ಜೀವನದಲ್ಲಿ ಬ್ಯಾಡ್​​ಲಕ್ ತುಂಬಿದ ನಟಿಗೆ ಚಾನ್ಸ್ ಕೊಟ್ಟ ಅನಿಲ್ ರವಿಪುಡಿ

ಜೀವನದಲ್ಲಿ ಬ್ಯಾಡ್​​ಲಕ್ ತುಂಬಿದ ನಟಿಗೆ ಚಾನ್ಸ್ ಕೊಟ್ಟ ಅನಿಲ್ ರವಿಪುಡಿ

ಟಾಲಿವುಡ್ ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಅವರ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುತ್ತಾರೆ. ಅವರು ಪ್ರತಿ ಸಂಕ್ರಾಂತಿಗೆ ಒಂದು ಚಿತ್ರದೊಂದಿಗೆ ಬರುತ್ತಾರೆ ಮತ್ತು ಬ್ಲಾಕ್ಬಸ್ಟರ್ ಹಿಟ್ಗಳನ್ನು ಪಡೆಯುತ್ತಾರೆ. ಅನಿಲ್ ಇಲ್ಲಿಯವರೆಗೆ ಮಾಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಮಧ್ಯಮ ಶ್ರೇಣಿಯ ನಾಯಕರಿಂದ ಪ್ರಾರಂಭಿಸಿ, ಅನಿಲ್ ರವಿಪುಡಿ ಸ್ಟಾರ್ ನಾಯಕರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ. ಬ್ಲಾಕ್​ಬಸ್ಟರ್ಗಳನ್ನು ಪಡೆದಿದ್ದಾರೆ. ಕಳೆದ ಸಂಕ್ರಾಂತಿಗೆ ಅನಿಲ್ ರವಿಪುಡಿ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರದೊಂದಿಗೆ ಬ್ಲಾಕ್ಬಸ್ಟರ್ ಹಿಟ್ ಪಡೆದರು. ಈ ಸಂಕ್ರಾಂತಿಗೆ ‘ಮನ ಶಂಕರ ವರಪ್ರಸಾದ ಗಾರು’ ಚಿತ್ರದೊಂದಿಗೆ ಅನಿಲ್ ಮತ್ತೊಂದು ಬ್ಲಾಕ್ಬಸ್ಟರ್ ಪಡೆದರು. ಈಗ ಅನಿಲ್ ಮತ್ತೊಮ್ಮೆ ವೆಂಕಟೇಶ್ ಜೊತೆ ಒಂದು ಚಿತ್ರ ಮಾಡಲಿದ್ದಾರೆ. ಈ ಬಾರಿ ಅನಿಲ್ ಪೂರ್ಣ ಪ್ರಮಾಣದ ಮಲ್ಟಿ-ಸ್ಟಾರರ್ ಚಿತ್ರದೊಂದಿಗೆ ಬರಲಿದ್ದಾರೆ. ಕಲ್ಯಾಣ್ ರಾಮ್ ಈ ಚಿತ್ರದಲ್ಲಿ ವೆಂಕಟೇಶ್ ಜೊತೆ ನಟಿಸಲಿದ್ದಾರೆ.

ಅನಿಲ್ ಮತ್ತೊಮ್ಮೆ ಕಲ್ಯಾಣ್ ರಾಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಏತನ್ಮಧ್ಯೆ, ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ನಟಿಸುವಂತೆ ಕೇಳಲಾಗಿದೆ. ಕೀರ್ತಿ ಸುರೇಶ್ ಬಹುತೇಕ ಫಿಕ್ಸ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವೆಂಕಟೇಶ್ ಜೊತೆ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಈಗ ಕಲ್ಯಾಣ್ ರಾಮ್ ಜೊತೆ ಯುವ ನಾಯಕಿಯನ್ನು ಅನಿಲ್ ರವಿಪುಡಿ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಶೆಟ್ಟಿಗೆ ಅವಕಾಶ ನೀಡಿದ್ದು ಅನಿಲ್ ರವಿಪುಡಿ.

ಆ ನಾಯಕಿ ಬೇರೆ ಯಾರೂ ಅಲ್ಲ, ಯುವ ನಟಿ ಕೃತಿ ಶೆಟ್ಟಿ. ಉಪ್ಪೇನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ, ಆ ನಂತರ ಸರಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೃತಿ ಶೆಟ್ಟಿಗೆ ಹಿಟ್‌ಗಳಿಗಿಂತ ಫ್ಲಾಪ್‌ಗಳೇ ಹೆಚ್ಚು. ಸರಣಿ ಸಿನಿಮಾಗಳನ್ನು ಮಾಡಿದರೂ, ಅವರಿಗೆ ಸಿಕ್ಕಿದ್ದು ಕೇವಲ ಮೂರು ಹಿಟ್‌ಗಳು.

