ವಿಜಯ್ ರಾಘವೇಂದ್ರ ‘ರುದ್ರಾಭಿಷೇಕಂ’ ಹಾಡು ಬಿಡುಗಡೆ: ಗಮನ ಸೆಳೆದ ‘ನವರತ್ನ’ಗಳು – Kannada News | Vijay Raghavendra starrer Rudrabishekam movie song released

ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ‘ರುದ್ರಾಭಿಷೇಕಂ’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇಂದು (ಮೇ 09) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ನಗರದ ಜಿಟಿ ಮಾಲ್​​ನಲ್ಲಿ ಅದ್ಧೂರಿಯಾಗಿ ಆಯೋಜಿಸಿತ್ತು. ವಿಜಯ್ ರಾಘವೇಂದ್ರ, ಸಂಗೀತ ನಿರ್ದೇಶಕ ವಿ ಮನೋಹರ್ ಸೇರಿದಂತೆ ಚಿತ್ರತಂಡದ ಹಲವು ಪ್ರಮುಖರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ‘ನ್ಯಾಚುರಲ್ ಸ್ಟಾರ್’ ಎಂಬ ಬಿರುದನ್ನು ಸಹ ನೀಡಲಾಯ್ತು. ಭಿನ್ನ ಕತೆಯುಳ್ಳ ಈ ಸಿನಿಮಾವನ್ನು ‘ನವರತ್ನ’ಗಳು ನಿರ್ಮಾಣ ಮಾಡಿರುವುದು ವಿಶೇಷ.

‘ರುದ್ರಾಭಿಷೇಕಂ’, ಹೆಸರೇ ಸೂಚಿಸುತ್ತಿರುವಂತೆ ಪೌರಾಣಿಕ ಹಿನ್ನೆಲೆಯುಳ್ಳ, ಗ್ರಾಮ್ಯ ಕತೆಯನ್ನು ಸಿನಿಮಾ ಒಳಗೊಂಡಿದ್ದು, ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರತಂಡ ಒಟ್ಟಿಗೆ ಬಿಡುಗಡೆ ಮಾಡಿದ್ದು, ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾದ ಒಂಬತ್ತು ನಿರ್ಮಾಪಕರು ಗಮನ ಸೆಳೆದರು. ಸಿನಿಮಾದ ಸಂಗೀತ ನಿರ್ದೇಶಕ ವಿ ಮನೋಹರ್, ಒಂಬತ್ತು ಉತ್ಸಾಹಿ ನಿರ್ಮಾಪಕರನ್ನು ‘ನವರತ್ನ’ಗಳೆಂದು ಕರೆದು ಕೊಂಡಾಡಿದರು.

‘ರುದ್ರಾಭಿಷೇಕಂ’ ಸಿನಿಮಾವನ್ನು ಒಂಬತ್ತು ಮಂದಿ ಗೆಳೆಯರು ಸೇರಿ ನಿರ್ಮಿಸಿದ್ದಾರೆ. ವಿಶೇಷವೆಂದರೆ ಆ ಒಂಬತ್ತೂ ಮಂದಿಯೂ ಕೃಷಿಯ ಹಿನ್ನೆಲೆಯಿಂದ ಬಂದವರು. ಕೃಷಿಕರೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾ ‘ರುದ್ರಾಭಿಷೇಕಂ’. ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಸಿನಿಮಾದ ಬಗೆಗಿನ ತಮ್ಮ ಪ್ರೀತಿ, ಆಸಕ್ತಿಯನ್ನು ವಿವರಿಸಿದರು. ನಾಯಕ ವಿಜಯ್ ರಾಘವೇಂದ್ರ, ನಾಯಕಿ ಪ್ರಿಯಾಂಕಾ ಸೇರಿದಂತೆ ಇತರೆ ಕಲಾವಿದರು, ತಂತ್ರಜ್ಞರು ನೀಡಿದ ಬೆಂಬಲ, ಸಿನಿಮಾ ನಿರ್ಮಾಣದಲ್ಲಿ ಹಾಕಿದ ಶ್ರಮವನ್ನು ಕೊಂಡಾಡಿದರು.

ಇದನ್ನೂ ಓದಿ:ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್

ನಟ ವಿಜಯ್ ರಾಘವೇಂದ್ರ ಮಾತನಾಡಿ, ಇಂಥಹಾ ಒಂದು ಪಾತ್ರದಲ್ಲಿ ನಟಿಸಲು ಬಹಳ ವರ್ಷಗಳಿಂದಲೂ ಕಾಯುತ್ತಿದ್ದುದಾಗಿ ಹೇಳಿದರು. ಸಿನಿಮಾನಲ್ಲಿ ಅವರು ಹಲವು ಶೇಡ್​​ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ವೀರಗಾಸೆಯ ಲುಕ್ ಹಾಗೂ ವೀರಗಾಸೆಯ ದೃಶ್ಯಗಳು ಇಡೀ ಸಿನಿಮಾದ ಹೈಲೆಟ್ ಎಂದರು. ನಿರ್ಮಾಪಕರು ತಮಗಿತ್ತ ಸಹಕಾರ, ನೋಡಿಕೊಂಡ ರೀತಿಯನ್ನು ಕೊಂಡಾಡಿದ ಅವರು ಇಂಥಹಾ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬೇಕೆಂದರು.

