Chanakya Niti: ಈ ಸಣ್ಣ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತವೆ

Chanakya Niti: ಈ ಸಣ್ಣ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತವೆ

ಈಗಿನ ಕಾಲಘಟ್ಟದಲ್ಲಿ ಯುವ ಜನ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿಕೊಂಡು ದೈಹಿಕವಾಗಿ ಸದೃಢವಾಗಿರುತ್ತಾರೆ. ಆದರೆ ಹೆಚ್ಚಿನವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಹೌದು ಜೀವನದಲ್ಲಿ ಎದುರಾಗುವ ಕಷ್ಟ ಸೋಲುಗಳಿಗೆ ಭಯಪಟ್ಟು ಪ್ರಾಣ ಕಳೆದುಕೊಳ್ಳುತ್ತಾರೆ, ಸಣ್ಣಪುಟ್ಟ ವಿಚಾರಗಳಿಗೆ ಖಿನ್ನತೆಗೆ ಒಳಗಾಗುತ್ತಾರೆ. ಈ ರೀತಿ ದುರ್ಬಲ ಮನಸ್ಥಿತಿಯಿದ್ದರೆ ಎಂದಿಗೂ ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಲು ಸಾಧ್ಯವಿಲ್ಲ, ಧೈರ್ಯದಿಂದ ಬದುಕಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಒಳಗಿನಿಂದ ಬಲಶಾಲಿಯಾಗಿದ್ದಾಗ ಮಾತ್ರ ಎಂತಹದ್ದೇ ಸವಾಲುಗಳನ್ನು ಭಯವಿಲ್ಲದೆ ಎದುರಿಸಲು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅದೇ ರೀತಿ ಮಾನಸಿಕವಾಗಿ ಬಲಶಾಲಿಯಾಗಲು ಒಂದಷ್ಟು ಸಲಹೆಗಳನ್ನು ಸಹ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಜೀವನವು ಸಕಾರಾತ್ಮಕ ರೀತಿಯಲ್ಲಿ ಬದಲಾಗುವುದಂತೂ ನಿಜ.

ಮಾನಸಿಕವಾಗಿ ಬಲಶಾಲಿಯಾಗಲು ಏನು ಮಾಡಬೇಕು?

ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಮತ್ತು ಸ್ಪಷ್ಟವಾಗಿ ಇರಿಸಿ: ನೀವು ನಿಮ್ಮನ್ನು ಒಳಗಿನಿಂದ ಬಲಪಡಿಸಿಕೊಳ್ಳಲು ಬಯಸಿದರೆ, ಸಕಾರಾತ್ಮಕವಾಗಿ ಆಲೋಚಿಸುವುದನ್ನು ಕಲಿಯಿರಿ, ನಿಮ್ಮ ಆಲೋಚನೆಗಳು ಸ್ಪಷ್ಟವಾಗಿರಿಸಿ. ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳಿಂದ ತುಂಬಿದ್ದರೆ, ನೀವು ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಚಾಣಕ್ಯರ ಪ್ರಕಾರ,  ಸಕಾರಾತ್ಮಕ ಮನಸ್ಥಿತಿಯು ಸ್ಪಷ್ಟ ಗುರಿಗಳನ್ನು ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಾಧ್ಯ.

ಶಿಸ್ತಿನಿಂದ ಬದುಕಲು ಪ್ರಾರಂಭಿಸಿ: ಶಿಸ್ತು ನಿಮ್ಮ ಜೀವನವನ್ನು ಸಮತೋಲನ ಮತ್ತು ಸಂಘಟಿತವಾಗಿಸುತ್ತದೆ. ದೈನಂದಿನ ದಿನಚರಿಯನ್ನು ಸರಿಯಾಗಿ ಪಾಲಿಸುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು ಮತ್ತು ಸೋಮಾರಿತನವನ್ನು ತಪ್ಪಿಸುದರಿಂದ ಒಬ್ಬ ವ್ಯಕ್ತಿಯು ಬಲಶಾಲಿಯಾಗಲು ಸಾಧ್ಯವಾಗುತ್ತದೆ.  ಅದೇ ಶಿಸ್ತು ಇಲ್ಲದೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಜೀವನವನ್ನು ಶಿಸ್ತಿನಿಂದ ನಡೆಸಿದಾಗ, ನಿಮ್ಮ ಆತ್ಮವಿಶ್ವಾಸವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ, ಯಶಸ್ಸನ್ನು ಕೂಡ ಸಾಧಿಸಲು ಸಾಧ್ಯವಾಗುತ್ತದೆ.

ಉತ್ತಮ ಸಂಘದೊಂದಿಗಿರುವುದು: ಚಾಣಕ್ಯರ ಪ್ರಕಾರ, ನೀವು ಯಾವ ರೀತಿಯ ಜನರೊಂದಿಗೆ ಇರುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಒಳ್ಳೆಯ ಜನರ ಸಹವಾಸ ಮಾಡಿದಾಗ, ನೀವು ಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ಆದರೆ, ಕೆಟ್ಟ ಸಹವಾಸವು ನಿಮ್ಮನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಹಾಗಾಗಿ ಒಳಗಿನಿಂದ ಬಲಶಾಲಿಯಾಗಲು, ನೀವು ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ಮತ್ತು  ನನಿಮ್ಮನ್ನು ಪ್ರೇರೇಪಿಸುವ ಜನರೊಂದಿಗಿನ ಸಹವಾಸದಲ್ಲಿರಿ.

