ಬೆಂಗಳೂರು. ಏ,17: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಇಂದು (ಏ.17) ಜನರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ಘೋಷಿಸಿದೆ. ಏಪ್ರಿಲ್ 17ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಇಂದು ವಿನಯ್ ಕುಲಕರ್ಣಿ ಸೇರಿ ಎಲ್ಲ ಅಪರಾಧಿಗಳು ನ್ಯಾಯಾಧೀಶರ ಮುಂದೆ ಶಿಕ್ಷೆ ಕಡಿಮೆ ಮಾಡುವಂತೆ ಕಣ್ಣೀರಿಟ್ಟಿದ್ದಾರೆ. ಇದೀಗ ವಿಚಾರಣೆ ಹಾಗೂ ಶಿಕ್ಷೆ ಲೈವ್ ವಿಡಿಯೋ ಇಲ್ಲಿದೆ ನೋಡಿ.
ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಮ್ಯಾನೇಜರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ 2018 ರಿಂದಲೂ ನಾಪತ್ತೆ ಆಗಿದ್ದರು. ಅವರ ಮೇಲೆ ಸಾಲ, ವಂಚನೆ ಆರೋಪಗಳಿದ್ದವು. ಅವರ ಮೇಲೆ ಲುಕೌಟ್ ನೊಟೀಸ್ ಸಹ ಜಾರಿ ಆಗಿತ್ತು. ನಿನ್ನೆ ಹಠಾತ್ತನೆ ಮಲ್ಲಿಕಾರ್ಜುನ್ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ವೈಯಕ್ತಿಕ ಜೀವನ, ಹಣಕಾಸು ಸಮಸ್ಯೆ, ನಾಪತ್ತೆ ಆಗಿದ್ದಕ್ಕೆ ಕಾರಣ ಹೀಗೆ ಹಲವು ವಿಷಯಗಳನ್ನು ಮಾತನಾಡಿದರು. ಈ ವೇಳೆ ‘ಪ್ರೇಮಬರಹ’ ಸಿನಿಮಾದ ವಿವಾದ ಕುರಿತು ಮಾತನಾಡುತ್ತಾ, ಆಗಿದ್ದ ಅಕೌಂಟಂಟ್ ಮಾಡಿದ ತಪ್ಪಿನಿಂದ ಅರ್ಜುನ್ ಸರ್ಜಾ ಹಾಗೂ ತಮಗೆ ವಿವಾದ ಉಂಟಾಯ್ತು ಎಂದಿದ್ದರು.
ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ‘ಪ್ರೇಮಬರಹ’ ಸಿನಿಮಾವನ್ನು ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು. ವಿತರಣೆಗೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವರಿಗೆ ಮಲ್ಲಿಕಾರ್ಜುನ್ ಒಂದಷ್ಟು ಲೆಕ್ಕಗಳನ್ನು ನೀಡಿದ್ದರು. ಅದರಲ್ಲಿ ತಪ್ಪು ಕಂಡುಬಂದಿತ್ತು. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ದೀಪಕ್ ಟೈಪ್ ಮಾಡಿ ಕೊಟ್ಟ ಲೆಕ್ಕವನ್ನು ನಾನು ಸರಿಯಾಗಿ ನೋಡದೇ ಅರ್ಜುನ್ ಸರ್ಜಾ ಅವರಿಗೆ ಕೊಟ್ಟಿದ್ದೆ ಎಂದು ಮಲ್ಲಿಕಾರ್ಜುನ್ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಕೌಂಟೆಂಟ್ ದೀಪಕ್, ‘ಡೈಲಿ ಮಾಧ್ಯಮ’ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿ ವಿವರಣೆ ನೀಡಿದ್ದಾರೆ. ‘ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲವನ್ನೂ ಮಲ್ಲಿಕಾರ್ಜುನ ಅವರೇ ನೋಡಿಕೊಳ್ಳುತ್ತಿದ್ದರು. ಬೇರೆಯವರೆಲ್ಲ ಕೇವಲ ನಾಮಕಾವಸ್ತೆಗೆ ಇದ್ದವರಷ್ಟೆ. ಅವರು ಹೇಳಿದಂತೆ ನಾನು ಲೆಕ್ಕ ಬರೆದುಕೊಟ್ಟೆ, ಅದನ್ನೇ ಅವರು ಅರ್ಜುನ್ ಸರ್ಜಾ ಅವರಿಗೆ ಕೊಟ್ಟರು. ಅರ್ಜುನ್ ಸರ್ಜಾ ಅವರು ಹೇಳಿದ ಬಳಿಕ ಮತ್ತೆ ಲೆಕ್ಕ ಬದಲಾಯಿಸಿದ್ದು ಸಹ ನಿಜ. ಆದರೆ ನಾನು ಲೆಕ್ಕ ಬರೆದೆ ಎಂಬುದು ಸುಳ್ಳು’ ಎಂದಿದ್ದಾರೆ.
‘ನಾನು (ದೀಪಕ್) ತೂಗುದೀಪ ಸಂಸ್ಥೆಯಲ್ಲಿ ಸುಮಾರು ಐದು ವರ್ಷಗಳ 2013 ರಿಂದ 2018ರ ವರೆಗೆ ಅಕೌಂಟೆಂಟ್ ಆಗಿ ಕೆಲಸ ಮಾಡಿದೆ. ಮಲ್ಲಿಕಾರ್ಜುನ್ ಅವರು ಅಲ್ಲಿ ಬಹಳ ವರ್ಷಗಳಿಂದಲೂ ಇದ್ದರು. ಎಲ್ಲ ವ್ಯವಹಾರವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರು ಹೇಳಿದಂತೆ ಎಲ್ಲರೂ ಕೇಳಬೇಕಿತ್ತು’ ಎಂದು ದೀಪಕ್ ಹೇಳಿದ್ದಾರೆ.
