ಅಡ್ಡ ಮತದಾನದ ಭೀತಿ: ರೆಸಾರ್ಟ್​​​ನಲ್ಲಿ ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ – Kannada News | Karnataka MLC Elections 2026: Voting Training To Congress MLAs In Resort

ರಾಮನಗರ, (ಜೂನ್ 17): ವಿಧಾನ ಪರಿಷತ್ ಚುನಾವಣೆ (MLC polls) ನಾಳೆ ಅಂದರೆ ಜೂನ್ 18ರಂದು ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳ ಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ಸ್ಪರ್ಧೆ ಗೋವಿಂದ ಏರ್ಪಟ್ಟಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಡ್ಡ ಮತದಾನ ಆಗಬಾರದು ಹಾಗೂ ಮತ ಅಸಿಂಧುಗೊಳ್ಳದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಿದ್ದು, ಈ ಸಂಬಂಧ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ಅಣುಕು ಮತದಾನ ಪ್ರಕ್ರಿಯೆ ನಡೆಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಸ್ತುಗಳನ್ನು ಬೆರೆಸಿದ ನೀರಿನಲ್ಲಿ ನೆಲ ಒರೆಸುವುದರಿಂದ ಜಿರಳೆ, ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು‌ – Kannada News | Use these simple cleaning tricks to get rid of lizards and cockroaches

ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಕೊಳಕು ಮತ್ತು ಧೂಳು ಮಾತ್ರವಲ್ಲ ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಹಲ್ಲಿಗಳು (lizards) ಮತ್ತು ಜಿರಳೆಗಳ ಕಾಟ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತವೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಈ ಉತ್ಪನ್ನಗಳು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ. ಆದ್ದರಿಂದ, ಪ್ರತಿನಿತ್ಯ ನೆಲ ಒರೆಸುವಾಗ ಆ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸಿ, ಆ ನೀರಿನಲ್ಲಿ ನೆಲವನ್ನು ಒರೆಸಿ.  ಇದು ನಿಮ್ಮ ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲದೆ ಹಲ್ಲಿಗಳು ಮತ್ತು ಜಿರಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮನೆಯಿಂದ ಕೀಟಗಳನ್ನು ಓಡಿಸಲು ನೆಲ ಒರೆಸುವ ನೀರಿಗೆ ಏನು ಬೆರೆಸಬೇಕು?

ನಿಂಬೆ ರಸ: ಹಲ್ಲಿಗಳು ಮತ್ತು ಜಿರಳೆಗಳು ನಿಂಬೆಹಣ್ಣಿನಲ್ಲಿರುವ ಬಲವಾದ ಸಿಟ್ರಿಕ್ ಆಮ್ಲದ ವಾಸನೆಯನ್ನು ಇಷ್ಟಪಡುವುದಿಲ್ಲ. ಎರಡು ಚಮಚ ನಿಂಬೆ ರಸವನ್ನು ಒರೆಸುವ ನೀರಿನಲ್ಲಿ ಬೆರೆಸಿ ನೆಲವನ್ನು ಸ್ವಚ್ಛಗೊಳಿಸುವುದರಿಂದ ಮನೆಯೂ ತಾಜಾವಾಗಿರುತ್ತದೆ, ಕೀಟಗಳ ಕಾಟವೂ ಇರೋದಿಲ್ಲ.

ಪುದೀನಾ ಎಣ್ಣೆ: ಈ ಎಣ್ಣೆ ಅತ್ಯುತ್ತಮ ನೈಸರ್ಗಿಕ ಕೀಟ ನಿವಾರಕವಾಗಿದೆ. ಹಲ್ಲಿಗಳು ಮತ್ತು ಜಿರಳೆಗಳು ಇದರ ವಾಸನೆಯನ್ನು ಸಹಿಸುವುದಿಲ್ಲ. ನೆಲ ಒರೆಸುವ ನೀರಿಗೆ 8-10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ನೆಲ ಒರೆಸಿ, ಇದು ಕೂಡ ಹಲ್ಲಿ, ಜಿರಳೆ, ಕೀಟಗಳನ್ನು ದೂರವಿಡಲು ಸಹಕಾರಿ.

ಕರ್ಪೂರ: ಕರ್ಪೂರದ ಪರಿಮಳವು ಕೀಟಗಳು ಮತ್ತು ಹಲ್ಲಿಗಳು ಮನೆಯೊಳಗೆ ಬರುವುದನ್ನು ತಡೆಯುತ್ತದೆ. ಅದಕ್ಕಾಗಿ ಕರ್ಪೂರ ಬೆರೆಸಿದ ನೀರಿನಲ್ಲಿ ನೆಲ ಒರೆಸಿ.

ವಿನೆಗರ್: ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜಿರಳೆಗಳು ಅದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಮಾಪ್ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸುವುದರಿಂದ ಹಲ್ಲಿಗಳು ಮತ್ತು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಬೇವಿನ ಎಣ್ಣೆ:  ಬೇವಿನ ಎಣ್ಣೆ ನೈಸರ್ಗಿಕ ಕೀಟ ನಿವಾರಕವಾಗಿದೆ. ನೀರಿಗೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಜಿರಳೆಗಳು ಮತ್ತು ಇತರ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ

ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆಯ ಪರಿಮಳವು ಹಲ್ಲಿಗಳು ಮತ್ತು ಜಿರಳೆಗಳಿಗೆ ಇಷ್ಟವಾಗುವುದಿಲ್ಲ. 10-12 ಹನಿಗಳನ್ನು ನೀರಿನೊಂದಿಗೆ ಬೆರೆಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಮನೆ ತಾಜಾವಾಗಿರುತ್ತದೆ ಮತ್ತು ಕೀಟಗಳ ಕಾಟವೂ ಇರೋದಿಲ್ಲ.

ಅರಿಶಿನ: ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ನೆಲ ಒರೆಸುವ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸುವುದರಿಂದ ನಿಮ್ಮ ಮನೆ ಸ್ವಚ್ಛವಾಗಿರುವುದಲ್ಲದೆ ಮತ್ತು ಹಲ್ಲಿ, ಕೀಟಗಳ ಕಾಟವೂ ಇರೋದಿಲ್ಲ.

