ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು – Kannada News | Tara Sutaria said Toxic movie set is the most professional set she ever worked

ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ (Pan India) ಲೆವೆಲ್​​ಗೆ ಮತ್ತು ಈಗ ‘ಟಾಕ್ಸಿಕ್’ ಮೂಲಕ ಹಾಲಿವುಡ್​​ ಲೆವೆಲ್​​ಗೆ ಕೊಂಡೊಯ್ಯುವ ಕಾರ್ಯವನ್ನು ನಟ ಯಶ್ ಮಾಡುತ್ತಿದ್ದಾರೆ. ಅವರು ಸಿನಿಮಾವನ್ನು ಹಾಲಿವುಡ್​​ ಲೆವೆಲ್​​ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್​​ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್​​ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್​​ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್​​ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಮಾತನಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್​ ಜೊತೆಗೆ ಮಾತನಾಡಿರುವ ನಟಿ ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾದ ಸೆಟ್ ಮತ್ತು ಅಲ್ಲಿಯ ಶೂಟಿಂಗ್ ವಿಧಾನ, ಕಲಾವಿದರನ್ನು, ತಂತ್ರಜ್ಞರನ್ನು, ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತಿದ್ದ ವಿಧಾನ ಎಷ್ಟು ವೃತ್ತಿಪರವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘ನನಗಂತೂ ‘ಟಾಕ್ಸಿಕ್’ ಸಿನಿಮಾನಲ್ಲಿ ಕೆಲಸ ಮಾಡಿದ್ದು ಬಹಳ ತೃಪ್ತಿ ತಂದಿದೆ. ಶೂಟಿಂಗ್ ಸೆಟ್‌ನಲ್ಲಿ ನನಗೆ ತುಂಬಾ ಒಳ್ಳೆಯ ಅನುಭವ ನೀಡಿದ ಸಿನಿಮಾ ಇದು’ ಎಂದಿದ್ದಾರೆ.

ಸಿನಿಮಾ ಸೆಟ್​​ಗಳಲ್ಲಿ ಅತಿಯಾದ ಕೆಲಸಕ್ಕೆ ಪ್ರಾಧಾನ್ಯತೆ ಹೆಚ್ಚು, ಶೂಟಿಂಗ್ ಬೇಗನೆ ಮುಗಿಯಬೇಕು ಮತ್ತು ರಿಚ್ ಆಗಿ ಬರಬೇಕೆಂದು ಚಿತ್ರತಂಡಗಳು ನಟ-ನಟಿಯರನ್ನು ಹೆಚ್ಚಿಗೆ ದುಡಿಸಿಕೊಳ್ಳುವುದು, ಭದ್ರತೆ, ಸುರಕ್ಷತೆಗೆ ಹೆಚ್ಚು ಗಮನ ವಹಿಸದೇ ಇರುವುದು ಮಾಡುತ್ತವೆ. ಆದರೆ ‘ಟಾಕ್ಸಿಕ್’ ಸೆಟ್​​ನಲ್ಲಿ ಇದೆಲ್ಲ ಇರಲೇ ಇಲ್ಲವಂತೆ. ‘ಸೆಟ್​​ನಲ್ಲಿ ಮಾನವೀಯತೆಗೆ ಮತ್ತು ಪ್ರಮಾಣಿಕತೆಗೆ ಮೊದಲ ಆದ್ಯತೆ ಇತ್ತು’ ಎಂದು ನಟಿ ತಾರಾ ಸುತಾರಿಯಾ ಹೇಳಿದ್ದಾರೆ.

ಇದನ್ನೂ ಓದಿ:ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಮುಂದುವರೆದು ಮಾತನಾಡಿ, ‘ನನಗೆ ಬಹಳ ವರ್ಷಗಳ ಬಳಿಕ ಒಳ್ಳೆಯ ತಂಡ ಸಿಕ್ಕಿತು, ಅದು ಕೂಡ ಗೀತು ಮೋಹನ್ ದಾಸ್ ಅವರ ನಾಯಕತ್ವದಲ್ಲಿ. ನಿಖಿಲ್ ನಾಗೇಶ್ ಭಟ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಬಳಿಕ ನನಗೆ ಸಿಕ್ಕ ಅದ್ಭುತ ನಿರ್ದೇಶಕಿ ಗೀತು ಮೋಹನ್​​ದಾಸ್. ಅವರ ಜೊತೆ ಕೆಲಸ ಮಾಡುವುದು ಮತ್ತು ಒಬ್ಬ ಮಹಿಳೆಯ ನೇತೃತ್ವದಲ್ಲಿ ಮುನ್ನಡೆಯುವುದು ನನ್ನ ಜೀವನದ ಅತ್ಯಂತ ಸಂತೋಷದ ವಿಷಯವಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಕೆಲಸ ಮಾಡಿರುವ ಯಾರನ್ನು ಬೇಕಾದರೂ ಕೇಳಿ ಎಲ್ಲರೂ ಇದೇ ಉತ್ತರ ನೀಡುತ್ತಾರೆ’ ಎಂದಿದ್ದಾರೆ ನಟಿ ತಾರಾ ಸುತಾರಿಯಾ.

ಯಶ್, ‘ಟಾಕ್ಸಿಕ್’ ಸಿನಿಮಾದ ಸಹ ನಿರ್ಮಾಪಕ ಆಗಿದ್ದು, ಯಶ್ ಅವರು ವೃತ್ತಿಪರತೆಯಿಂದ, ಕಾರ್ಪೊರೇಟ್ ಶೈಲಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. ಸಾಮಾನ್ಯ ಸಿನಿಮಾ ಶೂಟಿಂಗ್​​ನ ಮಾದರಿಗಳನ್ನು ಕೈಬಿಟ್ಟು, ಕನ್ನಡ ಸಿನಿಮಾ ಶೂಟಿಂಗ್​​ಗೆ ಒಂದು ಕಾರ್ಪೊರೇಟ್ ಶೈಲಿಯನ್ನು ತಂದಿದ್ದಾರೆ. ಈಗ ಸಿನಿಮಾವನ್ನು ಸಹ ಹಾಲಿವುಡ್ ಲೆವೆಲ್​​ನಲ್ಲಿ ಬಿಡುಗಡೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದ ಹೊಸ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Sun, 17 May 26

Source link

ಬೆಂಗಳೂರಿನಿಂದ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್​​ಗೆ ಒತ್ತಾಯಿಸಿದ ತೇಜಸ್ವಿ ಸೂರ್ಯ – Kannada News | BJP MP tejasvi Surya demands to ashwini vaishnaw for Start bengaluru mubai high speed Railway corridor

