಂಪನಿ ಹಿಡಿತ ಸಾಧಿಸುತ್ತಿದ್ದಂತೆಯೇ ಮೂಲ ಹೆಸರನ್ನೇ ಬದಲಾವಣೆ ಮಾಡಿದೆ.

ಕಂಪನಿ 35 ವರ್ಷ ಷೇರು ಒಡೆತನದಲ್ಲಿದ್ದರೂ ಹೊಸ ಬಂಡವಾಳವನ್ನು ಕಂಪನಿ ಮಾಡಿಲ್ಲ. ಎಂಸಿಎಫ್ ತನ್ನ ಸ್ವಂತ ಆದಾಯ ಮತ್ತು ಬ್ಯಾಂಕ್ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಿದೆ. ಶೇಕಡಾ 90 ಉದ್ಯೋಗಗಳು ಸ್ಥಳೀಯರಿಗೆ ಮತ್ತು ರಾಜ್ಯದ ಯುವ ಜನತೆಗೆ ಮೀಸಲಾಗಿದ್ದರೂ ಇದೀಗ ಅರ್ಧದಷ್ಟು ಉದ್ಯೋಗವನ್ನು ಕಡಿತಗೊಳಿಸಲಾಗಿದೆ. ಈ ಅನ್ಯಾಯದ ವಿರುದ್ಧ ಎಂಸಿಎಫ್ ಕಂಪನಿಯ ಮಾಜಿ ಉದ್ಯೋಗಿಗಳು ಸಿಡಿದೆದ್ದಿದ್ದಾರೆ‌‌.

ಎಂಸಿಎಫ್ ಹೆಸರು ಮಂಗಳೂರಿನ ಜೊತೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ನೆಲದ ಅಸ್ಮಿತೆಯ ಗುರುತಾಗಿದೆ. ಮಂಗಳೂರಿನ ಜೊತೆಗೆ 55 ದಶಕಗಳ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದ ಕಂಪನಿ ಈಗ ಹೆಸರು ವಿಲೀನದ ಜೊತೆಗೆ ಅವಿನಾಭಾವ ಸಂಬಂಧ ಇತಿಹಾಸದ ಪುಟ ಸೇರಿದೆ. ಇದರ ವಿರುದ್ಧ ಹೋರಾಟಕ್ಕೆ ಜನಪ್ರತಿನಿಧಿಗಳು ಸಹ ಪಕ್ಷಾತೀತವಾಗಿ ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್​

ಹೆಸರು ಬದಲಾವಣೆಯ ವಿರುದ್ದ ಆಕ್ರೋಶ ವ್ಯಕ್ತವಾಗಿರುವುದು ಕಂಪನಿಯ ಗಮನಕ್ಕೂ ಬಂದಿದೆ. ಹೀಗಾಗಿ ಮುಂದೆ Manglore chemical & Fertilizer ಹೆಸರನ್ನು ಸಹ ಹಾಕುವುದಾಗಿ ಹೇಳಿದೆ. ಮುಂದೆ ಈ ರೀತಿಯ ಕಂಪನಿಗಳ ಹೆಸರು ಬದಲಾವಣೆ ಮಾಡದಂತೆ ಪ್ರತ್ಯೇಕ ಮಸೂದೆ ತರುವ ಬಗ್ಗೆಯೂ ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳು ಹೇಳಿದ್ದಾರೆ. ನಾಮಫಲಕದಲ್ಲಿ ತಕ್ಷಣ ಹೆಸರನ್ನು ಬದಲಾಯಿಸಬೇಕೆಂದು ಆಗ್ರಹಗಳು ಜೋರಾಗಿದೆ. ಒಟ್ಟಿನಲ್ಲಿ ಹೆಸರು ಬದಲಾವಣೆಯ ವಿರೋಧ ಮಂಗಳೂರಿನಲ್ಲಿ ಆಕ್ರೋಶದ ಕಿಚ್ಚನ್ನು ಎಬ್ಬಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಬ್ಬಿನ ಹಾಲು ಕುಡಿಯುವುದಕ್ಕಿಂತಲೂ ನೇರವಾಗಿ ಕಬ್ಬು ತಿನ್ನುವುದೇ ಒಳ್ಳೆಯದಂತೆ! ಯಾಕೆ ಗೊತ್ತಾ? – Kannada News | Sugarcane Milk vs. Whole Sugarcane: Nutritional Comparison

Sugarcane Milk Vs. Whole SugarcaneImage Credit source: Getty Images

ಕಬ್ಬು (Sugarcane) ಎಷ್ಟೇ ಫ್ರೆಶ್ ಆಗಿ ಸಿಕ್ಕರೂ ಕೂಡ ಅದನ್ನು ತಿನ್ನುವ ಉತ್ಸಾಹ ಎಲ್ಲರಲ್ಲಿಯೂ ಇರುವುದಿಲ್ಲ. ಹಾಗಾಗಿ ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಮಾರುಕಟ್ಟೆ, ಬಜಾರ್‌ ಹೀಗೆ ಎಲ್ಲಿ ನೋಡಿದರೂ ಇದರ ವ್ಯಾಪಾರ ವ್ಯಾಪಕವಾಗಿ ಕಂಡುಬಂದರೂ ಕೂಡ ಮುಗಿಬಿದ್ದು ಖರೀದಿ ಮಾಡುವವರು ಬಹಳ ಕಡಿಮೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಇದನ್ನು ಪೂಜೆ ಮತ್ತು ಅಲಂಕಾರಕ್ಕಾಗಿ ಮನೆಗೆ ತರಲಾಗುತ್ತದೆ ಆದರೆ ತಿನ್ನುವ ಉತ್ಸುಕತೆ ಮಾತ್ರ ಯಾರಲ್ಲಿಯೂ ಇರುವುದಿಲ್ಲ. ಕೆಲವರು ಕಬ್ಬಿನ ರಸವನ್ನು (Sugarcane Milk) ಕುಡಿಯಲು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತಾ… ಆರೋಗ್ಯ ತಜ್ಞರು ಕಬ್ಬನ್ನು ನೇರವಾಗಿ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಹೌದು, ಕಬ್ಬಿನ ರಸದ ಸೇವನೆಯಿಂದ ಪ್ರಯೋಜನವಿದ್ದರೂ ಕೂಡ, ಕಬ್ಬು ತಿನ್ನುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಹಾಗಾದರೆ ಕಬ್ಬನ್ನು ನೇರವಾಗಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು? ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಕಬ್ಬು ಸೇವನೆ ಮಾಡುವುದರಿಂದಾಗುವ ಪ್ರಯೋಜನಗಳು:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಕಬ್ಬು ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಿದ್ದು ಕರುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕ್ರಮೇಣ ಅಜೀರ್ಣ ಕಡಿಮೆಯಾಗುತ್ತದೆ. ಗ್ಯಾಸ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲ, ಕಬ್ಬು ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ ಏಕೆಂದರೆ, ಅದು ಹಸಿವನ್ನು ನಿಯಂತ್ರಿಸುತ್ತದೆ. ಹಾಗಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಕಬ್ಬಿನಲ್ಲಿ ನಾರು ಅಧಿಕವಾಗಿರುವುದರಿಂದ, ಆಹಾರದಲ್ಲಿರುವ ಸಕ್ಕರೆ ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಮಧುಮೇಹ ಇರುವವರಿಗೂ ಇದು ಒಳ್ಳೆಯದು. ಆದರೆ ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.

