PM Modi Speech: ರಾಜ್ಯಸಭೆಯಲ್ಲಿ ಹರಿವಂಶ್ ಹ್ಯಾಟ್ರಿಕ್ ಸಾಧನೆ: ಸದನಕ್ಕೆ ಹೊಸ ಕಳೆ ತಂದ ಉಪ ಸಭಾಪತಿ, ವಿಶ್ವಾಸದ ಪ್ರತೀಕ ಎಂದ ಪ್ರಧಾನಿ ಮೋದಿ – Kannada News | Modi Praises Harivansh’s Re Election, Calls It Reflection of House’s Trust

ನವದೆಹಲಿ, ಏಪ್ರಿಲ್ 17: ಭಾರತದ ಸಂಸದೀಯ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನಗಳಲ್ಲಿ ಒಂದಾದ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಗೆ ಹರಿವಂಶ್ ನಾರಾಯಣ್ ಸಿಂಗ್ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಮಾಡಿದ ಭಾಷಣವು ಕೇವಲ ಅಭಿನಂದನೆಯಲ್ಲ, ಅದು ಒಬ್ಬ ನಾಯಕನ ಕರ್ತವ್ಯ ನಿಷ್ಠೆಗೆ ಸಂದ ಗೌರವವಾಗಿತ್ತು. ಸದಸ್ಯರ ಚಪ್ಪಾಳೆ ತಟ್ಟುವ ಧ್ವನಿ ಮತ್ತು ಸಂಭ್ರಮದ ನಡುವೆ ಹರಿವಂಶ್ ನಾರಾಯಣ್ ಸಿಂಗ್ ಅವರು ಮತ್ತೊಮ್ಮೆ ರಾಜ್ಯಸಭೆಯ ಉಪ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದರು. ವಿರೋಧ ಪಕ್ಷಗಳೂ ಸೇರಿದಂತೆ ಇಡೀ ಸದನವು ಅವರನ್ನು ಅವಿರೋಧವಾಗಿ ಬೆಂಬಲಿಸಿದ್ದು ಅವರ ನಿಷ್ಪಕ್ಷಪಾತ ನಾಯಕತ್ವಕ್ಕೆ ಸಾಕ್ಷಿಯಾಯಿತು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹರಿವಂಶ್ ಅವರ ಆಯ್ಕೆಯನ್ನು ‘ಗಾಢವಾದ ನಂಬಿಕೆಯ ಸಂಕೇತ’ ಎಂದು ಬಣ್ಣಿಸಿದರು. ಒಬ್ಬ ವ್ಯಕ್ತಿ ಸತತ ಮೂರನೇ ಅವಧಿಗೆ ಆಯ್ಕೆಯಾಗುತ್ತಿದ್ದಾರೆ ಎಂದರೆ, ಅದು ಈ ಸದನದ ಪ್ರತಿಯೊಬ್ಬ ಸದಸ್ಯರಿಗೂ ನಿಮ್ಮ ಮೇಲಿರುವ ಆಳವಾದ ನಂಬಿಕೆಯನ್ನು ತೋರಿಸುತ್ತದೆ. ನಿಮ್ಮ ಅನುಭವದಿಂದ ಈ ಸದನವು ಕಳೆದ ಅವಧಿಗಳಲ್ಲಿ ಅಪಾರ ಪ್ರಯೋಜನ ಪಡೆದಿದೆ, ಎಂದು ಮೋದಿ ಶ್ಲಾಘಿಸಿದರು. ರಾಜ್ಯಸಭೆಯಂತಹ ವೈವಿಧ್ಯಮಯ ರಾಜಕೀಯ ಸಿದ್ಧಾಂತಗಳಿರುವ ಸದನದಲ್ಲಿ ಕಲಾಪವನ್ನು ಸುಗಮವಾಗಿ ನಡೆಸುವುದು ಸುಲಭದ ಮಾತಲ್ಲ.

ಈ ಬಗ್ಗೆ ಮಾತನಾಡಿದ ಪ್ರಧಾನಿ, ಹರಿವಂಶ್ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಅವರು ಸದನದ ಕಲಾಪಗಳನ್ನು ಕೇವಲ ನಿರ್ವಹಿಸುವುದಿಲ್ಲ, ಬದಲಿಗೆ ತಮ್ಮ ಜ್ಞಾನ ಮತ್ತು ಶಿಸ್ತಿನಿಂದ ಸದನವನ್ನು ಶ್ರೀಮಂತಗೊಳಿಸುತ್ತಾರೆ ಎಂದರು.

