ಬಿಗ್ ಬಾಸ್ ಕನ್ನಡ 12ರಲ್ಲಿ ಐತಿಹಾಸಿಕ ಜಯ ಕಂಡ ಗಿಲ್ಲಿ ನಟ; ರಕ್ಷಿತಾ ರನ್ನರ್ ಅಪ್ – Kannada News | Gilli Nata Wins Bigg Boss Kannada 12 Record 47 Crore Votes Crown Him Champion

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಸುದೀಪ್ ವಿನ್ನರ್ ಘೋಷಣೆ ಮಾಡಿದರು.  ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ರಕ್ಷಿತಾಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ.

ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್​ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು.ಇದನ್ನು ಗಿಲ್ಲಿ ಕೂಡ ಹೇಳಿಕೊಂಡಿದ್ದರು. ಅವರಿಗೆ ಈ ವಿಷಯದಲ್ಲಿ ತುಂಬಾನೇ ಬೇಸರ ಇತ್ತು. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ.

ಕಳೆದ ಬಾರಿಯ ವಿನ್ನರ್ ಹನುಮಂತ 5 ಕೊಟಿ ವೋಟ್ ಪಡೆದಿದ್ದರು. ಇದಕ್ಕಿಂತ ಹತ್ತು ಪಟ್ಟು ವೋಟ್​​ನ ಗಿಲ್ಲಿ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ. ಗಿಲ್ಲಿ ಕ್ರೇಜ್​​ಗೆ ವೋಟಿಂಗ್ ಲೈನ ಶೇಕ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕ್ರೇಜ್ ಏನು ಎಂಬುದು ಗೊತ್ತಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಾಗಲೇ ಕ್ರೇಜ್ ನಿಧಾನಕ್ಕೆ ಆರಂಬ ಆಯಿತು. ಯಾವಾಗ ಅಶ್ವಿನಿ ಜೊತೆ ಅವರು ಸೆಣೆಸಾಟಕ್ಕೆ ಇಳಿದರೋ ಆಗ ಅವರ ಕ್ರೇಜ್ ಹೆಚ್ಚುತ್ತಾ ಹೋಯಿತು. ಅವರು ಕೊಡೋ ತಿರುಗೇಟಿಗೆ ಎಲ್ಲರೂ ಫಿದಾ ಆದರು. ಪ್ರತಿ ಹಂತದಲ್ಲೂ ಹಾಸ್ಯ ಮಾಡುತ್ತಾ ಮನರಂಜನೆ ನೀಡಿದರು. ಈ ಕಾರಣದಿಂದ ಗಿಲ್ಲಿ ನಟ ಎಲ್ಲರಿಗೂ ಇಷ್ಟ ಆದರು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿ ಆದರು. ನಂತರದಲ್ಲಿ ಅವರಿಗೆ ಕಾಂಪಿಟೇಟರ್ ಇಲ್ಲ ಎಂಬಂತಾಯಿತು. ಕೊನೆಗೂ ಅವರು ಗೆದ್ದು ಬೀಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಜಾನ್ವಿ ಎಡವಟ್ಟು; ಇದೆಲ್ಲಾ ಬೇಕಿತ್ತಾ?

ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಅವರ ಕೈ ಸೇರಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಗಿಲ್ಲಿ ಜೀವನ ಇದರಿಂದ ಮತ್ತಷ್ಟು ಸುಧಾರಿಸಲಿದೆ ಎಂಬುದು ಅಭಿಮಾನಿಗಳ ಆಶಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:35 pm, Sun, 18 January 26

Source link

Horoscope Today 19 January : ಇಂದು ಈ ರಾಶಿಯವರು ಪ್ರೇಮದ ಗುಂಗಿನಿಂದ ಆಚೆ ಬರರು

ಮೇಷ ರಾಶಿ:

ಅಂತಸ್ತಿನ ವಿಚಾರದಲ್ಲಿ ನಿಮಗೇ ಅಸಮಾಧನ. ಪ್ರೇಮ ಜೀವನ ಸುಧಾರಿಸುತ್ತದೆ. ಆರ್ಥಿಕ ಪರಿಸ್ಥಿತಿಯೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಬೇಡದ ಸಂಗತಿಗಳೇ ಹೆಚ್ಚು ತಲೆಯಲ್ಲಿ ಓಡಾಡಬಹುದು. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಮೇಲೆ ಹಿತಶತ್ರುಗಳು ಆಕ್ರಮಣ ಮಾಡಬಹುದು. ಯೋಚಿಸದೆ ಹೂಡಿಕೆ ಮಾಡಬೇಡಿ. ಹುಡುಗಾಟಿಕೆಯಿಂದ ಏನಾದರೂ ಅವಗಡ ಉಂಟಾದೀತು. ನಿಮ್ಮ ನೋವಿಗೆ ಸ್ಪಂದಿಸಿದವರ ಜೊತೆ ಸಮಯ ಕಳೆಯುವಿರಿ. ಯುಕ್ತಿಯನ್ನು ಬಳಸುವಷ್ಟು ತಾಳ್ಮೆ ನಿಮಗೆ ಬೇಕು.