ನಾಯಕಿ ಪ್ರಿಯಾಂಕಾ ತಿಮ್ಮೇಶ್, ನಿರ್ದೇಶಕ ವಸಂತ್ ಕುಮಾರ್, ಸಂಗೀತ ನಿರ್ದೇಶಕ ವಿ ಮನೋಹರ್, ನಟ ಬಾಲರಾಜ್ವಾಡಿ ಇನ್ನೂ ಹಲವರು ಸಿನಿಮಾದ ಬಗ್ಗೆ, ಸಿನಿಮಾ ಶೂಟಿಂಗ್​​ನ ಅನುಭವಗಳ ಬಗ್ಗೆ ಮಾತನಾಡಿದರು. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಲಾಯರ್ ಜಯರಾಮ್, ವೆಂಕಟೇಶ್, ಮಂಜುನಾಥ್, ರವಿಕುಮಾರ್, ಸುರೇಶ್ ಬಾಬು, ಚಿದಾನಂದ ಮೂರ್ತಿ, ಅಶ್ವತ್ಥನಾರಾಯಣ, ಶಿವಕುಮಾರ್, ಕುಸುಮಾ ವಸಂತ್ ಅವರುಗಳು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RR vs GT: ಗುಜರಾತ್ ವಿರುದ್ಧ ಮೊದಲ ಓವರ್​ನಲ್ಲೇ ಬೇಡದ ದಾಖಲೆ ಬರೆದ ಆರ್ಚರ್ – Kannada News | Jofra Archer’s IPL 2026 unwanted Record: 11 Ball First Over Shocks RR vs GT

ಐಪಿಎಲ್ 2026 (IPL 2026) ರ 52 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ (RR vs GT) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಗಿಲ್ ಹಾಗೂ ಸುದರ್ಶನ್ ಇನ್ನಿಂಗ್ಸ್ ಆರಂಭಿಸಿದರೆ, ಇತ್ತ ರಾಜಸ್ಥಾನ್ ಪರ ವೇಗಿ ಜೋಫ್ರಾ ಆರ್ಚರ್ (Jofra Archer) ಮೊದಲ ಓವರ್ ಬೌಲ್ ಮಾಡಿದರು. ಈ ಸೀಸನ್​ನಲ್ಲಿ ಮೊದಲ ಓವರ್​ನಲ್ಲೇ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದ ಆರ್ಚರ್, ಈ ಪಂದ್ಯದಲ್ಲಿ ಮಾತ್ರ ಅತ್ಯಂತ ಕಳಪೆ ದಾಖಲೆ ಬರೆದರು. ಗುಜರಾತ್ ವಿರುದ್ಧ ಮೊದಲ ಓವರ್ ಎಸೆದ ಆರ್ಚರ್ ಈ ಓವರ್​ನಲ್ಲಿ 6 ಎಸೆತಗಳ ಬದಲಿಗೆ ಬರೋಬ್ಬರಿ 11 ಎಸೆತಗಳನ್ನು ಬೌಲ್ ಮಾಡಿ ಬೇಡದ ದಾಖಲೆಗೆ ಕೊರಳೊಡ್ಡಿದರು.

ದೀರ್ಘ ಓವರ್ ಎಸೆದ ಆರ್ಚರ್

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಆರು ಕಾನೂನುಬದ್ಧ ಚೆಂಡುಗಳನ್ನು ಎಸೆಯಲು ಜೋಫ್ರಾ ಆರ್ಚರ್ ಒಟ್ಟು 11 ಎಸೆತಗಳನ್ನು ಎಸೆಯಬೇಕಾಯಿತು. ಈ ಓವರ್​ನಲ್ಲಿ ಅವರು ವೈಡ್‌ಗಳು, ನೋ-ಬಾಲ್‌ಗಳನ್ನು ಎಸೆದರು. ವೇಗ ಮತ್ತು ನಿಖರವಾದ ಲೈನ್ ಮತ್ತು ಲೆಂತ್‌ಗೆ ಹೆಸರುವಾಸಿಯಾದ ಆರ್ಚರ್, ಈ ಪಂದ್ಯದಲ್ಲಿ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಐಪಿಎಲ್ ಪಂದ್ಯದ ಮೊದಲ ಓವರ್‌ನಲ್ಲಿ ಆರ್ಚರ್ 11 ಎಸೆತಗಳನ್ನು ಎಸೆದಿರುವುದು ಇದೇ ಮೊದಲು. ಐಪಿಎಲ್‌ನಲ್ಲಿ ಒಟ್ಟು ಆರು ಬೌಲರ್‌ಗಳು ಈ ಹಿಂದೆ ಒಂದು ಓವರ್‌ನಲ್ಲಿ 11 ಎಸೆತಗಳನ್ನು ಎಸೆದಿದ್ದಾರೆ, ಆದರೆ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಯಾರೂ ಹೀಗೆ ಮಾಡಿರಲಿಲ್ಲ.

ಐಪಿಎಲ್‌ನಲ್ಲಿ ಅತಿ ದೀರ್ಘ ಓವರ್ ಬೌಲ್ ಮಾಡಿದವರು

  • 11 ಚೆಂಡುಗಳು- ಮೊಹಮ್ಮದ್ ಸಿರಾಜ್ vs ಎಂಐ, ಬೆಂಗಳೂರು, 2023 (19ನೇ ಓವರ್)
  • 11 ಚೆಂಡುಗಳು- ತುಷಾರ್ ದೇಶಪಾಂಡೆ vs ಎಲ್‌ಎಸ್‌ಜಿ, ಚೆನ್ನೈ, 2023 (4ನೇ ಓವರ್)
  • 11 ಚೆಂಡುಗಳು- ಶಾರ್ದೂಲ್ ಠಾಕೂರ್ vs ಕೆಕೆಆರ್, ಕೋಲ್ಕತ್ತಾ, 2025 (13ನೇ ಓವರ್)
  • 11 ಚೆಂಡುಗಳು – ಸಂದೀಪ್ ಶರ್ಮಾ vs ಡಿಸಿ, ದೆಹಲಿ, 2025 (20ನೇ ಓವರ್)
  • 11 ಚೆಂಡುಗಳು- ಹಾರ್ದಿಕ್ ಪಾಂಡ್ಯ vs ಜಿಟಿ, ವಾಂಖೆಡೆ, 2025 (8ನೇ ಓವರ್)
  • 11 ಚೆಂಡುಗಳು- ಅರ್ಶ್‌ದೀಪ್ ಸಿಂಗ್ vs ಜಿಟಿ, ಮುಲ್ಲನ್‌ಪುರ, 2026 (20ನೇ ಓವರ್)
  • 11 ಎಸೆತಗಳು- ಜೋಫ್ರಾ ಆರ್ಚರ್ vs ಜಿಟಿ, ಜೈಪುರ, 2026 (ಮೊದಲನೇ ಓವರ್)

