ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ! ಬಿಗ್ ಹಿಂಟ್ ಕೊಟ್ರಾ ಡಿಸಿಎಂ? – Kannada News | Did DK Shivakumar Drop a Big Hint After Rahul Gandhi Meeting? Cryptic Post Sparks Karnataka Political Buzz

ಬೆಂಗಳೂರು, ಜನವರಿ 14: ‘ನೀವೇನು ಚಿಂತೆ ಮಾಡಬೇಡಿ. ನಿಮ್ಮನ್ನು ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ (DK Shivakumar) ಮೈಸೂರಿನಲ್ಲಿ ಹೈಕಮಾಂಡ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ ಎನ್ನಲಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಒಂದನ್ನು ಹಂಚಿಕೊಂಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ, ಸಿಎಂ ಆಗುವ ಸುಳಿವು ಕೊಟ್ಟರಾ ಡಿಸಿಎಂ ಎಂಬ ಪ್ರಶ್ನೆಯೂ ಮೂಡಿದೆ.

ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಡಿಕೆ ಶಿವಕುಮಾರ್, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

ಖಾಸಗಿ ಕಾರ್ಯನಿಮಿತ್ತ ಊಟಿಗೆ ತೆರಳಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿದ್ದ ರಾಹುಲ್ ಗಾಂಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ, ಇಬ್ಬರು ನಾಯಕರೂ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದರು.

ಡಿಕೆ ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಹೇಳಿದ್ದೇನು?

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸೈಡ್​ಗೆ ಕರೆದುಕೊಂಡು ಹೋಗಿದ್ದ ಡಿಕೆ ಶಿವಕುಮಾರ್ ತುಸು ಹೊತ್ತು ಗಂಭೀರವಾಗಿ ಚರ್ಚಿಸುತ್ತಿರುವುದು ಕಂಡುಬಂದಿತ್ತು. ಆಗ, ನೀವು ತಲೆ ಕೆಡಿಸಿಕೊಳ್ಳಬೇಡಿ. ಶೀಘ್ರವೇ ನಿಮ್ಮನ್ನು ದೆಹಲಿಗೆ ಕರೆಯುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದರು ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿದ್ದವು. ಅದಾದ ನಂತರ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಜತೆಗೂ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೂ ಸಂಚಲನ ಮೂಡಿಸಿತ್ತು

ಇದೀಗ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ?

ರಾಜ್ಯ ಕಾಂಗ್ರೆಸ್​​​ಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಬಗ್ಗೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಗಾಂಧಿ​ ಮಹತ್ವದ ಸಂದೇಶ

ಇದರ ಪೂರ್ವಭಾವಿಯಾಗಿ ಹೈಕಮಾಂಡ್ ನಾಯಕರು ಜನವರಿ 16ರಂದು ರಾಜ್ಯವಾರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಯೋಲ್ ಕುಟುಂಬದ ಜೊತೆ ಮನಸ್ತಾಪ ಇದೆಯೇ? ಹೇಮಾ ಮಾಲಿನಿ ಸ್ಪಷ್ಟನೆ – Kannada News | Hema Malini Breaks Silence on Dharmendra’s Passing, Refutes Rumors

ಬಾಲಿವುಡ್ ಉದ್ಯಮದ ಹಿರಿಯ ನಟ ಧರ್ಮೇಂದ್ರ ನವೆಂಬರ್ 24, 2025 ರಂದು ನಿಧನರಾದರು. ಧರ್ಮೇಂದ್ರ ಅವರ ಸಾವು ಡಿಯೋಲ್ ಕುಟುಂಬ ಮತ್ತು ಇಡೀ ಕಲಾ ಲೋಕಕ್ಕೆ ದುಃಖ ತಂದಿದೆ. ಡಿಯೋಲ್ ಕುಟುಂಬ ನಿಧಾನವಾಗಿ ಅದರಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಅವರ ಎರಡನೇ ಪತ್ನಿ, ನಟಿ ಮತ್ತು ಸಂಸದೆ ಹೇಮಾ ಮಾಲಿನಿ ತಮ್ಮ ದುಃಖವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

