200 ರನ್​ ಕಷ್ಟವೇನಲ್ಲ… ಒಳ್ಳೆಯವರಿಗೆ ಒಳ್ಳೆದೇ ಆಗುತ್ತೆ…! – Kannada News | Suryakumar yadav post match presentation after IND vs WI Match

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 195 ರನ್​ಗಳು.

196 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 19.2 ಓವರ್​ಗಳಲ್ಲಿ 199 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯವು ಒಂದು ಅದ್ಭುತ ಅನುಭವ. ಕ್ವಾರ್ಟರ್ ಫೈನಲ್​ ಆಗಿದ್ದ ಈ ಪಂದ್ಯದಲ್ಲಿ ನಾವು ಆಡಿದ ರೀತಿಯೇ ಅದ್ಭುತವಾಗಿತ್ತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮ್ಮ ಹುಡುಗರು ವಹಿಸಿದ ಪಾತ್ರ ಅತ್ಯುತ್ತಮವಾಗಿತ್ತು. ಈ ಅದ್ಭುತ ಪ್ರದರ್ಶನದ ಫಲವಾಗಿ ನಾವು ಗೆದ್ದಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದೇ ವೇಳೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನೋಡಿ, ನಾನು ಯಾವಾಗಲೂ ಹೇಳುತ್ತೇನೆ, ಕಾಯುವ, ತಾಳ್ಮೆ ಹೊಂದಿರುವ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ . ನಾನು ಸಂಜುನನ್ನು ಭೇಟಿಯಾದಾಗಲೂ ಅದನ್ನು ಈಗ ಹೇಳಿದ್ದೆ. ಆದರೆ ಅದು ಅವರ ಕಠಿಣ ಪರಿಶ್ರಮ, ಅವರು ಆಡದಿದ್ದಾಗ ಹಿಂಬದಿಯಲ್ಲಿ ಹಿಂದೆ ಏನು ಮಾಡುತ್ತಿದ್ದಾರೆ, ಮತ್ತು ಅವರು ಅದರ ಫಲವನ್ನು ಪರಿಪೂರ್ಣ ಹಂತದಲ್ಲಿ ಪಡೆದಿದ್ದಾರೆ.

ನಿಜವಾಗಿಯೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಿದ ರೀತಿ ತಂಡವನ್ನು ಸಂಪೂರ್ಣವಾಗಿ ಗೆಲುವಿನತ್ತ ಕೊಂಡೊಯ್ದಿತು ಎಂದರೆ ತಪ್ಪಾಗಲಾರದು. ಹೀಗಾಗಿ ಈ ಗೆಲುವಿನ ಅವರ ಪಾತ್ರ ಪ್ರಮುಖವಾಗಿತ್ತು. ಮೊದಲೇ ಹೇಳಿದಂತೆ ಒಳ್ಳೆಯವರಿಗೆ ಒಳ್ಳೆದೇ ಆಗುತ್ತೆ ಎಂದು ನಾನು ನಂಬುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಬೌಲರ್​ಗಳ ಪ್ರದರ್ಶನಕ್ಕೂ ಪ್ರಶಂಸೆ ವ್ಯಕ್ತಪಡಿಸಿದ ಸೂರ್ಯಕುಮಾರ್ ಯಾದವ್, ಎಲ್ಲರೂ ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ಈಡನ್‌ನಲ್ಲಿ ಇಬ್ಬನಿಯೊಂದಿಗೆ 200 ರನ್ ಚೇಸ್ ಮಾಡುವುದು ಕಷ್ಟವೇನಲ್ಲ. 200 ರನ್​ಗಳು ಯಾವಾಗಲೂ ಉತ್ತಮ ಸ್ಕೋರ್ ಎಂದು ನಮಗೆ ತಿಳಿದಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಆಗುವ ರೀತಿ, ಚೆಂಡು ಚೆನ್ನಾಗಿ ಬ್ಯಾಟ್‌ಗೆ ಬರುತ್ತದೆ ಎಂಬುದು ನಮಗೆ ಗೊತ್ತಿತ್ತು. ಅಲ್ಲದೆ ನಮ್ಮ ಬ್ಯಾಟರ್‌ಗಳು  ಸಣ್ಣ, ಸಣ್ಣ ಪಾಲುದಾರಿಕೆಗಳೊಂದಿಗೆ ಪ್ರತಿಕ್ರಿಯಿಸಿದ ರೀತಿ ಉತ್ತಮವಾಗಿತ್ತು. ಇದರಿಂದ ಪಂದ್ಯವನ್ನು ಆಳವಾಗಿ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ. ಈ ಮೂಲಕ 200 ರನ್​ಗಳನ್ನು ಬೆನ್ನತ್ತಿ ಗೆದ್ದಿದ್ದೇವೆ.

ಈ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿರುವುದು ಖುಷಿಯ ವಿಷಯ. ನಾವು ಆಡಿದ ರೀತಿ, ಮೊದಲ ಪಂದ್ಯದಿಂದಲೇ, ಸೆಮಿಫೈನಲ್‌ಗೆ ಹೋಗುವ ಆ ಸ್ಥಾನಕ್ಕೆ ನಾವು ಅರ್ಹರು ಎಂದು ನಾನು ಭಾವಿಸುತ್ತೇನೆ. ಅದು ಕೂಡ ಮುಂಬೈನಲ್ಲಿ, ಆದರೆ ನಾವು ಈಗ ಅದರ ಬಗ್ಗೆ ಯೋಚಿಸುವುದಿಲ್ಲ. ವಿಶ್ರಾಂತಿ ಪಡೆಯುತ್ತೇವೆ. ನಾಳೆ ಮುಂಬೈಗೆ ಹೋಗಿ ತಲುಪಿದ ಬಳಿಕ ಸೆಮಿಫೈನಲ್​ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ.