ವೃಷಭ ರಾಶಿ:

ಭಾವನಾತ್ಮಕ ಸಂಬಂಧಗಳಲ್ಲಿ ಜಗಳಗಳು ಸಾಧ್ಯ. ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ. ಪರಿವರ್ತನೆ ಸಕಾರಣಕ್ಕಾದರೆ ಉತ್ತಮ. ಕಚೇರಿಯಲ್ಲಿ ನಿಮಗೆ ಹೆಚ್ಚುವರಿ ಕೆಲಸದ ಜವಾಬ್ದಾರಿಗಳು ಸಿಗುತ್ತವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ನೀವು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘ್ಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲ ಎನಿಸಬಹುದು.‌

ಮಿಥುನ ರಾಶಿ:

ಸಮಯದ ಬಗ್ಗೆ ಗಾಂಭೀರ್ಯವು ಕಡಿಮೆ‌ ಆಗುವುದು. ‌ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಹೊಸ ಹೂಡಿಕೆ ಅವಕಾಶಗಳು ಲಭ್ಯವಾಗುತ್ತವೆ. ಪುಣ್ಯಸ್ಥಳಹಳ ಬಗ್ಗೆ ನಂಬಿಕೆ ಹೆಚ್ಚಾಗುವುದು. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಬಹುದು. ಮಕ್ಕಳ ಕಾಳಜಿಯು ಅತಿಯಾಗುವುದು. ನಿಮ್ಮ ಮಾತು ಸತ್ಯವಾಯಿತೆಂಬ ಸಂತೋಂಷವಿರುವುದು. ಖುಷಿಯಿಂದ ಮಾರ್ಗಗಳನ್ನು ಹುಡುಕುವಿರಿ.

ಕರ್ಕಾಟಕ:

ಇಂದು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಹೊಸ ಆದಾಯದ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇರುತ್ತಾರೆ. ನಿಮಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಮನೆಗೆ ಬೇಕಾಗದ ಖರ್ಚುಗಳನ್ನು ತಪ್ಪಿಸಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ಮುಗ್ಗರಿಸಿ ಬೀಳುವುದು ಬೇಡ. ನಡಿಗೆ ಸಾವಧಾನದಿಂದ ಇರಲಿ.

ಸಿಂಹ ರಾಶಿ:

ಇಂದು ತಮ್ಮ ಮಾತನ್ನು ನಿಯಂತ್ರಿಸಬೇಕು ಮತ್ತು ನಿಂದನೀಯ ಪದಗಳನ್ನು ಬಳಸಬಾರದು. ಹಿರಿಯರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಸಣ್ಣ ಭೂಮಿಯ ಖರೀದಿಸುವ ಸಾಧ್ಯತೆಗಳಿವೆ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ:

ರಾಜಕೀಯದಿಂದ ಅಂತರ ಕಾಯ್ದುಕೊಳ್ಳಿ. ಯಾವುದೇ ವಿವಾದಿತ ಮಾತುಗಳನ್ನಾಡಿ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ನಾಯಕತ್ವ ಸಿಕ್ಕಿ ಅದನ್ನು ನಿಭಾಯಿಸುವುದು ಕಷ್ಟ. ದಿವಸದ ವ್ಯವಸ್ಥೆಯನ್ನು ಕ್ರಮಬದ್ಧ ಮಾಡಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು.

ತುಲಾ ರಾಶಿ :

ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಖುಷಿಯನ್ನು ಕೊಡುವುದು. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಚಿಂತನಶೀಲ ಹೂಡಿಕೆ ನಿರ್ಧಾರಗಳು ಉತ್ತಮ ಲಾಭವನ್ನು ನೀಡುತ್ತವೆ. ನಿಮ್ಮಿಂದ ಬಣ್ಣದ ಮಾತುಗಳನ್ನು ನಿರೀಕ್ಷಿಸಲಾಗದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸುತ್ತಿರಿ. ಬಜೆಟ್‌ಗೆ ಅನುಗುಣವಾಗಿ ಖರ್ಚುಗಳನ್ನು ನಿರ್ಧರಿಸಿ. ದೀರ್ಘಾವಧಿಯ ಆರ್ಥಿಕ ಗುರಿಗಳತ್ತ ಗಮನಹರಿಸಿ. ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯುತ್ತವೆ.

ವೃಶ್ಚಿಕ ರಾಶಿ:

ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಇಂದು, ಚಿಂತನಶೀಲ ಹೂಡಿಕೆ ನಿರ್ಧಾರಗಳು ಉತ್ತಮ ಲಾಭವನ್ನು ನೀಡುತ್ತವೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸವೆಲ್ಲ ಹಾಳಾಗುವುದು. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು.

ಧನು ರಾಶಿ:

ಮಾತಿನಲ್ಲಿ ಒರಟು ಕಾಣಿಸುವುದು. ಒಳ್ಳೆಯದರ ಕಡೆಗೆ ನಿಮ್ಮ ಒಲವಿರಲಿ. ನಿಮ್ಮ ಸಂಗಾತಿಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಪ್ರಶಂಸೆಯನ್ನು ಯಥಾವತ್ತಾಗಿ ತೆಗೆದುಕೊಳ್ಳುವಂತಿಲ್ಲ. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಪ್ರವಚನಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿರಲಿದೆ. ದೌರ್ಬಲ್ಯವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡವು ಸಾಧಿಸುವಿರಿ. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಸಹಾಯ ಮಾಡುವರು.

ಮಕರ ರಾಶಿ:

ನಿಮ್ಮ ಜೀವನಕ್ಕೆ ಸಂಗಾತಿಯಾವಿ ಬರುವವರ ಜೊತೆ ಮುಜುಗರದಿಂದ ಮಾತನಾಡುವಿರಿ. ಸಹವಾಸ ನಿಮಗೆ ಸಿಗುತ್ತದೆ. ರಾಜಕೀಯದಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಪ್ರಭಾವೀ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ.