‘ಧರ್ಮೇಂದ್ರ ನಿಧನವಾದಾಗ ನನಗೆ ತುಂಬಾ ನೋವಾಗಿತ್ತು. ಆ ನೋವು ಇನ್ನೂ ನನ್ನ ಮನಸ್ಸಿನಲ್ಲಿದೆ. ಆದರೆ ಕ್ರಮೇಣ ನಾನು ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಇದೆಲ್ಲವೂ ನನ್ನ ಸಹಿಷ್ಣುತೆಗೆ ಮೀರಿದ್ದು. ಎಲ್ಲರೂ ನಾನು ಬಲಶಾಲಿ ಎಂದು ಹೇಳುತ್ತಾರೆ. ನಾನು ಬಲಶಾಲಿ, ಆದರೆ ಕೆಲವೊಮ್ಮೆ..’ ಎಂದು ಹೇಳುತ್ತಾ ಅವರು ಭಾವುಕರಾದರು.

‘ಅವರು ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಇದ್ದರು. ಮೊದಲು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಮನೆಗೆ ಕರೆತರಲಾಯಿತು. ಅಲ್ಲಿಯವರೆಗೆ, ಅವರು ಚೆನ್ನಾಗಿದ್ದಾರೆ ಎಂದು ನನಗೆ ಖಚಿತವಾಗಿತ್ತು. ಅವರು ಇನ್ನೂ ಎರಡು ವರ್ಷ ನಮ್ಮೊಂದಿಗೆ ಇರುತ್ತಾರೆ ಎಂದು ನಾನು ಭಾವಿಸಿದ್ದೆ. ಅವರು ಚೆನ್ನಾಗಿದ್ದರು. ಅವರು ಅಸ್ವಸ್ಥರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಹಿಂದೆ ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಿ ಬಾರಿ ಅವರು ನಗುತ್ತಾ ಮತ್ತು ಆರೋಗ್ಯವಾಗಿ ಹಿಂತಿರುಗಿದರು. ಈ ಬಾರಿಯೂ ಇದೇ ರೀತಿಯ ಏನಾದರೂ ಸಂಭವಿಸುತ್ತದೆ ಎಂದು ನಾವು ಆಶಿಸುತ್ತಿದ್ದೆವು. ಅವರು ಅತ್ಯುತ್ತಮ ಜೀವನವನ್ನು ನಡೆಸಿದರು. ಅವರು ಬಯಸಿದ್ದನ್ನೆಲ್ಲಾ ಪಡೆದರು. ಇಷ್ಟೊಂದು ಜನರು ಅವರನ್ನು ಪ್ರೀತಿಸುತ್ತಾರೆ ಎಂದು ನನಗೆ ಹೆಮ್ಮೆ ಇದೆ’ ಎಂದಿದ್ದಾರೆ ಹೇಮಾ ಮಾಲಿನಿ.