ಕಲ್ಲು ಉಪ್ಪು: ಕಲ್ಲು ಉಪ್ಪು ಹಲ್ಲಿಗಳು ಮತ್ತು ಜಿರಳೆಗಳು ಇಷ್ಟಪಡದ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇದು ಅವುಗಳ ವಾಸನೆಯ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಆ ಪ್ರದೇಶದಿಂದ ದೂರವಿರುವಂತೆ ಮಾಡುತ್ತದೆ. ಹಾಗಾಗಿ ನೆಲ ಒರೆಸುವ ನೀರಿಗೆ ಕಲ್ಲು ಉಪ್ಪು ಸೇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂಟ್ಯೂಬ್​​ನ ಜನಪ್ರಿಯ ಮತ್ತು ವಿವಾದಾತ್ಮಕ ಶೋಗೆ ಗಾಳ ಹಾಕಿದ ಒಟಿಟಿ – Kannada News | Samay Raina’s India got latent season 2 be stream on Netflix

ಸಾಕಷ್ಟು ಜನಪ್ರಿಯತೆ ಗಳಿಸಿ ಬಳಿಕ ದೊಡ್ಡ ವಿವಾದವಾಗಿ ನಿಂತು ಹೋಗಿದ್ದ ‘ಇಂಡಿಯಾ ಗಾಡ್ ಲೇಟೆಂಟ್’ (India Got Latent) ಹಾಸ್ಯ ಪ್ರಧಾನ ರಿಯಾಲಿಟಿ ಶೋ ಇದೀಗ ಮತ್ತೆ ಬರುತ್ತಿದೆ. ಶೋ ಅನ್ನು ಪ್ರಾರಂಭಿಸಿದ್ದ ಸಮಯ್ ರೈನಾ ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದ ಶೋನಲ್ಲಿ ತಾವು ಮತ್ತೆ ಇಂಡಿಯಾ ಗಾಟ್ ಲೇಟೆಂಟ್ ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದರು. ಹೊಸ ಸೀಸನ್​​ನ ಚಿತ್ರೀಕರಣ ಆಗುತ್ತಿರುವ ಫೋಟೊಗಳು ಸಹ ಕೆಲವು ವೈರಲ್ ಆಗಿದ್ದವು. ಸಮಯ್ ರೈನಾ ಅಭಿಮಾನಿಗಳು ಸಹ ಶೋನ ಹೊಸ ಸೀಸನ್ ನೋಡಲು ಉತ್ಸುಕರಾಗಿದ್ದರು. ಆದರೆ ಈ ಶೋ ಈ ಬಾರಿ ಯೂಟ್ಯೂಬ್​​ನಲ್ಲಿ ಬರುತ್ತಿಲ್ಲ ಬದಲಿಗೆ ನೇರವಾಗಿ ಒಟಿಟಿಗೆ ಬರಲಿದೆ.

‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ. ಲೇಟೆಂಟ್ ಶೋ ತನ್ನ ಅನ್​​ಫಿಲ್ಟರ್ಡ್ ಮಾತುಗಳು, ವಿಪರೀತ ತರ್ಲೆ, ಕಾಲೆಳೆತಗಳಿಂದಾಗಿ ಭಾರಿ ಜನಪ್ರಿಯತೆ ಗಳಿಸಿತ್ತು. ಕೊನೆಗೆ ಈ ಅನ್​ಫಿಲ್ಟರ್ಡ್ ಮಾತಿನಿಂದಲೇ ಶೋ ವಿರುದ್ಧ ದೂರು ದಾಖಲಾಗಿ ಶೋ ಬಂದ್ ಆಗಿತ್ತು. ಸ್ಟಾಂಡಪ್ ಶೋನಲ್ಲಿ ಮಾತನಾಡಿದ್ದ ಸಮಯ್ ರೈನಾ, ಎರಡನೇ ಸೀಸನ್ ಅನ್ನು ಅದ್ಧೂರಿಯಾಗಿ ತೆರೆಗೆ ತರುವುದಾಗಿ ಹೇಳಿದ್ದರು. ಆದರೆ ಈಗ ಶೋ ನೆಟ್​​ಫ್ಲಿಕ್ಸ್​ ಕೈಸೇರಿದೆ. ಯೂಟ್ಯೂಬ್​​ನಲ್ಲಿ ಉಚಿತವಾಗಿ ನೋಡಬಹುದಾಗಿದ್ದ ಈ ಶೋ ಅನ್ನು ಈಗ ಹಣ ಕೊಟ್ಟ ನೋಡಬೇಕಿದೆ.

ಸಮಯ್ ರೈನಾ ತಮ್ಮ ಶೋ ಅನ್ನು ನೆಟ್​​ಫ್ಲಿಕ್ಸ್​​ಗೆ ನೀಡಿರುವುದನ್ನು ಅವರ ಅಭಿಮಾನಿಗಳು ವಿರೋಧಿಸಿದ್ದಾರೆ. ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಯ್ ರೈನಾ ಹಣದ ಹಿಂದೆ ಹೋಗುತ್ತಿದ್ದಾರೆ ಎಂದೆಲ್ಲ ಟೀಕೆ ಮಾಡಿದ್ದಾರೆ. ಇದರ ಜೊತೆಗೆ ಕೆಲವರು ಶೋನ ಬಗ್ಗೆ ಕಳವಳ ಸಹ ವ್ಯಕ್ತಪಡಿಸಿದ್ದಾರೆ, ‘ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದರೆ ಇದು ಸೆನ್ಸಾರ್ ಆಗುತ್ತದೆಯೇ?”, “ಯೂಟ್ಯೂಬ್‌ನಲ್ಲಿ ಇದ್ದ ಅನ್‌ಫಿಲ್ಟರ್ಡ್ ಹಾಸ್ಯ ಇಲ್ಲಿ ಇರುತ್ತದೆಯೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸಾರ ಆಗುತ್ತಿದ್ದಾಗ ಇದ್ದಿದ್ದ ಮುಕ್ತ ವಾತಾವರಣದಂತೆಯೇ ಈ ಶೋ ಇರಬೇಕೆಂದು ಪ್ರೇಕ್ಷಕರು ಅಪೇಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:ಟಾಸ್ ಗೆದ್ದ ಅಫ್ಘಾನಿಸ್ತಾನ್: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 3 ಬದಲಾವಣೆ