ಬೆಂಗಳೂರು, (ಮೇ 17): ದಾವಣಗೆರೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಹೈ-ಸ್ಪೀಡ್ ರೈಲು ಕಾರಿಡಾರ್ ಅನ್ನು (bengaluru mubai high speed Railway corridor) ಮಂಜೂರು ಮಾಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಅವರು ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (ashwini vaishnaw )ಅವರಿಗೆ ಆಗ್ರಹಿಸಿದ್ದಾರೆ. ಈ ಯೋಜನೆಯು ಮಧ್ಯ ಮತ್ತು ಉತ್ತರ ಕರ್ನಾಟಕದಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರನ್ನು ಚೆನ್ನೈ ಮತ್ತು ಹೈದರಾಬಾದ್‌ನೊಂದಿಗೆ ಸಂಪರ್ಕಿಸುವ ಇತ್ತೀಚೆಗೆ ಘೋಷಿಸಲಾದ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಂತೆಯೇ, ಬೆಂಗಳೂರು-ಮುಂಬೈ ಕಾರಿಡಾರ್ ಕೂಡ ಕರ್ನಾಟಕದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅವರು ಗಮನ ಸೆಳೆದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನಡೆದ ನೂತನ, ಎಸ್‌ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಹಸಿರು ನಿಶಾನೆ ತೋರುವ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಸೂರ್ಯ ಅವರು ಈ ಮನವಿ ಮಾಡಿದರು.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಉಭಯ ಮಹಾನಗರಗಳ ನಡುವಿನ ಬಲವಾದ ಆರ್ಥಿಕ ಸಂಬಂಧಗಳನ್ನು ಒತ್ತಿಹೇಳಿದ ಸೂರ್ಯ, ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ರಾಜಧಾನಿಗಳಾಗಿದ್ದು, ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಮತ್ತು ಮುಂಬೈ ವಾಣಿಜ್ಯ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದರು.

“ಪ್ರತಿ ವರ್ಷ ಲಕ್ಷಾಂತರ ಜನರು ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುತ್ತಾರೆ. ದಾವಣಗೆರೆ ಮತ್ತು ಹುಬ್ಬಳ್ಳಿ ಮೂಲಕ ಈ ಎರಡು ನಗರಗಳನ್ನು ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್ ಕೇವಲ ಸಂಪರ್ಕವನ್ನು ಸುಧಾರಿಸುವುದಲ್ಲದೆ, ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಈ ಯೋಜನೆಯನ್ನು ಪರಿಗಣಿಸಿ ಅನುಷ್ಠಾನಗೊಳಿಸಿದರೆ, ರಾಜ್ಯದ ಆರ್ಥಿಕ ಭವಿಷ್ಯವನ್ನು ಬಲಪಡಿಸಲು ನೀಡಿದ ಈ ಕೊಡುಗೆಯನ್ನು ಕರ್ನಾಟಕ ಮತ್ತು ಬೆಂಗಳೂರಿನ ಜನರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಸಂಸದ ಸೂರ್ಯ ವಿವರಿಸಿದರು.

ಬೆಂಗಳೂರು ಮತ್ತು ಮುಂಬೈ ನಡುವಿನ ನೂತನ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸ್ವಾಗತಿಸಿದ ಸೂರ್ಯ ರವರು, ಎರಡೂ ನಗರಗಳ ನಡುವೆ ದಶಕಗಳಿಂದ ಪ್ರಯಾಣದ ಬೇಡಿಕೆ ಹೆಚ್ಚುತ್ತಿದ್ದರೂ, 1983 ರಿಂದ ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ಏಕೈಕ ನೇರ ರೈಲು ಸೇವೆಯಾಗಿ ಉಳಿದಿತ್ತು ಎಂಬುದನ್ನು ಉಲ್ಲೇಖಿಸಿ, 30 ವರ್ಷಗಳಿಗೂ ಹೆಚ್ಚು ಕಾಲ, ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವ ನಾಗರಿಕರು ಸೀಮಿತ ರೈಲು ಸಂಪರ್ಕದ ಕಾರಣದಿಂದಾಗಿ ಅಪಾರ ತೊಂದರೆಗಳನ್ನು ಎದುರಿಸುತ್ತಿದ್ದರು. ಹಬ್ಬದ ಮತ್ತು ರಜಾದಿನಗಳ ಸಂದರ್ಭದಲ್ಲಿ ವೇಟಿಂಗ್ ಲಿಸ್ಟ್‌ಗಳು ಹೆಚ್ಚಾಗುತ್ತಿದ್ದವು ಮತ್ತು ವಿಮಾನ ಹಾಗೂ ಬಸ್ ದರಗಳು ಗಗನಕ್ಕೇರುತ್ತಿದ್ದವು. ಈ ಹೊಸ ರೈಲು ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಲಿದೆ ” ಎಂದು ಅವರು ಹೇಳಿದರು.

ಬೆಂಗಳೂರು ಮತ್ತು ಮುಂಬೈ ನಡುವೆ ರಾತ್ರಿ ಸಂಪರ್ಕ ಕಲ್ಪಿಸುವ ‘ವಂದೇ ಭಾರತ್ ಸ್ಲೀಪರ್’ ಸೇವೆಯನ್ನು ಬೆಂಗಳೂರು ಶೀಘ್ರದಲ್ಲೇ ಪಡೆಯಲಿದೆ ಎಂದು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಸೂರ್ಯ ಇದೇ ವೇಳೆ ತಿಳಿಸಿದ್ದು, ಕರ್ನಾಟಕದ ರೈಲ್ವೆ ಮೂಲಸೌಕರ್ಯಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದರು.

ಕಳೆದ ಒಂದು ದಶಕದಲ್ಲಿ ರೈಲ್ವೆ ವಲಯದಲ್ಲಿ ಆಗಿರುವ ಅಭೂತಪೂರ್ವ ಸುಧಾರಣೆಗಳು ರಾಜ್ಯದ ಅಭಿವೃದ್ಧಿಗೆ ವೇಗ ನೀಡಿದ್ದು, 2014 ರವರೆಗೆ ಕರ್ನಾಟಕಕ್ಕೆ ವಾರ್ಷಿಕ ರೈಲ್ವೆ ಅನುದಾನ ಸರಾಸರಿ ಸುಮಾರು ₹850 ಕೋಟಿಗಳಷ್ಟಿತ್ತು, ಆದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ವಾರ್ಷಿಕವಾಗಿ ಸುಮಾರು ₹8,000 ಕೋಟಿ ಲಭಿಸುತ್ತಿದೆ, ಇದು ಸುಮಾರು ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಕರ್ನಾಟಕದಲ್ಲಿ ಸದ್ಯ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ, ವಿದ್ಯುದೀಕರಣ ಮತ್ತು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನಿಲ್ದಾಣಗಳ ಮರುಅಭಿವೃದ್ಧಿ ಸೇರಿದಂತೆ 52,000 ಕೋಟಿಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಇನ್ನು ರಾಜ್ಯದಾದ್ಯಂತ ರೈಲ್ವೆ ವಿದ್ಯುದೀಕರಣವು 3,000 ಕಿಲೋಮೀಟರ್ ದಾಟಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸೂರ್ಯ ತಿಳಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಾಟಾ-ASML ಡೀಲ್; ಚಿಪ್ ಕ್ಷೇತ್ರದಲ್ಲಿ ಸಂಚಲನ; ಯಾಕಿದು ಮಹಾ ಡೀಲ್? ಎಲ್ಲರಿಗೂ ಅಚ್ಚರಿ ಎನಿಸುವಂಥದ್ದು ಏನಿದೆ? – Kannada News | ASML Tata Deal: India’s Semiconductor Future Unlocked, Boosting Chip Manufacturing