ಇದನ್ನೂ ಓದಿ: ನಟಿ ಹೇಮಾ ಮಾಲಿನಿಗೆ ಯಾರೋ ಕತ್ತು ಹಿಸುಕಿದ ಅನುಭವ

‘ನಮ್ಮ ಸಂಬಂಧ ಯಾವಾಗಲೂ ಉತ್ತಮ ಮತ್ತು ಸೌಹಾರ್ದಯುತವಾಗಿದೆ. ಇಂದಿಗೂ ಅದು ಹಾಗೆಯೇ ಇದೆ. ನಮ್ಮ ನಡುವೆ ಏನೋ ತಪ್ಪಾಗಿದೆ ಎಂದು ಜನರು ಏಕೆ ಭಾವಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಜನರು ಗಾಸಿಪ್ ಬಯಸುತ್ತಾರೆ. ನಾನು ಅಂತಹ ಜನರಿಗೆ ಏಕೆ ಉತ್ತರಿಸಬೇಕು? ನಾನು ವಿವರಿಸಬೇಕೇ? ನಾನು ಏಕೆ ಮಾಡಬೇಕು? ಇದು ನನ್ನ ಜೀವನ. ಇದು ನನ್ನ ಖಾಸಗಿ ಜೀವನ, ಇದು ನಮ್ಮ ಖಾಸಗಿ ಜೀವನ. ನಾವು ತುಂಬಾ ಸಂತೋಷವಾಗಿದ್ದೇವೆ, ಪರಸ್ಪರ ಹತ್ತಿರವಾಗಿದ್ದೇವೆ, ನಾನು ಹೇಳುವುದು ಇಷ್ಟೇ. ಅದನ್ನು ಹೊರತುಪಡಿಸಿ, ನಾನು ಬೇರೆ ಏನನ್ನೂ ಹೇಳಲು ಬಯಸುವುದಿಲ್ಲ” ಎಂದು ಅವರು ಉತ್ತರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ನೇಹಿತನನ್ನೇ ಕೊಂದು, ಆತನ ಮನೆಯನ್ನೇ ಲೂಟಿ ಮಾಡಿದ ಇವನೆಂಥಾ ಗೆಳೆಯ – Kannada News | Haryana: Friend Kills Friend, Robs Home, Sonipat Police Encounter and Arrests

ಹರಿಯಾಣ, ಜನವರಿ 14: ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಂದು ಆತನ ಮನೆಯನ್ನೇ ಲೂಟಿ ಮಾಡಿರುವ ಘಟನೆ ಹರಿಯಾಣದ ಸೋನಿಪತ್​ನಲ್ಲಿ ನಡೆದಿದೆ. ಶೇಖರ್ ಹಾಗೂ ಸಾಹಿಲ್ ಆತ್ಮೀಯ ಸ್ನೇಹಿತರಾಗಿದ್ದರು. ಜನವರಿ 8ರಂದು ರಾತ್ರಿ ಶೇಖರ್​ ಗ್ಯಾಂಗ್ ಸಾಹಿಲ್ ಮನೆಗೆ ನುಗ್ಗಿತ್ತು, ದರೋಡೆ ಮಾಡಲು ಮುಂದಾಗಿತ್ತು ಆಗ ಸಾಹಿಲ್ ತಡೆದಿದ್ದಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ(Murder) ಮಾಡಿ ಬಳಿಕ ಆಭರಣವನ್ನು ದೋಚಿದ್ದರು.

ಪೊಲೀಸರು ಎನ್​ಕೌಂಟರ್​ ನಡೆಸಿ ಗ್ಯಾಂಗ್​ನ ನಾಯಕ ಶೇಖರ್ ಹಾಗೂ ಶಫೀಕ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಖರ್ ಮತ್ತು ಶಫೀಕ್ ನಿನ್ನೆ ತಡರಾತ್ರಿ ಮಲ್ಹಾ ಮಜ್ರಾ ಗ್ರಾಮಕ್ಕೆ ಮರಳಿದ್ದರು. ಎನ್‌ಕೌಂಟರ್ ಸಮಯದಲ್ಲಿ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು, ಆಗ ಪೊಲೀಸರು ಶೇಖರ್ ಮತ್ತು ಶಫೀಕ್ ಅವರ ಕಾಲಿಗೆ ಗುಂಡು ಹಾರಿಸಲಾಯಿತು. ಇಬ್ಬರೂ ಪ್ರಸ್ತುತ ಸೋನಿಪತ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಶೇಖರ್ ಸಾಹಿಲ್ ಮನೆಯಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ. ಸಾಹಿಲ್ aದನ್ನು ವಿರೋಧಿಸಿದಾಗ, ಆತನನ್ನು ಇರಿದು ಕೊಂದಿದ್ದಾರೆ. ಆರೋಪಿ ಶೇಖರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಸಾಹಿಲ್ ಮದುವೆಗೆ ಆಭರಣಗಳನ್ನು ಆತನೇ ಮಾಡಿಕೊಟ್ಟಿದ್ದ, ಮಾಹಿತಿಯ ಪ್ರಕಾರ, ಆರೋಪಿ ಶೇಖರ್ ಮತ್ತು ಮೃತ ಸಾಹಿಲ್ ಒಂದು ಕಾಲದಲ್ಲಿ ಬಹಳ ಆಪ್ತರಾಗಿದ್ದರು.

