ವಿಜಯ್ ಜನ್ಮದಿನಕ್ಕೆ ತ್ರಿಶಾ ತರಿಸಿದ್ದು ವಿಶೇಷ ಕೇಕ್; ‘00.00’ ಅರ್ಥ ಹುಡುಕಿದ ನೆಟ್ಟಿಗರು – Kannada News | Trisha Birthday Wish to Tamil Nadu CM Vijay Viral Cake and Instagram post meaning

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಜೂನ್ 22ರಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಂಡರು. ದೇಶಾದ್ಯಂತ ಗಣ್ಯರು ಅವರಿಗೆ ಶುಭ ಕೋರುತ್ತಿದ್ದರೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ (Trisha) ಅವರು ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಭಾರಿ ಸದ್ದು ಮಾಡಿತ್ತು. ಆದರೆ ಮಂಗಳವಾರ (ಜೂನ್ 23) ಸಂಜೆ ತ್ರಿಶಾ ಹಂಚಿಕೊಂಡ ಒಂದೇ ಒಂದು ಪೋಸ್ಟ್ ಈ ಎಲ್ಲಾ ವದಂತಿಗಳನ್ನು ಧೂಳೀಪಟ ಮಾಡಿತು. ಅದರ ಬಗ್ಗೆ ಜನರು ಹಲವು ರೀತಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ.

ತ್ರಿಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಜಯ್ ಜೊತೆಗಿರುವ ಅತ್ಯಂತ ಆಪ್ತ ಹಾಗೂ ಸುಂದರವಾದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಪ್ರಿಂಟೆಡ್ ಶರ್ಟ್ ಧರಿಸಿರುವ ವಿಜಯ್ ಮುಗುಳ್ನಗುತ್ತಿದ್ದರೆ, ತ್ರಿಶಾ ಅವರ ಕಣ್ಣಲ್ಲೇ ಕಣ್ಣಿಟ್ಟು ಪ್ರೀತಿಯಿಂದ ನೋಡುತ್ತಾ ನಗುತ್ತಿದ್ದಾರೆ. ಇವರಿಬ್ಬರ ಮುಂದೆ ಸಾಲಾಗಿ ಐದು ಕೇಕ್‌ಗಳನ್ನು ಇಡಲಾಗಿದೆ.

ಇಂಟರ್ನೆಟ್‌ನಲ್ಲಿ ಸದ್ದು ಮಾಡ್ತಿದೆ ‘00.00’ ಕ್ಯಾಪ್ಷನ್:

ತ್ರಿಶಾ ಈ ಫೋಟೋಗೆ, ‘ಇದನ್ನೆಲ್ಲಾ ಸಾರ್ಥಕಗೊಳಿಸುವ ವ್ಯಕ್ತಿಗೆ ಜನ್ಮದಿನದ ಹಾರೈಕೆಗಳು (HBD 00.00)’ ಎಂದು ಬರೆದು ಹಾರ್ಟ್ ಮತ್ತು ದೃಷ್ಟಿ ಬೊಟ್ಟಿನ ಎಮೋಜಿಗಳನ್ನು ಹಾಕಿದ್ದಾರೆ. ಇದರಲ್ಲಿರುವ ‘00.00’ ಎಂಬ ಸಂಖ್ಯೆ ಈಗ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ. ಕೆಲವರು ವಿಜಯ್ ಜನ್ಮದಿನದ ಮಧ್ಯರಾತ್ರಿ 12 ಗಂಟೆಗೆ ತ್ರಿಶಾ ಜೊತೆಯಲ್ಲೇ ಇದ್ದರು ಅದಕ್ಕೆ ಹೀಗೆ ಬರೆದಿದ್ದಾರೆ ಎನ್ನುತ್ತಿದ್ದರೆ, ಇನ್ನು ಕೆಲವರು ಡಿಜಿಟಲ್ ಲವ್ ಲ್ಯಾಂಗ್ವೇಜ್‌ನಲ್ಲಿ ‘00.00’ ಎಂದರೆ ‘ನಾನು ನಿನ್ನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ’ ಎಂಬ ರಹಸ್ಯ ಅರ್ಥವಿದೆ ಎಂದು ಡಿಕೋಡ್ ಮಾಡುತ್ತಿದ್ದಾರೆ.

ಹೈದರಾಬಾದ್‌ನಿಂದ ಹಾರಿ ಬಂತಾ ‘ತಿರಮಿಸು’ ಕೇಕ್?

ವಿಜಯ್ ಎದುರಿಗಿರುವ 5 ಕೇಕ್‌ಗಳಲ್ಲಿ 3 ಕಪ್‌ಗಳು ಪ್ರಸಿದ್ಧ ‘ತಿರಮಿಸು’ (Tiramisu) ಸಿಹಿಯಾಗಿದ್ದವು. ಇದನ್ನು ಹೈದರಾಬಾದ್‌ನ ಖ್ಯಾತ ಬೇಕರಿಯಾದ ‘ಕಾನ್ಸು’ ಬ್ರ್ಯಾಂಡ್‌ನಿಂದ ತರಿಸಲಾಗಿದೆ ಎಂದು ಹದ್ದಿನ ಕಣ್ಣಿನ ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬೇಕರಿ ಸದ್ಯಕ್ಕೆ ಚೆನ್ನೈನಲ್ಲಿ ಇಲ್ಲದೇ ಇರುವುದರಿಂದ, ತ್ರಿಶಾ ತಮ್ಮ ಪ್ರೀತಿಯ ಗೆಳೆಯನಿಗಾಗಿ ವಿಶೇಷವಾಗಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಿಂದ ವಿಮಾನದ ಮೂಲಕ ಚೆನ್ನೈನ ನೀಲಾಂಗರೈನಲ್ಲಿರುವ ಮನೆಗೆ ತರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ‘5 ವರ್ಷಗಳ ಪ್ರೀತಿಯ ಸಂಕೇತವಾಗಿ 5 ಕೇಕ್ ಕತ್ತರಿಸಲಾಗಿದೆ’ ಎಂದೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ವಿಜಯ್ ವೈಯಕ್ತಿಕ ಜೀವನದ ವಿವಾದ:

ವಿಜಯ್ ಮತ್ತು ತ್ರಿಶಾ 2004ರಿಂದಲೇ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ವರ್ಷದ ಆರಂಭದಲ್ಲಿ ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಜಯ್ ಅವರ ವಿವಾಹೇತರ ಸಂಬಂಧವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು. ಆದರೆ ಈ ವದಂತಿಗಳ ಬಗ್ಗೆ ವಿಜಯ್ ಆಗಲಿ, ತ್ರಿಶಾ ಆಗಲಿ ಇದುವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಎದುರಾಳಿ ಯಾರು? – Kannada News | ICC Women’s T20 World Cup 2026: India vs Bangladesh Battle for Semi Finals Qualification

2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಸುತ್ತಿಗೆ ಹತ್ತಿರವಾಗಿದ್ದ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿಗೆ ಬಂದು ನಿಂತಿದೆ. ಪ್ರಸ್ತುತ, ಭಾರತ ತಂಡವು ಮೂರು ಪಂದ್ಯಗಳಿಂದ 2 ಗೆಲುವುಗಳೊಂದಿಗೆ ಗ್ರೂಪ್ ಎ ನಲ್ಲಿ 4 ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ತಂಡದ ನೆಟ್ ರನ್ ರೇಟ್ 2.511 ಆಗಿದೆ. ಹೀಗಾಗಿ ಸೆಮಿಫೈನಲ್‌ ರೇಸ್​ನಲ್ಲಿ ಟೀಂ ಇಂಡಿಯಾ ಜೀವಂತವಾಗಿರಬೇಕೆಂದರೆ ಉಳಿದಿರುವ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಇದರಲ್ಲಿ ಒಂದು ಸೋಲು ತಂಡವನ್ನು ಟೂರ್ನಿಯಿಂದ ಹೊರಹಾಕಲಿದೆ. ಹೀಗಾಗಿ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಜ್ಜಾಗಿದೆ. ಹಾಗಿದ್ದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ? ಎರಡೂ ತಂಡಗಳ ದಾಖಲೆ ಏನು? ಎಂಬುದರ ವಿವರ ಇಲ್ಲಿದೆ.

ಮುಖಾಮುಖಿ ದಾಖಲೆ ಹೇಗಿದೆ?

ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಇದುವರೆಗೆ 23 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ ತಂಡ 20 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇದರರ್ಥ ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ತಂಡ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಜೂನ್ 25 ರಂದು ನಡೆಯಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗುತ್ತದೆ.

ಉಭಯ ತಂಡಗಳು

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಪ್ರೇಮಾ ರಾವತ್, ರಾಧಾ ಯಾದವ್.

ಬಾಂಗ್ಲಾದೇಶ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ಟರ್, ಶರ್ಮಿನ್ ಅಕ್ಟರ್ ಸುಪ್ತಾ, ಸೋಭಾನಾ ಮೊಸ್ತರಿ, ಶೋರ್ನಾ ಅಕ್ಟರ್, ರಿತು ಮೋನಿ, ರಬೇಯಾ ಖಾನ್, ಫಾಹಿಮಾ ಖಾತುನ್, ಫರಿಹಾ ಇಸ್ಲಾಂ ತ್ರಿಸ್ನಾ, ಮಾರುಫಾ ಅಕ್ಟರ್, ಶಾಂಜಿದಾ ಅಖ್ತರ್ ಮಘ್ಲಾ, ಸುಲ್ತಾನಾ ಖಾತುನ್, ದಿಲರಾ ಅಕ್ಟರ್, ಜುಐರಿಯಾ ಫರ್ದೌಸ್, ತಾಜ್ ನೆಹರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನನ್ನು ಜೈಲಿಗೆ ಹಾಕಿ ಸರ್, ಜೀವಭಯಕ್ಕೆ ಹೋಟೆಲ್‌ನಲ್ಲಿ ದಾಂಧಲೆ ನಡೆಸಿ ಕೊನೆಗೂ ಜೈಲು ಸೇರಿದ ಹೈದರಾಬಾದ್ ರೌಡಿ ಶೀಟರ್ – Kannada News | Hyderabad Rowdy Vandalizes Hotel for Jail Safety Amid Rival Threats

ಹೈದರಾಬಾದ್, ಜೂನ್ 24: ಸಾಮಾನ್ಯವಾಗಿ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತು ಜೈಲಿನಿಂದ ದೂರವಿರಲು ಬಯಸುತ್ತಾರೆ. ಆದರೆ ಹೈದರಾಬಾದ್‌ನಲ್ಲಿ ರೌಡಿ ಶೀಟರ್ ಒಬ್ಬ ಸಂಪೂರ್ಣವಾಗಿ ವಿಭಿನ್ನವಾಗಿ ವರ್ತಿಸಿದ್ದಾನೆ. ಹೊರಗಿದ್ದರೆ ತನ್ನ ವಿರೋಧಿಗಳು ತನ್ನನ್ನು ಕೊಲ್ಲುತ್ತಾರೆ, ದಯವಿಟ್ಟು ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ. ಪೊಲೀಸರು ನಿರಾಕರಿಸಿದಾಗ, ಹೋಟೆಲ್ ಒಂದರಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಿ ಕೊನೆಗೂ ತಾನಂದುಕೊಂಡಂತೆ ಸುರಕ್ಷಿತವಾಗಿ ಜೈಲು ಸೇರಿದ್ದಾನೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಗಪುರ ಪ್ರದೇಶದ ಶೇಖ್ ಅಸ್ಲಾಂ ಎಂಬಾತನ ವಿರುದ್ಧ ಈಗಾಗಲೇ ರೌಡಿ ಶೀಟ್ ದಾಖಲಾಗಿದೆ. ಇತ್ತೀಚೆಗೆ ತನ್ನ ವಿರೋಧಿಗಳಿಂದ ಜೀವಕ್ಕೆ ಅಪಾಯವಿದೆ ಎಂದು ಅಸ್ಲಾಂ ತೀವ್ರ ಭಯಭೀತನಾಗಿದ್ದ. ಹೊರಗೆ ಹೋದರೆ ಯಾವುದೇ ಸಮಯದಲ್ಲಿ ತನ್ನ ಮೇಲೆ ದಾಳಿ ನಡೆಯಬಹುದು ಎಂದು ಆತಂಕಗೊಂಡ ಆತ, ಜೈಲಿನಲ್ಲಿರುವುದೇ ಸುರಕ್ಷಿತ ಎಂದು ನಿರ್ಧರಿಸಿದ್ದ.