ಕಪಿಲ್ ಶರ್ಮಾ ಶೋ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದಷ್ಟು ಸಮಯ ಭಾರಿ ಜನಪ್ರಿಯತೆ ಗಳಿಸಿತ್ತು. ಮನೆ-ಮನೆಯಲ್ಲೂ ಶೋ ನೋಡುತ್ತಿದ್ದರು. ಆದರೆ ಕೆಲ ವರ್ಷದ ಹಿಂದೆ ಶೋ ಅನ್ನು ನೆಟ್​​ಫ್ಲಿಕ್ಸ್​​ಗೆ ಸ್ಥಳಾಂತರಿಸಲಾಯ್ತು ಬಳಿಕ ಆ ಶೋನ ಜನಪ್ರಿಯತೆ ಧಾರುಣವಾಗಿ ಕುಸಿಯಿತು. ‘ಇಂಡಿಯಾಸ್ ಗಾಟ್ ಲೇಟೆಂಟ್​​’ಗೆ ಈಗ ಭಾರಿ ಜನಪ್ರಿಯತೆ ಇದೆ, ನೆಟ್​​ಫ್ಲಿಕ್ಸ್​ಗೆ ಹೋದ ಬಳಿಕ ಆ ಶೋನ ಜನಪ್ರಿಯತೆಯೂ ಕಡಿಮೆ ಆಗುತ್ತದೆಯೇ ಎಂಬ ಆತಂಕ ಅಭಿಮಾನಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು – Kannada News | Giorgia Meloni Reveals She Quit Smoking Macron Loses Watch G7 Summit Hot mics catch World leaders talks

ಎವಿಯಾನ್, ಜೂನ್ 17: ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅನೇಕ ಗಂಭೀರ ವಿಚಾರಗಳು ಚರ್ಚೆಯಾಗಿವೆ. ಇದರ ಜೊತೆಗೆ ಹಾಸ್ಯಮಯ ಸನ್ನಿವೇಶವೂ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ನಾಯಕರ ತಮಾಷೆಯ ಕ್ಷಣಗಳು ಕೂಡ ರೆಕಾರ್ಡ್ ಆಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಧೂಮಪಾನ ತ್ಯಜಿಸಿದ ರಹಸ್ಯ ಬಿಚ್ಚಿಟ್ಟಿರುವುದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮರೆತುಹೋದ ವಾಚ್ ಮೇಲೆ ಟ್ರಂಪ್ ಕಣ್ಣು, ಫಿಫಾ ವಿಶ್ವಕಪ್ ಕುರಿತ ನಾಯಕರ ಹರಟೆ ಮುಂತಾದ ಕ್ಷಣಗಳು ಸೆರೆಯಾಗಿವೆ.

ಮಂಗಳವಾರದ ಜಿ7 ಸಭೆಯ ಮುನ್ನ ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ, “ಇವತ್ತು ಬೆಳಗ್ಗೆ ಸಿಗರೇಟ್ ಸೇದಿದ್ದೀರಾ?” ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಮೆಲೋನಿ, “ನಾನು ಕಳೆದ ಮೇ 1ರಿಂದ ಸಿಗರೇಟ್ ಮುಟ್ಟಿಲ್ಲ, ಧೂಮಪಾನ ಬಿಟ್ಟಿದ್ದೇನೆ!” ಎಂದು ಉತ್ತರಿಸಿದ್ದಾರೆ. ಇದು ಆಕಸ್ಮಿಕವಾಗಿ ಆನ್ ಆಗಿದ್ದ ಅವರ ಮೈಕ್‌ ಮೂಲಕ ಸುತ್ತಲಿದ್ದವರಿಗೆಲ್ಲ ಕೇಳಿದೆ.

ಇದನ್ನು ಕೇಳಿದ ತಕ್ಷಣ ಟೇಬಲ್ ಸುತ್ತ ಕುಳಿತಿದ್ದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜಪಾನ್ ಪ್ರಧಾನಿ ಸನಾ ಇ ಟಕೈಚಿ ಸೇರಿದಂತೆ ಹಲವರು ಜೋರಾಗಿ ಚಪ್ಪಾಳೆ ತಟ್ಟಿ ಮೆಲೋನಿಗೆ ಅಭಿನಂದನೆ ಸಲ್ಲಿಸಿದರು. ಕಾರ್ನಿ ಅವರು, “ಹಾಗಾದರೆ ಏನಾದರೂ ನಿಕೋಟಿನ್ ಪ್ಯಾಚ್ ಬಳಸುತ್ತಿದ್ದೀರಾ?” ಎಂದು ಕೇಳಿದಾಗ, ಮೆಲೋನಿ ಎರಡು ಕೈಗಳನ್ನು ಎತ್ತಿ ನಗುತ್ತಿರುವ ವಿಡಿಯೋ ವೈರಲ್ ಆಗಿದೆ. ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರಿಗೆ ಕೇಳಿದಾಗ, ಕೋಸ್ಟಾ ತಾವು ಕಳೆದ 21 ವರ್ಷಗಳಿಂದ ಸಿಗರೇಟ್ ಮುಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ

ಶೃಂಗಸಭೆಯ ಜಂಟಿ ಮಧ್ಯಾಹ್ನದ ಭೋಜನದ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ವಾಚ್ ಅನ್ನು ಟೇಬಲ್ ಮೇಲೆಯೇ ಮರೆತು ಹೊರನಡೆದಿದ್ದಾರೆ. ಇದನ್ನು ಗಮನಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, “ಮ್ಯಾಕ್ರಾನ್ ವಾಚ್ ಇಲ್ಲೇ ಬಿಟ್ಟು ಹೋಗಿದ್ದಾರೆ, ಈಗ ಅದು ನಮ್ಮ ಬಳಿ ಇದೆ” ಎಂದು ತಮಾಷೆ ಮಾಡಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅವನು ಬಿಟ್ಟು ಹೋಗಿದ್ದರೆ ಅದನ್ನು ನನಗೆ ಕೊಟ್ಟುಬಿಡಿ, ಕೊಡಿ ಇಲ್ಲಿ!” ಎಂದು ತಮಾಷೆಯಾಗಿ ಹೇಳಿದ್ದು ಕೇಳಿ ಸುತ್ತಲಿದ್ದ ನಾಯಕರು ನಗುತ್ತಿರುವುದು ಕೂಡ ರೆಕಾರ್ಡ್ ಆಗಿದೆ.