ಹರಿವಂಶ್ ಅವರ ಹಿಂದಿನ ಅನುಭವಗಳು ಸದನದ ಬಲವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹೇಳಿದ ಪ್ರಧಾನಿ, ಅವರ ನಾಯಕತ್ವದಲ್ಲಿ ಸದನದ ಘನತೆ ಹೊಸ ಎತ್ತರವನ್ನು ತಲುಪಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಮ್ಮ ಸಮತೋಲಿತ ನಿಲುವು ಮತ್ತು ಸಮರ್ಪಣಾ ಮನೋಭಾವವು ಮುಂದಿನ ದಿನಗಳಲ್ಲೂ ಸದನಕ್ಕೆ ದಾರಿದೀಪವಾಗಲಿದೆ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳ ಮೂಲಕ ಈ ಸದನವು ಪ್ರಜಾಪ್ರಭುತ್ವದ ಹೊಸ ಎತ್ತರವನ್ನು ತಲುಪುತ್ತದೆ ಎಂಬ ಖಚಿತ ಭರವಸೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಪ್ಪ ಬೈತಾರೆ ಅಂತ ತಡರಾತ್ರಿ ವಾಟರ್ ಟ್ಯಾಂಕ್ ಏರಿ ಬಾಲಕನ ಹುಚ್ಚಾಟ! – Kannada News | Boy Threatened to commit self harm jumping from water tank, rescued

ಚಾಮರಾಜನಗರ, ಏಪ್ರಿಲ್ 17: ಅಪ್ಪ ಬೈತಾರೆ ಎಂಬ ಕಾರಣಕ್ಕೆ ಕೋಪಗೊಂಡ ಬಾಲಕನೊಬ್ಬ ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಗುಂಡ್ಲುಪೇಟೆ ಪಟ್ಟಣದ ನಾಗರತ್ಮಮ್ಮ ಬಡಾವಣೆಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬ ಬಾಲಕ ತಡರಾತ್ರಿ ಏಕಾಏಕಿ ನೀರಿನ ಟ್ಯಾಂಕ್ ಮೇಲೆ ಹತ್ತಿ ಆತಂಕ ಸೃಷ್ಟಿಸಿದ್ದಾನೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಮನವೊಲಿಸಲು ಪ್ರಯತ್ನಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಹೈಡ್ರಾಮ ನಂತರ ಬಾಲಕನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ನಂತರ ಪಾಲಕರು ಮತ್ತು ಸ್ಥಳೀಯರು ಬಾಲಕನಿಗೆ ಬುದ್ದಿವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಣ ಇಲಾಖೆ ಎಡವಟ್ಟಿನಿಂದ ಫಲಿತಾಂಶ ಕುಸಿತದ ಭೀತಿಯಲ್ಲಿ SSLC ವಿದ್ಯಾರ್ಥಿಗಳು! ಸರ್ಕಾರದ ವಿರುದ್ಧ ಪೋಷಕರ ಆಕ್ರೋಶ – Kannada News | Karnataka SSLC Exam Controversy: High Court Orders Marks Instead of Grades for Hindi; Parents Slam Education Dept

ಬೆಂಗಳೂರು, ಏಪ್ರಿಲ್ 17: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Exam) ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಗೊಂದಲದ ನಿರ್ಧಾರಗಳಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹಿಂದಿ (Hindi) ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಇದುವೇ ಈಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಇಂಥ ಗೊಂದಲದ ನಿರ್ಧಾರ ಪ್ರಕಟಿಸಿದ್ದರಿಂದ ವಿದ್ಯಾರ್ಥಿಗಳು ಆ ಪರೀಕ್ಷೆಯನ್ನು ಹಗುರವಾಗಿ ಪರಿಗಣಿಸಿದ್ದಾರೆ. ಈಗ ಕೋರ್ಟ್ ಅಂಕ ನೀಡಲು ಆದೇಶಿಸಿದ್ದರಿಂದ ಫಲಿತಾಂಶದಲ್ಲಿ ಕುಸಿತ ಆಗಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಗೊಂದಲ ಸೃಷ್ಟಿಸಿದ ಸರ್ಕಾರದ ನಡೆ

ಪರೀಕ್ಷೆ ಆರಂಭವಾಗುವ ಕೇವಲ ಎರಡು ದಿನಗಳ ಮೊದಲು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ತೃತೀಯ ಭಾಷೆಗೆ ಅಂಕಗಳ ಬದಲಾಗಿ ಗ್ರೇಡ್ ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಿಸಿದ್ದರು. ಸರ್ಕಾರದ ಈ ಆಕಸ್ಮಿಕ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ಗ್ರೇಡ್ ತಾನೇ ಬರುವುದು’ ಎಂಬ ಉದಾಸೀನತೆಯಿಂದ ಅನೇಕರು ಪರೀಕ್ಷೆ ಬರೆದಿದ್ದರು. ಆದರೆ ಈಗ ಕೋರ್ಟ್ ಅಂಕ ನೀಡುವಂತೆ ಆದೇಶಿಸಿರುವುದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಫಲಿತಾಂಶ ಕುಸಿತದ ಆತಂಕ ಮೂಡಿಸಿದೆ.