ಇದನ್ನೂ ಓದಿ: ಜೀವನದಲ್ಲಿ ಮುಂದುವರೆಯಲು ಬಯಸಿದರೆ ವಿಚಾರಗಳ ಬಗ್ಗೆ ಹಿಂಜರಿಕೆ ಪಡಬಾರದು

ಜ್ಞಾನ ಪಡೆಯುವ ಮತ್ತು ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ನೀವು ನಿಮ್ಮನ್ನು ಬಲಪಡಿಸಿಕೊಳ್ಳಲು ಬಯಸಿದರೆ, ನೀವು ನಿರಂತರ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ಕಲಿಯಲು ಪುಸ್ತಕಗಳನ್ನು ಓದಿ, ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹಿಂದಿನ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನೀವು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ. ಚಾಣಕ್ಯನ ಪ್ರಕಾರ, ನಿಮ್ಮೊಳಗಿನ ಜ್ಞಾನವು ನಿಮ್ಮ ದೊಡ್ಡ ಶಕ್ತಿ. ಅದನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನೀವು ಹೆಚ್ಚು ಜ್ಞಾನವನ್ನು ಹೊಂದಿದಾಗ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

ತಾಳ್ಮೆ ಮತ್ತು ನಿಯಂತ್ರಣ: ಜೀವನದಲ್ಲಿ ಕೆಲವು ಸಮಯಗಳಲ್ಲಿ ತಕ್ಷಣದ ಫಲಿತಾಂಶಗಳು ಸಿಗುವುದಿಲ್ಲ. ಅಂತಹ ಸಮಯದಲ್ಲಿ ತಾಳ್ಮೆಯಿಂದಿರುವುದು ಬಹಳ ಮುಖ್ಯ. ಚಾಣಕ್ಯನ ಪ್ರಕಾರ, ತಾಳ್ಮೆಯುಳ್ಳ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿಯೂ ಸಹ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಆತುರ ಮತ್ತು ಕೋಪ ಮಾಡಿಕೊಳ್ಳದೆ ಶಾಂತವಾಗಿ ಯೋಚಿಸುವುದನ್ನು ಕಲಿಯಿರಿ.

ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಿ: ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಯು ಒಳಗಿನಿಂದ ಬಲಶಾಲಿಯಾಗಿರುತ್ತಾನೆ. ಆದ್ದರಿಂದ, ನಿಮ್ಮ ಆಸೆಗಳನ್ನು ಮತ್ತು ಅಭ್ಯಾಸಗಳನ್ನು ನಿಯಂತ್ರಿಸಲು ಕಲಿಯಿರಿ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದರೆ, ಸಮಸ್ಯೆಯು ಆತನ ಸುತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ: ಸಿಡಿದೆದ್ದ ಭಜರಂಗದಳ

ಚಿಕ್ಕಮಗಳೂರು, ಮಾರ್ಚ್​ 26: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಬರೆದಿರುವ ಖಾಸಗಿ ಬಸ್​ವೊಮದು ಚಿಕ್ಕಮಗಳೂರು ನಗರದಲ್ಲಿ ಕಂಡುಬಂದಿದೆ. ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್​ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್​ ಎಂದು ಬರೆಸಲಾಗಿದೆ. ಸದ್ಯ ಇದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದ್ದು, ಬಸ್​ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಗೆ ಪೊಲೀಸರು ಬಸ್ ಕರೆತಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮ್ ಚರಣ್​​ಗೆ ಗಂಭೀರ ಗಾಯ: ‘ಪೆದ್ದಿ’ ಬಿಡುಗಡೆ ಇನ್ನಷ್ಟು ಮುಂದಕ್ಕೆ

ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ. ಆದರೆ ಇದೀಗ ರಾಮ್ ಚರಣ್ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಆಗಿರುವ ಗಾಯ ಹಾಗೂ ಅದರಿಂದ ರಾಮ್ ಚರಣ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಂಭವ ಇದೆ. ಇದು ರಾಮ್ ಚರಣ್ ಅಭಿಮಾನಿಗಳಿಗೆ ತೀವ್ರ ಆತಂಕ ತಂದಿದೆ.

‘ಪೆದ್ದಿ’ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಬಳಿಕ ಮಾರ್ಚ್ ತಿಂಗಳ ದಿನಾಂಕ ನಿಗದಿಯಾಯ್ತು. ಆದರೆ ಮಾರ್ಚ್ ತಿಂಗಳಲ್ಲಿ ಪವನ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಜಾಗ ಮಾಡಿಕೊಡಲೆಂದು ‘ಪೆದ್ದಿ’ ಸಿನಿಮಾವನ್ನು ಏಪ್ರಿಲ್ 30ಕ್ಕೆ ಮುಂದೂಡಲಾಯ್ತು. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಸಹ ಮುಗಿದಿತ್ತು. ಆದರೆ ಪ್ಯಾಚಪ್ ವರ್ಕ್​ ಚಿತ್ರೀಕರಣ ಮಾಡುವ ಸಮಯದಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ಪೆಟ್ಟಾಯ್ತು. ಇದರಿಂದ ಶೀಘ್ರವೇ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯ್ತು.

ಇದು ಸಿನಿಮಾ ತಂಡಕ್ಕೆ ಆತಂಕ ತಂದಿದೆ. ಇನ್ನು ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆಯಾದರೂ ರಾಮ್ ಚರಣ್ ಅವರು ಸದ್ಯಕ್ಕೆ ಚಿತ್ರೀಕರಣ ಮುಂದುವರೆಸುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನಲಾಗುತ್ತಿದೆ. ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ ‘ಪೆದ್ದಿ’ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ರಾಮ್ ಚರಣ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ, ಅವರ ಎಡಗಣ್ಣಿನ ರೆಪ್ಪೆಯ ಭಾಗಕ್ಕೆ ಪೆಟ್ಟಾಗಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.

ಇದನ್ನೂ ಓದಿ:‘ಧುರಂಧರ್ 2’ ಚಿತ್ರದಲ್ಲಿ ಹೇಳಿದ್ದು ತಪ್ಪೆನಿಸಿದರೆ, ಅದರ ವಿರುದ್ಧ ನೀವು ಸಿನಿಮಾ ಮಾಡಿ’; ಆರ್​​ಜಿವಿ

ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು ಸಹ ಮಗನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದು, ‘ಡಾ ಸುಧಾಕರ್ ಪ್ರಸಾದ್ ಅವರೇ, ಚರಣ್ ಅವರ ಕಣ್ಣಿಗೆ ನೀವು ಸಮಯಕ್ಕೆ ಸರಿಯಾಗಿ ಮತ್ತು ಅತ್ಯಂತ ನೈಪುಣ್ಯತೆಯಿಂದ ಮಾಡಿದ ಶಸ್ತ್ರಚಿಕಿತ್ಸೆ ನಮಗೆ ದೊಡ್ಡ ಆಶೀರ್ವಾದದಂತಿದೆ. ನಮ್ಮಲ್ಲಿದ್ದ ಆತಂಕವನ್ನು ನಿಮ್ಮ ನಿಖರವಾದ ಚಿಕಿತ್ಸೆ ಮತ್ತು ಕಾಳಜಿ ದೂರ ಮಾಡಿದೆ. ನಿಮ್ಮ ಕಲಾತ್ಮಕ ವೃತ್ತಿಪರತೆಗೆ ನಾವು ಆಭಾರಿಯಾಗಿದ್ದೇವೆ. ಧನ್ಯವಾದಗಳು’ ಎಂದಿದ್ದಾರೆ. ರಾಮ್ ಚರಣ್ ಪತ್ನಿ ಸಹ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣ ಇನ್ನೂ ಬಾಕಿ ಇರುವುದು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದು ಈ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ಏಪ್ರಿಲ್‌ನಲ್ಲಿ ಬಿಡುಗಡೆಯಾಗದಿದ್ದರೆ, ಚಿತ್ರವು ಜೂನ್ ಅಥವಾ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಚರಣ್ ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿನ ನಿರಾಸೆ ಮತ್ತು ಆತಂಕ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

ಬೆಂಗಳೂರು, (ಮಾರ್ಚ್ 26): ಇದೇ ಮಾರ್ಚ್ 28ರಿಂದ ಐಪಿಎಲ್ (IPL 2026) ಹಬ್ಬ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದೆಡೆ ಐಪಿಎಲ್​​ ಟಿಕೆಟ್​ ಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ಬಜೆಟ್ ಅಧಿವೇಶನದಲ್ಲೂ ಚರ್ಚೆಯಾಗಿದೆ. ಹೌದು.. ಐಪಿಎಲ್ ಟಕೆಟ್ ಸಂಬಂಧ ಆಡಳಿತರೂಢ ಹಾಗೂ ವಿಪಕ್ಷ ಶಾಸಕರು ಐಪಿಎಲ್ ಟಿಕೆಟ್​​ ಬೇಡಿಕೆ ಇಟ್ಟಿದ್ದಾರೆ. ಶಾಸಕರಿಗೆ ಕನಿಷ್ಠ 4 ರಿಂದ 5 ಟಿಕೆಟ್ ಕೊಡಿಸಿ ಎಂದು ವಿಧಾನಸಭೆಯಲ್ಲಿಂದು (Vidhan Sabha) ಸದಸ್ಯರು ಪಕ್ಷಾತೀತವಾಗಿ ಸ್ಪೀಕರ್ ಯುಟಿ ಖಾದರ್​ ಮುಂದೆ ಬೇಡಿಕೆ ಇಟ್ಟಿದ್ದಾರೆ.

KSCA ಮುಂದೆ ಅಂಗಲಾಚುವ ಪರಿಸ್ಥಿತಿ

ಉದ್ದೇಶಿತ ಸ್ಟೇಡಿಯಂ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಮತ್ತು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ. ಮೊನ್ನೆ 11 ಜನ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಮತ್ತೊಂದು ಸ್ಟೇಡಿಯಂ ಬೇಡ. ಚಿನ್ನಸ್ವಾಮಿ ಸ್ಟೇಡಿಯಂ ಜಾಗ ನಮ್ಮದು. ಅಲ್ಲಿ ಕ್ರಿಕೆಟ್ ಟ್ರೈನಿಂಗ್ ಮಾಡಿ‌ ಎಂದು ಜಾಗ ನೀಡಿದ್ದೇವೆ. ಅವರು ಏನು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅಶೋಕ್, ಒಂದು ಟಿಕೆಟ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (KSCA) ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ. ನಮ್ಮ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಮಾರಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರು ಮ್ಯಾಚ್ ಬಗ್ಗೆ ಆರ್‌ಸಿಬಿ ಬಿಗ್ ಅಪ್‌ಡೇಟ್: ಟಿಕೆಟ್ ಬುಕಿಂಗ್ ಮತ್ತು ಹೊಸ ರೂಲ್ಸ್ ಮಾಹಿತಿ ಇಲ್ಲಿದೆ!

ಸ್ಟೇಡಿಯಂಗೆ 16 ಎಕರೆ 32 ಗುಂಟೆ ಜಾಗ ನಾವು ಕೊಟ್ಟಿದ್ದೇವೆ. ನಮ್ಮ ಟಿಕೆಟ್‌ಗೆ ಎರಡು ಸಾವಿರ, ಮೂರು ಸಾವಿರ, ಇಪ್ಪತ್ತು ಸಾವಿರ ರೂ. ಚಾರ್ಜ್ ಮಾಡ್ತಾರೆ. ಅವರು ತಿಂಗಳಿಗೆ ಸರ್ಕಾರಕ್ಕೆ ಕೊಡೋದು ಕೇವಲ 1600 ರೂ. ಮಾತ್ರ. ನಾವು 16 ಎಕರೆ ಜಾಗ ನೀಡಿದ್ದೇವೆ. ನಮ್ಮ ತಲೆ ಮೇಲೆ ಎಳೀತಾರೆ, ಅಂಥವರಿಗಾಗಿ ಇನ್ನೊಂದು ಸ್ಟೇಡಿಯಂ ಮಾಡಲು ಹೊರಟಿದ್ದೀರಿ. ಇವರಿಗೆ ಮೊದಲು ಬುದ್ಧಿ ಕಲಿಸಿ ಎಂದು ಆಗ್ರಹಿಸಿದರು.