ಮೆಲೋನಿ-ಮೋದಿ ತಮಾಷೆ:

ಜಾಗತಿಕವಾಗಿ ಸದಾ ಸದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರ ‘ಮೆಲೋಡಿ’ (Melodi) ಜುಗಲ್‌ಬಂದಿ ಜಿ7 ಶೃಂಗಸಭೆಯಲ್ಲೂ ಮುಂದುವರಿದಿದೆ. ಗ್ರೂಪ್ ಫೋಟೋಗೂ ಮುನ್ನ ಮೋದಿ ಅವರನ್ನು ಬರಮಾಡಿಕೊಂಡ ಮೆಲೋನಿ, “ನಿಮ್ಮನ್ನು ಮತ್ತೆ ಭೇಟಿಯಾಗಿದ್ದು ಸಂತೋಷ ತಂದಿದೆ” ಎಂದಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ನಗುತ್ತಾ ‘ಇನ್‌ಸ್ಟಾಗ್ರಾಮ್’ ಎಂದು ಪ್ರಸ್ತಾಪಿಸಿದಾಗ, ಮೆಲೋನಿ ತಕ್ಷಣವೇ, “ಹೌದು, ನಾವಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಜನಪ್ರಿಯ ಜೋಡಿ!” ಎಂದು ಉತ್ತರಿಸಿ ನಕ್ಕಿದ್ದಾರೆ.

ಇದನ್ನೂ ಓದಿ: ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಪ್ರಧಾನಿ ಮೋದಿ ಭೇಟಿ, ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹತ್ವದ ಮಾತುಕತೆ

ಪ್ರಸ್ತುತ ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ (FIFA) ವಿಶ್ವಕಪ್ ಕುರಿತು ಕೂಡ ಜಾಗತಿಕ ನಾಯಕರು ಮುಕ್ತವಾಗಿ ಹರಟೆ ಹೊಡೆದಿದ್ದಾರೆ. ಫ್ರಾನ್ಸ್ ತಂಡದ ಬೆಂಬಲದ ಘೋಷಣೆಗಳು ಕೇಳಿಬಂದರೆ, ಸ್ಪೇನ್ ವಿರುದ್ಧ ಕೇಪ್ ವರ್ಡೆ ತಂಡ 0-0 ಗೋಲುಗಳಿಂದ ಪಂದ್ಯ ಡ್ರಾ ಮಾಡಿಕೊಂಡಿದ್ದನ್ನು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಆಶ್ಚರ್ಯದಿಂದ ನೆನಪಿಸಿಕೊಂಡಿದ್ದಾರೆ. ಮತ್ತೊಂದೆಡೆ, ಟ್ರಂಪ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಮಾತನಾಡುತ್ತಾ, ಡೆನ್ಮಾರ್ಕ್ ಅಡಿಯಲ್ಲಿರುವ ಸ್ವಾಯತ್ತ ಪ್ರದೇಶವಾದ ‘ಗ್ರೀನ್‌ಲ್ಯಾಂಡ್’ ಅನ್ನು ಅಮೆರಿಕ ವಶಪಡಿಸಿಕೊಳ್ಳುವ ಹಳೆಯ ವಿವಾದಾತ್ಮಕ ವಿಷಯವನ್ನು ಮತ್ತೆ ರಹಸ್ಯವಾಗಿ ಪ್ರಸ್ತಾಪಿಸಿ ಕುತೂಹಲ ಮೂಡಿಸಿದ್ದಾರೆ.

ಮುಂದಿನ ವರ್ಷ ಫ್ರೆಂಚ್ ಆಲ್ಪ್ಸ್‌ನಲ್ಲಿ ನಡೆಯಲಿರುವ ವಿಶ್ವ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಪ್ರಚಾರಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರು ಶೃಂಗಸಭೆಗೆ ಬಂದಿದ್ದ ಎಲ್ಲ 7 ರಾಷ್ಟ್ರಗಳ ನಾಯಕರಿಗೆ ವಿಶಿಷ್ಟ ವಿನ್ಯಾಸದ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಾಲ್ಫ್ ಹೊರತುಪಡಿಸಿ ಬೇರೆ ಯಾವುದೇ ವ್ಯಾಯಾಮ ಮಾಡದ ಟ್ರಂಪ್ ಈ ಸೈಕಲ್ ಅನ್ನು ಹೇಗೆ ಬಳಸಲಿದ್ದಾರೆ ಎಂಬುದು ಅಲ್ಲಿ ಚರ್ಚೆಗೆ ಗ್ರಾಸವಾಯಿತು. ಇಂತಹ ಹಲವು ಲಘು ಪ್ರಸಂಗಗಳಿಗೆ ಜಿ7 ಶೃಂಗಸಭೆ ಸಾಕ್ಷಿಯಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್​ಗೆ ಟಿಎನ್‌ ಸೀತಾರಾಮ್‌ ಪುತ್ರಿ ಅಶ್ವಿನಿ ನಿರ್ದೇಶನ

Source link

IND vs AFG: ಅಫ್ಘನ್ ಎ ವಿರುದ್ಧ 101 ರನ್​ಗಳಿಂದ ಗೆದ್ದು ಫೈನಲ್​ಗೇರಿದ ಭಾರತ ಎ – Kannada News | India A Defeats Afghanistan A by 101 Runs, Qualifies for Tri Series Final in Dambulla

ಶ್ರೀಲಂಕಾದ ದಂಬಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ಹಾಗೂ ಭಾರತ ಎ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿನ ಗೆಲುವು ಅತ್ಯವಶ್ಯಕವಾಗಿತ್ತು. ಅದರಲ್ಲೂ ಸತತ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಎ ತಂಡ ಫೈನಲ್ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಈ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಎ ತಂಡ 101 ರನ್​ಗಳಿಂದ ಅಫ್ಘಾನಿಸ್ತಾನ ಎ ತಂಡವನ್ನು ಸೋಲಿಸುವ ಮೂಲಕ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಅಧಿಕೃತವಾಗಿ ಫೈನಲ್​ಗೂ ಟಿಕೆಟ್ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ಎ ಕೇವಲ218 ರನ್​ಗಳಿಗೆ ಆಲೌಟ್ ಆಯಿತು.

