ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್ – Kannada News | For Deepika Padukone King and Raaka movie changing their shooting schedule

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಏಪ್ರಿಲ್ 19) ಖುಷಿ ವಿಷಯ ಹಂಚಿಕೊಂಡಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿರುವ ದೀಪಿಕಾ ಪಡುಕೋಣೆ, ಇದೀಗ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ತಾವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಭಿಮಾನಿಗಳು, ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ದೀಪಿಕಾರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಅವರು ಮತ್ತೆ ತಾಯಿ ಆಗುತ್ತಿರುವುದು ಖುಷಿಯ ವಿಷಯವಾದರೂ ಎರಡು ಸಿನಿಮಾಗಳಿಗೆ ಇದರಿಂದ ತುಸು ಸಮಸ್ಯೆ ಆಗಿದೆ. ಅದುವೇ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟನೆಯ ‘ರಾಕಾ’.

ದೀಪಿಕಾ ಪಡುಕೋಣೆ ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಆಕ್ಷನ್ ಕತೆಯನ್ನು ಹೊಂದಿದ್ದು, ಎರಡರಲ್ಲೂ ದೀಪಿಕಾ ಪಡುಕೋಣೆ ಮುಖ್ಯ ನಾಯಕಿ. ‘ಕಿಂಗ್’ ಸಿನಿಮಾದ ಚಿತ್ರೀಕರಣ ಅರ್ಧದಲ್ಲಿದ್ದರೆ, ‘ರಾಕಾ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಶುರುವಾಗಿದೆ. ಎರಡೂ ಸಿನಿಮಾಗಳ ಚಿತ್ರೀಕರಣ ಸಾಕಷ್ಟು ಬಾಕಿ ಇರುವಾಗಲೇ ದೀಪಿಕಾ ಪ್ರೆಗ್ನೆನ್ಸಿ ಘೋಷಿಸಿದ್ದು ಇದು ಎರಡೂ ಸಿನಿಮಾಗಳಿಗೆ ತುಸು ಸಮಸ್ಯೆ ಆಗಿದೆ.

ಇದನ್ನೂ ಓದಿ:8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

ಎರಡೂ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಬೆಕಿದೆ. ಎರಡೂ ಸಿನಿಮಾಗಳಲ್ಲಿ ಖುದ್ದು ದೀಪಿಕಾ ಪಡುಕೋಣೆ ಸಹ ಆಕ್ಷನ್​ ಸೀನ್​​ಗಳಲ್ಲಿ ಭಾಗಿ ಆಗಲಿದ್ದಾರೆ. ಹಾಗಾಗಿ ಎರಡೂ ಸಿನಿಮಾ ತಂಡದವರು ದೀಪಿಕಾ ಅವರು ನಟಿಸಲಿರುವ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಯೋಜನೆ ಹಾಕಿಕೊಂಡಿವೆ. ಅದರಲ್ಲೂ ದೀಪಿಕಾರ ಆಕ್ಷನ್ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಸಜ್ಜಾಗಿದ್ದು, ಇದಕ್ಕಾಗಿ ಇಡೀ ಶೂಟಿಂಗ್ ಶೆಡ್ಯೂಲ್ ಅನ್ನು ಬದಲಾವಣೆ ಮಾಡಲಿವೆ ಎನ್ನಲಾಗುತ್ತಿದೆ.

ದೀಪಿಕಾ ಪಡುಕೋಣೆ ಈ ಹಿಂದೆ ಸಹ ಗರ್ಭಿಣಿ ಆಗಿದ್ದಾಗ ಸಿನಿಮಾನಲ್ಲಿ ನಟಿಸಿದ್ದರು. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದರು. ಆ ಸಿನಿಮಾನಲ್ಲೂ ಸಹ ಅವರದ್ದು ಗರ್ಭಿಣಿ ಯುವತಿಯ ಪಾತ್ರ ಆಗಿತ್ತು. ಇದೀಗ ಮತ್ತೆ ಗರ್ಭಿಣಿ ಆಗಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PBKS vs LSG: ಪ್ರಿಯಾಂಶ್-ಕನೋಲಿ ರೌದ್ರಾವತಾರಕ್ಕೆ ಆರ್​ಸಿಬಿಯ ದಾಖಲೆಗಳೆಲ್ಲ ಧ್ವಂಸ

Source link

PBKS vs LSG: 6,6,6,6,6,6,6,6,6..! ಲಕ್ನೋ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಪ್ರಿಯಾಂಶ್ – Kannada News | Priyansh Arya’s Explosive 93 Powers Punjab Kings to Record 254 vs LSG in IPL 2026