ಇದನ್ನೂ ಓದಿ: ಫಿಲ್ಟರ್ ಕಾಫಿ ಮೇಲೆ ಪ್ರೀತಿಯಾಗಿದೆ ನಟಿ ಕೃತಿ ಶೆಟ್ಟಿಗೆ: ವಿಡಿಯೋ

ಆ ನಂತರ ಅವರು ಮಾಡಿದ ಎಲ್ಲಾ ಸಿನಿಮಾಗಳು ಫ್ಲಾಪ್‌ ಆಗಿವೆ. ಈಗ ಈ ನಟಿ ಅನಿಲ್ ಅವರ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟನೆ ಬರಲಿದೆ. ಇದು ನಿಜವಾಗಿದ್ದರೆ, ಅನಿಲ್ ಕೃತಿ ಶೆಟ್ಟಿಗೆ ಯಶಸ್ಸು ನೀಡಲಿದ್ದಾರೆ ಎಂಬುದು ಪ್ರೇಕ್ಷಕರಿಗೆ ಖಚಿತ. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಅವ್ಯವಸ್ಥೆಗೆ ಸರ್ಕಾರ ಮಾತ್ರ ಹೊಣೆಯಾ? ಜನರ ತಪ್ಪಿಲ್ವಾ?: SMVT ಟರ್ಮಿನಲ್ ಸ್ಥಿತಿ ನೋಡಿ

ಬೆಂಗಳೂರು, ಮಾ.26: ದೇಶದ ಮೊದಲ ಹವಾನಿಯಂತ್ರಿತ (AC) ರೈಲ್ವೆ ಟರ್ಮಿನಲ್ ಎಂಬ ಹೆಗ್ಗಳಿಕೆಯೊಂದಿಗೆ ಉದ್ಘಾಟನೆಗೊಂಡ ಬೆಂಗಳೂರಿನ ಬೈಯಪ್ಪನಹಳ್ಳಿಯ SMVT ನಿಲ್ದಾಣ, ಇಂದು ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದೆ. ವಿಮಾನ ನಿಲ್ದಾಣದ ಮಾದರಿಯ ವಿನ್ಯಾಸ, ಸ್ವಚ್ಛತೆ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಮಾದರಿಯಾಗಿದ್ದ ಈ ನಿಲ್ದಾಣ, ಪ್ರಸ್ತುತ ನಿರ್ವಹಣೆಯ ಕೊರತೆ ಮತ್ತು ಕಸದ ರಾಶಿಯಿಂದಾಗಿ ಸುದ್ದಿಯಲ್ಲಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದು ಎಷ್ಟು ಮುಖ್ಯವೋ, ಅದನ್ನು ದಿನನಿತ್ಯ ನಿರ್ವಹಿಸುವುದು ಅಷ್ಟೇ ಮುಖ್ಯ. ಕಸದ ವಿಲೇವಾರಿ, ಸ್ವಚ್ಛತೆ ಮತ್ತು ನಿರಂತರ ಮೇಲ್ವಿಚಾರಣೆಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಆದರೆ ಇದರ ಜತೆಗೆ ಜನರ ಜವಾಬ್ದಾರಿ ಕೂಡ ಇದೆ ಎಂಬುದನ್ನು ಮರೆಯುವಂತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇವಲ ವ್ಯವಸ್ಥೆಯನ್ನು ದೂಷಿಸಿದರೆ ಸಾಲದು. ಸಾರ್ವಜನಿಕ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಕಾಣುವ ಮನಸ್ಥಿತಿ ಜನರಲ್ಲಿ ಕಾಣಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡದಿರುವುದು ಈ ಅವನತಿಗೆ ಪ್ರಮುಖ ಕಾರಣ. “ನಮಗೆ ವಿಶ್ವದರ್ಜೆಯ ಸೌಲಭ್ಯಗಳು ಬೇಕು, ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಲ್ಲ” ಎಂಬ ಮನೋಭಾವವು ಅತ್ಯುತ್ತಮ ಮೂಲಸೌಕರ್ಯಗಳನ್ನು ಹಾಳುಮಾಡುತ್ತಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ

ವಿಡಿಯೋ ಇಲ್ಲಿದೆ ನೋಡಿ:

ತಕ್ಷಣವೇ ಅಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ದಂಡ ವಿಧಿಸುವುದು ಮತ್ತು ನಿರಂತರ ಸಿಸಿಟಿವಿ ಕಣ್ಗಾವಲು ಈ ನಿಲ್ದಾಣವನ್ನು ಮತ್ತೆ ಹಳೆಯ ಸ್ಥಿತಿಗೆ ತರಲು ಸಹಕಾರಿಯಾಗಬಹುದು. ಇದು ಕೇವಲ ಸರ್ಕಾರ ಹೊಣೆ ಮಾತ್ರವಲ್ಲ, ಜನರು ಕೂಡ ಇದಕ್ಕೆ ಜವಾಬ್ದಾರಾಗಿರುತ್ತಾರೆ. ಕಸ ಹಾಕಲು ಇಟ್ಟಿರುವ ಬಾಕ್ಸ್​​ನಲ್ಲೇ ಕಸ ಹಾಕಿದ್ರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ಜನರು ಕೂಡ ಇದರ ಬಗ್ಗೆ ಕಾಳಜಿ ವಹಿಸಿದ್ರೆ ಈ ಕೆಲಸ ಖಂಡಿತ ಯಶಸ್ವಿಯಾಗುತ್ತದೆ ಎಂದು ಅನೇಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಲಿವುಡ್ ಸಿನಿಮಾ ಅನ್ನು ಅಡ್ಡಗಟ್ಟಿ ನಿಲ್ಲಿಸಿದ ‘ಧುರಂಧರ್ 2’

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿಯೂ ಸಹ ನೂರಾರು ಕೋಟಿ ಬಾಚುತ್ತಿದೆ. ಸಿನಿಮಾ ಬಿಡುಗಡೆ ಆಗಿ ವಾರ ಆಗುವಷ್ಟರಲ್ಲಿ ಸಿನಿಮಾದ ಗಳಿಕೆ 1000 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಸಿಂಗಲ್ ಥಿಯೇಟರ್, ಮಲ್ಟಿಪ್ಲೆಕ್ಸ್ ಎಲ್ಲೆಡೆ ‘ಧುರಂಧರ್ 2’ ಹವಾ ಜೋರಾಗಿದೆ. ‘ಧುರಂಧರ್ 2’ ಎದುರು ಬಿಡುಗಡೆ ಆದ ಸಿನಿಮಾಗಳು ‘ಧುರಂಧರ್ 2’ ನೆರಳಲ್ಲಿ ಬಳಲುತ್ತಿವೆ. ಇದೀಗ ‘ಧುರಂಧರ್ 2’ ಸಿನಿಮಾ ಹಾಲಿವುಡ್ ಸಿನಿಮಾ ಒಂದಕ್ಕೆ ಭಾರಿ ಸ್ಪರ್ಧೆ ನೀಡುತ್ತಿರುವುದು ಮಾತ್ರವಲ್ಲ, ಭಾರತಕ್ಕೆ ಎಂಟ್ರಿ ಕೊಡಲು ಸಹ ಕಷ್ಟಪಡುವಂತೆ ಮಾಡಿದೆ.

ರ್ಯಾನ್ ಗೋಸ್ಲಿಂಗ್ ನಟನೆಯ ಭಾರಿ ಬಜೆಟ್ ಸಿನಿಮಾ ‘ಪ್ರಾಜೆಕ್ಟ್ ಹೇಲ್ ಮೇರಿ’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿದೆ. ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆದಾಗ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಬಿಡುಗಡೆ ಆಗುತ್ತದೆ. ಹಾಲಿವುಡ್ ಸಿನಿಮಾಗಳ ಮುಖ್ಯ ಗ್ರಾಹಕರೇ ಮಲ್ಟಿಪ್ಲೆಕ್ಸ್ ಗ್ರಾಹಕರು. ಹಾಲಿವುಡ್ ಸಿನಿಮಾಗಳು ಹೆಚ್ಚು ವಿಎಫ್​​ಎಕ್ಸ್ ಮತ್ತು ದೃಶ್ಯದ ಗುಣಮಟ್ಟ ಹೊಂದಿರುತ್ತವೆಯಾದ್ದರಿಂದ ಐನಾಕ್ಸ್, ಪಿವಿಆರ್ ನ ಅತ್ಯುತ್ತಮ ಸೌಂಡ್ ಮತ್ತು ಗುಣಮಟ್ಟದ ಸ್ಕ್ರೀನ್​​ಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ.

ಆದರೆ ಇದೀಗ ‘ಪ್ರಾಜೆಕ್ಟ್ ಹೇಲ್ ಮೇರಿ’ ಸಿನಿಮಾಕ್ಕೆ ಭಾರತದಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸ್ಕ್ರೀನ್​​ಗಳು ಸಿಗುತ್ತಿಲ್ಲ. ಭಾರಿ ಬಜೆಟ್​​ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಅದ್ಧೂರಿ ದೃಶ್ಯ ವೈಭವ ಇರುವ ಸಿನಿಮಾ ಇದಾಗಿದ್ದು, ಸಿನಿಮಾದ ಅತ್ಯುತ್ತಮ ಅನುಭವವನ್ನು ಪಡೆಯಲು ಐಮ್ಯಾಕ್ಸ್ ಅಥವಾ ಇನ್ಯಾವುದೇ ಅತ್ಯುತ್ತಮ ಗುಣಮಟ್ಟದ ಸ್ಕ್ರೀನ್​​ನಲ್ಲಿಯೇ ಸಿನಿಮಾ ವೀಕ್ಷಿಸಬೇಕಿದೆ. ಆದರೆ ‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್​​ಗಳನ್ನು ಆಕ್ರಮಿಸಿಕೊಂಡಿದ್ದು, ‘ಪ್ರಾಜೆಕ್ಟ್ ಹೇಲ್ ಮೇರಿ’ಗೆ ಸ್ಕ್ರೀನ್​​ಗಳ ಕೊರತೆ ಎದುರಾಗಿದೆ.