Source link

ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ; ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ? – Kannada News | Meta announces subscription plans for Facebook, WhatsApp, Instagram premium service

ವಾಷಿಂಗ್ಟನ್, ಜೂನ್ 17: ಮೆಟಾ ಸಂಸ್ಥೆ ತನ್ನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆಗೆ ಹಣ ವಿಧಿಸಲು (Paid Subscriptions) ದಿಢೀರ್ ನಿರ್ಧಾರ ಮಾಡಿದೆ. ಮೆಟಾ ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ನವೋಮಿ ಗ್ಲೈಟ್ (Naomi Gleit) ಅವರು ಜಾಗತಿಕವಾಗಿ ಹೊಸ “ಪ್ಲಸ್” (Plus) ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಸಬ್​ಸ್ಕ್ರಿಪ್ಷನ್ ದರಗಳು ಈ ಕೆಳಕಂಡಂತಿವೆ:

  • ಇನ್‌ಸ್ಟಾಗ್ರಾಮ್ ಪ್ಲಸ್ (Instagram Plus): ತಿಂಗಳಿಗೆ ಸುಮಾರು $3.99 (ಸುಮಾರು ₹377)
  • ಫೇಸ್‌ಬುಕ್ ಪ್ಲಸ್ (Facebook Plus): ತಿಂಗಳಿಗೆ ಸುಮಾರು $3.99 (ಸುಮಾರು ₹377)
  • ವಾಟ್ಸಾಪ್ ಪ್ಲಸ್ (WhatsApp Plus): ತಿಂಗಳಿಗೆ ಸುಮಾರು $2.99 (ಸುಮಾರು ₹282)

ನಿಮ್ಮ ಸದ್ಯದ ಸಾಮಾನ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಆ್ಯಪ್‌ಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಎಕ್ಸ್​ನಲ್ಲಿ ಇರುವ ರೀತಿಯಲ್ಲಿ ಈ ಪ್ಲಾನ್‌ಗಳು ಕೇವಲ ಕೆಲವು ವಿಶೇಷ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಬಳಸಬಯಸುವವರಿಗಾಗಿ ಮಾತ್ರ ತರಲಾಗಿರುವ ಐಚ್ಛಿಕ (Optional) ಯೋಜನೆಗಳಾಗಿವೆ.

ಇದನ್ನೂ ಓದಿ: ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು

ಮೆಟಾ ಇದ್ದಕ್ಕಿದ್ದಂತೆ ಹಣ ವಿಧಿಸುತ್ತಿರುವುದಕ್ಕೆ ಪ್ರಮುಖ ಕಾರಣಗಳೇನು?

ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ತನ್ನ AI ಡೇಟಾ ಸೆಂಟರ್‌ಗಳು ಮತ್ತು ಮೂಲಸೌಕರ್ಯಗಳಿಗಾಗಿ ಈ ವರ್ಷವೊಂದರಲ್ಲೇ ಬರೋಬ್ಬರಿ $125 ಬಿಲಿಯನ್‌ನಿಂದ $145 ಬಿಲಿಯನ್ (ಸುಮಾರು ₹10 ಲಕ್ಷ ಕೋಟಿಗೂ ಅಧಿಕ) ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ಭಾರಿ ವೆಚ್ಚವನ್ನು ಸರಿದೂಗಿಸಲು ಕಂಪನಿಗೆ ಹೊಸ ಆದಾಯದ ಮೂಲಗಳ ಅಗತ್ಯವಿದೆ.

ಇಷ್ಟು ವರ್ಷಗಳ ಕಾಲ ಮೆಟಾ ಕೇವಲ ಜಾಹೀರಾತುಗಳ (Ad Revenue) ಮೂಲಕವೇ ಶೇ. 90ಕ್ಕಿಂತ ಹೆಚ್ಚು ಹಣ ಗಳಿಸುತ್ತಿತ್ತು. ಆದರೆ ಈಗ ಮಾರುಕಟ್ಟೆಯ ಏರಿಳಿತಗಳಿಂದ ಸುರಕ್ಷಿತವಾಗಿರಲು ಬಳಕೆದಾರರಿಂದಲೇ ನೇರ ಆದಾಯ ಪಡೆಯುವ ಚಂದಾದಾರಿಕೆ (Subscription Model) ಮಾದರಿಗೆ ಬದಲಾಗುತ್ತಿದೆ.

ಹೂಡಿಕೆದಾರರ ಒತ್ತಡವೂ ಮೆಟಾ ನಿರ್ಧಾರಕ್ಕೆ ಕಾರಣವಾಗಿರಬಹುದು. ಮೆಟಾ ಕಂಪನಿಯು AI ತಂತ್ರಜ್ಞಾನಕ್ಕಾಗಿ ಇಷ್ಟೊಂದು ಹಣ ಸುರಿಯುತ್ತಿರುವುದರ ಬಗ್ಗೆ ಹೂಡಿಕೆದಾರರು ಪ್ರಶ್ನೆ ಎತ್ತಿದ್ದರು. ಆ ಹೂಡಿಕೆಯಿಂದ ತಕ್ಷಣಕ್ಕೆ ಆದಾಯ ಹೇಗೆ ಬರುತ್ತದೆ ಎಂಬುದನ್ನು ತೋರಿಸಲು ಮೆಟಾ ಈ ಹಾದಿ ಹಿಡಿದಿದೆ.

ಹಣ ಪಾವತಿಸುವ ಇನ್​ಸ್ಟಾ, ಫೇಸ್​ಬುಕ್ “ಪ್ಲಸ್” ಬಳಕೆದಾರರಿಗೆ ಏನೆಲ್ಲಾ ಸಿಗಲಿದೆ?

  • ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಸ್‌ನಲ್ಲಿ ಸ್ಟೋರಿ ರಿವಾಚ್ ಫೀಚರ್ ಇದೆ. ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಯಾರಾದರೂ ಮತ್ತೆ ಮತ್ತೆ ನೋಡಿದ್ದಾರಾ (Rewatched) ಎಂಬುದರ ಅಂಕಿ-ಅಂಶ ತಿಳಿಯಬಹುದು.
  • ಬೇರೆಯವರ ಸ್ಟೋರಿಗಳನ್ನು ಅವರಿಗೆ ತಿಳಿಯದಂತೆ (ವೀಕ್ಷಕರ ಪಟ್ಟಿಯಲ್ಲಿ ನಿಮ್ಮ ಹೆಸರು ಬರದಂತೆ) ರಹಸ್ಯವಾಗಿ (Stealth Mode) ಮೊದಲೇ ವೀಕ್ಷಿಸಬಹುದು (Preview).
  • ಸಾಮಾನ್ಯವಾಗಿ 24 ಗಂಟೆಗಳಲ್ಲಿ ಕಣ್ಮರೆಯಾಗುವ ಸ್ಟೋರಿಗಳನ್ನು ಇನ್ನು ಹೆಚ್ಚು ಸಮಯ ಇಡಬಹುದು.
  • ವಾರಕ್ಕೊಮ್ಮೆ ಒಂದು ನಿರ್ದಿಷ್ಟ ಸ್ಟೋರಿಯನ್ನು ಹೈಲೈಟ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಹೆಚ್ಚಿನ ಜನರನ್ನು ತಲುಪುವಂತೆ (Reach) ಮಾಡಬಹುದು.

ಇದನ್ನೂ ಓದಿ: ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು

ವಾಟ್ಸಾಪ್ ಪ್ಲಸ್‌ ಬಳಕೆದಾರರಿಗೆ ಏನು ವಿಶೇಷ?

ವಾಟ್ಸಾಪ್ ಕಸ್ಟಮೈಸ್ ಮಾಡಿಕೊಳ್ಳಬಹುದು. ಆ್ಯಪ್‌ನ ಐಕಾನ್ ಬದಲಾಯಿಸುವುದು, ಪ್ರೀಮಿಯಂ ಚಾಟ್ ಥೀಮ್‌ಗಳು ಹಾಗೂ ಕಸ್ಟಮ್ ರಿಂಗ್‌ಟೋನ್‌ಗಳನ್ನು ಇಟ್ಟುಕೊಳ್ಳಬಹುದು. ಪ್ರೀಮಿಯಂ ಸ್ಟಿಕ್ಕರ್‌ಗಳು ಮತ್ತು ಹೆಚ್ಚುವರಿ ಚಾಟ್‌ಗಳನ್ನು ಪ್ರಮುಖವಾಗಿ ಪಿನ್ (Pin chats) ಮಾಡಿ ಇಟ್ಟುಕೊಳ್ಳುವ ಸೌಲಭ್ಯ ಇರುತ್ತದೆ.

‘ಮೆಟಾ ಒನ್’ (Meta One) ಮತ್ತು ಸುಧಾರಿತ AI ಪ್ಲಾನ್‌ಗಳು

ಭವಿಷ್ಯದಲ್ಲಿ ಈ ಎಲ್ಲಾ ವಿಭಿನ್ನ ಸಬ್‌ಸ್ಕ್ರಿಪ್ಷನ್‌ಗಳನ್ನು ಒಟ್ಟುಗೂಡಿಸಿ ‘ಮೆಟಾ ಒನ್’ (Meta One) ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ತರಲು ಕಂಪನಿ ಯೋಜಿಸಿದೆ. ಇದರ ಜೊತೆಗೆ, ಮೆಟಾ AI ಅನ್ನು ಅತಿಯಾಗಿ ಬಳಸುವವರಿಗಾಗಿ ಸುಧಾರಿತ ಇಮೇಜ್/ವಿಡಿಯೋ ಜನರೇಶನ್ ಮತ್ತು ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುವ ಪ್ರತ್ಯೇಕ ಪ್ರೀಮಿಯಂ AI ಪ್ಲಾನ್‌ಗಳನ್ನು ಸಹ ತರಲಾಗುತ್ತಿದ್ದು, ಇವುಗಳ ಬೆಲೆ ತಿಂಗಳಿಗೆ $7.99 ರಿಂದ $19.99 ರವರೆಗೆ ಇರಲಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 22 ಬೌಂಡರಿ, 154 ರನ್..! ದಿಗ್ಗಜರ ದಾಖಲೆಗಳನ್ನು ಮುರಿದ ಶುಭ್​ಮನ್ ಗಿಲ್

Source link

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ: SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ – Kannada News | Dharmasthala Case: Punyakshetra Sanrakshana Samiti Urges Government to Release SIT Interim Report

ಬೆಂಗಳೂರು, ಜೂನ್​​ 17: ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧ ಷಡ್ಯಂತ್ರ, ಅಪಪ್ರಚಾರ ಪ್ರಕರಣದಲ್ಲಿ ಅನೇಕರ ಚಾರಿತ್ರ್ಯ ಹನನವನ್ನು ನೋಡಿದ್ದೇವೆ. ಇಂದು ಷಡ್ಯಂತ್ರ ಹೊರ ಬಂದಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆದಿತ್ತು. ಬೇರೆ ಬೇರೆ ಮೂಲಗಳಿಂದ ಹಣದ ಬಂದಿತ್ತು. ನಾವು ಜನಾಗ್ರಹ ಸಭೆಗಳನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗುತ್ತೇವೆ ಎಂದು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮುಖ್ಯಾಂಶಗಳು

  • ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ
  • ಬೆಂಗಳೂರಿನಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಸುದ್ದಿಗೋಷ್ಠಿ
  • ಷಡ್ಯಂತ್ರ ಹೊರ ಬಂದಿದೆ ಎಂದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ಹೇಳಿದ್ದಿಷ್ಟು 

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ವಿಚಾರವಾಗಿ ಇಂದು ನಗರದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಒಂದು ತಂಡ ಸಿದ್ದರಾಮಯ್ಯನ ಸುತ್ತಮುತ್ತ ಓಡಾಡಿಕೊಂಡು ಎಸ್ಐಟಿ ರಚನೆ ಮಾಡಿಸಿದ್ದರು. ನನಗೆ ಆಮಿಷ ಒಡ್ಡಲಾಯಿತು ಅಂತಾ ಕೋರ್ಟ್​ನಲ್ಲಿ ಚಿನ್ನಯ್ಯ ಹೇಳುತ್ತಿದ್ದಾನೆ. ಇದು ನೇರವಾಗಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಕೇವಲ ಸರ್ಕಾರಕ್ಕೆ ಮೋಸ ಅಲ್ಲ, 7 ಕೋಟಿ ಜನರಿಗೆ ಮಾಡುತ್ತಿರುವ ಮೋಸ ಎಂದರು.