ಇದನ್ನೂ ಓದಿ: Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಇದೇ ವೇಳೆ ತವರಿನಲ್ಲಿ ಆಡುತ್ತಿರುವುದರಿಂದ ಒತ್ತಡದಲ್ಲಿದ್ದೇವೆ ಎಂಬುದನ್ನು ಒಪ್ಪಿಕೊಂಡಿರುವ ಸೂರ್ಯಕುಮಾರ್ ಯಾದವ್, ಆ ಒತ್ತಡವನ್ನು ನಾವು  ಹೇಗೆ ಅರ್ಥಮಾಡಿಕೊಳ್ಳುತ್ತೀವಿ, ಅದನ್ನು ಹೇಗೆ ತೆಗೆದುಕೊಳ್ಳುತ್ತೀವಿ ಎಂಬುದು ಮುಖ್ಯವಾಗುತ್ತದೆ. ಇದೀಗ ನಿರ್ಣಾಯಕ ಪಂದ್ಯದಲ್ಲಿ ನಾವು ಒತ್ತಡವನ್ನು ಮೀರಿ ಗೆಲುವು ಸಾಧಿಸಿದ್ದೇವೆ. ತವರಿನಲ್ಲಿನ ಪಂದ್ಯಗಳಲ್ಲಿ ಇಂತಹ ಪ್ರದರ್ಶನವೇ ಮುಖ್ಯವಾಗುತ್ತದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಈ ಮೂಲಕ ಸೆಮಿಫೈನಲ್​ನಲ್ಲೂ ಒತ್ತಡವನ್ನು ಮೀರಿ ಭಾರತ ತಂಡ ಗೆಲುವು ದಾಖಲಿಸುವ ವಿಶ್ವಾಸವನ್ನು ಸೂರ್ಯಕುಮಾರ್ ಯಾದವ್ ವ್ಯಕ್ತಪಡಿಸಿದ್ದಾರೆ.

Source link

ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟೊಂದಾ? – Kannada News | Toxic Movie Hype: Yash, Kiara Advani and 5 Heroines! Pan India Budget and Remuneration Details

ಟಾಕ್ಸಿಕ್ ಚಿತ್ರವು ಪ್ರಸ್ತುತ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ಹೈಪ್ ಸೃಷ್ಟಿ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿದ್ದು, ಒಟ್ಟು ಐದು ನಾಯಕಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಕೂಡ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದ ಪೋಸ್ಟರ್‌ಗಳು, ಗ್ಲಿಂಪ್ಸ್‌ಗಳು ಮತ್ತು ಟೀಸರ್‌ಗಳು ಗಮನ ಸೆಳೆದಿವೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನ ಇದೆ. ಈ ಸಿನಿಮಾ ಭಾರಿ ಹೈಪ್ ಸೃಷ್ಟಿಸಿದೆ. ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಸೇರಿದಂತೆ ಒಟ್ಟು ಐದು ನಾಯಕಿಯರು ಇದರಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬುದು ವಿಶೇಷ.

ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಸುಮಾರು 500 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಯಶ್ ಎದುರು ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಎಂಬ ಐದು ನಾಯಕಿಯರು ನಟಿಸಿದ್ದಾರೆ.

ಆದರೆ, ಇದರಲ್ಲಿ ಕಿಯಾರಾ ಅಡ್ವಾಣಿ ವಿಶೇಷ ಆಕರ್ಷಣೆಯಾಗಲಿದ್ದಾರೆ. ಕೆಲವು ಸಮಯದಿಂದ ಚಿತ್ರಗಳಿಂದ ದೂರವಿದ್ದ ಕಿಯಾರಾ ಈಗ ಟಾಕ್ಸಿಕ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅವರು ಬಹಳ ದಿನಗಳಿಂದ ಸರಿಯಾದ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈ ಚಿತ್ರದ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ . ಈ ಚಿತ್ರದ ಹಾಡು ಇಂದು ರಿಲೀಸ್ ಆಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಫೋಟೋಗಳಲ್ಲಿ ಕಿಯಾರಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಈ ಚಿತ್ರಕ್ಕಾಗಿ ಕಿಯಾರಾ ತೆಗೆದುಕೊಂಡ ಸಂಭಾವನೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಮಾರ್ಚ್ 2ಕ್ಕೆ ‘ಟಾಕ್ಸಿಕ್’ ಮಾರ್ಚ್ 3ಕ್ಕೆ ‘ಧುರಂಧರ್’, ಮಾರ್ಚ್ 8ಕ್ಕೆ ಮತ್ತೆ ‘ಟಾಕ್ಸಿಕ್’