ಪೋಷಕರು ಮತ್ತು ಖಾಸಗಿ ಶಾಲೆಗಳ ಆಕ್ರೋಶ

ಶಿಕ್ಷಣ ಇಲಾಖೆಯ ಈ ಚೆಲ್ಲಾಟದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ (KAMS) ಮತ್ತು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿ ಇಂತಹ ನಿಯಮಗಳನ್ನು ಜಾರಿಗೆ ತರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳನ್ನು ಪದೇ ಪದೇ ಗೊಂದಲಕ್ಕೆ ದೂಡುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೃತೀಯ ಭಾಷೆ ಗ್ರೇಡ್ ವ್ಯವಸ್ಥೆ ವಿವಾದದ ಹಿನ್ನೆಲೆ

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಹಿಂದಿ ಹಾಗೂ ಇತರೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಅಂತಿಮ ಕ್ಷಣದಲ್ಲಿ ತಂದ ಈ ಬದಲಾವಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ನೀಡಲು ಹೊರಟಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗ: ಅಂಕ ನೀಡಲು ಹೈಕೋರ್ಟ್ ಆದೇಶ

ಪರೀಕ್ಷೆಯ ಮಧ್ಯದಲ್ಲಿ ಅಥವಾ ಫಲಿತಾಂಶದ ಹಂತದಲ್ಲಿ ಇಂತಹ ಪ್ರಮುಖ ನೀತಿ ಬದಲಾವಣೆಗಳನ್ನು ಮಾಡುವುದು ಕಾನೂನುಬಾಹಿರ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈ ವಾದವನ್ನು ಎತ್ತಿಹಿಡಿದಿದ್ದು, ಶೈಕ್ಷಣಿಕ ವರ್ಷದ ಆರಂಭದಲ್ಲೇ ಇಂತಹ ಬದಲಾವಣೆಗಳನ್ನು ತಿಳಿಸಬೇಕೆಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vybhava Lakshmi Rajayoga: ವೈಭವ ಲಕ್ಷ್ಮಿ ರಾಜಯೋಗ; ಶುಕ್ರ-ಚಂದ್ರರ ಸಂಯೋಗದಿಂದ ಈ 4 ರಾಶಿಗೆ ಕುಬೇರ ಯೋಗ! – Kannada News | Vybhava Lakshmi Rajayoga: Shukra Chandra Conjunction brings immense wealth to 4 signs!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ಮಾನವನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಪ್ರಸ್ತುತ ಶುಕ್ರನು ಈಗಾಗಲೇ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಆದರೆ, ಏಪ್ರಿಲ್ 17 ರಂದು ಮನಃಕಾರಕ ಚಂದ್ರನು ಸಹ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಮೂಲಕ ಮೇಷ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಅಪರೂಪದ ಸಂಯೋಜನೆ ಏರ್ಪಡುತ್ತಿದೆ.

ಈ ಸಂಯೋಗವು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲ್ಪಟ್ಟಿರುವ ‘ವೈಭವ ಲಕ್ಷ್ಮಿ ರಾಜಯೋಗ’ವನ್ನು ಸೃಷ್ಟಿಸುತ್ತಿದೆ. ಈ ರಾಜಯೋಗದ ಪ್ರಭಾವದಿಂದಾಗಿ ವಿಶೇಷವಾಗಿ ನಾಲ್ಕು ರಾಶಿಗಳ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ಆ ಅದೃಷ್ಟವಂತ ರಾಶಿಗಳು ಇಲ್ಲಿವೆ:

ಮೇಷ ರಾಶಿ (Aries):

ಮೇಷ ರಾಶಿಯವರಿಗೆ ಈ ಸಮಯವು ‘ಸುವರ್ಣ ಕಾಲ’ ಎನ್ನಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದ್ದು, ದೈಹಿಕವಾಗಿ ಸಕ್ರಿಯರಾಗಿರುತ್ತೀರಿ. ಬರಬೇಕಿದ್ದ ಬಾಕಿ ಹಣ ಸಮಯಕ್ಕೆ ಸರಿಯಾಗಿ ಕೈ ಸೇರಲಿದೆ. ಉದ್ಯಮಿಗಳಿಗೆ ದೊಡ್ಡ ಮಟ್ಟದ ಪ್ರಾಜೆಕ್ಟ್‌ಗಳು ಸಿಗಲಿವೆ. ಹಳೆಯ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ನಿಮ್ಮದಾಗಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಮತ್ತು ಜೀವನದಲ್ಲಿ ಸಂತೋಷ ನೆಲೆಸಲಿದೆ.