ನವದೆಹಲಿ, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ಯೂರೋಪ್​ನ ನೆದರ್​ಲ್ಯಾಂಡ್ಸ್ ದೇಶದ ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ಡಚ್ಚರಿಂದ ಬಹಳಷ್ಟು ಹೂಡಿಕೆಗಳು ಭಾರತಕ್ಕೆ ಹರಿದುಬರಲಿವೆ. ಅದರಲ್ಲಿ ಬಹಳ ಗಮನ ಸೆಳೆದಿರುವುದು ಜಾಗತಿಕ ಸೆಮಿಕಂಡಕ್ಟರ್ (ಚಿಪ್) ಉದ್ಯಮದ ಅತ್ಯಂತ ಪ್ರಭಾವಶಾಲಿ ದೈತ್ಯ ಕಂಪನಿ ನೆದರ್‌ಲ್ಯಾಂಡ್ಸ್‌ನ ASML ಮತ್ತು ಭಾರತದ ಹೆಮ್ಮೆಯ ಟಾಟಾ ಗ್ರೂಪ್ (Tata Electronics) ನಡುವೆ ಏರ್ಪಟ್ಟಿರುವ ಒಪ್ಪಂದ. ಇದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ (ಚಿಪ್ ತಯಾರಿಕಾ ಘಟಕ) ಸ್ಥಾಪನೆಗೆ ಸಂಬಂಧಿಸಿದಂತೆ ಈ ಒಪ್ಪಂದ ಬಹಳ ಮುಖ್ಯ.

ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ASML ಎಷ್ಟು ಶಕ್ತಿಶಾಲಿ?

ಸೆಮಿಕಂಡಕ್ಟರ್ ಜಗತ್ತಿನಲ್ಲಿ ASML ಕೇವಲ ಒಂದು ಕಂಪನಿಯಲ್ಲ, ಅದು ಇಡೀ ವಿಶ್ವದ ಅತ್ಯಾಧುನಿಕ ಚಿಪ್ ಉದ್ಯಮವನ್ನು ನಿಯಂತ್ರಿಸುವ ಏಕೈಕ ‘ಮಹಾಶಕ್ತಿ’. ಕ್ಷೇತ್ರದಲ್ಲಿ ASML ಪೂರ್ಣ ಪಾರಮ್ಯ ಹೊಂದಿದೆ.

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು, ಕೃತಕ ಬುದ್ಧಿಮತ್ತೆ (AI) ಸೂಪರ್ ಕಂಪ್ಯೂಟರ್‌ಗಳು ಮತ್ತು ಅತ್ಯಾಧುನಿಕ ಗ್ಯಾಜೆಟ್‌ಗಳಲ್ಲಿ ಬಳಸಲಾಗುವ 5 ನ್ಯಾನೋಮೀಟರ್ (nm), 3nm ಮತ್ತು 2nm ನಂತಹ ಅತ್ಯಂತ ಸೂಕ್ಷ್ಮ ಚಿಪ್‌ಗಳನ್ನು ತಯಾರಿಸಲು EUV (Extreme Ultraviolet) ಲಿಥೋಗ್ರಫಿ ಯಂತ್ರಗಳು ಬೇಕೇ ಬೇಕು. ಇಡೀ ಜಗತ್ತಿನಲ್ಲಿ ಈ EUV ಯಂತ್ರಗಳನ್ನು ತಯಾರಿಸುವ ಏಕೈಕ ಕಂಪನಿ ASML ಮಾತ್ರ. ಈ ತಂತ್ರಜ್ಞಾನದಲ್ಲಿ ಇದಕ್ಕೆ ಯಾವುದೇ ಪ್ರತಿಸ್ಪರ್ಧಿ ಇಲ್ಲ.

ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ

ಶೇ. 80 ಕ್ಕೂ ಹೆಚ್ಚು ಮಾರುಕಟ್ಟೆ ಪಾಲು: ಮುಂದುವರಿದ ಚಿಪ್‌ಗಳು ಮಾತ್ರವಲ್ಲದೆ, ವಾಹನಗಳು ಮತ್ತು ಸಾಮಾನ್ಯ ಎಲೆಕ್ಟ್ರಾನಿಕ್ಸ್‌ನಲ್ಲಿ ಬಳಸುವ ಸಾಂಪ್ರದಾಯಿಕ ಚಿಪ್‌ಗಳನ್ನು ತಯಾರಿಸುವ DUV (Deep Ultraviolet) ಲಿಥೋಗ್ರಫಿ ಮಾರುಕಟ್ಟೆಯಲ್ಲೂ ASML ಶೇಕಡಾ 82 ಕ್ಕೂ ಹೆಚ್ಚು ಆದಾಯದ ಪಾಲನ್ನು ಹೊಂದಿದೆ. ನಿಕಾನ್ (Nikon) ಮತ್ತು ಕ್ಯಾನನ್ (Canon) ನಂತಹ ಕಂಪನಿಗಳು ಇದರ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ.

ವಿಶ್ವದ ಅತ್ಯಂತ ಸಂಕೀರ್ಣ ಯಂತ್ರ: ASML ನ ಒಂದು ಹೈ-ಎಂಡ್ ಯಂತ್ರದ ಬೆಲೆ ಸುಮಾರು 200 ಮಿಲಿಯನ್‌ನಿಂದ 370 ಮಿಲಿಯನ್ ಡಾಲರ್ (ಅಂದರೆ ಸುಮಾರು 1,900 ರಿಂದ 3,500 ಕೋಟಿ ರೂ). ಇದು ಒಂದು ದೊಡ್ಡ ಸಾರಿಗೆ ವಿಮಾನದ ಗಾತ್ರದಲ್ಲಿದ್ದು, ಇದನ್ನು ಬೇರೆ ದೇಶಕ್ಕೆ ಸಾಗಿಸಲು ಮೂರು ಬೋಯಿಂಗ್ 747 ವಿಮಾನಗಳು ಬೇಕಾಗುತ್ತವೆ. ಇದೇ ಕಾರಣಕ್ಕೆ ASML ಯುರೋಪ್‌ನ ಅತ್ಯಂತ ಮೌಲ್ಯಯುತ ತಂತ್ರಜ್ಞಾನ ಕಂಪನಿಯಾಗಿದೆ.

ಟಾಟಾ – ASML ಒಪ್ಪಂದ ಭಾರತಕ್ಕೆ ಎಷ್ಟು ಮುಖ್ಯ?

ಗುಜರಾತ್‌ನ ಧೋಲೇರಾದಲ್ಲಿ ಸುಮಾರು 11 ಬಿಲಿಯನ್ ಡಾಲರ್ (1.05 ಲಕ್ಷ ಕೋಟಿ ರೂಗೂ ಹೆಚ್ಚು) ವೆಚ್ಚದಲ್ಲಿ ಟಾಟಾ ಸಂಸ್ಥೆಯು ಭಾರತದ ಮೊದಲ ವಾಣಿಜ್ಯ 300mm ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಸ್ಥಾಪಿಸುತ್ತಿದೆ. ಈ ಹಂತದಲ್ಲಿ ASML ಜೊತೆಗಿನ ಒಪ್ಪಂದವು ಭಾರತದ ಪಾಲಿಗೆ “ಸಾಮ್ರಾಜ್ಯದ ಕೀಲಿಕೈ” ಸಿಕ್ಕಂತಾಗಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಯಂತ್ರೋಪಕರಣಗಳ ಕೊರತೆ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಯೋಜನೆಗಳು ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಜಾಗತಿಕ ದೈತ್ಯ ASML ನೇರವಾಗಿ ಟಾಟಾ ಜೊತೆ ಕೈಜೋಡಿಸಿರುವುದರಿಂದ, ಧೋಲೇರಾ ಯೋಜನೆಗೆ ಅತ್ಯಾಧುನಿಕ ಲಿಥೋಗ್ರಫಿ ಉಪಕರಣಗಳು ಮತ್ತು ತಾಂತ್ರಿಕ ಬೆಂಬಲ ಯಾವುದೇ ಅಡೆತಡೆಯಿಲ್ಲದೆ ಸಿಗಲಿದೆ.