ಇದನ್ನೂ ಓದಿ:‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

ಅದರಲ್ಲೂ ‘ಪ್ರಾಜೆಕ್ಟ್ ಹೇಮ್ ಮೇರಿ’ ಸಿನಿಮಾಕ್ಕೆ ಇಡೀ ದೇಶದಲ್ಲಿ ಕೇವಲ ನಾಲ್ಕು ಐಮ್ಯಾಕ್ಸ್ ಸ್ಕ್ರೀನ್​​ಗಳು ದೊರೆತಿವೆ ಎನ್ನಲಾಗುತ್ತಿದೆ. ಹಾಲಿವುಡ್ ಸಿನಿಮಾಗಳು ಬಿಡುಗಡೆ ಆದರೆ, ಪ್ರದರ್ಶನವಾಗುತ್ತಿದ್ದ ಭಾರತೀಯ ಭಾಷೆಯ ಸಿನಿಮಾಗಳನ್ನು ಪಕ್ಕಕ್ಕೆ ಸರಿಸುತ್ತಿದ್ದವು ಮಲ್ಟಿಪ್ಲೆಕ್ಸ್​​ಗಳು ಆದರೆ ಈಗ ಅತಿ ದೊಡ್ಡ ಹಾಲಿವುಡ್​ ಸಿನಿಮಾಕ್ಕೆ ಮಲ್ಟಿಪ್ಲೆಕ್ಸ್​​ನಲ್ಲಿ ಸ್ಕ್ರೀನ್​​ಗಳು ಸಿಗದಂತೆ ಮಾಡಿದೆ ‘ಧುರಂಧರ್ 2’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಚಾನ್ಸ್ ಕೊಡಿ ಕೊಡಿ ಅಂತ ಕೇಳಿಕೊಂಡ್ರಲ್ಲ’; ಡಾರ್ಲಿಂಗ್ ಕೃಷ್ಣ ವಿರುದ್ಧ ಕಿಡಿಕಾರಿದ ಗುರು ದೇಶಪಾಂಡೆ

ನಿರ್ದೇಶಕರಾದ ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆ ನಮ್ಮದು ಎಂದು ಹೇಳಿದ್ದಾರೆ. ಆದರೆ, ಇದನ್ನು ಕೃಷ್ಣ ಅಲ್ಲಗಳೆದಿದ್ದಾರೆ. ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡುವ ವ್ಯಕ್ತಿ ಎಂದು ಟೀಕಿಸಿದ್ದಾರೆ. ಇದಕ್ಕೆ ಗುರು ದೇಶಪಾಂಡೆ ತಿರುಗೇಟು ಕೊಟ್ಟಿದ್ದಾರೆ. ‘ಈ ಮೊದಲು ನಾನು ಸಿನಿಮಾ ಮಾಡುವಾಗ ಚಾನ್ಸ್ ಕೊಡಿ ಕೊಡಿ ಎಂದು ಕೇಳಿಕೊಂಡಿದ್ರಿ. ಆಗ ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡ್ತಾರೆ ಅನ್ನೋದು ಗೊತ್ತಿರಲಿಲ್ಲವೇ? ಪದೇ ಪದೇ ಚಾನ್ಸ್ ಕೊಡಿ ಅಂತ ಕೇಳಿದ್ರಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ

ಬೆಂಗಳೂರು, ಮಾರ್ಚ್ 26: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಭಾರಿ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲು ನಾಡು ಎಂದೇ ಹೆಸರಾದ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳು ಜಮ್ಮು ಕಾಶ್ಮೀರದಂತಹ ಹಿಮಾವೃತ ಪ್ರದೇಶಗಳಂತೆ ಕಾಣಿಸಿ ಗಮನ ಸೆಳೆದಿವೆ. ಕಲಬುರಗಿ ಜಿಲ್ಲೆಯ ಚನ್ನೂರು ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಇಡೀ ಪ್ರದೇಶವು ಹಿಮದ ರಾಶಿಯಿಂದ ಆವರಿಸಿತ್ತು. ರಸ್ತೆಗಳ ಮೇಲೆಲ್ಲ ಮಂಜುಗಡ್ಡೆ ರಾಶಿ ಕಾಣಿಸಿದೆ. ಸಾಮಾನ್ಯವಾಗಿ ಕಾಣಸಿಗದ ಈ ಪ್ರಮಾಣದ ಆಲಿಕಲ್ಲು ಮಳೆಯು ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಮಳೆಯಿಂದಾಗಿ ದ್ರಾಕ್ಷಿ ಬೆಳೆ ವ್ಯಾಪಕವಾಗಿ ನಾಶವಾಗಿದ್ದು, ರೈತರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊರ ವರಸೆ