ಅರ್ಜುನ್ ಸರ್ಜಾ ಅವರ ‘ಪ್ರೇಮ ಬರಹ’ ಸಿನಿಮಾದ ವಿತರಣೆ ವಿಷಯದಲ್ಲಿ ಮಲ್ಲಿಕಾರ್ಜುನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ವಿರುದ್ಧ ದೂರು ಸಹ ದಾಖಲಿಸಿದ್ದರು. ಇದೇ ದೂರಿನ ಅನ್ವಯ ಮಲ್ಲಿಕಾರ್ಜುನ್ ವಿರುದ್ಧ ಲುಕೌಟ್ ನೊಟೀಸ್ ಸಹ ಹೊರಡಿಸಲಾಗಿತ್ತು.
ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್! ಹೊಸ ಎಸ್ಒಪಿ ಬಗ್ಗೆ ಅರಣ್ಯ ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಚಾರಣಕ್ಕೆ (Trekking) ತೆರಳಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ನಲ್ಲಿ ಎಸ್ಒಪಿ ಬಿಡುಗಡೆ ಮಾಡಿ ಮಹತ್ವದ ಮಾಹಿತಿ ನೀಡಿದ್ದಾರೆ.
ಸಚಿವರು ಹೇಳಿದ್ದೇನು?
ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಪಾಯಿಂಟ್ಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ತಡಿಯಾಂಡಮೊಳ್ ಸೇರಿದಂತೆ ಹಲವು ಕಡೆಗಳಲ್ಲಿ ಚಾರಣಕ್ಕೆ ತೆರಳಿದವರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಹೊಸ ನಿಯಮಗಳ ಪ್ರಕಾರ, ಚಾರಣಿಗರು ಆನ್ಲೈನ್ ಮೂಲಕಏ ಬುಕ್ಕಿಂಗ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಟ್ರೆಕಿಂಗ್ ಹೋಗುವವರ ಮೊಬೈಲ್ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಕೆ ಮಾಡಲಾಗುತ್ತದೆ. ಜೊತೆಗೆ ಗೈಡ್ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ ಎಂದಿದ್ದಾರೆ.
ಪ್ರತಿ ಸ್ಥಳದ ಕ್ಯಾರಿಂಗ್ ಕೆಪಾಸಿಟಿಯನ್ನು ನಿಯಂತ್ರಿಸಲಾಗಿದ್ದು, ಒಮ್ಮೆ 150 ಮಂದಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ಬಳಿಕವೇ ಮತ್ತೊಂದು ತಂಡವನ್ನು ಕಳುಹಿಸಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿರು ಖಂಡ್ರೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 17: ಸತತ ಮೂರು ದಿನ ಬೆಲೆ ಏರಿಕೆ ಕಂಡಿದ್ದ ಚಿನ್ನ ಇವತ್ತು ಸ್ವಲ್ಪ ತಗ್ಗಿದೆ. ಮೂರು ದಿನದಲ್ಲಿ ಹತ್ತಿರಹತ್ತಿರ 300 ರೂಗಳಷ್ಟು ಬೆಲೆ ಏರಿತ್ತು. ಇವತ್ತು ಶುಕ್ರವಾರ ಇದರ ಬೆಲೆ (Gold Rates) ಗ್ರಾಮ್ಗೆ 125 ರೂಗಳಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ತಗ್ಗಿದೆ. ಇರಾನ್ ಯುದ್ಧ ನಿಲ್ಲುವ ಆಶಯ ಸ್ವಲ್ಪ ಬಲಗೊಂಡಿರುವುದು ಇದಕ್ಕೆ ಕಾರಣವಿರಬಹುದು. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯಲ್ಲೂ ಇವತ್ತು ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,41,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,41,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 17ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,420 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,135 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,565 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,420 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,135 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಮಂಗಳೂರು, ಏ.17: ಸಮಾಜದಲ್ಲಿ ಇಂದಿಗೂ ಎಚ್ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಇಂತಹ ಸಂದರ್ಭದಲ್ಲಿ ಎಚ್ಐವಿ ಪೀಡಿತ ಮಕ್ಕಳು ಮತ್ತು ವ್ಯಕ್ತಿಗಳಿಗೆ ಆಸರೆಯಾಗಿ ನಿಂತಿರುವ ಮಂಗಳೂರಿನ ಬೊಂದೆಲ್ನ ‘ಸ್ನೇಹದೀಪ’ ಸಂಸ್ಥೆಯ ಶ್ರೀಮತಿ ತಬುಸುಮ್ ಅವರು ತಮ್ಮ ಸುದೀರ್ಘ 19 ವರ್ಷಗಳ ಸೇವೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೊಲ್ಮೆ ಎಂಬ ಯ್ಯೂಟಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ಎಚ್ಐವಿ ಪೀಡಿತರನ್ನು ದೂರು ಇಡುವ ಮುನ್ನ ಈ ಕಥೆಯನ್ನು ಒಮ್ಮೆ ನೋಡಲೇಬೇಕು. ಈ ಮಹಿಳೆಯ ಸೇವೆಗೆ ಅನೇಕ ಪ್ರಶಸ್ತಿಗಳು ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಅದರೂ ಈ ಪರಿಶ್ರಮದ ಹಿಂದೆ ಅನೇಕ ನೋವಿನ ಕಥೆಗಳು ಇದೆ.