ಚಿಪ್ ತಯಾರಿಕೆಗೆ ಅತ್ಯಂತ ನುರಿತ ಇಂಜಿನಿಯರ್‌ಗಳ ಅಗತ್ಯವಿದೆ. ಈ ಒಪ್ಪಂದದ ಪ್ರಕಾರ, ASML ಕಂಪನಿಯು ಭಾರತೀಯ ಯುವಕರಿಗೆ ಲಿಥೋಗ್ರಫಿ ತಂತ್ರಜ್ಞಾನದಲ್ಲಿ ತರಬೇತಿ ನೀಡಲಿದ್ದು, ಭಾರತದಲ್ಲಿ ಸ್ವಂತ ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೂಲಸೌಕರ್ಯವನ್ನು ಬೆಳೆಸಲು ಸಹಾಯ ಮಾಡಲಿದೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಭಾರತಕ್ಕೆ ಜಾಗತಿಕ ಮನ್ನಣೆ

ಇದು ಕೇವಲ ಸರಕು ಖರೀದಿಯ ಒಪ್ಪಂದವಲ್ಲ, ಇದೊಂದು ಕಾರ್ಯತಂತ್ರದ ಮೈತ್ರಿ (Strategic Partnership). ಜಾಗತಿಕ ಚಿಪ್ ಮಾರುಕಟ್ಟೆಯಲ್ಲಿ ತೈವಾನ್ (TSMC), ಅಮೆರಿಕ (Intel) ಮತ್ತು ದಕ್ಷಿಣ ಕೊರಿಯಾ (Samsung) ದೇಶಗಳು ಹೊಂದಿರುವ ಉನ್ನತ ತಂತ್ರಜ್ಞಾನದ ಮಾರುಕಟ್ಟೆಗೆ ಭಾರತವೂ ಲಗ್ಗೆ ಇಡಲು ಇದು ಹೆದ್ದಾರಿಯಾಗಲಿದೆ.

ಇದುವರೆಗೆ ಭಾರತವು ಕೇವಲ ಚಿಪ್‌ಗಳನ್ನು ಜೋಡಿಸುವ (Assembly) ಅಥವಾ ವಿನ್ಯಾಸ (Design) ಮಾಡುವ ಕೆಲಸಕ್ಕೆ ಸೀಮಿತವಾಗಿತ್ತು. ಆದರೆ, ಜಗತ್ತಿನ ಅತಿ ದೊಡ್ಡ ಚಿಪ್ ಯಂತ್ರ ತಯಾರಕ ಕಂಪನಿಯಾದ ASML, ಟಾಟಾ ಗ್ರೂಪ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಭಾರತವು ಇನ್ನು ಮುಂದೆ ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ (Global Chip Hub) ಬದಲಾಗುವುದು ಖಚಿತವಾಗಿದೆ. ಸೆಮಿಕಂಡಕ್ಟರ್ ವ್ಯಾಲ್ಯೂ ಚೈನ್​ನಲ್ಲಿ ಭಾರತ ಮೇಲೇರಬಹುದು. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ಆತ್ಮನಿರ್ಭರ ಭಾರತ ಯೋಜನೆಗೆ ಸಿಕ್ಕ ಅತಿ ದೊಡ್ಡ ಯಶಸ್ಸು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PBKS vs RCB: ಪಂಜಾಬ್ ವಿರುದ್ಧ ಅಬ್ಬರಿಸಿ ಎರಡೆರಡು ದಾಖಲೆ ಸೃಷ್ಟಿಸಿದ ಕೊಹ್ಲಿ – Kannada News | Virat Kohli’s IPL 2026 Record: 9th 500+ Season and 5500 Runs for RCB Opener!

ಐಪಿಎಲ್ 2026 (IPL 2026) ರ ನಿರ್ಣಾಯಕ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡಗಳ ನಡುವೆ ನಡೆಯಿತು. ಧರ್ಮಶಾಲಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿ ಪರ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat kohli) ತಂಡಕ್ಕೆ ಮತ್ತೊಮ್ಮೆ ಅಡಿಪಾಯ ಹಾಕಿಕೊಟ್ಟರು. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅಜೇಯ ಶತಕ ಬಾರಿಸಿದ್ದ ಕೊಹ್ಲಿ, ಪಂಜಾಬ್ ವಿರುದ್ಧವೂ ಅದೇ ಆಟವನ್ನು ಮುಂದುವರೆಸಿದರು. ಪರಿಣಾಮವಾಗಿ ಸತತ ಎರಡನೇ ಪಂದ್ಯದಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ 9 ಐಪಿಎಲ್ ಸೀಸನ್​ಗಳಲ್ಲಿ 500+ ರನ್ ಕಲೆಹಾಕಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದರು.

ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ 37 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 58 ರನ್ ಬಾರಿಸಿ ಔಟಾದರು. ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ಕೂಡ ದಾಟಿದರು. ಇಲ್ಲಿಯವರೆಗೆ ನಡೆದಿರುವ 19 ಆವೃತ್ತಿಗಳಲ್ಲಿ ಕೊಹ್ಲಿ 500 ಕ್ಕೂ ಅಧಿಕ ರನ್ ಕಲೆಹಾಕಿರುವ 9ನೇ ಸೀಸನ್ ಇದಾಗಿದೆ. ಈ ಮೂಲಕ ಅಧಿಕ ಬಾರಿ 500+ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ತಲಾ ಏಳು ಸೀಸನ್​ಗಳಲ್ಲಿ 500+ ರನ್ ಕಲೆಹಾಕಿದ್ದಾರೆ.

9 ಆವೃತ್ತಿಗಳಲ್ಲಿ 500+ ರನ್

  • 2011 ರ ಐಪಿಎಲ್‌: 557 ರನ್‌
  • 2013 ರ ಐಪಿಎಲ್‌: 634 ರನ್‌
  • 2015 ರ ಐಪಿಎಲ್‌: 505 ರನ್‌
  • 2016 ರ ಐಪಿಎಲ್‌: 973 ರನ್‌
  • 2018 ರ ಐಪಿಎಲ್‌: 530 ರನ್‌
  • 2023 ರ ಐಪಿಎಲ್‌: 639 ರನ್‌
  • 2024 ರ ಐಪಿಎಲ್‌: 741 ರನ್‌
  • 2025 ರ ಐಪಿಎಲ್‌: 657 ರನ್‌
  • 2026 ರ ಐಪಿಎಲ್‌: 500* ರನ್‌

ಆರಂಭಿಕನಾಗಿ 5500 ರನ್

ಇದರ ಜೊತೆಗೆ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ಇತಿಹಾಸವನ್ನು ನಿರ್ಮಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಯ ಪರ ಆರಂಭಿಕ ಆಟಗಾರನಾಗಿ 5500 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ ಆಡುವಾಗ ಯಾವುದೇ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿಲ್ಲ.