ಯಕೃತ್ತಿನ ಆರೋಗ್ಯಕ್ಕೂ ಒಳ್ಳೆಯದು:

ಕಬ್ಬು ಯಕೃತ್ತಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಕಬ್ಬಿನ ರಸದಲ್ಲಿರುವ ಪೋಷಕಾಂಶಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಯಕೃತ್ತು ಶುದ್ಧವಾಗುತ್ತದೆ.

ದೇಹದ ಸಮತೋಲನಕ್ಕೆ ಸಹಕಾರಿ:

ಇದು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿನ ರಸ ಕೂಡ ಆರೋಗ್ಯಕ್ಕೆ ಒಳ್ಳೆಯದು, ಇದು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಚರ್ಮ ಮೃದುವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಹೃದಯದ ಆರೋಗ್ಯಕ್ಕೆ ಒಳ್ಳೆಯದು:

ಕಬ್ಬಿನಲ್ಲಿರುವ ಫೈಬರ್, ವಿಟಮಿನ್‌ ಮತ್ತು ಖನಿಜಗಳು ಹೃದಯಕ್ಕೂ ಪ್ರಯೋಜನಕಾರಿ. ಇದು ಯಕೃತ್ತಿನಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇಅಲ್ಲ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಕಬ್ಬು ತಿನ್ನುವ ಮೊದಲು ಈ ವಿಷಯಗಳು ನೆನಪಿರಲಿ;

ಸಾಮಾನ್ಯವಾಗಿ ಕಬ್ಬು ತಿನ್ನುವುದು ಒಳ್ಳೆಯದಾದರೂ, ಕೆಲವು ಅಂಶಗಳನ್ನು ಗಮನಿಸಬೇಕು. ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಧುಮೇಹ ಇರುವವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ತಿನ್ನಬೇಕು. ಜೊತೆಗೆ ಹಲ್ಲಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ತಿಂದ ನಂತರ ತಕ್ಷಣ ಹಲ್ಲುಜ್ಜುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈ ಕಾರ್ಯಕರ್ತ ಆತ್ಮಹತ್ಯೆ, ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಡ್ರೈವರ್ – Kannada News | Congress Worker Suicide In Hospet And tractor Driver Dies during Reels at Kalaburagi

ವಿಜಯನಗರ/ಕೊಪ್ಪಳ, (ಜನವರಿ.22): ಕಾಂಗ್ರೆಸ್ ಕಾರ್ಯಕರ್ತನೋರ್ವ (Congress Worker)  ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Suicide)  ಶರಣಾಗಿರುವ ಘಟನೆ ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆಯ ರೈಲು ನಿಲ್ದಾಣದ ಬಳಿ ನಡೆದಿದೆ. ಕೊಪ್ಪಳ (Koppal) ಜಿಲ್ಲೆ ಕಾರಟಗಿ ನಿವಾಸಿ ಕೃಷ್ಣ ಮೇಗೂರು(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಕೃಷ್ಣ ಸಚಿವ ಭೈರತಿ ಸುರೇಶ್ ಅವರ ಬಳಿ ಕೆಲಸ ಮಾಡುತ್ತಿದ್ದ. ಆದ್ರೆ, ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಆದ್ರೆ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದು,  ಸಾವಿಗೆ ಕಾರಣ ತಿಳಿದುಬಂದಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡ ಡ್ರೈವರ್

ಕಲಬುರಗಿ: ರೀಲ್ಸ್ ಹುಚ್ಚಿಗೆ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಪ್ರಾಣ ಕಳೆದುಕೊಂಡಿರುವ ಘಟನೆ
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದಲ್ಲಿ ಘಟನೆ. ನಿನ್ನೆ(ಜನವರಿ 21) ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ. ಮಹಾಗಾಂವ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ. ಕಬ್ಬಿನ ಗದ್ದೆಯಲ್ಲಿ ನೇಗಿಲು ಹೊಡೆಯುತ್ತಿದ್ದ ವೇಳೆ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ತಹಶೀಲ್ದಾರ್​​ರಿಂದ ಕಿರುಕುಳ ಆರೋಪ: ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್

ವೃತ್ತಿಯಲ್ಲಿ ಚಾಲಕನಾಗಿದ್ದ ಲೋಕೇಶ್​, ಟ್ರ್ಯಾಕ್ಟ‌ರ್ ಚಲಿಸುವಾಗಲೇ ಒಂದು ಕೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿರುತ್ತಿದ್ದ ರೀಲ್ಸ್ ಮಾಡುತ್ತಿದ್ದ. ಈ ವೇಳೆ ಕಾಲು ಜಾರಿ ಟ್ರಾಕ್ಟರ್​​ ಚಕ್ರದ ಕೆಳಗೆ ಬಿದ್ದಿದ್ದಾನೆ. ಈ ಸಂಬಂಧ ಮಹಾಂಗಾವ್ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಆತ್ಮಹತ್ಯೆಗೆ ಶರಣು

ಹಾವೇರಿ: ಸಾಲಬಾಧೇ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ. ರವಿಯಪ್ಪ ಐರಣಿ 50 ವರ್ಷ ಆತ್ಮಹತ್ಯೆಗೆ ಶರಣಾದ ರೈತ. ಒಂದು ಎಕರೆ ಜಮೀನು ಹೊಂದಿದ್ದ ರವಿಯಪ್ಪ ಐರಣಿ, 8 ಲಕ್ಷ ಸಾಲ ಮಾಡಿಕೊಂಡಿದ್ದ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ಪರಿಶೀಲಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಠಗಳಿಗೆ ಜಾಗ, ಉದ್ಯೋಗಾಕಾಂಕ್ಷಿಗಳಿಗೂ ಸುಯೋಗ: ಸಚಿವ ಸಂಪುಟ​​ ಸಭೆಯಲ್ಲಿ ಮಹತ್ವದ ನಿರ್ಧಾರ – Kannada News | Karnataka Cabinet Approves 5 Year Age Relaxation for Civil Services and Housing for Nomads

ಬೆಂಗಳೂರು, ಜನವರಿ 22: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಗೆ ಕ್ಯಾಬಿನೆಟ್​​ ಒಪ್ಪಿದ್ದರೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಹಲವು ಮಹತ್ವದ ನಿರ್ದಾರಗಳು ಕ್ಯಾಬಿನೆಟ್​​ ಸಭೆಯಲ್ಲಿ ಆಗಿವೆ

ವಯೋಮಿತಿ ಸಡಿಲಿಕೆ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು,  ಡಿ.31 2027 ವರೆಗೆ ಹೊರಡಿಸಲಾಗಿರುವ ಎಲ್ಲ ಅಧಿಸೂಚನೆಗಳಿಗೆ ಇದು ಅನ್ವಯ ಆಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಕಾಂಗ್ರೆಸ್​​ ಭವನಕ್ಕೆ ಜಮೀನು, ಬಿ-ಖಾತಾದಾರರಿಗೆ ಜಾಮೂನು

ಮನೆ ನಿರ್ಮಾಣಕ್ಕೆ ಸಹಾಯ ಹಸ್ತ

ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸಕರಕಾರ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 100 ಕೋಟಿ ಮೊತ್ತದಲ್ಲಿ, 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹಿಂದುಳಿದ, ದಲಿತ ಮಠಗಳಿಗೆ ಜಾಗ ಮಂಜೂರು