‘ಸ್ನೇಹದೀಪ’ ಸಂಸ್ಥೆಯನ್ನು ಎಚ್ಐವಿ ಸೋಂಕಿತ ಮಕ್ಕಳಿಗಾಗಿ ಪ್ರೀತಿ ಮತ್ತು ಕಾಳಜಿ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಇಲ್ಲಿ ಮಕ್ಕಳಿಗೆ ಕೇವಲ ವಸತಿ ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗೂ ಆದ್ಯತೆ ನೀಡಲಾಗುತ್ತದೆ. ಆರಂಭದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡುವಾಗ ಸಮಾಜದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಮುಸ್ಲಿಂ ಸಮುದಾಯದವರೇ ಆಗಲಿ ಅಥವಾ ಇತರೇ ಆಗಲಿ, ಎಚ್ಐವಿ ಪೀಡಿತರ ಮೃತದೇಹಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ತಬುಸುಮ್ ಮತ್ತು ಅವರ ತಂಡವೇ ಮುಂದೆ ನಿಂತು ಸುಮಾರು ಮೃತದೇಹಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಸೋಂಕಿತ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರದ ಅಗತ್ಯವಿದೆ. ಇಲ್ಲಿ ಪ್ರತಿದಿನ ತಾಜಾ ಉಪಹಾರ ಮತ್ತು ಸಮತೋಲಿತ ಊಟವನ್ನು ನೀಡಲಾಗುತ್ತದೆ. ಎಚ್ಐವಿ ಎನ್ನುವುದು ಕೇವಲ ಶಾರೀರಿಕ ಕಾಯಿಲೆಯಲ್ಲ, ಅದು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಆದ್ದರಿಂದ ಸಮಾಜ ಅವರನ್ನು ದೂರವಿಡದೆ, ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕು ಎಂಬುದು ಅವರ ಮುಖ್ಯ ಮನವಿಯಾಗಿದೆ. ಯಾವುದೇ ಪ್ರಚಾರದ ಹಂಬಲವಿಲ್ಲದೆ ಕೇವಲ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಇವರಿಗೆ, ಗುಣಮುಖರಾಗುತ್ತಿರುವ ಮಕ್ಕಳನ್ನು ನೋಡುವುದೇ ದೊಡ್ಡ ಸಮಾಧಾನ ಎಂದು ಹೇಳಿದ್ದಾರೆ. ಇವರ ಈ ಸೇವೆ ಅವರ ಕುಟುಂಬ ಕೂಡ ಹೆಚ್ಚಿನ ಬೆಂಬಲ ನೀಡಿದೆ. ತಮ್ಮ ಈ ಸೇವೆಯಲ್ಲಿ ಹಲವು ಸಮಸ್ಯೆಗಳು ಹಾಗೂ ಸವಾಲು ಎದುರಾಗಿದೆ ಎಂದು ಕಣ್ಣೀರು ಕೂಡ ಹಾಕಿದ್ದಾರೆ.
ಏಪ್ರಿಲ್ 19ರಿಂದ ಏಪ್ರಿಲ್ 25ರವರೆಗಿನ ಮೂರನೇ ವಾರ ವಿಶೇಷವಾಗಿ ಇರಲಿದೆ. ನಿಮಗೆ ಅದೃಷ್ಟವು ಯಾವ ಸಂದರ್ಭದಲ್ಲಿ ಯಾರಿಂದಲೂ ಬರಬಹುದು. ನಿಮಗೆ ಅದರ ಬಗ್ಗೆ ನಂಬಿಕೆ ಇರಬೇಕು. ಸಂಬಂಧವಿಲ್ಲದಂತೆ ಕುಳಿತರೆ ಆಸೆಯು ಆಸೆಯಾಗಿಯೇ ಉಳಿಯುತ್ತದೆ.
ಮೇಷ:
ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಮಾತಿನ ಮೇಲೆ ನಿಗಾ ಇರಲಿ. ಪ್ರೇಮಿಗಳಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುತ್ತದೆ.
ವೃಷಭ:
ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಗೆಳೆಯ ಅಥವಾ ಗೆಳತಿಯಿಂದ ಪ್ರೇಮ ನಿವೇದನೆಯಾಗುವ ಸಂಭವವಿದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಾಗಲಿದ್ದು, ದೂರದ ಪ್ರಯಾಣದ ಯೋಜನೆ ರೂಪಿಸುವಿರಿ.
ಮಿಥುನ:
ಮಿಥುನ ರಾಶಿಯವರಿಗೆ ಈ ವಾರ ಮಿಶ್ರಫಲ. ಸಂಗಾತಿಯ ಬೇಡಿಕೆಗಳನ್ನು ಈಡೇರಿಸಲು ಹಣ ವ್ಯಯವಾಗಬಹುದು. ಅನಗತ್ಯ ಸಂಶಯಗಳು ಪ್ರೀತಿಯಲ್ಲಿ ಬಿರುಕು ತರಬಹುದು, ಆದ್ದರಿಂದ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ಕರ್ಕಾಟಕ:
ಪ್ರೀತಿಪಾತ್ರರ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗುವ ಸೂಚನೆ ಇದೆ. ಒಂಟಿಯಾಗಿರುವವರಿಗೆ ಹೊಸ ವ್ಯಕ್ತಿಯ ಪರಿಚಯವಾಗಿ ಮನಸ್ಸು ಉಲ್ಲಸಿತಗೊಳ್ಳಲಿದೆ.
