ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ – Kannada News | Producer Anil Sunkara said movie collection report is always fake

ಮೊದಲೆಲ್ಲ ಸಿನಿಮಾಗಳು (Cinema) ಬಿಡುಗಡೆ ಆದ ಮರು ದಿನ, ಕತೆ ಹೇಗಿದೆ? ಹಾಡುಗಳು ಹೇಗಿವೆ, ಕಾಮಿಡಿ ಚೆನ್ನಾಗಿದೆಯಾ? ಫೈಟ್ ಎಷ್ಟು ಇವೆ? ಐಟಂ ಹಾಡು ಇವೆಯಾ? ಫ್ಯಾಮಿಲಿ ನೋಡಬಹುದಾ? ಹೀಗೆಲ್ಲ ಚರ್ಚೆ ಆಗುತ್ತಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಆದ ಮರು ದಿನ ಕಲೆಕ್ಷನ್ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಕತೆ, ನಟನೆ, ಸಂಗೀತದ ಬಗ್ಗೆ ಮಾತನಾಡಬೇಕಾದ ಸಾಮಾನ್ಯ ಪ್ರೇಕ್ಷಕ ಸಹ ಸಿನಿಮಾಗಳ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಕೆಲವು ಸಿನಿಮಾ ಮಂದಿಯೇ ಕಳವಳ ವ್ಯಕ್ತಪಡಿಸಿದ್ದೂ ಸಹ ಇದೆ. ಆದರೆ ಸಿನಿಮಾ ತಂಡಗಳು ಹೇಳುವ ಕಲೆಕ್ಷನ್ ವಿಚಾರ ಬಹುತೇಕ ಸುಳ್ಳೆ ಆಗಿರುತ್ತದೆ. ಈ ಬಗ್ಗೆ ಸ್ವತಃ ನಿರ್ಮಾಪಕರೇ ಒಬ್ಬರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡಗಳೇ ತಮ್ಮ ಮೊದಲ ದಿನದ ಕಲೆಕ್ಷನ್ ಅನ್ನು ಘೋಷಿಸಲು ಆರಂಭಿಸಿವೆ. ಸಿನಿಮಾ ಒಂದು ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆಯೆಂದರೆ ಅದು ಸಾಧನೆಯ ವಿಷಯವಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ ಹೀಗೆ ಘೋಷಿಸುವ ಅಂಕಿ-ಅಂಶಗಳು ಸುಳ್ಳು ಎಂದು ಇದೀಗ ಹಿರಿಯ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಒಂದು 100 ಕೋಟಿ ಗಳಿಕೆ ಮಾಡಿದರೆ ಅದರ ಅರ್ಧದಷ್ಟು ಸಹ ನಿರ್ಮಾಪಕನಿಗೆ ಬರುವುದಿಲ್ಲ ಎಂದು ಲೆಕ್ಕಾಚಾರ ನೀಡಿದ್ದಾರೆ.

ಅನಿಲ್ ಸುಂಕರ, ತೆಲುಗು ಚಿತ್ರರಂಗದ ಯಶಸ್ವಿ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕ. ಮಹೇಶ್ ಬಾಬುಗಾಗಿ ನಾಲ್ಕು ಸಿನಿಮಾಗಳು ಸೇರಿದಂತೆ, ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ತೆಲುಗು ಸ್ಟಾರ್ ನಟರುಗಳಿಗೆ ಸಿನಿಮಾಗಳನ್ನು ನಿರ್ಮಿಸಿರುವ ಅನಿಲ್ ಸುಂಕರ ಅವರು, ಇದೀಗ ಸಿನಿಮಾಗಳ ಕಲೆಕ್ಷನ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಎರಡೇ ದಿನಕ್ಕೆ 100 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ; ದೊಡ್ಡ ಕಂಬ್ಯಾಕ್

ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ‘ದೂಕುಡು’ ಸಿನಿಮಾವನ್ನು ಅನಿಲ್ ನಿರ್ಮಾಣ ಮಾಡಿದ್ದರು. ಅದೇ ಸಿನಿಮಾದ ಉದಾಹರಣೆ ನೀಡಿದ ಅನಿಲ್ ಅವರು, ‘ನಾವು ‘ದೂಕುಡು’ ಸಿನಿಮಾದ ಸಕ್ಸಸ್ ಮೀಟ್ ಸಮಯದಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದೆವು. ಆದರೆ ಅಸಲಿಗೆ ಆ ಸಿನಿಮಾ ಅಷ್ಟು ಗಳಿಕೆ ಮಾಡಿರಲಿಲ್ಲ. ಆ ನೂರು ಕೋಟಿ ಮೊತ್ತದಲ್ಲಿ ನಿರ್ಮಾಪಕರಿಗೆ ಸೇರಿದ್ದು 40 ಕೋಟಿ ಅಷ್ಟೆ ಅದೂ ತೆರಿಗೆಗೆ ಮುಂಚೆ’ ಎಂದಿದ್ದಾರೆ ಅನಿಲ್.