ಕುಂಭ ರಾಶಿ:

ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ನಿಮ್ಮಿಂದ ಸಂಗಾತಿಗೆ ಬೇಸರವುಂಟಾಗುವುದು. ಮನಸ್ಸು ಚಂಚಲದಿಂದ ಯಾರ ಮಾತನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಾರಿರಿ. ದೂರದ ಬಂಧುಗಳು ಪರಿಚಿತರಾಗಿ ಅವರ ಜೊತೆ ಕಾಲ ಕಳೆಯುವಿರಿ. ನಿಮಗೆ ಕೃತಜ್ಞತೆ ಇರಲಿ.

ಮೀನ ರಾಶಿ:

ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನವನ್ನು ಕೊಡಬೇಕಸದೀತು. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತ್ತದೆ ಎಂಬ ಭಯವು ಇರುವುದು. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ಬಹಳ‌ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷವಾಗುವುದು.

ಜನವರಿ 19,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶ್ರವಣಾ ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-19 – 09:45, ಯಮಗಂಡ ಕಾಲ 11:10 – 12:35, ಗುಳಿಕ ಕಾಲ 14:00 – 15:26

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 19ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಶೀತ, ಕಫ, ಕೆಮ್ಮು ಇಂಥವುಗಳು ಹೆಚ್ಚಾಗಿ, ವೈದ್ಯರ ಬಳಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸ್ವಲ್ಪ ಕೂಡ ಇಷ್ಟ ಇಲ್ಲದ ವ್ಯಕ್ತಿಯ ಜೊತೆಯಾಗಿ ಅಥವಾ ಕೈ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ. ಇನ್ನು ನಿಮ್ಮಲ್ಲಿ ಯಾರು ಬಟ್ಟೆ ವ್ಯಾಪಾರ ಮಾಡುತ್ತಾ ಇದ್ದೀರಿ ಅಂಥವರಿಗೆ ಈಗಾಗಲೇ ಕೊಟ್ಟಿರುವಂಥ ಸಾಲದ ವಸೂಲಾತಿ ಕಷ್ಟ ಎನಿಸಲಿದ್ದು, ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್ ಗೆ ಈ ಬಗ್ಗೆ ದೂರು ನೀಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಗ್ಯಾಜೆಟ್, ಸೈಕಲ್, ಕನಿಷ್ಠ ವಾಟರ್ ಕ್ಯಾನ್ ಹೀಗೆ ಯಾವುದಕ್ಕಾದರೂ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಲಿದ್ದೀರಿ. ಉದ್ಯೋಗಸ್ಥರು ತಮ್ಮ ಬೆಳವಣಿಗೆ ಬಗ್ಗೆ ಬೇಸರಪಟ್ಟು, ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ತಮ್ಮ ಮೇಲಧಿಕಾರಿಗಳ ಜೊತೆ ಮಾತುಕಡೆ ನಡೆಸುವ ಸಾಧ್ಯತೆ ಇದೆ. ಸಣ್ಣ ಅಜಾಗರೂಕತೆಯೊಂದು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಹೆಜ್ಜೆಹೆಜ್ಜೆಗೆ ಕಿರಿಕಿರಿ ಮಾಡುತ್ತಾ ಇದ್ದವರ ಕೆಲವು ತಪ್ಪುಗಳು ನಿಮ್ಮ ಕಣ್ಣಿಗೆ ಬಿದ್ದು, ಅದರಿಂದ ಎಷ್ಟು ಗೋಳು ಬರಿಸಬಹುದೋ ಅಷ್ಟು ಕಿರುಕುಳ ನೀಡುವುದಕ್ಕೆ ಮುಂದಾಗಲಿದ್ದೀರಿ. ನಿಮಗೆ ನೆನಪಿರಬೇಕಾದ ಸಂಗತಿ ಏನೆಂದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ವೃತ್ತಿ- ವ್ಯವಹಾರ ಮಾಡುತ್ತಿರುವವರಿಗೆ ಅನುಭವದ ಆಧಾರದಲ್ಲಿ ನೀವು ತೆಗೆದುಕೊಂಡಿದ್ದ ತೀರ್ಮಾನಗಳು ಒಳ್ಳೆ ಫಲ ನೀಡಲಿದೆ. ಅದರ ಫಲಿತಾಂಶ ಎಂಬಂತೆ ನಿಮಗೆ ದೊಡ್ಡ ದೊಡ್ಡ ಜವಾಬ್ದಾರಿ ವಹಿಸಬಹುದು.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 19ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂಬಷ್ಟು ರೇಜಿಗೆ ಈ ದಿನ ನಿಮಗೆ ಆಗಲಿದೆ. ಒಬ್ಬೊಬ್ಬರು ಒಂದು ರೀತಿ ಹೇಳುತ್ತಾ, ಒಂದು ಕೆಲಸವನ್ನು ನಾಲ್ಕೈದು ಬಾರಿ, ನಾಲ್ಕೈದು ರೀತಿಯಲ್ಲಿ ಮಾಡುವಂತೆ ಆಗಲಿದೆ. ಎಲ್ಲರಿಗೂ ಒಳ್ಳೆಯವರಾಗಿರಬೇಕು ಎಂಬ ಆಲೋಚನೆಯನ್ನು ಬಿಟ್ಟು, ಹೊರಗೆ ಬನ್ನಿ. ನೀವು ಹೇಳಬೇಕು ಅಂದುಕೊಂಡ ವಿಚಾರವನ್ನು ನೇರವಾಗಿ ಹೇಳುವುದಕ್ಕೆ ಪ್ರಯತ್ನಿಸಿ. ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರ ಆಕ್ಷೇಪಕ್ಕೆ ಹಾಗೂ ನಿಂದನೆಗೆ ಗುರಿ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರು, ದೊಡ್ಡ ಗುಂಪನ್ನು ಮುನ್ನಡೆಸುವ ನಾಯಕತ್ವ ಸ್ಥಾನದಲ್ಲಿ ಇರುವವರು ನಿಮ್ಮ ಗಮನಕ್ಕೆ ಬಂದ ಸಂಗತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ತಲೆಕೂದಲು- ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಇವೆ ಎಂದಾದರೆ ಅವು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಇನ್ನು ರಾಜಕಾರಣದಲ್ಲಿ ಇರುವಂಥವರು ಯಾರ ಜೊತೆಗೆ ಗುರುತಿಸಿಕೊಂಡಿದ್ದೀರಿ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಹೇಳಿಕೆ ನೀಡಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬ ಸದಸ್ಯರ ಮಧ್ಯೆ ಇರುವ ವಿರಸ- ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಮನೆ, ಸೈಟು ಅಥವಾ ಜಮೀನಿನ ಕಾಗದ- ಪತ್ರ, ದಾಖಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ನಿಮ್ಮ ಸ್ನೇಹಿತರು ನೆರವು ನೀಡಲಿದ್ದಾರೆ. ಸೋದರ ಸಂಬಂಧಿಗಳ ಕಷ್ಟಕ್ಕೆ ನೀವು ಸಹಾಯ ಮಾಡಲಿದ್ದೀರಿ. ನಿಮ್ಮ ಮನೆಯಲ್ಲಿ ಇರುವಂಥ ಮಂಚ, ಸೋಫಾ, ದೀವಾನ ಇಂಥ ಹಳೆ ಪೀಠೋಪಕರಣಗಳ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಿದ್ದೀರಿ. ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದಿರಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 19ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಯಾರಿಗೆ ನಲವತ್ತು ವರ್ಷದ ಮೇಲೆ ವಯಸ್ಸಾಗಿರುತ್ತದೆ ಅಂಥವರು ನಿಮಗೆ ಈಗಾಗಲೇ ಕಾಡುತ್ತಿರುವ ನೋವು ಅಥವಾ ಅನಾರೋಗ್ಯ ಸಮಸ್ಯೆ ಬಗ್ಗೆ ಸೂಕ್ತ ವೈದ್ಯೋಪಚಾರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಬೇಕು. ಸುಲಭವಾಗಿ ಆಗಬೇಕಾದ ಕೆಲಸ- ಕಾರ್ಯಗಳಿಗೆ ವಿಪರೀತ ಓಡಾಟ ಆಗುತ್ತಿದೆ ಎಂಬ ಕಾರಣಕ್ಕೆ ಆಸಕ್ತಿಯನ್ನು ಕಳೆದುಕೊಳ್ಳಬೇಡಿ. ಸ್ನೇಹಿತರೋ ಸಂಬಂಧಿಗಳೋ ಸಹಾಯ ಮಾಡುವುದಾಗಿ ತಾವಾಗಿಯೇ ಮುಂದೆ ಬಂದಲ್ಲಿ ಅವರ ನೆರವು ಪಡೆದುಕೊಂಡು, ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ದೀರ್ಘ ಕಾಲದಿಂದ ನೀವು ತೆರಳಬೇಕು ಎಂದುಕೊಳ್ಳುತ್ತಿದ್ದ ಸ್ಥಳವೊಂದಕ್ಕೆ ಹೋಗಲು ಬೇಕಾದ ಎಲ್ಲ ಸಿದ್ಧತೆ ಆರಂಭ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಚೀಟಿ ಕಟ್ಟುತ್ತಿದ್ದೀರಿ, ಅದು ಹಣದ್ದೇ ಆಗಿರಬಹುದು ಅಥವಾ ಚಿನ್ನದ್ದೇ ಆಗಿರಬಹುದು; ಅದರ ಬಗ್ಗೆ ಒಂದು ಗುಮಾನಿ ನಿಮ್ಮನ್ನು ಈ ದಿನ ಕಾಡಲಿದೆ. ಆದ್ದರಿಂದ ವಾಪಸ್ ಪಡೆದುಕೊಳ್ಳಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಪಿಆರ್ಒ ಆಗಿ ಸಂಘ- ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸ್ವಂತ ವ್ಯವಹಾರ- ವ್ಯಾಪಾರ ಆರಂಭಿಸಲು ಬೇಕಾದ ಹಣಕಾಸಿನ ಸಂಪನ್ಮೂಲಕ್ಕೆ ಪ್ರಯತ್ನ ಪಡುತ್ತಾ ಇರುತ್ತೀರೋ ಅದು ಸಾಧ್ಯವಾಗಲಿದೆ. ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಸ್ನೇಹಿತರ ಪೈಕಿ ಕೆಲವರು ತಮ್ಮ ಕಾಂಟ್ಯಾಕ್ಟ್ ನಲ್ಲಿ ಇರುವಂಥವರನ್ನು ನಿಮಗೆ ಪರಿಚಯಿಸಲಿದ್ದು, ಅದರಿಂದಾಗಿ ಕೂಡ ಹಲವು ಅನುಕೂಲ ನಿಮಗೆ ಒದಗಿ ಬರಲಿದೆ. ಕಟ್ಟಡ ನಿರ್ಮಾಣ, ಇಂಟೀರಿಯರ್ ಡೆಕೊರೇಷನ್ ಇಂಥವುಗಳಲ್ಲಿ ತೊಡಗಿಕೊಂಡವರಿಗೆ ದೊಡ್ಡ ಕಾಂಟ್ರಾಕ್ಟ್ ಹುಡುಕಿಕೊಂಡು ಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ನನ್ನೊಳಗೆ ಎಲ್ಲರೂ ಇದ್ದಾರೆ, ಪ್ರೇಕ್ಷಕರೆದುರು ಇದ್ದಿದ್ದು ಇದ್ದಹಾಗೆ ಹೇಳಿದ ಕಿಚ್ಚ ಸುದೀಪ್ – Kannada News | Bigg Boss Kannada: Sudeep talks about how he handles the show