ಸಿಂಹ:
ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪ್ರೇಮ ವಿಚಾರದಲ್ಲಿ ಈ ವಾರ ಸ್ವಲ್ಪ ಎಚ್ಚರಿಕೆ ಅಗತ್ಯ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೇಮ ಸಂಬಂಧದಲ್ಲಿ ಗೊಂದಲ ಉಂಟಾಗಬಹುದು. ನಂಬಿಕೆಯೇ ನಿಮ್ಮ ಶಕ್ತಿಯಾಗಲಿ.
ಕನ್ಯಾ:
ಈ ವಾರ ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯನ್ನು ಸೆಳೆಯುವಿರಿ. ಪ್ರೇಮ ಸಂಬಂಧದಲ್ಲಿ ಹೊಸ ಚೈತನ್ಯ ಮೂಡಲಿದೆ. ಉಡುಗೊರೆಗಳ ವಿನಿಮಯದಿಂದ ಪ್ರೀತಿ ಗಾಢವಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇದೆ.
ತುಲಾ:
ಕೆಲಸದ ಒತ್ತಡದ ನಡುವೆಯೂ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ಪ್ರೇಮಿಗಳ ನಡುವೆ ಇದ್ದ ಸಣ್ಣಪುಟ್ಟ ಮುನಿಸುಗಳು ದೂರವಾಗುತ್ತವೆ. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ. ವಾರದ ಕೊನೆಯಲ್ಲಿ ಶುಭ ವಾರ್ತೆ ಕೇಳುವಿರಿ.
ವೃಶ್ಚಿಕ:
ಭಾವನಾತ್ಮಕವಾಗಿ ಈ ವಾರ ಸ್ವಲ್ಪ ಏರುಪೇರಾಗಬಹುದು. ಸಂಗಾತಿಯ ಮೇಲೆ ಅನಗತ್ಯ ಕೋಪ ಮಾಡಿಕೊಳ್ಳಬೇಡಿ. ಪ್ರೇಮ ಜೀವನದಲ್ಲಿ ಸಮಾಧಾನದಿಂದ ನಡೆದುಕೊಂಡರೆ ನೆಮ್ಮದಿ ಸಿಗಲಿದೆ. ಹಠಮಾರಿ ಸ್ವಭಾವವನ್ನು ಬಿಡುವುದು ಒಳ್ಳೆಯದು.
ಧನು:
ಪ್ರೇಮ ಸಂಬಂಧದಲ್ಲಿ ಹೊಸ ತಿರುವು ಸಿಗಲಿದೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಒಂಟಿಯಾಗಿರುವವರಿಗೆ ಮನಸ್ಸಿಗೆ ಒಪ್ಪುವ ಸಂಗಾತಿ ಸಿಗುವ ಕಾಲವಿದು. ಒಟ್ಟಾರೆಯಾಗಿ ಪ್ರೇಮ ವಿಚಾರದಲ್ಲಿ ಅದೃಷ್ಟದ ವಾರ.
ಮಕರ:
ಸಂಗಾತಿಯೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ಪ್ರೇಮ ಜೀವನ ಸುಖಮಯವಾಗಿರಲಿದೆ. ಆದರೆ ಅತಿಯಾದ ಕೆಲಸದ ಒತ್ತಡ ಪ್ರೀತಿಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಬಹಳ ಮುಖ್ಯ.
ಕುಂಭ:
ಅನಿರೀಕ್ಷಿತವಾಗಿ ಪ್ರೇಮ ನಿವೇದನೆ ಮಾಡುವ ಅವಕಾಶ ಸಿಗಬಹುದು. ಪ್ರೇಮ ಜೀವನದಲ್ಲಿ ಉತ್ಸಾಹವಿರುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಾಗಲಿದೆ. ಸಣ್ಣಪುಟ್ಟ ಪ್ರವಾಸಗಳು ಮನಸ್ಸಿಗೆ ಸಂತೋಷ ನೀಡುತ್ತವೆ.
ಮೀನ:
ಈ ವಾರ ನಿಮ್ಮ ಪ್ರೇಮ ಜೀವನ ಬಹಳ ರೊಮ್ಯಾಂಟಿಕ್ ಆಗಿರುತ್ತದೆ. ಅನ್ಯರು ಮಾಡುವ ಗಾಸಿಪ್ ಗೆ ಬೆಲೆ ಕೊಡಬೇಕೆಂದಿಲ್ಲ. ಸಂಗಾತಿಯಿಂದ ವಿಶೇಷ ಬೆಂಬಲ ಸಿಗಲಿದೆ. ನಿಮ್ಮ ಮನದಾಸೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಇದು ಸೂಕ್ತ ಸಮಯ. ಸಂಬಂಧದಲ್ಲಿ ಗಾಢವಾದ ಪ್ರೀತಿ ಮೂಡಲಿದೆ.
ಕುಡಿದವನಿಗೆ ಟೆಸ್ಟ್ ಡ್ರೈವ್ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ, ನಾಲ್ಕು ವಾಹನಗಳು ಜಖಂImage Credit source: tv9
ಬೆಂಗಳೂರು, ಏಪ್ರಿಲ್ 17: ಶೋರೂಂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಟೆಸ್ಟ್ ಡ್ರೈವ್ ವೇಳೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ (Bangalore) ಮಹದೇವಪುರದಲ್ಲಿ ನಡೆದಿದೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಗೆ ಕಾರು ಚಲಾಯಿಸಲು ನೀಡಿದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಘಟನೆ ಸಂಭವಿಸಿದೆ. ಕುಡಿದು ಬಂದು ಟೆಸ್ಟ್ ಡ್ರೈವ್ಗೆ (Test Drive) ಕಾರು ಕೊಂಡುಹೋದ ವ್ಯಕ್ತಿ ನಾಲ್ಕು ವಾಹನಗಳಿಗೆ ಗುದ್ದಿಸಿ ಹಾನಿ ಮಾಡಿದ್ದಾನೆ.
