Headlines

ಆಲ್ಬರ್ಟ್ ಅಬ್ಬರ: ಆರು ಎಸೆತಗಳಲ್ಲಿ 6 ಸಿಕ್ಸ್​..! – Kannada News | Toby Albert Smashes 6 Sixes in 6 Balls

ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುವ ದಾಂಡಿಗ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಸಸೆಕ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಬ್ಯಾಟ್ ಬೀಸಿದ ಟೋಬಿ ಆಲ್ಬರ್ಟ್ (Toby Albert) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 225 ರನ್‌ಗಳ ಜೊತೆಯಾಟ: ಹೋವ್‌ನ ‘ಫಸ್ಟ್ ಸೆಂಟ್ರಲ್ ಕೌಂಟಿ ಗ್ರೌಂಡ್’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್‌ಶೈರ್ ತಂಡಕ್ಕೆ ಆರಂಭಿಕ ಆಟಗಾರರಾದ ಅಲಿ ಓರ್ (105 ರನ್) ಮತ್ತು ಬೆನ್…

Read More

 Video: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ ಮರಿಯಾನೆ – Kannada News | A baby elephant tried to scare tourists who had gone on a safari.

ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ.. ಇದೀಗ ಮರಿಯಾನೆ ತನ್ನ ಜತೆಗೆ ಅಮ್ಮ ಇದ್ದಾಳೆ ಅನ್ನೋ ಧೈರ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದೆ. ಈ ಮರಿಯಾನೆಯ ಕ್ಯೂಟ್ ರಿಯಾಕ್ಷನ್ ಕಂಡು ವಾಹನದಲ್ಲಿದ್ದ ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೋಡಿ ಫಾರ್ಡ್ (Jodi Ford) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ…

Read More

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿದಂತೆ 6 ಆರೋಪಿಗಳು ವಿಚಾರಣೆಗೆ ಹಾಜರು

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿ ದರ್ಶನ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, ಪ್ರಕರಣದ ಎ14 ಆರೋಪಿ ಪ್ರದೂಶ್ ಈಗಾಗಲೇ ಮಾಫಿ ಸಾಕ್ಷಿಯಾಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರದೂಶ್ ಅವರ ಈ ಅರ್ಜಿಯನ್ನು ಆಕ್ಷೇಪಿಸಿ ದರ್ಶನ್ ಪರ ವಕೀಲರು ಸಹ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದು, ಇಂದು ಅದರ ಬಗ್ಗೆ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ. ಆಕ್ಷೇಪಣೆ…

Read More

ಬಳ್ಳಾರಿಯಲ್ಲಿ ಪಾಳು ಬಿದ್ದ ₹4 ಕೋಟಿ ಹಾಸ್ಟೆಲ್‌! ವಿದ್ಯಾರ್ಥಿಗಳ ಬಳಕೆಗೆ ಸಿಗದ ವಸತಿ ನಿಲಯ – Kannada News | Ballari University Hostel Worth Rs 4 Crore Lies Unused for Two Years

ಬಳ್ಳಾರಿಯಲ್ಲಿ ಪಾಳು ಬಿದ್ದ ₹4 ಕೋಟಿ ಹಾಸ್ಟೆಲ್‌! ವಿದ್ಯಾರ್ಥಿಗಳ ಬಳಕೆಗೆ ಸಿಗದ ವಸತಿ ನಿಲಯImage Credit source: tv9 ಬಳ್ಳಾರಿ. ಆಗಸ್ಟ್ 10: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ, ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ನೀಡದ ವಸತಿ ನಿಲಯವೊಂದು ಇದೀಗ ಪಾಳು ಬಿದ್ದಿದೆ. ಬಳ್ಳಾರಿಯ (Ballari) ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಉದ್ಘಾಟನೆಯಾದ ಬಾಲಕರ ವಸತಿ ನಿಲಯವನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 250ಕ್ಕೂ…

Read More

ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ? – Kannada News | Shivagange Missing Trekker Advaith Upadhyaya: Laptop Reveals Disturbing Online Searches