ಈ ನಿಟ್ಟಿನಲ್ಲಿ ಕಳೆದ ವಾರದಿಂದ ಸ್ಥಳೀಯ ಪೊಲೀಸ್ ಠಾಣೆಗೆ ಅಲೆಯುತ್ತಿದ್ದ ಆತ, ತನ್ನನ್ನು ಜೈಲಿಗೆ ಕಳುಹಿಸುವಂತೆ ವಿನಂತಿಸುತ್ತಿದ್ದ. ಯಾವುದೇ ಅಪರಾಧ ಮಾಡದ ವ್ಯಕ್ತಿಯನ್ನು ಕೇವಲ ಆತನ ಕೋರಿಕೆಯ ಮೇರೆಗೆ ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೊಲೀಸರು ಆತನನ್ನು ವಾಪಸ್ ಕಳುಹಿಸಿದ್ದರು.

ಹೋಟೆಲ್‌ನಲ್ಲಿ ಸೃಷ್ಟಿಸಿದ ಕರಾಳ ದಾಂಧಲೆ

ಕೊಲೆ ಮಾಡಲು ಬೆನ್ನಟ್ಟುತ್ತಿದ್ದಾರೆ: ಜೈಲಿಗೆ ಹೋಗಲೇಬೇಕೆಂದು ಹಠಕ್ಕೆ ಬಿದ್ದ ಅಸ್ಲಾಂ, ಮಂಗಳವಾರ ಸಂಜೆ ಆಗಪುರದ ಚರ್ಕಂಡಿಲ್ ಪ್ರದೇಶದಲ್ಲಿರುವ ಕೇಂದ್ರ ಹೋಟೆಲ್ ಮತ್ತು ಬೇಕರಿಗೆ ನುಗ್ಗಿದ್ದಾನೆ. ಅಲ್ಲಿ ಉದ್ದೇಶಪೂರ್ವಕವಾಗಿ ಸಿಬ್ಬಂದಿಯೊಂದಿಗೆ ಜಗಳವಾಡಿದ ಆತ, ಹೋಟೆಲ್‌ನಲ್ಲಿದ್ದ ಅಡುಗೆ ಪಾತ್ರೆಗಳು ಮತ್ತು ಗ್ಯಾಸ್ ಸಿಲಿಂಡರ್‌ಗಳನ್ನು ರಸ್ತೆಗೆ ಎಸೆದು ತೊಂದರೆ ಸೃಷ್ಟಿಸಿದ್ದಾನೆ.

ಬೇಕರಿ ಕೌಂಟರ್‌ನ ಗಾಜುಗಳನ್ನು ಒಡೆದು ಹಾಕಿದಾಗ, ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಭಯಭೀತರಾಗಿ ಓಡಿಹೋಗಿದ್ದಾರೆ. ಈ ವೇಳೆ ಆತ, ಕೆಲವರು ನನ್ನನ್ನು ಕೊಲ್ಲಲು ಬೆನ್ನಟ್ಟುತ್ತಿದ್ದಾರೆ.. ನಾನು ಜೈಲಿನಲ್ಲಿ ಮಾತ್ರ ಸುರಕ್ಷಿತವಾಗಿರುತ್ತೇನೆ ಅದಕ್ಕಾಗಿಯೇ ನಾನು ಹೀಗೆ ಮಾಡುತ್ತಿದ್ದೇನೆ ಎಂದು ಜೋರಾಗಿ ಕೂಗಿದ್ದಾನೆ.

ಕೊನೆಗೂ ಈಡೇರಿದ ರೌಡಿ ಶೀಟರ್ ಆಸೆ

ಹೋಟೆಲ್ ಆಡಳಿತ ಮಂಡಳಿಯ ತುರ್ತು ಮಾಹಿತಿಯ ಆಧಾರದ ಮೇಲೆ ಹಬೀಬ್‌ನಗರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಅಸ್ಲಾಂನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು, ಕೊನೆಗೂ ಆತನನ್ನು ಜೈಲಿಗೆ ಕಳುಹಿಸಲಾಗಿದೆ.

ಪೊಲೀಸ್ ತನಿಖೆಯ ಸಮಯದಲ್ಲಿ, ಶೇಖ್ ಅಸ್ಲಾಂ ವಿರುದ್ಧ ನಗರದ ಹಬೀಬ್‌ನಗರ, ಸೈಫಾಬಾದ್, ಸನತ್‌ನಗರ, ಬೇಗಂಪೇಟೆ, ಹುಮಾಯೂನ್‌ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 13 ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಲ್ಟಿಗ್ರೈನ್‌ ಹಿಟ್ಟು Vs ಗೋಧಿ ಹಿಟ್ಟು: ತೂಕ ಇಳಿಕೆಗೆ ಯಾವುದು ಹೆಚ್ಚು ಸಹಕಾರಿ, ತಜ್ಞರ ಸಲಹೆ ಏನು? – Kannada News | Multigrain or wheat flour; which is best for weight loss? Here’s the expert’s opinion

ಡಾ. ಮೋನಿಷಾ

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ದೇಹ ತೂಕ ವೇಗವಾಗಿ ಹೆಚ್ಚಾಗುತ್ತದೆ. ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದರಿಂದ ಅಧಿಕ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವ (weight loss), ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವರು ಮಲ್ಟಿಗ್ರೈನ್‌ ಅಂದರೆ ಬಹುಧಾನ್ಯ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡಿದರೆ ಕೆಲವರು ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ. ಇವೆರಡು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿದ್ದರೂ, ಇವೆರಡರಲ್ಲಿ ಯಾವುದರ ಸೇವನೆಯು ತೂಕ ಇಳಿಕೆಗೆ ಹೆಚ್ಚು ಪ್ರಯೋಜನಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ. ತಜ್ಞರ ಪ್ರಕಾರ ತೂಕ ಇಳಿಕೆಗೆ ಯಾವ ಹಿಟ್ಟು ಬೆಸ್ಟ್‌ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬಹುಧಾನ್ಯ ಹಿಟ್ಟು, ಗೋಧಿ ಹಿಟ್ಟು: ತೂಕ ಇಳಿಕೆಗೆ ಯಾವುದು ಬೆಸ್ಟ್?‌

ಉಡುಪಿಯ ಎಸ್‌.ಡಿ.ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ಮೋನಿಷಾ ಅವರ ಪ್ರಕಾರ ತೂಕ ಇಳಿಸುವ ಪ್ರಯಾಣದಲ್ಲಿ ಮಲ್ಟಿಗ್ರೈನ್ ಹಿಟ್ಟು ಸಾಮಾನ್ಯ ಗೋಧಿ ಹಿಟ್ಟಿಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಗೋಧಿ ಹಿಟ್ಟು ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ಇಳಿಕೆಗೆ ಇದು ಅಡೆತಡೆಯಾಗಬಹುದು.