ಕರ್ಕಾಟಕ ರಾಶಿ (Cancer):

ಚಂದ್ರನು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ, ಈ ಸಂಯೋಗವು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಹೂಡಿಕೆ ಮಾಡಲು ಇದು ಸಕಾಲ. ಈ ಹಿಂದೆ ನೀವು ಮಾಡಿದ ಹೂಡಿಕೆಗಳಿಂದ ಈಗ ನಿರೀಕ್ಷೆಗೂ ಮೀರಿ ಲಾಭ ಬರಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಕೌಟುಂಬಿಕ ಮತ್ತು ವೃತ್ತಿ ಜೀವನದ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳುವಿರಿ. ಸಕಲ ಸೌಕರ್ಯಗಳು ಲಭ್ಯವಾಗಿ ದಿನಗಳು ಸುಗಮವಾಗಿ ಸಾಗಲಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧನು ರಾಶಿ (Sagittarius):

ಧನು ರಾಶಿಯವರಿಗೆ ಇದು ವಿಜಯೋತ್ಸವದ ಸಮಯ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಲಭಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಶುಭ ವಾರ್ತೆ ಕಾದಿದೆ. ಶತ್ರುಗಳ ಕಾಟ ಕಡಿಮೆಯಾಗಿ ನಿಮ್ಮ ಹಾದಿ ಸುಗಮವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಅನಿರೀಕ್ಷಿತವಾಗಿ ಹಣದ ಹರಿವು ಉಂಟಾಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ.

ಕುಂಭ ರಾಶಿ (Aquarius):

ಕುಂಭ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ಲಾಭ ಕಂಡುಬರಲಿದೆ. ನಿಮ್ಮ ಕೆಲಸದ ಬಗ್ಗೆ ನೀವು ತೋರುವ ಏಕಾಗ್ರತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ವ್ಯಾಪಾರಸ್ಥರಿಗೆ ಈ ಅವಧಿಯು ಗರಿಷ್ಠ ಲಾಭ ತಂದುಕೊಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕುಂಭ ರಾಶಿಯವರಿಗೆ ಎಲ್ಲ ದಿಕ್ಕುಗಳಿಂದಲೂ ಶುಭ ಫಲಗಳೇ ಲಭಿಸಲಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಲೂರು PDO ವಿರುದ್ಧ ಶಾಸಕ ಸಮೃದ್ಧಿ ಮಂಜುನಾಥ್ ಫುಲ್​​ ಗರಂ: ಕಾರಣ ಇಲ್ಲಿದೆ

ಕೋಲಾರ, ಏಪ್ರಿಲ್​​ 17: ಜನಸ್ಪಂದನ ಕಾರ್ಯಕ್ರಮದಲ್ಲಿ ಪಿಡಿಒ ವಿರುದ್ಧ ಶಾಸಕ ಸಮೃದ್ಧಿ ಮಂಜುನಾಥ್ ಗರಂ ಆದ ಪ್ರಸಂಗ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ನಿನ್ನೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡೆದಿದೆ. 78 ಅರ್ಜಿಗಳ ಪೈಕಿ 56 ಅರ್ಜಿಗಳ ಕಾರ್ಯವೈಖರಿ ಬಗ್ಗೆ ದೂರು ಹಿನ್ನೆಲೆ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡ ಶಾಸಕರು ತಾಯಲೂರು ಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ನೈರ್ಮಲ್ಯ, ಅನಧಿಕೃತ ಅಂಗಡಿಗಳ ತೆರವು, ಚರಂಡಿ ಸ್ವಚ್ಛತೆ, ದೇವಾಲಯದ ಎದುರು ಮಾಂಸದ ಅಂಗಡಿಗೆ ಅನುಮತಿ ಸೇರಿದಂತೆ ಗ್ರಾಮಸ್ಥರಿಂದ ಹಲವು ದೂರು ಬಂದ ಹಿನ್ನೆಲೆ ಕೂಡಲೇ ಪಿಡಿಒ ವರ್ಗಾವಣೆಗೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾರು, ಖಾಸಗಿ ಬಸ್​​ ಮುಖಾಮುಖಿ ಢಿಕ್ಕಿ: ಸ್ಥಳದಲ್ಲೇ ಪ್ರಾಣಬಿಟ್ಟ 6 ಮಂದಿ; ಧಗಧಗಿಸಿದ ವಾಹನಗಳು – Kannada News | 6 Killed in Private Bus and Car Collision Near Surapura in Yadgir

ಕಾರು, ಖಾಸಗಿ ಬಸ್​​ ಮುಖಾಮುಖಿ ಢಿಕ್ಕಿImage Credit source: Tv9 Kannada

ಯಾದಗಿರಿ, ಏಪ್ರಿಲ್​​ 17: ಕಾರು ಮತ್ತು ಖಾಸಗಿ ಬಸ್​​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ. ಯಾದಗಿರಿಯಿಂದ ರಾಯಚೂರು ಕಡೆ ಹೊರಟಿದ್ದ ಕಾರು, ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Published On – 11:33 am, Fri, 17 April 26