ಮದ್ಯಪಾನಿಯ ಟೆಸ್ಟ್ ಡ್ರೈವ್ ಘಟನೆಯ ವಿವರ
ಮಹದೇವಪುರದ ವಿಜ್ಞೇಶ್ವರ ನಗರದಲ್ಲಿರುವ ಮಹೀಂದ್ರಾ ಕಾರು ಶೋರೂಂಗೆ ಏಪ್ರಿಲ್ 12ರಂದು ಅಭಿಲಾಷ್ ಎಂಬಾತ ಕಾರು ಖರೀದಿಸುವ ಉದ್ದೇಶದಿಂದ ತೆರಳಿದ್ದ. ಆದರೆ, ಆತ ಮದ್ಯ ಸೇವಿಸಿರುವುದು ತಿಳಿದಿದ್ದರೂ ಶೋರೂಂ ಸಿಬ್ಬಂದಿ ಆತನಿಗೆ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ನೀಡಿದ್ದಾರೆ. ಕಾರು ಹತ್ತಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ಮನಸೋ ಇಚ್ಛೆ ವಾಹನ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಸರಣಿ ಅಪಘಾತದ ವಿಡಿಯೋ ಇಲ್ಲಿದೆ ನೋಡಿ
ಅಭಿಲಾಷ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ ಎಂಬುವವರ ಕಾಲು ಮುರಿದಿದ್ದು, ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಆರೋಪಿ ಅಭಿಲಾಷ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿರುವ ಅಭಿಲಾಷ್ ಕೂಡ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹದೇವಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಬಿಎನ್ಎಸ್ (BNS) ಸೆಕ್ಷನ್ 125(a), 281 ಹಾಗೂ ಐಎಂವಿ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಮಾಡಲು ಅವಕಾಶ ನೀಡಿದ ಶೋರೂಂ ಸಿಬ್ಬಂದಿಯ ನಡೆ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಾಸಿಕ್, ಏಪ್ರಿಲ್ 17: ನಾಸಿಕ್ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಮತಾಂತರ ಮತ್ತು ಲೈಂಗಿಕ ಕಿರುಕುಳದ ಭೀಕರ ಹಗರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಗರ್ಭಿಣಿ(Pregnant) ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಾಸಿಕ್ ಟಿಸಿಎಸ್ ಕಚೇರಿಯಲ್ಲಿ 2022 ರಿಂದ 2026ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವ್ಯವಸ್ಥಿತ ಮತಾಂತರ ಸಂಚು ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ಮುಂಬೈನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿರುವ ನಿದಾ ಖಾನ್, ಈಗ ನಾಸಿಕ್ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ತಾವು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂಬ ವೈದ್ಯಕೀಯ ಕಾರಣವನ್ನು ಮುಂದಿಟ್ಟುಕೊಂಡು ಬಂಧನದಿಂದ ವಿನಾಯಿತಿ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಶೇಷ ತನಿಖಾ ತಂಡ (SIT) ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅಧಿಕೃತ ವೈದ್ಯಕೀಯ ತಪಾಸಣೆಯ ಮೂಲಕ ಪರಿಶೀಲಿಸಲು ಮುಂದಾಗಿದೆ.
ನಾಸಿಕ್ ಪೊಲೀಸರು ರಚಿಸಿರುವ ಎಸ್ಐಟಿ ಈಗಾಗಲೇ ಎಂಟು ಮಹಿಳಾ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಅನುಚಿತ ಸ್ಪರ್ಶ, ಮತ್ತು ವೈಯಕ್ತಿಕ ಜೀವನದ ಬಗ್ಗೆ ಹೀಯಾಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿಂದೂ ಉದ್ಯೋಗಿಗಳನ್ನು ನಮಾಜ್ ಮಾಡಲು ಒತ್ತಾಯಿಸುವುದು ಮತ್ತು ಅವರ ಧರ್ಮವನ್ನು ಅವಮಾನಿಸುವ ಕೃತ್ಯಗಳು ಇಲ್ಲಿ ನಿರಂತರವಾಗಿ ನಡೆಯುತ್ತಿದ್ದವು.
ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್ ಸೇರಿದಂತೆ ಆರು ಪುರುಷರು ಮತ್ತು ದೂರುಗಳನ್ನು ನಿರ್ಲಕ್ಷಿಸಿದ ಹೆಚ್ಆರ್ ಮುಖ್ಯಸ್ಥೆ ಅಶ್ವಿನಿ ಚೈನಾನಿ ಅವರನ್ನು ಈಗಾಗಲೇ ಅಮಾನತುಗೊಳಿಸಿ ಬಂಧಿಸಲಾಗಿದೆ.