ಮತ್ತಷ್ಟು ಓದಿ: ಸರ್ಕಾರಿ ಆಸ್ಪತ್ರೆಗೆ ಹೆಂಡತಿಯನ್ನು ನೋಡಲು ಬಂದಿದ್ದ ರೌಡಿಯ ಕೊಲೆ

ಈ ಪ್ರಕರಣದಲ್ಲಿ ಸೋನಿಪತ್ ಅಪರಾಧ ವಿಭಾಗದ ತಂಡಗಳು ನಿನ್ನೆ ಮತ್ತೊಬ್ಬ ಆರೋಪಿ ಶಹನವಾಜ್‌ನನ್ನು ಬಂಧಿಸಿವೆ. ಶಹನವಾಜ್ ಬಂಧನದ ನಂತರ, ಅಪರಾಧ ವಿಭಾಗದ ತಂಡಗಳು ಇತರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. ಹಿರಿಯ ಸೋನಿಪತ್ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

ಗಾಯಗೊಂಡ ಇಬ್ಬರು ಆರೋಪಿಗಳ ಬಳಿಯಿಂದ ಎರಡು ಅಕ್ರಮ ದೇಶೀಯ ಪಿಸ್ತೂಲ್‌ಗಳನ್ನು ಸಹ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ಇನ್ನೂ ದಾಳಿ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Happy Makara Sankranti 2026: ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿ – Kannada News | Happy Makara Sankranti 2026: Here are some Sankranti wishes for your loved ones

ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ (Makara Sankranti) ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚಲಾಗುತ್ತದೆ. ಎಳ್ಳು ಬೆಲ್ಲವನ್ನು ಹಂಚುವ ಜೊತೆಗೆ ನೀವು ನಿಮ್ಮ ಪ್ರೀತಿಪಾತ್ರರಿಗೆ, ನಿಮ್ಮ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಹೇಳಲು ಬಯಸಿದರೆ, ನಿಮಗಾಗಿ ಇಲ್ಲಿದೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು.

ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು:

  • ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ, ಎಲ್ಲಾ ಕಹಿ ಮರೆತು ಒಳ್ಳೆಯ ಬಾಂಧವ್ಯ ಹೊಂದೋಣ ಮಕರ ಸಂಕ್ರಾಂತಿಯ ಶುಭಾಶಯಗಳು.
  • ಜೀವನವು ನೋವು ನಲಿವುಗಳ ಸರಿಸಮ ಸಂಗಮವಾಗಿದೆ. ನೋವೆಂಬ ಎಳ್ಳು ಕಡಿಮೆಯಾಗಿ, ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖವೆಲ್ಲಾ ಮಾಯವಾಗಿ ಸಿಹಿ ಬೆಲ್ಲದಂತಹ ಸಂತೋಷದ ಜೀವನ ನಿಮ್ಮದಾಗಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಕಡಲೆಕಾಯಿಯ ಸಾರದಂಥ ಜೀವನ ನಿಮ್ಮದಾಗಲಿ, ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
  • ಮಕರ ಸಂಕ್ರಾಂತಿಯ ಸೂರ್ಯನ ಬೆಂಕಿಯಲ್ಲಿ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಭಸ್ಮವಾಗಲಿ. ಸುಖ, ಸಂಪತ್ತು, ಸಂತೋಷದ ಬೆಳಕು ನಿಮ್ಮ ಮನೆಮನಗಳಲ್ಲಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
  • ಈ ಸಂಕ್ರಾಂತಿ ನಿಮ್ಮ ಮನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ, ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ, ನೀವು ಕಂಡ ಕನಸುಗಳೆಲ್ಲಾ ಬೇಗನೆ ನನಸಾಗಲಿ. ಹ್ಯಾಪಿ ಸಂಕ್ರಾಂತಿ.
  • ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ, ಉದಯ ರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಯಾಗಲಿ. ಸಂಕ್ರಾಂತಿಯ ಶುಭಾಶಯಗಳು.
  • ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಸಂತೋಷ, ಸಮೃದ್ಧಿ, ಸಂಭ್ರಮ ಪಸರಿಸಲಿ.
  • ನಿಮ್ಮ ಮನೆಯಲ್ಲಿ ಸುಖ, ಸಿರಿ ಸಂಪತ್ತು ಉಕ್ಕಿ ಹರಿಯಲಿ ಎಂದು ಆಶಿಸುತ್ತಾ ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
  • ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಸೂರ್ಯ ದೇವನು ಪ್ರತಿಯೊಬ್ಬರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಆಶಿಸುತ್ತೇನೆ.
  • ನಿಮ್ಮ ಜೀವನವು ಯಾವಾಗಲೂ ಸಂತೋಷ, ಸಮೃದ್ಧಿ, ಪ್ರೀತಿಯಿಂದ ತುಂಬಿರಲಿ. ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
  • ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ ಸಮೃದ್ಧಿ ಮತ್ತು ಸುಖ ಶಾಂತಿಯನ್ನು ದಯ ಪಾಲಿಸಲಿ ವರ್ಷದ ಮೊದಲ ಹಬ್ಬದ ಶುಭಾಶಯಗಳು.
  • ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರ ಬಾಳಲ್ಲೂ ಹೊಸ ಉತ್ಸಾಹ, ನವ ಚೈತನ್ಯ, ನೆಮ್ಮದಿಯನ್ನು ಕರುಣಿಸಲಿ.
  • ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
  • ನಿಮ್ಮ ಜೀವನವು ಸಂತೋಷ, ಪ್ರೀತಿ, ಸಮೃದ್ಧಿಯಿಂದ ತುಂಬಿರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸುವುದು ಇನ್ನು ಸುಲಭ; ಹೊಸ ಪೋರ್ಟಲ್ ಲಾಂಚ್ ಮಾಡಿದ ಬೆಸ್ಕಾಂ – Kannada News | BESCOM Launches EV Charging Land Aggregator Portal for Karnataka Infrastructure Boost

ಇವಿ ಚಾರ್ಜಿಂಗ್–ಬ್ಯಾಟರಿ ವಿನಿಮಯಕ್ಕೆ BESCOM ಮಹತ್ವದ ಹೆಜ್ಜೆ

ಬೆಂಗಳೂರು, ಜನವರಿ 14: ರಾಜ್ಯದಲ್ಲಿ ವಿದ್ಯುತ್ ವಾಹನ (ಇವಿ) ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಸ್ಕಾಂ (BESCOM) ಮಹತ್ವದ ಹೆಜ್ಜೆ ಇಟ್ಟಿದ್ದು, ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗಾಗಿ ವಿಶೇಷ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್​ ಅನ್ನು (land aggregator portal) ಮಂಗಳವಾರ (ಜ.13) ಪ್ರಾರಂಭಿಸಿದೆ.