22 ಹಿಂದುಳಿದ, ದಲಿತ ಮಠಗಳಿಗೆ ಜಾಗ ಮಂಜೂರಿಗೂ ಕ್ಯಾಬಿನೆಟ್​​ ಒಪ್ಪಿಗೆ ಸಿಕ್ಕಿದ್ದು, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ ಜಾಗ ಮಂಜೂರಿಗೆ ನಿರ್ಧರಿಸಲಾಗಿದೆ. ಆ ಪ್ರಕಾರ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ. 57 ಮತ್ತು 58ರಲ್ಲಿರುವ ಸರ್ಕಾರಿ ಜಮೀನು ಮಠಗಳಿಗೆ ಸಿಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:01 pm, Thu, 22 January 26

Source link

Judicial Separation: ನಿಮ್ಮ ವಿವಾಹಕ್ಕೆ ತಾತ್ಕಾಲಿಕ ಬ್ರೇಕ್ ಕೊಡುವ ಕಾನೂನು ಮಾರ್ಗಗಳು: ಅಡ್ವೊಕೇಟ್ ಅನಿಕ್ – Kannada News | Legal Ways to Break Your Marriage by Advocate Anik M Iktear Uddin

ಅಡ್ವೊಕೇಟ್ ಅನಿಕ್ ಎಂ ಇಕ್ತಿಯಾರ್ ಉದ್ದಿನ್

ಅಡ್ವೊಕೇಟ್ ಅನಿಕ್ ಎಂ ಇಕ್ತಿಯಾರ್ ಉದ್ದಿನ್ (Advocate Anik M Iktear Uddin) ಪ್ರೈಮ್ ಲೀಗಲ್‌ ಎನ್ನುವ ಕಾನೂನು ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದಾರೆ. ಇವರ ಪತ್ನಿ ಹಾಗೂ ಪಾರ್ಟ್ನರ್ ಆದ ಅಡ್ವೊಕೇಟ್ ಆಯಂತಿಕಾ ಮಂಡಲ್ ಜೊತೆ ಸೇರಿ ನಡೆಸುತ್ತಿರುವ ಈ ಸಂಸ್ಥೆ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ದೇಶಾದ್ಯಂತ ಕಚೇರಿಗಳನ್ನು ಹೊಂದಿದೆ. ಕ್ರಿಮಿನಲ್ ಲಾ, ಸೈಬರ್ ಕ್ರೈಮ್, ಗೃಹ ಕಿರುಕುಳ, ಫ್ಯಾಮಿಲಿ ಲಾ ಮೊದಲಾದ ಕಾನೂನು ಕ್ಷೇತ್ರಗಳಲ್ಲಿ ಪ್ರೈಮ್ ಲೀಗಲ್ ಹೆಸರುವಾಸಿಯಾಗಿದೆ. ದೇಶದೆಲ್ಲೆಡೆ ಫ್ಯಾಮಿಲಿ ಕೋರ್ಟ್​ಗಳು ಮತ್ತು ಹೈಕೋರ್ಟ್​ಗಳಲ್ಲಿ ಇವರು ಕೇಸ್​ಗಳನ್ನು ನಡೆಸಿ ಗೆಲ್ಲಿಸಿದ್ದಾರೆ.

ಇವತ್ತಿನ ಕಾಲಘಟ್ಟದಲ್ಲಿ ವೈವಾಹಿಕ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ, ಭಾರತೀಯ ಕಾನೂನಿನಲ್ಲಿ ನ್ಯಾಯಾಂಗೀಯ ಪ್ರತ್ಯೇಕತೆ (Judicial Separation) ಎಂಬ ಸೂಕ್ಷ್ಮ ಪರಿಹಾರ ಇದೆ. ಸಾಮಾನ್ಯವಾಗಿ “ಕಾನೂನು ವಿರಾಮ” ಎಂದು ವರ್ಣಿಸಲ್ಪಡುವ ನ್ಯಾಯಾಂಗೀಯ ಪ್ರತ್ಯೇಕತೆಯು ಪತಿ ಮತ್ತು ಪತ್ನಿಗೆ ವಿವಾಹಬಂಧ ಮುರಿಯದೆ ಪ್ರತ್ಯೇಕವಾಗಿ ಬದುಕಲು ಅವಕಾಶ ನೀಡುತ್ತದೆ. ಇವರ ಸಂದರ್ಶನದ ಕೆಲ ಮುಖ್ಯ ಅಂಶಗಳು ಇಲ್ಲಿ ಮುಂದಿವೆ:

ಪ್ರಶ್ನೆ 1: ನ್ಯಾಯಾಂಗೀಯ ಪ್ರತ್ಯೇಕತೆ ಎಂದರೆ ಏನು?

ಅಡ್ವೊಕೇಟ್ ಅನಿಕ್: ನ್ಯಾಯಾಂಗೀಯ ಪ್ರತ್ಯೇಕತೆ ಎಂಬುದು ಕೋರ್ಟ್ ಅನುಮೋದಿಸುವ ವ್ಯವಸ್ಥೆಯಾಗಿದೆ. ಇಲ್ಲಿ ವೈವಾಹಿಕ ಸಮಸ್ಯೆ ಎದುರಿಸುತ್ತಿರುವ ಸತಿಪತಿ ಜೋಡಿಗೆ ಕೆಲ ಅವಧಿ ಬೇರೆ ಇರಲು ಅವಕಾಶ ಕೊಡಲಾಗುತ್ತದೆ. ಈ ಬೇರ್ಪಡೆ ಅವಧಿಯಲ್ಲೂ ಅವರಿಬ್ಬರು ಕಾನೂನು ಪ್ರಕಾರ ಗಂಡ ಹೆಂಡತಿಯೇ ಆಗಿರುತ್ತಾರೆ. ಜೊತೆಯಾಗಿ ಬದುಕಲೇಬೇಕು ಎನ್ನುವ ಒತ್ತಡ ಇರುವುದಿಲ್ಲ.

ಇದು ಶಾಶ್ವತವಾಗಿ ವಿವಾಹವನ್ನು ಮುಕ್ತಾಯಗೊಳಿಸುವ ವಿಚ್ಛೇದನಕ್ಕಿಂತ ಭಿನ್ನವಾಗಿದೆ. ನ್ಯಾಯಾಂಗೀಯ ಪ್ರತ್ಯೇಕತೆಯು ಕಾನೂನು, ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಪ್ರತಿಬಿಂಬಿಸುವ ಅಥವಾ ಪುನರ್ಮಿಲನದ ಅವಕಾಶವನ್ನು ನೀಡುತ್ತದೆ. ವಿವಾಹವನ್ನು ಶಾಶ್ವತವಾಗಿ ಮುಕ್ತಾಯಗೊಳಿಸುವ ಮುನ್ನ ತಾತ್ಕಾಲಿಕ ವಿರಾಮದಂತೆ ಕಾರ್ಯನಿರ್ವಹಿಸುತ್ತದೆ.

ಪ್ರಶ್ನೆ 2: ಈ ದೂರು ಯಾರು ಮಾಡಬಹುದು?

