ಕಾರುಣ್ಯ ರಾಮ್ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್ – Kannada News | Karunya Ram sister Samruddhi Ram threatening me Says Prajwal

ನಟಿ ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿ ರಾಮ್ (Samruddhi Ram) ಅವರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಕೊಟ್ಟವರು ಹಣ ವಾಪಸ್ ಕೇಳಿದ್ದಕ್ಕೆ ಕಾರುಣ್ಯ ರಾಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಅವರಿಗೆ ಸಾಲ ನೀಡಿರುವ ಪ್ರಜ್ವಲ್ ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಲ ಪಡೆಯುವಾಗ ಒಂದು ಮಾತು ಹೇಳಿದ್ದರು. ಅಕ್ಕನ ಮುಖ ನೋಡಿ ಸಾಲ ಕೊಡಿ ಎಂದಿದ್ದರು. ಅದಕ್ಕಾಗಿಯೇ ನಾನು ಕಾರುಣ್ಯ ರಾಮ್ (Karunya Ram) ಅವರಿಗೆ ಫೋನ್ ಮಾಡಿ ಹಣ ಕೇಳಿದೆ. ಅವರು ಜೋರಾಗಿ ಮಾತನಾಡಿದರು. ಈಗ ಸಮೃದ್ಧಿ ರಾಮ್ ಅವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣ ವಾಪಸ್ ಕೊಟ್ಟರು. ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿಕೊಂಡರು. ನಂಬರ್ ಬ್ಲಾಕ್ ಮಾಡಿದರು’ ಎಂದು ಪ್ರಜ್ವಲ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಹಾಲಿ ಚಾಂಪಿಯನ್‌ ಮುಂಬೈ ಮಣಿಸಿ ಮೊದಲ ಗೆಲುವು ದಾಖಲಿಸಿದ ಯುಪಿ – Kannada News | Harleen Deol’s Heroics Lead UP Warriors to First WPL 4 Win Over Defending Champs MI

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ 4ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಯುಪಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವುದರಿಂದ ಇಂದಿನ ಪಂದ್ಯದಲ್ಲೂ ಮುಂಬೈ ತಂಡವೇ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಯುಪಿ ತಂಡ ಬಲಿಷ್ಠ ಮುಂಬೈ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಈ ಆವೃತ್ತಿಯಲ್ಲಿ ಮೊದಲು ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ ಡಿಯೋಲ್ 39 ಎಸೆತಗಳಲ್ಲಿ 64 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Source link

Video: ಅಪಘಾತ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ – Kannada News | Saudi Arabia Quick Thinking Saves Mother and Children From Runaway Car

ಸೌದಿ ಅರೇಬಿಯಾ, ಜನವರಿ 15: ಯುವತಿಯೊಬ್ಬಳು ಅಪಘಾತವಾಗುವುದನ್ನು ತಡೆದು ಇಡೀ ಕುಟುಂಬನ್ನೇ ರಕ್ಷಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಕಾರನ್ನು ಸರಿಯಾಗಿ ಪಾರ್ಕ್​ ಮಾಡದೆ ವ್ಯಕ್ತಿಯೊಬ್ಬರು ಕಾರಿನಲ್ಲಿ ತಾಯಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದರು. ಇದ್ದಕ್ಕಿದ್ದಂತೆ ಕಾರು ಹಿಮ್ಮುಖವಾಗಿ ಚಲಿಸಲು ಶುರುವಾಗಿತ್ತು, ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರು ಕೂಡಲೇ ಓಡಿ ಹೋಗಿ ಕಾರಿನಲ್ಲಿ ಕುಳಿತುಕೊಂಡು ಬ್ರೇಕ್ ಹಾಗೂ ಎಲ್ಲರ ಪ್ರಾಣ ಉಳಿಸಿದ್ದಾಳೆ. ಒಂದೆರಡು ಸೆಕೆಂಡ್ ತಡವಾಗಿದ್ದರೂ ಕಾರು ಮಧ್ಯದಾರಿಗೆ ಹೋಗಿರುತ್ತಿತ್ತು, ದೊಡ್ಡ ಅಪಘಾತದವೇ ಸಂಭವಿಸುವ ಸಾಧ್ಯತೆ ಇತ್ತು. ಆಕೆಯ ಸಮಯಪ್ರಜ್ಞೆ ಎಲ್ಲರ ಜೀವ ಉಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂಬತ್ತು ವರ್ಷಗಳ ಬಳಿಕ ಅಮೂಲ್ಯ ಕಮ್​​ಬ್ಯಾಕ್: ನಾಯಕ ಯಾರು? – Kannada News | Amulya re entry to sandalwood from Pikaboo movie