ಐಪಿಎಲ್ 2026 (IPL 2026) ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (PBKS vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಆರಂಭಿಕ ಪ್ರಿಯಾಂಶ್ ಆರ್ಯ (Priyansh Arya) 93 ರನ್​ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು ಸೇರಿದ್ದವು. ಕೇವಲ 37 ಎಸೆತಗಳಲ್ಲಿ ಈ ಸ್ಮರಣೀಯ ಇನ್ನಿಂಗ್ಸ್ ಆಡಿದ ಪ್ರಿಯಾಂಶ್ ಕೇವಲ 7 ರನ್​​ಗಳಿಂದ ಶತಕ ವಂಚಿತರಾದರು.

ಏಳು ರನ್‌ಗಳಿಂದ ಶತಕ ವಂಚಿತ

ಈ ಪಂದ್ಯದಲ್ಲಿ ಶತಕ ವಂಚಿತರಾದರು ಪಂಜಾಬ್ ತಂಡ ದಾಖಲೆಯ ಮೊತ್ತ ಕಲೆಹಾಕುವಲ್ಲಿ ಪ್ರಿಯಾಂಶ್ ಪ್ರಮುಖ ಪಾತ್ರವಹಿಸಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್​​ಗೆ ಇದು ನಾಲ್ಕನೇ ಐಪಿಎಲ್ ಅರ್ಧಶತಕವಾದರೆ, ಎಲ್‌ಎಸ್‌ಜಿ ವಿರುದ್ಧ ಅವರ ಮೊದಲ ಅರ್ಧಶತಕವಾಗಿದೆ. ದುರದೃಷ್ಟವಶಾತ್ ಅವರು ತಮ್ಮ ಎರಡನೇ ಐಪಿಎಲ್ ಶತಕವನ್ನು ಕೇವಲ ಏಳು ರನ್‌ಗಳಿಂದ ತಪ್ಪಿಸಿಕೊಂಡರು. ಆದಾಗ್ಯೂ ಪ್ರಿಯಾಂಶ್ ಎರಡನೇ ವಿಕೆಟ್​ಗೆ ಕೂಪರ್ ಕನೊಲಿ ಅವರ ಜೊತೆಗೂಡಿ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್​ಗಳ ಜೊತೆಯಾಟವನ್ನಾಡಿದರು.

PBKS vs LSG IPL 2026 Live Score: ಲಕ್ನೋಗೆ 255 ರನ್ ಗುರಿ ನೀಡಿದ ಪಂಜಾಬ್

ಪ್ರಿಯಾಂಶ್ ಆರ್ಯ ಯಾರು?

ಸೆಪ್ಟೆಂಬರ್ 18, 2001 ರಂದು ಜನಿಸಿದ ಪ್ರಿಯಾಂಶ್ ಆರ್ಯ ಎಡಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್ ಬ್ರೇಕ್‌ ಬೌಲಿಂಗ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಪ್ರಿಯಾಂಶ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಾರೆ. 2025 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಿಯಾಂಶ್ 22 ಪಂದ್ಯಗಳಲ್ಲಿ 28.24 ಸರಾಸರಿ ಮತ್ತು 196 ಸ್ಟ್ರೈಕ್ ರೇಟ್‌ನಲ್ಲಿ 680 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. ಡಿಪಿಎಲ್‌ನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡುವಾಗ ಅವರು ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಸುದ್ದಿ ಮಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:40 pm, Sun, 19 April 26

Source link

ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು – Kannada News | Karnataka Heatwave: Five Districts Cross 40 Degrees Celsius as Residents Struggle

ಬೆಂಗಳೂರು, ಏಪ್ರಿಲ್​ 19: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿವೆ. ಐದು ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಜನರು ಬಿಸಿಲಿನಿಂದ ತತ್ತರಿಸಿದ್ದಾರೆ. ಗದಗ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ದಾಖಲಾಗಿದೆ. ಮನೆಯಲ್ಲಿದ್ದರೂ ಫ್ಯಾನ್ ಮತ್ತು ಕೂಲರ್‌ಗಳಿಂದ ಬಿಸಿ ಗಾಳಿ ಬರುತ್ತಿರುವುದರಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಬರಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮರಕಲ್ ಗ್ರಾಮದ ನಿವಾಸಿಗಳು ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಮನೆಗಳ ಮೇಲ್ಛಾವಣಿಯ ಮೇಲೆ ಟಾರ್ಪಾಲ್ ಹಾಕಿ ನೀರು ತುಂಬಿಸುವ ಮೂಲಕ ಮನೆಯನ್ನು ತಂಪಾಗಿರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