ತೂಕ ಇಳಿಕೆಗೆ ಮಲ್ಟಿಗ್ರೈನ್ ಹಿಟ್ಟು ಹೇಗೆ ಸಹಾಯಕ?

ಮಲ್ಟಿಗ್ರೈನ್ ಹಿಟ್ಟಿನ ಗುಣಮಟ್ಟವು ಅದರಲ್ಲಿ ಬಳಸಿರುವ ಪದಾರ್ಥಗಳ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಮಲ್ಟಿಗ್ರೈನ್ ಮಿಶ್ರಣದಲ್ಲಿ ಜವೆಗೋಧಿ, ಓಟ್ಸ್, ಜೋಳ, ಗೋಧಿ ಹೊಟ್ಟು, ಮಸೂರ ಬೇಳೆ, ಅಗಸೆ ಬೀಜ, ಮೆಂತ್ಯೆ ಬೀಜ ಹಾಗೂ ವಿವಿಧ ಕಾಳುಗಳು ಸೇರಿರುತ್ತವೆ. ಈ ಸಂಯೋಜನೆಯಿಂದ ಕೇವಲ ಕಾರ್ಬೋಹೈಡ್ರೇಟ್‌ಗಳಷ್ಟೇ ಅಲ್ಲದೆ, ವಿಶಾಲವಾದ ಪೌಷ್ಟಿಕಾಂಶಗಳೂ ದೊರೆಯುತ್ತವೆ.

ಹೆಚ್ಚಿನ ನಾರಿನಂಶ: ಮಲ್ಟಿಗ್ರೈನ್ ಹಿಟ್ಟಿನಲ್ಲಿ ಓಟ್ಸ್,  ಬಾರ್ಲಿ ಮತ್ತು ಸಿರಿಧಾನ್ಯಗಳಿರುವುದರಿಂದ ಇದರಲ್ಲಿ ನಾರಿನಂಶ ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

ಹೆಚ್ಚಿನ ಪ್ರೋಟೀನ್: ಸೋಯಾ ಮತ್ತು ಕಡ್ಲೆಬೇಳೆಯಂತಹ ದ್ವಿದಳ ಧಾನ್ಯಗಳಿಂದ ಕೂಡಿರುವ ಮಲ್ಟಿಗ್ರೈನ್‌ ಹಿಟ್ಟಿನಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಇದು ತೂಕ ಇಳಿಸುವಾಗ ಸ್ನಾಯುಗಳ ಸಾಂದ್ರತೆಯನ್ನು ಕಾಪಾಡಲು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI): ಮಲ್ಟಿಗ್ರೈನ್ ಹಿಟ್ಟಿನ GI ಮಟ್ಟವು ಸಾಮಾನ್ಯ ಗೋಧಿ ಹಿಟ್ಟಿಗಿಂತ ಕಡಿಮೆಯಿರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಧಾನವಾಗಿ ಬಿಡುಗಡೆ ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚುವರಿ ಪೋಷಕಾಂಶಗಳು: ಮಲ್ಟಿಗ್ರೈನ್ ಹಿಟ್ಟಿನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಖನಿಜಗಳು ಸಮೃದ್ಧವಾಗಿವೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?

ನಿಮ್ಮ ಆಹಾರಕ್ಕೆ ಸರಿಯಾದ ಹಿಟ್ಟನ್ನು ಹೇಗೆ ಆಯ್ಕೆ ಮಾಡಬೇಕು?

ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಮಲ್ಟಿಗ್ರೈನ್ ಹಿಟ್ಟುಗಳು ಆರೋಗ್ಯಕರವಾಗಿರುವುದಿಲ್ಲ. ಕೆಲವು ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿತ ಹಿಟ್ಟು ಇರಬಹುದು. ಆದ್ದರಿಂದ:

  • ಹಿಟ್ಟಿನ ಪದಾರ್ಥಗಳ ಪಟ್ಟಿಯನ್ನು ಮೊದಲು ಪರಿಶೀಲಿಸಬೇಕು.
  • ಹಿಟ್ಟಿನಲ್ಲಿ ಸಂಪೂರ್ಣ ಧಾನ್ಯಗಳಿರುವುದನ್ನು ಖಚಿತಪಡಿಸಿಕೊಳ್ಳಿ.
  • ಹೆಚ್ಚಿನ ನಾರುಪದಾರ್ಥ ಹೊಂದಿರುವ ಹಿಟ್ಟನ್ನು ಆಯ್ಕೆಮಾಡಿ.
  • ಸೋಯಾ, ಕಡ್ಲೆಬೇಳೆ, ಅಗಸೆ ಬೀಜದಂತಹ ಬೀಜಗಳು ಮತ್ತು ಕಾಳುಗಳನ್ನು ಸೇರಿಸಿರುವ ಮಲ್ಟಿಗ್ರೈನ್‌ ಹಿಟ್ಟಿನ ಮಿಶ್ರಣ ಉತ್ತಮ.

ತೂಕ ನಿಯಂತ್ರಣ ಮಾಡಲು  ಉತ್ತಮ ಗುಣಮಟ್ಟದ ಮಲ್ಟಿಗ್ರೈನ್ ಹಿಟ್ಟು ಸಾಮಾನ್ಯ ಗೋಧಿ ಹಿಟ್ಟಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ನಾರು, ಪ್ರೋಟೀನ್ ಹಾಗೂ ವಿವಿಧ ಪೌಷ್ಟಿಕಾಂಶಗಳಿರುವುದರಿಂದ ಹಸಿವು ನಿಯಂತ್ರಣ, ರಕ್ತದಲ್ಲಿನ ರಕ್ತದ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿಯಾಗುತ್ತದೆ. ಅತಿಯಾದ ತೂಕವು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ದೈನಂದಿನ ಚಟುವಟಿಕೆಗಳು ಇದರಿಂದ ಏರುಪೇರಾಗಬಹುದು  ತೂಕ ಇಳಿಕೆಗೆ ಹಿಟ್ಟಿನ ಆಯ್ಕೆಯ ಜೊತೆಗೆ ಸಮತೋಲಿತ, ಆರೋಗ್ಯಕರ ಆಹಾರ ಮತ್ತು ವಾಕಿಂಗ್‌ ಯೋಗದಂತಹ ದೈನಂದಿನ ಚಟುವಟಿಕೆಗಳು  ಹಾಗೂ  ನಿಯಮಿತ ವ್ಯಾಯಾಮವೂ ಅತ್ಯಗತ್ಯ ವಾಗಿದೆ.