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಅಮೂಲ್ಯ (Amulya) ನಾಯಕಿಯಾಗಿ ಸಖತ್ ಸದ್ದು ಮಾಡಿದ್ದವರು. ಆದರೆ ಹಲವು ನಾಯಕಿಯರಂತೆ ಮದುವೆ, ಮಕ್ಕಳ ಬಳಿಕ ಚಿತ್ರರಂಗದಿಂದ ದೂರಾದರು. ಇದೀಗ ನಟಿ ಅಮೂಲ್ಯ ಬರೋಬ್ಬರಿ ಎಂಟು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತಮ್ಮಂತೆ ಕ್ಯೂಟ್ ಆದ ಹೆಸರಿರುವ ಸಿನಿಮಾ ಮೂಲಕ. ಅಷ್ಟಕ್ಕೂ ಕ್ಯೂಟ್ ನಟಿ ಅಮೂಲ್ಯಗೆ ನಾಯಕ ಯಾರು?

‘ಪೀಕಬೂ’ ಹೆಸರಿನ ಸಿನಿಮಾನಲ್ಲಿ ಅಮೂಲ್ಯ ನಟಿಸುತ್ತಿದ್ದು, ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಅಮೂಲ್ಯ ಜೊತೆಗೆ ನಾಯಕನ ಲುಕ್​​ನ ಪರಿಚಯವನ್ನೂ ಸಹ ಮಾಡಿಕೊಡಲಾಗಿದೆ. ನಟಿ ಅಮೂಲ್ಯಾಗೆ ಜೋಡಿಯಾಗಿ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ನಟಿಸಿ ಅನುಭವ ಇರುವ ಶ್ರೀರಾಮ್ ‘ಪೀಕಬೂ’ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

2008 ರಲ್ಲಿ “ರಿಷಭಪ್ರಿಯ ಎಂದ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾದರು. ನಂತರ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಮೂಲಕ ನಾಯಕನಾಗಿ ಗಮನ ಸೆಳೆದರು. ‘ಗಜಾನನ ಅಂಡ್ ಗ್ಯಾಂಗ್’, ‘ಹೊಂದಿಸಿ ಬರೆಯಿರಿ’ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಅಮೂಲ್ಯ ಜೊತೆ ‘ಪೀಕಬೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ಸಖತ್ ಕ್ಯೂಟ್ ಆಗಿದ್ದು, ಸಿನಿಮಾದ ಕತೆಯೂ ಅಷ್ಟೆ ಕ್ಯೂಟ್ ಆಗಿರುವ ನಿರೀಕ್ಷೆ ಪ್ರೇಕ್ಷಕರದ್ದು.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

ಪಿಕಬೂ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಆಗಿದೆ. ಮಕ್ಕಳಿಗೆ ಒಮ್ಮೊಮ್ಮೆ ಮುದ್ದಾಗಿ ಪಿಕಬೂ ಎಂದು ಸಹ ಕರೆಯುವುದುಂಟು. ಇದೇ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ಸದ್ಯ ‘ಪೀಕಬೂ’ ಚಿತ್ರದ ಅರ್ಧದಷ್ಟು ಭಾಗ ಶೂಟಿಂಗ್ ಮುಗಿಸಿದೆ. ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ ಆಗಿದ್ದು. ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದ ನಂತ್ರ ಮತ್ತೆ ಅಮೂಲ್ಯ ಅವರಿಗೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ ನಿರ್ದೇಶಕ ಮಂಜು ಸ್ವರಾಜ್‌. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ನಟಿ ಅಮೂಲ್ಯ ಕೊನೆಯದಾಗಿ ಗಣೇಶ್ ನಟಿಸಿದ್ದ ‘ಮುಗುಳು ನಗೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ಇನ್ಯಾವ ಸಿನಿಮಾನಲ್ಲಿಯೂ ಅಮೂಲ್ಯ ಕಾಣಿಸಿಕೊಂಡಿಲ್ಲ. ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ನಾಯಕಿಯಾಗಿ ಮರು ಎಂಟ್ರಿ ನೀಡುತ್ತಿದ್ದಾರೆ ಅಮೂಲ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ: ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸಂಗ್ರಹಿಸಿದ ವಸ್ತುಗಳನ್ನ ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ – Kannada News | Lakkundi Ancient Treasure: 91 Yr Old Totayya Unearths Rare Gems and Gold in Gadag