ಇದನ್ನೂ ಓದಿ: ಧರ್ಮಸ್ಥಳ ಕೇಸ್​: ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ ರಹಸ್ಯ ರಿವೀಲ್

ಇನ್ನು ನಿನ್ನ ತಬ್ಬಿಕೊಳ್ಳುತ್ತೇನೆ ಎಂದು ಚಿನ್ನಯ್ಯಗೆ ನಟ ಪ್ರಕಾಶ್ ರಾಜ್ ಹೇಳಿದ್ದರಂತೆ. ಅವರ ಉದ್ದೇಶ ಏನಿತ್ತು, ಏಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಚಿನ್ನಯ್ಯನಿಗೆ ಪ್ರೇರಣೆ ಕೊಟ್ಟ ಪ್ರಕಾಶ್ ರಾಜ್ ವೀರೇಂದ್ರ ಹೆಗ್ಗಡೆಗೆ ಜಂಟಲ್ ಮ್ಯಾನ್ ಎನ್ನುತ್ತಾರೆ. ಜನರ ಆಸ್ತಿಕತೆಯ ಮೇಲೆ ಆಗಿರುವ ಆಘಾತಕ್ಕೆ ಪ್ರಕಾಶ್ ರಾಜ್ ಕ್ಷಮೆ ಕೇಳುತ್ತಾರಾ? ಪ್ರಕಾಶ್ ರಾಜ್ ಕರೆ ಮಾಡಿದ್ದನ್ನು ವರದಿಯಲ್ಲಿ ದಾಖಲಿಸಿದ್ದಾರಾ? ರಾಜ್ಯ ಸರ್ಕಾರ SIT ಮಧ್ಯಂತರ ವರದಿ ಬಹಿರಂಗ ಮಾಡಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಎಲ್ಲಿದೆ ಮೂಳೆಗಳ ರಾಶಿ? ವಸಂತ್​ ಗಿಳಿಯಾರ್ ಪ್ರಶ್ನೆ

ವಸಂತ್​ ಗಿಳಿಯಾರ್ ಮಾತನಾಡಿದ್ದು, ನಾವು ಧರ್ಮಸ್ಥಳ ಪರವಾದ ಪಿಆರ್​ಓ ಅಲ್ಲ. ಧರ್ಮಸ್ಥಳದವರು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಟ್ಟಿರಬಹುದು. ಮೂಳೆಗಳ ರಾಶಿ ಸಿಕ್ಕಿದೆ ಎಂದು ಯೂಟ್ಯೂಬ್​​ನಲ್ಲಿ ವರದಿ ಮಾಡಿದರು. ಎಲ್ಲಿದೆ ಮೂಳೆಗಳ ರಾಶಿ? ಸುಳ್ಳು ವರದಿಯನ್ನು ಎಸ್ಐಟಿ ತಡೆ ಹಾಕಿದ್ದರೆ ಇಷ್ಟು ಡ್ಯಾಮೇಜ್ ಆಗುತ್ತಿರಲಿಲ್ಲ. ಷಡ್ಯಂತ್ರ ಮಾಡಿದವರು ಕೆಲವು ಯೂಟ್ಯೂಬರ್​ಗಳನ್ನು ಹಣ ಕೊಟ್ಟು ಸಾಕಿಕೊಂಡಿದ್ದಾರೆ. ಎಲ್ಲರೂ ಇದ್ದಿದ್ದು ಷಡ್ಯಂತ್ರ ಕೂಟದ ಮನೆಯಲ್ಲೇ. ಎಸ್ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಂದು ನಾವು ಮಾಡಿರುವ ಆರೋಪಗಳು ನಿಜ ಅಂತಾ ಸಾಬೀತಾಗಿದೆ. ಇದರಲ್ಲಿ ಖಳ ನಟ ಅಥವಾ ಚಿತ್ರನಟ ಪ್ರಕಾಶ್ ರಾಜ್ ಹೆಸರು ಕೂಡ ಕೇಳಿಬಂದಿದೆ. ಚಿನ್ನಯ್ಯ ಜೊತೆ ಮಾತಾಡಿದ್ದು ನಿಜ ಅಂತಾ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ. ಎಸ್ಐಟಿ ಮುಖ್ಯಸ್ಥ ಮೊಹಂತಿ ಜೊತೆ ಮಾತನಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಗೃಹ ಸಚಿವರಾಗಿದ್ದ ಡಾ. ಜಿ ಪರಮೇಶ್ವರ್ ಮುಚ್ಚಿಟ್ಟ ಸತ್ಯವನ್ನು ಪ್ರಿಯಾಂಕ್ ಖರ್ಗೆ ಬಯಲು ಮಾಡಬೇಕು ಎಂದರು.