ವಾಷಿಂಗ್ಟನ್, ಮಾರ್ಚ್ 26: ಇರಾನ್ ಜೊತೆಗಿನ ಯುದ್ಧ ಆರಂಭವಾದಾಗಿನಿಂದ ದಿನ ಬೆಳಗಾದರೆ ಹೊಸ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ರೂಢಿಯಾಗಿಬಿಟ್ಟಿದೆ! ಪಶ್ಚಿಮ ಏಷ್ಯಾ ಯುದ್ಧವು ಇಂದು 27ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ನಮ್ಮ ಮುಂದೆ ಮಂಡಿಯೂರಿದೆ, ಆದರೆ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎಂದು ಹೇಳಿರುವ ಟ್ರಂಪ್ ಇರಾನ್​ಗೆ ಜೀವಭಯ ಕಾಡುತ್ತಿದೆ ಎಂದಿದ್ದಾರೆ. ಹಾಗೇ, “ಇರಾನ್​ನ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಇರಾನ್ ಬಯಸಿತ್ತು. ಆದರೆ ನಾನೇ ಅದಕ್ಕೆ ಒಪ್ಪಲಿಲ್ಲ” ಎಂಬ ಹೇಳಿಕೆಯನ್ನೂ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕದಲ್ಲಿ ರಿಪಬ್ಲಿಕನ್ ನಿಧಿಸಂಗ್ರಹಣೆಯಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಮ್ಮ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಿದೆ. ಅವರು ಒಪ್ಪಂದವನ್ನು ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಒಂದುವೇಳೆ ಆ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡರೆ ತಮ್ಮದೇ ಜನರು ತಮ್ಮನ್ನು ಸಾಯಿಸುತ್ತಾರೆ ಎಂಬ ಭಯ ಇರಾನ್ ನಾಯಕರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಒಪ್ಪಂದಕ್ಕೆ ಸಿದ್ಧವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್

ಇರಾನ್ ಮಾತ್ರ ಅಮೆರಿಕ ತನ್ನ ಜೊತೆ ಯಾವುದೇ ರೀತಿಯ ಕದನವಿರಾಮದ ಮಾತುಕತೆ ನಡೆಸಿಲ್ಲ, ನಾವು ಅದಕ್ಕೆ ಒಪ್ಪುವುದೂ ಇಲ್ಲ. ಕದನವಿರಾಮದ ದಿನದ ಬಗ್ಗೆ ಹಾಗೂ ಷರತ್ತುಗಳ ಬಗ್ಗೆ ಟ್ರಂಪ್ ನಿರ್ಧಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದೆ. ಹಾಗೇ ಯುದ್ಧ ನಿಲ್ಲಿಸಲು ಒಪ್ಪಲು ತಾನೇ 5 ಷರತ್ತುಗಳನ್ನು ಕೂಡ ವಿಧಿಸಿದೆ.

ಇದರ ಜೊತೆಗೆ ಟ್ರಂಪ್ ಇನ್ನೊಂದು ಶಾಕಿಂಗ್ ಹೇಳಿಕೆಯನ್ನೂ ನೀಡಿದ್ದಾರೆ. “ನಾವು ನಿಮ್ಮನ್ನು ಇರಾನ್​ನ ಮುಂದಿನ ಸುಪ್ರೀಂ ಲೀಡರ್ ಮಾಡಲು ಬಯಸುತ್ತೇವೆ ಎಂದು ಇರಾನ್ ನಾಯಕರು ಹೇಳಿದ್ದರು. ಆದರೆ, ನಾನು ನೋ, ಥ್ಯಾಂಕ್ಸ್. ನನಗೆ ಅದು ಬೇಡ” ಎಂದು ಹೇಳಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಕಳೆದ ತಿಂಗಳು ಅಲಿ ಖಮೇನಿ ಹತ್ಯೆಯ ನಂತರ ಇರಾನ್ ನಾಯಕತ್ವದಲ್ಲಿನ ಅನಿಶ್ಚಿತತೆಯ ಮಧ್ಯೆ ಈ ಹೇಳಿಕೆಗಳು ಬಂದಿವೆ. ಅವರ ಮಗ ಮೊಜ್ತಾಬಾ ಖಮೇನಿ ಅವರನ್ನು ಸುಪ್ರೀಂ ಲೀಡರ್ ಆಗಿ ಬಡ್ತಿ ನೀಡಲಾಯಿತು. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು, ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಕೂಂಬಿಂಗ್

ಮಡಿಕೇರಿ, ಮಾರ್ಚ್ 26: ಮಡಿಕೇರಿ ನಗರದ ಹೊರವಲಯದಲ್ಲಿ ಹುಲಿ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಇಬ್ಬನಿವಳವಾಡಿ, ಸಿಂಕೋನ ಹಾಗೂ ಕಗ್ಗೋಡ್ಲು ಸುತ್ತಮುತ್ತ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಜನರಲ್ಲಿ ಆತಂಕ ಉಂಟಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾವಹಿಸಲಾಗಿದೆ. ಕಾರ್ಯಾಚರಣೆಗೆ ಮೂರು ಸಾಕಾನೆಗಳನ್ನು ಬಳಸಲಾಗುತ್ತಿದ್ದು, ದಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿಯ ಚಲನವಲನ ಪತ್ತೆ ಮಾಡಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಥರ್ಮಲ್ ಡ್ರೋನ್ ಮೂಲಕವೂ ಹುಲಿಯ ಹಾದಿ ಮತ್ತು ಚಲನವಲನಗಳನ್ನು ನಿಗಾವಹಿಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ಕೂಲ್ ಅಸೆಂಬ್ಲಿಯಲ್ಲಿ ಕಣ್ಣು ಮುಚ್ಚಿಕೊಂಡೇ ಲಾಲಿ ಪಾಪ್ ಸವಿಯುತ್ತಾ ನಿಂತ ಪುಟಾಣಿ

ಮುದ್ದು ಮಕ್ಕಳ (little kids) ಆಟ ತುಂಟಾಟಗಳನ್ನು ನೋಡುವುದೇ ಚಂದ. ಹೆತ್ತವರು ಕೂಡ ಮಕ್ಕಳ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾರೆ. ಈ ಪುಟ್ಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮುದ್ದಾದ ಕ್ಲಿಪಿಂಗ್‌ ವೈರಲ್‌ ಆಗಿದ್ದು, ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳು ಕೈ ಜೋಡಿಸಿಕೊಂಡು ನಿಂತುಕೊಂಡರೆ, ಪುಟಾಣಿಯೊಂದು ಲಾಲಿಪಾಪ್ ತಿನ್ನೋದ್ರಲ್ಲಿ ಬ್ಯುಸಿಯಾಗಿದೆ. ಈ ಪುಟ್ಟ ಬಾಲಕನ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

Shubham_kr_rana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳೆಲ್ಲಾ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮಕ್ಕಳೆಲ್ಲಾ ಕೈ ಜೋಡಿಸಿ ನಿಂತು ಪ್ರಾರ್ಥನೆಗೆ ಸಜ್ಜಾದರೆ, ಆದರೆ  ಪುಟಾಣಿಯೊಂದು  ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಲಾಲಿ ಪಾಪ್ ಸವಿಯೋದ್ರಲ್ಲಿಯೇ ಬುಸ್ಯಿಯಾಗಿರುವುದನ್ನು ಕಾಣಬಹುದು. ಲಾಲಿಪಾಪ್ ತಿಂದ ಬಳಿಕ ಕಡ್ಡಿಯನ್ನು ಜೇಬಿಗೆ ಹಾಕಿ ಕಣ್ಣು ಮುಚ್ಚಿ ಕೈ ಜೋಡಿಸಿ ನಿಂತುಕೊಂಡಿದೆ. ಅಲ್ಲೇ ಇದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಗೆ ಹೆಗಲು ನೀಡಿದ ಪುಟಾಣಿ

ಈ ವಿಡಿಯೋ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕದ್ದು ತಿನ್ನುವ ಮಜಾನೇ ಬೇರೆ ಎಂದರೆ, ಮತ್ತೊಬ್ಬರು, ಕ್ಯಾಮೆರಾ ಮ್ಯಾನ್ ಪ್ರೈವಸಿ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುಗ್ಧತೆ ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮದುವೆಯಲ್ಲಿ ಜೀರಿಗೆ ಬೆಲ್ಲ ಏಕಿರಬೇಕು? ದಂಪತಿಗಳ ಬದುಕಿನಲ್ಲಿ ಬದಲಾವಣೆ ತರುವ ಈ ಶಾಸ್ತ್ರದ ಹಿಂದಿನ ಅಸಲಿ ಸತ್ಯ ಏನು?