Source link

ಡಾಲರ್ ಎದುರು ರುಪಾಯಿ 39 ಪೈಸೆ ವೃದ್ಧಿ; ಭಾರತದ ಕರೆನ್ಸಿಗೆ ಬಲ ಸಿಕ್ಕಿದ್ದು ಹೇಗೆ? – Kannada News | Rupee gains against US dollar as west asia tension eases, crude oil prices down and FII inflows rise

ಡಾಲರ್ ಎದುರು ರುಪಾಯಿImage Credit source: Shutterstock

ನವದೆಹಲಿ, ಏಪ್ರಿಲ್ 17: ಇರಾನ್ ಯುದ್ಧ ಭೀತಿ ಸ್ವಲ್ಪ ತಗ್ಗುತ್ತಿದ್ದಂತೆಯೇ ವಿವಿಧ ಮಾರುಕಟ್ಟೆಗಳು ಸಮಾಧಾನದ ಉಸಿರು ಬಿಡುತ್ತಿವೆ. ಡಾಲರ್ ಎದುರು ಉಸಿರುಗಟ್ಟುತ್ತಿದ್ದ ರುಪಾಯಿಗೆ ಸ್ವಲ್ಪ ಜೀವ ಸಿಕ್ಕಿದೆ. ಶುಕ್ರವಾರದ ಬೆಳಗಿನ ಟ್ರೇಡಿಂಗ್​ನಲ್ಲಿ ಡಾಲರ್ ಎದುರು ರುಪಾಯಿ 39 ಪೈಸೆ ಹೆಚ್ಚಿದೆ. ಟ್ರೇಡಿಂಗ್​ನ ಒಂದು ಹಂತದಲ್ಲಿ ರುಪಾಯಿ ಮೌಲ್ಯ 92.75 ಮಟ್ಟದಲ್ಲಿತ್ತು.

ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ನಿನ್ನೆ ಗುರುವಾರ ಒಂದು ಡಾಲರ್​ಗೆ ರುಪಾಯಿ 93ಕ್ಕಿಂತ ಹೆಚ್ಚು ಇತ್ತು. ಇವತ್ತು 92.91ರಲ್ಲಿ ವಹಿವಾಟು ಆರಂಭ ಕಂಡ ರುಪಾಯಿ 92.75ರವರೆಗೆ ಏರಿದೆ. ಡಾಲರ್ ಎದುರು ರುಪಾಯಿ ಸತತ ಎರಡನೇ ದಿನ ಏರಿಕೆ ಕಂಡಿರುವುದು ವಿಶೇಷ. ನಿನ್ನೆ 19 ಪೈಸೆ ಹೆಚ್ಚಿದರೆ ಇವತ್ತು 39 ಪೈಸೆಯಷ್ಟು ಬಲಪಡೆದಿದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ

ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಲು ಏನು ಕಾರಣ?

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಯುದ್ಧ ಭೀತಿ ಕಡಿಮೆ ಆಗಿ ಶಾಂತಿ ಮರಳುವ ಸಾಧ್ಯತೆ ಕಾಣುತ್ತಿದೆ. ಇದು ರುಪಾಯಿ ವೃದ್ಧಿಗೆ ಪ್​ರಮುಖ ಕಾರಣವಿರಬಹುದು ಎಂದು ಭಾವಿಸಲಾಗಿದೆ.

ಇಸ್ರೇಲ್ ಮತ್ತು ಲೆಬನಾನ್ ಮಧ್ಯೆ 10 ದಿನದ ಕದನ ವಿರಾಮ ಏರ್ಪಟ್ಟಿರುವುದು; ಇರಾನ್ ಮತ್ತು ಅಮೆರಿಕದ ಮಧ್ಯೆ ಮಾತುಕತೆ ಪುನಾರಂಭಗೊಳ್ಳುವುದು ಸೇರಿದಂತೆ ವಿವಿಧ ಪೂರಕ ವಿದ್ಯಮಾನಗಳು ಮಾರುಕಟ್ಟೆ ಅಪಾಯವನ್ನು ಕಡಿಮೆಗೊಳಿಸಿವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ತಲೆನೋವಾಗಿದ್ದ ಹಾರ್ಮುಜ್ ಜಲಸಂಧಿ ತಡೆಯೂ ನಿವಾರಣೆಯಾಗುವ ಆಶಯ ಇದೆ. ಹಾರ್ಮುಜ್​ನಲ್ಲಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಇರಾನ್​ಗೆ ಚೀನಾ ಮನವಿ ಮಾಡಿಕೊಂಡಿರುವುದು ದೊಡ್ಡ ವಿಚಾರವಾಗಿದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