ಆಯುರ್ವೇದ ಶಾಸ್ತ್ರದಲ್ಲಿ ಸ್ಥೌಲ್ಯ (ಬೊಜ್ಜು) ಮತ್ತು ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ  ಮಲ್ಟಿಗ್ರೈನ್ ಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಇದರ  ಅತಿಯಾದ ಸೇವನೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು  ಹಾಗಾಗಿ ರೋಗಿಯ ಸ್ಥಿತಿಯ ಆಧಾರದ ಮೇಲೆ  ವೈದ್ಯರ ಸಲಹೆಯ ಅನುಸಾರವಾಗಿ ತೂಕ ಇಳಿಕೆಯ ಪ್ರಯಾಣದಲ್ಲಿ ಮಲ್ಟಿಗ್ರೈನ್‌ ಹಿಟ್ಟಿನ್ನು ಬಳಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಡಾ. ಮೋನಿಷಾ.

ಒಟ್ಟಾರೆಯಾಗಿ ತೂಕ ಇಳಿಕೆಗೆ ಗೋಧಿ ಹಿಟ್ಟು ಮತ್ತು ಬಹುಧಾನ್ಯ ಹಿಟ್ಟು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ನೀವು ಎಷ್ಟು ತಿನ್ನುತ್ತೀರಿ, ನಿಮ್ಮ ಆಹಾರ ಎಷ್ಟು ಆರೋಗ್ಯಕ ಸಮತೋಲಿತವಾಗಿದೆ ಮತ್ತು ನೀವು ಎಷ್ಟು ದೈಹಿಕ ಚಟುವಟಿಕೆ ಮಾಡಿ ಸಕ್ರಿಯರಾಗಿದ್ದೀರಿ ಎಂಬುದು ಸೇರಿದಂತೆ ಆರೋಗ್ಯಕ ಜೀವನಶೈಲಿಯ ಪಾಲನೆ ಕೂಡ ಮುಖ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:47 pm, Wed, 24 June 26

Source link

‘ನನ್ನ ಮಗಳು ನನ್ನ ಅಪ್ಪ ಎಂದು ಕರೆಯುತ್ತಿಲ್ಲ’: ರಾಮ್ ಚರಣ್ – Kannada News | Ram Charan says his daughter not calling him Daddy

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ನೋಡಿದವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಗೆಲುವಿನ ಖುಷಿ ಹಂಚಿಕೊಳ್ಳಲು ನಿನ್ನೆಯಷ್ಟೆ ಸಿನಿಮಾದ ಸಕ್ಸಸ್ ಇವೆಂಟ್ ಅನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ವೇಳೆ ನಟ ರಾಮ್ ಚರಣ್, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಪುತ್ರಿ ಕ್ಲಿನ್ ಕಾರಾ ಬಗ್ಗೆ ಮಾತನಾಡಿದ್ದಾರೆ.

‘ಪೆದ್ದಿ’ ಸಿನಿಮಾದ ಗೆಲುವು ಬಹಳ ವಿಭಿನ್ನ ಅನುಭವವನ್ನು ತಮಗೆ ನೀಡಿದೆ ಎಂದ ರಾಮ್ ಚರಣ್, ‘ಈ ಸಿನಿಮಾಕ್ಕೆ ಬರುತ್ತಿರುವ ಪ್ರತಿಕ್ರಿಯೆ, ವಿಮರ್ಶೆಗಳು ಬಹಳ ಭಿನ್ನವಾಗಿವೆ. ಈ ರೀತಿಯ ವಿಮರ್ಶೆಗಳು, ಪ್ರತಿಕ್ರಿಯೆಗಳನ್ನು ನಾನು ಹಿಂದೆಂದೂ ನೋಡಿಲ್ಲ, ಕೇಳಿಲ್ಲ. ಜನ ಎಲ್ಲಿ ನನ್ನನ್ನು (ರಾಮ್ ಚರಣ್) ಮರೆತು ‘ಪೆದ್ದಿ’ಯನ್ನು ಮಾತ್ರವೇ ನೆನಪಿಟ್ಟುಕೊಳ್ಳುತ್ತಾರೋ ಎಂಬ ಭಯ ನನಗೆ ಮೂಡಿದೆ’ ಎಂದಿದ್ದಾರೆ ರಾಮ್ ಚರಣ್.

ಇದನ್ನೂ ಓದಿ:ದಕ್ಷಿಣ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ ತಮನ್ನಾ ಭಾಟಿಯಾ?

ತಮ್ಮ ಮನೆಯದ್ದೇ ಉದಾಹರಣೆ ನೀಡಿದ ರಾಮ್ ಚರಣ್, ‘ನನ್ನ ಪುತ್ರಿ ಕ್ಲಿನ್ ಕಾರಾ, ಈಗ ಮಾತನಾಡಲು ಆರಂಭಿಸಿದ್ದು, ಕ್ಲಿನ್ ಕಾರಾ ನನ್ನನ್ನು ಅಪ್ಪ ಎಂದು ಕರೆಯುತ್ತಿದ್ದಳು ಆದರೆ ಈಗ ‘ಪೆದ್ದಿ’ ಸಿನಿಮಾ ಬಿಡುಗಡೆ ಆದ ಮೇಲೆ ನನ್ನನ್ನು ‘ಪೆದ್ದಿ’ ಎಂದೇ ಕರೆಯುತ್ತಿದ್ದಾಳೆ. ಹಾಗೆಲ್ಲ ತಂದೆಯನ್ನು ಕರೆಯಬಾರದು ಎಂದು ಹೇಳಿಕೊಟ್ಟ ಬಳಿಕ ಈಗ ‘ಪೆದ್ದಿ ನಾನ್ನ’ (ಪೆದ್ದಿ ಅಪ್ಪ) ಎಂದು ಕರೆಯುತ್ತಿದ್ದಾಳೆ’ ಎಂದಿದ್ದಾರೆ ನಟ ರಾಮ್ ಚರಣ್.