ಬೆಂಗಳೂರು, ಮಾ.26: ನಮ್ಮ ಹಿಂದೂ ಸನಾತನ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಪರಂಪರೆಗಳು ಅನೇಕ ವಿಧಿ ವಿಧಾನಗಳನ್ನು ಒಳಗೊಂಡಿವೆ. ಇವುಗಳ ಹಿಂದಿರುವ ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಗಳನ್ನು ಆಳವಾಗಿ ಅರ್ಥೈಸಿಕೊಂಡಾಗ, ಆ ಆಚರಣೆಗಳಿಗೆ ಇನ್ನಷ್ಟು ಮಹತ್ವ ಮತ್ತು ಗೌರವ ದೊರೆಯುತ್ತದೆ. ಅಂತಹ ವಿಶಿಷ್ಟ ವಿಧಿವಿಧಾನಗಳಲ್ಲಿ ವಿವಾಹದ ಸಮಯದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವ ಆಚರಣೆ ಅತ್ಯಂತ ಪ್ರಮುಖವಾಗಿದೆ. ಇದರ ಹಿಂದೆ ಒಂದು ಸುಂದರವಾದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.

ವಿವಾಹವೆಂಬುದು ಜೀವನದ ಒಂದು ಮಹತ್ತರ ಘಟ್ಟ. ಇದು ಕೇವಲ ಎರಡು ವ್ಯಕ್ತಿಗಳ ಮಿಲನವಲ್ಲ, ಬದಲಿಗೆ ಎರಡು ಕುಟುಂಬಗಳ ಸಂಯೋಗ ಮತ್ತು ಹೊಸ ಜವಾಬ್ದಾರಿಗಳ ಆರಂಭ. ಮದುವೆಗೆ ಮುನ್ನ ಯೌವನ ಸಹಜವಾದ ಮುಗ್ಧತೆ, ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ಕೊರತೆ ಇರುವುದು ಸಹಜ. ಆದರೆ ವಿವಾಹ ಬಂಧನಕ್ಕೆ ಒಳಗಾದ ನಂತರ ಜೀವನ ಸಂಗಾತಿಯೊಂದಿಗೆ ಹೊಸ ಜೀವನವನ್ನು ನಡೆಸಬೇಕಾದಾಗ, ಹೊಸ ಜವಾಬ್ದಾರಿಗಳು ಎದುರಾಗುತ್ತವೆ. ಈ ಸಂದರ್ಭದಲ್ಲಿ ಜೀರಿಗೆ ಬೆಲ್ಲವನ್ನು ತಲೆಯ ಮೇಲೆ ಇಡುವ ಆಚರಣೆಯು ವಿಶೇಷ ಪಾತ್ರ ವಹಿಸುತ್ತದೆ.

ಈ ವಿಧಿಯು ತಲೆಯ ಮೇಲ್ಭಾಗದಲ್ಲಿರುವ ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸಹಸ್ರಾರ ಚಕ್ರವು ಜಾಗೃತಗೊಂಡಾಗ, ಮೆದುಳಿನಲ್ಲಿ ಧನಾತ್ಮಕ ಶಕ್ತಿಗಳು ಪ್ರಚೋದಿತವಾಗುತ್ತವೆ. ಇದು ನವದಂಪತಿಗಳಲ್ಲಿ ನಾನು ಮದುವೆಯಾಗಿದ್ದೇನೆ, ನನಗೆ ಜವಾಬ್ದಾರಿಗಳು ಹೆಚ್ಚಾಗಿವೆ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಈ ಪ್ರಜ್ಞೆಯಿಂದ ಆದಾಯ ಗಳಿಸುವುದು, ಖರ್ಚುಗಳನ್ನು ನಿಭಾಯಿಸುವುದು, ಆರ್ಥಿಕ ನಿರ್ವಹಣೆ ಸೇರಿದಂತೆ ವೈವಾಹಿಕ ಜೀವನದ ಎಲ್ಲಾ ಆಯಾಮಗಳನ್ನು ಸಮರ್ಥವಾಗಿ ನಿರ್ವಹಿಸುವ ಆಲೋಚನೆಗಳು ಮೂಡುತ್ತವೆ.

ಜೀರಿಗೆ ಮತ್ತು ಬೆಲ್ಲಕ್ಕೆ ವೈಯಕ್ತಿಕವಾಗಿಯೂ ವಿಶಿಷ್ಟ ಗುಣಗಳಿವೆ. ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಸಹಾಯಕವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ತಲೆಸುತ್ತು, ವಾಕರಿಕೆ, ಆಲಸ್ಯದಂತಹ ಸಮಸ್ಯೆಗಳನ್ನು ನಿವಾರಿಸಲು ಜೀರಿಗೆ ನೀರನ್ನು ಕುಡಿಯುವ ರೂಢಿ ಇದೆ. ಬೆಲ್ಲವು ದೇಹಕ್ಕೆ ಉಷ್ಣತೆಯನ್ನು ನೀಡಿ ಶಕ್ತಿಯನ್ನು ಒದಗಿಸುತ್ತದೆ. ಆದರೆ ವಿವಾಹದಲ್ಲಿ ಈ ಜೀರಿಗೆ ಬೆಲ್ಲವನ್ನು ತಿನ್ನಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಸಾಂಕೇತಿಕವಾಗಿ ಇಡಲಾಗುತ್ತದೆ. ಇದರ ಮುಖ್ಯ ಉದ್ದೇಶ ದೈಹಿಕ ಪ್ರಯೋಜನಗಳಿಗಿಂತ ಹೆಚ್ಚಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ.