ಚಿನ್ನಯ್ಯಗೆ ಹೆಡ್ ಫೋನ್ ಮೂಲಕ ಡೈರೆಕ್ಷನ್ ನೀಡುತ್ತಿದ್ದರು

ನನ್ನ ಕಿವಿಗೆ ಹೆಡ್ ಫೋನ್ ಹಾಕಲಾಗಿತ್ತು ಅಂತಾ ರಿಟ್ ಅರ್ಜಿಯಲ್ಲಿ ಚಿನ್ನಯ್ಯ ಹೇಳಿದ್ದಾನೆ. ಮಾಸ್ಕ್ ಹಾಕಿದ್ದ ರಹಸ್ಯವೇ ಹೆಡ್ ಫೋನ್ ಹಾಕಿರುವುದು. ಅಂದು ಗುಂಡಿ ಅಗೆಯುವ ವೇಳೆ ಚಿನ್ನಯ್ಯ ಅತ್ತಿತ್ತ ಓಡಾಡುತ್ತಿದ್ದ. ಆಗ ಆತನಿಗೆ ಹೆಡ್ ಫೋನ್ ಮೂಲಕ ಡೈರೆಕ್ಷನ್ ಕೊಡುತ್ತಿದ್ದರು ಎನ್ನುವುದು ಈಗ ಸ್ಪಷ್ಟ ಆಗಿದೆ. ಎಡಪಂಥೀಯ ಚಿಂತಕರೇ ಎಸ್ಐಟಿಯನ್ನು ಮುನ್ನಡೆಸುವ ರೀತಿಯಲ್ಲಿ ಕಂಡುಬರುತ್ತಿದೆ. ಚಿನ್ನಯ್ಯ ಜೊತೆ ಮಾತಾಡಬೇಡಿ ಎಂದು ಪ್ರಣಬ್ ಮೊಹಂತಿ ಹೇಳಿದ್ದರು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಚಿನ್ನಯ್ಯ ಜೊತೆ ಪ್ರಕಾಶ್ ರಾಜ್ ಸಂಪರ್ಕದಲ್ಲಿರುವುದು ಗೊತ್ತಾದ ಕೂಡಲೇ ಪ್ರಣಬ್ ಮೊಹಂತಿ ನೋಟಿಸ್ ಕೊಡಬೇಕಿತ್ತಲ್ವಾ ಎಂದು ವಸಂತ್​ ಗಿಳಿಯಾರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್​ಐಟಿಗೆ ಗಿರೀಶ್ ಮಟ್ಟಣ್ಣನವರ್​​ ದೂರು

ನಾವು ಎಸ್ಐಟಿ ಮುಖ್ಯಸ್ಥರ ಮೇಲೆ ಆರೋಪ ಮಾಡುತ್ತಿಲ್ಲ. ಪ್ರಣಬ್ ಮೊಹಂತಿ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಇದೇ ಪ್ರಕಾಶ್ ರಾಜ್ ತಮ್ಮ ನಿರ್ದಿಗಂತ ನಾಟಕದಲ್ಲಿ ಧರ್ಮಾಧಿಕಾರಿಗಳನ್ನು ತುಚ್ಛವಾಗಿ ತೋರಿಸಿದ್ದಾರೆ. ಪ್ರಕಾಶ್ ರಾಜ್ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದಾಗ ನಾವು ಪ್ರಶ್ನೆ ಮಾಡಿದ್ದೇವೆ ಎಂದರು.

ಸರ್ಕಾರ ಸೂಕ್ತ ತನಿಖೆ ನಡೆಸಬೇಕು: ವಿಕಾಸ್ ಕುಮಾರ್ ಪುತ್ತೂರು

ವಿಕಾಸ್ ಕುಮಾರ್ ಪುತ್ತೂರು ಪ್ರತಿಕ್ರಿಯಿಸಿದ್ದು, ಚಿನ್ನಯ್ಯ ಎಂಬ ವ್ಯಕ್ತಿ ಷಡ್ಯಂತ್ರ ಆಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಷಡ್ಯಂತ್ರದ ಸೂತ್ರಧಾರಿ ಯಾರು ಎಂದು ಬಯಲಾಗಬೇಕಿದೆ. ಈ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂಬ ಅನುಮಾನ ಇದೆ. ಹೊಸ ಗೃಹ ಸಚಿವರು ಎಲ್ಲವನ್ನೂ ಬಹಿರಂಗಪಡಿಸಲಿ. ಎಡಪಂಥೀಯರ ಮನವಿಯಂತೆ ಎಸ್ಐಟಿ ರಚಿಸಲಾಗಿದೆ ಎಂದು ಅಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಹೇಳಿದ್ದರು. ಆ ಎಡಪಂಥೀಯರು ಯಾರು ಅಂತಾ ಬಹಿರಂಗವಾಗಲಿ. ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:18 pm, Wed, 17 June 26

Source link

ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು – Kannada News | Resign if you want to switch Sanjay Raut challenges rebel MPs of Uddhav Thackeray Shiv Sena

ನವದೆಹಲಿ, ಜೂನ್ 17: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೊಂದು ಬಿರುಕು ಮೂಡಲಿದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ಬಣದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ (Sanjay Raut) ಇಂದು ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಬಂಡಾಯಗಾರರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. “ಪಕ್ಷಾಂತರ ಮಾಡಬೇಕೆಂಬ ಆಲೋಚನೆ ಇರುವವರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಲಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಯು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಶಿವಸೇನೆ ಠಾಕ್ರೆ ಬಣದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹಗಲಿರುಳು ಶ್ರಮಿಸಿ ಇವರನ್ನು ಲೋಕಸಭೆಗೆ ಗೆಲ್ಲಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ನಾಯಕತ್ವ ಹಾಗೂ ಪಕ್ಷದ ಚಿಹ್ನೆಯಡಿ ಗೆದ್ದು ಬಂದಿರುವ ಸಂಸದರು, ಈಗ ಪಕ್ಷದಲ್ಲಿ ಇರಲು ಇಷ್ಟವಿಲ್ಲದಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಗುಡುಗಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಉದ್ಧವ್ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು (ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ) ಮಾತ್ರ ಸಂಜಯ್ ರಾವತ್ ಅವರ ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು?

ನಮ್ಮ ಪಕ್ಷದ ಸಂಸದರನ್ನು ಸೆಳೆಯಲು ವಿರೋಧಿ ಬಣಗಳು ಮತ್ತು ತೃತೀಯ ಶಕ್ತಿಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂದು ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಪಕ್ಷದ ಸಂಸದರನ್ನು ಖರೀದಿಸಲು ತಲಾ 50 ಕೋಟಿ ರೂ. ಹಾಗೂ ಇತರೆ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಿದೆ. ಕೆಲವು ಸಂಸದರನ್ನು ರಹಸ್ಯವಾಗಿ ಕರೆದೊಯ್ಯಲು ಈಗಾಗಲೇ ವಿಶೇಷ ಚಾರ್ಟರ್ಡ್ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ಪಕ್ಷದ ‘ವಿಪ್’ ಈಗಲೂ ಜಾರಿಯಲ್ಲಿದೆ. ಪಕ್ಷದ ಅಸ್ತಿತ್ವದ ಕಾನೂನು ಹೋರಾಟ ಮುಂದುವರಿದಿದ್ದು, ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಕುರಿತು ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತ ಪತ್ರ ಬರೆಯಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version