‘ಹಲವು ನಿರ್ಮಾಪಕರು ಕಲೆಕ್ಷನ್ ಪೋಸ್ಟರ್​​ಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸುತ್ತಾರೆ. ಅಸಲಿ ಕಲೆಕ್ಷನ್​​ಗೂ ಪೋಸ್ಟರ್​ಗೂ ಬಹಳ ದೊಡ್ಡ ಅಂತರ ಇರುತ್ತದೆ. ಈ ರೀತಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡುವುದು ಸಿನಿಮಾಗಳಿಗೆ ಆರಂಭದಲ್ಲಿ ಸಹಾಯ ಮಾಡಬಹುದು ಆದರೆ ಅವು ಸಿನಿಮಾವನ್ನು ಯಶಸ್ವಿ ಗೊಳಿಸುವುದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ. ಬದಲಿಗೆ ಇದರಿಂದ ಕೆಲವೊಮ್ಮೆ ಸಿನಿಮಾ ನಿರ್ಮಾಪಕರಿಗೆ ಸಮಸ್ಯೆ ಸಹ ಆಗುತ್ತದೆ. ಇಂಥಹಾ ಪೋಸ್ಟರ್​​ಗಳಿಂದ ನಿರ್ಮಾಪಕರಿಗೆ ಸಮಸ್ಯೆ ಆದ ಉದಾಹರಣೆಯೂ ಇದೆ’ ಎಂದಿರುವ ಅನಿಲ್, ‘ಇದೇ ಕಾರಣಕ್ಕೆ ನನ್ನ ಯಾವುದೇ ಸಿನಿಮಾಕ್ಕೂ ಇಂಥಹ ಪೋಸ್ಟರ್​​ಗಳನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿಡ್ಲಘಟ್ಟ ಕಮಿಷನರ್​​ಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆ: ಕೈ ಮುಖಂಡನಿಗೆ ಶಾಕ್​​ ಕೊಟ್ಟ ಡಿಕೆ ಶಿವಕುಮಾರ್​​​ – Kannada News | Sidlaghatta Commissioner Amrutha Gowda Breaks Down After Alleged Threats from Congress Leader Rajiv Gowda

ಚಿಕ್ಕಬಳ್ಳಾಪುರ, (ಜನವರಿ 14): ಶಿಡ್ಲಘಟ್ಟ ಪೌರಾಯುಕ್ತ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಆರೋಪದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಟಿವಿ9 ಜೊತೆ ಮಾತನಾಡುವಾಗ ಪೌರಾಯುಕ್ತೆ ಅಮೃತಾ ಗೌಡ ಅವರು ಕಣ್ಣೀರಿಟ್ಟಿದ್ದಾರೆ. ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಯಾರೇ ಆಗಲಿ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣವನ್ನು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದು, ಕಾಂಗ್ರೆಸ್ ನಾಯಕನ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ. ಐದು ವರ್ಷಗಳ ತಮ್ಮ ಸೇವೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಅಮೃತಾ ಗೌಡ ನೋವು ತೋಡಿಕೊಂಡಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರಿಗೆ ಇಂತಹ ಬೆದರಿಕೆಗಳು ಬಂದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಡಹಗಲೇ ಸಿನಿಮಾ ಸ್ಟೈಲ್​ನಲ್ಲಿ ಹೆಂಡತಿ, ಮಕ್ಕಳನ್ನು ಅಪಹರಿಸಿದ ಗಂಡ! – Kannada News | Madhya Pradesh Man Kidnapped 2 children and Wife in shivpuri Crime News

