ಅಬ್ಬಬ್ಬಾ… ಮನೆಯಲ್ಲಿ ನಾಯಿ ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ – Kannada News | Do you know what are the benefits of having a dog at home?

ಮನುಷ್ಯ ಮತ್ತು ಶ್ವಾನದ (dog) ನಡುವೆ ಅವಿನಾಭಾವ ಸಂಬಂಧವಿದೆ.  ಅಲ್ಲದೆ ನಾಯಿ ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ನಿಷ್ಠೆಯಿಂದ ಮಾಲೀಕನ ಸೇವೆ ಮಾಡುವ ಶ್ವಾನಗಳು ಮನೆಯ ಭದ್ರತೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಅನೇಕರು ನಾಯಿಗಳನ್ನು ತಮ್ಮ ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ. ಮನೆಯಲ್ಲಿರುವ ನಾಯಿಗಳು ನಮಗೆ ಖುಷಿಯನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯ ವೃದ್ಧಿಗೂ ಸಹಾಯವನ್ನು ಮಾಡುತ್ತವಂತೆ. ಹೌದು ತಜ್ಞರು ಹೇಳುವಂತೆ ಮನೆಯಲ್ಲಿ ನಾಯಿ ಸಾಕುವುದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವಂತೆ. ಹಾಗಿದ್ರೆ ನಾಯಿ ಸಾಕುವುದರಿಂದ ಲಭಿಸುವ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮನೆಯಲ್ಲಿ ನಾಯಿ ಸಾಕುವುದರಿಂದ ಆಗುವ ಪ್ರಯೋಜನಗಳು:

ನಕಾರಾತ್ಮಕತೆಯನ್ನು ದೂರ ಮಾಡುತ್ತವೆ: ಮನೆಯಲ್ಲಿ ನಾಯಿ ಇದ್ದರೆ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಹತ್ತಿರದಲ್ಲಿ ನಾಯಿ ಇದ್ದರೆ ನಿಮ್ಮ ಗಮನ ಅದರ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ನಕಾರಾತ್ಮಕ ಭಾವನೆಗಳು ಬರುವುದಿಲ್ಲ. ಅಲ್ಲದೆ ನಾಯಿಯಿದ್ದರೆ ಮನೆಯ ವಾತಾವರಣವೂ ಸಕಾರಾತ್ಮಕವಾಗಿರುತ್ತವೆ.

ಒತ್ತಡದಿಂದ ಮುಕ್ತಿ ಪಡೆಯಲು ಸಹಕಾರಿ: ಮನೆಯಲ್ಲಿ  ನಾಯಿಯನ್ನು ಸಾಕುವುದರಿಂದ ಒತ್ತಡವನ್ನು ದೂರವಿಡಬಹುದು. ವಾಸ್ತವವಾಗಿ, ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಹತ್ತಿರದ ನಾಯಿಯೊಂದಿಗೆ ಕಳೆಯುತ್ತಾರೆ, ಇದು ಯೋಚಿಸುವುದನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ಉಂಟುಮಾಡುವ ವಿಷಯಗಳ ಮೇಲೆ ಗಮನ ಹರಿಸುವುದನ್ನು ಕಡಿಮೆ ಮಾಡುತ್ತವೆ.  ಇದು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಸಹಕಾರಿ: ಮನೆಯಲ್ಲಿ ನಾಯಿಯನ್ನು ಸಾಕುವುದರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ನಾಯಿಯನ್ನು ಪ್ರತಿದಿನ ನಡಿಗೆಗೆ ಕರೆದುಕೊಂಡು ಹೋಗುವುದರಿಂದ ದೀರ್ಘ ನಡಿಗೆ ಅನುಭವವಾಗುತ್ತದೆ. ಇದು ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತೂಕವನ್ನು ವೇಗವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಕ್ರಿಯವಾಗಿರಿಸುತ್ತದೆ: ನಿಮ್ಮ ಮನೆಯಲ್ಲಿ ನಾಯಿ ಇದ್ದರೆ, ಅದು ನಿಮ್ಮನ್ನು ಫಿಟ್ ಆಗಿ ಮತ್ತು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಅದರೊಂದಿಗೆ ಆಟವಾಡುವುದು ಮತ್ತು ನಡೆಯಲು ಹೋಗುವುದರಿಂದ ನಿಮಗೆ ದೈಹಿಕ ಚಟುವಟಿಕೆಯೂ ಸಿಗುತ್ತದೆ. ನಾಯಿಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡುವುದಲ್ಲದೆ ಮಾನಸಿಕವಾಗಿಯೂ ಆರೋಗ್ಯವಾಗಿ ಮತ್ತು ಸಂತೋಷವಾಗಿಡುತ್ತವೆ.