MLC ಮಾಡುವಂತೆ ರಾಹುಲ್ ಗಾಂಧಿಗೆ ಮೈಸೂರು ಕಾಂಗ್ರೆಸ್ ಕಾರ್ಯಕರ್ತ ಪತ್ರ – Kannada News | Mysuru Congress Worker Basavanna writes Letter To Rahul gandhi For MLC Post

ಮೈಸೂರು, (ಏಪ್ರಿಲ್ 19): ಒಂದೆಡೆ ಸಂಪುಟ ಪುನಾರಚನೆ ಮಾಡಬೇಕೆಂದು ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ಇದರ ಮಧ್ಯೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತ ಬಸವಣ್ಣ ಎನ್ನುವರು ವಿಧಾನಪರಿಷ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ನಾಲ್ಕನೇ ಬಾರಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ವಿಧಾನಪರಿಷತ್​ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಸವಣ್ಣ, ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಆದ್ರೂ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ. ಮೈಸೂರು ದಸರಾ ಕಮಿಟಿಗೂ ನನ್ನನ್ನು ನೇಮಕ ಮಾಡಿಲ್ಲ. ಹೀಗಾಗಿ ರಾಹುಲ್ ಗಾಂಧಿಗೆ ಪೋಸ್ಟ್ ಮೂಲಕ ಪತ್ರ ಬರೆದಿದ್ದು, ಈ ಬಾರಿ ನನಗೆ ಎಂಎಲ್​ಸಿ ಸ್ಥಾನ ಕೊಡ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಗಧಗಿಸಿದ ಮಲೆ ಮಹದೇಶ್ವರ ಬೆಟ್ಟಡ ಒಡಲು: 100 ಎಕರೆ ವನಸಂಪತ್ತು ನಾಶ – Kannada News | Chamarajanagar Wildfire: Over 100 Acres Burnt in Male Mahadeshwara Sanctuary

ಚಾಮರಾಜನಗರ, ಏಪ್ರಿಲ್​ 19: ಮಲೆ ಮಹದೇಶ್ವರ ವನ್ಯಜೀವಿಧಾಮದ ಒಡಲಿಗೆ ಬೆಂಕಿ ಬಿದ್ದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 100 ಎಕರೆಗೂ ಅಧಿಕ ವಿಸ್ತೀರ್ಣದ ಅಮೂಲ್ಯ ವನಸಂಪತ್ತು ಬೆಂಕಿಗಾಹುತಿಯಾಗಿದೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಬೋಳಿ ಬೆಟ್ಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಿಡಮೂಲಿಕೆಗಳ ಕಾಶಿಯಂತಿದ್ದ ಕಡೆಬೋಳಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ವನ್ಯ ಸಂಪತ್ತು ಮತ್ತು ಅಪರೂಪದ ಗಿಡಮೂಲಿಕೆಗಳು ಸುಟ್ಟು ಕರಕಲಾಗಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಫೈರ್ ಲೇನ್ (ಬೆಂಕಿ ರೇಖೆ) ನಿರ್ಮಾಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಬೆಂಕಿ ರೇಖೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರೆ ಇಷ್ಟು ದೊಡ್ಡ ಮಟ್ಟದ ಅವಘಡ ಸಂಭವಿಸುತ್ತಿರಲಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಸರ್ಕಾರಕ್ಕೆ ಫೈರ್ ಲೇನ್ ನಿರ್ಮಾಣದ ಹೆಸರಿನಲ್ಲಿ ತಪ್ಪು ಲೆಕ್ಕ ನೀಡಿ, ಅರಣ್ಯ ಸಂರಕ್ಷಣೆಯ ಹೆಸರಲ್ಲಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮಹಿಳೆ ಸಾವು: ಲಿವಿಂಗ್ ಟುಗೆದರ್​​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಿ ಮುಜುಗರಕ್ಕೀಡಾದ ಪೊಲೀಸ್ರು, ಏನಿದು ಕೇಸ್? – Kannada News | Set Back To Chamaranagar Police In Death Case, Court released Man Who living together relationship with Woman