ಬೆಸ್ಕಾಂನಿಂದ ಸಿಂಗಲ್-ವಿಂಡೋ ಪೋರ್ಟಲ್

ಈ ಪೋರ್ಟಲ್ ಮೂಲಕ ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಬಯಸುವ ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಚಾರ್ಜ್ ಪಾಯಿಂಟ್ ಆಪರೇಟರ್‌ಗಳಿಗೆ ಬೆಸ್ಕಾಂ ಸಿಂಗಲ್-ವಿಂಡೋ ವ್ಯವಸ್ಥೆ ಒದಗಿಸಲಿದೆ. ಇದರಿಂದ ವಿದ್ಯುತ್ ವಾಹನಗಳ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದ್ದು ರಾಜ್ಯದ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಭೂಮಾಲೀಕರು  ಈ ಪೋರ್ಟಲ್ ಬಳಸಿ ತಮ್ಮ ಭೂಮಿಯನ್ನು ಆದಾಯ ಹಂಚಿಕೆ ಆಧಾರದ ಮೇಲೆ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಗುತ್ತಿಗೆ ನೀಡಬಹುದಾಗಿದೆ. ಇತ್ತ ಮಾರಾಟಗಾರರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಪೋರ್ಟಲ್​ನ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಬೆಸ್ಕಾಂ ಮೂಲಕ ಸಂಯೋಜಿತ ವಿದ್ಯುತ್ ಸರಬರಾಜು ವ್ಯವಸ್ಥೆಯೂ ಸಕ್ರಿಯಗೊಳ್ಳಲಿದೆ.

 ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ನೆರವು

ನಗರ ಪ್ರದೇಶಗಳು ಹಾಗೂ ಹೆದ್ದಾರಿ ಕಾರಿಡಾರ್‌ಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಈ ಪೋರ್ಟಲ್ ನೆರವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗಲ್-ವಿಂಡೋ ವ್ಯವಸ್ಥೆಯ ಮೂಲಕ ಲ್ಯಾಂಡ್ ಅಗ್ರಿಗೇಶನ್ ಮತ್ತು ವಿದ್ಯುತ್ ಸಂಪರ್ಕ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುತ್ತಿದೆ. ಇದರಿಂದ ಕಾರ್ಯವಿಧಾನದ ವೇಗ ಹೆಚ್ಚಲಿದ್ದು, ಸಾರ್ವಜನಿಕ–ಖಾಸಗಿ ಪಾಲುದಾರಿಕೆಯನ್ನು ಬಲಪಡಿಸಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ – Kannada News | Gilli Is the winner Bigg Boss Made Bigg Announcement

‘ಬಿಗ್ ಬಾಸ್’ ಫಿನಾಲೆ ವಾರ ನಡೆಯುತ್ತಿದೆ. ಈ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಚಿಯರ್ ಮಾಡಿದರು. ಇನ್ನು, ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಕೂಡ ಆಗಮಿಸಿದ್ದರು. ಇದನ್ನು ನೋಡಿ ಗಿಲ್ಲಿ ಭಾವುಕರಾದರು. ಅಲ್ಲದೆ, ‘ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಿಸೋ ತಾಕತ್ತು ಇರೋದು ಜೋಕರ್​​ಗೆ ಮಾತ್ರ’ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ, ‘ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದು ಪಕ್ಕಾ’ ಎಂದು ನೆರೆದಿದ್ದವರು ಕೂಗಿದರು. ಬಿಗ್ ಬಾಸ್ ಮನೆಯಲ್ಲೇ ಅವರು ಗೆಲ್ಲೋ ಸೂಚನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕು ನಾಯಿಯನ್ನು ಕಾರಿನಿಂದ ಹೊರಗೆಸೆದ ಚಾಲಕ – Kannada News | Washington: Cruelty Caught in Motion, Dog Hurled From Car During Police Chase

ವಾಷಿಂಗ್ಟನ್, ಜನವರಿ 14: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ(Driver)ನೊಬ್ಬ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಹೊರಗೆಸೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಾಷಿಂಗ್ಟನ್‌ನ ಪಿಯರ್ಸ್ ಕೌಂಟಿಯಲ್ಲಿ ನಡೆದಿದೆ. ಈ ಘಟನೆ ಜನವರಿ 6ರಂದು ನಡೆದಿದೆ. ರಾತ್ರಿಹೊತ್ತು ಎಂದಿನಂತೆ ಸಾಮಾನ್ಯವಾಗಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.