ಈ ಪ್ರಕರಣವು ಟಾಟಾ ಸಮೂಹದ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಮೌನ ಮುರಿದಿದ್ದಾರೆ. ಈ ಆರೋಪಗಳನ್ನು ಅತ್ಯಂತ ಗಂಭೀರ ಮತ್ತು ದುಃಖಕರ ಎಂದು ಬಣ್ಣಿಸಿರುವ ಅವರು, ಟಿಸಿಎಸ್ ಸಿಒಒ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ತಮ್ಮ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟಿಸಿಎಸ್ ಹೇಳಿದೆ. ಮತಾಂತರ ಮತ್ತು ಕಿರುಕುಳದ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣವೇ ನಾವು ತ್ವರಿತ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ, ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.
ನಿದಾ ಖಾನ್ ಅವರ ಜಾಮೀನು ಅರ್ಜಿಯ ಮೇಲೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ? ಆಕೆ ನಿಜವಾಗಿಯೂ ಗರ್ಭಿಣಿಯೇ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ತಂತ್ರವೇ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಎಸ್ಐಟಿ ತಂಡವು ಆಕೆಯನ್ನು ಕಸ್ಟಡಿಗೆ ಪಡೆಯಲು ಮುಂದಾಗಿದೆ.
ಸುರ್ಗುಜಾ , ಏಪ್ರಿಲ್ 17: ಸಾಮಾನ್ಯವಾಗಿ ಮದುವೆ(Marriage) ಅಂದಮೇಲೆ ವರ ಕುದುರೆ ಏರಿ ಬರುತ್ತಾನೆ, ಮದುವೆಯ ನಂತರ ವಧು ಕಣ್ಣೀರಿಡುತ್ತಾ ತನ್ನ ತಂದೆ-ತಾಯಿಯನ್ನು ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ. ಆದರೆ ಸುಲ್ಪಾಗಾ ಗ್ರಾಮದಲ್ಲಿ ನಡೆದ ಈ ಮದುವೆಯಲ್ಲಿ ಎಲ್ಲವೂ ಉಲ್ಟಾ, ಇಲ್ಲಿ ವಧುವೇ ದಿಬ್ಬಣದೊಂದಿಗೆ ವರನ ಮನೆಗೆ ಬಂದಿದ್ದಾಳೆ, ಮದುವೆಯ ನಂತರ ವರನೇ ಅಳುತ್ತಾ ತನ್ನ ಅತ್ತೆಯ ಮನೆಗೆ (ವಧುವಿನ ಮನೆಗೆ) ಪ್ರವೇಶ ಮಾಡಿದ್ದಾನೆ.
ಅಳಿಯನಲ್ಲ, ಮಗ ಬೇಕು: ತಂದೆಯ ಛಲ
ವಧು ದೇವಮುನಿ ಎಕ್ಕಾ ಅವರ ತಂದೆ ಮೋಹನ್ ಎಕ್ಕಾ ಅವರು ವೃತ್ತಿಯಲ್ಲಿ ಒಬ್ಬ ಸಾಮಾನ್ಯ ರೈತ. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಆದರೆ ಮಗನಿಲ್ಲ. ನನ್ನ ಕಾಲಾನಂತರ ನನ್ನ ಹೆಣ್ಣು ಮಕ್ಕಳ ಗತಿಯೇನು? ನನ್ನ ಕೃಷಿಯನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆಗ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ತನ್ನ ಅಳಿಯನನ್ನು ಅಳಿಯನಂತೆ ನೋಡುವ ಬದಲು, ಮಗನಂತೆ ಮನೆಗೆ ಬರಮಾಡಿಕೊಳ್ಳಲು ನಿರ್ಧರಿಸಿದರು.
ವರ ಬಿಲಾಸಸ್ ಬರ್ವಾ ಅವರ ಕುಟುಂಬ ಕೂಡ ಈ ಮಾತಿಗೆ ಒಪ್ಪಿಗೆ ನೀಡಿತು. ಸಂಪ್ರದಾಯದ ಹಾದಿಯನ್ನೇ ಬದಲಿಸಿದ ಈ ವಿವಾಹಕ್ಕೆ ‘ಮಾಸಿ’ ಪದ್ಧತಿಯಂತೆ ಮದುವೆ ನಡೆಯಿತು.
‘ಕನ್ಯಾದಾನ’ ಇಲ್ಲ, ಇಲ್ಲಿ ನಡೆದದ್ದು ವರ್ದಾನ
ಈ ಮದುವೆಯ ಅತ್ಯಂತ ಸುಂದರ ಕ್ಷಣವೆಂದರೆ ಇಲ್ಲಿ ಕನ್ಯಾದಾನ ನಡೆಯಲಿಲ್ಲ. ಬದಲಾಗಿ, ವರನ ಪೋಷಕರು ತಮ್ಮ ಮಗನನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರಿಸುವ ವರ್ದಾನ ಸಮಾರಂಭ ನಡೆಯಿತು. ಅಂದರೆ, ಮಗನನ್ನು ವಧುವಿನ ಮನೆಗೆ ದಾನವಾಗಿ ನೀಡಲಾಯಿತು.
ವಿವಾಹದ ವಿಧಿವಿಧಾನ ಮುಗಿದು ಬಿಲಾಸಸ್ ತನ್ನ ಮನೆಯನ್ನು ಬಿಟ್ಟು ಹೆಂಡತಿಯ ಮನೆಗೆ ಹೊರಡುವಾಗ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪಡುವ ನೋವು ಆತನ ಕಣ್ಣಾಲಿಗಳಲ್ಲಿ ಕಂಡಿತು. ಇಡೀ ಗ್ರಾಮಸ್ಥರು ವರನ ಕಣ್ಣೀರು ಕಂಡು ಭಾವುಕರಾದರು.