ಚಾಮರಾಜನಗರ, (ಏಪ್ರಿಲ್ 19): 2023ರ ಡಿಸೆಂಬರ್ 16ರಂದು ಚಾಮರಾಜನಗರ (Chamaranagar) ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದಿಂದ ಪಟ್ಟಣದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಅಗರ ಮಾಂಬಳ್ಳಿಯ ರೇಖಾ ಎಂದು ಗುರುತು ಪತ್ತೆ ಮಾಡಿದ್ದರು. ಆದ್ರೆ, ಪೊಲೀಸರು ಸರಿಯಾಗಿ ತನಿಖೆ ನಡೆಸದೆ ರೇಖಾಳ ಜೊತೆ ಲೀವಿಂಗ್ ಟು ಗೆದರ್ ನಲ್ಲಿದ್ದ ನಾಗೇಶ್​ ಎನ್ನುವರನ್ನ ಬಂಧಿಸಿ ಬಳಿಕ ಕೋರ್ಟ್​ ಮುಂದೆ ಹಾಜರು ಪಡಿಸಿದ್ದು, ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಆದ್ರೆ, ಸರಿಯಾದ ಸಾಕ್ಷಿಗಳನ್ನ ಕಲೆಹಾಕುವಲ್ಲಿ ಪೊಲೀಸರು ಎಡವಿದ್ದು, ಬಂಧಿತ ನಾಗೇಂದ್ರನನ್ನು ಇದೀಗ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ  ಬಿಡುಗಡೆಗೆ ಆದೇಶಿಸಿದೆ.  ಇದರೊಂದಿಗೆ ಒಂದು ಕೊಲೆ ಪ್ರಕರಣದಲ್ಲಿ ಎವಿಡೆನ್ಸ್ ಕಲೆಹಾಕುವಲ್ಲಿ ವಿಫಲರಾಗಿದ್ದು, ಎಲ್ಲಾ ಲೋಪ್ ಪೋಲ್ ನಿಂದ ಚಾಮರಾಜನಗರ ಪೊಲೀಸರ ಶೇಪ್ ಔಟ್ ಆದಂತಾಗಿದೆ.

ರೇಖಾಳಿಗೆ ಈಗಾಲೇ ಮದುವೆಯಾಗಿದ್ದು, ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ರೇಖಾ ಮಗಳ ಜೊತೆ ಆದರ್ಶನಗರದಲ್ಲಿ ವಾಸವಿದ್ದಳು. ಈ ವೇಳೆ ನಾಗೇಂದ್ರ ಅಲಿಯಾಸ್ ಆನಂದ ಎಂಬ ಲೈನ್ ಮ್ಯಾನ್ ಜೊತೆ ಪರಿಚಯವಾಗಿ ಇಬ್ಬರೂ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿದ್ದರು. ಹಾಗಾಗಿ ಈಕೆಯನ್ನ ಪ್ರಿಯತಮ ನಾಗೇಂದ್ರನೆ ಕೊಂದಿರಬೇಕೆಂದು ಶಂಕಿಸಿ ಬಂಧಿಸಲಾಗಿತ್ತು. ಈಗ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು ಕೊಲೆ ಪ್ರಕರಣದ ಆರೋಪಿ ನಾಗೇಂದ್ರನನ್ನ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ: ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನಿಗೆ ವಿಶಿಷ್ಟ ಶಿಕ್ಷೆ ವಿಧಿಸಿದ ಕೋರ್ಟ್: ಏನದು?

ಪ್ರಕರಣದ ಹಿನ್ನೆಲೆ

2023ರ ಡಿಸೆಂಬರ್ 16ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದಿಂದ ಪಟ್ಟಣದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರೇಖಾ ಎನ್ನುವ ಮಹಿಳೆ ಮೃತದೇಹ ಪತ್ತೆಯಾಗಿತ್ತು. ರೇಖಾಳ ಪುತ್ರಿ ಸ್ಕೂಲ್ ಬರುತ್ತಿಲ್ಲವೆಂದು ವಿಚಾರಿಸಲು ಶಿಕ್ಷಕರೊಬ್ಬರು ಮನೆಗೆ ಬಂದು ನೋಡಿದಾಗ ರೇಖಾ ಮೃತದೇಹ ಪತ್ತೆಯಾಗಿತ್ತು. ಬಳಿಕ ಶಿಕ್ಷಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದ್ರೆ, ಮಹಿಳೆಯ ಶವ ಪೂರ್ತಿ ಕೊಳೆತು ಹೋಗಿದ್ದರಿಂದ  ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಗೊತ್ತಾಗಿಲ್ಲ. ಇದರಿಂದ ತಲೆಕೆಡಿಸಿಕೊಂಡ ಪೊಲೀಸರು, ಬಳಿಕ ರೇಖಾಳ ಜೊತೆ ಸಂಬಂದ ಹೊಂದಿದ್ದ ನಾಗೇಂದ್ರನನ್ನು ಬಂಧಿಸಿದ್ದರು.