ಕಚ್ಚಾ ತೈಲ ಬೆಲೆ ಮತ್ತು ಎಫ್​ಐಐ ಒಳಹರಿವು

ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್​ಗಿಂತ ಕೆಳಗೆ ಇಳಿದಿದೆ. ತೈಲ ಬೆಲೆ ಕಡಿಮೆ ಆದರೆ ಭಾರತದ ಆಮದು ವೆಚ್ಚವೂ ಕಡಿಮೆ ಆಗುತ್ತದೆ. ಇನ್ನೊಂದು ಸಂಗತಿ ಎಫ್​​ಐಐಗಳದ್ದು. ಈ ವಿದೇಶೀ ಸಾಂಸ್ಥಿಕ ಹೂಡಿಕೆಗಳ ಒಳಹರಿವು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿರುವುದು ಕೂಡ ರುಪಾಯಿ ಕರೆನ್ಸಿಗೆ ಬಲ ಸಿಗಲು ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ – Kannada News | Panchamasali Mutt Dispute Intensifies: Expelled Vachanananda Swamiji Holds Ground at Harihar Gurupeetha

ಸ್ವಾಮೀಜಿಗೆ ಭಕ್ತರ ಭದ್ರತೆImage Credit source: Tv9 Kannada

ದಾವಣಗೆರೆ, ಏಪ್ರಿಲ್​​ 17: ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಧರ್ಮದರ್ಶಿ ಮಂಡಳಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಿದೆಯಾದರೂ ಸ್ವಾಮೀಜಿ ಮಾತ್ರ ಇನ್ನೂ ಮಠದಲ್ಲೇ ತಂಗಿದ್ದಾರೆ. ಏ.13ರಂದು ಪೀಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದ್ದು, ಅವರ ವೈಯಕ್ತಿಕ ಸಾಮಾಗ್ರಿಗಳ ಜೊತೆಗೆ ಮಠ ತೊರೆಯುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಹೀಗಿದ್ದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಮಠದಲ್ಲಿಯೇ ಸ್ವಾಮೀಜಿ ತಂಗಿದ್ದಾರೆ. ಕೋರ್ಟ್​ಗೆ ಕೇವಿಯಟ್ ಹಾಕಿ ಮಠದಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ.

ಶ್ರೀಗಳಿಗೆ ಗ್ರಾಮಸ್ಥರ ಕಾವಲು

ಇನ್ನು ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗಳಿಗೆ ಧರ್ಮದರ್ಶಿ ಸಮಿತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಭಕ್ತರೇ ಸ್ವಾಮೀಜಿಗೆ ಕಾವಲಾಗಿದ್ದಾರೆ. ಹರಿಹರ ತಾಲೂಕಿನ ಹಳ್ಳಿಗಳಿಂದ ಮಠ ಕಾಯಲು ಭಕ್ತರು ಬರುತ್ತಿದ್ದು, ಲೆಕ್ಕ ಕೊಡಿ ಅಭಿಯಾನದ ಉಸ್ತುವಾರಿ ಆಗಿರುವ ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಮಠದಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಶ್ರೀಗಳು ಮಕ್ಕಳಿಂದ ಮಸಾಜ್​​ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದ ಧರ್ಮದರ್ಶಿ ಮಂಡಳಿ, ಮಕ್ಕಳಿಗೆ ವಚನಾನಂದಶ್ರೀ ಹಿಂಸೆ ನೀಡಿದ್ದಾರೆ ಎಂದು ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ ಉಚ್ಛಾಟನೆ; ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ಧರ್ಮದರ್ಶಿ ಮಂಡಳಿ ನಿರ್ಧಾರ ಖಂಡಿಸಿದ್ದ ಶ್ರೀಗಳು

ಪಂಚಮಸಾಲಿ ಗುರುಪೀಠದಿಂದ ತಮ್ಮನ್ನು ಉಚ್ಛಾಟಿಸುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ವಚನಾನಂದ ಶ್ರೀಗಳು ನಿರ್ಧಾರ ಹಾಸ್ಯಾಸ್ಪದ ಎಂದಿದ್ದರು. ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಾಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ನಾನು ಲಕ್ಷಾಂತರ ಭಕ್ತರಿಗೆ ಉತ್ತರಿಸಬೇಕು, ಈ 12 ಜನರಿಗೆ ಉತ್ತರಿಸಲ್ಲ. ಟ್ರಸ್ಟ್​ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ದೂರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:49 am, Fri, 17 April 26

Source link

ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್​​ಗೆ ಆರಂಭವಾಯ್ತು ಎರಡನೇ ಸೀಸನ್; ಗೆದ್ದವರಿಗೆ 5 ಲಕ್ಷ ರೂಪಾಯಿ – Kannada News | TV9 Corporate Badminton Championship S2: Win 5 Lakhs Registrations Open

ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್

ಟಿವಿ9 ನೆಟ್ವರ್ಕ್ ಈ ಮೊದಲು ಆಯೋಜಿಸಿದ್ದ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಯಶಸ್ವಿ ಆಗಿತ್ತು. ವೃತ್ತಿಪರತೆ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ತುಂಬಲು ಇದು ಸಹಕಾರಿ ಆಗಿತ್ತು. ಅಲ್ಲದೆ, ಉದ್ಯಮದ ನಾಯಕರನ್ನು ಒಂದು ಕಡೆ ಸೇರಿಸಿತ್ತು. ಸೀಸನ್ 1 ಯಶಸ್ಸಿನ ಬಳಿಕ ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಆರಂಭ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮೊದಲ ಸೀಸನ್ ಅಲ್ಲಿ ಮೈಕ್ರೋಸಾಫ್ಟ್, ಇನ್​​ಫೋಸಿಸ್, ಅಮೇಜಾನ್, ಐಕಿಯಾ, ಮೇಕ್​​ ಮೈ ಟ್ರಿಪ್, ಟೈಮ್ಸ್ ಆಫ್ ಇಂಡಿಯಾ, ಎಬಿಬಿ, ಡಾಕ್ಟರ್​ ರೆಡ್ಡಿಸ್, ನೋವಾರ್ಟಿಸ್, ಡೆಲ್​, ಕ್ಯಾಬ್ಜಮಿನಿ, ಗ್ರೀಂಕೋ ಸೇರಿದಂತೆ ಹಲವು ಕಂಪನಿಗಳು ಭಾಗಿ ಆಗಿದ್ದವು. 1000 ಕ್ಕೂ ಹೆಚ್ಚು ಪಂದ್ಯಗಳು ನಡೆದವು.

ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಬರುತ್ತಿದೆ. ಅದು ಕೂಡ ಮತ್ತಷ್ಟು ಹಿರಿದಾಗಿ. ಮೇ 15ರಿಂದ 17ರವರೆಗೆ ಹೈದರಾಬಾದ್​​ನ ಪ್ರತಿಷ್ಠಿತ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಈ ಚಾಂಪಿಯನ್​​ಶಿಪ್ ನಡೆಯಲಿದೆ.

ಭಾರತದ ಅತ್ಯಂತ ಗೌರವಾನ್ವಿತ ಬ್ಯಾಡ್ಮಿಂಟನ್ ಐಕಾನ್‌ಗಳಲ್ಲಿ ಒಬ್ಬರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರೊಂದಿಗಿನ ಸಹಯೋಗದಲ್ಲಿ ಚಾಂಪಿಯನ್‌ಶಿಪ್ ಮುಂದುವರಿಯುತ್ತಿದೆ. ಐತಿಹಾಸಿಕ ಆಲ್ ಇಂಗ್ಲೆಂಡ್ ಚಾಂಪಿಯನ್ (2001) ಮತ್ತು ಭಾರತದ ಬ್ಯಾಡ್ಮಿಂಟನ್ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿರುವ ಗೋಪಿಚಂದ್, ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ರೂಪಿಸುವಲ್ಲಿ ಮತ್ತು ಭಾರತದಲ್ಲಿ ಕ್ರೀಡೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಂಪಿಯನ್‌ಶಿಪ್‌ನೊಂದಿಗಿನ ಅವರ ಸಂಯೋಜಕತ್ವ ವೃತ್ತಿಪರತೆ, ವಿಶ್ವಾಸಾರ್ಹತೆ ಮತ್ತು ವಿಶ್ವ ದರ್ಜೆಯ ಪಂದ್ಯಾವಳಿಯ ಅನುಷ್ಠಾನಕ್ಕೆ ಸಹಕಾರಿ ಆಗಿದೆ.

ಚಾಂಪಿಯನ್​​ಶಿಪ್ ವಿಭಾಗ: ಚಾಂಪಿಯನ್​​ಶಿಪ್ ವಿಭಾಗದಲ್ಲಿ ಪುರುಷರ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ ನಡೆಯಲಿದೆ. ಕನಿಷ್ಠ 3 ಜನರು ಹಾಗೂ ಗರಿಷ್ಠ 5 ಜನರು ತಂಡದಲ್ಲಿ ಇರಲು ಅವಕಾಶವಿದೆ. ತಂಡದ ಎಲ್ಲ ಸದಸ್ಯರು ಒಂದೇ ಕಂಪನಿಗೆ ಸೇರಿರಬೇಕು.

ಮುಕ್ತ ವಿಭಾಗದ ಚಾಂಪಿಯನ್‌ಶಿಪ್: ಈ ವಿಭಾಗದಲ್ಲಿ ವೈಯಕ್ತಿಕವಾಗಿ ಭಾಗವಹಿಸಬಹುದು.

ಮಹಿಳಾ ಸಿಂಗಲ್ಸ್: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಮಿಶ್ರ ಡಬಲ್ಸ್‌: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಪ್ರತಿ ವಿಭಾಗದಲ್ಲಿ ವಿನ್ ಆದವರಿಗೆ 5 ಲಕ್ಷ ರೂಪಾಯಿ ಹಣ ಸಿಗಲಿದೆ.