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss) ಶೋ. ಕನ್ನಡ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಶೋ ಪ್ರಸಾರ ಆಗುತ್ತದೆ. ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸೆಲೆಬ್ರಿಟಿಗಳು ಈ ಶೋ ನಡೆಸಿಕೊಟ್ಟಿದ್ದಿದೆ. ಆದರೆ ಕನ್ನಡದಲ್ಲಿ ಬಿಗ್​​ಬಾಸ್ ಶೋ ಪ್ರಾರಂಭ ಆದಾಗಿನಿಂದಲೂ ಸುದೀಪ್ ಅವರೇ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಬಿಗ್​​ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್​​ಬಾಸ ಎಂದಾಗಿದೆ. ಕಳೆದ ಸೀಸನ್​​ನಲ್ಲಿ ಸುದೀಪ್ ಅವರು ಇದು ನನ್ನ ಕೊನೆಯ ಸೀಸನ್ ಎಂದಿದ್ದರು. ಆದರೆ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ವ್ಯಕ್ತಿ ಇಡೀ ಕರ್ನಾಟಕದಲ್ಲಿ ಸಿಗಲಿಲ್ಲ. ಇದೀಗ ಸುದೀಪ್ ದಾಖಲೆಯ 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಈ ವೇಳೆ ಪ್ರೇಕ್ಷಕರೊಟ್ಟಿಗೆ ಕೆಲವು ವಿಷಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ.

12ನೇ ಸೀಸನ್ ಮುಗಿಯುವ ಮುಂಚೆ ಬಿಗ್​​ಬಾಸ್ ಮಾತನಾಡಿ, ಸುದೀಪ್ ಅವರಿಗೆ ಧನ್ಯವಾದ ಹೇಳಿದರು. ‘ಸುದೀಪ್ ಅವರೇ ಈ ಶೋಗೆ ಹೃದಯ ಕೊಟ್ಟವರು ನೀವು, ಗೋಡೆಗಳಿಗೆ ಜೀವ ತುಂಬಿದವರು ನೀವು. ಶೋಗೆ 12 ವರ್ಷಗಳು ತುಂಬಿವೆ, 12 ವರ್ಷದಿಂದಲೂ ನಿಮ್ಮ ಸಾರಥ್ಯದಲ್ಲಿ ಈ ಶೋ ನಡೆಯುತ್ತಿದೆ. ಇದು ದಾಖಲೆಯೇ ಆಗಿದೆ. ನಿಮ್ಮದು ಈಗ ಕೇವಲ ನಿರೂಪಣೆ ಮಾತ್ರವೇ ಅಲ್ಲ, ಅದೊಂದು ಪರಂಪರೆ ಆಗಿದೆ. ಸ್ಪರ್ಧಿಗಳು ನೊಂದಾಗ ಭರವಸೆ ತುಂಬಿದ್ದೀರಿ, ಸೋತಾಗ ಹುರಿದುಂಬಿಸಿದ್ದಿಈರಿ, ಖುಷಿಯಲ್ಲಿ ಸಂತಸ ಪಟ್ಟವರು, ಪ್ರೀತಿಯನ್ನು ಉಣಬಡಿಸಿದವರು ನೀವು, ಮಾತ್ರವಲ್ಲದೆ ಈ ಶೋಗೆ ಮಾರ್ಗದರ್ಶಕರಾಗಿದ್ದೀರಿ. ಈ ಶೋ ಅಲುಗಾಡಿದ ಅಡಿಪಾಯವನ್ನು ಕೈ ಹಿಡಿದು ನಿಲ್ಲಿಸಿದ್ದೀರಿ, ಈ ಶೋ ಧ್ವನಿ ಕಳೆದುಕೊಂಡಾಗ ಅದಕ್ಕೆ ಧ್ವನಿ ನೀಡಿದ್ದೀರಿ, ಈ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಯಶಸ್ವಿಗೊಳಿಸಿದ್ದೀರಿ, ಮನದಾಳದ ಧನ್ಯವಾದ. ಥ್ಯಾಂಕ್ಯೂ ಸುದೀಪ್’ ಎಂದರು.