ರೇಖಾ ಸಾವಿನ ಹಿಂದೆ ಹಲವು ಗೊಂದಲ

ರೇಖಾ ಸಾವಿನ ಹಿಂದೆ ಹಲವು ಗೊಂದಗಳು ಉದ್ಭವಿಸಿವೆ. ಯಾಕಂದ್ರೆ, ರೇಖಾ ಸಾಯುವ ಎರಡೂ ದಿನ ಮುನ್ನವೇ ತನ್ನ ಹೆತ್ತ ಮಗಳನ್ನ ಸಾಂತ್ವಾನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಳು. ಅಲ್ಲದೇ ರೇಖಾ ಕಾಯಿಲೆ ಸಂಬಂಧ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಅಂದು  ಮೃತದೇಹದ ಪಕ್ಕದಲ್ಲೇ ಆ ಮಾತ್ರೆ ಪತ್ತೆಯಾಗಿತ್ತು. ಇದನ್ನೇ ನಾಗೇಂದ್ರ ಪರ ವಕೀಲ ಕೋರ್ಟ್​​​ ಗಮನಕ್ಕೆ ತಂದಿದ್ದು, ಆ ಮಾತ್ರೆಯಿಂದಲೇ ರಿಯಾಕ್ಷನ್ ಆಗಿ ರೇಖಾ ಸಾವನ್ನಪ್ಪಿರುಬಹದು ಎಂದು ವಾದಿಸಿದ್ದರು. ಹೀಗಾಗಿ ಪೊಲೀಸರು, ಈ ಪ್ರಕರಣದಲ್ಲಿ ಸರಿಯಾದ ಸಾಕ್ಷಿಗಳನ್ನ ಕಲೆಹಾಕದೇ ಬೇಕಾಬಿಟ್ಟಿ ಚಾರ್ಜ್ ಶೀಟ್ ಸಲ್ಲಿಸಿದ್ದರಿಂದ ನಾಗೇಂದ್ರನನ್ನು ಕೋರ್ಟ್ ಖುಲಾಸೆಗೊಳಿಸಿದೆ. ಹೀಗೆ ರೇಖಾ ಸಾವಿನ ಪ್ರಕರಣದಲ್ಲಿ ಹಲವು ಗೊಂದಲಗಳು ಉದ್ಭವಿಸಿದ್ದು, ಇದೊಂದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದೇ ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ.

ಇನ್ನು ಒಂದು ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಯಾರ ಮೇಲೆ ಅನುಮಾನ ಇದೆಯೋ ಆತನನ್ನ ಸರಿಯಾಗಿ ವಿಚಾರಣೆ ನಡೆಸದೆ ಬೇಕಾ ಬಿಟ್ಟಿಯಾಗಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರೆ ಸಮಾಜದ ಮುಂದೆ ಯಾವ ರೀತಿ ಮುಜುಗರಕ್ಕೆ ಒಳಗಾಗಬೇಕಾಗುತ್ತೆ ಎನ್ನುವುದಕ್ಕೆ ಈ ಪ್ರಕರಣವೇ ಒಂದು ಸೂಕ್ತ ಉದಾಹಣೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KKR vs RR: 19 ವರ್ಷಗಳ ಐಪಿಎಲ್‌ನಲ್ಲಿ ಇದೇ ಮೊದಲು; ಇತಿಹಾಸ ಸೃಷ್ಟಿಸಿದ ಆರ್ಚರ್ – Kannada News | IPL 2026: KKR Secures First Win; Jofra Archer Shatters Unique First Ball Wicket Record

2026 ರ ಐಪಿಎಲ್‌ನಲ್ಲಿ (IPL 2026) ಕೆಕೆಆರ್ (KKR) ತಂಡ ಮೊದಲ ಗೆಲುವು ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ವಿಕೆಟ್​ಗಳಿಂದ ಗೆದ್ದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 155 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್‌ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಇತ್ತ ಈ ಸೋಲಿನ ಹೊರತಾಗಿಯೂ ರಾಜಸ್ಥಾನ್ ತಂಡದ ವೇಗಿ ಚೋಫ್ರಾ ಆರ್ಚರ್ (Jofra Archer) 19 ವರ್ಷಗಳ ಐಪಿಎಲ್‌ನಲ್ಲಿ ಈವರೆಗೆ ಯಾವ ವೇಗಿಯೂ ಮಾಡದ ದಾಖಲೆಯೊಂದನ್ನು ನಿರ್ಮಿಸಿದರು.