ಅಡ್ವೊಕೇಟ್ ಅನಿಕ್: ವಿವಾಹಿತ ಜೋಡಿಯು ಯಾವುದೇ ಧರ್ಮಭೇದವಿಲ್ಲದೆ ದೂರು ಸಲ್ಲಿಸಬಹುದು.

ಪ್ರಶ್ನೆ 3: ಎಲ್ಲಾ ಧರ್ಮಗಳಿಗೆ ನ್ಯಾಯಾಂಗೀಯ ಪ್ರತ್ಯೇಕತೆಗಾಗಿ ಯಾವ ಕಾರಣಗಳನ್ನು ಪರಿಗಣಿಸಲಾಗುತ್ತದೆ?

ಅಡ್ವೊಕೇಟ್ ಅನಿಕ್: ನ್ಯಾಯಾಂಗೀಯ ಪ್ರತ್ಯೇಕತೆ ಸಾಮಾನ್ಯವಾಗಿ ವಿವಾಹ ಬೇರ್ಪಾಟಿನೇನಾದರೂ ಹಕ್ಕುಗಳ ಆಧಾರಗಳನ್ನು ಅನುಸರಿಸುತ್ತದೆ—ಹಿಂಸಾಚಾರ, ವ್ಯಭಿಚಾರ, ತ್ಯಜನೆ ಮುಂತಾದವುಗಳನ್ನು ಒಳಗೊಂಡಂತೆ—ಅಥವಾ ದಂಪತಿಗಳು ಜೊತೆಯಾಗಿ ಬದುಕಲು ಸಾಧ್ಯವಾಗದ ಸಂದರ್ಭದಲ್ಲಿ, ಮದುವೆಯನ್ನು ಮುಗಿಸದೇ ಸ್ವವಿಕಾಸಕ್ಕೆ ಕಾನೂನಾತ್ಮಕ ಅವಕಾಶ ಬೇಕಾದಾಗ ಅಥವಾ ಮಕ್ಕಳ ಉತ್ತಮ ಭವಿಷ್ಯದಿಗಾಗಿ ಈ ಪರಿಹಾರವನ್ನು ಬೇಡಿಕೊಳ್ಳುತ್ತಾರೆ.

ಪ್ರಶ್ನೆ 4: ಹಿಂದೂ ವಿವಾಹ ಕಾಯ್ದೆಯಲ್ಲಿ ನ್ಯಾಯಾಂಗೀಯ ಪ್ರತ್ಯೇಕತೆಯನ್ನು ವಿವರಿಸಬಹುದೇ?

ಅಡ್ವೊಕೇಟ್ ಅನಿಕ್: — ಹೌದು, ಮೇಲ್ಕಂಡ ಕಾರಣಗಳ ಮೇರೆಗೆ ಅಥವಾ ಸೂಕ್ತ ಕಾರಣಗಳಿದ್ದರೆ ಹೆಣ್ಣುಅಥವಾ ಗಂಡು ನ್ಯಾಯಾಂಗೀಯ ಪ್ರತ್ಯೇಕತೆಗೆ ಬೇಡಿಕೊಳ್ಳಬಹುದು.

ಪ್ರಶ್ನೆ 5: ಮುಸ್ಲಿಂ ಕಾನೂನಿನಡಿಯಲ್ಲಿ ನ್ಯಾಯಾಂಗೀಯ ಪ್ರತ್ಯೇಕತೆ ಪಡೆಯುವುದು ಹೇಗೆ ಎಂದು ವಿವರಿಸಬಹುದೇ?

ಅಡ್ವೊಕೇಟ್ ಅನಿಕ್: ಮೊದಲು, ನಿರ್ದಿಷ್ಟ ಸಂಹಿತಾ ಕಾನೂನು ಇಲ್ಲದಿದ್ದರೂ ಸಾಮಾನ್ಯವಾಗಿ ನಾವು ಮೂಲ ಮಹಾಮಂಡಲದಂತೆ ದಾವೆ ಸಲ್ಲಿಸುತ್ತೇವೆ—Order VII, Rule 1 CPC ಅನ್ನು ಮುಸ್ಲಿಂ ಮಹಿಳೆಯರ ವಿವಾಹ ವಿಚ್ಛೇದನ ಕಾಯ್ದೆ, 1939 ರ ವಿಭಾಗ 2 ಜೊತೆಗೆ ಉಲ್ಲೇಖಿಸುತ್ತಾ ಮೇಲ್ಕಂಡ ಕಾರಣಗಳನ್ನು ದಾಖಲಿಸಿ. ಪೂರ್ಣ ವಿಚಾರಣೆಯ ನಂತರ—ಅಥವಾ ಮಧ್ಯಸ್ಥತಾ ಕೇಂದ್ರದಲ್ಲಿ ತೀರ್ಮಾನಗೊಂಡ ಪರಸ್ಪರ ಒಪ್ಪಂದದ ಮೂಲಕ—ಕೋರ್ಟ್ ಪಕ್ಷಾಧಾರಗಳಿಗೆ ಮದುವೆಗಳಿಂದ ವಿರಾಮ ಪಡೆಯಲು ಅನುಮತಿಸಬಹುದು.

ಪ್ರಶ್ನೆ 6: ವಿಶೇಷ ವಿವಾಹ ಕಾಯಿದೆ ಅಡಿ ಅಂತರಧಾನ್ಯದ ಅಥವಾ ನಾಗರಿಕ ಮದುವೆಗಳು, ಕ್ರೈಸ್ತ ಮತ್ತು ಪಾರ್ಸಿ ಕಾನೂನುಗಳಲ್ಲಿ ನ್ಯಾಯಾಂಗೀಯ ಪ್ರತ್ಯೇಕತೆಯನ್ನು ಒಗೆಯುತ್ತವೆ?

ಅಡ್ವೊಕೇಟ್ ಅನಿಕ್: ಹೌದು, ವಿಶೇಷ ವಿವಾಹ ಕಾಯಿದೆ, 1954ರ ವಿಭಾಗ 23, ಭಾರತೀಯ ವಿಚ್ಛೇದನ ಕಾಯಿದೆ  1869ರ ವಿಭಾಗ 22 (ಕ್ರೈಸ್ತರಿಗೆ ಅನ್ವಯ) ಮತ್ತು ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯಿದೆ, 1936ರ ವಿಭಾಗ 34 ಅಡಿ ಸಂಬಂಧಿತ ಕಾರಣಗಳ ಆಧಾರದ ಮೇಲೆ ಯಾವುದಾದರು ಪಕ್ಷವೇ ನ್ಯಾಯಾಂಗೀಯ ಪ್ರತ್ಯೇಕತೆಗೆ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ 7: ಲಿವ್​ಇನ್ ಟುಗೆದರ್​ನಲ್ಲಿರುವವರು ನ್ಯಾಯಾಂಗೀಯ ಪ್ರತ್ಯೇಕತೆಗೆ ಅರ್ಜಿ ಸಲ್ಲಿಸಬಹುದೆ?