ನವದೆಹಲಿ, ಜನವರಿ 14: ಹಣಕ್ಕಾಗಿ, ವೈಯಕ್ತಿಕ ದ್ವೇಷಕ್ಕಾಗಿ, ಉದ್ಯೋಗದ ಕಾರಣಕ್ಕಾಗಿ ಹೀಗೆ ನಾನಾ ಕಾರಣಗಳಿಂದ ಅಪಹರಣದ (Kidnap) ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ, ಗಂಡನೇ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕಿಡ್ನಾಪ್ ಮಾಡಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಮಧ್ಯಪ್ರದೇಶದಲ್ಲಿ ಈ ರೀತಿಯ ಅಚ್ಚರಿಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳವಾರ (ಜನವರಿ 13) ಶಿವಪುರಿ ಜಿಲ್ಲೆಯಲ್ಲಿ ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಸಿನಿಮೀಯ ಶೈಲಿಯ ಘಟನೆ ನಡೆದಿದೆ.

ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಘಟನೆ ನಡೆದು 24 ಗಂಟೆಗಳ ನಂತರವೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕರೈರಾ ವಿಧಾನಸಭಾ ಕ್ಷೇತ್ರದ ನರವರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಖಾರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ

ಪೊಲೀಸರ ಪ್ರಕಾರ, ನರ್ವಾರ ಪಟ್ಟಣದ ನಿವಾಸಿ ಪಾರ್ವತಿ ಜಾಧವ್, ಮಗರುಣಿ ನಿವಾಸಿ ಜಗನ್ನಾಥ್ ಅಲಿಯಾಸ್ ಜಗತ್ ಸಿಂಗ್ ಜಾಧವ್ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರಿಗೆ ಇಬ್ಬರು ಮಕ್ಕಳಾಗಿದ್ದರು. ಸುಮಾರು 6 ವರ್ಷಗಳ ಹಿಂದೆ ಕುಟುಂಬದಲ್ಲಿ ನಿರಂತರ ಜಗಳಗಳ ಕಾರಣದಿಂದ ಪಾರ್ವತಿ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಪತಿ ಮತ್ತು ಅತ್ತೆ ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು. ಮಂಗಳವಾರ ಮಧ್ಯಾಹ್ನ, ಅವರು ತಮ್ಮ ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ಹಿಂದಿನಿಂದ ಒಂದು ಕಾರು ಬಂದಿತು. ಮೂವರು ಯುವಕರು ಕಾರಿನಿಂದ ಇಳಿದು, ಮಹಿಳೆ ಮತ್ತು ಮಕ್ಕಳನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ವಿದೇಶದಿಂದ ಗುಟ್ಟಾಗಿ ಬಂದು ಅಮ್ಮನನ್ನೇ ಕೊಲೆ ಮಾಡಿದ ಮಗ!

ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆ ಅಪಹರಣಕಾರ ಬೇರಾರೂ ಅಲ್ಲ, ಆಕೆಯ ಗಂಡನೇ ಎಂಬುದು ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ಪೊಲೀಸರು ಜಗನ್ನಾಥ್ ಅವರನ್ನು ಹುಡುಕುತ್ತಿದ್ದಾರೆ. ಜಗನ್ನಾಥ್ ಪಾರ್ವತಿ ಮತ್ತು ಮಕ್ಕಳನ್ನು ಏಕೆ ಅಪಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪೇಗೌಡ್ರು ಬೆಂಗಳೂರು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟು ಬಿಚ್ಚಿಟ್ಟ ಧರ್ಮೇಂದ್ರ ಕುಮಾರ್ – Kannada News | Kempegowda Bhoomi Pooja On Sankranthi To Build Bengaluru, here Is Dharmendra Kumar explained about It