RR vs GT IPL 2026 Live Score: ಗುಜರಾತ್ ಮೊದಲ ವಿಕೆಟ್ ಪತನ

ಆರ್ಚರ್ ಅವರ ಕಳಪೆ ಬೌಲಿಂಗ್​ನ ಲಾಭ ಪಡೆದ ಗುಜರಾತ್ ಟೈಟಾನ್ಸ್‌ ಉತ್ತಮ ಆರಂಭ ಪಡೆಯಿತು. ಪವರ್‌ಪ್ಲೇನಲ್ಲಿ ಜೋಫ್ರಾ ಆರ್ಚರ್ ಒಟ್ಟು ಎರಡು ಓವರ್‌ಗಳನ್ನು ಬೌಲ್ ಮಾಡಿ, 16.50 ರ ಎಕಾನಮಿ ರೇಟ್​ನಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದಾಗಿ ಗುಜರಾತ್ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 82 ರನ್‌ಗಳಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ

ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು (ಮೇ 09) ಧ್ರುವ ಸರ್ಜಾ ಅವರು ತುಮಕೂರಿನಲ್ಲಿ ‘ಕೆಡಿ’ ಸಿನಿಮಾ ಪ್ರದರ್ಶನವಾಗುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಧ್ರುವ ಸರ್ಜಾ, ‘ತುಮಕೂರು ನಮ್ಮ ಮೂಲ ಊರು, ಇಲ್ಲಿ ಸಾಕಷ್ಟು ನೆನಪುಗಳಿವೆ’ ಎಂದರು. ಜೊತೆಗೆ ತಮ್ಮ ನಟನೆಯ ‘ಕೆಡಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | PM Narendra Modi Bengaluru Visit on May 10: HAL Speech and Art of Living Inauguration; Here Are the Details

ಪ್ರಧಾನಿ ನರೇಂದ್ರ ಮೋದಿImage Credit source: tv9 kannada

ಬೆಂಗಳೂರು, ಮೇ 09: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 10ರಂದು ಕರ್ನಾಟಕ್ಕೆ ಆಗಮಿಸುತ್ತಿದ್ದಾರೆ. ಆರ್ಟ್ ಆಫ್ ಲೀವಿಂಗ್ ಆಶ್ರಮದಲ್ಲಿ ಧ್ಯಾನ ಮಂದಿರ ಮತ್ತು ವಿವಿಧ ಕಾರ್ಯಕ್ರಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸ ಇಲ್ಲಾಖೆ ಕೂಡ ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದೆ.

ಮುಖ್ಯಾಂಶಗಳು

  • ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ
  • ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ
  • ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೂ ಭೇಟಿ

ಪ್ರಧಾನಿ ಮೋದಿ ಭೇಟಿ ವಿವರ ಹೀಗಿದೆ

  • ಬೆಳಗ್ಗೆ 9.40ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಆಗಮನ
  • ಬೆಳಗ್ಗೆ 9.45 ರಿಂದ 10.15ರವರೆಗೆ ಹೆಚ್​​ಎಎಲ್ ಏರ್​​ಪೋರ್ಟ್ ಮುಂಭಾಗ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ನಂತರ ಹೆಚ್​ಎಎಲ್ ಏರ್​​ಪೋರ್ಟ್​ನಿಂದ ಹೆಲಿಕಾಪ್ಟರ್ ಮೂಲಕ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ಆಶ್ರಮಕ್ಕೆ ತೆರಳಲಿರುವ ಮೋದಿ, ಧ್ಯಾನ ಮಂದಿರ ಮತ್ತು ವಿವಿಧ ಕಾರ್ಯಕ್ರಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಒಂದೂವರೆ ಗಂಟೆ ಕಾಲ ಆಶ್ರಮದಲ್ಲಿ ಇರಲಿದ್ದಾರೆ.
  • ಮಧ್ಯಾಹ್ನ 01.40ಕ್ಕೆ ಬೆಂಗಳೂರಿನಿಂದ ಹೈದರಾಬಾದ್​ಗೆ ನಿರ್ಗಮಿಸಲಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರು ಭೇಟಿ ಬಗ್ಗೆ ಆರ್​​ ಅಶೋಕ್​ ಮಾಹಿತಿ

ಇನ್ನು ಪ್ರಧಾನಿ ಮೋದಿ ಬೆಂಗಳೂರು ಭೇಟಿ ಬಗ್ಗೆ ಇತ್ತೀಚೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾಹಿತಿ ನಿಡಿದ್ದರು. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಹಿನ್ನೆಲೆ ಹಾಗೂ ಕೇರಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಿದ ಹಿನ್ನೆಲೆಯಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದಿದ್ದರು.

ಮೇ 10ರಂದು ಪ್ರಧಾನಿ ಮೋದಿ ಅವರು ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಸೇರುವ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ 10 ರಿಂದ 15 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ?