ಚಾಂಪಿಯನ್‌ಶಿಪ್ ಎಲ್ಲಾ ವಿಭಾಗಗಳಲ್ಲಿ ಒಟ್ಟು 5 ಲಕ್ಷ ಬಹುಮಾನಗಳನ್ನು ನೀಡಲಾಗುತ್ತದೆ. ಆಕರ್ಷಕ ಟ್ರೋಫಿ ಕೂಡ ಸಿಗಲಿದೆ.

www.tv9x.com/corporatecup ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಿ. ಯಾವುದೇ ಪ್ರಶ್ನೆಗಳಿಗೆ: corporatecup@tv9.com ಮೇಲ್ ಮಾಡಿ ಅಥವಾ 70320 03222 ಸಂಖ್ಯೆಗೆ ಕರೆ ಮಾಡಿದೆ.

ಈವೆಂಟ್ ಪಾಲುದಾರಿಕೆಗಳು ಮತ್ತು ಸಹಯೋಗಗಳಿಗಾಗಿ, ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ:

ಆಂಧ್ರ-ತೆಲಂಗಾಣ: ಎಂಎನ್​ ಚರ್ಯ: 9948299698
ಕರ್ನಾಟಕ: ಶ್ರೀಧರ್ : 9008026103
ಕೋಲ್ಕತ್ತಾ: ಮೊಹುವಾ ರಾಯ್: 8334872780
ದೆಹಲಿ: ವಿಕಾಸ್: 9810266385
ಗುಜರಾತ್: ಮೌಲಿಕ್ ಶಾ: 9909941607
ಮಹರಾಷ್ಟ್ರ: ಭೂಷಣ್: 9820139372

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರಾಹಕರಿಗೆ ಶಾಕ್: ರೊಟ್ಟಿ, ಚಪಾತಿ, ಹೋಳಿಗೆ ದರ ಏರಿಕೆ – Kannada News | Raichur Food Crisis: Prices of Roti and Chapati Hiked Due to Commercial LPG Shortage; Consumers Feel the Heat

ರಾಯಚೂರು, ಏಪ್ರಿಲ್ 17: ರಾಯಚೂರಿನಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್‌ಗಳ ಅಭಾವದ ಪರಿಣಾಮವಾಗಿ ರೊಟ್ಟಿ ಕೇಂದ್ರಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಸಾಮ್ರಾಟ್ ರೊಟ್ಟಿ ಕೇಂದ್ರದಲ್ಲಿ, ಸೌದೆ ಒಲೆಗಳ ಮೂಲಕ ಇತರ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಆದರೆ, ಗ್ರಾಹಕರಿಗೆ ತ್ವರಿತವಾಗಿ ಬಿಸಿಬಿಸಿಯಾಗಿ ನೀಡಬೇಕಾದ ರೊಟ್ಟಿ ಮತ್ತು ಚಪಾತಿಗೆ ಗ್ಯಾಸ್ ಬಳಸಲಾಗುತ್ತಿದೆ. ಎಲ್​ಪಿಜಿ ಗ್ಯಾಸ್ ಸಮಸ್ಯೆ ಮತ್ತು ಹೆಚ್ಚಿದ ವೆಚ್ಚದಿಂದಾಗಿ, ರೊಟ್ಟಿ ಮತ್ತು ಚಪಾತಿಯ ಬೆಲೆಯನ್ನು 2 ರೂಪಾಯಿ ಹೆಚ್ಚಿಸಲಾಗಿದೆ. ಇದರೊಂದಿಗೆ, 10 ರೂಪಾಯಿ ಇದ್ದ ರೊಟ್ಟಿ ಮತ್ತು ಚಪಾತಿ ಇಂದಿನಿಂದ 12 ರೂಪಾಯಿ ಆಗಿದೆ. ಹೋಳಿಗೆ ಬೆಲೆ ಕೂಡ 5 ರೂಪಾಯಿ ಏರಿಕೆ ಕಂಡಿದೆ. ರೊಟ್ಟಿ ಕೇಂದ್ರದ ಮಾಲೀಕರ ಪ್ರಕಾರ, ಅನಿಲ ಸಮಸ್ಯೆ ದೇಶವ್ಯಾಪಿಯಾಗಿದ್ದು, ತುರ್ತು ಅಗತ್ಯದ ಕಾರಣ ರೊಟ್ಟಿ ಮತ್ತು ಚಪಾತಿ ಬೆಲೆ ಮಾತ್ರ ಹೆಚ್ಚಿಸಲಾಗಿದೆ. ಇತರ ಪದಾರ್ಥಗಳನ್ನು ಸೌದೆ ಒಲೆಯಲ್ಲಿ ತಯಾರಿಸುವುದರಿಂದ ಅವುಗಳ ಬೆಲೆಯನ್ನು ಹೆಚ್ಚಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಬೆಲೆ ಏರಿಕೆಯು ಗ್ರಾಹಕರಿಗೆ ಹೊರೆಯಾಗಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಸಮಸ್ಯೆ ಮುಂದುವರಿದರೆ ಮತ್ತಷ್ಟು ದರ ವ್ಯತ್ಯಾಸವಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version