ಗದಗ, ಜನವರಿ 15: ಗದಗ ತಾಲೂಕಿನ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಮತ್ತೆ ಪುರಾತನ ವಸ್ತುಗಳು ಪತ್ತೆ ಆಗಿವೆ. 91 ವರ್ಷದ ತೋಟಯ್ಯ ಕಾಶಯ್ಯ ಪತ್ರಿಮಠ ಅವರಿಗೆ ಪುರಾತನ ವಸ್ತುಗಳು ಸಿಕ್ಕಿವೆ. ಪಂಚ ನೀಲ, ಗಾಣಿಗ ನೀಲ, ಇಂದ್ರನೀಲ, ನೀಲದ ಹರಳುಗಳು, ಜಂಬನೀಲ, ಹುಳುಗಳು, ಚಿನ್ನ, ವಜ್ರ ಪಚ್ಚ, ಸ್ಫಟಿಕ ನಾಣ್ಯಗಳು ಪತ್ತೆ ಆಗಿವೆ. ನಿಧಿ ಸಂಗ್ರಹಣೆ ಮಾಡುವುದೇ ತೋಟಯ್ಯ ಅವರ ಕಾಯಕವಂತೆ. ಮಳೆಯಾದರೆ ಸಾಕು ನಿಧಿಯನ್ನು ಸಂಗ್ರಹಣೆ ಮಾಡಲು ಮಾಡುತ್ತಿದ್ದರು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಅನ್ವೇಷಣೆ ‌ಮಾಡಿದ್ದಾರೆ. ತಮಗೆ ಸಿಕ್ಕ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಲಕ್ಕುಂಡಿ ಗ್ರಾಮದ ದೇವಸ್ಥಾನಗಳ ಬಳಿ ಸಾಕಷ್ಟು ನಿಧಿಯಿದೆ. ನಾನು ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು – Kannada News | Fire breaks out in the Nanda Devi Reserve Forest Helicopter deployed to control Fire

ಉತ್ತರಾಖಂಡ, ಜನವರಿ 15: ಉತ್ತರಾಖಂಡದ ನಂದಾ ದೇವಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸತತ 5ನೇ ದಿನವೂ ಬೆಂಕಿ (Fire Accident) ಹೊತ್ತಿ ಉರಿಯುತ್ತಿದೆ. ಅತ್ಯಮೂಲ್ಯವಾದ ಸಸ್ಯ ಸಂಪತ್ತು, ಔಷಧೀಯ ಸಸ್ಯಗಳು ಸುಟ್ಟು ಬೂದಿಯಾಗಿದೆ. ಇಂದು ಇಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಕಣಿವೆಯು ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿದೆ. ಲಕ್ಷ್ಮಣ ಗಂಗಾ ಮತ್ತು ಅಲಕನಂದಾ ನದಿಗಳ ನಡುವೆ ಇರುವ, 3500-4200 ಮೀಟರ್ ಎತ್ತರದಲ್ಲಿರುವ UNESCO ವಿಶ್ವ ಪರಂಪರೆಯ ತಾಣ ಇದಾಗಿದೆ.

ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೈಬರ್ ಸೇರಿ ಹೇರಳ ಪೌಷ್ಟಿಕಾಂಶಗಳಿರುವ ಸೋರೆಕಾಯಿಯಿಂದ ಪ್ರಯೋಜನಗಳೇನು? ಬಾಬಾ ರಾಮದೇವ್ ಮಾಹಿತಿ – Kannada News | Bottle Gourd or Lauki vegetable’s health benefits, explained by Baba Ramdev

ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ತಮ್ಮ ಆಯುರ್ವೇದ ಪರಿಹಾರಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ. 60 ನೇ ವಯಸ್ಸಿನಲ್ಲಿಯೂ ಸಹ ನೀವು ಯುವಕರು ಮತ್ತು ಸದೃಢರಾಗಿರಲು ಸಾಧ್ಯ. ಆದರೆ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂಬುದು ಅವರ ಸಲಹೆ. ಆರೋಗ್ಯವಾಗಿರಲು ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳುವ ಅವರು, ಸಾಕಷ್ಟು ತರಕಾರಿಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಂಚಿಕೊಂಡ ವೀಡಿಯೊವೊಂದರಲ್ಲಿ, ಅವರು ಸೋರೆಕಾಯಿ ತರಕಾರಿಯ ಪ್ರಯೋಜನಗಳನ್ನು ವಿವರಿಸಿದ್ದಾರೆ. ಸೋರೆಕಾಯಿಯನ್ನು ಕೇವಲ ಒಂದಲ್ಲ, ಹಲವು ರೋಗಗಳಿಗೆ ಚಿಕಿತ್ಸೆಗೆ ಬಳಸಬಹುದು. ಹೈ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹಿಡಿದು ರಕ್ತದೊತ್ತಡವನ್ನು ನಿಯಂತ್ರಿಸುವವರೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಸೋರೆಕಾಯಿ ಯಾವ ರೋಗಗಳನ್ನು ನಿಯಂತ್ರಿಸಬಹುದು, ಇದರಲ್ಲಿ ಏನೇನು ವಿಶೇಷ ಔಷಧೀಯ ಅಂಶಗಳಿವೆ, ನಮ್ಮ ಆಹಾರದಲ್ಲಿ ಸೋರೆಕಾಯಿ ಹೇಗೆಲ್ಲಾ ಬಳಸಬಹುದು ಎಂಬುದರ ವಿವರ ಇಲ್ಲಿದೆ.

100 ಗ್ರಾಮ್ ಸೋರೆಕಾಯಿಯಲ್ಲಿ ಇರುವ ಪೋಷಕಾಂಶಗಳು

ಸೋರೆಕಾಯಿ ನಮ್ಮ ಹೊಟ್ಟೆಗೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಈ ತರಕಾರಿಯಲ್ಲಿ ಭರ್ಜರಿ ಪೋಷಕಾಂಶಗಳಿವೆ. 100 ಗ್ರಾಂ ಸೋರೆಕಾಯಿಯಲ್ಲಿ ಶೇಕಡಾ 92-96 ರಷ್ಟು ನೀರು ಇರುತ್ತದೆ. ಶೇ 14-15ರಷ್ಟು ಕ್ಯಾಲೋರಿ ಇರುತ್ತದೆ. 3.5 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 0.51 ಗ್ರಾಂ ಫೈಬರ್ ಮತ್ತು 0.6 ಗ್ರಾಂ ಪ್ರೋಟೀನ್ ಇರುತ್ತದೆ. ಇದು ವಿಟಮಿನ್ ಸಿ ಅನ್ನು ಸಹ ಒಳಗೊಂಡಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ ಕಾಂಪ್ಲೆಕ್ಸ್, ಕಣ್ಣುಗಳಿಗೆ ಅಗತ್ಯವಾದ ವಿಟಮಿನ್ ಎ (ಬೀಟಾ-ಕ್ಯಾರೋಟಿನ್), ಪೊಟ್ಯಾಸಿಯಮ್ (ರಕ್ತದೊತ್ತಡ ನಿಯಂತ್ರಣಕ್ಕೆ 170-180 ಮಿಲಿಗ್ರಾಂ), ಕ್ಯಾಲ್ಸಿಯಂ (ಬಲವಾದ ಮೂಳೆಗಳಿಗೆ 2026 ಮಿಲಿಗ್ರಾಂ), ಮೆಗ್ನೀಸಿಯಮ್ (ಸ್ನಾಯುಗಳಿಗೆ 10-11 ಮಿಲಿಗ್ರಾಂ), ರಂಜಕ (12-13 ಮಿಲಿಗ್ರಾಂ), ಕಬ್ಬಿಣ (0.30-0.4 ಮಿಲಿಗ್ರಾಂ) ಮತ್ತು ಅಲ್ಪ ಸೋಡಿಯಂ (ಹೃದಯ ಸ್ನೇಹಿ) ಅನ್ನು ಸಹ ಒಳಗೊಂಡಿದೆ. ಇದಷ್ಟೇ ಅಲ್ಲದೇ, ಅನೇಕ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತದೆ.

ಇದನ್ನೂ ಓದಿ: ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು

ಯಾವ ರೋಗಗಳಿಗೆ ಸೋರೆಕಾಯಿ ಪ್ರಯೋಜನಕಾರಿ?

ಯೋಗ ಗುರು ಬಾಬಾ ರಾಮ್‌ದೇವ್ ಅವರ ಪ್ರಕಾರ, ಸೋರೆಕಾಯಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಅಥವಾ ನಿವಾರಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಜನರು ಸಹ ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಸೋರೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ಮೂತ್ರಪಿಂಡ ಮತ್ತು ಹೊಟ್ಟೆಯ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡಬಹುದು. ಹೊಟ್ಟೆಯ ಸಮಸ್ಯೆಗಳಿರುವ ಜನರು ಖಂಡಿತವಾಗಿಯೂ ಸೋರೆಕಾಯಿಯನ್ನು ತಿನ್ನಬೇಕು ಎಂದು ಬಾಬಾ ರಾಮ್‌ದೇವ್ ಹೇಳುತ್ತಾರೆ.