ನೆಲಮಂಗಲ, ಆಗಸ್ಟ್​​ 10: ಬೆಂಗಳೂರಿನ ಹಣಕಾಸು ಕಂಪನಿ ಉದ್ಯೋಗಿ ಅದ್ವೈತ್ ಉಪಾಧ್ಯಾಯ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಅದ್ವೈತ್‌ರ ಕಾಡುಗೋಡಿ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್ ಪರಿಶೀಲನೆಯ ವೇಳೆ ಸ್ಪೋಟಕ ಸಂಗತಿಗಳು ಬಯಲಾಗಿವೆ. ಕೃತಕ ಬುದ್ಧಿಮತ್ತೆ (AI) ಮೂಲಕ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬಹುದು ಮತ್ತು ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟು ಸಮಯಕ್ಕೆ ಸಾವು ಸಂಭವಿಸಬಹುದು ಎಂಬ ಬಗ್ಗೆ ಅದ್ವೈತ್ ಮಾಹಿತಿ ಹುಡುಕಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ನಿಶ್ಚಿತಾರ್ಥವಾಗಿದ್ದ ಹುಡುಗಿಗೆ ಬೆಟ್ಟ ಹತ್ತುವಾಗ ಅದ್ವೈತ್…

Read More

UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ – Kannada News | UPI MDR, Deepak Shenoy opposes percentage based transaction charges

ಕ್ಯಾಪಿಟಲ್‌ಮೈಂಡ್ ಸಿಇಒ ದೀಪಕ್ ಶೆಣೈImage Credit source: https://www.youtube.com/@mundhebanni ನವದೆಹಲಿ, ಆಗಸ್ಟ್ 10: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪೇಮೆಂಟ್​ಗಳಿಗೆ ಇರುವಂತೆ ಯುಪಿಐ ಪಾವತಿಗಳಿಗೂ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕವನ್ನು ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸುದ್ದಿ ಇದೆ. ಇದು ಯುಪಿಐ ಪೇಮೆಂಟ್ ಇಕೋಸಿಸ್ಟಂನಲ್ಲಿರುವ ಕಂಪನಿಗಳ ಮೇಲಿನ ಹೊರೆಯನ್ನು ತಗ್ಗಿಸಲು ಸರ್ಕಾರ ಕಂಡುಕೊಂಡಿರುವ ಉಪಾಯ ಎನ್ನಲಾಗಿದೆ. ಆದರೆ, ಯುಪಿಐ ಪೇಮೆಂಟ್​ಗೆ ಎಂಡಿಆರ್ ವಿಧಿಸುವ ಸರ್ಕಾರದ ಕ್ರಮದ ಬಗ್ಗೆ ಕೆಲ ವಲಯಗಳಿಂದ ವಿರೋಧವೂ ಬಂದಿದೆ….

Read More

ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು – Kannada News | Tabu Steps Into Vijay Sethupathi and Puri Jagannadh’s SlumDog 33 Temple Road as a Ruthless IT Officer

ವಿಜಯ್ ಸೇತುಪತಿ, ದುನಿಯಾ ವಿಜಯ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ಖ್ಯಾತ ನಟಿ ಟಬು ನಟಿಸುತ್ತಿದ್ದಾರೆ. ಚಿತ್ರತಂಡ ಈಗ ಅವರ ಪಾತ್ರದ ವಿಶೇಷ ಝಲಕ್ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಅವರು ಗೌರಿ ಹೆಗ್ಡೆ ಎಂಬ ಶಕ್ತಿಶಾಲಿ ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನವಾದ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಬು ಅವರ ಪವರ್‌ಫುಲ್ ಲುಕ್ ಈ ಸಿನಿಮಾದಲ್ಲಿ ಟಬು ಅವರದ್ದು ಅತ್ಯಂತ ರಗಡ್ ಪಾತ್ರ. ಅವರು ತಮ್ಮ ಆ್ಯಕ್ಷನ್…