ಬಳಿಕ ಮಾತನಾಡಿದ ಸುದೀಪ್, ‘ನಾನು ಈ ಶೋ ಅನ್ನು ಕಾನ್ಫಿಡೆಂಟ್ ಆಗಿ ನಡೆಸಿಕೊಡಲು ಮುಖ್ಯ ಕಾರಣ ಸ್ಪರ್ಧಿಗಳು ನೀಡುವ ಗೌರವ ಮತ್ತು ಪ್ರೀತಿ. ಅದಿಲ್ಲದೇ ಹೋಗಿದ್ದಿದ್ದರೆ ನಾನು ನಡೆಸಿಕೊಡಲು ಆಗುತ್ತಿರಲಿಲ್ಲ. ನಾನು ಕಲಿತಿರುವುದು ಏನೆಂದರೆ ಏನನ್ನೇ ಗಳಿಸಬೇಕು, ಸಾಧಿಸಬೇಕು ಎಂದರೆ ಭಯ, ಹೆದರಿಕೆಯಿಂದ ಆಗಲ್ಲ, ಅದು ಪ್ರೀತಿಯಿಂದ ಮಾತ್ರ ಸಾಧ್ಯ. ನಾನು ನಿಮ್ಮನ್ನು ಸಾಕಷ್ಟು ಪ್ರೀತಿಸಿದ್ದೀನಿ, ಅದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ನೀವು ನನಗೆ ನೀಡಿದ್ದೀರಿ, ನೀವು ತೋರುವ ಗೌರವ, ಪ್ರೀತಿಯಿಂದಲೇ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡಲು ಆಗುತ್ತಿದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಮುಂದುವರೆದು, ಕೆಲವೊಂದು ವಿಷಯ ಪ್ರೇಕ್ಷಕರಿಗೆ ಅರ್ಥವಾಗಲ್ಲ ಆದರೆ ಹೇಳಲೇ ಬೇಕಾಗುತ್ತದೆ. ನಿನ್ನೆ ಕ್ರಿಕೆಟ್ ಮುಗಿಸಿಕೊಂಡು ನಾನು ಬಂದಿದ್ದೇ ರಾತ್ರಿ 3:30ಗೆ ಸುಸ್ತಾಗಿರುತ್ತದೆ ಏನೋ ಸಮಸ್ಯೆ ಇರುತ್ತದೆ ಆದರೆ ನಾನು ಮಾಡುವ ಕೆಲಸ ಮಾಡಲೇ ಬೇಕಾಗುತ್ತದೆ. ನನ್ನನ್ನು ನಂಬಿಕೊಂಡು ಅಷ್ಟು ಜನ ಒಳಗೆ ಕುಳಿತಿರುವಾಗ ನಾನು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿಲ್ಲ. ಅವರ ಕೈಬಿಡಲು ಸಾಧ್ಯವಿಲ್ಲ’ ಎಂದರು ಸುದೀಪ್.

‘ನಾನು ಕಳೆದ 11 ವರ್ಷದಿಂದ ಈ ಶೋ ಜೊತೆಗೆ ಇರಲು ಕಾರಣ ಈ ವೇದಿಕೆ ಬಹಳ ಶುದ್ಧವಾದುದು. ಈ ವೇದಕೆಯಿಂದ ಹೋದ ಎಷ್ಟೋ ಮಂದಿ ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ್ದಾರೆ. ಎಷ್ಟೋ ಜನ ಸ್ಪರ್ಧಿಗಳು ತಮ್ಮ ವೃತ್ತಿಯಲ್ಲಿ ಮೇಲಕ್ಕೇರಿದ್ದಾರೆ. ಇದೆಲ್ಲ ಸಾಧ್ಯವಾಗಿರುವುದು ಈ ವೇದಿಕೆಯ ಶುದ್ಧತೆಯಿಂದ, ಪ್ರಮಾಣಿಕತೆಯಿಂದ ಹಾಗಾಗಿ ಈ ವೇದಿಕೆ ಇನ್ನೂ ಸಾಕಷ್ಟು ವರ್ಷಗಳು ಇರಬೇಕು. ಇದೇ ಕಾರಣಕ್ಕೆ ನಾನು ಈ ಶೋನ ಜೊತೆಗೆ ಇದ್ದೇನೆ’ ಎಂದರು.

ತೆರೆಯ ಮೇಲೆ ನಾನು ಕೂಲ್ ಆಗಿ ಕಾಣಬಹುದು, ಆದರೆ ನನ್ನೊಳಗೂ ಮನುಷ್ಯ ಇದ್ದಾನೆ. ನನ್ನೊಳಗೂ ಒಬ್ಬ ಗಿಲ್ಲಿ ಇದ್ದಾನೆ, ರಜತ್ ಇದ್ದಾನೆ, ಅಶ್ವಿನಿ ಇದ್ದಾರೆ, ರಕ್ಷಿತಾ ಇದ್ದಾರೆ. ನನಗೂ ಮೂಡ್ ಸ್ವಿಂಗ್​​ಗಳು ಆಗುತ್ತಿರುತ್ತವೆ. ನನಗೂ ಬೇಸರ ಆಗುತ್ತದೆ, ಸಿಟ್ಟೂ ಬರುತ್ತದೆ. ಆದರೆ ನೀವು ಅದನ್ನೆಲ್ಲ ನೋಡುವುದಿಲ್ಲ. ಅದನ್ನೆಲ್ಲ ಸಹಿಸಿಕೊಂಡು ನನ್ನನ್ನು ಒಳ್ಳೆಯ ಮೂಡ್​​ನಲ್ಲಿ ವೇದಿಕೆ ಮೇಲೇರುವಂತೆ ಮಾಡುವುದು ನಿರ್ದೇಶಕ ಪ್ರಕಾಶ್ ಅವರಿಗೆ ದೊಡ್ಡ ಧನ್ಯವಾದ ಎಂದ ಸುದೀಪ್, ಬಳಿಕ ತಮ್ಮ ಸಿಬ್ಬಂದಿಗಳೆಲ್ಲರಿಗೂ ಧನ್ಯವಾದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಲಕ್ಷ? – Kannada News | How much money did Bigg Boss Kannada 12 Runner Up Rakshita Shetty got