PBKS vs RCB IPL 2026 Live Score: ಆರ್​ಸಿಬಿ 200 ರನ್ ಪೂರ್ಣ

ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಏಳು ರನ್‌ಗಳು ಬೇಕಾಗಿದ್ದವು. ಅಮಾನತುಲ್ಲಾ ಉಮರ್ಜೈ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದರು. ಒಟ್ಟಾರೆಯಾಗಿ, ಕೊಹ್ಲಿಗಿಂತ ಮೊದಲು, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಆರಂಭಿಕರಾಗಿ 5500 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಅವರು ವಿಭಿನ್ನ ಫ್ರಾಂಚೈಸಿಗಳಿಗಾಗಿ ಆಡುವಾಗ ಈ ಸಾಧನೆಯನ್ನು ಮಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:01 pm, Sun, 17 May 26

Source link

ಕೋಲಾರ: ಜವರಾಯನಾದ ಕೃಷಿ ಹೊಂಡ, ಈಜು ಕಲಿಸಲು ಹೋದ ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ – Kannada News | Drowning Tragedy: Father and Two Children Die in Farm Pond While Learning to Swim

ಕೋಲಾರ, ಮೇ 17: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಕೃಷಿ ಹೊಂಡದಲ್ಲಿ ಈಜಾಡಲು ತೆರಳಿದ್ದ ತಂದೆ ಹಾಗೂ ಇಬ್ಬರು ಮುದ್ದಿನ ಮಕ್ಕಳು ನೀರು ಪಾಲಾಗಿರುವ (death) ದಾರುಣ ಘಟನೆ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ಶ್ರೀನಿವಾಸ್ (40), ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಮೃತ ದುರ್ದೈವಿಗಳು. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ಜಾರಿ ಬಿದ್ದು ದುರಂತ

ಭಾನುವಾರ ರಜಾದಿನವಾಗಿದ್ದರಿಂದ ತಂದೆ ಶ್ರೀನಿವಾಸ್​​, ತಮ್ಮಿಬ್ಬರು ಮಕ್ಕಳಿಗೆ ಈಜು ಕಲಿಸಿಕೊಡಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಗ್ರಾಮದ ಭೈರಪ್ಪ ಎಂಬುವರಿಗೆ ಸೇರಿದ ಕೃಷಿ ಹೊಂಡದ ಬಳಿ ತೆರಳಿದ್ದಾಗ, ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಮೂವರೂ ಕೃಷಿ ಹೊಂಡದಲ್ಲೇ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

Vasthu Tips: ಮನೆ ಕಟ್ಟುವಾಗ ಕಿಟಕಿ ನಿರ್ಮಾಣದ ದಿಕ್ಕುಗಳ ಬಗ್ಗೆ ಇರಲಿ ಎಚ್ಚರ; ವಾಸ್ತು ಸಲಹೆ ಇಲ್ಲಿದೆ – Kannada News | Vastu Shastra Guide: Maximize Home Positive Energy with Right Window Placement

ಕಿಟಕಿ ನಿರ್ಮಾಣದ ದಿಕ್ಕುImage Credit source: Pinterest

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನಷ್ಟೇ ಕಿಟಕಿಗಳಿಗೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕಿಟಕಿಗಳನ್ನು ಕೇವಲ ಗಾಳಿ-ಬೆಳಕು ಬರುವ ದಾರಿಯನ್ನಾಗಿ ಅಷ್ಟೇ ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy), ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ಸಂಖ್ಯೆಯಲ್ಲಿ ಕಿಟಕಿಗಳನ್ನು ಅಳವಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಬಹುದು. ಆದ್ದರಿಂದ ಮನೆ ಕಟ್ಟುವಾಗ ಕಿಟಕಿಗಳ ವಿಷಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಕಿಟಕಿಗಳು ತೆರೆಯುವ ದಿಕ್ಕು ಹೀಗಿರಲಿ:

ವಾಸ್ತು ಶಾಸ್ತ್ರದಲ್ಲಿ ಕಿಟಕಿ ಮತ್ತು ಬಾಗಿಲುಗಳು ಯಾವ ಕಡೆಗೆ ತೆರೆದುಕೊಳ್ಳುತ್ತವೆ ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಮನೆಯ ಕಿಟಕಿಗಳಾಗಲಿ ಅಥವಾ ಬಾಗಿಲುಗಳಾಗಲಿ ಯಾವಾಗಲೂ ಒಳಮುಖವಾಗಿ (ಒಳಗಡೆಗೆ) ತೆರೆಯಬೇಕು. ಹೊರಮುಖವಾಗಿ ತೆರೆಯುವ ಕಿಟಕಿಗಳನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಹೊರಗೆ ತೆರೆಯುವ ಕಿಟಕಿಗಳಿಂದ ಮನೆಯಲ್ಲಿನ ಧನಲಕ್ಷ್ಮಿ ಮತ್ತು ಧನಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ದಿಕ್ಕಿನ ಕಿಟಕಿಗಳಿದ್ದರೆ ಎಚ್ಚರ:

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುವುದರಿಂದ ಈ ದಿಕ್ಕಿನಲ್ಲಿ ಕಿಟಕಿಗಳನ್ನು ನಿರ್ಮಿಸುವುದು ಅಶುಭ. ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ದಕ್ಷಿಣ ದಿಕ್ಕಿಗೆ ಕಿಟಕಿಗಳಿದ್ದರೆ, ಅವುಗಳನ್ನು ಆದಷ್ಟು ಕಡಿಮೆ ಸಮಯದವರೆಗೆ ಮಾತ್ರ ತೆರೆದಿಡಬೇಕು. ಈ ದಿಕ್ಕಿನಿಂದ ಬರುವ ನಕಾರಾತ್ಮಕ ಗಾಳಿಯು ಮನೆಯ ಸದಸ್ಯರ ಆರೋಗ್ಯ ಮತ್ತು ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಉತ್ತರ ದಿಕ್ಕು ಕುಬೇರನ ಆಶೀರ್ವಾದ:

ಮನೆಯ ಉತ್ತರ ದಿಕ್ಕಿನಲ್ಲಿ ಕಿಟಕಿಗಳನ್ನು ಹೊಂದಿರುವುದನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಉತ್ತರ ದಿಕ್ಕು ಸಂಪತ್ತಿನ ಅಧಿದೇವತೆಯಾದ ಕುಬೇರನಿಗೆ ಸೇರಿದ್ದಾಗಿದೆ. ಈ ದಿಕ್ಕಿನಲ್ಲಿ ಕಿಟಕಿಗಳನ್ನು ನಿರ್ಮಿಸುವುದರಿಂದ ಮನೆಯಲ್ಲಿ ಆರ್ಥಿಕ ಪ್ರಗತಿ ಕಂಡುಬರುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಈ ಕಿಟಕಿಗಳನ್ನು ಪ್ರತಿದಿನ ನಿಯಮಿತವಾಗಿ ತೆರೆಯುವುದರಿಂದ ಮನೆಯೊಳಗೆ ಸದಾ ಲಕ್ಷ್ಮಿಯ ಕೃಪೆ ಇರುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಪೂರ್ವ ದಿಕ್ಕು ಸಕಾರಾತ್ಮಕತೆಯ ಸಂಕೇತ:

ಪೂರ್ವಕ್ಕೆ ಮುಖ ಮಾಡಿರುವ ಕಿಟಕಿಗಳನ್ನು ಹೊಂದಿರುವುದು ಕೂಡ ವಾಸ್ತು ಪ್ರಕಾರ ಅತ್ಯಂತ ಶ್ರೇಷ್ಠ. ಪೂರ್ವ ದಿಕ್ಕಿನಿಂದ ಬರುವ ಸೂರ್ಯನ ಮೊದಲ ಕಿರಣಗಳು ಮನೆಯೊಳಗೆ ಪ್ರವೇಶಿಸಿದಾಗ, ಅದು ಇಡೀ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸಿ, ಅಪಾರ ಸಕಾರಾತ್ಮಕತೆಯನ್ನು ತರುತ್ತದೆ. ಇದು ಮನೆಯಲ್ಲಿರುವವರ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

ಕಿಟಕಿಗಳ ಸಂಖ್ಯೆ ಸಮವಾಗಿರಲಿ:

ಮನೆ ನಿರ್ಮಾಣ ಮಾಡುವಾಗ ಕಿಟಕಿಗಳ ಒಟ್ಟು ಸಂಖ್ಯೆಯ ಕಡೆಗೂ ಗಮನ ಹರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಒಟ್ಟು ಕಿಟಕಿಗಳ ಸಂಖ್ಯೆಯು ಯಾವಾಗಲೂ ಸಮ ಸಂಖ್ಯೆಯಲ್ಲಿರಬೇಕು (ಉದಾಹರಣೆಗೆ 2, 4, 6, 8, 10 ಇತ್ಯಾದಿ). ಯಾವುದೇ ಕಾರಣಕ್ಕೂ ಬೆಸ ಸಂಖ್ಯೆಯಲ್ಲಿ (Odd Numbers) ಕಿಟಕಿಗಳು ಇರಬಾರದು. ಬೆಸ ಸಂಖ್ಯೆಯ ಕಿಟಕಿಗಳು ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣವಾಗಿ, ಅನಗತ್ಯ ಖರ್ಚು ಹಾಗೂ ಕೌಟುಂಬಿಕ ಕಲಹಗಳನ್ನು ಉಂಟುಮಾಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ! – Kannada News | Bengaluru Ola And Uber Drivers demand Hike fare Over petrol and diesel price Hiked

ಬೆಂಗಳೂರು, (ಮೇ 17): ಪೆಟ್ರೋಲ್, ಡೀಸೆಲ್ (petrol and diesel price Hiked) ಹಾಗೂ ಸಿಎನ್​​ಜಿ ದರ ಏರಿಕೆ ಹಿನ್ನೆಲೆಯಲ್ಲಿ ಕ್ಯಾಬ್, ಟ್ಯಾಕ್ಸಿ (Ola And Uber) ದರವನ್ನು ಏರಿಸಲು ಸಂಘಟನೆಗಳು ಮುಂದಾಗಿವೆ. 1 ಕಿಲೋಮೀಟರ್​​ ಗೆ 5 ರಿಂದ 10 ರೂಪಾಯಿ ಹೆಚ್ಚಿಸುವಂತೆ ಓಲಾ, ಉಬರ್ ಚಾಲಕರು ಅಗ್ರಿಗೇಟರ್ ಕಂಪನಿ ಹಾಗೂ ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿದರೆ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವುದಂತೂ ಗ್ಯಾರಂಟಿ.

ಬೆಂಗಳೂರಲ್ಲಿ RTO ನಿಗದಿ ಪಡಿಸಿರುವ ದರಗಳು ಹೀಗಿವೆ

  • 10 ಲಕ್ಷಕ್ಕಿಂತ ಕಡಿಮೆ ವಾಹನಗಳು: ಕನಿಷ್ಠ 100 ರೂಪಾಯಿ (ನಾಲ್ಕು ಕಿ.ಮೀಟರ್), ಪ್ರತಿ ಕಿ.ಮೀಟರ್ ಗೆ 24 ರೂಪಾಯಿ.
  • 10-15 ಲಕ್ಷ ರೂಪಾಯಿ ವಾಹನ: ಕನಿಷ್ಠ 115 ರೂಪಾಯಿ, ಪ್ರತಿ ಕಿ.ಮೀಟರ್ ಗೆ 28 ರೂಪಾಯಿ.
  • 15 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನ: ಕನಿಷ್ಠ 130 ರೂಪಾಯಿ, ಪ್ರತಿ ಕಿ.ಮೀಟರ್ ಗೆ 32 ರೂಪಾಯಿ ನಿಗದಿಪಡಿಸಲಾಗಿದೆ.

ಆದರೆ, ಒಲಾ, ಉಬರ್, ಅಗ್ರಿಗೇಟರ್ ಗಳು ಪ್ರತಿ ಕಿ.ಮೀಟರ್ ಗೆ ವಾಹನ ಮಾಲೀಕರಿಗೆ 10ರಿಂದ 12 ರುಪಾಯಿ, ಪೀಕ್ ಅವರ್ ನಲ್ಲಿ 20 ರುಪಾಯಿ ಮಾತ್ರ ನೀಡುತ್ತಿವೆ. ಇದಕ್ಕೆ ಕ್ಯಾಬ್ ಚಾಲಕ ಸಂಘಟನೆಗಳ ಅಸಮಾಧಾನ ಹೊರಹಾಕಿದ್ದು, ಡಿಸೇಲ್ ದರ ಏರಿಕೆ ಆಗಿರುವುದರಿಂದ ಕಿಮೀ ಮೇಲೆ 5 ರಿಂದ 10 ರುಪಾಯಿ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ಅಬ್ಬರದ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್​​: ಖಾಸಗಿ ಬಸ್​​ಗಳ ಟಿಕೆಟ್​​ ದರವೂ ಹೆಚ್ಚಳ

ಖಾಸಗಿ ಬಸ್ , ಖಾಸಗಿ ಶಾಲಾ ವಾಹನ ಆಯ್ತು, ಈಗ ಓಲಾ, ಉಬರ್ ಟ್ಯಾಕ್ಸಿಗಳ ಸರದಿ. ಹೀಗಾಗಿ ಕ್ಯಾಬ್, ಟ್ಯಾಕ್ಸಿ ಚಾಲಕರು, ಸಿಲಿಕಾನ್ ಸಿಟಿ ಜನರಿಗೆ ಶಾಕ್ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ,

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತೆ ಕಿಡ್ನಾಪ್ ವೇಳೆ ಅಡ್ಡ ಬಂದ ವ್ಯಕ್ತಿಯ ಕೊಲೆ: ಕೊನೆಗೂ ಸಿಕ್ಕಿಬಿದ್ದ ಲವ್ ಬರ್ಡ್ಸ್ ಹಾಗೂ ಹಂತಕರು! – Kannada News | Raichur: Kidnapping and Murder Case Cracked: Police Arrest lovers and Killers

ರಾಯಚೂರು, ಮೇ 17: ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ (kill) ಹಾಗೂ ಅಪ್ರಾಪ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅನ್ಯಧರ್ಮದ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದನ್ನು ಪ್ರಶ್ನಿಸಿದಕ್ಕೆ ಗ್ರಾಮಸ್ಥನನ್ನೇ ಕೊಲೆ ಮಾಡಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಲವ್ ಬರ್ಡ್ಸ್ (Lovebirds)
​​​ ಮತ್ತು ಆತನ ಗ್ಯಾಂಗ್ ಅನ್ನು ಯಾಪಲದಿನ್ನಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಅಪ್ರಾಪ್ತೆಯನ್ನು ಕರೆದೊಯ್ಯುವಾಗ ಅಡ್ಡಿಪಡಿಸಿದ್ದ ವ್ಯಕ್ತಿಯ ಕೊಲೆ
  • ಮಹಾರಾಷ್ಟ್ರದ ಸೋಲಾಪುರದಲ್ಲಿ ಆರೋಪಿಗಳು ಲಾಕ್​​
  • ಆರೋಪಿಗಳು ಕಂಬಿ ಹಿಂದೆ; ಅಪ್ರಾಪ್ತೆ ಬಾಲ‌ಮಂದಿರಕ್ಕೆ ಶಿಫ್ಟ್

ಏನಿದು ಘಟನೆ?