ಟಾಕ್ಸಿಕ್ ಚಿತ್ರಕ್ಕಾಗಿ ಕಿಯಾರಾ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಅವರ ವೃತ್ತಿಜೀವನದ ಅತ್ಯಧಿಕ ಸಂಭಾವನೆ ಎಂದು ವರದಿಯಾಗಿದೆ. ಗೇಮ್ ಚೇಂಜರ್ ಚಿತ್ರಕ್ಕಾಗಿ ಅವರು ಸುಮಾರು 7 ಕೋಟಿ ರೂ. ಮತ್ತು ವಾರ್ 2 ಚಿತ್ರಕ್ಕಾಗಿ 13 ಕೋಟಿ ರೂ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್​ ಅಲಾಟ್ ಮಾಡಿದ ರೈಲ್ವೆ ವಿರುದ್ಧ ದೂರು, ಭಾರತೀಯ ರೈಲ್ವೆ ಕೊಟ್ಟ ಉತ್ತರವೇನು? – Kannada News | Indian Railways Lower Berth Policy: Senior Citizen Upper Berth Sparks Clarification

ನವದೆಹಲಿ, ಮಾರ್ಚ್​ 02: ಭಾರತೀಯ ರೈಲ್ವೆ(Indian Railways) ಹಿರಿಯ ನಾಗರಿಕರಿಗೆ ಬರ್ತ್​ಗಳನ್ನು ಹೇಗೆ ನಿಗದಿಪಡಿಸುತ್ತದೆ ಎಂಬುದರ ಕುರಿತು ಎಕ್ಸ್​​ನಲ್ಲಿ ಮಾಡಲಾದ ಪೋಸ್ಟ್​ ಚರ್ಚೆಗೆ ನಾಂದಿ ಹಾಡಿದೆ. ಪ್ರಯಾಣಿಕರೊಬ್ಬರು ತಾವು ಟಿಕೆಟ್ ಬುಕ್ ಮಾಡಿದಾಗ  ಬೇರೆ ಸೀಟುಗಳು ಲಭ್ಯವಿದ್ದರೂ 82 ವರ್ಷದ ಮಹಿಳೆಗೆ ಕೂಡ ಅಪ್ಪರ್ ಬರ್ತ್​ ನಿಗದಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈಗ ಅದೇ ಕೆಳಗಿನ ಬರ್ತ್‌ಗಳನ್ನು ಪ್ರೀಮಿಯಂ ತತ್ಕಾಲ್‌ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವೈರಲ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್​ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಭಾರತೀಯ ರೈಲ್ವೆಯ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ, ಯಾವುದೇ ಆಯ್ಕೆ ನೀಡದಿದ್ದರೂ ಕೂಡ, ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಸ್ವಯಂ ಚಾಲಿತವಾಗಿ ಕೆಳ ಬರ್ತ್​ ಹಂಚಿಕೆ ಮಾಡುವ ಅವಕಾಶವಿದೆ.

ಇಂಟರ್ನೆಟ್​ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ, ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಬುಕಿಂಗ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಅಂತಹ ಸಂದರ್ಭದಲ್ಲಿ ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಟಿಕೆಟ್ ಬುಕ್ ಮಾಡಲಾಗುತ್ತದೆ. ಇದಲ್ಲದೆ, ಭಾರತೀಯ ರೈಲ್ವೆಯಲ್ಲಿ, ಕಾಯ್ದಿರಿಸಿದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಬುಕ್ ಮಾಡಬಹುದು ಮತ್ತು ಆಯ್ಕೆಯ ಬರ್ತ್ ಲಭ್ಯತೆಗೆ ಒಳಪಟ್ಟಿರುತ್ತದೆ.

ಸ್ವಲ್ಪ ದಿನಗಳ ಹಿಂದೆ ಟಿಟಿಇ ಒಬ್ಬರು ಈ ಕುರಿತು ಮಾತನಾಡಿರುವುದು ವೈರಲ್ ಆಗಿತ್ತು, ಲೋವರ್ ಬರ್ತ್​ ಪಡೆಯಬೇಕೆಂದರೆ ಏನು ಮಾಡಬೇಕು ಎಂದು ಮಾಹಿತಿ ನೀಡಿದ್ದರು. ನೀವು ಎಂದಾದರೂ ರೈಲು ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಆದ್ಯತೆ ಆಯ್ಕೆ ಮಾಡಿಕೊಂಡಿದ್ದರೂ ಅಪ್ಪರ್ ಬರ್ತ್ ಪಡೆದಿದ್ದೀರಾ?, ನೀವೊಬ್ಬರೇ ಅಲ್ಲ ಸಾಕಷ್ಟು ಪ್ರಯಾಣಿಕರಿಗೆ ಇದರ ಅನುಭವವಾಗಿದೆ.ಹಿರಿಯ ನಾಗರಿಕ ಪ್ರಯಾಣಿಕರಲ್ಲಿ ಈ ರೀತಿಯ ಘಟನ ಹೆಚ್ಚಾಗಿದೆ.