ಮೊದಲ ಎಸೆತದಲ್ಲೇ ವಿಕೆಟ್

155 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​​ಗೆ ಮೊದಲ ಓವರ್​ನ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು. ವೇಗಿ ಆರ್ಚರ್, ಕೆಕೆಆರ್ ಆರಂಭಿಕ ಟಿಮ್ ಸೈಫರ್ಟ್​ ಅವರನ್ನ ಮೊದಲ ಎಸೆತದಲ್ಲೇ ಔಟ್ ಮಾಡಿದರು. ವಾಸ್ತವವಾಗಿ ಆರ್ಚರ್ ಈ ರೀತಿಯಾಗಿ ಮೊದಲ ಎಸೆತದಲ್ಲೇ ಔಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಆವೃತ್ತಿಯ ಕಳೆದ ಮೂರು ಪಂದ್ಯಗಳಲ್ಲೂ ಆರ್ಚರ್ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಮೊದಲ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಮೊದಲ ಬೌಲರ್ ಆರ್ಚರ್

ಮೇಲೆ ಹೇಳಿದಂತೆ ಆರ್ಚರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸತತ ಮೂರನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು, ಆರ್ಚರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫಿಲ್ ಸಾಲ್ಟ್ ಅವರನ್ನು ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಷೇಕ್ ಶರ್ಮಾ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಆರ್ಚರ್ ಪಾತ್ರರಾದರು.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ

ಇಷ್ಟೇ ಅಲ್ಲ, ಆರ್ಚರ್ ಮೊಹಮ್ಮದ್ ಶಮಿ ಅವರ ದಾಖಲೆಯನ್ನು ಸಹ ಸರಿಗಟ್ಟಿದರು. ಇಲ್ಲಿಯವರೆಗೆ, ಐಪಿಎಲ್‌ನಲ್ಲಿ ಐದು ಬಾರಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಏಕೈಕ ಬೌಲರ್ ಶಮಿ ಆಗಿದ್ದರು. ಸೀಫರ್ಟ್ ಅವರನ್ನು ಔಟ್ ಮಾಡುವ ಮೂಲಕ ಆರ್ಚರ್ ಈ ದಾಖಲೆಯನ್ನು ಸರಿಗಟ್ಟಿದರು. ಈಗ ಅವರು ಕೂಡ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರುಣ್ ಧವನ್ ಡ್ಯಾನ್ಸ್ ನೋಡಿ ಶಾಕ್ ಆದ ಸಲ್ಮಾನ್ ಖಾನ್: ವಿಡಿಯೋ – Kannada News | Salman Khan visited Varun Dhawan’s movie shooting set

ಸಲ್ಮಾನ್ ಖಾನ್ (Salman Khan), ಬಾಲಿವುಡ್​ನ (Bollywood) ಕೆಲ ಯುವನಟರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಲ್ಲಿ ವರುಣ್ ಧವನ್ ಸಹ ಒಬ್ಬರು. ವರುಣ್ ಧವನ್ ತಂದೆ ಡೇವಿಡ್ ಧವನ್ ಸಹ ಸಲ್ಮಾನ್ ಖಾನ್​​ಗೆ ಬಹಳ ಆಪ್ತರು. ಇದೀಗ ವರುಣ್ ಧವನ್ ಅವರು ತಂದೆ ಡೇವಿಡ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು ಸಿನಿಮಾದ ಶೂಟಿಂಗ್ ಸೆಟ್​​ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ‘ವಿವಾಹ್ ಕರವಾದೊ ಜೀ’ (ಮದುವೆ ಮಾಡಿಸಿಬಿಡಿ) ಎಂಬ ಹಾಡಿನ ಚಿತ್ರೀಕರಣ ನೋಡಲು ಸಲ್ಮಾನ್ ಖಾನ್ ಬಂದಿದ್ದು, ‘ಭಾರತದ ಸ್ಟಾರ್ ಬ್ಯಾಚುಲರ್’ ಎದುರು ಡ್ಯಾನ್ಸ್ ಮಾಡಲು ನರ್ವಸ್ ಆಗುತ್ತೇನೆ ಎಂದು ವರುಣ್ ಬರೆದುಕೊಂಡಿದ್ದಾರೆ. ವರುಣ್ ಅವರ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ ಸಲ್ಲು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇಶದಲ್ಲೇ ಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ ಸಾಕ್ಷಿಯಾದ ವಿಜಯಪುರ – Kannada News | MB Patil Launches India’s First Stream Bandar Project in Vijayapura for Groundwater Recharge

ಬಾಂದಾರಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ ಸಚಿವ ಎಂಬಿ ಪಾಟೀಲ್​​Image Credit source: tv9 kannada

ವಿಜಯಪುರ, ಏಪ್ರಿಲ್​ 19: ದೇಶದಲ್ಲೇ ಪ್ರಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ (Bandar Project) ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಇಂದು ಚಾಲನೆ ನೀಡಿದ್ದಾರೆ. ಹಳ್ಳ, ಕೊಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್​ ಜಲ ಹೆಚ್ಚಾಗುತ್ತದೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುತ್ತದೆ. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಇದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿನ ಎಲ್ಲಾ ಹಳ್ಳಗಳಿಗೆ 1ಕಿ.ಮೀಗೆ ಒಂದರಂತೆ ಬಾಂದಾರ ನಿರ್ಮಾಣ ಮಾಡುವ ಯೋಜನೆಗೆ ಒಂದು ಚಾಲನೆ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ ಪಾಟೀಲ್, ಮೊದಲ ಹಂತದ ಬಾಂದಾರ ನಿರ್ಮಾಣಕ್ಕೆ ಇಂದು ಚಾಲನೆ ನೀಡಿದರು. ಬಬಲೇಶ್ವರ ಕ್ಷೇತ್ರದ ಕಾತ್ರಾಳ, ನಂದ್ಯಾಳ, ಅರ್ಜುಣಗಿ ಗ್ರಾಮಗಳಲ್ಲಿ ಬಾಂದಾರಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಬಾಂದಾರ ನಿರ್ಮಿಸುವ ಯೋಜನೆಗೆ ಸಚಿವ ಎಂಬಿ ಪಾಟೀಲ್ ಚಾಲನೆ 

ಬಳಿಕ ಮಾತನಾಡಿದ ಎಂ.ಬಿ ಪಾಟೀಲ್, ಈ ಹಿಂದೆ 2024ರಲ್ಲಿ ಬಿಎಲ್ಡಿಇ ಸಂಸ್ಥೆಯ ನೇತೃತ್ವದಲ್ಲಿ ಕೆರೆಗಳಿಗೆ ನೀರು ಭರಿಸುವ ಕಾರ್ಯ ಮಾಡಲಾಗಿತ್ತು. ನಂತರ ರಾಜ್ಯದ ನಾಲ್ಕೈದು ಸಾವಿರ ಕೆರೆಗಳಿಗೆ ನೀರು ಭರಿಸಿದ್ದೇವೆ. ಕೆರೆಗಳಿಗೆ ನೀರು ಹರಿಸಿದ ಕಾರಣ ಅಂತರ್ಜಲ ಹೆಚ್ಚಿದೆ. ಇದರ ಮಧ್ಯೆ ಜಿಲ್ಲೆಯ ವಿವಿಧ ಏತ ನೀರಾವರಿ ಯೋಜನೆಯ ಕಾಲುವೆಯ ಭಾಗದಲ್ಲಿ 176 ಹಳ್ಳಗಳು ಬರುತ್ತದೆ. ಈ ಕಾಲುವೆಗಳ ಮೂಲಕ ಬರುವ 176 ಹಳ್ಳಗಳಲ್ಲಿ 1 ಮೀಟರ್ ಎತ್ತರದ ಚೆಕ್ ಡ್ಯಾಂ ನಿರ್ಮಾಣ ಮಾಡಲು ಇಂದು ಭೂಮಿ ಪೂಜೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ಈ ಸರಣಿ ಬಾಂದಾರಗಳಿಂದ ನೀರು ನೆಲದಲ್ಲಿ ಇಂಗುವ ಮೂಲಕ ಅಂತರ್ಜಲ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಕೊಳವೆ ಬಾವಿ ಹಾಗೂ ಬಾವಿಗಳ ನೀರಿನ ಸೆಲೆ ಹೆಚ್ಚುತ್ತವೆ. ಮಳೆಗಾಲದಲ್ಲಿ ಕೃಷ್ಣಾನದಿಯಿಂದ ಸಮುದ್ರಕ್ಕೆ 700 ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗುತ್ತದೆ. ಇದೇ ನೀರನ್ನು ಹಳ್ಳಗಳಿಗೆ ಹರಿಸಿ ಇಂಗಿಸುವ ಯೋಜನೆ ಇದಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಯೋಜನೆಯಿಂದ ಯಾರಿಗೆಲ್ಲಾ ಅನುಕೂಲ?