ಬಾಬಾ ರಾಮದೇವ್ ಪ್ರಕಾರ ಸೋರೆಕಾಯಿ ಕೇವಲ ತರಕಾರಿಯಲ್ಲ, ಅದು ಪ್ರಬಲ ಔಷಧ. ಸೋರೆಕಾಯಿಯನ್ನು ದೇವರ ಪ್ರಸಾದವಾಗಿ ಮತ್ತು ಪ್ರಮುಖ ಔಷಧವಾಗಿ ತಿನ್ನಲು ಅವರು ಶಿಫಾರಸು ಮಾಡುತ್ತಾರೆ, ಏಕೆಂದರೆ ಇದು ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಹೆಚ್ಚಿಸುತ್ತದೆ. ಸೋರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ವಿವಿಧ ಕಾಯಿಲೆಗಳು ಸುಧಾರಿಸಬಹುದು. ಈ ರೀತಿಯಾಗಿ, ನೀವು ಆರೋಗ್ಯಕರ ಜೀವನವನ್ನು ನಡೆಸಬಹುದು.

ಈ ಸೋರೆಕಾಯಿ ತಿನಿಸುಗಳು ತಿಳಿದಿರಲಿ

ಹುರಿದ ಸೋರೆಕಾಯಿ: ನೀವು ಸೋರೆಕಾಯಿಯನ್ನು ಸರಳ ತರಕಾರಿಯಾಗಿ ತಿನ್ನಬಹುದು. ಸ್ವಲ್ಪ ಎಣ್ಣೆಯಲ್ಲಿ ಸೋರೆಕಾಯಿ ತುಂಡುಗಳನ್ನು ಹುರಿದು, ಅದಕ್ಕೆ ಕೆಲವು ಮಸಾಲೆಗಳನ್ನು ಸೇರಿಸಿ. ಇದು ತೂಕ ನಷ್ಟ ಮತ್ತು ಎಸಿಡಿಟಿ ಅಥವಾ ಎದೆಯುರಿಯಿಂದ ಪರಿಹಾರ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಪ್ರೋಟೀನ್ ಅಂಶ ಸೇರ್ಪಡೆ ಮಾಡಬೇಕೆಂದರೆ ಚನಾ ಡಾಲ್ (ಕಡಲೆಕಾಳು) ಅನ್ನೂ ಸೇರಿಸಬಹುದು. ಈ ತಿನಿಸಿನಲ್ಲಿ ಪ್ರೋಟೀನ್ ಮತ್ತು ಫೈಬರ್​ನ ಅತ್ಯುತ್ತಮ ಕಾಂಬಿನೇಶನ್ ಸಿಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ

ಸೋರೆಕಾಯಿ ಸೂಪ್: ಚಳಿಗಾಲದಲ್ಲಿ ಮೈ ಬೆಚ್ಚಗಾಗಿಸಲು ಸೋರೆಕಾಯಿ ಸೂಪ್ ಕುಡಿಯಬಹುದು. ಇದು ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಇದು ಹೊಟ್ಟೆ ಮತ್ತು ಇತರ ಅಂಗಗಳನ್ನು ಡೀಟಾಕ್ಸಿಫೈಗೊಳಿಸುತ್ತದೆ..

ಸೋರೆಕಾಯಿ ರಸ: ಇತ್ತೀಚಿನ ದಿನಗಳಲ್ಲಿ ಹಸಿರು ತರಕಾರಿ ರಸಗಳನ್ನು ಕುಡಿಯುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದರಲ್ಲಿ ಹಸಿ ಸೋರೆಕಾಯಿ ರಸವೂ ಸೇರಿದೆ. ಹಸಿ ಸೋರೆಕಾಯಿಯನ್ನು ಪುಡಿಮಾಡಿ, ಸೋಸಿ, ಸರಿಯಾದ ಪ್ರಮಾಣದಲ್ಲಿ ಪ್ರತಿದಿನ ಕುಡಿಯಿರಿ. ಇದು ಮೂತ್ರಪಿಂಡ ಮತ್ತು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

VHT 2026: ಕರ್ನಾಟಕ ತಂಡಕ್ಕೆ ಮುಳುವಾದ ಕನ್ನಡಿಗ; ಸೆಮಿಫೈನಲ್ ಸೋತ ಮಯಾಂಕ್ ಪಡೆ – Kannada News | Vijay Hazare Semi Final: Karnataka Defeated by Vidarbha; R. Samarth’s Unbeaten 76