ಮೇ 5ರಂದು ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಸ್ಲಂ ಎಂಬಾತ ಕರೆದೊಯ್ಯುತ್ತಿದ್ದ. ರಾತ್ರಿ 2 ಗಂಟೆ ಸಮಯ. ಯಾಪಲದಿನ್ನಿ ಗ್ರಾಮದ ಜನ ಗಾಢ ನಿದ್ರೆಯಲ್ಲಿದ್ದರು.  ಅದರಲ್ಲೂ ಸೆಕೆ ಹಿನ್ನಲೆ ಜನರು ಮನೆ ಮಾಳಿಗೆ ಮೇಲೆ ಮಲಗುತ್ತಾರೆ. ಅದೇ ರೀತಿ ಈಶಪ್ಪ ತಮ್ಮ ಮನೆ ಮೇಲೆ ಮಲಗಿದ್ದರು. ತಡ ರಾತ್ರಿ ಮನೆ ಹಿಂಭಾಗದಲ್ಲಿ ಯಾರೋ ಓಡಾಡುವುದು, ಗುಸುಗುಸು ಮಾತನಾಡುವುದು ಕೇಳಿಸಿದೆ. ಹೀಗಾಗಿ ಕೆಳಕ್ಕೆ ಓಡಿ ಬಂದಿದ್ದ ಈಶಪ್ಪ ಅಲ್ಲಿದ್ದವರನ್ನ ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಪ್ರಿಯಕರ ಆಸ್ಲಂ ಹಾಗೂ ಆತನ ಸ್ನೇಹಿತ ಹುಸೇನ್ ಸೇರಿ ಈಶಪ್ಪನ ಕತ್ತಿಗೆ ಹಗ್ಗ ಬಿಗಿದು, ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದರು.

ಮೂರು ರಾಜ್ಯ ಸುತ್ತಿದ ಹಂತಕರು

ಕೊಲೆಗೃತ್ಯದ ಬಳಿಕ ಜಮೀರ್ ಹಾಗೂ ಬಡೇಸಾಬ್ ಎಂಬ ಇನ್ನಿಬ್ಬರು ಆರೋಪಿಗಳ ಸಹಾಯದಿಂದ ಅಪ್ರಾಪ್ತೆಯನ್ನು ಕರೆದುಕೊಂಡು ಪ್ರಿಯಕರ ಎಸ್ಕೇಪ್ ಆಗಿದ್ದ. ಯಾಪಲದಿನ್ನಿಯಿಂದ ತೆಲಂಗಾಣದ ಗದ್ವಾಲ್, ಅಲ್ಲಿಂದ ಆಂಧ್ರಪ್ರದೇಶದ ಕರ್ನೂಲ್ ಹಾಗೂ ಹೈದರಾಬಾದ್ ಮೂಲಕ ಮಹಾರಾಷ್ಟ್ರದ ಸೋಲಾಪುರ ತಲುಪಿ ತಲೆಮರೆಸಿಕೊಂಡಿದ್ದರು.

ಇದನ್ನೂ ಓದಿ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!

ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಯಾಪಲದಿನ್ನಿ ಪೊಲೀಸರು ಸದ್ಯ ಸೋಲಾಪುರದಲ್ಲಿ ಅಡಗಿದ್ದ ಮುಖ್ಯ ಆರೋಪಿ ಆಸ್ಲಂ, ಹುಸೇನ್, ಜಮೀರ್ ಹಾಗೂ ಬಡೇಸಾಬ್‌ನನ್ನು ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ. ಸದ್ಯ ಯಾಪಲದಿನ್ನಿ ಠಾಣೆಯಲ್ಲಿ ಕೊಲೆ, ಕಿಡ್ನಾಪ್ ಹಾಗೂ ಪೋಕ್ಸೋ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಇನ್ನು ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karthyayani Amma: 90ನೇ ವಯಸ್ಸಿನಲ್ಲಿ ಅಕ್ಷರ ಕಲಿತು, ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ ಪಡೆದ ಕೇರಳದ ಮಾದರಿ ಮಹಿಳೆ – Kannada News | Karthyayani Amma: Kerala’s 90 Year Old Literacy Icon Inspires Millions to Learn

ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ

ತಿರುವನಂತಪುರಂ: “ಕಲಿಯುವುದಕ್ಕೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಮನಸ್ಸಿದ್ದರೆ ಮಾರ್ಗ” ಎಂಬುದನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದ ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ. ಬಾಲ್ಯದಿಂದಲೂ ಓದಬೇಕೆಂಬ ತೀವ್ರ ಹಂಬಲವಿದ್ದರೂ, ಬಡತನದ ಕಾರಣದಿಂದಾಗಿ ಬರೋಬ್ಬರಿ 90 ವರ್ಷಗಳ ಕಾಲ ಅಕ್ಷರ ಲೋಕದಿಂದ ವಂಚಿತರಾಗಿದ್ದ ಈ ಅಜ್ಜಿ, ತಮ್ಮ ಇಳಿ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿ ಇಂದಿನ ಯುವ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ.

ಬಾಲ್ಯದ ಕಣ್ಣೀರು ಮತ್ತು 90 ವರ್ಷಗಳ ಅನಕ್ಷರತೆ:

ಕೇರಳದ ಬಡ ಕುಟುಂಬವೊಂದರಲ್ಲಿ ಜನಿಸಿದ ಕಾರ್ತ್ಯಾಯಿನಿ ಅವರಿಗೆ ಚಿಕ್ಕಂದಿನಲ್ಲೇ ತಂದೆಯ ನೆರಳು ದೂರವಾಯಿತು. ತಂದೆಯ ಮರಣದ ನಂತರ ಕುಟುಂಬ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಒಂದು ಹೊತ್ತಿನ ಗಂಜಿಗೂ ಪರದಾಡುವಂತಿದ್ದ ಪರಿಸ್ಥಿತಿಯಲ್ಲಿ, ಶಾಲೆಗೆ ಹೋಗುವುದು ಕೇವಲ ಕನಸಾಗಿಯೇ ಉಳಿಯಿತು. ಬದುಕಿನ ಬಂಡಿ ಸಾಗಿಸಲು ಹಗಲಿರುಳು ಕಷ್ಟಪಟ್ಟ ಕಾರ್ತ್ಯಾಯಿನಿ ಅಮ್ಮ, ಕಷ್ಟಗಳ ಸುಳಿಯಲ್ಲೇ ಸಿಲುಕಿ 90 ವರ್ಷ ವಯಸ್ಸಾಗುವವರೆಗೂ ಅನಕ್ಷರಸ್ಥರಾಗಿಯೇ ಉಳಿದುಬಿಟ್ಟರು.