ಒಂಟಿತನ ನಿವಾರಣೆಯಾಗುತ್ತದೆ: ನೀವು ಒಂಟಿತನದಿಂದ ಬಳಲುತ್ತಿದ್ದರೆ, ನಿಮ್ಮ ನಾಯಿಗಳು ನಿಮ್ಮ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ನಾಯಿಯ ದೈಹಿಕ ಸ್ಪರ್ಶವು ನಿಮ್ಮ ಸಕಾರಾತ್ಮಕ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: ರಾತ್ರಿ ಮಲಗೋ ಮುನ್ನ ಪಾದಗಳನ್ನು ತೊಳೆಯೋದು ಎಷ್ಟು ಮುಖ್ಯ ಗೊತ್ತಾ?

ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ: ನಾಯಿಗಳು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಾಯಿಯನ್ನು ಹೊಂದುವುದು ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ನಾಯಿಯ ಪ್ರೀತಿ ಮತ್ತು ಒಡನಾಟವು ಈ ಮಾನಸಿಕ ಕಾಯಿಲೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ.

ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ: ನಾಯಿಗಳು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ವಿನೋದವನ್ನು ತರುತ್ತವೆ, ಈ ಮೂಲಕ ನಮ್ಮ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:  ನಾಯಿಗಳೊಂದಿಗೆ ಆಟವಾಡುವುದರಿಂದ ನಿಮ್ಮ ದೈಹಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ – Kannada News | Indian states with highest debt and states with high debt to gsdp ratio

ಚೆನ್ನೈ, ಮೇ 10: ನಟ ಕಮ್ ರಾಜಕಾರಣಿ ಕಮ್ ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ (Tamil Nadu CM Joseph Vijay) ಅವರು ತಮ್ಮ ಸರ್ಕಾರಕ್ಕೆ 10 ಲಕ್ಷ ಕೋಟಿ ರೂ ಸಾಲದ ಹೊರೆ ಇದೆ ಎಂದು ಹಿಂದಿನ ಸರ್ಕಾರಗಳನ್ನು ದೂಷಿಸುತ್ತಾ, ಅಳಲು ಮತ್ತು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೂ ಮುಂಚೆ ಸಿಎಂ ಆಗಿದ್ದ ಎಂ.ಕೆ. ಸ್ಟಾಲಿನ್ ಅವರು ವಿಜಯ್ ಹೇಳಿಕೆಗೆ ಆಕ್ಷೇಪಿಸಿ, ತಿರುಗೇಟು ಕೊಟ್ಟಿದ್ದಾರೆ. ತಮಿಳುನಾಡು ಮಾಡಿರುವ ಸಾಲವು ಅದರ ಆರ್ಥಿಕ ಶಕ್ತಿಯ ಇತಿಮಿತಿಯಲ್ಲೇ ಇದೆ ಎಂದು ಹೇಳಿದ್ದಾರೆ.

ಭಾರತೀಯ ರಾಜ್ಯಗಳ ಪೈಕಿ ತಮಿಳುನಾಡು ಅತಿಹೆಚ್ಚು ಸಾಲ ಮಾಡಿರುವ ರಾಜ್ಯವಾಗಿದೆ. ಆದರೆ, ಶಕ್ತಿಮೀರಿ ಸಾಲ ಮಾಡಿದ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು ಇಲ್ಲ ಎನ್ನುವುದು ಗಮನಾರ್ಹ. ರಾಜ್ಯದ ಜಿಡಿಪಿಗೆ ಹೋಲಿಸಿದರೆ ಅದರ ಸಾಲ ಎಷ್ಟಿದೆ, ಅದರ ಅನುಪಾತ ಎಷ್ಟು ಎಂಬುದರ ಮೇಲೆ ಸಾಲದ ತೀವ್ರತೆ ಅಥವಾ ಅಪಾಯವನ್ನು ಗಣಿಸಬಹುದು.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಅತಿಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳು

  1. ತಮಿಳುನಾಡು: 9.6 ಲಕ್ಷ ಕೋಟಿ ರೂ
  2. ಉತ್ತರಪ್ರದೇಶ: 8.6 ಲಕ್ಷ ಕೋಟಿ ರೂ
  3. ಮಹಾರಾಷ್ಟ್ರ: 8.1 ಲಕ್ಷ ಕೋಟಿ ರೂ
  4. ಕರ್ನಾಟಕ: 7.3 ಲಕ್ಷ ಕೋಟಿ ರೂ
  5. ಪಶ್ಚಿಮ ಬಂಗಾಳ: 7.1 ಲಕ್ಷ ಕೋಟಿ ರೂ
  6. ರಾಜಸ್ಥಾನ್: 6.4 ಲಕ್ಷ ಕೋಟಿ ರೂ
  7. ಆಂಧ್ರಪ್ರದೇಶ: 5.6 ಲಕ್ಷ ಕೋಟಿ ರೂ
  8. ಮಧ್ಯಪ್ರದೇಶ: 5.3 ಲಕ್ಷ ಕೋಟಿ ರೂ
  9. ಗುಜರಾತ್: 4.9 ಲಕ್ಷ ಕೋಟಿ ರೂ
  10. ಕೇರಳ: 4.7 ಲಕ್ಷ ಕೋಟಿ ರೂ

ಈ ಮೇಲಿನ 10 ಅತ್ಯಧಿಕ ಸಾಲವಂತ ರಾಜ್ಯಗಳಲ್ಲಿ ಶಕ್ತಿಮೀರಿ ಸಾಲ ಮಾಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ ಮತ್ತು ಕೇರಳ. ಇವೆರಡೂ ಕೂಡ ಶೇ. 30ಕ್ಕಿಂತಲೂ ಹೆಚ್ಚು ಸಾಲ ಜಿಎಸ್​ಡಿಪಿ ಅನುಪಾತ ಹೊಂದಿವೆ. ಈ ರೀತಿ ಶಕ್ತಿಮೀರಿ ಬಹ ಅಧಿಕ ಸಾಲ ಮಾಡಿರುವ ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಪಂಜಾಬ್, ಹಿಮಾಚಲ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್, ಕೇರಳ ಮೊದಲಾದವು ಇವೆ.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಕರ್ನಾಟಕದ ಸಾಲ ಅನುಪಾತ ತಹಬದಿಯಲ್ಲಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳು ಉತ್ತಮ ಸಾಲ ಮತ್ತು ಜಿಡಿಪಿ ಅನುಪಾತ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CSK vs LSG: ಸತತ 7 ಎಸೆತಗಳಲ್ಲಿ 6 ಸಿಕ್ಸರ್..! ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಉರ್ವಿಲ್ ಪಟೇಲ್ – Kannada News | Urvil Patel IPL Record: CSK Batter Smashes Fastest 50 in 13 Balls vs LSG

ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್​ಮನ್ ಉರ್ವಿಲ್ ಪಟೇಲ್ ಸತತ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಇದರೊಂದಿಗೆ, ಉರ್ವಿಲ್ ಕೇವಲ 13 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಿದರು (PC- IPL X).

ಹಿಂದಿನ ಮೂರು ಪಂದ್ಯಗಳಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕಡಿಮೆ ಸ್ಕೋರ್‌ಗಳಿಗೆ ಔಟಾಗಿದ್ದ ಉರ್ವಿಲ್ ಪಟೇಲ್, ಆವೇಶ್ ಖಾನ್ ಬೌಲ್ ಮಾಡಿದ ಐದನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ನಂತರ, ಅವರು ಆರನೇ ಓವರ್‌ನ ಎರಡನೇ ಮತ್ತು ಮೂರನೇ ಎಸೆತದಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು (PC- IPL X).