ಆಗ ವೇಗವಾಗಿ ಕಾರೊಂದು ಬಂದಿತ್ತು, ಪೊಲೀಸರು ಕೈ ಅಡ್ಡ ಮಾಡಿದರೂ ಕಾರು ನಿಲ್ಲಲೇ ಇಲ್ಲ, ಪೊಲೀಸರಿಗೆ ಅನುಮಾನ ಮೂಡಿ ಆತನನ್ನು ಚೇಸ್ ಮಾಡಿದ್ದಾರೆ. ಆಗ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಚಾಲಕ ಕೆಳಗೆ ಎಸೆದಿದ್ದಾನೆ. ಆತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ಪಿಯರ್ಸ್ ಕೌಂಟಿ ಶೆರಿಫ್ ಕಚೇರಿ (PCSO) ಪ್ರಕಾರ, ನೋಂದಣಿ ಅವಧಿ ಮುಗಿದ ಕಾರಣ ರಾತ್ರಿ 12.45ರ ಸುಮಾರಿಗೆ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕ ನಿಲ್ಲಲು ಸಿದ್ಧನಿರಲಿಲ್ಲ.

ಮತ್ತಷ್ಟು ಓದಿ: Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ

ಚಾಲಕ ವೇಗವನ್ನು ಹೆಚ್ಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಆತನನ್ನು ಬೆನ್ನಟ್ಟಲು ಮುಂದಾದರು. ವಾಹನವು ವೇಗವನ್ನು ಕಡಿಮೆ ಮಾಡಲು ವಿಫಲವಾಗಿ, ಡಿವೈಡರ್​ಗೆ ಗುದ್ದಿದೆ, ಕಾರಿನ ಗಾಜು ಪುಡಿ ಪುಡಿಯಾಗುವಷ್ಟು ತೀವ್ರವಾಗಿತ್ತು ಈ ಅಪಘಾತ.ನಾಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ವಿಡಿಯೋ

ಕಾರಿನೊಳಗೆ ಮತ್ತೊಂದು ನಾಯಿಯು ಕೂಡ ಇತ್ತು, ಆದರೆ ಅಪಘಾತದಲ್ಲಿ ಅದಕ್ಕೇನು ತೊಂದರೆಯಾಗಿಲ್ಲ.ದೊಡ್ಡ ನಾಯಿಯನ್ನು ಅಂತಿಮವಾಗಿ ಅದರ ಮಾಲೀಕರೊಟ್ಟಿಗೆ ಸೇರಿಸಲಾಯಿತು. 39 ವರ್ಷದ ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿದ್ದರು ಮತ್ತು 28 ವರ್ಷದ ಮಹಿಳೆಯೊಬ್ಬರು ಪ್ರಯಾಣಿಕರ ಸೀಟಿನಲ್ಲಿ ಇದ್ದರು. ಪರವಾನಗಿ ಇಲ್ಲದೆ ವಾಹನ ಚಾಲನ, ಡ್ರಂಕ್ ಆ್ಯಂಡ್ ಡ್ರೈವ್, ಅಪಾಯಕಾರಿ ಚಾಲನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಣಿ ಹಿಂಸೆ ಆರೋಪವನ್ನು ಎದುರಿಸುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವಮೊಗ್ಗ: ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್, ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು – Kannada News | Three Members of Same Family from Sringeri Killed in Horrific Road Accident Near Thirthahalli, Shivamogga

ಶಿವಮೊಗ್ಗ, ಜನವರಿ 14: ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ಪ್ರಕಾರ, ಕಾರಿನಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ, ಮದುವೆ ಮುಗಿಸಿಕೊಂಡು ಶೃಂಗೇರಿಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತದ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಕೆ ತಾಳಲಾರದೆ ಇನ್​​ಸ್ಟಾ ಡಿಲೀಟ್ ಮಾಡಿದ ‘ಟಾಕ್ಸಿಕ್’ ಟೀಸರ್ ನಟಿ? – Kannada News | Beatriz taufenbach Deletes Instagram Over Hate Messages Over Toxic Teaser Controversy