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ (Karnataka vs Vidarbha) ನಡುವಿನ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ (Vijay Hazare Trophy Semi-final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಲನುಭವಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಆವೃತ್ತಿಯ ಫೈನಲ್​ನಲ್ಲಿ ಕರ್ನಾಟಕ ತಂಡ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತೋ ಅದೇ ತಂಡದ ವಿರುದ್ಧ ಈ ಆವೃತ್ತಿಯ ಸೆಮಿಫೈನಲ್ ಪಂದ್ಯದ ಸೋತಿದೆ. ಇನ್ನೊಂದು ನೋವಿನ ಸಂಗತಿಯೆಂದರೆ ಕರ್ನಾಟಕದ ಈ ಸೋಲಿಗೆ ಕರ್ನಾಟಕದ ಆಟಗಾರನೇ ಕಾರಣನಾಗಿದ್ದು, ವಿದರ್ಭ ತಂಡದಲ್ಲಿರುವ ಆರ್​. ಸಮರ್ಥ್​ ಕರ್ನಾಟಕದವರಾಗಿದ್ದು, ಈ ಆವೃತ್ತಿಯಲ್ಲಿ ವಿದರ್ಭ ಪರ ಆಡುತ್ತಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ವಿದರ್ಭ ಪರ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿದ ಸಮರ್ಥ್ ಕರ್ನಾಟಕದ ಸೋಲಿನ ಪ್ರಮುಖ ರೂವಾರಿ ಎನಿಸಿಕೊಂಡರು.

ಆರಂಭದಲ್ಲೆ ಎಡವಿದ ಕರ್ನಾಟಕ

ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ನಾಯಕನ ಈ ತೀರ್ಮಾನ ಸಂಪೂರ್ಣ ತಪ್ಪು ಎಂಬುದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಇಡೀ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಸೆಮಿಫೈನಲ್ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲರಾದರು. ಮಯಾಂಕ್ 9 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ದೇವದತ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ಕರ್ನಾಟಕ ಕೇವಲ 20 ರನ್​ಗಳಿಗೆ ತನ್ನ ಎರಡು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು.

281 ರನ್​ಗಳ ಗುರಿ

ಕಳೆದ ಆವೃತ್ತಿಯಲ್ಲಿ ವಿದರ್ಭ ಪರ ಆಡಿದ್ದ ಕರುಣ್ ನಾಯರ್, ಈ ಆವೃತ್ತಿಯಲ್ಲಿ ಕರ್ನಾಟಕದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಕರುಣ್​ಗೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕರುಣ್ 76 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಧೃವ್ 28 ರನ್​ಗಳಿಗೆ ಔಟಾದರು. ಕರುಣ್ ಬಳಿಕ ತಂಡದ ಪರ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿದ ಶ್ರೀಜಿತ್ 54 ರನ್ ಬಾರಿಸಿದರು. ಶ್ರೇಯಸ್ ಗೋಪಾಲ್ 36 ರನ್ ಬಾರಿಸಿದರೆ, ಮನೋಹರ್ 26 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ ತಂಡ ಕೊನೆಯ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 280 ರನ್ ಕಲೆಹಾಕಿತು.

ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು

ಕರ್ನಾಟಕಕ್ಕೆ ಮುಳುವಾದ ಕನ್ನಡಿಗ

ಈ ಗುರಿ ಬೆನ್ನಟ್ಟಿದ ವಿದರ್ಭ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. 9 ರನ್​ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಅಮನ್ ಹಾಗೂ ಧೃವ್ ತಂಡವನ್ನು ಶತಕದ ಗಡಿ ದಾಟಿಸಿದರು. ಈ ವೇಳೆ ಧೃವ್ 47 ರನ್ ಬಾರಿಸಿ ಔಟಾದರೆ, ಅಮನ್ 128 ರನ್​ಗಳ ಇನ್ನಿಂಗ್ಸ್ ಆಡಿ ತಂಡದ ಗೆಲುವು ಖಚಿತಪಡಿಸಿದರು. ಅಮನ್ ಜೊತೆಗೆ ತಂಡದ ಗೆಲುವಿಗೆ ನೆರವಾದ ಆರ್. ಸಮರ್ಥ್​ ಅಜೇಯ 76 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Thu, 15 January 26