ಇಲ್ಲಿದೆ ನೋಡಿ ವಿಡಿಯೋ:

ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವುದರಿಂದ ನವದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ, ಅವರ ಮನಸ್ಸುಗಳಲ್ಲಿರುವ ಋಣಾತ್ಮಕ ಆಲೋಚನೆಗಳು ದೂರವಾಗಿ, ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಇದು ಅವರ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡಿ, ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯನ್ನು ವೃದ್ಧಿಸುತ್ತದೆ.

ಇದನ್ನೂ ಓದಿ: Goddess Durga: ಭಯ, ಆತಂಕ, ಒಂಟಿತನದಿಂದ ಮುಕ್ತಿ ಪಡೆಯಲು ಒಂಬತ್ತು ಮಂಗಳವಾರ ಈ ಕೆಲಸ ಮಾಡಿ

ಹೀಗಾಗಿ, ನಮ್ಮ ಪ್ರಾಚೀನ ಸಂಪ್ರದಾಯಗಳು ಕೇವಲ ಕಾಲ್ಪನಿಕ ಆಚರಣೆಗಳಲ್ಲ. ಅವು ಜೀವನದಲ್ಲಿ ಧನಾತ್ಮಕ ಶಕ್ತಿಗಳನ್ನು ಪ್ರಚೋದಿಸುವ, ವ್ಯಕ್ತಿತ್ವವನ್ನು ಸುಧಾರಿಸುವ ಮತ್ತು ಉತ್ತಮ ಸಮಾಜವನ್ನು ರೂಪಿಸುವ ಉದ್ದೇಶವನ್ನು ಹೊಂದಿವೆ. ಜೀರಿಗೆ ಬೆಲ್ಲದ ಈ ವಿಧಿಯು ಮಾನಸಿಕವಾಗಿ ದಂಪತಿಗಳನ್ನು ಪರಿವರ್ತಿಸಿ, ಜವಾಬ್ದಾರಿಯುತ ಮತ್ತು ಪ್ರೀತಿಯ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಈ ಪದ್ಧತಿ ಮುಂದಿನ ಪೀಳಿಗೆಗಳಿಗೂ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತಿಳಿಸುತ್ತದೆ. ಸರ್ವೇ ಜನಾಃ ಸುಖಿನೋ ಭವಂತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ಕಂಪನಿಯು ತನ್ನ ಹಿಡಿತದಲ್ಲಿ ಇದ್ದ ಆರ್​​​ಸಿಬಿ (RCB)  ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್​​ಸಿಬಿ ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಈ ಮೂಲಕ ಹೊಸ ಕ್ಷೇತ್ರಕ್ಕೆ ಆದಿತ್ಯ ಬಿರ್ಲಾ ಕಾಲಿಟ್ಟಿದೆ. ಆದಿತ್ಯ ಬಿರ್ಲಾ ಜೊತೆ ಅಮೆರಿಕದ ಹೂಡಿಕೆದಾರ ಡೇವಿಡ್‌ ಬ್ಲಿಟ್ಝರ್ ಒಡೆತನದ ಬೋಲ್ಟ್‌ ವೆಂಚರ್ಸ್‌, ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್‌, ಟೈಮ್ಸ್‌ ಆಫ್‌ ಇಂಡಿಯಾ ಮಾಧ್ಯಮ ಸಮೂಹ ಕೂಡ ಇದೆ. ಈ ಮಾರಾಟದ ಬೆನ್ನಲ್ಲೇ ಮಲ್ಯ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ ಆಗಿತ್ತು. ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಇರುವುದರಿಂದ ಬೆಂಗಳೂರು ಎಂಬುದನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು. ಈಗ ತಂಡ ಮಾರಾಟ ಆಗಿದ್ದಕ್ಕೆ ಅವರು ಟ್ವೀಟ್ ಮಾಡಿದ್ದಾರೆ.

‘ಆರ್‌ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್‌ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು’ ಎಂದಿದ್ದಾರೆ ಅವರು.

‘ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸಬೇಕು ಎಂದು ನನಗೆ ಬಹುವಾಗಿ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಸಿದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ’ ಎಂದು ಮಲ್ಯ ಹೇಳಿದ್ದಾರೆ.

ಇದನ್ನೂ ಓದಿ: ಪ್ರೆಸ್​ಕಾನ್ಫರೆನ್ಸ್ ನಡೆಯುವಾಗಲೇ ಹೂಸುಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್​ ಹೇಳಿದ್ದೇನು?

‘ಆರ್​​​ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ, ನಮಸ್ಕಾರ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version