Read More

ಕೇಂದ್ರ ಸಂಸ್ಕೃತ ವಿವಿಯಿಂದ ಸ್ವಾಮಿ ಭದ್ರೇಶದಾಸ್‌ಗೆ ‘ವೇದಾಂತವಿದ್ಯಾ-ವಿಶ್ವಗುರು’ ಬಿರುದು ಪ್ರದಾನ – Kannada News | Central Sanskrit University Honours BAPS Scholar Swami Bhadreshdas as Vedantavidya Vishwaguru

ಕೇಂದ್ರ ಸಂಸ್ಕೃತ ವಿವಿಯಿಂದ ಸ್ವಾಮಿ ಭದ್ರೇಶದಾಸ್‌ಗೆ ‘ವೇದಾಂತವಿದ್ಯಾ-ವಿಶ್ವಗುರು’ ಬಿರುದು ಪ್ರದಾನImage Credit source: Central Sanskrit University ನವದೆಹಲಿ, ಆಗಸ್ಟ್ 10: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು (Central Sanskrit University) ಬಿಎಪಿಎಸ್‌ನ ಖ್ಯಾತ ವಿದ್ವಾಂಸ ಹಾಗೂ ತತ್ವಜ್ಞಾನಿ ಮಹಾಮಹೋಪಾಧ್ಯಾಯ ಸ್ವಾಮಿ ಭದ್ರೇಶದಾಸ್ (Swami Bhadreshdas) ಅವರಿಗೆ ‘ವೇದಾಂತವಿದ್ಯಾ-ವಿಶ್ವಗುರು (Vedantavidya-Vishwaguru)’ ಎಂಬ ಗೌರವ ಬಿರುದನ್ನು ಪ್ರದಾನ ಮಾಡಿದೆ. ಆಗಸ್ಟ್ 9ರಂದು ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮದಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು. ಸ್ವಾಮಿ ಭದ್ರೇಶದಾಸ್ ಅವರು ವೇದಾಂತದ…

Read More

ದೇವಾಲಯಗಳಲ್ಲಿ ಸೆಪ್ಟೆಂಬರ್ 1 ರಿಂದ ‘ನೋ ಮೊಬೈಲ್’: ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ – Kannada News | TN Temple Mobile Ban and Deposit Counters: New Rules for Devotees, VIPs from September 1st

ತಮಿಳುನಾಡು, ಆ.10: ತಮಿಳುನಾಡಿನಾದ್ಯಂತ ಇರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳ ಒಳಗೆ ಮೊಬೈಲ್ ಫೋನ್‌ಗಳ ಬಳಕೆಯನ್ನು ಸೆಪ್ಟೆಂಬರ್ 1 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದರ್ಮಾದಾಯ (HR&CE) ಸಚಿವ ಎಸ್. ರಮೇಶ್ ಘೋಷಿಸಿದ್ದಾರೆ. ತಿರುಚಿಯ ಶ್ರೀರಂಗಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಕ್ತಾದಿಗಳು ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್‌ಗಳನ್ನು ಇಡಲು ದೇವಸ್ಥಾನದ ಹೊರಗೆ ಅಥವಾ ಪ್ರವೇಶ ದ್ವಾರದಲ್ಲೇ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ. ನಿಷೇಧಕ್ಕೆ ಮುಖ್ಯ ಕಾರಣವೇನು?: ಇತ್ತೀಚಿನ ದಿನಗಳಲ್ಲಿ…

Read More

ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ: ಪ್ರಮುಖ ನಾಯಕರು ಭಾಗಿ – Kannada News | BJP Organises Har Ghar Tiranga Rally in Bengaluru Ahead of Independence Day

ಬೆಂಗಳೂರು, ಆಗಸ್ಟ್​​ 10: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು. ಕೆ.ಸಿ. ಜನರಲ್ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲೆಯ ಬಳಿಯಿಂದ ಆರಂಭವಾದ ಈ ಯಾತ್ರೆಯ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವಥನಾರಾಯಣ್ ಸೇರಿದಂತೆ ಹಲವು ಪ್ರಮುಖ ನಾಯಕರು ವಹಿಸಿದ್ದರು. ಯಾತ್ರೆಯ ಉದ್ದಕ್ಕೂ “ಭಾರತ್ ಮಾತಾ ಕಿ ಜೈ”,…

Read More