ಈ ರೀತಿಯಾಗಿ, ಉರ್ವಿಲ್ ಸತತ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಮೂಡಿಸಿದರು. ಸತತ ಆರನೇ ಸಿಕ್ಸರ್ ಹೊಡೆಯಲು ಸಾಧ್ಯವಾಗದಿದ್ದರೂ, ಈ ಎಸೆತದಲ್ಲಿ ಅವರು ಬೌಂಡರಿ ಹೊಡೆದರು. ಆದರೆ ಮುಂದಿನ ಎಸೆತದಲ್ಲಿ, ಉರ್ವಿಲ್ ಮತ್ತೆ ಚೆಂಡನ್ನು ಸಿಕ್ಸರ್‌ಗೆ ಕಳುಹಿಸಿದರು. ಹೀಗಾಗಿ, ಸತತ ಏಳು ಎಸೆತಗಳಲ್ಲಿ 6, 6, 6, 6, 6, 4, 6 ಬಾರಿಸುವ ಮೂಲಕ ಅವರು ಲಕ್ನೋ ತಂಡವನ್ನು ಬೆರಗುಗೊಳಿಸಿದರು (PC- IPL X).

ಈ ಮೂಲಕ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಉರ್ವಿಲ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಸರಿಗಟ್ಟಿದರು (PC- IPL X).

2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಈ ದಾಖಲೆಯನ್ನು ನಿರ್ಮಿಸಿದ್ದರು. ಉರ್ವಿಲ್​ಗೆ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೂ ಅದನ್ನು ಸರಿಗಟ್ಟಿದರು. ಅಂತಿಮವಾಗಿ ಉರ್ವಿಲ್ ಕೇವಲ 23 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಒಳಗೊಂಡಂತೆ 65 ರನ್ ಗಳಿಸಿ ಔಟಾದರು (PC- IPL X).

Published On – 7:17 pm, Sun, 10 May 26

Source link

RCB vs MI IPL 2026 Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ – Kannada News | Royal Challengers Bengaluru vs Mumbai Indians IPL 2026 Live Cricket Score RCB vs MI Match on 10th May latest news in Kannada

ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಮುಂಬೈ ತಂಡವನ್ನು ಸುಲಭವಾಗಿ ಮಣಿಸಿತ್ತು. ಹೀಗಾಗಿ ಮುಂಬೈಗೆ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿಗೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಅವಕಾಶವಿದೆ.

Source link

ನಾಳೆಯ ಹವಾಮಾನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ; ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಧಗೆ – Kannada News | Karnataka Weather Update: Rain Likely in Coastal and South Karnataka; Heatwave to Continue in North Karnataka Tomorrow

ಬೆಂಗಳೂರು, ಮೇ 10: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾಳೆ ಒಣಹವೆ ಕಂಡುಬರಲಿದೆ. ಅದರ ಹೊರತಾಗಿಯೂ ಕರಾವಳಿ ಭಾಗದ ಎರಡು ಜಿಲ್ಲೆಗಳು ಸೇರಿ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ. ಬೆಂಗಳೂರಿಗರಿಗೂ ನಾಳೆ ಸೆಕೆಯ ಮತ್ತಷ್ಟು ಅನುಭವ ಆಗಲಿದ್ದು, ಉತ್ತರ ಕನರ್ನಟಕಭಾದಲ್ಲಿ ಬಿಸಿಲು ಜನರ ಮೈ ಸುಡಲಿದೆ. ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್​​, ರಾಯಚೂರಿನಲ್ಲಿ 39 ಮತ್ತು ಬೀದರ್​​ನಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆ ಇದ್ದು, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವೆಡೆ ಮಧ್ಯಮ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ. ಹಾಗೆಯೇ ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಸಣ್ಣ ಅಥವಾ ಮಧ್ಯಮ ಪ್ರಮಾಣದ ಮಳೆಯ ನಿರೀಕ್ಷೆ ಇದೆ.