ಇದೊಂದು ಸಂಪೂರ್ಣ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದ್ದು, ಬಳಿಕ ಪ್ರಧಾನಿ ಮೋದಿ ಅವರು ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs MI: ಆರ್​​ಸಿಬಿ- ಮುಂಬೈ ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಹವಾಮಾನ? ಪಿಚ್ ಯಾರಿಗೆ ಸಹಕಾರಿ – Kannada News | IPL 2026: RCB vs MI 54th Match head to head, pitch and weather report

ಐಪಿಎಲ್ 2026 (IPL 2026) ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಮುಂಬೈ ತಂಡವನ್ನು ಸುಲಭವಾಗಿ ಮಣಿಸಿತ್ತು. ಹೀಗಾಗಿ ಮುಂಬೈಗೆ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿಗೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಅವಕಾಶವಿದೆ.

ಒಂದೆಡೆ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ತಂಡವು ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋತಿದೆ. ಈ ಮೂಲಕ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದರೆ, ಏಳು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು, ಮುಂಬೈ ಇಂಡಿಯನ್ಸ್ ಯಾವುದೇ ಬೆಲೆ ತೆತ್ತಾದರೂ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು.

ಮುಖಾಮುಖಿ ದಾಖಲೆ

ಆರ್‌ಸಿಬಿ ಮತ್ತು ಮುಂಬೈ ತಂಡಗಳು ಇಲ್ಲಿಯವರೆಗೆ ಒಟ್ಟು 35 ಪಂದ್ಯಗಳನ್ನು ಆಡಿದ್ದು, ಮುಂಬೈ ತಂಡ 19 ಪಂದ್ಯಗಳಲ್ಲಿ ಗೆದ್ದಿದ್ದರೆ, ಆರ್‌ಸಿಬಿ 16 ಪಂದ್ಯಗಳಲ್ಲಿ ಗೆದ್ದಿದೆ. ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ತಂಡವನ್ನು 18 ರನ್‌ಗಳಿಂದ ಸೋಲಿಸಿತ್ತು.

ಪಿಚ್ ಹಾಗೂ ಹವಾಮಾನ ವರದಿ

ಇನ್ನು ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣವು ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡಕ್ಕೂ ಸಮನಾಗಿ ನೆರವಾಗಲಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 191 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 181 ಆಗಿದೆ. ಅಕ್ಯೂವೆದರ್ ಪ್ರಕಾರ, ಭಾನುವಾರ ರಾಯ್‌ಪುರದಲ್ಲಿ ಹವಾಮಾನವು ಸ್ಪಷ್ಟ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಮಳೆ ಬರುವ ಸಾಧ್ಯತೆ ಕಡಿಮೆ. ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

IPL 2026: ತನ್ನ 2ನೇ ತವರು ಮೈದಾನದಲ್ಲಿ ಚೊಚ್ಚಲ ಪಂದ್ಯವನ್ನಾಡಲಿದೆ ಆರ್​ಸಿಬಿ; ಎದುರಾಳಿ ಯಾರು?

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್: ರಾಸಿಖ್ ಸಲಾಂ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಹಾರ್ದಿಕ್ ಪಾಂಡ್ಯ/ ಸೂರ್ಯಕುಮಾರ್ ಯಾದವ್ (ನಾಯಕ), ವಿಲ್ ಜಾಕ್ಸ್, ತಿಲಕ್ ವರ್ಮಾ, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಅಲ್ಲಾ ಘಜನ್ಫರ್, ರಘು ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ: ಸಮಯ, ಸ್ಥಳದ ಮಾಹಿತಿ ಇಲ್ಲಿದೆ – Kannada News | Vijay’s CM Oath Ceremony: Tamil Nadu Set for New Era with TVK Government on May 10

ಚೆನ್ನೈ, ಮೇ 09: ಕೊನೆಗೂ ತಮಿಳುನಾಡು ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್​​ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದೆ. TVK ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಸಂಪಾದಿಸಿದ ಹಿನ್ನೆಲೆ, ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾಳೆ ಚೆನ್ನೈನ ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.15ಕ್ಕೆ ಸಿಎಂ ಆಗಿ ವಿಜಯ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯ್​ ಜೊತೆ ಪ್ರಮಾಣವಚನ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ವಿಜಯ್ ಹಿರಿಯ ಟಿವಿಕೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ವಿದುತಲೈ ಚಿರತೈಗಲ್ ಕಚ್ಚಿ (VCK), ಭಾರತೀಯ ಕಮ್ಯುನಿಸ್ಟ್ ಪಕ್ಷ (CPI), ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ ನಂತರ ಕಗ್ಗಂಟಾಗಿದ್ದ ಸರ್ಕಾರ ರಚನೆಯ ದಾರಿ ಸುಗಮವಾಗಿತ್ತು. 59 ವರ್ಷಗಳ ಬಳಿಕ ದ್ರಾವಿಡ ರಾಜಕೀಯೇತರ ನಾಯಕನೊಬ್ಬ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವುದು ವಿಶೇಷವಾಗಿದ್ದು, ವಿಜಯ್ ಮೊದಲ ದ್ರಾವಿಡೇತರ ಸಿಎಂ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.