ಮತ್ತಷ್ಟು ಓದಿ: ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ನೀವು ಲೋವರ್ ಬರ್ತ್ ಬಯಸಿದರೆ, ಒಂದು ಪಿಎನ್‌ಆರ್‌ನಲ್ಲಿ ಕೇವಲ ಎರಡು ಟಿಕೆಟ್‌ಗಳನ್ನು ಬುಕ್ ಮಾಡಿ. ನೀವು ಮೂರು ಅಥವಾ ನಾಲ್ಕು ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದಾಗ, ವ್ಯವಸ್ಥೆಯು ಅದನ್ನು ಗುಂಪು ಬುಕಿಂಗ್ ಎಂದು ಪರಿಗಣಿಸುತ್ತದೆ ಮತ್ತು ಲೋವರ್ ಬರ್ತ್ ಆದ್ಯತೆಯನ್ನು ತೆಗೆದುಹಾಕಲಾಗುತ್ತದೆ. ಅಂದರೆ ಕಡಿಮೆ ಟಿಕೆಟ್‌ಗಳು, ಹೆಚ್ಚು ಲಾಭ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯುದ್ಧ ಭೀತಿ: ಇದು ಅಲ್ಲಾಹ್​ನ ಕೋಪ ಎಂದ ಕಿರುತೆರೆ ನಟ – Kannada News | Iran Israel Conflict: Ajaz Khan Links War to Allah’s Wrath Amidst Middle East Tension

ಸದ್ಯ ಯುದ್ಧ ಭೀತಿ ಶುರುವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ (Iran) ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ದಾಳಿಗೆ ಇರಾನ್ ಪ್ರತಿ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಇರಾನ್‌ನ ಧಾರ್ಮಿಕ, ರಾಜಕೀಯ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಇಸ್ರೇಲ್, ಕತಾರ್, ಕುವೈತ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧವೂ ಇರಾನ್ ಪ್ರತೀಕಾರ ತೀರಿಸಿಕೊಂಡಿತು. ಈ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ಪ್ರಪಂಚದಾದ್ಯಂತ ಜನರಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸಿದೆ. ಈಗ ಪ್ರಸಿದ್ಧ ಟಿವಿ ನಟ ಅಜಾಜ್ ಖಾನ್ ಈ ಸಂಘರ್ಷಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ಮುಸ್ಲಿಮರ ಮೇಲಿನ ಅಲ್ಲಾಹನ ಕೋಪ ಎಂದು ಅವರು ಹೇಳಿದರು.

‘ಪ್ರಪಂಚದಾದ್ಯಂತ ಏನಾಗುತ್ತಿದೆ ಎಂದು ನೀವು ನೋಡುತ್ತೀರಿ. ರಮಝಾನ್ ತಿಂಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಎಂಬ ಇಬ್ಬರು ಖಳನಾಯಕರು ಯಾವುದೇ ಆಲೋಚನೆಯಿಲ್ಲದೆ ಇರಾನ್ ಮೇಲೆ ಬಾಂಬ್ ದಾಳಿ ಮಾಡಿವಎ. ಇರಾನ್ ಕೋಪಗೊಂಡು, ಅರಬ್ ಜನರ ಮೇಲೆ ಬಾಂಬ್ ದಾಳಿ ಮಾಡಿತು. ಇರಾನ್‌ನ ಕೋಪ ಸರಿ ಎಂದು ನಾನು ಭಾವಿಸುತ್ತೇನೆ. ಮುಸ್ಲಿಮರಿಗೆ ಅನ್ಯಾಯವಾಗುತ್ತಿದ್ದರೂ, ಅರಬ್ ಜನರು ಮೌನವಾಗಿದ್ದಾರೆ. ಆದ್ದರಿಂದ, ಅವರನ್ನು ನಿದ್ರೆಯಿಂದ ಎಬ್ಬಿಸುವುದು ಅಗತ್ಯವಾಗಿತ್ತು. ಧನ್ಯವಾದಗಳು ಇರಾನ್.. ನೀವು ಅವರನ್ನು ಎಬ್ಬಿಸಿದ್ದೀರಿ’ ಎಂದು ಅವರು ಹೇಳಿದ್ದಾರೆ.

‘ಅಲ್ಲಾಹನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಎಲ್ಲಾ ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಮುಸ್ಲಿಮರ ಮೇಲಿನ ಅಲ್ಲಾಹನ ಕೋಪ. ಪ್ರಾರ್ಥಿಸಿ, ಪರಸ್ಪರ ಬೆಂಬಲಿಸಿ, ಒಳ್ಳೆಯ ಕಾರ್ಯಗಳನ್ನು ಮಾಡಿ, ದಾನ ನೀಡಿ, ಬಡವರಿಗೆ ಸಹಾಯ ಮಾಡಿ, ಹಣವು ಸಮಾಧಿಗೆ ಹೋಗುವುದಿಲ್ಲ’ ಅಜಾಜ್ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​, ಇಸ್ರೇಲ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ನಿಂತ ರಾಜ್ಯ ಸರ್ಕಾರ

ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಕೈಬಿಡುವಂತೆ ಒತ್ತಾಯಿಸಲು ಅಮೆರಿಕ ಮತ್ತು ಇಸ್ರೇಲ್‌ನಿಂದ ನಿರಂತರ ಒತ್ತಡವಿತ್ತು. ಆದರೆ, ಇರಾನ್ ಇದಕ್ಕೆ ಒಪ್ಪುತ್ತಿಲ್ಲ. ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಸಹ ತಡೆಯಬೇಕೆಂಬ ಅಮೆರಿಕ ಬೇಡಿಕೆ ಇಟ್ಟಿದ್ದು, ಇದಕ್ಕೆ ಇರಾನ್ ಒಪ್ಪಿಲ್ಲ. ಇದರ ಕುರಿತು ಒಮಾನ್‌ನಲ್ಲಿ ಮಾತುಕತೆಗಳು ನಡೆಯುತ್ತಿದ್ದವು. ಅವು ಮುಕ್ತಾಯಗೊಳ್ಳುವ ಮೊದಲು, ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:56 am, Mon, 2 March 26