ವರದಕ್ಷಿಣೆ ಮುಕ್ತ, ಸರಳ ವಿವಾಹ
ಈ ವಿವಾಹದಲ್ಲಿ ವರದಕ್ಷಿಣೆಯ ಹಾವಳಿ ಇರಲಿಲ್ಲ. ವಧುವಿನ ಕಡೆಯವರೇ ಮೆರವಣಿಗೆಯನ್ನು ವರನ ಮನೆಗೆ ಕರೆತಂದಿದ್ದರು. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು, ಒಬ್ಬ ಹುಡುಗಿ ಮೆರವಣಿಗೆ ತಂದಿರುವುದನ್ನು ನಾವೇ ಮೊದಲ ಬಾರಿ ನೋಡುತ್ತಿರುವುದು ಎಂದು ಅಚ್ಚರಿ ವ್ಯಕ್ತಪಡಿಸಿದರು. ವರನ ಕಡೆಯವರು ಕೂಡ ಈ ಹೊಸ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.
ಸಮಾಜಕ್ಕೆ ಹೊಸ ದಿಕ್ಸೂಚಿ
ಗ್ರಾಮಸ್ಥರಾದ ಸಾಧು ರಾಮ್ ಮತ್ತು ಮಹೇಶ್ ತಿರ್ಕಿ ಹೇಳುವಂತೆ, ಈ ಮದುವೆಯು ಕೇವಲ ಒಂದು ಕುಟುಂಬದ ನಿರ್ಧಾರವಲ್ಲ, ಇದು ಇಡೀ ಸಮಾಜಕ್ಕೆ ಒಂದು ಪಾಠ. ಗಂಡು ಮಕ್ಕಳಿಲ್ಲದ ತಂದೆ-ತಾಯಿಯರಿಗೆ ಈ ಮದುವೆ ಒಂದು ಭರವಸೆ ನೀಡಿದೆ. ಹೆಣ್ಣು ಮಕ್ಕಳು ಕೂಡ ಹೆತ್ತವರನ್ನು ಮಗನಂತೆ ಸಾಕಿ ಸಲಹಬಲ್ಲರು ಎಂಬ ಸತ್ಯ ಇಲ್ಲಿ ಸಾಬೀತಾಗಿದೆ.
ಪ್ರೀತಿ ಮತ್ತು ಸಮಾನತೆ ಇದ್ದರೆ ಸಂಪ್ರದಾಯಗಳು ಕೂಡ ಬದಲಾಗಬಲ್ಲವು ಎಂಬುದಕ್ಕೆ ಸುಲ್ಪಾಗಾ ಗ್ರಾಮದ ಈ ವಿವಾಹವೇ ಸಾಕ್ಷಿ. ಇಂದು ಆ ರೈತ ಮೋಹನ್ ಎಕ್ಕಾ ಅವರಿಗೆ ಅಳಿಯ ಸಿಕ್ಕಿಲ್ಲ, ಬದಲಿಗೆ ಅವರ ಕೃಷಿ ಮತ್ತು ಕುಟುಂಬವನ್ನು ಕಾಪಾಡಲು ಒಬ್ಬ ಮಗ ಸಿಕ್ಕಿದ್ದಾನೆ.
ಜೀವನದಲ್ಲಿ ಹಾಸ್ಯದ ಮಹತ್ವ ಮತ್ತು ಅದರ ಮಿತಿಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಜೀವನದಲ್ಲಿ ಸುಖ ದುಃಖ, ನಗು ಅಳು ಸಹಜ. ಆಸೆ ಆಕಾಂಕ್ಷೆಗಳು, ಭಾವನಾತ್ಮಕ ಸ್ಪಂದನೆಗಳು ಜೀವನದ ಭಾಗಗಳಾಗಿವೆ. ಹಾಸ್ಯವು ಜೀವನದ ಅತಿದೊಡ್ಡ ಮದ್ದು ಮತ್ತು ಅವಿಭಾಜ್ಯ ಅಂಗವಾಗಿದೆ. ನಗುವಿನಿಂದ ಮನುಷ್ಯನ ಜೀವನದಲ್ಲಿ ಖುಷಿ ಹೆಚ್ಚುತ್ತದೆ. ಹಾಸ್ಯವಿಲ್ಲದ ಬದುಕು ನಿರರ್ಥಕ ಎನಿಸಬಹುದು. ಹಾಸ್ಯವು ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ತುಂಬುತ್ತದೆ ಮತ್ತು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆ, ಸಾಲದ ಸಂಕಷ್ಟ, ಕುಟುಂಬದ ಅಗಲಿಕೆ, ಅನಾರೋಗ್ಯ ಪೀಡಿತರಾಗಿರುವಿಕೆ, ಉದ್ಯೋಗದಲ್ಲಿನ ಕಿರುಕುಳ ಅಥವಾ ಆತ್ಮವಿಶ್ವಾಸ ಕುಗ್ಗಿದಂತಹ ಕಷ್ಟಕರ ಸಂದರ್ಭಗಳಲ್ಲಿ ಹಾಸ್ಯವು ನಮ್ಮನ್ನು ಬಲಪಡಿಸುತ್ತದೆ. ಇದು ಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ತುಂಬುತ್ತದೆ ಮತ್ತು ಮುಖದ ಅಂದಕ್ಕೆ ಕಾರಣವಾಗುತ್ತದೆ.