ಇದನ್ನೂ ಓದಿ: ವಿಜಯ್ ಸಿಎಂ ಆಗುವುದು ಖಚಿತ; ಕೊನೆಗೂ ಟಿವಿಕೆಗೆ ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ

ಏಪ್ರಿಲ್ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಆದರೆ ಈಗ ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಬೆಂಬಲದಿಂದ ಮೈತ್ರಿಕೂಟದ ಬಲ 120ಕ್ಕೆ ಏರಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಒಂದು ಸ್ಥಾನ ತ್ಯಜಿಸಬೇಕಿರುವುದರಿಂದ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್‌ನ 5 ಶಾಸಕರು ಹಾಗೂ ಸಿಪಿಐ, ಸಿಪಿಐ(ಎಂ), ವಿಟಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ವಿಜಯ್​​ರನ್ನು ಬೆಂಬಲಿಸಿದ್ದಾರೆ.

‘ರಾಷ್ಟ್ರಪತಿ ಆಡಳಿತ ತಪ್ಪಿಸಲು ಬೆಂಬಲ’

ಈ ನಡುವೆ ಟಿವಿಕೆಗೆ ಬೆಂಬಲ ಘೋಷಣೆ ಮಾಡಿರುವ ಬಗ್ಗೆ ಚೆನ್ನೈನಲ್ಲಿ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಂದ ವಿಜಯ್​ಗೆ ಅಧಿಕಾರ ತಪ್ಪಿತೆಂಬ ಅಪವಾದ ಬರಬಾರದು. ಅಲ್ಲದೆ ರಾಷ್ಟ್ರಪತಿ ಆಡಳಿತ ತಪ್ಪಿಸಬೇಕಿರುವ ಕಾರಣ ವಿಜಯ್​​ಗೆ ಭೇಷರತ್​​ ಬೆಂಬಲ ಘೋಷಿಸಿದ್ದೇವೆ ಎಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಭಿಮಾನೋತ್ಸವದಲ್ಲಿ ಯಡಿಯೂರಪ್ಪ ಭಾವುಕ ಭಾಷಣ: ಸಾರ್ವಜನಿಕ ಸೇವೆಯ ಪಯಣ ಮೆಲುಕು ಹಾಕಿದ ಮಾಜಿ ಸಿಎಂ – Kannada News | Former CM Yediyurappa Turns Emotional at Abhimanotsava, Recalls Decades of Public Service

ಚಿತ್ರದುರ್ಗ ಮೇ 09: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ 50 ವರ್ಷಗಳ ಸಾರ್ವಜನಿಕ ಸೇವೆಯ ಪಯಣವನ್ನು ನೆನಪಿಸಿಕೊಂಡು ಕರ್ನಾಟಕದ ಜನತೆಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನವು ಶಿಕಾರಿಪುರದ ಬೀದಿಗಳಿಂದ ವಿಧಾನಸೌಧದ ಹಂತಗಳವರೆಗೂ ಸಾಗಿ ಬಂದಿದೆ. ಕಾರ್ಯಕರ್ತರು ಮತ್ತು ರೈತರ ಆಶೀರ್ವಾದವೇ ನನ್ನ ಶಕ್ತಿಗೆ ಕಾರಣ. ಈ ದಿನವು ಒಬ್ಬ ವ್ಯಕ್ತಿಯ ಆಚರಣೆಯಲ್ಲ, ಬದಲಿಗೆ ಐದು ದಶಕಗಳ ಸಹಬಾಳ್ವೆಯ ಆಚರಣೆ ಎಂದು ಬಣ್ಣಿಸಿದ್ದಾರೆ. ತಮ್ಮ ಕೊನೆಯ ಉಸಿರಿನವರೆಗೂ ದೇಶ, ರಾಜ್ಯ ಮತ್ತು ಪಕ್ಷಕ್ಕಾಗಿ ದುಡಿಯುವ ಸಂಕಲ್ಪ ವ್ಯಕ್ತಪಡಿಸಿ ಭಾವುಕರಾದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಕ್ಕಳ ಹೊಟ್ಟೆಯಲ್ಲಿ ಜಂತುಹುಳುಗಳಿವೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಬೆಸ್ಟ್ ಐಡಿಯಾ – Kannada News | Worm Infection in Kids: Causes, Symptoms, and Deworming Tips

ಸಣ್ಣ ಮಕ್ಕಳ ಹೊಟ್ಟೆಯಲ್ಲಿ ಹುಳುಗಳು (Worm Infection) ಕಾಣಿಸುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಮಕ್ಕಳ ಆರೋಗ್ಯ (Children’s health) ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಸ್ವಚ್ಛತೆ, ಕೈ ತೊಳೆಯದೇ ಊಟ ಮಾಡುವುದು ಹಾಗೂ ಮಣ್ಣು ಅಥವಾ ಕಲುಷಿತ ವಸ್ತುಗಳ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಇಂತಹ ಸೋಂಕಿಗೆ ಬೇಗ ಒಳಗಾಗುವ ಸಾಧ್ಯತೆ ಇರುತ್ತದೆ. ಹೊರಗೆ ಆಟವಾಡುವಾಗ ಮಣ್ಣನ್ನು ಮುಟ್ಟುವುದು, ಕಲುಷಿತ ಆಹಾರ ಸೇವಿಸುವುದು ಅಥವಾ ಕೈಗಳನ್ನು ಬಾಯಿಗೆ ಹಾಕುವ ಅಭ್ಯಾಸದಿಂದ ಹುಳುಗಳ ಸೋಂಕು ಉಂಟಾಗಬಹುದು. ಹಾಗಾದರೆ ಈ ರೀತಿಯಾದಾಗ ಯಾವ ರೀತಿಯ ಲಕ್ಷಣ ಕಂಡುಬರುತ್ತದೆ, ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜಂತುಹುಳುವಿನ ಸಮಸ್ಯೆ ಹೆಚ್ಚಾದಾಗ ಕಂಡುಬರುವ ಲಕ್ಷಣಗಳು:

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಹೊಟ್ಟೆಯಲ್ಲಿ ಹುಳುಗಳಿದ್ದರೆ ಮಕ್ಕಳಲ್ಲಿ ಹಲವು ರೀತಿಯ ಲಕ್ಷಣಗಳು ಕಾಣಿಸಬಹುದು. ಪದೇಪದೇ ಹೊಟ್ಟೆನೋವು, ಹಸಿವು ಕಡಿಮೆಯಾಗುವುದು ಅಥವಾ ಅತಿಯಾಗಿ ಹಸಿವು ಕಾಣಿಸುವುದು ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ ದೌರ್ಬಲ್ಯ, ಬೇಗ ದಣಿವಾಗುವುದು, ಹೊಟ್ಟೆ ಉಬ್ಬುವುದು, ತೂಕ ಕಡಿಮೆಯಾಗುವುದು, ವಾಂತಿ ಸೇರಿದಂತೆ ನಾನಾ ರೀತಿಯ ಸಮಸ್ಯೆ ಕಾಣಿಸಬಹುದು. ಕೆಲ ಮಕ್ಕಳಲ್ಲಿ ರಾತ್ರಿ ಸಮಯದಲ್ಲಿ ಗುದದ ಸುತ್ತ ತೀವ್ರ ತುರಿಕೆ ಉಂಟಾಗುವುದು ಸಹ ಸಾಮಾನ್ಯ ಲಕ್ಷಣವಾಗಿದೆ. ಇಂತಹ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಜಂತು ಹುಳವಿನ ಕಾಟದಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಮಕ್ಕಳಿಗೆ ಊಟಕ್ಕೂ ಮೊದಲು ಮತ್ತು ಹೊರಗಿನಿಂದ ಮನೆಗೆ ಬಂದ ನಂತರ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು. ಶುದ್ಧ ಮತ್ತು ತಾಜಾ ಆಹಾರ ನೀಡುವುದು ಅಗತ್ಯ. ಜೊತೆಗೆ ಮಕ್ಕಳು ಮಣ್ಣು ಅಥವಾ ಅಶುದ್ಧ ವಸ್ತುಗಳನ್ನು ಬಾಯಿಗೆ ಹಾಕದಂತೆ ಗಮನಿಸುವುದು ಮುಖ್ಯ. ವೈದ್ಯರ ಸಲಹೆಯಂತೆ ಸಮಯಕ್ಕೊಮ್ಮೆ ಡಿವೋರ್ಮಿಂಗ್ ಔಷಧಿ ನೀಡುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಮಕ್ಕಳಲ್ಲಿ ತೀವ್ರ ಹೊಟ್ಟೆನೋವು, ತೂಕ ಇಳಿಕೆ ಅಥವಾ ನಿರಂತರ ವಾಂತಿ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ – Kannada News | Chanakya Niti: Men should not marry a woman with these qualities

ಮದುವೆ ಎನ್ನುವಂತಹದ್ದು ಜೀವನದ ಪ್ರಮುಖ ಘಟ್ಟ ಮಾತ್ರವಲ್ಲ ಜೀವನದ ಬಹುದೊಡ್ಡ ತಿರುವು ಕೂಡ ಹೌದು. ಆದ್ದರಿಂದ ಸರಿಯಾದ ಜೀವನ ಸಂಗಾತಿಯನ್ನು (Life Partner) ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಜೀವನ ಪಯಣದಲ್ಲಿ ನಿಮ್ಮ ಜೊತೆಗಿರುವ ಸಂಗಾತಿ ಸದ್ಗುಣಶೀಲರಾಗಿದ್ದರೆ, ಆ ಮನೆ ಸ್ವರ್ಗವಾಗುತ್ತದೆ. ಅದೇ ಕೆಲವು ನಕಾರಾತ್ಮಕ ಗುಣಗಳನ್ನು ಹೊಂದಿರುವ ಯಾರಾದರೂ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ, ನಿಮಗೆ ಮನಸ್ಸಿನ ಶಾಂತಿ ಇರುವುದಿಲ್ಲ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪುರುಷನೂ ಮದುವೆಯಾಗುವ ಮುನ್ನ ಈ ಕೆಲವು ವಿಷಯಗಳತ್ತ ಗಮನ ಹರಿಸಬೇಕು, ಅದರಲ್ಲೂ ಈ ಕೆಲವು ಗುಣಗಳಿರುವ ಹೆಣ್ಣನ್ನು ಮದುವೆಯಾಗಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಪುರುಷರು ಎಂತಹ ಹೆಣ್ಣನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ,

ಪುರುಷರು ಇಂತಹ ಹೆಣ್ಣನ್ನು ಮದುವೆಯಾಗಬಾರದಂತೆ:

ಸೌಂದರ್ಯದ ಹೆಮ್ಮೆ ಪಡುವ ಹೆಣ್ಣು: ಚಾಣಕ್ಯನ ಪ್ರಕಾರ, ಒಬ್ಬ ಹುಡುಗಿ ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುತ್ತಿದ್ದರೆ ಅಂತಹ ಹೆಣ್ಣನ್ನು ಮದುವೆಯಾಗಬಾರದಂತೆ. ಆಕೆ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾಳೆ.  ಅವಳು ಇತತರನ್ನು ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ.

ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡುವ ಮಹಿಳೆ: ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಥವಾ ಇತರರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಹೊಂದಿರುವ , ಚಾಡಿ ಹೇಳುವ ಮಹಿಳೆಯರಿಂದ ದೂರವಿರಬೇಕು. ಅಂತಹ ಮಹಿಳೆಯರು ಕುಟುಂಬದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಾರೆ. ಹಾಗಾಗಿ ಅಂತಹ ಹೆಣ್ಣಿನಿಂದ ದೂರವಿದ್ದಷ್ಟು ಒಳ್ಳೆಯದು.