ಅಡ್ವೊಕೇಟ್ ಅನಿಕ್: — ನ್ಯಾಯಾಂಗೀಯ ಪ್ರತ್ಯೇಕತೆ ಕೇವಲ ಕಾನೂನಾತ್ಮಕವಾಗಿ ಮಾನ್ಯವಾದ ಮದುವೆಗಳಿಗೆ ಅನ್ವಯಿಸುತ್ತದೆ. ಆದಾಗ್ಯೂ, ಲೈವ್ ಇನ್ ಟುಗೆದರ್​ನಲ್ಲಿರುವವರಿಗೆ ಕೆಲವು ಪರಿಹಾರ ವಿಧಾನಗಳಿವೆ. ಉದಾಹರಣೆಗೆ, ಮಹಿಳೆಯರ ರಕ್ಷಣೆ ಕಾಯ್ದೆ 2005 ಅಡಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರಿಗೆ ರಕ್ಷಣೆ ಇರುತ್ತದೆ.

ಪ್ರಶ್ನೆ 8: ನ್ಯಾಯಾಂಗೀಯ ಪ್ರತ್ಯೇಕತೆಯ ವೇಳೆ ಮೈಂಟೆನೆನ್ಸ್ ಬಗ್ಗೆ ಏನು?

ಅಡ್ವೊಕೇಟ್ ಅನಿಕ್: ಪೋಷಣೆ (ಮೇಂಟನನ್ಸ್) ಸಾಮಾನ್ಯವಾಗಿ ಡೈವೋರ್ಸ್ ಅರ್ಜಿ ಮೂಲಕ ಕೇಳಲಾಗುತ್ತದೆ. ಪೂರ್ಣ ವಿಚಾರಣೆ ನಂತರ ಕೋರ್ಟ್ ಮಧ್ಯಂತರ ಅಥವಾ ಅಂತಿಮ ಮೇಂಟನನ್ಸ್ ನ್ನು ನಿಗದಿಪಡಿಸಬಹುದು, ಅಥವಾ ವಿಚಾರಣೆಯ ವೇಳೆ ಮೊತ್ತ ನಿರ್ಧರಿಸಬಹುದು. ಕೆಲ ಸಂದರ್ಭಗಳಲ್ಲಿ ಎರಡೂ ಕಡೆಯವರು ಮಧ್ಯಸ್ಥತೆ ಮೂಲಕ ಮೈಂಟೆನೆನ್ಸ್ ಬಗ್ಗೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಅಥವಾ ಪ್ರೈವೇಟ್ ಅಗ್ರೀಮೆಂಟ್ ಮಾಡಿಕೊಳ್ಳಬಹುದು.

ಪ್ರಶ್ನೆ 9: ನ್ಯಾಯಾಂಗೀಯ ಪ್ರತ್ಯೇಕತೆ ಬಹಳ ಕಾಲದವರೆಗೆ ಇದ್ದರೆ ಅದು ಡಿವೋರ್ಸ್​ಗೆ (divorce) ಕಾರಣವಾಗಬಹುದೇ?

ಅಡ್ವೊಕೇಟ್ ಅನಿಕ್: ಹೌದು. ಪುನರ್ಮಿಲನ ಸಂಭವಿಸದಿದ್ದರೆ ಮತ್ತು ನಿರಂತರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ನ್ಯಾಯಾಂಗೀಯ ಪ್ರತ್ಯೇಕತೆ ಆದೇಶವು ಹಲವು ವೈಯಕ್ತಿಕ ಕಾನೂನುಗಳ ಅಡಿ ವಿವಾಹ ವಿಚ್ಛೇದನಕ್ಕೆ ಆಧಾರವಾಗಬಹುದು. ವ್ಯವಹಾರಿಕವಾಗಿ ಇದು ವಿವಾಹ ಮತ್ತು ವಿಚ್ಛೇದನದ ನಡುವಿನ ಮಧ್ಯ ಹಂತವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಶ್ನೆ 10: ಇಂದಿನ ಸಮಾಜದಲ್ಲಿ ನ್ಯಾಯಾಂಗೀಯ ಪ್ರತ್ಯೇಕತೆ ಯಾಕೆ ಮುಖ್ಯ?

ಅಡ್ವೊಕೇಟ್ ಅನಿಕ್: ನ್ಯಾಯಾಂಗೀಯ ಪ್ರತ್ಯೇಕತೆ ವೈವಾಹಿಕ ಕರಕಶತೆಯ ಮೇಲೆ ಕಾನೂನಿನ ಮಾನವೀಯ ಹಾಗೂ ಸಮಬಾಲಿತ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ವಿಫಲವಾಗುತ್ತಿರುವ ಮದುವೆಗಳಿಗೆ ತಕ್ಷಣವೇ ವಿಲಾಸಿ ಅಂತಿಮ ನಿರ್ಣಯ ಅಗತ್ಯವಿಲ್ಲ. ಈ ಪರಿಹಾರವು ಗೌರವ, ಮಾನಸಿಕ ಕ್ಷೇಮ ಮತ್ತು ಸಾಮಾಜಿಕ ವಾಸ್ತವಿಕತೆಯನ್ನು ರಕ್ಷಿಸುತ್ತದೆ—ಕೆಲುದಿನಗಳಲ್ಲಿ ದೂರವೇ ಗುಣಪಡಿಸಬಹುದು ಎಂಬ ನಂಬಿಕೆಯನ್ನು ಮಾನ್ಯಗೊಳಿಸುತ್ತದೆ.

ಬೆಂಗಳೂರು ನಗರದ ಪ್ರಮುಖ ವಿಚ್ಛೇದನ ವಕೀಲರಾದ ಅಡ್ವೊಕೇಟ್ ಅನಿಕ್ ಅವರು, ನ್ಯಾಯಾಂಗೀಯ ಪ್ರತ್ಯೇಕತೆ ವಿಶೇಷವಾಗಿ ದುರ್ಬಲ ಪತ್ನಿ ಹಾಗೂ ಮಕ್ಕಳ ಪೋಷಣೆ, ಸಂರಕ್ಷಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ರೂಪುಗೊಂಡಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ವಿವಾಹ ಸಂಬಂಧಿತ ವಿಚಾರಗಳ ಕುರಿತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಅವರು ಬಲವಾಗಿ ಶಿಫಾರಸು ಮಾಡಿದ್ದಾರೆ.

Source link

ಖ್ಯಾತ ಗಾಯಕಿ ಎಸ್ ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ – Kannada News | Legendary singer S Janaki’s son Murali Krishna passed away

ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕಿ ಎಸ್ ಜಾನಕಿ (S Janaki) ಅವರ ಪುತ್ರ ಮುರಳಿ ಕೃಷ್ಣ ನಿಧನ ಆಗಿದ್ದಾರೆ. ಮುರಳಿ ಕೃಷ್ಣ ಅವರಿಗೆ 65 ವರ್ಷ ವಯಸ್ಸಾಗಿತ್ತು. ಎಸ್ ಜಾನಕಿ ಅವರ ಏಕೈಕ ಪುತ್ರ ಆಗಿದ್ದರು ಮುರಳಿ ಕೃಷ್ಣ. ಇಂದು (ಜನವರಿ 22) ಅವರಿಗೆ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೋಕ ವ್ಯಕ್ತಪಡಿಸಿದ್ದು, ಜಾನಕಿ ಅವರ ಪರಿಸ್ಥಿತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಎಸ್ ಜಾನಕಿ ಅವರು ಖ್ಯಾತ ಗಾಯಕಿ ಆಗಿದ್ದರೆ ಮುರಳಿ ಕೃಷ್ಣ ಅವರು ಅದ್ಭುತ ಭರತನಾಟ್ಯ ಪಟುವಾಗಿದ್ದರು. ಭರತನಾಟ್ಯ ಪ್ರವೀಣರಾಗಿದ್ದ ಅವರು ಹಲವು ಶೋಗಳನ್ನು ನೀಡಿದ್ದರು. ಕೆಲ ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿಯನ್ನೂ ಸಹ ಅವರು ಮಾಡಿದ್ದರು. ಭರತ ನಾಟ್ಯ ಮತ್ತು ಕುಚುಪುಡಿ ಪ್ರವೀಣೆಯಾಗಿದ್ದ ಉಮಾ ಎಂಬುವರನ್ನು ವಿವಾಹವಾಗಿದ್ದ ಮುರಳಿಕೃಷ್ಣ, ಇಬ್ಬರು ಹೆಣ್ಣು ಮಕ್ಕಳನ್ನು ಸಹ ಹೊಂದಿದ್ದರು. ಆದರೆ ಉಮಾ ಮತ್ತು ಮುರಳಿ ಕೃಷ್ಣ ವಿಚ್ಛೇದನ ಪಡೆದು ದೂರಾಗಿದ್ದರು.