Source link

ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು! – Kannada News | Gundlupet: Porcupine Quills Kill Leopard in Ranganabetta Forest

ಚಾಮರಾಜನಗರ, ಮಾ.2: ಕಾಡಿನ ಕ್ರೂರ ಬೇಟೆಗಾರ ಚಿರತೆಯೊಂದು ತನ್ನ ಆಹಾರಕ್ಕಾಗಿ ನಡೆಸಿದ ಪ್ರಯತ್ನವೇ ಅದಕ್ಕೆ ಮುಳುವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ನಡೆದಿದೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಕಾದಾಟ ಉಂಟಾಗುವುದು ಸಹಜ, ಹುಲಿ, ಸಿಂಹ, ಚಿರತೆಗಳು ಹಾಗೂ ಆನೆಗಳ ಮೇಲೆ ಅಷ್ಟೊಂದು ಸುಲಭದಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಚಿಕ್ಕ ಮುಳ್ಳುಹಂದಿಯೊಂದು ಚಿರತೆಯನ್ನು ಸೋಲಿಸಿ, ಕೊಂದಿದೆ. ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯು, ಹಂದಿಯ ತೀಕ್ಷ್ಣವಾದ ಮುಳ್ಳಿನೇಟಿಗೆ ಸಿಲುಕಿ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ರಂಗನಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಹಸಿವಿನಿಂದಿದ್ದ ಚಿರತೆಯೊಂದು ಮುಳ್ಳುಹಂದಿಯನ್ನು ಕಂಡ ಕೂಡಲೇ ಅದರ ಮೇಲೆರಗಿದೆ. ಆದರೆ, ತನ್ನ ರಕ್ಷಣೆಗಾಗಿ ಮುಳ್ಳುಹಂದಿ ‘ರಿವರ್ಸ್ ಅಟ್ಯಾಕ್’ ಮಾಡಿದಾಗ, ಅದರ ಮೈಮೇಲಿದ್ದ ಉದ್ದನೆಯ ಮತ್ತು ಚೂಪಾದ ಮುಳ್ಳುಗಳು ಚಿರತೆಯ ಎದೆಯ ಭಾಗಕ್ಕೆ ಬಲವಾಗಿ ತಾಕಿವೆ.

ಇದನ್ನೂ ಓದಿ: ಬೆಂಗಳೂರಿನ ಗಾಳಿಯಮಟ್ಟ ಕಳಪೆ, ಉಸಿರಾಟದ ತೊಂದರೆ ಕಾಡುವುದು

ಇಂದು ಬೆಳಿಗ್ಗೆ ಫಾರೆಸ್ಟ್ ವಾಚರ್ಸ್ ಬೀಟ್ ಹೋಗಿದ್ದಾಗ ಚಿರತೆಯ ಶವ ಪತ್ತೆಯಾಗಿದೆ. ಪಶುವೈದ್ಯರು ಸ್ಥಳದಲ್ಲೇ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಂದಿದೆ. ಮುಳ್ಳುಹಂದಿಯ ಮುಳ್ಳು ಚಿರತೆಯ ಎದೆಯ ಮೂಲಕ ನೇರವಾಗಿ ಹೃದಯಕ್ಕೆ (Heart) ತಗುಲಿದೆ. ಇದರಿಂದಾಗಿ ತೀವ್ರವಾದ ಆಂತರಿಕ ರಕ್ತಸ್ರಾವ (Internal Bleeding) ಉಂಟಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bangalore Air Pollution: ಬೆಂಗಳೂರಿನ ಗಾಳಿಯಮಟ್ಟ ಕಳಪೆ, ಉಸಿರಾಟದ ತೊಂದರೆ ಕಾಡುವುದು – Kannada News | Bengaluru Air Quality Alert: ‘Unhealthy’ AQI Demands Precautions. Check Karnataka’s PM 2.5

ಬೆಂಗಳೂರು, ಮಾ.2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಆತಂಕಕಾರಿಯಾಗಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಒಣ ಹವೆ ಮತ್ತು ವಾಹನಗಳ ದಟ್ಟಣೆಯಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ (Unhealthy) ಹಂತಕ್ಕೆ ತಲುಪಿದೆ. ಆದರೆ, ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟವು ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. ಬೆಂಗಳೂರಿನ ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಮತ್ತು ಜಯನಗರ ಭಾಗಗಳಲ್ಲಿ AQI 160 ದಾಟಿದ್ದು, ಇದು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿದೆ. ಅತಿಸೂಕ್ಷ್ಮ ಕಣಗಳಾದ PM 2.5 ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.

ಬೆಂಗಳೂರು ನಿವಾಸಿಗಳು ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೊರಗಡೆ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಮೈಸೂರು ಮತ್ತು ಮಂಗಳೂರಿ ಭಾಗದಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿದ್ದು, ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಗಾಳಿಯು ಅತ್ಯಂತ ಶುದ್ಧವಾಗಿದ್ದು (AQI 65), ‘ಉತ್ತಮ’ ಶ್ರೇಣಿಯಲ್ಲಿದೆ.