ಬದುಕಿಗೆ ತಿರುವು ನೀಡಿದ ‘ಸಾಕ್ಷರತಾ ಮಿಷನ್’:

ತೊಂಬತ್ತರ ಹರೆಯದಲ್ಲಿದ್ದ ಕಾರ್ತ್ಯಾಯಿನಿ ಅಮ್ಮ ಅವರ ಬದುಕಿನಲ್ಲಿ ಮಹತ್ತರ ತಿರುವು ಸಿಕ್ಕಿದ್ದೇ ಕೇರಳ ಸರ್ಕಾರ ಜಾರಿಗೆ ತಂದ ‘ವಯಸ್ಕ ಸಾಕ್ಷರತಾ ಮಿಷನ್’ ಮೂಲಕ. ಅಜ್ಜಿಯ ಅದಮ್ಯ ಉತ್ಸಾಹವನ್ನು ಕಂಡ ಸಾಕ್ಷರತಾ ಮಿಷನ್‌ನ ಸ್ವಯಂಸೇವಕರು ಮತ್ತು ಶಿಕ್ಷಕರು, ಅವರ ಮನೆಗೇ ಬಂದು ಪಾಠ ಮಾಡಲು ಆರಂಭಿಸಿದರು. ಹರಿಪಾಡ್‌ನಲ್ಲಿರುವ ತಮ್ಮ ಪುಟ್ಟ ಮನೆಯಲ್ಲಿ ಕೂತು ಕಾರ್ತ್ಯಾಯಿನಿ ಅಮ್ಮ ದಿನವೂ ಶ್ರದ್ಧೆಯಿಂದ ಓದುವುದು, ಬರೆಯುವುದು ಮತ್ತು ಗಣಿತದ ಲೆಕ್ಕಗಳನ್ನು ಕಲಿಯುವುದರಲ್ಲಿ ಮುಳುಗಿಹೋಗುತ್ತಿದ್ದರು. 90 ದಾಟಿದ ಅಜ್ಜಿಯ ಈ ಶ್ರದ್ಧೆಯನ್ನು ಕಂಡು ಅವರ ಸಂಬಂಧಿಕರೇ ಮೂಗಿನ ಮೇಲೆ ಬೆರಳಿಟ್ಟಿದ್ದರು. ತರಗತಿಗಳಿಗೆ ಒಂದೂ ದಿನ ರಜೆ ಹಾಕದ ಅವರ ಶಿಸ್ತು, 19 ವರ್ಷದ ಕಾಲೇಜು ವಿದ್ಯಾರ್ಥಿಯನ್ನೂ ನಾಚಿಸುವಂತಿತ್ತು!

ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ: ದೇಶಾದ್ಯಂತ ಹರಿದ ಪ್ರಶಂಸೆಯ ಮಹಾಪೂರ!

ಕಾರ್ತ್ಯಾಯಿನಿ ಅಮ್ಮ ಅವರ ಸಾಧನೆ ಕೇವಲ ಓದು ಬರಹ ಕಲಿಯುವುದಕ್ಕಷ್ಟೇ ಸೀಮಿತವಾಗಲಿಲ್ಲ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಅವರು 100 ಕ್ಕೆ 98 ಅಂಕಗಳನ್ನು ಗಳಿಸುವ ಮೂಲಕ ದೇಶಾದ್ಯಂತ ಹೊಸ ದಾಖಲೆ ಬರೆದರು. ಈ ವಿಸ್ಮಯಕಾರಿ ಫಲಿತಾಂಶ ಹೊರಬೀಳುತ್ತಿದ್ದಂತೆ ದೇಶದ ರಾಜಕಾರಣಿಗಳು, ಶಿಕ್ಷಣ ತಜ್ಞರು ಮತ್ತು ಗಣ್ಯರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾರ್ತ್ಯಾಯಿನಿ ಅಮ್ಮ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದಿಸಿದರಲ್ಲದೆ, “ಇಂದಿನ ಇಡೀ ಸಮಾಜಕ್ಕೆ ಇವರೇ ನಿಜವಾದ ಸ್ಫೂರ್ತಿ” ಎಂದು ಕೊಂಡಾಡಿದರು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ರಾಷ್ಟ್ರಪತಿಗಳಿಂದ ಸಿಕ್ಕಿತ್ತು ‘ನಾರಿ ಶಕ್ತಿ ಪುರಸ್ಕಾರ’:

ಅಜ್ಜಿಯ ಓದಿನ ಆಸಕ್ತಿಯನ್ನು ಗಮನಿಸಿದ ಸಾಕ್ಷರತಾ ಮಿಷನ್ ಅಧಿಕಾರಿಗಳು ಅವರಿಗೆ ವಿಶೇಷ ಕಾಳಜಿಯಿಂದ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಓದಲು ಪ್ರೋತ್ಸಾಹಿಸಿದರು. ಇವರ ಈ ಅದ್ವಿತೀಯ ಸಾಧನೆಗಾಗಿ ಭಾರತ ಸರ್ಕಾರದ ಅತ್ಯುನ್ನತ ‘ನಾರಿ ಶಕ್ತಿ ಪುರಸ್ಕಾರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಠ್ಯಪುಸ್ತಕದಲ್ಲಿ ಸೇರಿದ ‘ಅಕ್ಷರ ಯೋಗಿ’ಯ ಪಾಠ:

ತಮ್ಮ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಕಲಿಯುವ ಆಸಕ್ತಿ ಹೊಂದಿದ್ದ ಕಾರ್ತ್ಯಾಯಿನಿ ಅಮ್ಮ ಅವರು 2023 ರಲ್ಲಿ, ತಮ್ಮ 107ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಜೀವನದ ಈ ರೋಚಕ ಯಶೋಗಾಥೆಯನ್ನು ಕೇರಳದ ವಯಸ್ಕ ಸಾಕ್ಷರತಾ ಮಿಷನ್ ಕಾರ್ಯಕ್ರಮಗಳಲ್ಲಿ ಇಂದು ಒಂದು ವಿಶೇಷ ಪಾಠವಾಗಿ ಅಳವಡಿಸಲಾಗಿದೆ. ಯಾವುದೇ ಸೌಕರ್ಯಗಳಿಲ್ಲದಿದ್ದರೂ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕಾರ್ತ್ಯಾಯಿನಿ ಅಮ್ಮ ಅವರ ಜೀವನವೇ ಒಂದು ದಿವ್ಯ ದೀವಿಗೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು; ಸಿಸಿಟಿವಿಯಲ್ಲಿ ಸೆರೆ

ಇಂಡೋನೇಷ್ಯಾ: ‘ಕನ್ಶಾ ಗಾಡಿಂಗ್ ಸರ್ಪಾಂಗ್’ (Kansha Gading Serpong) ರೆಸ್ಟೋರೆಂಟ್ ಒಳಗೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ರೆಸ್ಟೋರೆಂಟ್ ಒಳಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

 

ಇದನ್ನೂ ಓದಿ: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version