ಇದನ್ನೂ ಓದಿ:ಕನ್ನಡದ ಸೂಪರ್ ಹಿಟ್ ಹಾಡು ಬಳಸಿಕೊಂಡ ತೆಲುಗಿನ ಸ್ಟಾರ್ ನಿರ್ದೇಶಕ

ಮುರಳಿ ಕೃಷ್ಣ ಅವರು ಕೆಲ ಸಮಯ ಮೈಸೂರಿನಲ್ಲಿಯೇ ವಾಸವಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಎಸ್ ಜಾನಕಿ ಅವರು ಸಹ ಮೈಸೂರಿನಲ್ಲೇ ಇದ್ದರು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯಂತೆ ಮುರಳಿ ಕೃಷ್ಣ ಅವರು ತಮ್ಮ ತಾಯಿಯ ಮನೆಯಾದ ಹೈದರಾಬಾದ್​​ನ ಮನೆಯಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಹಲವಾರು ಗಾಯಕರು, ಸಂಗೀತ ಕ್ಷೇತ್ರದ ಸೆಲೆಬ್ರಿಟಿಗಳು ಮುರಳಿ ಕೃಷ್ಣ ಹಠಾತ್ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿದ್ದು, ಜಾನಕಿ ಅವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲೆಂದು ಹಾರೈಸುತ್ತಿದ್ದಾರೆ.

ಎಸ್ ಜಾನಕಿ ಅವರಿಗೆ ಈಗ 87 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಅವರು ಇದ್ದ ಏಕೈಕ ಪುತ್ರನನ್ನು ಕಳೆದುಕೊಂಡು ನೋವಿಗೆ ಜಾರಿದ್ದಾರೆ. ಮುರಳಿ ಕೃಷ್ಣ ಅವರ ಅಂತಿಮ ದರ್ಶನ್ ಮತ್ತು ಅಂತಿಮ ಸಂಸ್ಕಾರದ ಮಾಹಿತಿಗಳು ಇನ್ನಷ್ಟೆ ಹೊರಬೀಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾತ್‌ರೂಮ್‌ ಟೈಲ್ಸ್‌ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟ್ರಿಕ್ಸ್‌ ಪಾಲಿಸಿ – Kannada News | Just follow these tricks to remove stains from bathroom tiles

ಸ್ನಾನಗೃಹವನ್ನು (bathroom) ಪ್ರತಿನಿತ್ಯ ಬಳಸುವ ಕಾರಣ ಅದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯವಾಗಿದೆ. ಆದ್ದರಿಂದ ಹೆಚ್ಚಿನವರು ಪ್ರತಿನಿತ್ಯ ಬಾತ್‌ರೂಮ್‌ ಕ್ಲೀನ್‌ ಮಾಡುತ್ತಾರೆ. ಹೀಗೆ ಎಷ್ಟೇ ಕ್ಲೀನ್‌ ಮಾಡಿದರೂ ಸಹ ಟೈಲ್ಸ್‌ ಮೇಲಿನ ಕಲೆಗಳು ಹಾಗೆಯೇ ಉಳಿದುಬಿಡುತ್ತವೆ. ವಿಶೇಷವಾಗಿ ಬಿಳಿ ಮತ್ತು ತಿಳಿ ಬಣ್ಣದ ಟೈಲ್ಸ್‌ ಅಂಚುಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದರಿಂದಾಗಿ ಇಡೀ ಸ್ನಾನಗೃಹವು ಕೊಳಕಾಗಿ ಕಾಣುತ್ತದೆ. ಈ ಕಲೆಗಳನ್ನು ತೆಗೆದು ಹಾಕಲು ದುಬಾರಿ ಕ್ಲೀನರ್‌ಗಳನ್ನು ಬಳಸುವ ಅವಶ್ಯಕತೆಯೇ ಇಲ್ಲ. ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಬಾತ್‌ರೂಮ್‌ ಟೈಲ್ಸ್‌ ಕ್ಲೀನ್‌ ಮಾಡಬಹುದು.

ಬಾತ್‌ರೂಮ್‌ ಟೈಲ್ಸ್‌ ಮೇಲಿನ ಕಲೆಗಳನ್ನು ಹೋಲಾಡಿಸಲು ಈ ಟಿಪ್ಸ್‌ ಪಾಲಿಸಿ:

ಅಡಿಗೆ ಸೋಡಾ ಮತ್ತು ವಿನೆಗರ್: ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾ ಮತ್ತು ವಿನೆಗರ್ ದ್ರಾವಣವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಬಳಸಲು, ಒಂದು ಬಟ್ಟಲಿನಲ್ಲಿ 2 ಟೀ ಚಮಚ ಅಡಿಗೆ ಸೋಡಾವನ್ನು ತೆಗೆದುಕೊಳ್ಳಿ. ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೊಳಕು ಟೈಲ್ಸ್‌ಗೆ ಹಚ್ಚಿ 10-15 ನಿಮಿಷಗಳ ಕಾಲ ಬಿಡಿ. ಈಗ, ಪೇಸ್ಟ್ ಮೇಲೆ ಸ್ವಲ್ಪ ಬಿಳಿ ವಿನೆಗರ್ ಸಿಂಪಡಿಸಿ. ನಂತರ, ಸ್ಕ್ರಬ್ಬರ್ ಅಥವಾ ಹಳೆಯ ಟೂತ್ ಬ್ರಷ್‌ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಇದು ಹಳದಿಗಟ್ಟಿದ ಕಲೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.

ವಿನೆಗರ್ ಮತ್ತು ನೀರಿನ ದ್ರಾವಣ: ವಿನೆಗರ್ ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಇದು ಬಾತ್‌ರೂಮ್‌ ಟೈಲ್ಸ್‌ ಮೇಲೆ ಅಂಟಿರುವ ನೀರಿನ ಕಲೆಗಳು ಮತ್ತು ಸೋಪಿನ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಸ್ಪ್ರೇ ಬಾಟಲಿಗೆ ಸುರಿದು  ಅದನ್ನು ಟೈಲ್‌ಗಳ ಮೇಲೆ ಸಿಂಪಡಿಸಿ ಮತ್ತು 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ಪಾಂಜ್ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ.

ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯೋ ಬದಲು ರೀತಿಯಾಗಿ ಪಾತ್ರೆ ಕ್ಲೀನ್‌ ಮಾಡಲು ಉಪಯೋಗಿಸಿ

ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ. ನಂತರ, ಕತ್ತರಿಸಿದ ನಿಂಬೆಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ. ಈ ನಿಂಬೆಹಣ್ಣನ್ನು ನೇರವಾಗಿ ಟೈಲ್‌ಗಳ ಮೇಲೆ, ವಿಶೇಷವಾಗಿ ಕಲೆಗಳಿರುವ ಪ್ರದೇಶಗಳಿಗೆ ಉಜ್ಜಿ. 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಟೈಲ್‌ಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.

ಬ್ಲೀಚ್‌: ಕೊಳೆಗಟ್ಟಿದ ಟೈಲ್ಸ್‌ ಕ್ಲೀನ್‌ ಮಾಡಲು ಬ್ಲೀಚ್ ಅನ್ನು ಬಳಸಬಹುದು. ಇದಕ್ಕಾಗಿ ಸ್ವಲ್ಪ ನೀರಿಗೆ 8-10 ಚಮಚ ಬ್ಲೀಚ್ ಸುರಿಯಿರಿ. ನಂತರ, ಈ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಟೈಲ್‌ಗಳ ಮೇಲೆ ಸಿಂಪಡಿಸಿ, ನಂತರ ಅದನ್ನು ಬಟ್ಟೆಯಿಂದ ಒರೆಸಿ.  ಈ ಎಲ್ಲಾ ಮನೆಮದ್ದುಗಳು ಬಾತ್‌ರೂಮ್‌ ಟೈಲ್ಸ್‌ ಅನ್ನು ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾಫಿಕ್ ಉಲ್ಲಂಘನೆ ಪೇಮೆಂಟ್ ಚಲನ್ ನೆಪದಲ್ಲಿ 5 ಲಕ್ಷ ರೂ. ವಂಚನೆ: ವಾಹನ ಚಾಲಕರೇ ಎಚ್ಚರ – Kannada News | Bangaluru: Traffic Challan Cyber Fraud; Woman Loses 5 Lakhs to Fake Payment Link Scam

ಬೆಂಗಳೂರು, ಜನವರಿ 22: ಡಿಜಿಟಲ್​ ಯುಗದಲ್ಲಿ ಸೈಬರ್​​ ಅಪರಾಧಗಳು (Cyber Fraud) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಶಿಕ್ಷಣವಂತರು ವಂಚಕರ ಜಾಲಕ್ಕೆ ಸಿಲುಕಿ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ನಗದರಲ್ಲಿ ಅಂತಹದೊಂದು ಘಟನೆ ನಡೆದಿದೆ. ಟ್ರಾಫಿಕ್ ಚಲನ್ ಪಾವತಿ ನೆಪದಲ್ಲಿ ಸೈಬರ್ ಕದೀಮರ ಬಲೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 5 ಲಕ್ಷ ರೂ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಎಫ್​​ಐಆರ್​ (FIR) ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

ನಡೆದದ್ದೇನು?

ಮಹಿಳೆಯ ಮೊಬೈಲ್​​ ನಂಬರ್​ಗೆ ನಿಮ್ಮ ಟ್ರಾಫಿಕ್ ದಂಡ ಪಾವತಿ ಮಾಡಿ ಎಂದು ಮೆಸೆಜ್ ಬಂದಿದೆ. ಜೊತೆಗೆ ಸೈಬರ್ ವಂಚಕರು ಲಿಂಕ್ ಕೂಡ ಕಳಿಸಿದ್ದರು. ಕೊಡಲೇ ಮಹಿಳೆ ಲಿಂಕ್ ಓಪನ್ ಮಾಡಿ ಕ್ರೆಡಿಟ್ ಕಾರ್ಡ್ ಡಿಟೇಲ್ಸ್ ಹಾಕಿದ್ದಾರೆ. ಡಿಟೇಲ್ಸ್ ನೀಡುತ್ತಿದ್ದಂತೆ ತಕ್ಷಣವೇ ಕ್ರೆಡಿಟ್ ಕಾರ್ಡ್​ನಿಂದ 5 ಲಕ್ಷ ರೂ. ಕಡಿತಗೊಂಡಿದೆ. ಆ ಮೂಲಕ ಕದೀಮರು 500ರೂ. ಪೇಮೆಂಟ್ ರಿಕ್ವೆಸ್ಟ್ ಕಳಿಸಿ 5 ಲಕ್ಷ ರೂ ದೋಚಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ದಾವಣಗೆರೆ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಬಿಡದ ಸೈಬರ್ ವಂಚಕರು

ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಪಾಲಿಕೆ ಇ-ಆಸ್ತಿ ತಂತ್ರಾಂಶವನ್ನೇ ಹ್ಯಾಕ್ ಮಾಡಿದ್ದ, ಹ್ಯಾಕರ್ಸ್ ಅಕ್ರಮವಾಗಿ ಇ-ಆಸ್ತಿಗೆ ಅನುಮೋದನೆ ನೀಡಿದ್ದರು. ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿ -1 ರಲ್ಲಿ ಘಟನೆ ನಡೆದಿದ್ದು, ಕೃತ್ಯ ನಡೆದು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬಿಎಂಟಿಸಿ ಬಸ್​​​​​​​​ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ, ಮುಂದೇನಾಯ್ತು ನೋಡಿ

ಆಯುಕ್ತರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸೈಬರ್ ವಂಚಕರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ವಲಯ ಆಯುಕ್ತ ಕೆ ನಾಗರಾಜ್ ದೂರ ದಾಖಲಿಸಿದ್ದರು.

ವರದಿ: ಪ್ರದೀಪ್​​​ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup 2026: ಟಿ20 ವಿಶ್ವಕಪ್​ಗೆ ಸ್ಕಾಟ್ಲೆಂಡ್ ಎಂಟ್ರಿ; ಯಾವ ಗುಂಪಿನಲ್ಲಿ ಸ್ಥಾನ? – Kannada News | Scotland Joins 2026 T20 World Cup as Bangladesh Exits Over Match Relocation Row

2026 ರ ಟಿ20 ವಿಶ್ವಕಪ್‌ (T20 World Cup 2026) ಆರಂಭಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಿಯಲ್ಲಿ ಮಹತ್ತರ ಬದಲಾವಣೆಯೊಂದಾಗಿದ್ದು, ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಿಂದ ಹಿಂದೆ ಸರಿದಿದೆ. ಭಾರತದಿಂದ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸದಿರುವುದರಿಂದ ಅಸಮಾಧಾನಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡದ ಹೆಸರನ್ನು ಟೂರ್ನಿಯಿಂದ ಹಿಂಪಡೆದಿದೆ. ಬಾಂಗ್ಲಾದೇಶ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿದ್ದರೆ, ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್​ಗೆ ಟಿ20 ವಿಶ್ವಕಪ್ ಆಡುವ ಅವಕಾಶ ನೀಡಲಾಗುವುದು ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. ಆ ಪ್ರಕಾರ, ಸ್ಕಾಟಿಷ್ ತಂಡ ಮಿನಿ ವಿಶ್ವಕಪ್ ಸಮರದಲ್ಲಿ ಕಾಣಿಸಿಕೊಳ್ಳಲಿದೆ.