ಉಡುಪಿಯಲ್ಲಿ AQI 100ರ ಗಡಿ ದಾಟಿದ್ದು, ಅತಿ ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇದೆ.ಕಲಬುರ್ಗಿ, ವಿಜಯಪುರ ಮತ್ತು ಬೆಳಗಾವಿಯಲ್ಲಿ ಬಿಸಿಲು ಹೆಚ್ಚಿದ್ದರೂ ಗಾಳಿಯ ಗುಣಮಟ್ಟವು 100ಕ್ಕಿಂತ ಕೆಳಗಿರುವುದು ಸಮಾಧಾನಕರ ವಿಷಯವಾಗಿದೆ. ಧೂಳಿನ ಅಲರ್ಜಿ ಅಥವಾ ಉಸಿರಾಟದ ಸಮಸ್ಯೆ ಇರುವವರು ಮಧ್ಯಾಹ್ನದ ವೇಳೆ ರಸ್ತೆಬದಿಯ ಸಂಚಾರವನ್ನು ಕಡಿಮೆ ಮಾಡುವುದು ಒಳಿತು. ಗಾಳಿಯ ಗುಣಮಟ್ಟ ‘ತೃಪ್ತಿಕರ’ವಾಗಿದ್ದರೂ, ಮಾಸ್ಕ್ ಧರಿಸುವುದು ದೂಳಿನಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಬೇಸಿಗೆ: ಮುಂದಿನ 7 ದಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚು

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್ – Kannada News | Sanju Samson Breaks Virat Kohli’s Class Record

T20 World Cup 2026: ಟಿ20 ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಹೆಸರಿನಲ್ಲಿದ್ದ ಭರ್ಜರಿ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.

Source link

ರಶ್ಮಿಕಾ-ವಿಜಯ್ ವಿವಾಹದಲ್ಲಿ ಲಾಭ ಮಾಡಿಕೊಂಡ ಜಾಹೀರಾತು ಕಂಪನಿ – Kannada News | Rashmika Vijay Wedding: Ad World Rushes to Sign New Power Couple

ಯಾವುದೇ ಜೋಡಿ ಹಿಟ್ ಆದರೂ ಅವರನ್ನು ಜಾಹೀರಾತಲ್ಲಿ ಬಳಸಿಕೊಳ್ಳಲು ಕಂಪನಿಗಳು ನಾಮುಂದು-ತಾಮುಂದು ಎಂದು ಬರುತ್ತವೆ. ಅದರಲ್ಲೂ ಸೆಲೆಬ್ರಿಟಿ ಜೋಡಿ ವಿವಾಹ ಆದರಂತೂ ಕೇಳೋದೇಬೇಡ. ಶತಾಯ-ಗತಾಯ ಪ್ರಯತ್ನಿಸಿ ಜಾಹೀರಾತಿಗೆ ಎಳೆತಂದು ಬಿಡುತ್ತವೆ. ಈಗಲೂ ಹಾಗೆಯೇ ಆಗಿದೆ. ರಶ್ಮಿಕಾ ಮಂದಣ್ಣ  (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಕಂಪನಿಗಳು ಇವರ ಹಿಂದೆ ಬಿದ್ದಿವೆ. ಈ ಪೈಕಿ ಒಂದು ಜಾಹೀರಾತನ್ನು ಒಪ್ಪಿ ದಂಪತಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇತ್ತೀಚೆಗೆ ಅದು ಸ್ಪಷ್ಟವಾಗುತ್ತಿತ್ತು. ಈಗ ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಇವರು ವಿವಾಹ ಆಗುತ್ತಿದ್ದಂತೆ ಬಟ್ಟೆ ಕಂಪನಿಯೊಂದು ಇವರನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದೆ.

ಸದ್ಯ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ಬಿಸಿಬಿಸಿ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ಯಾವುದೇ ವಿಷಯ ಪೋಸ್ಟ್ ಮಾಡಿದರೂ ಜನರು ನೋಡುತ್ತಾರೆ. ಹೀಗಾಗಿ, ಬಟ್ಟೆ ಕಂಪನಿಯವು ಇದರ ಲಾಭ ಪಡೆದಿದ್ದಾರೆ. ರಶ್ಮಿಕಾ-ವಿಜಯ್ ಕೊಲ್ಯಾಬರೇಷನ್​​ ಅಲ್ಲಿ ಪೋಸ್ಟ್ ಮಾಡಿರೋ ಜಾಹೀರಾತು 15 ಗಂಟೆಯಲ್ಲಿ ಬರೋಬ್ಬರಿ 5 ಮಿಲಿಯನ್ ಲೈಕ್ಸ್ ಹಾಗೂ 57 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಸರಿಯಾದ ಸಮಯದಲ್ಲಿ ಇವರು ಜೋಡಿಯನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅವರಿಗೆ ದೊಡ್ಡ ಲಾಭವಾಗಿದೆ. ಇನ್ನು, ರಶ್ಮಿಕಾ ವಿಜಯ್ ಕೂಡ ಈ ಜಾಹೀರಾತು ಶೂಟ್ ಮಾಡಲು ದೊಡ್ಡ ಮಟ್ಟದಲ್ಲೇ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ

ಇನ್ನೂ, ಅನೇಕ ಸಂಸ್ಥೆಗಳು ರಶ್ಮಿಕಾ ಹಾಗೂ ವಿಜಯ್ ಹಿಂದೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸದ್ಯ ಅವರು ಸಿನಿಮಾ ಕೆಲಸಗಳಿಂದ ಒಂದು ಬ್ರೇಕ್ ಪಡೆದಿದ್ದಾರೆ. ಈ ಕಾರಣಕ್ಕೆ ಸ್ವಲ್ಪ ಸಮಯದ ಬಳಿಕ ಈ ಬಗ್ಗೆ ಅವರು ಚಿಂತಿಸಬಹುದು. ರಶ್ಮಿಕಾ ಹಾಗೂ ವಿಜಯ್ ಫೆಬ್ರವರಿ 26ರಂದು ಮದುವೆ ಆಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ವಿವಾಹ ಅದ್ದೂರಿಯಾಗಿ ನೆರವೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್​ನ ಐಆರ್​ಜಿಸಿ ಪ್ರಧಾನ ಕಚೇರಿ ನಾಶ, ಹಾವಿನ ತಲೆಯನ್ನೇ ಕತ್ತರಿಸಿದ್ದೇವೆ ಎಂದ ಅಮೆರಿಕ – Kannada News | US Destroys Iran IRGC HQ, Khamenei Dead, Middle East Boils, Iran Vows Revenge

ಟೆಹ್ರಾನ್, ಮಾರ್ಚ್​ 02: ಇರಾನ್‌(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಧಾನ ಕಚೇರಿಯನ್ನು ಪ್ರಮುಖ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಕಳೆದ 47 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್​ಜಿಸಿ ಕಾರಣವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿದೆ. ಈ ಕ್ರಮವನ್ನು “ಹಾವಿನ ತಲೆಯನ್ನು ಕತ್ತರಿಸುವುದು” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಣ್ಣಿಸಿದೆ ಮತ್ತು ಯುಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಮತ್ತು ಐಆರ್ಜಿಸಿ ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.

ಇಸ್ರೇಲಿ ಸೇನೆಯು ಐಆರ್‌ಜಿಸಿ ಕೇಂದ್ರ, ಗುಪ್ತಚರ ಪ್ರಧಾನ ಕಚೇರಿ, ಐಆರ್‌ಜಿಸಿ ವಾಯುಪಡೆಯ ಕಮಾಂಡ್ ಕೇಂದ್ರ ಮತ್ತು ಆಂತರಿಕ ಭದ್ರತಾ ಪ್ರಧಾನ ಕಚೇರಿ ಸೇರಿದಂತೆ ಡಜನ್‌ಗಟ್ಟಲೆ ಇರಾನಿನ ಮಿಲಿಟರಿ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ಮಾಡಿದೆ.

ಶನಿವಾರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ, ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಗಳು ಭಾನುವಾರದವರೆಗೆ ಮುಂದುವರೆದವು. ಇರಾನ್ 66 ವರ್ಷದ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಮೂರು ಸದಸ್ಯರ ನಾಯಕತ್ವ ಮಂಡಳಿಗೆ ನೇಮಿಸಿತು, ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಇಡೀ ಮಧ್ಯಪ್ರಾಚ್ಯ ಈಗ ಕುದಿಯುತ್ತಿರುವ ಕೆಂಡದಂತಾಗಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಸುದ್ದಿ ದೃಢಪಡುತ್ತಿದ್ದಂತೆಯೇ ಇರಾನ್‌ನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿಯುತ್ತಿದೆ.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

ಇರಾನ್‌ನ ಪವಿತ್ರ ನಗರವಾದ ಕೊಮ್​ನಲ್ಲಿರುವ ಜಮ್ಕಾರನ್ ಮಸೀದಿಯ ಮೇಲೆ ಸೇಡಿನ ಕೆಂಪು ಬಾವುಟ ಹಾರಾಡುತ್ತಿದ್ದು, ಇದು ಇಡೀ ಜಗತ್ತಿಗೆ ಒಂದು ಭೀಕರ ಎಚ್ಚರಿಕೆಯ ಸಂಕೇತವಾಗಿದೆ. ಇರಾನ್ ಸಂಪ್ರದಾಯದ ಪ್ರಕಾರ, ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವುದು ಎಂದರೆ ಅದು ಕೇವಲ ಶೋಕವಲ್ಲ, ಬದಲಾಗಿ ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ.