ಆದರೆ, ಹಾಸ್ಯವು ಎಂದಿಗೂ ಅಪಹಾಸ್ಯವಾಗಿ ಬದಲಾಗಬಾರದು. ಕೆಲವೊಂದು ಸಂದರ್ಭಗಳಲ್ಲಿ ಹಾಸ್ಯವನ್ನು ಮಾಡಬಾರದು ಎಂಬುದನ್ನು ಅರಿಯುವುದು ಅತ್ಯಗತ್ಯ. ಮೊದಲನೆಯದಾಗಿ, ದೇವಾಲಯಗಳಲ್ಲಿ ಹಾಸ್ಯ ಮಾಡಬಾರದು. ದೇವಾಲಯಕ್ಕೆ ಹೋದಾಗ ಮೌನವಾಗಿ, ಭಗವಂತನ ಬಗ್ಗೆ ಗಮನಹರಿಸಬೇಕು. ಯಾವುದೇ ವಿಷಯದ ಕುರಿತು ದೇವಸ್ಥಾನದಲ್ಲಿ ಹಾಸ್ಯದಿಂದ ಮಾತಾಡುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ.
ಎರಡನೆಯದಾಗಿ, ಯಾರಾದರೂ ನಿಧನರಾದಾಗ ಅಥವಾ ದೈವಾದೀನರಾದಾಗ ಅವರ ವಿಚಾರವಾಗಿ ಹಾಸ್ಯ ಮಾಡಬಾರದು. ದುಃಖದ ಸ್ಥಿತಿಯಲ್ಲಿರುವವರ ಮನೆಯಲ್ಲಿ ಅಥವಾ ಸಾವಿನ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಷ್ಟು ಶುಭವಲ್ಲ. ಮೂರನೆಯದಾಗಿ, ಪ್ರಾರ್ಥನಾ ಮಂದಿರಗಳು, ಧ್ಯಾನ ಕೇಂದ್ರಗಳು (ಮೆಡಿಟೇಶನ್ ಸೆಂಟರ್ಗಳು) ಅಥವಾ ಪ್ರವಚನ ನಡೆಯುವ ಸ್ಥಳಗಳಲ್ಲಿ ಹಾಸ್ಯ ಮಾಡಬಾರದು. ಅಂತಹ ಸಂದರ್ಭಗಳಲ್ಲಿ ನಾವು ಪ್ರಾರ್ಥನೆಗೆ ಕುಳಿತಿರುವಾಗ ಅಥವಾ ಜಪ ಮಾಡುತ್ತಿರುವಾಗ ಗಂಭೀರವಾದ ವಾತಾವರಣವನ್ನು ಕಾಪಾಡಿಕೊಳ್ಳಬೇಕು.
ನಾಲ್ಕನೆಯದಾಗಿ, ಹಿರಿಯರ ಬಗ್ಗೆ, ನಿಮ್ಮ ಮೇಲಾಧಿಕಾರಿಗಳ ಬಗ್ಗೆ ಅಥವಾ ನಿಮ್ಮ ನಿವೃತ್ತ ಸಹೋದ್ಯೋಗಿಗಳ ಬಗ್ಗೆ ಹಾಸ್ಯದಿಂದ ಮಾತನಾಡಲು ಅವರ ಅನುಮತಿ ಪಡೆಯುವುದು ಸೂಕ್ತ. ಧರ್ಮ ಚಿಂತಕರು, ದೈವಾಂಶ ಸಂಭೂತರು, ಸನ್ಯಾಸಿ ವರ್ಗಗಳು, ಮಠಾಧೀಶರು ಮತ್ತು ಸಾಧಕರ ಬಗ್ಗೆ ಮಾತನಾಡುವಾಗ ಹಾಸ್ಯವನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಇಂತಹ ವ್ಯಕ್ತಿಗಳ ಬಗ್ಗೆ ಗೌರವದಿಂದ ವರ್ತಿಸಬೇಕು.
ಐದನೆಯದಾಗಿ, ಸ್ತ್ರೀಯರ ಬಗ್ಗೆ ಅವರ ಮುಂದೆಯೇ ಹಾಸ್ಯ ಮಾಡುವುದು ಶುಭಕರವಲ್ಲ. ಆರನೆಯದಾಗಿ, ತೊದಲು ಮಾತಾಡುವವರು, ಕಿವುಡರು, ಅಂಗವಿಕಲರು ಅಥವಾ ಕುರುಡರ ಬಗ್ಗೆ ಹಾಸ್ಯ ಮಾಡುವುದು, ಅಥವಾ ಅವರ ಬಗ್ಗೆ ಕೆಲವು ಹಾಸ್ಯ ವಿಷಯಗಳನ್ನು ಮಾತಾಡುವುದು ಅಷ್ಟು ಶುಭವಲ್ಲ. ಹಾಸ್ಯವು ಬಹಳ ಪವಿತ್ರವಾದ ಮತ್ತು ವಿಶೇಷವಾದ ಜೀವನದ ಅಂಗವಾಗಿದ್ದರೂ, ಅದಕ್ಕೆ ಒಂದು ಇತಿಮಿತಿ ಇರಬೇಕು. “ಅತಿ ಸರ್ವತ್ರ ವರ್ಜಯೇತ್” ಎಂಬಂತೆ, ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಹಾಸ್ಯಕ್ಕೆ ಒಂದು ಜಾಗ ಮತ್ತು ಒಳ್ಳೆಯ ವಾತಾವರಣವನ್ನು ಸೃಷ್ಟಿಸುವ ಶಕ್ತಿಯಿದೆ. ಆದರೆ, ಅದು ಕೆಲವರಿಗೆ ಅಪಹಾಸ್ಯವಾಗಬಾರದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