ಟಿಕೆಟ್ ಬಗ್ಗೆ ಧ್ವನಿ ಎತ್ತಿದ ಕಾಂಗ್ರೆಸ್ ಶಾಸಕ

ಈ ವೇಳೆ ಮಾತಾಡಿದ ಕೈ ಶಾಸಕ ವಿಜಯಾನಂದ ಕಾಶಪ್ಪನವರ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೀಕ್ಷಕರ ಸಂಖ್ಯೆಯನ್ನು ಏರಿಸಿ. ಶಾಸಕರಿಗೆ ಒಂದೇ ಟಿಕೆಟ್ ಅದೂ ಕೆಳಗಡೆಯ ಗ್ಯಾಲರಿಯಲ್ಲಿ ಕೊಡುತ್ತಾರೆ. ಶಾಸಕರಿಗೆ ಕೂರಲು ಮೊದಲು ಸೂಕ್ತ ಅವಕಾಶ ಮಾಡಿಕೊಡಲಿ. ಹೊಸ ಸ್ಟೇಡಿಯಂ ಆಮೇಲೆ ಮಾಡಿ. ಶಾಸಕರಿಗೆ ಪ್ರತ್ಯೇಕ ಲಾಂಜ್ ಮಾಡಿ ಐದು ಟಿಕೆಟ್ ಕೊಡಿಸಿ. ಟಿಕೆಟ್ ಕಾಸಂತೆಯಲ್ಲಿ ಮಾರುತ್ತಾರೆ. ಆದರೆ ನಮಗೆ ಕೊಡುವುದಿಲ್ಲ. ಶಾಸಕರು ಅಂದ್ರೆ ಗೌರವ ಇಲ್ವಾ? ನಮಗೆ ಐದು ಟಿಕೆಟ್ ಕೊಡಲಿ ಎಂದು ಒತ್ತಾಯಿಸಿದರು.

ಟಿಕೆಟ್ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸ್ಫೀಕರ್ ಸಲಹೆ

ಬಳಿಕ ಮಾತಾಡಿದ ಸ್ಪೀಕರ್ ಖಾದರ್, ಶಾಸಕರು ಕ್ರಿಕೆಟ್ ಟಿಕೆಟ್ ಬಗ್ಗೆ ಗಂಭೀರ ವಿಚಾರ ಎತ್ತಿದ್ದಾರೆ. ಸರ್ಕಾರ ಕೆಎಸ್‌ಸಿಎ ಅವರನ್ನು ಕರೆಸಿ ಒಂದು ತೀರ್ಮಾನ ಮಾಡಬೇಕು. ಶಾಸಕರು ಬಂದ್ರೆ ಮಾತ್ರ ಟಿಕೆಟ್ ನೀಡುತ್ತೇವೆ ಎನ್ನುತ್ತಾರೆ. ಶಾಸಕರು ಕ್ಯೂನಲ್ಲಿ ‌ನಿಂತ್ರೆ ಟಿಕೆಟ್ ಕೊಡೋರಿಗೆ, ಭದ್ರತೆಯವರಿಗೆ ಏನು ಗೊತ್ತಿದೆ. ಗೌರವ ಸಿಗದಕ್ಕೆ ಶಾಸಕರು ಹೋಗುವುದೇ ಇಲ್ಲ. ಶಾಸಕರಿಗೆ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ ಕೊಡುವ ವ್ಯವಸ್ಥೆ ಆಗಲಿ ಎಂದು ಸಲಹೆ ನೀಡಿದರು.

ಟಿಕೆಟ್ ನೀಡುವ ಬಗ್ಗೆ ಡಿಕೆಶಿ ಹೇಳಿದ್ದೇನು?

ಕೊನೆಗೆ ಡಿಕೆಶಿ ಪ್ರತಿಕ್ರಿಯಿಸಿ, ಖಂಡಿತವಾಗಿ ಅವರನ್ನು ಕರೆಸಿ ಮಾತಾಡುತ್ತೇವೆ. ನಾನೂ ಕೆಎಸ್‌ಸಿಎ ಸದಸ್ಯ. ಅವರನ್ನು ಕರೆಸಿ ಶಾಸಕರ ಟಿಕೆಟ್ ಬಗ್ಗೆ ಮಾತಾಡುತ್ತೇನೆ. ಶಾಸಕರಿಗೆ ಎಲ್ಲ ಹಕ್ಕೂ ಇದೆ. ಖಾದರ್ ಆದೇಶ, ಸಾಮ್ರಾಟ್ ಅಶೋಕ್ ಮನವಿ ಇದೆ ಎಂದು ಹೇಳುತ್ತೇನೆ ಎಂದು ಉತ್ತರಿಸಿ ಚರ್ಚೆಗೆ ತೆರೆ ಎಳೆದರು.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್; ಆದರೆ..?

Source link

ಸನ್ ಫಾರ್ಮಾ ‘ಹಾರ್ಟ್ ಕೆ ಲಿಯೇ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನ; ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಯತ್ನ

ಮುಂಬೈ ಮಾರ್ಚ್ 26: ಸನ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (ಸನ್ ಫಾರ್ಮಾ) 2026ರ ಫೆಬ್ರವರಿ 26ರಂದು ತನ್ನ ‘ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಉತ್ತಮ ಹೃದಯ ಆರೋಗ್ಯಕ್ಕಾಗಿ ಸರಳವಾದ ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಾರತೀಯರನ್ನು ಉತ್ತೇಜಿಸಲೆಂದು ಈ ಕೆಂಪೇನ್ ನಡೆಸಲಾಗುತ್ತಿದೆ. ಕಾರ್ಡಿಯೊ-ಮೆಟಬಾಲಿಕ್ ಥೆರಪಿಯಲ್ಲಿ ಭಾರತದ ನಂ.1 ಫಾರ್ಮಸ್ಯುಟಿಕಲ್ ಕಂಪನಿಯಾಗಿ ಸನ್ ಫಾರ್ಮಾ ಸಂಸ್ಥೆಯು ಹೆಚ್ಚುತ್ತಿರುವ ಹೃದಯರೋಗಗಳ ಸಮಸ್ಯೆಯನ್ನು ಎದುರಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಲಿಪಿಡ್ ತಗ್ಗಿಸುವ ಥೆರಪಿಗಳಲ್ಲಿ ಮುಂಚೂಣಿಯಲ್ಲಿದೆ. ರಕ್ತದೊತ್ತಡ, ಮಧುಮೇಹ ಚಿಕಿತ್ಸೆಗಳಲ್ಲಿ ಬಲವಾದ ಉಪಸ್ಥಿತಿ ಹೊಂದಿದೆ.