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss) ಅಂತ್ಯವಾಗಿದೆ. 113 ದಿನಗಳ ಕಾಲ ನಡೆದ ಈ ಶೋನಲ್ಲಿ ಅಂತಿಮವಾಗಿ ಗಿಲ್ಲಿ ವಿನ್ನರ್ ಆಗಿದ್ದಾರೆ. ಕೋಟ್ಯಂತರ ವೋಟುಗಳು ಗಿಲ್ಲಿಗೆ ಬಂದಿವೆ. ರನ್ನರ್ ಅಪ್ ಆಗಿದ್ದು ರಕ್ಷಿತಾ ಶೆಟ್ಟಿ. ಬಿಗ್​​ಬಾಸ್ ಮನೆಗೆ ಬಂದ ಮೊದಲ ದಿನವೇ ಶೋನಿಂದ ಹೊರಗೆ ಅಟ್ಟಲ್ಪಟ್ಟ ರಕ್ಷಿತಾ ವಾರದ ಬಳಿಕ ಮರು ಎಂಟ್ರಿ ಆಗಿದ್ದು ಮಾತ್ರವಲ್ಲದೆ ಬಿಗ್​​ಬಾಸ್ ಸೀಸನ್​ನ ಕೊನೆಯ ದಿನದ ವರೆಗೆ ಬಂದಿದ್ದಾರೆ. ಅದೂ ಯಾವ ಹಿನ್ನೆಲೆಯೂ ಇಲ್ಲದೆ. ಫಿನಾಲೆ ವರೆಗೆ ಬಂದ ಅವರ ಪ್ರಯಾಣವೇ ಒಂದು ಸಾಧನೆ.

ಬಿಗ್​​ಬಾಸ್​​ನಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ಹಣ ನೀಡುವುದು ವಾಡಿಕೆ. ಅದರ ಜೊತೆಗೆ ಕಳೆದ ಕೆಲ ಸೀಸನ್​​ಗಳಿಂದ ಗೆದ್ದವರಿಗೆ ಕಾರೊಂದನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಆದರೆ ರನ್ನರ್ ಅಪ್ ಆದವರಿಗೆ ಏನೂ ಸಿಗುತ್ತಿರಲಿಲ್ಲ. ಇದರ ಬಗ್ಗೆ ಹಿಂದೆ ಕೆಲವು ಬಾರಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರನ್ನರ್ ಅಪ್​​ ಆದವರಿಗೂ ನಗದು ಬಹುಮಾನ ನೀಡಲಾರಂಭಿಸಿದರು. ಇದೀಗ ಈ ಸೀಸನ್​​ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ದೊರೆತಿದೆ.

ವಿನ್ನರ್ ಘೋಷಣೆ ಮಾಡುವ ಮುಂಚೆ ಸುದೀಪ್ ಅವರು ರಕ್ಷಿತಾ ಬಳಿ, 50 ಲಕ್ಷ ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ರಕ್ಷಿತಾ 20 ಹಸು ಖರೀದಿ ಮಾಡುತ್ತೀನಿ ಎಂದರು. ಒಂದು ಹಸುವಿಗೆ ಎಷ್ಟು? ಎಂದರೆ ಒಂದು ಹಸುವಿಗೆ 1 ಲಕ್ಷ ರೂಪಾಯಿ ಎಂದರು. ಉಳಿದ ಹಣವನ್ನು ಖರ್ಚು ಮಾಡುತ್ತೀನಿ ಎಂದಿದ್ದರು. ಅಸಲಿಗೆ ರಕ್ಷಿತಾಗೆ 50 ಲಕ್ಷ ರೂಪಾಯಿ ಸಿಗಲಿಲ್ಲ. ಆದರೆ ಸಿಕ್ಕ ಹಣ ಕಡಿಮೆಯಂತೂ ಅಲ್ಲ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯ ಬೆಂಕಿಯುಂಡೆ ಅಶ್ವಿನಿಗೆ ಧಕ್ಕಲಿಲ್ಲ ಗೆಲುವು

ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು. ಬಹಳ ಕಷ್ಟಪಟ್ಟು ಆಡಿದ ರಕ್ಷಿತಾಗೆ ಒಳ್ಳೆಯ ಮೊತ್ತವನ್ನೇ ಬಹುಮಾನವಾಗಿ ನೀಡಲಾಯ್ತು. ಮಧ್ಯಮ ವರ್ಗದ ಕುಟುಂಬದವರಾದ ರಕ್ಷಿತಾಗೆ ಇದು ಸಹಕಾರಿ ಆಗುವುದಂತೂ ಗ್ಯಾರೆಂಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿಗೆ ಬಂಪರ್; 50 ಲಕ್ಷದ ಜೊತೆ ಐಷಾರಾಮಿ ಕಾರು, ಸುದೀಪ್ ಕಡೆಯಿಂದ ಬಿಗ್ ಅಮೌಂಟ್

Source link

ರನ್ನರ್ ಅಪ್ ಆದರೂ ಕಡಿಮೆಯಲ್ಲ ಕರಾವಳಿ ಚಿನಕುರಳಿಯ ಸಾಧನೆ – Kannada News | Bigg Boss Kannada 12: Rakshita Shetty became first Runner Up

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಮುಗಿದಿದೆ. ಸುದೀಪ್ ಅವರು ಈ ಸೀಸನ್​​ನ ವಿನ್ನರ್​ನ ಘೋಷಣೆ ಮಾಡಿದ್ದಾರೆ. ಬಹುತೇಕರು ಮೊದಲೇ ಊಹಿಸಿದ್ದಂತೆ ಗಿಲ್ಲಿ ನಟ ಅವರು 12ನೇ ಸೀಸನ್​​ನ ವಿನ್ನರ್ ಆಗಿದ್ದಾರೆ. ತಮ್ಮ ಹಾಸ್ಯದಿಂದ ಅವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಬಿಗ್​​ಬಾಸ್ 12ರ ಮನೆಗೆ ಒಟ್ಟು 24 ಮಂದಿ ಬಂದಿದ್ದರು. ಅವರಲ್ಲಿ ಬಹುತೇಕರು ನಟರು, ಆದರೆ ನಟನೆಯ ಸಣ್ಣ ಹಿನ್ನೆಲೆಯೂ ಇಲ್ಲದೆ, ಉಡುಪಿಯ ಹಳ್ಳಿಯೊಂದರಲ್ಲಿ ತಮಗೆ ತೋಚಿದಂತೆ ಅಡುಗೆ ವಿಡಿಯೋಗಳ ಮಾಡುತ್ತಿದ್ದ ಕನ್ನಡ ಭಾಷೆಯೂ ಸಹ ಸರಿಯಾಗಿ ಬಾರದ ಸಾಮಾನ್ಯ ಹುಡುಗಿಯೊಬ್ಬಾಕೆ ಬಿಗ್​​ಬಾಸ್​​ಗೆ ಬಂದು ಫಿನಾಲೆವರೆಗೂ ಬಂದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲವೇ ಅಲ್ಲ.