‘ಟಾಕ್ಸಿಕ್’ ಸಿನಿಮಾದ ಟೀಸರ್​ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಟೀಸರ್​​ನಲ್ಲಿ ಓರ್ವ ನಟಿ ಬರುತ್ತಾರೆ. ಅವರು ಕಾರಿನಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಟಿಯ ಹೆಸರು ನಟೇಲಿ ಬರ್ನ್ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು, ಕಾರಿನಲ್ಲಿದ್ದ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್​​ಗೆ ಹೇಟ್​ ಮೆಸೇಜ್​​ಗಳು ತಲುಪಿದ್ದವು. ಇದರಿಂದ ಬೇಸರ ಗೊಂಡಿರೋ ಬಿಯಾತ್ರೀಜ್ ಟಾಫೆಬಾಕ್ ಇನ್​​​ಸ್ಟಾ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.

ನಟೇಲಿ ಬರ್ನ್ ಮೂಲತಃ ಉಕ್ರೇನ್​ನವರು. ಆದರೆ, ಅವರು ಹಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಿರ್ಮಾಪಕಿ ಕೂಡ ಹೌದು. ‘ಟಾಕ್ಸಿಕ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ, ಕಾರಿನ ದೃಶ್ಯದಲ್ಲಿ ಇದ್ದವರು ಇವರಲ್ಲ ಎಂಬ ಸ್ಪಷ್ಟನೆ ಸಿಕ್ಕಿತು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್ ಅವರಿಗೆ ಸಾಕಷ್ಟು ಸಂದೇಶಗಳು ಹೋಗಿವೆ. ರಿಕ್ವೆಸ್ಟ್​​ಗಳು ಕೂಡ ದೊಡ್ಡ ಮಟ್ಟದಲ್ಲೇ ತಲುಪಿದೆ.

ಈ ವಿಷಯಗಳಿಂದ ಬಿಯಾತ್ರೀಜ್ ಟಾಫೆಬಾಕ್ ಬೇಸರಗೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಹಾಲಿವುಡ್ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದರೆ ಯಾರೂ ಅದನ್ನು ಟೀಕಿಸೋದಿಲ್ಲ. ಆದರೆ, ಕನ್ನಡ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯ ಕಂಡಾಗ ಕೆಲವರಿಗೆ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಟೀಸರ್​​ನ ಹಾಗೂ ಟೀಸರ್​​​ನಲ್ಲಿ ನಟಿಸಿದ ಕಲಾವಿದರನ್ನು ಟೀಕಿಸಲಾಗುತ್ತಿದೆ. ಬಿಯಾತ್ರೀಜ್ ಟಾಫೆಬಾಕ್ ಅವರನ್ನು ಕೂಡ ಟೀಕಿಸಲಾಯಿತು. ಈ ಬೆಳವಣಿಗೆ ಬಿಯಾತ್ರೀಜ್ ಟಾಫೆಬಾಕ್ ಬೇಸರ ತಂದಿರಬಹುದು. ಇದರಿಂದ ಅವರು ತಾತ್ಕಾಲಿಕವಾಗಿ ಖಾತೆಯನ್ನು ಡಿಆ್ಯಕ್ಟೀವೇಟ್ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದರು. ಟೀಸರ್​​ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಹೇಳಿದ್ದರು. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್​​ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನದ) ಹುಡುಗಿ’ ಎಂದಿದ್ದರು. ಬಿಯಾತ್ರೀಜ್ ಟಾಫೆಬಾಕ್ ಇನ್​​ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಆಗಿ ಇಡಲಾಗಿತ್ತು. ಈಗ ಅದು ಡಿಲೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:14 am, Wed, 14 January 26

Source link

ಸಚಿನ್​ರ ಸಾರ್ವಕಾಲಿಕ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೆಷ್ಟು ರನ್​​ಗಳಿಸಬೇಕು? – Kannada News | How many runs does Virat Kohli need to break Sachin’s record

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ದಾಖಲೆಯೊಂದಿಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನ ರನ್ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅದು ಕೂಡ ಶ್ರೀಲಂಕಾದ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕುವ ಮೂಲಕ.

Source link

Exit mobile version