ಭಾರತದಲ್ಲಿ ಹೃದಯರೋಗಗಳಿಂದ (CVD- Cardio Vascular Disease) ಆಗುವ ಮರಣಗಳು ಒಟ್ಟು ಜಾಗತಿಕ ಹೃದಯರೋಗಗಳ ಮರಣದಲ್ಲಿ ಐದನೇ ಒಂದು ಭಾಗದಷ್ಟಿದೆ ಮತ್ತು ಅವು ಹಲವು ಪಾಶ್ಚಿಮಾತ್ಯ ಜನಸಂಖ್ಯೆಗಳಿಗಿಂತ ಭಾರತೀಯರನ್ನು ಒಂದು ದಶಕ ಮುಂಚೆಯೇ ಬಾಧಿಸುತ್ತವೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನವು ಹೃದಯದ ಆರೋಗ್ಯವನ್ನು ಆಗಾಗ್ಗೆ ನೆಸುವ ಪ್ರಯತ್ನಗಳಿಂದಲ್ಲ, ಬದಲಿಗೆ ಪ್ರತಿನಿತ್ಯದ ಜೀವನದ ಭಾಗವಾಗುವ ಸಣ್ಣ, ಸ್ಥಿರವಾದ ಪ್ರಯತ್ನಗಳು ಅಗತ್ಯ ಎನ್ನುತ್ತದೆ.

“ಚಿಕಿತ್ಸೆಯಷ್ಟೇ ಮುಖ್ಯವಾದದು ರೋಗ ನಿಯಂತ್ರಣ ಎಂಬ ನಂಬಕೆ ಸನ್ ಫಾರ್ಮಾದಲ್ಲಿ ಇದೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ಮೂಲಕ ನಾವು ಹೃದಯದ ಆರೋಗ್ಯದ ಸುತ್ತಲಿನ ಪ್ರತಿನಿತ್ಯದ ಸಂವಹನಗಳನ್ನು ಉತ್ತೇಜಿಸುವ ಮತ್ತು ಭಾರತೀಯರಿಗೆ ಪ್ರತಿನಿತ್ಯ ಆಚರಿಸುವ ಸಣ್ಣ, ಸ್ಥಿರವಾದ ಕ್ರಮಗಳು ಮಹತ್ತರ ವ್ಯತ್ಯಾಸ ತರಬಲ್ಲವು ಎಂದು ತಿಳಿಯಲು ನೆರವಾಗಲು ಬಯಸುತ್ತೇವೆ. ಸದೃಢ ಹೃದಯ ಎನ್ನುವುದು ಅದಾಗಿ ಬರುವುದಲ್ಲ, ಬದಲಿಗೆ ನಾವು ಪ್ರತಿನಿತ್ಯ ಮಾಡುವ ಆಯ್ಕೆಗಳಿಂದ ನಿರ್ಮಿಸುವುದಾಗಿದೆ” ಎಂದು ಸನ್ ಫಾರ್ಮಾದ ಸೀನಿಯರ್ ವೈಸ್ ಪ್ರೆಸಿಡೆಂಟ್ ಶೈಲೇಶ್ ಜೋಶಿ ಹೇಳಿದರು.

ಹಾರ್ಟ್​ಕೇಲಿಯೇ8, ಒಂದು ಕಿರುಚಿತ್ರ ವೀಕ್ಷಿಸಿ

ಹೃದಯದ ಆರೋಗ್ಯ ಉತ್ತಮವಾಗಿರುವ ವ್ಯಕ್ತಿ ಈ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ. ಸಮತೋಲನ, ಅರವು, ನಿತ್ಯ ಆರೈಕೆ ಮೂಲಕ ಹೃದಯದ ಆರೋಗ್ಯವನ್ನು ಕಾಳಜಿ ಮಾಡುವ ವ್ಯಕ್ತಿಯ ಪ್ರತಿರೂಪ ಈತ. ಈ ಫಿಲಂನಲ್ಲಿ ಸಕಾರಾತ್ಮಕವಾದ ಮತ್ತು ವಾಸ್ತವಿಕ ಮಾತುಗಳಿದ್ದು, ಯಾವುದೇ ವ್ಯಕ್ತಿಗಳು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸಲ್ಲಂತಿದೆ. ಹಲವು ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಇದೆ. ಈ ಅಭಿಯಾನವು ಹೃದಯ ಆರೋಗ್ಯದ ಎಂಟು ಅಗತ್ಯ ಸ್ತಂಭಗಳ ಮೇಲೆ ನಿಂತಿದೆ:

  1. ಉತ್ತಮ ಆಹಾರ ಸೇವನೆ
  2. ದೈಹಿಕವಾಗಿ ಕ್ರಿಯಾಶೀಲವಾಗಿರುವುದು
  3. ತೂಕ ನಿರ್ವಹಿಸುವುದು
  4. ರಕ್ತದೊತ್ತಡ, ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವುದು
  5. ತಂಬಾಕು ತ್ಯಜಿಸುವುದು
  6. ನಿಯಮಿತ ಹೃದಯ ಆರೋಗ್ಯ ಪರೀಕ್ಷೆಗೆ ಒಳಪಡುವುದು
  7. ಒತ್ತಡ ನಿಭಾಯಿಸುವುದು
  8. ಗುಣಮಟ್ಟದ ನಿದ್ರೆ ಮಾಡುವುದು

ಸನ್ ಫಾರ್ಮಾದ `ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಉಪಕ್ರಮವು ರೋಗನಿಯಂತ್ರಣ, ತುರ್ತು ಸ್ಪಂದನೆ ಮತ್ತು ರೋಗಿ ಶಿಕ್ಷಣದ ಮೂಲಕ ಹೃದಯ ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಅನುಸರಿಸುತ್ತದೆ. ಈ ಕೆಳಗಿನ ಕ್ರಮಗಳು ಈ ವಿಧಾನದಲ್ಲಿ ಇರುತ್ತವೆ:

  • ದೊಡ್ಡ ಪ್ರಮಾಣದ ಹೃದಯಪರೀಕ್ಷಾ ಶಿಬಿರಗಳ ಮೂಲಕ ಪ್ರಾರಂಭಿಕ ರೋಗಪತ್ತೆ- ವಾರ್ಷಿಕ 1.2 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡ 10,000 ಶಿಬಿರಗಳು.
  • ವಾರ್ಷಿಕ 1.5 ಲಕ್ಷ ಜನರಿಗೆ ಸಿ.ಪಿ.ಆರ್. ತರಬೇತಿ ಮೂಲಕ ತುರ್ತು ಸನ್ನದ್ಧತೆ
  • ರಿಸ್ಕ್ ನಿರ್ವಹಣೆ ಮತ್ತು ರೋಗಿ ಫಲಿತಾಂಶಗಳನ್ನು ಸುಧಾರಿಸಲು ಪುರಾವೆಗಳ ಒಗ್ಗೂಡಿಕೆ
  • ಪ್ರತಿ ವರ್ಷ ಇನ್-ಕ್ಲಿನಿಕ್ ಮುದ್ರಣ ಮತ್ತು ಅರಿವಿನ ಕಾರ್ಯಕ್ರಮಗಳ ಮೂಲಕ 15 ಮಿಲಿಯನ್​ಗೂ ಹೆಚ್ಚು ರೋಗಿಗಳಿಗೆ ಅರಿವು

ಒಟ್ಟಿಗೆ ಈ ಪ್ರಯತ್ನಗಳು ರೋಗತಡೆ, ಪ್ರತಿಕ್ರಿಯೆ ಮತ್ತು ಅರಿವನ್ನು ಸದೃಢಗೊಳಿಸುವ ಗುರಿ ಹೊಂದಿದ್ದು ಭಾರತದಲ್ಲಿ ಹೃದಯರೋಗಗಳನ್ನು ಕಡಿಮೆ ಮಾಡಲು ದೀರ್ಘಾವಧಿ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿದೆ.

About Sun Pharmaceutical Industries Limited (CIN – L24230GJ1993PLC019050)

Sun Pharma is the world’s leading specialty generics company with a presence in innovative medicines, generics and consumer healthcare products. It is the largest pharmaceutical company in India and is a leading generic company in the U.S. as well as global Emerging Markets. Sun Pharma’s high-growth global Innovative Medicines portfolio spans innovative products in dermatology, ophthalmology, and onco-dermatology and accounts for about 20% of company sales. The company’s vertically integrated operations deliver high-quality medicines, trusted by physicians and consumers in over 100 countries. Its manufacturing facilities are spread across five continents. Sun Pharma is proud of its multicultural workforce drawn from over 50 nations. For further information, please visit www.sunpharma.comand follow us on LinkedInand X(Formerly Twitter).

(ಗಮನಿಸಿ: ಇದು ಪ್ರಾಯೋಜಿತ ಬರಹವಾಗಿದೆ)

Source link

TV9-Sensodyne Campaign | ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ? ಡೆಂಟಲ್ ಏಜಿಂಗ್‌ನ್ನು ಅರ್ಥಮಾಡಿಕೊಳ್ಳಿ

ದೇಹದ ಫಿಟ್‌ನೆಸ್ ಕಾಪಾಡಲು ನಾವು ಪ್ರತಿದಿನ ಸಾವಿರಾರು ಹೆಜ್ಜೆ ನಡೆಯುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತೇವೆ. ಆದರೆ, ನಮ್ಮ ಹಲ್ಲುಗಳ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ನಾವು ಎಷ್ಟು ಗಮನ ಹರಿಸುತ್ತೇವೆ? ಅನೇಕ ಬಾರಿ, ನಮ್ಮ ಹಲ್ಲುಗಳ ವಯಸ್ಸು ನಮ್ಮ ದೇಹದ ವಯಸ್ಸಿಗಿಂತ ಹೆಚ್ಚಾಗಿರುತ್ತದೆ. ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ.ಡೆಂಟಲ್ ಏಜಿಂಗ್ ಎನ್ನುವುದು ಹಲ್ಲುಗಳು ತಮ್ಮ ಜೀವಿತಾವಧಿಗಿಂತ ವೇಗವಾಗಿ ಸವೆಯುವ ಅಥವಾ ದುರ್ಬಲಗೊಳ್ಳುವ ಪ್ರಕ್ರಿಯೆಯಾಗಿದೆ. ಹಲ್ಲಿನ ಸೂಕ್ಷ್ಮತೆ, ಹಲ್ಲಿನ ಸವೆತ, ದಂತಕವಚದ ಸಮಸ್ಯೆಗಳು, ವಸಡುಗಳ ಸಮಸ್ಯೆಗಳು ಮತ್ತು ಹಲ್ಲು ಹಳದಿಯಾಗುವುದು ಡೆಂಟಲ್ ಏಜಿಂಗ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ, ನಿಮ್ಮ ಹಲ್ಲುಗಳಿಗೆ ವಿಶೇಷ ಕಾಳಜಿ ಅಗತ್ಯವಿದೆ ಎಂದು ಅರ್ಥ. ನಿಮ್ಮ ಹಲ್ಲುಗಳ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಮುಖ್ಯ. ಡೆಂಟಲ್ ಏಜಿಂಗ್ ಲಕ್ಷಣಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಹಲ್ಲುಗಳನ್ನು ನಿಮಗಿಂತ ಹೆಚ್ಚು ವಯಸ್ಸಾಗಲು ಬಿಡಬಾರದು. ಡೆಂಟಲ್ ಏಜಿಂಗ್ ಅನ್ನು ತಡೆಗಟ್ಟಲು ಮತ್ತು ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲ ಹೆಜ್ಜೆಯನ್ನು ಇರಿಸಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್​ 26: ಭಾರತದಲ್ಲಿ ಪೆಟ್ರೋಲ್(Petrol), ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಪೆಟ್ರೋಲ್ ಪಂಪ್‌ಗಳು ಮತ್ತು ಗ್ಯಾಸ್ ಏಜೆನ್ಸಿಗಳು ಸಾಕಷ್ಟು ದಾಸ್ತಾನು ಹೊಂದಿವೆ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಅಗತ್ಯ ವಸ್ತುಗಳ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಜನರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಒತ್ತಾಯಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ದಾರಿತಪ್ಪಿಸುವ ಸುದ್ದಿಗಳನ್ನು ನಂಬಬೇಡಿ , ಇದು ಅನಗತ್ಯ ಭೀತಿಯನ್ನು ಹರಡುವ ಗುರಿಯನ್ನು ಹೊಂದಿರುವ ಪ್ಲ್ಯಾನ್ ಆಗಿದೆ ಎಂದು ಸಚಿವಾಲಯ ಹೇಳಿದೆ.
ದೇಶಾದ್ಯಂತ 100,000 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳು ತೆರೆದಿದ್ದು, ನಿರಂತರವಾಗಿ ಇಂಧನವನ್ನು ಪೂರೈಸುತ್ತಿವೆ. ಯಾವುದೇ ಪಡಿತರ ವ್ಯವಸ್ಥೆ ಇಲ್ಲ, ಮತ್ತು ಯಾವುದೇ ಪಂಪ್‌ಗಳಿಗೆ ಸರಬರಾಜುಗಳನ್ನು ಮಿತಿಗೊಳಿಸುವಂತೆ ಸೂಚಿಸಲಾಗಿಲ್ಲ.