ಭೌತಿಕ ಸೌಕರ್ಯಗಳ ಬಗ್ಗೆ ಯೋಚಿಸುವುದು: ಮನೆ, ಕಾರು, ಆಭರಣ, ಹಣ ಅಂತೆಲ್ಲಾ ಭೌತಿಕ ಸೌಕರ್ಯಗಳಿಗೆ ಆದ್ಯತೆ ನೀಡುವ ಹುಡುಗಿಯರು ಅಥವಾ ಹೆಂಡತಿಯರು ತಮ್ಮ ಗಂಡನ ಭಾವನೆಗಳಿಗೆ ಎಂದಿಗೂ ಬೆಲೆ ಕೊಡಲಾರರು. ಇಂತಹ ಸ್ವಾರ್ಥಿ ಹೆಣ್ಣನ್ನು ಮದುವೆಯಾದರೆ ಜೀವನಪರ್ಯಂತ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ.

ಯಾವಾಗಲೂ ಇತರರನ್ನು ಅವಮಾನಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಇತರರನ್ನು ನಿರಂತರವಾಗಿ ಅವಮಾನಿಸುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು. ಅಂತಹ ಹುಡುಗಿಯರು ಎಂದಿಗೂ ತಮ್ಮ ಕುಟುಂಬಕ್ಕೆ ಗೌರವವನ್ನು ನೀಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ

ಸುಳ್ಳಿನ ಹಾದಿಯಲ್ಲಿ ನಡೆಯುವ ಹೆಣ್ಣು: ಚಾಣಕ್ಯನ ಪ್ರಕಾರ, ನಿರಂತರವಾಗಿ ಸುಳ್ಳು ಹೇಳುವ ಮತ್ತು ಕೆಟ್ಟ ಮಾರ್ಗವನ್ನು ಅನುಸರಿಸುವ ಅಭ್ಯಾಸ ಹೊಂದಿರುವ ಹೆಣ್ಣನ್ನು ಮದುವೆಯಾಗಬಾರದು. ಆಕೆ ಗಂಡನಿಗೆ ಮಾತ್ರವಲ್ಲ ಕುಟುಂಬಕ್ಕೂ ಹಾನಿಕಾರಕ ಎಂದಿದ್ದಾರೆ ಚಾಣಕ್ಯ. ಅಲ್ಲದೆ ಅಂತಹ ಹೆಣ್ಣು ಸಂಬಂಧದಲ್ಲಿ ಪ್ರಾಮಾಣಿಕಳಾಗಿ ಇರಲೂ ಸಾಧ್ಯವಿಲ್ಲ.

ಅಹಂಕಾರ ಮನೋಭಾವ: ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸುವ, ಅಹಂಕಾರ  ಭಾವವನ್ನು ಹೊಂದುರುವ ಹೆಣ್ಣನ್ನು ಮದುವೆಯಾಗಬಾರದು. ಏಕೆಂದರೆ ಆಕೆ ಸಂಬಂಧಗಳಿಗೆ ಗೌರವಿಸಲು ಸಾಧ್ಯವಿಲ್ಲ. ಇದು ಮನೆಯಲ್ಲಿ ಘರ್ಷಣೆಗಳಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಹೆಣ್ಣಿನಿಂದ ದೂರವಿರುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ – Kannada News | BSY Abhimanotsava: BS Yediyurappa’s 50 Year Political Legacy; Amit Shah Praises His Contribution to Karnataka BJP

ಯಡಿಯೂರಪ್ಪ, ಅಮಿತ್ ಶಾImage Credit source: tv9 kannada

ಚಿತ್ರದುರ್ಗ, ಮೇ 09: ರಾಜಕಾರಣದಲ್ಲಿ ಕೆಲವರು ನಿರ್ಮಿತ‌ ರಸ್ತೆಯಲ್ಲಿ ನಡೆಯುತ್ತಾರೆ. ಇನ್ನು ಕೆಲವರು ಖುದ್ದಾಗಿ ರಸ್ತೆ ನಿರ್ಮಾಣ‌ ಮಾಡಿ ಇತಿಹಾಸ ಸೃಷ್ಟಿಸುತ್ತಾರೆ. ದಕ್ಷಿಣ ಭಾರತದಲ್ಲಿ ಬಿಎಸ್​​ ಯಡಿಯೂರಪ್ಪ (BS Yediyurappa) ಹೆಸರು ಸುವರ್ಣಾಕ್ಷರದಲ್ಲಿ ಉಳಿಯಲಿದೆ. ರಾಜಕೀಯಕ್ಕೆ ಬರುವ ಯುವಕರು ಬಿಎಸ್​​ ಯಡಿಯೂರಪ್ಪ ಸಂಘರ್ಷ ಅರಿಯಿರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿಂದು ನಡೆದ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ
  • ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ರಾಜ್ಯ ರಾಜಕೀಯ ನಾಯಕರು ಭಾಗಿ
  • ಬಿಎಸ್​​ ಯಡಿಯೂರಪ್ಪರನ್ನ ಕೊಂಡಾಡಿದ ಅಮಿತ್​ ಶಾ

ಬಿಎಸ್​ ಯಡಿಯೂರಪ್ಪರಿಂದ ಕಲಿಯುವುದು ಬಹಳಷ್ಟಿದೆ: ಅಮಿತ್​ ಶಾ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನ ಪೂರ್ಣ ಹಿನ್ನೆಲೆ ಇಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಸಮೀಪ ಬಿಎಸ್​ವೈ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಇಚ್ಛಾಶಕ್ತಿ ಮತ್ತು ಸಂಘದ ಸಂಸ್ಕಾರ ಯಡಿಯೂರಪ್ಪ ಅವರ ವ್ಯಕ್ತಿತ್ವ ಎಂದರು.