ಇದನ್ನೂ ಓದಿ: ಮೂಡಿಗೆರೆಯಲ್ಲಿ ಬಿರುಗಾಳಿ ಮಳೆ ಆರ್ಭಟ; ಅಂಗನವಾಡಿ ಶಿಕ್ಷಕಿ ಮನೆಯ ಮೇಲೆ ಬಿದ್ದ ಮರ

ಉಳಿದಂತೆ ಉತ್ತರ ಕನ್ನಡ, ಬಾಗಲಕೋಟೆ, ಬೀದರ್​, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿಲ್ಲ ಮಳೆ

ರಾಜಧಾನಿ ಬೆಂಗಳೂರಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಇಲ್ಲ. ಬದಲಾಗಿ ನಗರದಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಕಂಡುಬರಲಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್​ ಇರಲಿದ್ದು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ 10-15 ಕಿಲೋ ಮೀಟರ್​​ ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual remedies: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದೀರಾ? ಏಲಕ್ಕಿ ಬಳಸಿ ಈ ಸರಳ ಪರಿಹಾರ ಪ್ರಯತ್ನಿಸಿ – Kannada News | Elakki Spiritual Remedies: Overcome Financial and Debt Problems with Cardamom Power

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆರ್ಥಿಕ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಸಾಲದ ಸುಳಿಯಲ್ಲಿ ಸಿಲುಕಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಸಾಧಾರಣ ಏಲಕ್ಕಿಗೆ ಅಪಾರವಾದ ದೈವಿಕ ಶಕ್ತಿಯನ್ನು ಹೊಂದಿದೆ. ಈ ಏಲಕ್ಕಿ ಬಳಸಿ ಸರಳ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕತೆಯಲ್ಲಿ ಏಲಕ್ಕಿಯ ಮಹತ್ವ:

ಏಲಕ್ಕಿಯನ್ನು ಕೇವಲ ಮಸಾಲೆ ಪದಾರ್ಥವೆಂದು ಪರಿಗಣಿಸದೆ, ಇದನ್ನು ಶುದ್ಧತೆ ಮತ್ತು ಶುಭದ ಸಂಕೇತವೆಂದು ನೋಡಲಾಗುತ್ತದೆ. ಏಲಕ್ಕಿಯು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ, ಏಲಕ್ಕಿಯನ್ನು ಬಳಸಿ ಮಾಡುವ ಪೂಜೆಗಳು ಮನೆಯಲ್ಲಿ ಧನವೃದ್ಧಿಗೆ ಸಹಕಾರಿಯಾಗುತ್ತವೆ.

ಸಾಲದ ಸಮಸ್ಯೆ ನೀಗಿಸಲು ಏಲಕ್ಕಿ ಹಾರದ ಸೇವೆ:

ನಿಮ್ಮನ್ನು ಸಾಲದ ಬಾಧೆ ಸತತವಾಗಿ ಕಾಡುತ್ತಿದ್ದರೆ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಏಲಕ್ಕಿ ಮಾಲೆಯನ್ನು ಅರ್ಪಿಸಿ. ಇದಲ್ಲದೇ ಬುಧವಾರದಂದು ಕೂಡ ದೇವರಿಗೆ ಏಲಕ್ಕಿ ಹಾರವನ್ನು ಅರ್ಪಿಸುವುದರಿಂದ ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುತ್ತದೆ.

ವೆಂಕಟೇಶ್ವರ ಸ್ವಾಮಿ ಸೇವೆ:

ವೆಂಕಟೇಶ್ವರನಿಗೆ ಏಲಕ್ಕಿ ಎಂದರೆ ಪ್ರೀತಿ. ಏಳು ಏಲಕ್ಕಿಗಳ ಮಾಲೆಯನ್ನು ದೇವರಿಗೆ ಅರ್ಪಿಸುವುದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ದಿಂಬಿನ ಕೆಳಗೆ ಏಲಕ್ಕಿ ಇಡುವ ಸರಳ ಪರಿಹಾರ:

ಆರ್ಥಿಕ ಸಮಸ್ಯೆ ಹಾಗೂ ದೃಷ್ಟಿ ದೋಷ ನಿವಾರಣೆಗೆ ಶುಕ್ರವಾರದಂದು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಐದು ಏಲಕ್ಕಿಗಳನ್ನು ಇಟ್ಟು ಸಣ್ಣ ಗಂಟು ಕಟ್ಟಿ. ಮಲಗುವಾಗ ಈ ಗಂಟನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿಕೊಳ್ಳಿ. ಮರುದಿನ ಬೆಳಿಗ್ಗೆ ಆ ಏಲಕ್ಕಿಗಳನ್ನು ಯಾರೂ ತುಳಿಯದ ಅಥವಾ ಮುಟ್ಟದ ಪವಿತ್ರ ಸ್ಥಳದಲ್ಲಿ ಇರಿಸಿ. ಈ ಪ್ರಕ್ರಿಯೆಯನ್ನು ಸತತವಾಗಿ ಮೂರು ಶುಕ್ರವಾರಗಳ ಕಾಲ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಹರಿವು ಸುಧಾರಿಸುತ್ತದೆ ಎಂದು ನಂಬಲಾಗಿದೆ