ಬೆಂಗಳೂರು, (ಜನವರಿ 14): ಬೆಂಗಳೂರಿಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದುಗಳು ಇವೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಹೌದು..ಜನವರಿ ಸಂಕ್ರಾಂತಿಯಂದೇ ಕೆಂಪೇಗೌಡರು ಬೆಂಗಳೂರು ಕಟ್ಟಲು ಶುರುಮಾಡಿದ ಪುಣ್ಯ ದಿನ. ಅವಿನ್ಯೂ ರಸ್ತೆಯಲ್ಲೇ ಭೂಮಿ ಪೂಜೆ ಮಾಡಿದ್ದರು. ಬಳಿಕ ಬೆಂಗಳೂರಿನ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ. ಅಂದಿನ ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿ, ಅಚ್ಚುಕಟ್ಟಾದ ಯೋಜನೆಯೊಂದಿಗೆ ಬೆಂಗಳೂರನ್ನು ನಿರ್ಮಿಸಿದರು. ಮುಖ್ಯ ರಸ್ತೆಗಳು, ವ್ಯಾಪಾರಿ ಕೇಂದ್ರಗಳು, ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಿಸಿ, ನಗರಕ್ಕೆ ಒಂದು ವ್ಯವಸ್ಥಿತ ಸ್ವರೂಪವನ್ನು ನೀಡಿದ್ದರು. ಇನ್ನು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟನ್ನು ಧರ್ಮೇಂದ್ರ ಕುಮಾರ್ ಬಿಚ್ಚಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಗಮಂಗಲದಲ್ಲಿ ಭಾರೀ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು; 11 ಅಧಿಕಾರಿಗಳ ಪೈಕಿ ಐವರು ಜೈಲಿಗೆ – Kannada News | Mandya Land Scam: Lokayukta Uncovers 320 Acre Bagar Hukum Fraud; 5 Officials Arrested

ಮಂಡ್ಯ, ಜನವರಿ 14: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬಗರ್‌ಹುಕುಂ‌ (Bagar Hukum) ಅಡಿಯಲ್ಲಿ 320 ಎಕರೆ ಜಮೀನು ಹಂಚಿಕೆಯಲ್ಲಿ (Land Scam) ಭಾರೀ ಅಕ್ರಮ ನಡೆದಿದೆ. ನಾಗಮಂಗಲ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಒಟ್ಟು 11 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಐವರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

ಬಂಧಿತರು

ನಾಗಮಂಗಲ ತಾಲೂಕು ಕಚೇರಿಯ ಎಲ್&ಡಿ ಶಾಖೆಯ ಎಸ್​​ಡಿಎ ಸತೀಶ್, ಶಿರಸ್ತೇದಾರ್‌ಗಳಾದ ರವಿಶಂಕರ್, ಉಮೇಶ್, ಯೋಗೇಶ್, ರೆಕಾರ್ಡ್ ರೂಂನ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮತ್ತೆ ಬಂಧನದ ಭೀತಿಯಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್

ಸಾರ್ವಜನಿಕರ ದೂರಿನ ಮೇರೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಾಗಮಂಗಲ ತಾಲೂಕು ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ನಿನ್ನೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಇಂದು ಸಂಜೆವರೆಗೂ ತಾಲೂಕು ಕಚೇರಿಯಲ್ಲಿ ಕಡತಗಳು ಹಾಗೂ ದಾಖಲೆಗಳನ್ನು ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲಂಚ ನೀಡಿದವರಿಗೆ ಜಮೀನು ಹಂಚಿಕೆ ಮಾಡಿರುವುದು ಪತ್ತೆಯಾಗಿದೆ. ಅರ್ಹ ಫಲಾನುಭವಿಗಳಿಗೆ ನೀಡದೇ ಹಣ ಕೊಟ್ಟವರಿಗೆ ಜಮೀನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ

ಸದ್ಯ 11 ಜನರ ಪೈಕಿ ಐವರ ಬಂಧನವಾಗಿದ್ದು, ಉಳಿದ ಅಧಿಕಾರಿಗಳಿಗಾಗಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. 320 ಎಕರೆ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿರುವುದು ದೃಢಪಟ್ಟ ಹಿನ್ನೆಲೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:27 pm, Wed, 14 January 26

Source link

ಕುಟುಂಬದೊಂದಿಗೆ ಗಾಳಿಪಟ ಹಾರಿಸಿದ ಗೃಹ ಸಚಿವ ಅಮಿತ್ ಶಾ – Kannada News | Home Minister Amit Shah celebrates Uttarayan enjoys kite flying with family

ಅಹಮದಾಬಾದ್, ಜನವರಿ 14: ಗುಜರಾತ್‌ನಲ್ಲಿ ‘ಉತ್ತರಾಯಣ’ ಎಂದೂ ಕರೆಯಲ್ಪಡುವ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಕುಟುಂಬ ಮತ್ತು ನರನ್‌ಪುರ ಪ್ರದೇಶದ ನಿವಾಸಿಗಳೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದರು. ಉತ್ತರ ಭಾರತದಲ್ಲಿ ಸಂಕ್ರಾಂತಿಯ ವೇಳೆ ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಹಾಗೇ, ಇಂದು ಬೆಳಗ್ಗೆ ಅಮಿತ್ ಶಾ ಜಮಾಲ್‌ಪುರ ಪ್ರದೇಶದ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಮೊದಲ ದಿನವೇ ಟೀಂ ಇಂಡಿಯಾ ಕಣಕ್ಕೆ; ಎದುರಾಳಿ ಯಾರು? ಎಷ್ಟು ಗಂಟೆಗೆ ಪಂದ್ಯ ಆರಂಭ? – Kannada News | U19 World Cup 2026: India vs USA Match Details, Live Stream, Squads and Start Time