ಖಮೇನಿ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಬೆಲೆ ತೆರಲೇಬೇಕು ಎಂಬ ಸಂದೇಶವನ್ನು ಇರಾನ್  ರವಾನಿಸಿದೆ. ಖಮೇನಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಮೃತಪಟ್ಟಿದ್ದಾನೆ. ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಒಳ್ಳೆಯ ಅವಕಾಶ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ಯದಲ್ಲಿ ಹೆಚ್ಚುತ್ತಿದೆ ಬೇಸಿಗೆ: ಮುಂದಿನ 7 ದಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚು – Kannada News | Karnataka Weather Forecast: Heatwave Warnings, High Humidity and UV Index Today

ಬೆಂಗಳೂರು, ಮಾ.2: ರಾಜ್ಯದಲ್ಲಿ ಬೇಸಿಗೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಇಂದಿನ ವರದಿಯ ಪ್ರಕಾರ, ಉತ್ತರ ಒಳನಾಡಿನಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದರೆ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮೋಡಕವಿದ ವಾತಾವರಣ ಇರಲಿದೆ. ಕರ್ನಾಟಕದಲ್ಲಿ ಇಂದು ಗರಿಷ್ಠ ತಾಪಮಾನ 34°C ವರೆಗೆ ದಾಖಲಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ 22°C ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ. ಆಗ್ನೇಯ ದಿಕ್ಕಿನಿಂದ ಗಂಟೆಗೆ ಸುಮಾರು 6 ಮೈಲಿ (6 mph) ವೇಗದಲ್ಲಿ ಗಾಳಿ ಬೀಸಲಿದೆ.

ಇಂದು ಯುವಿ ಇಂಡೆಕ್ಸ್ 9 ರಷ್ಟಿದ್ದು, ಇದು ಅತ್ಯಂತ ಹೆಚ್ಚಾಗಿದೆ. ಮಧ್ಯಾಹ್ನದ ಸಮಯದಲ್ಲಿ ನೇರ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ಅಗತ್ಯ. ನಗರದಲ್ಲಿ ಗರಿಷ್ಠ 32°C ತಾಪಮಾನ ಇರಲಿದ್ದು, ಹವಾಮಾನವು ಶುಭ್ರವಾಗಿರಲಿದೆ. ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಆರ್ದ್ರತೆ (Humidity) ಹೆಚ್ಚಿರಲಿದ್ದು, ಸೆಖೆಯ ಅನುಭವವಾಗಲಿದೆ. ಮಂಗಳೂರಿನಲ್ಲಿ ಅತಿಯಾದ ಸೆಖೆ ಮತ್ತು ಬೆವರಿನ ಅನುಭವ. ವಾರದ ಅಂತ್ಯದಲ್ಲಿ ಸಾಧಾರಣ ಮೋಡಕವಿದ ವಾತಾವರಣವಿರಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹವಾಮಾನವು ಆಹ್ಲಾದಕರವಾಗಿದ್ದರೂ ಮಧ್ಯಾಹ್ನ ಬಿಸಿಲು ಹೆಚ್ಚಿರಲಿದೆ. ಇನ್ನು ಇಲ್ಲಿನ ಸ್ಥಿತಿ ಶುಷ್ಕ ಹವೆ ಹಾಗೂ ಮಳೆಯ ಸಾಧ್ಯತೆ ಇಲ್ಲ. ಇನ್ನು ಬೆಳಗಾವಿಯಲ್ಲಿ ಬೆಳಗಾವಿಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ತಂಪು ಹವೆ ಇರಲಿದ್ದು, ಮಧ್ಯಾಹ್ನ ತಾಪಮಾನ ಏರಿಕೆಯಾಗಲಿದೆ. ರಾಜ್ಯದ ಅತ್ಯಂತ ಬಿಸಿಲಿನ ಜಿಲ್ಲೆಯಾಗಿರುವ ಕಲಬುರ್ಗಿಯಲ್ಲಿ ಬಿಸಿ ಗಾಳಿಯ (Heat Wave) ಎಚ್ಚರಿಕೆ ನೀಡಲಾಗಿದೆ. ಕಾಫಿ ನಾಡಿನಲ್ಲಿ ಹವಾಮಾನವು ಇತರೆ ಜಿಲ್ಲೆಗಳಿಗಿಂತ ತಂಪಾಗಿರಲಿದೆ.

ಇದನ್ನೂ ಓದಿ: ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?

ರಾಜ್ಯದಲ್ಲಿ ಬೇಸಿಗೆಯ ಪ್ರತಾಪ ತಾರಕಕ್ಕೇರಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶವು ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ (ಬೆಂಗಳೂರು, ಮೈಸೂರು)ಹವಾಮಾನವು ಶುಷ್ಕವಾಗಿರಲಿದ್ದು, ಮಧ್ಯಾಹ್ನದ ವೇಳೆ ತೀವ್ರ ಬಿಸಿಲು ಇರಲಿದೆ. ಮಳೆಯ ಸಾಧ್ಯತೆ ತೀರಾ ಕಡಿಮೆ. ಉತ್ತರ ಒಳನಾಡು ಪ್ರದೇಶದಲ್ಲಿ (ಕಲಬುರಗಿ, ರಾಯಚೂರು) ಇಲ್ಲಿ ಉಷ್ಣಾಂಶವು 38°C ದಾಟುವ ಸಾಧ್ಯತೆ ಇದೆ. ಬಿಸಿ ಗಾಳಿಯ (Heat Wave) ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ (ಮಂಗಳೂರು, ಉಡುಪಿ) ಗರಿಷ್ಠ ತಾಪಮಾನ 33°C ಇದ್ದರೂ, ಆರ್ದ್ರತೆ (Humidity) ಹೆಚ್ಚಿರುವ ಕಾರಣ ಅತಿಯಾದ ಸೆಖೆ ಮತ್ತು ಬೆವರಿನ ಅನುಭವವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version