ಅದ್ಭುತ ಫಲಿತಾಂಶಕ್ಕಾಗಿ ಐದು ವಾರಗಳ ವ್ರತ:

ಏಲಕ್ಕಿಯನ್ನು ಹಾರವಾಗಿ ಪೋಣಿಸಿ ಸತತ ಐದು ಶುಕ್ರವಾರಗಳ ಕಾಲ ಧರಿಸುವುದರಿಂದ ಅಥವಾ ದೇವಿಗೆ ಅರ್ಪಿಸುವುದರಿಂದ ಅದ್ಭುತ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಇದು ಕೇವಲ ಸಾಲದ ಬಾಧೆಯನ್ನಷ್ಟೇ ಅಲ್ಲದೆ, ಅನಾರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ? – Kannada News | Tamil Nadu CM Vijay’s Oath: Vande Mataram, Jan Gana Mana, Tamil Thai Vazhthu Protocol Explained

ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ…Image Credit source: PTI

ಚೆನ್ನೈ, ಮೇ 10: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ವಿಜಯ್ (Thalapathi Joseph Vijay) ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನಲ್ಲಿರುವ ರಾಜಭವನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಿಜಯ್​ಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಡಾಗಿರುವ ವಂದೇ ಮಾತರಂ (National song Vande Mataram) ಅನ್ನು ಹಾಡಿಸಲಾಯಿತು. ನಂತರ ರಾಷ್ಟ್ರಗೀತೆ (National Anthem) ಹಾಗೂ ಆ ಬಳಿಕ ತಮಿಳುನಾಡಿನ ನಾಡಗೀತೆಯನ್ನು ಹಾಡಲಾಯಿತು.

ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಲಾಯಿತು. ನಂತರ, ರವೀಂದ್ರನಾಥ್ ಠಾಗೋರ್ ವಿರಚಿತ ಜನ ಗಣ ಮನ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ಮೂರನೇ ಕ್ರಮಾಂಕದಲ್ಲಿ ತಮಿಳ್ ತಾಯ್ ವಾಳ್ತು ಹಾಡನ್ನು ಹಾಡಿಸಲಾಯಿತು.

ತಮಿಳ್ ತಾಯ್ ವಾಳ್ತು ಹಾಡನ್ನು 19ನೇ ಶತಮಾನದ ತಮಿಳು ಕವಿ ಮನೋನ್ಮಣಿಯಮ್ ಸುಂದಂ ಪಿಳ್ಳೈ ಅವರು ಬರೆದಿದ್ದಾರೆ. ತಮಿಳು ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಹಾಡು ಇದು. 1970ರಲ್ಲಿ ಈ ಹಾಡನ್ನು ತಮಿಳುನಾಡು ಸರ್ಕಾರ ಅಧಿಕೃತ ಪ್ರಾರ್ಥನೆ ಎನ್ನುವ ಸ್ಥಾನ ಕೊಟ್ಟಿತು. 2021ರಲ್ಲಿ ಇದು ತಮಿಳುನಾಡಿನ ನಾಡಗೀತೆಯಾಯಿತು.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

1970ರಿಂದಲೂ ತಮಿಳುನಾಡಿನಲ್ಲಿ ಪ್ರಮಾಣ ವಚನ ಬೋಧನೆಯಂತಹ ಕಾರ್ಯಕ್ರಮಗಳಲ್ಲಿ ತಮಿಳ್ ತಾಯ್ ವಾಳ್ತುವನ್ನು ಮೊದಲು ಹಾಡಲಾಗುತ್ತದೆ. ನಂತರ ಜನ ಗಣ ಮನ ಹಾಡಿಸಲಾಗುತ್ತಾ ಬಂದಿದೆ. ಮಧ್ಯದಲ್ಲಿ ಒಮ್ಮೆ ಜಯಲಲಿತಾ ಅವರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಾಗಿತ್ತು. ಉಳಿದಂತೆ, ತಮಿಳು ನಾಡಗೀತೆ ಮೊದಲು, ನಂತರ ರಾಷ್ಟ್ರ ಗೀತೆ. ಈ ಪರಿಪಾಟವೇ ಇದ್ದದ್ದು.