‘ಪೆದ್ದಿ’ ಸಿನಿಮಾವು ಛಲ ಬಿಡದ ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರಿಕೆಟರ್ ಆಗಿ ಬಳಿಕ ಕುಸ್ತಿ ಪಟುವಾಗಿ ಗಮನ ಸೆಳೆದಿದ್ದಾರೆ. ಅದ್ಭುತ ಸ್ಪೋರ್ಟ್ಸ್ ಆಕ್ಷನ್ ಜೊತೆಗೆ ಕೆಲವು ಭಾವುಕ ಸನ್ನಿವೇಶಗಳನ್ನು ಸಹ ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಕುಸ್ತಿ ಕಲಿಸುವ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CET 2026: ಎಸ್​ಸಿ ಒಳ ಮೀಸಲಾತಿ ಸರ್ಟಿಫಿಕೇಟ್ ಗೊಂದಲ ಬಗ್ಗೆ KEA ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಹೇಳಿದ್ದೇನು? – Kannada News | KEA Executive Director H. Prasanna Clarifies Confusion on SC Internal Reservation Certificates for CET 2026

ಬೆಂಗಳೂರು, ಜೂನ್ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು CET 2026ಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಒಳ ಮೀಸಲಾತಿ ಪ್ರಮಾಣಪತ್ರಗಳ ಕುರಿತ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರವು SC ವಿದ್ಯಾರ್ಥಿಗಳಿಗೆ SCA, SCB, SCC ಎಂದು ಒಳ ಮೀಸಲಾತಿ ಜಾರಿಗೊಳಿಸಿದ್ದು, ಅದಕ್ಕೆ ಅನುಗುಣವಾಗಿ ಸೀಟು ಹಂಚಿಕೆ ನಡೆಯಲಿದೆ.

ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಕೇವಲ SC ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು, ನಂತರದಲ್ಲಿ ಒಳ ಮೀಸಲಾತಿ ಆದೇಶದ ಪ್ರಕಾರ KEA ಎಲ್ಲಾ SC ವಿದ್ಯಾರ್ಥಿಗಳಿಗೆ ತಮ್ಮ SCA, SCB, SCC ಪ್ರಮಾಣಪತ್ರಗಳನ್ನು ಅಪ್‌ಡೇಟ್ ಮಾಡಲು ಸೂಚಿಸಿತ್ತು. ಸುಮಾರು 25,000 ವಿದ್ಯಾರ್ಥಿಗಳು ಇದನ್ನು ಅಪ್‌ಡೇಟ್ ಮಾಡಿದ್ದಾರೆ. ಆದರೆ, ಇನ್ನೂ 10,000-12,000 ವಿದ್ಯಾರ್ಥಿಗಳು ಈ ಪ್ರಮಾಣಪತ್ರಗಳನ್ನು ಅಪ್‌ಡೇಟ್ ಮಾಡಿಲ್ಲ. ಈ ವಿದ್ಯಾರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಿದರೆ ಅವರು ಆಯ್ಕೆ ನಮೂದಿಗೆ (Option Entry) ಸಕ್ರಿಯರಾಗುತ್ತಾರೆ. ಸೇವಾ ಸಿಂಧು ನಿಯಮದ ಪ್ರಕಾರ ಪ್ರಮಾಣಪತ್ರ ಪಡೆಯಲು 21 ದಿನಗಳ ಕಾಲಾವಕಾಶವಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಮೊದಲು ಸುತ್ತಿನ ಆಪ್ಷನ್ ಎಂಟ್ರಿ ಅಂತಿಮ ದಿನಾಂಕದೊಳಗೆ ಪ್ರಮಾಣಪತ್ರಗಳನ್ನು ಅಪ್‌ಡೇಟ್ ಮಾಡಲು ಪ್ರಸನ್ನ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್ – Kannada News | Krishna byre gowda takes a dig at GBA Officers over road humps In Signal at Bengaluru

ಬೆಂಗಳೂರು, (ಜೂನ್ 24): ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಅವರು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಬೆಂಗಳೂರು ರಸ್ತೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಯ್ತು. ಇದೀಗ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಜೊತೆಗೆ ಟ್ರಾಫಿಕ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಅವೈಜ್ಞಾನಿಕ ಕ್ರಮಗಳ ಮೂಲಕ ಟ್ರಾಫಿಕ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

ಇಂತಹ ಅವೈಜ್ಞಾನಿಕ ಕ್ರಮಗಳ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ನಾವೇ ಕೃತಕವಾಗಿ ನಿರ್ಮಿಸುತ್ತಿದ್ದೇವೆ
ದಯವಿಟ್ಟು ಮೊದಲು ಸಿಗ್ನಲ್ ಗಳಲ್ಲಿನ ಹಂಪ್ಸ್ ಗಳನ್ನು ತೆಗೆಯಿರಿ, ಗುಂಡಿಮುಚ್ಚಿ, ಸಿಗ್ನಲ್ಗಳ 75 ಮೀಟರ್ ಸುತ್ತಳತೆಯಲ್ಲಿ ಎಲ್ಲೂ ಪಾರ್ಕಿಂಗ್ ಹಾಗೂ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬೇಡಿ, ಬಸ್ ನಿಲ್ದಾಣಗಳಿಗೂ ಅವಕಾಶ ನೀಡಬೇಡಿ ಎಂದು ಟ್ರಾಫಿಕ್ ಸಮಸ್ಯೆಯ ನಿವಾರಣೆಗೆ ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ನೋಡಿ: ಫುಟ್ ಪಾತ್ ತೆರವಿಗೆ ದಿಟ್ಟ ಹೆಜ್ಜೆ: ತೊಂದ್ರೆ ಬಂದ್ರೆ ನಿಮ್ಮ ಬೆನ್ನಿಗೆ ನಾನಿದ್ದೇನೆ ಎಂದ ಕೃಷ್ಣ ಬೈರೇಗೌಡ

 

Source link

ಬೆಂಗಳೂರು ಮೂಲದ ನಾಲ್ವರು ಕಾವೇರಿ ನದಿ ಪಾಲು: ದೇವಸ್ಥಾನಕ್ಕೆ ಹೋದವರು ಮಸಣಕ್ಕೆ – Kannada News | Tragic Incident at Muthathi: Bengaluru Visitors drowned Away in Cauvery River