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಐದನೇ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ. 150 ಕ್ಕೂ ಹೆಚ್ಚು ದೇಶಗಳಿಗೆ ಇಂಧನವನ್ನು ಪೂರೈಸುವ ಮೂಲಕ, ಭಾರತವು ದೇಶೀಯ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಅನೇಕ ದೇಶಗಳು ಹಣದುಬ್ಬರ, ಪಡಿತರ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಭಾರತವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ದೇಶವು ಇಂಧನ ತುರ್ತುಸ್ಥಿತಿಯಂತಹ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿರಲಿಲ್ಲ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆಯ ಹೊರತಾಗಿಯೂ, ಭಾರತವು 41 ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿದೆ. ಸಂಸ್ಕರಣಾಗಾರಗಳು ಶೇ.100 ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮುಂದಿನ 60 ದಿನಗಳವರೆಗೆ ಸರಬರಾಜುಗಳನ್ನು ಈಗಾಗಲೇ ಖಚಿತಪಡಿಸಲಾಗಿದೆ.

ದೇಶವು ಕೇವಲ ಆರು ದಿನಗಳ ಸ್ಟಾಕ್ ಹೊಂದಿದೆ ಎಂಬ ಹೇಳಿಕೆ ಕೇವಲ ವದಂತಿಯಾಗಿದೆ. ಭಾರತವು ಸರಿಸುಮಾರು 60 ದಿನಗಳ ಸ್ಟಾಕ್ ಮತ್ತು ಒಟ್ಟು 74 ದಿನಗಳ ಸಾಮರ್ಥ್ಯವನ್ನು ಹೊಂದಿದೆ.
ಎಲ್‌ಪಿಜಿ ಉತ್ಪಾದನೆಯನ್ನು ಶೇ. 40 ರಷ್ಟು ಹೆಚ್ಚಿಸಲಾಗಿದ್ದು, ಆಮದು ಅಗತ್ಯ ಕಡಿಮೆಯಾಗಿದೆ. ಪ್ರತಿದಿನ 5 ದಶಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಹೆಚ್ಚುವರಿ ಸರಬರಾಜಾಗುತ್ತಿವೆ.

ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಎಂದು ಸರ್ಕಾರ ಎಚ್ಚರಿಸಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್

ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್​ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ.

ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆಟಗಾರನ ಅಕೌಂಟ್​ಗೆ ನವಿ ಯುಪಿಐ ಮೂಲಕ ತತ್​ಕ್ಷಣವೇ 50,000 ರೂ ಹಣ ಹಾಕಲಾಗುತ್ತದೆ.

‘ಈ ಸೀಸನ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಜೊತೆ ನಮ್ಮ ಪಾರ್ಟ್ನರ್​ಶಿಪ್ ಮುಂದುವರಿಸಲು ಸಂತೋಷವಾಗಿದೆ. ಕ್ರಿಕೆಟ್ ಎಂಬುದು ಕ್ಷಣಗಳ ಒಂದು ಆಟ. ಪಂದ್ಯದ ಫಲಿತಾಂಶವನ್ನೇ ಬದಲಿಸುವ ಅತ್ಯಂತ ವೇಗದ ಮತ್ತು ಅತ್ಯಂತ ನಿರ್ಣಾಯಕ ಕ್ಷಣ ಆಗಿರುತ್ತದೆ. ನವಿ ಯುಪಿಐ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ಅದನ್ನು ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಹೋಲಿಸಬಹುದು’ ಎಂದು ನವಿ ಲಿಮಿಟೆಡ್​ನ ಎಂಡಿ ಮತ್ತು ಸಿಇಒ ಆದ ರಾಜೀವ್ ನರೇಶ್ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಆರ್​ಸಿಬಿ ಸಿಇಒ ರಾಜೇಶ್ ವಿ ಮೆನನ್ ಕೂಡ ಹೇಳಿಕೆ ನೀಡಿದ್ದು, ‘ಆರ್​ಸಿಬಿಯ ವೇಗ ಮತ್ತು ಪರಿಣಾಮದ ಗುಣವು ಫಾಸ್ಟೆಸ್ಟ್ ಮೊಮೆಂಟ್ ಆಫ್ ಮ್ಯಾಚ್​ಗೆ ಸರಿ ಹೊಂದುತ್ತದೆ’ ಎಂದಿದ್ದಾರೆ.

ಇನ್ನು, ನವಿ ಯುಪಿಐನ ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಆರ್​ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲೂ ಇರುತ್ತದೆ. ಇದರಲ್ಲಿ ನವಿ ಯುಪಿಐ ಬಳಕೆದಾರರ ಪಾಲ್ಗೊಳ್ಳುವಿಕೆಗೆ ಅವಕಾಶ ಇದೆಯಾ ಇಲ್ಲವಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ನವಿ ಯುಪಿಐ ಬಳಕೆದಾರರಿಗೆ ಐಪಿಎಲ್ ಪಂದ್ಯಗಳಲ್ಲಿ ಇತರ ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.