ಈ ಮೊದಲು ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತಂಡವನ್ನು ಸಿ ಗುಂಪಿನಲ್ಲಿ ಇರಿಸಲಾಗಿತ್ತು. ಈ ಗುಂಪಿನಲ್ಲಿ ಬಾಂಗ್ಲಾದೇಶ ತಂಡವನ್ನು ಹೊರತುಪಡಿಸಿ ಇಂಗ್ಲೆಂಡ್, ಇಟಲಿ, ನೇಪಾಳ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇದ್ದವು. ಇದೀಗ ಬಾಂಗ್ಲಾದೇಶ ಹೊರಬಿದ್ದಿರುವುದರಿಂದ ಅದರ ಜಾಗದಲ್ಲಿ ಸ್ಕಾಟ್ಲೆಂಡ್ ಆಡಲಿದೆ. ವೇಳಾಪಟ್ಟಿಯ ಪ್ರಕಾರ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ ದಾಖಲೆ ಹೇಗಿದೆ?

ಈ ವರ್ಷದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ಕಾಟ್ಲೆಂಡ್ ವಿಫಲವಾಯಿತು. ಯುರೋಪಿಯನ್ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ನಾಲ್ಕನೇ ಸ್ಥಾನ ಗಳಿಸಿತು, ಆದರೆ ಈಗ ಸ್ಕಾಟ್ಲೆಂಡ್​ಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಐಸಿಸಿ ಇನ್ನೂ ಯಾವುದೇ ಘೋಷಣೆ ಮಾಡದಿದ್ದರೂ, ನಿಯಮಗಳ ಪ್ರಕಾರ ಸ್ಕಾಟ್ಲೆಂಡ್‌ನ ಸ್ಥಾನ ಖಚಿತವೆಂದು ಪರಿಗಣಿಸಲಾಗಿದೆ. ಇದು ಸಂಭವಿಸಿದಲ್ಲಿ, ಸ್ಕಾಟ್ಲೆಂಡ್ ತಂಡ ಸತತ ಐದನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಆರು ಬಾರಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿರುವ ಸ್ಕಾಟ್ಲೆಂಡ್, 22 ಪಂದ್ಯಗಳನ್ನು ಆಡಿದ್ದು, ಕೇವಲ ಏಳರಲ್ಲಿ ಗೆಲುವು ಮತ್ತು 13 ಪಂದ್ಯಗಳಲ್ಲಿ ಸೋಲು ಕಂಡಿದೆ. 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಕಾಟ್ಲೆಂಡ್, ಸೂಪರ್ 12 ಸುತ್ತಿಗೆ ಅರ್ಹತೆ ಪಡೆದಿತ್ತು. ಸ್ಕಾಟ್ಲೆಂಡ್ ಎಂದಿಗೂ ಗುಂಪು ಹಂತವನ್ನು ಮೀರಿ ಮುಂದಕ್ಕೆ ಸಾಗಿಲ್ಲ (ಸೂಪರ್ 12 ಗಳನ್ನು ಹೊರತುಪಡಿಸಿ). ಆದಾಗ್ಯೂ ಸ್ಕಾಟ್ಲೆಂಡ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.

T20 World Cup 2026: ಟಿ20 ವಿಶ್ವಕಪ್​ ಬಹಿಷ್ಕರಿಸಿದ ಬಾಂಗ್ಲಾದೇಶ

ಈ ಮೊದಲು ಸ್ಕಾಟ್ಲೆಂಡ್​ಗೆ ಅದೃಷ್ಟ ಒಲಿದಿತ್ತು

2009 ರಲ್ಲಿ ಇಂಗ್ಲೆಂಡ್​ನಲ್ಲಿ ಟಿ20 ವಿಶ್ವಕಪ್​ ಅನ್ನು ಆಯೋಜಿಸಿದ್ದಾಗ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು. ಆ ಸಮಯದಲ್ಲಿ ಜಿಂಬಾಬ್ವೆ ಮತ್ತು ಯುಕೆ ಸರ್ಕಾರದ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಅಂತಿಮವಾಗಿ ಕ್ರಿಕೆಟ್‌ನ ಹಿತಾಸಕ್ತಿಯಿಂದ ಜಿಂಬಾಬ್ವೆ ಪಂದ್ಯಾವಳಿಯಿಂದ ಹಿಂದೆ ಸರಿದಿತ್ತು. ಇದರ ಪರಿಣಾಮವಾಗಿ ಸ್ಕಾಟ್ಲೆಂಡ್ ಅಸೋಸಿಯೇಟ್ ತಂಡವಾಗಿ ಅರ್ಹತೆ ಪಡೆದಿತ್ತು. ಆದರೆ ಈ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ಭಾಗವಹಿಸದಿದ್ದರೂ ಸಹ ಪಂದ್ಯಾವಳಿಯಿಂದ ಸಿಗಬೇಕಿದ್ದ ಆದಾಯವನ್ನು ಪರಿಹಾರವಾಗಿ ಪಡೆದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ; ಪತ್ನಿಯಿಂದಲೇ ಪತಿ ಹತ್ಯೆ – Kannada News | Husband Killed by Wife in Bengaluru Over Family Dispute; Accused Arrested

ಬೆಂಗಳೂರು, ಜನವರಿ 22: ಮಕ್ಕಳ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮುರುಗೆಶ್​​ ಮೃತ ವ್ಯಕ್ತಿಯಾಗಿದ್ದು, ಆರೋಪಿ ಪತ್ನಿ ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಮೊದಲನೆಯವಳಿಗೆ ಮದುವೆಯಾಗಿತ್ತು. ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಎರಡನೇ ಮಗಳು ಪ್ರೀತಿಸಿದ ಯುವಕನ ಜೊತೆ ಎಸ್ಕೇಪ್​​ ಆಗಿದ್ದು, ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು. ಮಕ್ಕಳನ್ನ ಸರಿಯಾಗಿ ಬೆಳೆಸಿಲ್ಲ ಎಂದು ಆಪಾದಿಸಿ ಪತಿ ಮುರುಗೇಶ್ ನಿಂದನೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆಯೂ ಇದೇ ವಿಚಾರವಾಗಿ ಮತ್ತೆ ಜಗಳವಾಗಿದೆ. ಈ ವೇಳೆ ಮನೆಯಲ್ಲಿದ್ದ ಚಾಕುವಿನಿಂದ ಮುರುಗೇಶ್​​ ಎದೆಗೆ ಪತ್ನಿ ಲಕ್ಷ್ಮೀ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ಪತಿ ಕುಸಿದು ಬಿದ್ದಿದ್ದಾರೆ. ಪಕ್ಕದ ಮನೆಯವರು ಆ್ಯಂಬ್ಯುಲೆನ್ಸ್​​ಗೆ ಕರೆ ಮಾಡಿದ್ದರಾದರೂ ಅಷ್ಟರಲ್ಲೇ ಮುರುಗೇಶ್​ ಮೃತಪಟ್ಟಿದ್ದರು. ಆತನೇ ಚುಚ್ಚಿಕೊಂಡಿದ್ದಾನೆ ಎಂದು ಲಕ್ಷ್ಮೀ ಮೊದಲು ಕತೆ ಕಟ್ಟಿದ್ದಳಾದರೂ ಪೋಲಿಸರ ತನಿಖೆಯಲ್ಲಿ ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾಳೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version