ಇದನ್ನೂ ಓದಿ: ಬಿಎಸ್​​ವೈ ಅಭಿಮಾನೋತ್ಸವ: ಯಡಿಯೂರಪ್ಪ ಬರ್ತಿದ್ದಂತೆ ಕಾರ್ಯಕರ್ತರಿಂದ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ

ಶಿಕಾರಿಪುರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ ಯಡಿಯೂರಪ್ಪ, ಬಸ್ ಸಿಗದಿದ್ದರೆ ಸೈಕಲ್ ಏರಿ ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ರೈತರ ಮನದಲ್ಲಿ ಅವರು ಆಳವಾಗಿ ಬೇರೂರಿದ್ದಾರೆ. ಜನ ತಮ್ಮನ್ನು ಭೇಟಿಯಾದವರ ಬಗ್ಗೆ ಡೈರಿಯಲ್ಲಿ ಬರೆದುಕೊಳ್ಳುತ್ತಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅಮಿತ್ ಶಾ ಶ್ಲಾಘಿಸಿದರು.

ರಾಜ್ಯದಲ್ಲಿ ಅನೇಕ ಕಡೆ ನಾನು ಹೋಗಿದ್ದೇನೆ. ಎಲ್ಲ ಕಡೆ ಯಡಿಯೂರಪ್ಪ ಅವರ ಕೆಲಸ-ಕಾರ್ಯಗಳು ದಾಖಲಾಗಿವೆ. ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ನಾನು ಭೇಟಿ ನೀಡಿದ್ದೆ. ಆ ಸ್ಥಳದ ಬಗ್ಗೆ ಅಲ್ಲಿ ಸಂಪೂರ್ಣ ವಿವರಣೆ ದಾಖಲಾಗಿತ್ತು. ಅದನ್ನು ಬಿ.ಎಸ್​.ಯಡಿಯೂರಪ್ಪ ಮಾಡಿದ್ದಾರೆ. ಲಿಂಗಾಯತ, ದಲಿತ, ಒಬಿಸಿ ಸೇರಿದಂತೆ ಎಲ್ಲ ವರ್ಗಗಳ ಸೌಹಾರ್ದತೆಯೇ ಯಡಿಯೂರಪ್ಪ ಅವರ ಕೆಲಸ ಎಂದು ಅವರು ಬಣ್ಣಿಸಿದರು.

ಯಡಿಯೂರಪ್ಪರ ಜೀವನ ಸಂಘರ್ಷದಿಂದ ತುಂಬಿತ್ತು

ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನ ಸಂಘರ್ಷದಿಂದ ತುಂಬಿತ್ತು. ಅವರಷ್ಟು ಸಂಘರ್ಷದ ಜೀವನ ದಕ್ಷಿಣ ಭಾರತದಲ್ಲಿ ಯಾರೂ ಅನುಭವಿಸಿಲ್ಲ. ರೈತರ ಕಲ್ಯಾಣವೇ, ರಾಜ್ಯದ ಕಲ್ಯಾಣ ಎನ್ನುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ರೈತರ ಹೋರಾಟಕ್ಕೆ, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಜೈಲುವಾಸ ಅನುಭವಿಸಿದರು. ಯಡಿಯೂರಪ್ಪ ಅವರು ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆ ಮಾಡಿ ಡಿಸಿಎಂ ಮತ್ತು ಸಿಎಂ ಆದರು. ಇದೆಲ್ಲದರ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಹೀಗಾಗಿ ನಾನು ಅವರ ಭಾಷಣ ಸಂಪೂರ್ಣ ಕೇಳಿಸಿಕೊಂಡೇ ಹೋಗುತ್ತೇನೆ ಎಂದರು.

ವೀರ ಮದಕರಿ ನಾಯಕರ ಸ್ಮಾರಕ ಮಾಡೋಣ ಎಂದ ಅಮಿತ್​ ಶಾ 

ಇನ್ನು ಯಡಿಯೂರಪ್ಪ ಅವರ ಕಾರಣದಿಂದ ಇಂದು ಎಲ್ಲಾ ಮಠ ಮಂದಿರದ ಸ್ವಾಮೀಜಿಗಳು ಒಂದೇ ವೇದಿಕೆ ಮೇಲೆ ಯಾವುದೇ ಜಾತಿ ಭೇದ ಭಾವ ಇಲ್ಲದೇ ಸೇರಿದ್ದಾರೆ. ಎಲ್ಲರು ಕೂಡ ಶಿಕ್ಷಣ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಇದು ಚಿತ್ರದುರ್ಗದ ವೀರ ಮದಕರಿ ನಾಯಕರು ಆಳಿದ ಜಾಗ, ಅವರ ಸ್ಮಾರಕ ನಾವು ಮಾಡೋಣ, ಪ್ರಧಾನಿ ಮೋದಿ ಇದ್ದಾರೆ. ಮದಕರಿ ನಾಯಕರು ಹೈದರ್ ಅಲಿಯನ್ನು ಯುದ್ಧದಲ್ಲಿ ಸೋಲಿಸಿದ್ದರು. ಇಲ್ಲಿ ಪ್ರತಿ ಮಹಿಳೆಗೂ ಓಬವ್ವ ಪ್ರೇರಣೆ. ನಾನು ಮನಸಾರೆ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:23 pm, Sat, 9 May 26

Source link

Exit mobile version