2026 ರ ಅಂಡರ್ 19 ವಿಶ್ವಕಪ್ (U19 World Cup 2026) ಜನವರಿ 15 ರ ಗುರುವಾರದಿಂದ ಅಂದರೆ ನಾಳೆಯಿಂದ ಪ್ರಾರಂಭವಾಗುತ್ತಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಭಾರತ ಕಣಕ್ಕಿಳಿಯುತ್ತಿದ್ದು ಅಮೆರಿಕ ತಂಡವನ್ನು ಎದುರಿಸುತ್ತಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಈ ಅಂಡರ್-19 ವಿಶ್ವಕಪ್‌ನಲ್ಲಿ ಹದಿನಾರು ತಂಡಗಳು ಭಾಗವಹಿಸುತ್ತಿವೆ . ಭಾರತ ತಂಡವು ಯುಎಸ್ಎ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಆಯುಷ್ ಮ್ಹಾತ್ರೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡವು ಟೂರ್ನಮೆಂಟ್‌ಗೆ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತು.

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಜನವರಿ 15 ರಂದು ನಡೆಯಲಿದೆ

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊದಲ್ಲಿ ನಡೆಯಲಿದೆ

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 12:30 ಕ್ಕೆ ನಡೆಯಲಿದೆ.

ಭಾರತ ಹಾಗೂ ಯುಎಸ್​ಎ ನಡುವಿನ ಅಂಡರ್-19 ವಿಶ್ವಕಪ್‌ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಈ ಪಂದ್ಯಗಳ ನೇರ ಪ್ರಸಾರವು ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.

T20 World Cup 2026: ಟಿ20 ವಿಶ್ವಕಪ್​ನಿಂದ ಬಾಂಗ್ಲಾ ಹಿಂದೆ ಸರಿದರೆ ಯಾವ ತಂಡಕ್ಕೆ ಅವಕಾಶ?

ಉಭಯ ತಂಡಗಳು

ಭಾರತ ಅಂಡರ್-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ಆರ್.ಎಸ್. ಅಂಬರೀಶ್, ಕಾನಿಷ್ಕ್ ಚೌಹಾಣ್, ಡಿ.ದೀಪೇಶ್, ಮೊಹಮ್ಮದ್ ಅನನ್, ಆರನ್ ಜಾರ್ಜ್, ಅಭಿಜ್ಞಾನ್ ಕುಂದು, ಕಿಶನ್ ಕುಮಾರ್ ಸಿಂಗ್, ವಿಹಾನ್ ಮಲ್ಹೋತ್ರಾ, ಉದ್ಧವ್ ಮೋಹನ್, ಹೆನಿಲ್ ಪಟೇಲ್, ಖಿಲಾನ್ ಪಟೇಲ್, ಹರ್ವಂಶ್ ಸಿಂಗ್, ವೈಭವ್ ಸೂರ್ಯವಂಶಿ , ವೇದಾಂತ್ ತ್ರಿವೇದಿ.

ಯುಎಸ್​ಎ ಅಂಡರ್ 19 ತಂಡ: ಉತ್ಕರ್ಷ್ ಶ್ರೀವಾಸ್ತವ (ನಾಯಕ), ಅದ್ನೀತ್ ಜಾಂಬ್, ಶಿವ ಶಾನಿ, ನಿತೀಶ್ ಸುದಿನಿ, ಅದ್ವೈತ್ ಕೃಷ್ಣ, ಸಾಹಿರ್ ಭಾಟಿಯಾ, ಅರ್ಜುನ್ ಮಹೇಶ್, ಅಮರಿಂದರ್ ಗಿಲ್, ಸಬರೀಶ್ ಪ್ರಸಾದ್, ಆದಿತ್ ಕಪ್ಪಾ, ಸಾಹಿಲ್ ಗಾರ್ಗ್, ಅಮೋಘ್ ರೆಡ್ಡಿ ಅರೆಪಲ್ಲಿ, ರಿತ್ವಿಕ್ ಅಪ್ಪಿಡಿ, ರಯಾನ್ ತಾಜ್, ರಿಷಬ್ ಶಿಂಪಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡ: ಇಳಕಲ್ ಸೀರೆ, ಬಗೆಬಗೆಯ ಊಟ; ಮಹಿಳೆಯರಲ್ಲಿ ಹಿಗ್ಗು ತಂದ ಸುಗ್ಗಿ ಹಬ್ಬ – Kannada News | Dharwad Sankranti Celebrations: Folk Research Center Grand Festival with Traditional Food and Dance

ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, ಮಾದಲಿ, ಎಣ್ಣೆಕಾಯಿ ಪಲ್ಲೆ, ಕೆಂಪು ಚಟ್ನಿ, ಶೇಂಗಾ ಹೋಳಿಗೆ, ಮೊಸರನ್ನ, ಪುಳಿಯೊಗರೆ, ಚಿತ್ರಾನ್ನ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ತಂದು, ಗಂಗಾ ಮಾತೆಗೆ ನೈವೇದ್ಯ ಮಾಡಿ, ಭಕ್ತಿ ಸಮರ್ಪಿಸಿದರು.

Source link

IND vs NZ: ರಾಹುಲ್ ಶತಕ ವ್ಯರ್ಥ; 2ನೇ ಏಕದಿನ ಪಂದ್ಯ ಗೆದ್ದ ನ್ಯೂಜಿಲೆಂಡ್ – Kannada News | India vs NZ 2nd ODI: Mitchell’s Century Powers New Zealand to 7 Wicket Win, Rahul’s Ton in Vain

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಶುಭ್​ಮನ್ ಗಿಲ್ ಪಡೆಗೆ ರಾಜ್‌ಕೋಟ್ ಮೈದಾನದಲ್ಲಿ ಸೋಲಿನ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್​ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 3 ವಿಕೆಟ್‌ ಕಳೆದುಕೊಂಡು ಏಕಪಕ್ಷೀಯ ಗೆಲುವು ಸಾಧಿಸಿತು. ಶತಕದ ಇನ್ನಿಂಗ್ಸ್ ಆಡಿದ ಡ್ಯಾರೆಲ್ ಮಿಚೆಲ್ ನ್ಯೂಜಿಲೆಂಡ್‌ ಗೆಲುವಿನ ರೂವಾರಿ ಎನಿಸಿಕೊಂಡರು. ಮಿಚೆಲ್ ಅವರಲ್ಲದೆ, ವಿಲ್ ಯಂಗ್ ಕೂಡ 87 ರನ್ ಗಳಿಸುವ ಮೂಲಕ ತಮ್ಮ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಕೆಎಲ್ ರಾಹುಲ್ ಭಾರತ ಪರ ಅಜೇಯ 112 ರನ್ ಗಳಿಸಿದರಾದರೂ ಅವರ ಶತಕದ ಇನ್ನಿಂಗ್ಸ್ ವ್ಯರ್ಥವಾಯಿತು.

ರಾಹುಲ್ ಅಜೇಯ ಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೆ.ಎಲ್. ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 112 ರನ್ ಬಾರಿಸಿದರು. ರಾಹುಲ್ ಹೊರತುಪಡಿಸಿ ನಾಯಕ ಶುಭ್​ಮನ್ ಗಿಲ್ ಕೂಡ 56 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಇವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 284 ರನ್ ಕಲೆಹಾಕಿತು.

ಭಾರತದ ಪರ, ರಾಹುಲ್ ಮತ್ತು ಗಿಲ್ ಹೊರತುಪಡಿಸಿ, ರವೀಂದ್ರ ಜಡೇಜಾ 27, ರೋಹಿತ್ ಶರ್ಮಾ 24, ವಿರಾಟ್ ಕೊಹ್ಲಿ 23, ನಿತೀಶ್ ಕುಮಾರ್ ರೆಡ್ಡಿ 20, ಶ್ರೇಯಸ್ ಅಯ್ಯರ್ 8 ಮತ್ತು ಹರ್ಷಿತ್ ರಾಣಾ 2 ರನ್ ಗಳಿಸಿದರು. ಮೊಹಮ್ಮದ್ ಸಿರಾಜ್ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ಪರ, ಕ್ರಿಸ್ ಕ್ಲಾರ್ಕ್ ಮೂರು ವಿಕೆಟ್ ಪಡೆದರೆ, ಕೈಲ್ ಜೇಮಿಸನ್, ಜಕಾರಿ ಫೋಕ್ಸ್, ಜೇಡನ್ ಲಿನಾಕ್ಸ್ ಮತ್ತು ಮೈಕೆಲ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