ನವಿ ಆ್ಯಪ್​ನಲ್ಲಿ ಪವರ್​ಪ್ಲೇ ಸ್ಪರ್ಧೆ ಇದ್ದು, ಅದರಲ್ಲಿ ಭಾಗವಹಿಸುವವರು ಯುಪಿಐ ಟ್ರಾನ್ಸಾಕ್ಷನ್ ಮಾಡಿದರೆ ಆರ್​ಸಿಬಿ ಆಟಗಾರರ ಡಿಜಿಟಲ್ ಕಾರ್ಡ್​ಗಳನ್ನು ಸಂಗ್ರಹಿಸಬಹುದು. ಆರ್​ಸಿಬಿ ಜೆರ್ಸಿಗಳು ಮತ್ತು ಆಟಗಾರರಿಂದ ಸಹಿಹಾಕಲಾದ ಕ್ರಿಕೆಟ್ ಬ್ಯಾಟುಗಳನ್ನು ಗೆಲ್ಲಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಬೆಂಗಳೂರಿನಲ್ಲಿ ನಡೆಯುವ ಆರ್​ಸಿಬಿ ಮ್ಯಾಚುಗಳಲ್ಲಿ ಟಿಕೆಟ್ ಮಾರಾಟವು ಸಾರ್ವಜನಿಕರಿಗೆ ಲಭ್ಯವಾಗುವ 24 ಗಂಟೆ ಮುಂಚೆ ನವಿ ಯುಪಿಐ ಬಳಕೆದಾರರಿಗೆ ಖರೀದಿಗೆ ಲಭ್ಯ ಇರುತ್ತದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಮತ್ತು ಗೋಚಾರ ಫಲಗಳ ಆಧಾರದ ಮೇಲೆ ವೃಷಭ ರಾಶಿಯವರಿಗೆ ತಿಂಗಳಲ್ಲಿ ಯೋಜನೆಗೆ ಅನುಕೂಲಕರವಾಗಲಿದೆ. ಈ ರಾಶಿಗೆ ಕೃತ್ತಿಕಾದ ಮೂರು ಪಾದ, ರೋಹಿಣಿಯ ನಾಲ್ಕು ಪಾದ ಹಾಗೂ ಮೃಗಶಿರಾದ ಎರಡು ಪಾದಗಳು ಬರಲಿವೆ. ರೋಹಿಣೀ ನಕ್ಷತ್ರಕ್ಕೆ ವೃಷಭ ರಾಶಿಗೆ ಹೇಳಿದ ಪೂರ್ಣ ಫಲ ಸಿಗಲಿದೆ.

​ಉದ್ಯೋಗ ಮತ್ತು ವೃತ್ತಿ ಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರ ಬೆಳವಣಿಗೆಗಳಿರುತ್ತವೆ. ಹತ್ತನೇ ಮನೆಯ ಮೇಲೆ ಗ್ರಹಗಳ ದೃಷ್ಟಿ ಇರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿನಾಕಾರಣ ವಾದ ಮಾಡಬೇಡಿ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ಸಿಗಬಹುದು.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸಮಯ. ಪಂಚಮ ಸ್ಥಾನದ ಮೇಲೆ ಗುರುವಿನ ಶುಭ ದೃಷ್ಟಿ ಇರುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ತಿಂಗಳು ವಿಷಯಗಳನ್ನು ಆಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ಸಂಸ್ಕೃತ ಅಥವಾ ಸಾಂಪ್ರದಾಯಿಕ ವಿಷಯಗಳನ್ನು ಕಲಿಯುವವರಿಗೆ ವಿಶೇಷ ಯಶಸ್ಸು ಸಿಗಲಿದೆ.

​ಹಣಕಾಸು ಸ್ಥಿತಿ

​ಹಣಕಾಸಿನ ವಿಚಾರದಲ್ಲಿ ಏರಿಳಿತಗಳಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಡಿಕೆ ಅಥವಾ ಇತರ ತೋಟಗಾರಿಕಾ ಬೆಳೆಗಳಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ನುರಿತವರ ಸಲಹೆ ಪಡೆಯುವುದು ಉತ್ತಮ.

​ವಿವಾಹ ಮತ್ತು ಕೌಟುಂಬಿಕ ಜೀವನ

​ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಅವು ಬೇಗನೆ ಬಗೆಹರಿಯುತ್ತವೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವಿದೇಶ ಪ್ರವಾಸ

​ಈ ತಿಂಗಳು ವಿದೇಶ ಪ್ರವಾಸದ ಯೋಗವು ಸ್ವಲ್ಪ ದುರ್ಬಲವಾಗಿದೆ. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವೀಸಾ ಅಥವಾ ಪಾಸ್‌ಪೋರ್ಟ್ ತಾಂತ್ರಿಕ ತೊಂದರೆಗಳು ಎದುರಾಗಬಹುದು. ಅನಿವಾರ್ಯವಲ್ಲದಿದ್ದರೆ ವಿದೇಶ ಪ್ರವಾಸವನ್ನು ಮುಂದೂಡುವುದು ಸೂಕ್ತ.

​ಸಾಲ ಮತ್ತು ಆರೋಗ್ಯ

​ಹೊಸದಾಗಿ ಸಾಲ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಹಳೆಯ ಸಾಲಗಳನ್ನು ತೀರಿಸಲು ಈ ಸಮಯ ಪೂರಕವಾಗಿದೆ. ಕೆಲಸದ ಒತ್ತಡದಿಂದಾಗಿ ಮಾನಸಿಕ ಆಯಾಸವಾಗಬಹುದು. ಪಾದ ಅಥವಾ ಬೆನ್ನಿನ ನೋವಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಲ್ಲಿ ಶುಭ ದಿನಾಂಕಗಳಿವು – ೪, ೧೩, ೨೨ ಮತ್ತು ೩೦. ​ಅಶುಭ ದಿನಗಳಿವು ೮, ೯ ಮತ್ತು ೧೮.
​ದೋಷಕ್ಕೆ ಪರಿಹಾರವಾಗಿ ಪ್ರತಿದಿನ ಮಹಾಲಕ್ಷ್ಮಿ ಅಷ್ಟಕವನ್ನು ಅಥವಾ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.

– ಲೋಹಿತ ಹೆಬ್ಬಾರ್

Source link

Exit mobile version