ಬೆಂಗಳೂರು ಏರ್ಪೋರ್ಟ್ ಬಳಿಯ ಹೋಟೆಲ್ನಲ್ಲಿ ಘೋರ ದುರಂತ: ಇಬ್ಬರು ಮಕ್ಕಳನ್ನ ಕೊಂದ ತಂದೆ – Kannada News | A Father attempts Suicide after Killed His two daughters In taj Hotel Near Bengaluru Airport
ಬೆಂಗಳೂರು, (ಆಗಸ್ಟ್ 10): ಕೆಂಪೇಗೌಡ ವಿಮಾಣ ನಿಲ್ದಾಣ (kempegowda international airport) ಬಳಿಕ ತಾಜ್ ಹೋಟೆಲ್ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನ ನೇಣುಹಾಕಿ ಕೊಂದು ಬಳಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇಮ್ರಾನ್ ಎಂಬಾತ ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಜ್ ಹೋಟೆಲ್ನ 4ನೇ ಮಹಡಿಯ ರೂಮ್ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಮಕ್ಕಳನ್ನ ಶೇಕ್ ಜೆಹರಾ (5 ವರ್ಷ), ಶೇಕ್ ಜೋಯಾ (10 ವರ್ಷ)…