ಡ್ಯಾರೆಲ್ ಮಿಚೆಲ್ ಶತಕ

285 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ನಿಧಾನಗತಿಯ ಆರಂಭ ಪಡೆಯಿತು. ಹರ್ಷಿತ್ ರಾಣಾ, ಕಾನ್ವೇ ಅವರನ್ನು 16 ರನ್‌ಗಳಿಗೆ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು. ಹೆನ್ರಿ ನಿಕೋಲ್ಸ್ ಕೂಡ ಪ್ರಸಿದ್ಧ್ ಕೃಷ್ಣ ಅವರಿಗೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಭಾರತ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದು ತೋರುತ್ತಿತ್ತು. ಆದರೆ ಆ ನಂತರ ಡ್ಯಾರಿಲ್ ಮಿಚೆಲ್, ವಿಲ್ ಯಂಗ್ ಜೊತೆಗೆ 152 ಎಸೆತಗಳಲ್ಲಿ 162 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ಪಂದ್ಯವನ್ನು ಭಾರತದ ಹಿಡಿತದಿಂದ ಸಂಪೂರ್ಣವಾಗಿ ದೂರ ಮಾಡಿದರು. ಡ್ಯಾರಿಲ್ ಮಿಚೆಲ್ 96 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಭಾರತದ ವಿರುದ್ಧ ಮಿಚೆಲ್ ಅವರ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರನೇ ಶತಕವಾಗಿದೆ.

ಬೌಲರ್‌ಗಳ ಕಳಪೆ ಬೌಲಿಂಗ್

ಕಿವೀಸ್ ಈ ಪಂದ್ಯವನ್ನು ಗೆಲ್ಲಲು ಪ್ರಮುಖ ಕಾರಣ ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಅವರ ಜೊತೆಯಾಟ ಒಂದೆಡೆಯಾದರೆ, ಭಾರತೀಯ ಬೌಲರ್‌ಗಳ ಕಳಪೆ ಬೌಲಿಂಗ್ ಮತ್ತೊಂದು ಕಾರಣವಾಯಿತು. ವಿಶೇಷವಾಗಿ ಕುಲ್ದೀಪ್ ಯಾದವ್ ಮಧ್ಯಮ ಓವರ್‌ಗಳಲ್ಲಿ ತುಂಬಾ ದುಬಾರಿಯಾದರು. 10 ಓವರ್‌ಗಳಲ್ಲಿ 82 ರನ್‌ಗಳನ್ನು ಬಿಟ್ಟುಕೊಟ್ಟರು. ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾದರು.

ಕೆಎಲ್ ರಾಹುಲ್ ಶತಕ ವ್ಯರ್ಥ

ಟೀಂ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್, ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಕೇವಲ 87 ಎಸೆತಗಳಲ್ಲಿ ತಮ್ಮ ಎಂಟನೇ ಏಕದಿನ ಶತಕ ಬಾರಿಸಿದರು. ಆದರೆ ರಾಹುಲ್ ಅವರ ಶತಕವು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಯಿತು. ಏಕದಿನ ಸರಣಿಯು ಈಗ 1-1 ರಲ್ಲಿ ಸಮಬಲಗೊಂಡಿದ್ದು, ಜನವರಿ 18 ರಂದು ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸರಣಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಪ್ರಿಯತೆ ಎಫೆಕ್ಟ್: ಸತ್ತ ಪಾತ್ರವನ್ನು ಬದುಕಿಸಲಿದ್ದಾರಾ ‘ಧುರಂಧರ್ 2’ ನಿರ್ದೇಶಕ? – Kannada News | Aditya Dhar reportedly planing to retain Akshaye Khanna role in Dhurandhar 2