Source link

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸರ್ಕಾರದಿಂದ ಮಹತ್ವದ ಹೆಜ್ಜೆ: ಕುತೂಹಲ ಕೆರಳಿಸಿದ ನಡೆ – Kannada News | Gold Treasure Found In lakkundi: excavation begin In the Village from january 16th

ಗದಗ, (ಜನವರಿ 15): ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10ರಂದು ನಿಧಿ (lakkundi Gold Treasure) ಪತ್ತೆಯಾದ ಬೆನ್ನಲ್ಲೇ ಇದೀಗ ಉತ್ಖನನ ನಡೆಸಲು ಪುರಾತತ್ವ ಇಲಾಖೆ ಮುಂದಾಗಿದೆ. ಹೌದು.. ನಾಳೆಯಿಂದ ಅಂದರೆ ಜನವರಿ 16ರಿಂದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಶುರುವಾಗಲಿದ್ದು, ಮೊದಲಿಗೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 48 ಸಿಬ್ಬಂದಿಯಿಂದ ಉತ್ಖನನ ನಡೆಯಲಿದೆ. ಹೀಗಾಗಿ ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಸ್ವತಃ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್​​​​ಕೆ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಇಡೀ ಗ್ರಾಮ ಸ್ಥಳಾಂತರಕ್ಕೆ ಚಿಂತನೆ

ಜನವರಿ 10ರಂದು ರಿತ್ತಿ ಕುಟುಂಬ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದನಿಧಿ ಪತ್ತೆಯಾಗಿತ್ತು. ಕುಟುಂಬ ಕೂಡಾ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಚಿನ್ನವನ್ನು ಹಸ್ತಾಂತರ ಮಾಡಿದೆ. ಇದರ ಬೆನ್ನಲ್ಲೇ ನಾಳೆಯಿಂದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನಕ್ಕೆ‌ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇನ್ನು ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳಿವೆ. ಹೀಗಾಗಿ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಪ್ರಮಾಣದ ನಿಧಿಯಿದೆ ಎನ್ನಲಾಗುತ್ತಿದೆ. ಹೀಗಾಗಿ ಲಕ್ಕುಂಡಿ ಗ್ರಾಮವನ್ನು ಸ್ಥಳಾಂತರ ‌ಮಾಡಬೇಕು. ಆಗ ಮಾತ್ರ ಲಕ್ಕುಂಡಿ ಗ್ರಾಮದಲ್ಲಿ ನಿಧಿ ರಹಸ್ಯ ಬಯಲಾಗುತ್ತದೆ. ಇದರಿಂದ ಗ್ರಾಮವನ್ನ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಚ್​​​ಕೆ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಸಿಕ್ಕ ನಿಧಿಗೆ ಇದೆ 300 ವರ್ಷಗಳ ಇತಿಹಾಸ, ಗ್ರಾಮಸ್ಥರಲ್ಲಿ ಶುರುವಾಯ್ತು ಹೊಸ ಆತಂಕ

ಗ್ರಾಮದಲ್ಲಿರುವ ಒಂದೊಂದು ದೇವಸ್ಥಾನಕ್ಕೆ ‌ಸೇರಿದ ಆವರಣಗಳಿವೆ. ಹೀಗಾಗಿ ಇಡೀ ಗ್ರಾಮವನ್ನು ಸ್ಥಳಾಂತರ ‌ಮಾಡಿದ್ರೆ ಅಪಾರ ಸಂಪತ್ತು ಸಿಗುತ್ತೇ ಅಂತಾರೆ ಲಕ್ಕುಂಡಿ ಗ್ರಾಮಸ್ಥರು.  ಇನ್ನು ಲಕ್ಕುಂಡಿ ಗ್ರಾಮದಲ್ಲಿ ಈ‌ ಹಿಂದೆ ಸಹ ಸಾಕಷ್ಟು ‌ಚಿನ್ನದ ನಿಧಿಪತ್ತೆಯಾಗಿತ್ತು. ಆ ಸಮಯದಲ್ಲಿ ನಿಧಿಯನ್ನು ಇಟ್ಟುಕೊಂಡು‌‌‌ ಕುಟುಂಬಗಳು ಸರ್ವನಾಶವಾಗಿವೆ. ಗ್ರಾಮದಲ್ಲಿ ‌ಸಿಕ್ಕ ನಿಧಿ ಉಪಯೋಗಿಸಿದ‌ ಕುಟುಂಬಗಳು ಸರ್ವನಾಶವಾಗಿವೆ ಎನ್ನುವುದು ಗ್ರಾಮದ ಕೆಲ ಜನರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿಗೆ ಜನ ಆತಂಕಗೊಂಡಿದ್ದು, ಯಾವಾಗ ಏನೇನು ಆಗುತ್ತೆ ಎನ್ನುವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ.