ಪ್ರಾತಿನಿಧಿಕ ಚಿತ್ರImage Credit source: Getty images

ಮಂಡ್ಯ, ಜೂನ್​​ 24: ಕಾವೇರಿ ನದಿಯಲ್ಲಿ ನಾಲ್ವರು ನೀರುಪಾಲಾಗಿರುವಂತಹ (death) ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ. ಸಂಜೆ 5 ಗಂಟೆ ಸುಮಾರಿಗೆ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರುಪಾಲಾಗಿರುವ ಬೆಂಗಳೂರು ಮೂಲದ ಒಂದೇ ಕುಟುಂಬದವರು ಎನ್ನಲಾಗುತ್ತಿದೆ. ಮೃತರ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಹಲಗೂರು ಠಾಣೆ ಪೊಲೀಸರು ತೆರಳಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಡಿಜಿಟಲ್ ಟ್ರಾನ್ಸಾಕ್ಷನ್ಸ್​ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್​ಬಿಐನಿಂದ ಹೊಸ ನಿಯಮಗಳು ಜಾರಿಗೆ – Kannada News | Compensation for small value scam victims, as RBI expands digital fraud protection rules

ನವದೆಹಲಿ, ಜೂನ್ 24: ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚುತ್ತಿರುವ ವಂಚನೆಗಳನ್ನು ತಡೆಗಟ್ಟಲು ಮತ್ತು ಗ್ರಾಹಕರ ಹೊಣೆಗಾರಿಕೆಯನ್ನು (Customer Liability) ಮಿತಿಗೊಳಿಸಲು ಆರ್‌ಬಿಐ ತನ್ನ ನಿಯಮಾವಳಿಗಳನ್ನು ವಿಸ್ತರಿಸಿದೆ. ವಂಚಕರು ಅಧಿಕೃತ ವ್ಯಕ್ತಿಗಳಂತೆ ನಟಿಸಿ ಗ್ರಾಹಕರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣಗಳನ್ನು (Scams) ಕೂಡ ಈಗ ಈ ಹೊಸ ನಿಯಮಗಳ ಅಡಿಯಲ್ಲಿ ತರಲಾಗಿದೆ. ಜೊತೆಗೆ ಸಣ್ಣ ಮೊತ್ತದ ಡಿಜಿಟಲ್ ವಂಚನೆಗೆ ಒಳಗಾದವರಿಗೆ ವಿಶೇಷ ಪರಿಹಾರ ವ್ಯವಸ್ಥೆಯನ್ನು ಆರ್‌ಬಿಐ ಪರಿಚಯಿಸಿದೆ.

ಸಣ್ಣ ಮೊತ್ತದ ವಂಚನೆಗೆ ಸಿಗುವ ಪರಿಹಾರ ಎಷ್ಟು?

ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಂಚನೆಯಿಂದಾಗಿ 50,000 ರೂವರೆಗೆ ನಷ್ಟ ಅನುಭವಿಸಿದ ಸಂತ್ರಸ್ತರು (Bona fide victims) ಈ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇಂತಹ ಸಂತ್ರಸ್ತರು ತಮ್ಮ ಒಟ್ಟು ನಷ್ಟದ ಶೇ. 85 ರಷ್ಟು ಪರಿಹಾರವನ್ನು ಪಡೆಯಬಹುದು. ಆದರೆ, ಈ ಪರಿಹಾರದ ಗರಿಷ್ಠ ಮಿತಿ 25,000 ರೂ ಆಗಿರುತ್ತದೆ.

ಒಬ್ಬ ಗ್ರಾಹಕರು ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಈ ರೀತಿಯ ಪರಿಹಾರವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್​ನಲ್ಲಿ ಭಾಗಿ?

ಆರ್​ಬಿಐನ ಹೊಸ ನಿಯಮಗಳು ಯಾವೆಲ್ಲಾ ಪ್ರಕರಣಗಳಿಗೆ ಅನ್ವಯಿಸುತ್ತವೆ?

ವಂಚಕರು ಗ್ರಾಹಕರ ಬ್ಯಾಂಕಿಂಗ್ ವಿವರಗಳನ್ನು (Credentials) ಅಕ್ರಮವಾಗಿ ಪಡೆದುಕೊಂಡು ನಡೆಸುವ ವಹಿವಾಟುಗಳು.

ಗ್ರಾಹಕರಿಗೆ ಬಲವಂತ ಅಥವಾ ಬೆದರಿಕೆ (Coercion or Duress) ಹಾಕಿ ಅವರಿಂದಲೇ ವಹಿವಾಟುಗಳಿಗೆ ಅನುಮೋದನೆ ಪಡೆದುಕೊಂಡಿರುವ ಪ್ರಕರಣಗಳು.

ಬ್ಯಾಂಕುಗಳಿಗೆ ಆರ್‌ಬಿಐ ನೀಡಿರುವ ಗಡುವು

  • ದೇಶೀಯ ವಂಚನೆ ಪ್ರಕರಣಗಳಲ್ಲಿ, ಬ್ಯಾಂಕುಗಳು ಗ್ರಾಹಕರಿಂದ ದೂರು ಬಂದ 45 ದಿನಗಳ ಒಳಗಾಗಿ ತನಿಖೆ ನಡೆಸಿ ಹೊಣೆಗಾರಿಕೆಯನ್ನು ನಿರ್ಧರಿಸಬೇಕು.
  • ಅಂತಾರಾಷ್ಟ್ರೀಯ (Cross-border) ವಂಚನೆಗಳಲ್ಲಿ, ತನಿಖೆ ಮುಗಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಈ ನಿಗದಿತ ಅವಧಿ ಮೀರಿದರೆ, ಅದಕ್ಕೆ ಸೂಕ್ತ ಕಾರಣವನ್ನು ಬ್ಯಾಂಕುಗಳು ಗ್ರಾಹಕರಿಗೆ ಲಿಖಿತವಾಗಿ ತಿಳಿಸಬೇಕು.
  • ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳಾದರೆ, ಗ್ರಾಹಕರು ದೂರು ನೀಡಿದ 5 ದಿನಗಳ ಒಳಗಾಗಿ, ವಿವಾದಿತ ಮೊತ್ತಕ್ಕೆ ಸಮನಾದ ತಾತ್ಕಾಲಿಕ ಹಣವನ್ನು (Shadow Reversal) ಬ್ಯಾಂಕುಗಳು ಗ್ರಾಹಕರ ಖಾತೆಗೆ ಜಮಾ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ

ಆರ್​ಬಿಐ ತೆಗೆಕೊಂಡ ಇತರ ಪ್ರಮುಖ ನಿರ್ಧಾರಗಳು

SMS ಅಲರ್ಟ್‌ಗಳು: ₹500 ಕ್ಕಿಂತ ಹೆಚ್ಚಿನ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಬ್ಯಾಂಕುಗಳು ಕಡ್ಡಾಯವಾಗಿ ತಕ್ಷಣದ SMS ಅಲರ್ಟ್‌ಗಳನ್ನು ಕಳುಹಿಸುವ ನಿಯಮವನ್ನು ಆರ್‌ಬಿಐ ಮುಂದುವರಿಸಿದೆ. ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಸಾಮಾನ್ಯ ಗ್ರಾಹಕರಿಗೂ ಇದು ತಲುಪಬೇಕು ಎಂಬುದು ಆರ್‌ಬಿಐ ಉದ್ದೇಶವಾಗಿದೆ.

ಅನುಷ್ಠಾನ ದಿನಾಂಕ: ಈ ಪರಿಷ್ಕೃತ ನಿಯಮಗಳು ಜನವರಿ 1, 2027 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

119 ಎಸೆತಗಳಲ್ಲಿ 168 ರನ್‌ ಚಚ್ಚಿದ ವೈಭವ್ ಸೂರ್ಯವಂಶಿ ತಮ್ಮ..! – Kannada News | Sooryavanshi Brothers Shine: 10 Year Old Aashirvad Hits 168, Vaibhav On India Tour

ಒಂದೆಡೆ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಬ್ಬರಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಅವರ ತಮ್ಮ ಆಶೀರ್ವಾದ್ ಸೂರ್ಯವಂಶಿ (Ashirvad Suryavanshi) ಅಣ್ಣನಂತೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಸಲುವಾಗಿ ಸ್ಥಳೀಯ ಕ್ರಿಕೆಟ್​ನಲ್ಲಿ ಒಂದರ ಮೇಲೆ ಒಂದರಂತೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್​ ಲೋಕದಲ್ಲಿ ತನ್ನ ಅಣ್ಣ ಸೃಷ್ಟಿಸಿರುವ ಹವಾವನ್ನು ಕಂಡು ಮೈಗೊಡವಿ ನಿಂತಿರುವ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ಪಂದ್ಯಾವಳಿಯಲ್ಲಿ ರನ್​ಗಳ ಮಳೆ ಹರಿಸುತ್ತಿದ್ದಾರೆ. 10 ವರ್ಷದ ಆಶೀರ್ವಾದ್ ಕೇವಲ 119 ಎಸೆತಗಳಲ್ಲಿ 168 ರನ್‌ ಬಾರಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ.

ಸತತ ಎರಡನೇ ಶತಕ

ಬಿಹಾರದ ಸಮಸ್ತಿಪುರ ಜಿಲ್ಲೆಯ ವೈಭವ್ ಅವರ ಗ್ರಾಮವಾದ ತಾಜ್‌ಪುರದಲ್ಲಿ ನಡೆದ ಸ್ಥಳೀಯ ಪಂದ್ಯದಲ್ಲಿ ಆಶೀರ್ವಾದ್ ಸೂರ್ಯವಂಶಿ ತಮ್ಮ ತಂಡವಾದ ರಿಷಭ್ -11 ಪರ ಆಡಿದರು. ಅಣ್ಣ ವೈಭವ್​ನಂತೆಯೇ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಆಶೀರ್ವಾದ್, ರೋಷನ್ -11 ತಂಡದ ಬೌಲರ್‌ಗಳ ಬೆವರಿಳಿಸಿದರು. ಆಶೀರ್ವಾದ್ ಕೇವಲ 119 ಎಸೆತಗಳನ್ನು ಎದುರಿಸಿ 168 ರನ್ ಚಚ್ಚಿದರು. ಇದರಲ್ಲಿ 19 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಇದೀಗ ವೈಭವ್ ತಮ್ಮ ಸಹೋದರನ ಈ ಸಾಧನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೂವರು ಸಹೋದರರಲ್ಲಿ ಕಿರಿಯವರಾದ ಆಶೀರ್ವಾದ್ ತಮ್ಮ ಬ್ಯಾಟ್‌ನಿಂದ ಇಂತಹ ಬಿರುಗಾಳಿಯನ್ನು ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಕೆಲವೇ ದಿನಗಳ ಹಿಂದೆ, ಅವರು ಇದೇ ರೀತಿಯ ಸ್ಥಳೀಯ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಅವರು 87 ಎಸೆತಗಳಲ್ಲಿ 103 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ವೈಭವ್​ ಸೂರ್ಯವಂಶಿಗೆ ಇಂಗ್ಲೆಂಡ್‌ನಲ್ಲಿ ಪ್ರತ್ಯೇಕ ಡ್ರೆಸಿಂಗ್ ರೂಂ! ಕಾರಣವೇನು ಗೊತ್ತಾ?

ಐರ್ಲೆಂಡ್​ನಲ್ಲಿ ವೈಭವ್

ಇನ್ನು ವೈಭವ್ ಸೂರ್ಯವಂಶಿ ಬಗ್ಗೆ ಹೇಳುವುದಾದರೆ, ಅವರು ಈಗಾಗಲೇ ಟೀಂ ಇಂಡಿಯಾದೊಂದಿಗೆ ಐರ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಅಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಲ್ಲಿ ವೈಭವ್ ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ವೈಭವ್, ಶ್ರೀಲಂಕಾ A ಪ್ರವಾಸದಲ್ಲಿ ಭಾರತ A ತಂಡವನ್ನು ಪ್ರತಿನಿಧಿಸಿದ್ದರು. ಈ ಮೂರು ರಾಷ್ಟ್ರಗಳ ಏಕದಿನ ಸರಣಿಯಲ್ಲಿ, ವೈಭವ್ ಆರಂಭಿಕ ಪಂದ್ಯಗಳಲ್ಲಿ ವಿಶೇಷವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಫೈನಲ್‌ನಲ್ಲಿ ಅಬ್ಬರಿಸಿದ ವೈಭವ್ 29 ಎಸೆತಗಳಲ್ಲಿ 94 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version