ನಟ ಅಕ್ಷಯ್ ಖನ್ನಾ ಅವರು ‘ಧುರಂಧರ್’ (Dhurandhar) ಸಿನಿಮಾದಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ರೆಹಮಾನ್ ಡಕಾಯಿತ್ ಎಂಬ ಗ್ಯಾಂಗ್​ಸ್ಟರ್ ಪಾತ್ರವನ್ನು ಮಾಡಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಕೂಡ ಸಿದ್ಧವಾಗುತ್ತಿದೆ. ಮಾರ್ಚ್ 19ರಂದು ‘ಧುರಂದರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಲಿದೆ. ಸೀಕ್ವೆಲ್​ನಲ್ಲಿ ಅಕ್ಷಯ್ ಖನ್ನಾ (Akshaye Khanna) ಪಾತ್ರ ಇರುವುದಿಲ್ಲ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಯಾಕೆಂದರೆ, ಮೊದಲ ಪಾರ್ಟ್​​ನಲ್ಲೇ ರೆಹಮಾನ್ ಡಕಾಯಿತ್ ಪಾತ್ರ ಸಾಯುತ್ತದೆ. ಆದರೆ ಈಗ ಹೊಸ ಗುಸುಗುಸು ಕೇಳಿಬಂದಿದೆ.

‘ಧರಂಧರ್’ ಸಿನಿಮಾ ಗೆಲ್ಲಲು ಅಕ್ಷಯ್ ಖನ್ನಾ ಅವರ ನಟನೆ ಕೂಡ ಕಾರಣ. ಸಿನಿಮಾದ ಹೀರೋ ರಣವೀರ್ ಸಿಂಗ್ ಅವರಿಗಿಂತಲೂ ಅಕ್ಷಯ್ ಖನ್ನಾ ಪಾತ್ರವೇ ಹೆಚ್ಚು ಹೈಲೈಟ್ ಆಗಿದೆ. ಅಕ್ಷಯ್ ಖನ್ನಾ ಅವರ ನಟನೆಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಅವರ ಡ್ಯಾನ್ಸ್ ಕೂಡ ವೈರಲ್ ಆಗಿದೆ. ಒಟ್ಟಿನಲ್ಲಿ ಅವರು ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

ಈ ಜನಪ್ರಿಯತೆಯ ಪರಿಣಾಮವಾಗಿ ‘ಧುರಂದರ್ 2’ ಸಿನಿಮಾದಲ್ಲಿ ಕೂಡ ರೆಹಮಾನ್ ಡಕಾಯಿತ್ ಪಾತ್ರವನ್ನು ಮುಂದುವರಿಸುವ ಬಗ್ಗೆ ನಿರ್ದೇಶಕ ಆದಿತ್ಯ ಧಾರ್ ಅವರು ಆಲೋಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ‘ಧುರಂಧರ್’ ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ರೆಹಮಾನ್ ಡಕಾಯಿತ್ ಪಾತ್ರ ಸತ್ತಿದ್ದರೂ ಕೂಡ ‘ಧುರಂಧರ್ 2’ ಚಿತ್ರದಲ್ಲಿ ಆ ಪಾತ್ರ ಮತ್ತೆ ಬರಲಿದೆ ಎನ್ನಲಾಗಿದೆ.

‘ಧುರಂಧರ್ 2’ ಚಿತ್ರಕ್ಕಾಗಿ ಅಕ್ಷಯ್ ಖನ್ನಾ ಅವರು ಒಂದು ವಾರಗಳ ಕಾಲ್ ಶೀಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಕೆಲವು ಫ್ಲ್ಯಾಶ್​ಬ್ಯಾಕ್ ದೃಶ್ಯಗಳ ಮೂಲಕ ರೆಹಮಾನ್ ಡಕಾಯಿತ್ ಪಾತ್ರವನ್ನು ಮತ್ತೆ ಜನರಿಗೆ ತೋರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಈ ವಿಷಯ ಕೇಳಿ ಅಕ್ಷಯ್ ಖನ್ನಾ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ

ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾದ ಎದುರು ‘ಧುರಂಧರ್ 2’ ಬಿಡುಗಡೆ ಆಗಲಿದೆ. ಆದ್ದರಿಂದ ಪೈಪೋಟಿ ಜೋರಾಗಿ ಇರಲಿದೆ. ಜನರ ನಿರೀಕ್ಷೆ ಕೂಡ ಡಬಲ್ ಆಗಿದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಅಕ್ಷಯ್ ಖನ್ನಾ ಅವರ ಪಾತ್ರವನ್ನು ಮುಂದುವರಿಸಲಾಗುತ್ತಿದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version