ಒಟ್ಟಿನಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಲಕ್ಕುಂಡಿ ಗ್ರಾಮದಲ್ಲಿ ನಾನಾ ರೀತಿಯ ಮಾತುಗಳು, ಚರ್ಚೆಗಳು ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದಂತೂ ಸತ್ಯ. ಇನ್ನೊಂದೆಡೆ ಉತ್ಖನನ ವೇಳೆ ಏನೆಲ್ಲಾ ಸಿಗಬಹುದು ಎನ್ನುವ ಕಾತರದಲ್ಲಿ ಜನ ಇದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಟ್ಸ್‌ಮನ್ ಕುತ್ತಿಗೆಗೆ ಬಡಿದ ಚೆಂಡು! ಕೂದಲೆಳೆ ಅಂತರದಲ್ಲಿ ತಪ್ಪಿದ ಅವಘಡ – Kannada News | BBL 2025 26: Harry Dixon’s Shocking Injury Scare – Renegades Star Narrowly Avoids Catastrophe

2025-26 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಮಹಾ ಗಂಡಾಂತರವೊಂದು ಕೂದಲೆಳೆ ಅಂತರದಿಂದ ತಪ್ಪಿಹೋಗಿದೆ. ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಡಿಕ್ಸನ್ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಸ್ತವವಾಗಗಿ ಜನವರಿ 15 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡವು ಫಿನ್ ಅಲೆನ್ ಅವರ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಡಿಕ್ಸನ್ ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಗಂಭೀರ ಗಾಯಕ್ಕೆ ತುತ್ತಾದರು. ಪರ್ತ್ ಪರ ಏಳನೇ ಓವರ್ ಬೌಲಿಂಗ್ ಮಾಡುತ್ತಿದ್ದ ಮಹ್ಲಿ ಬಿಯರ್ಡ್‌ಮನ್ ಕೊನೆಯ ಎಸೆತವನ್ನು ಶಾರ್ಟ್ ಬಾಲ್ ಎಸೆದರು. ಇತ್ತ ಸ್ಟ್ರೈಕ್​ನಲ್ಲಿದ್ದ ಡಿಕ್ಸನ್ ಚೆಂಡನ್ನು ಎಳೆಯಲು ಯತ್ನಿಸಿದರು. ಆದರೆ ಬ್ಯಾಟಿಗೆ ತಾಗದ ಚೆಂಡು ಡಿಕ್ಸನ್ ಅವರ ಭುಜ ಮತ್ತು ಕುತ್ತಿಗೆಯ ನಡುವೆ ಬಡಿಯಿತು. ಚೆಂಡು ಬಲವಾಗಿ ಬಿದ್ದ ಕಾರಣದಿಂದಾಗಿ ಡಿಕ್ಸನ್ ತೀವ್ರ ನೋವಿನಿಂದ ನರಳಲಾರಂಭಿಸಿದರು. ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಡಿಕ್ಸನ್ ತಮ್ಮ ಕುತ್ತಿಗೆಯನ್ನು ಸ್ವಲ್ಪ ಬಲಕ್ಕೆ ತಿರುಗಿಸದಿದ್ದರೆ, ಚೆಂಡು ನೇರವಾಗಿ ಅವರ ಗಂಟಲಿಗೆ ಬೀಳುತ್ತಿತ್ತು. ಇದರಿಂದ ಡಿಕ್ಸನ್ ಅವರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಆದರೆ ಅದೃಷ್ಟವಶಾತ್ ಡಿಕ್ಸನ್ ಮಹಾ ಅವಘಡದಿಂದ ಸ್ವಲ್ಪದರಲ್ಲೇ ಪಾರಾದರು.

ಆದಾಗ್ಯೂ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ನಿಗದಿತ ಓವರ್‌ಗಳಲ್ಲಿ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ, ಪರ್ತ್ ಸ್ಕಾರ್ಚರ್ಸ್ 50 ರನ್‌ಗಳಿಂದ ಆರಾಮದಾಯಕ ಗೆಲುವು ಸಾಧಿಸಿ ಪ್ಲೇಆಫ್‌ನತ್ತ ಹೆಜ್ಜೆ ಹಾಕಿತು. ರೆನೆಗೇಡ್ಸ್ ತಂಡದ ಪರ ಟಿಮ್ ಸೀಫರ್ಟ್ (66) ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ (42) ಕಠಿಣ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version