ಈ ಯೋಜನೆಯಿಂದ ಜಿಲ್ಲೆಯ 400ಕ್ಕೂ ಅಧಿಕ ಗ್ರಾಮಗಳ ಜನರಿಗೆ, ರೈತರಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲಿದೆ. ಪ್ರಾಯೋಗಿವಾಗಿ 10 ಕೋಟಿ ರೂ.ನ 6 ಪ್ಯಾಕೇಜ್​ಗಳನ್ನು ಇಂದು ಆರಂಭಿಸಲಾಗಿದೆ. ಕೆರೆಗಳಿಗೆ ನೀರು ಹರಿಸಲಾಗಿದೆ. ಇದರ ಜೊತೆಗೆ ಹಳ್ಳಗಳಲ್ಲಿ ನೀರು ಹರಿಸಿದರೆ ದೇಶದಲ್ಲೇ ಅಂತರ್ಜಲದ ಮಾದರಿಯ ಜಿಲ್ಲೆಯಾಗಲಿದೆ. ಆ ಮೂಲಕ ದೇಶಕ್ಕೆ ನಾವು ಮಾದರಿಯಾಗುತ್ತೇವೆ ಎಂದರು.

ಈಗಾಗಲೇ ವಿಜಯಪುರ ಜಿಲ್ಲೆಯ 200ಕ್ಕೂ ಅಧಿಕ ಕೆರೆಗಳಿಗೆ ನೀರು ಭರಿಸಲಾಗಿದೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಯೋಜನೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅನುಕೂಲವಾಗಿದೆ. ಬಿರು ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆ ಉಂಟಾಗಿಲ್ಲ. ಇದರ ಮಧ್ಯೆ ಜಿಲ್ಲೆಯ 176 ಹಳ್ಳಗಳಲ್ಲಿ, ಮಳೆಗಾಲದಲ್ಲಿ ನೀರು ಹರಿಸಿ ಆ ನೀರು ಅಂತರ್ಜಲವಾಗಿ ಪರಿವರ್ತನೆಯಾಗುವಂತೆ ಮಾಡಲು ಬಾಂದಾರಗಳ ನಿರ್ಮಾಣ ಮಾಡುತ್ತಿರೋದು ವಿಶೇಷ ಕಾಮಗಾರಿ ಆಗಿದೆ.

ಸಚಿವ ಎಂ.ಬಿ ಪಾಟೀಲ್​ ಕಾರ್ಯ ಮೆಚ್ಚುಗೆ

ಜಿಲ್ಲೆಯಲ್ಲಿ ಹಳ್ಳಗಳಿಗೆ ಕಾಲುವೆಗಳ ಮೂಲಕ ಮಳೆಗಾಲದಲ್ಲಿ ನೀರು ಹರಿಸಿ ಅದನ್ನು ಇಂಗಿಸುವುದಕ್ಕೆ ಬಾಂದಾರ ನಿರ್ಮಾಣ ಮಾಡುತ್ತಿರೋದಕ್ಕೆ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಎಂ.ಬಿ ಪಾಟೀಲ್​ ಕಾರ್ಯ ಮೆಚ್ಚುಗೆಗೆ ಪಾತ್ರವಾದುದು ಎಂದು ಹೇಳಿದ್ದಾರೆ. ಬಾಂದಾರಗಳ ನಿರ್ಮಾಣ ರೈತರ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಬಬಲೇಶ್ವರ ಪಟ್ಟಣದ ರೈತರಾದ ವಿ.ಎಸ್ ಪಾಟೀಲ್​​ ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರ: ಅನ್ನದಾತರ ಪಾಲಿಗೆ ಕಂಟಕವಾದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ; ಏಕೆ?

ಸದ್ಯ ಬಬಲೇಶ್ವರ ಕ್ಷೇತ್ರದಲ್ಲಿ ಆರಂಭವಾದ ಆರು ಪ್ಯಾಕೇಜ್​ಗಳಲ್ಲಿ ಬಾಂದಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ 9 ತಿಂಗಳಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಯನ್ನು ಮುಕ್ತಾಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ಜಿಲ್ಲೆಯ ಹಳ್ಳಗಳಿಗೆ ಬಾಂದಾರ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಕಾಮಗಾರಿ ಶೀಘ್ರವಾಗಿ ಮುಗಿಯಲಿ ಎಂಬುವುದು ಜನರ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version