ಬಿಗ್​​ಬಾಸ್​​ ಮನೆಗೆ ಬಂದ ಮೊದಲ ದಿನವೇ ಮನೆಯಿಂದ ಎವಿಕ್ಟ್ ಆಗಿದ್ದ ರಕ್ಷಿತಾ, ಆ ನಂತರ ಮತ್ತೆ ಮನೆಗೆ ಎಂಟ್ರಿ ಕೊಟ್ಟು ಈಗ ಕೊನೆಯ ದಿನ ಮನೆಯಿಂದ ಹೊರಗೆ ಬಂದಿರುವುದು ಕಡಿಮೆ ಸಾಧನೆಯಲ್ಲ. ರಕ್ಷಿತಾ, ಆ ಮನೆಯಲ್ಲಿ ಹಲವು ರೀತಿಯ ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ರಕ್ಷಿತಾ, ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದರೂ ಸಹ ಅಲ್ಲಿದ್ದ ಸ್ಪರ್ಧಿಗಳಿಗೆ ಅದು ಅಸಹನೀಯ ಅನಿಸಿ ಹಲವರು ರಕ್ಷಿತಾ ಮೇಲೆ ಜಗಳ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ

ರಕ್ಷಿತಾರನ್ನು ಎಂಟರ್ಟೈನ್​​ಮೆಂಟ್​​ಗೆ ಬಳಸಿಕೊಂಡರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ನೌಕರಳಂತೆ ನಡೆಸಿಕೊಂಡರು, ತಮಾಷೆ ಮಾಡಲು ಬಳಸಿಕೊಂಡರು, ಫುಟೇಜ್ ತೆಗೆದುಕೊಳ್ಳಲು ಪುಕ್ಕಟೆ ಜಗಳ ಮಾಡಲು ಪಂಚಿಂಗ್ ಬ್ಯಾಗ್​​ನಂತೆ ನಡೆಸಿಕೊಂಡರು. ರಕ್ಷಿತಾರ ಬಣ್ಣದ ಬಗ್ಗೆ ಆಡಿಕೊಳ್ಳಲಾಯ್ತು, ಸ್ಲಂ ಎಂದು ಕರೆಯಲಾಯ್ತು, ‘ಸೆಡೆ’ ಎಂದು ಬೈಯ್ಯಲಾಯ್ತು, ರಕ್ಷಿತಾರ ಹಿನ್ನೆಲೆಯನ್ನು ಟೀಕಿಸಲಾಯ್ತು, ಆಕೆ ಧರಿಸುವ ಬಟ್ಟೆಗಳನ್ನು ಟೀಕಿಸಲಾಯ್ತು ಎಲ್ಲ ಅವಮಾನಗಳನ್ನು ಎದುರಿಸಿಯೂ ರಕ್ಷಿತಾ ಫಿನಾಲೆ ವರೆಗೆ ಬಂದರು. ಮಾತ್ರವಲ್ಲ, ಘಟಾನುಘಟಿಗಳನ್ನೇ ಹಿಂದಿಕ್ಕಿ ರನ್ನರ್ ಅಪ್ ಆಗಿದ್ದಾರೆ.

ಇಡೀ ಬಿಗ್​​ಬಾಸ್ ಮನೆಯಲ್ಲಿ ಕಿರಿಯ ವ್ಯಕ್ತಿ, ಅನುಭವವೂ ಕಡಿಮೆ ಆದರೆ ಹಲವು ಸಂದರ್ಭದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಘನತೆಯಿಂದ ವರ್ತಿಸಿದ್ದಾರೆ. ತಪ್ಪಿದ್ದಲ್ಲಿ ತಪ್ಪು ಎಂದಿದ್ದಾರೆ, ವಿರೋಧಿಗಳನ್ನೂ ಸಹ ಹೊಗಳಿದ್ದು ಸಹ ಇದೆ. ಯಾವ ನಾಟಕೀಯತೆಯೂ ಇಲ್ಲದೆ ಎಲ್ಲರೊಂದಿಗೆ ಬೆರೆತರು ಅವರ ಪ್ರಯಾಣ ನಿಜಕ್ಕೂ ಅಸಾಮಾನ್ಯಾಗಿತ್ತು. ಅವರು ರನ್ನರ್ ಅಪ್ ಆಗಿದ್ದರೂ ಸಹ ಅವರೇ ವಿನ್ನರ್, ‘ಗೊತ್ತಾಯ್ತಲ್ಲ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ – Kannada News | Gilli Nata Special Thanks To Kichcha Sudeep Ahead of Winning Announcment

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್​​ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ, ‘ಇದು ಶೋ ಅಲ್ಲ, ಜೀವನ ಅಂತ ಗೊತ್ತಾಯ್ತು. ತಪ್ಪನ್ನು ತಿದ್ದಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದೀರಿ. ಸಾಯೋವರೆಗೆ ನಿಮ್ಮ ಮರೆಯಲ್ಲ’ ಎಂದರು ಗಿಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version