ಜೋಸೆಫ್ ವಿಜಯ್ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಗೆ 3ನೇ ಸ್ಥಾನ ಯಾಕೆ?

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕ್ರಮವಾಗಿ ವಂದೇ ಮಾತರಂ, ಜನಗಣಮನ ಹಾಗೂ ತಮಿಳು ತಾಯ್ ವಾಳ್ತು ಹಾಡಲಾಯಿತು. ಮೊದಲು ಇರುತ್ತಿದ್ದ ತಮಿಳು ನಾಡಗೀತೆ ಮೂರನೇ ಕ್ರಮಾಂಕಕ್ಕೆ ಹೋಗಿರುವುದು ಕೆಲವರಿಗೆ ಅಚ್ಚರಿ ಎನಿಸಬಹುದು. ಅದಕ್ಕೆ ಕಾರಣಗಳಿವೆ.

2026ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುಗಳಿಗೆ ಒಂದು ನಿಯಮಾವಳಿ ಮತ್ತು ಕ್ರಮಗಳನ್ನು ನಿಗದಿ ಮಾಡಿದೆ. ಅದರ ಪ್ರಕಾರ ಮೊದಲು ವಂದೇ ಮಾತರಂ ಹಾಡಬೇಕು. ನಂತರ ಜನ ಗಣ ಮನ ಇರಬೇಕು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

ಈ ಪ್ರೋಟೋಕಾಲ್ ಅನ್ನು ವಿಜಯ್ ಕಾರ್ಯಕ್ರಮದಲ್ಲಿ ನೆರವೇರಿಸಲಾಗಿದೆ. ಇದು ವಿಜಯ್ ಅವರ ರಾಜಕೀಯ ನಿಲುವಿನಲ್ಲಾದ ಬದಲಾವಣೆ ಎಂದಾಗಲೀ, ದ್ರಾವಿಡ ಸಿದ್ಧಾಂತಗಳಿಂದ ದೂರ ಹೋಗಿದ್ದಾರೆಂದಾಲೀ ಅರ್ಥೈಸಲು ಆಗುವುದಿಲ್ಲ. ಪಶ್ಚಿಮ ಬಂಗಾಳ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ರಾಷ್ಟ್ರೀಯ ಹಾಡು, ರಾಷ್ಟ್ರ ಗೀತೆ ಹಾಗೂ ಬಂಗಾಳಿ ನಾಡಗೀತೆಯನ್ನು ಅನುಕ್ರಮವಾಗಿ ಹಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು – Kannada News | Priyanka Thimmesh talks about her Rudrabhishekham movie

ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿನ್ನೆಯಷ್ಟೆ ನಗರದ ಜಿಟಿ ಮಾಲ್​​ನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಾಡೊಂದನ್ನು ಬಿಡುಗಡೆ ಮಾಡಲಾಯ್ತು. ವಿಜಯ್ ರಾಘವೇಂದ್ರ ಅವರು ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ಈ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಾಯಕಿ ಪ್ರಿಯಾಂಕಾ ತಿಮ್ಮೇಶ್. ನಿನ್ನೆ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಸಿನಿಮಾದ ಬಗ್ಗೆ, ಸಿನಿಮಾದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ! – Kannada News | Kidney Stone Diet: Foods to Avoid and Safer Alternatives

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್‌ (Kidney Stone) ಸಮಸ್ಯೆ ಅನೇಕರಲ್ಲಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರಂಭದಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಾಣಿಸಿದರೂ, ಸಮಯ ಕಳೆದಂತೆ ಇದು ತೀವ್ರ ನೋವು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಪ್ರಕಾರ, ದೇಹದಲ್ಲಿ ಕೆಲವು ಖನಿಜಗಳು ಅಧಿಕ ಪ್ರಮಾಣದಲ್ಲಿ ಸೇರುವುದರಿಂದ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳುತ್ತದೆ. ದಿನನಿತ್ಯ ಸೇವಿಸುವ ಕೆಲವು ಆಹಾರಗಳು ಈ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಆಹಾರ ಪದ್ಧತಿಯ ಬಗ್ಗೆ ಜಾಗ್ರತೆ ವಹಿಸುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಯಾವ ಆಹಾರಗಳು ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸುತ್ತದೆ, ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸುವ ಆಹಾರಗಳು:

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಹೆಚ್ಚು ಉಪ್ಪು ಇರುವ ಆಹಾರ, ಪ್ರೊಸೆಸ್ಡ್ ಫುಡ್ ಮತ್ತು ಅಧಿಕ ಸಕ್ಕರೆ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುತ್ತದೆ. ಇದರ ಜೊತೆಗೆ ಕೆಲವು ಆಹಾರಗಳಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿರುತ್ತದೆ. ಈ ಅಂಶ ದೇಹದಲ್ಲಿ ಜಮೆಯಾಗುತ್ತಾ ಕಲ್ಲು ರೂಪುಗೊಳ್ಳಲು ಕಾರಣವಾಗಬಹುದು. ಜಂಕ್ ಫುಡ್, ಪ್ಯಾಕೇಜ್ಡ್ ಸ್ನ್ಯಾಕ್ಸ್, ಕೋಲ್ಡ್ ಡ್ರಿಂಕ್ಸ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳ ಅಧಿಕ ಸೇವನೆಯೂ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಕಡಿಮೆ ನೀರು ಕುಡಿಯುವ ಅಭ್ಯಾಸವೂ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಖನಿಜಗಳು ಮೂತ್ರದ ಮೂಲಕ ಹೊರಹೋಗದೆ ಕಲ್ಲಾಗಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಸಾಮಾನ್ಯವಾಗಿ ಕಿಡ್ನಿಯನ್ನು ಆರೋಗ್ಯವಾಗಿಡಲು ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಜೊತೆಗೆ ತಾಜಾ ಹಣ್ಣು, ಹಸಿರು ತರಕಾರಿಗಳು ಸೇವಿಸುವುದು ಉತ್ತಮ. ನಿಂಬೆ ರಸ, ಎಳನೀರು ಹಾಗೂ ಫೈಬರ್‌ಯುಕ್ತ ಆಹಾರ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯಕವಾಗುತ್ತದೆ.

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ:

ಹೊಟ್ಟೆ ಅಥವಾ ಬೆನ್ನಿನ ಭಾಗದಲ್ಲಿ ತೀವ್ರ ನೋವು, ಮೂತ್ರವಿಸರ್ಜನೆ ವೇಳೆ ಉರಿ, ಪದೇಪದೇ ಮೂತ್ರ ಬರುವುದು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಸ್ಟೋನ್‌ನ ಪ್ರಮುಖ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆತ್ಮೀಯ ಸ್ನೇಹಿತ, ಸಚಿವ ಡಿ.ಸುಧಾಕರ್ ಅಗಲಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಕಣ್ಣೀರು – Kannada News | DK Shivakumar Breaks Down After Paying Last Respects to Minister D. Sudhakar

ಚಿತ್ರದುರ್ಗ, ಮೇ 10: ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ ಡಿ.ಕೆ. ಶಿವಕುಮಾರ್ ಆತ್ಮೀಯ ಸ್ನೇಹಿತ ಕಂಡು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸುಧಾಕರ್​​ ಅವರ ಪಾರ್ಥಿವ ಶರೀರ ನೋಡುತ್ತಿದ್ದಂತೆ ದುಃಖ ತಡೆದುಕೊಳ್ಳಲಾಗದೆ ಡಿಕೆಶಿ ಕಣ್ಣೀರು ಹಾಕಿದ್ದಾರೆ. ಬಳಿಕ ಡಿ.ಸುಧಾಕರ್ ಪುತ್ರ ಸುಹಾಸ್ ಬೆನ್ನುತಟ್ಟಿ ಸಾಂತ್ವನ ಹೇಳಿದ್ದು, ಡಿಕೆಶಿ ನೋಡುತ್ತಿದ್ದಂತೆ ಡಿ.ಸುಧಾಕರ್ ಪುತ್ರ ಸುಹಾಸ್ ಕೂಡ ಭಾವುಕರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version