ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 2ರ ದಿನಭವಿಷ್ಯ

ಈ ದಿನ ಮುಖ್ಯವಾದ ಕೆಲಸ ಕೈಗೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಇಷ್ಟದೈವ ಅಥವಾ ಕುಲದೈವವನ್ನು ಸ್ಮರಿಸುವುದರಿಂದ ದಿನವಿಡೀ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಸಾಫಲ್ಯ ಕಾಣುತ್ತೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸಂಗಾತಿಯ ಹಠಮಾರಿತನದ ಕಾರಣಕ್ಕೆ ನಾಲ್ಕು ಜನರ ಮಧ್ಯೆ ನಿಮಗೆ ಅವಮಾನ ಆಗುವ ಸಾಧ್ಯತೆಗಳು ಇವೆ. ಈಚೆಗಷ್ಟೇ ಮನೆ ಕಟ್ಟಿದ್ದೀರಿ ಅಥವಾ ರಿನೊವೇಷನ್ ಮಾಡಿಸಿದ್ದೀರಿ, ಆ ಕಾರಣದಿಂದಾಗಿಯೇ ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇದ್ದೀರಿ ಅಂತಾದಲ್ಲಿ ಅದರಿಂದ ಹೊರಬರುವಂತಹ ಮಾರ್ಗ, ಉಪಾಯಗಳು ಗೋಚರ ಆಗಲಿವೆ. ಸ್ವಂತ ವ್ಯಾಪಾರ, ಉದ್ಯಮ ಮಾಡಿಕೊಂಡು ಇರುವವರಿಗೆ ವಿಸ್ತರಣೆಯ ಅವಕಾಶಗಳು ದೊರೆಯಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮಲ್ಲಿ ಕೆಲವರು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಪ್ರಯತ್ನ ಪಡಲಿದ್ದೀರಿ. ಇನ್ನು ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹಣಕಾಸಿನ ನೆರವನ್ನು ತಾತ್ಕಾಲಿಕವಾಗಿ ನೀಡಬಹುದು. ನೀವು ಮರೆತೇ ಹೋದಂತಹ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲಗಳು ಏನಾದರೂ ಇದ್ದಲ್ಲಿ ಹಿರಿಯರು ಅಥವಾ ಅನುಭವಗಳ ಸಲಹೆಯನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ಒಂದು ಬಗೆಯ ಸಂತೋಷ- ಸಮಾಧಾನದ ಜತೆಗೆ, ಈ ನಿರ್ಧಾರ ಹೇಗೆ ಮಾಡಬೇಕು ಎಂಬ ಗೊಂದಲ ಇರುವಂಥ ಸವಾಲು ನಿಮ್ಮ ಎದುರು ನಿಲ್ಲಲಿದೆ. ಈ ಸಮಯದಲ್ಲಿ ನಿಮಗೆ ದೊರೆಯುವಂತಹ ಅವಕಾಶವೋ ಜವಾಬ್ದಾರಿಯೋ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದನ್ನು ನಿರ್ಧರಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

IND vs ENG: ಭಾರತ- ಇಂಗ್ಲೆಂಡ್ ನಡುವೆ ಸೆಮೀಸ್ ಕಾಳಗ; ಮರುಕಳಿಸುತ್ತಾ ಇತಿಹಾಸ? – Kannada News | T20 World Cup Semifinal: India Beats WI, Faces England. Winner Often Claims World Title!

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ (T20 World Cup Semifinal) ಸ್ಥಾನ ಪಡೆದುಕೊಂಡಿದೆ. ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವ ಮೂಲಕ 2016 ರ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಸೆಮಿಫೈನಲ್​ಗೂ ಅರ್ಹತೆ ಪಡೆದುಕೊಂಡಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೇರಿದೆ. ಸತತ ಮೂರನೇ ಬಾರಿಗೆ ಸೆಮಿಫೈನಲ್ ತಲುಪಿರುವ ಟೀಂ ಇಂಡಿಯಾ ಈಗ ಇಂಗ್ಲೆಂಡ್ ( India vs England) ತಂಡವನ್ನು ಎದುರಿಸಲಿದೆ.

ತವರಿನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಆರಂಭವನ್ನು ಅದ್ಭುತವಾಗಿ ಮಾಡಿದ್ದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ, ಟೂರ್ನಿಯಿಂದಲೇ ಹೊರಗುಳಿಯುವ ಹಂತದಲ್ಲಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಸತತ ಮೂರನೇ ಬಾರಿಗೆ ಮುಖಾಮುಖಿ

ಇದೀಗ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ಮತ್ತು ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ. ಕಾಕತಾಳೀಯವಾಗಿ, ಹಿಂದಿನ ಎರಡು ವಿಶ್ವಕಪ್‌ಗಳಂತೆ, ಇದು ಟೂರ್ನಿಯ ಎರಡನೇ ಸೆಮಿಫೈನಲ್ ಕೂಡ ಆಗಿರುತ್ತದೆ. ಇದಕ್ಕೂ ಮೊದಲು, 2022 ರಲ್ಲಿ, ಭಾರತ ಮತ್ತು ಇಂಗ್ಲೆಂಡ್ ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಇಂಗ್ಲೆಂಡ್ 10 ವಿಕೆಟ್‌ಗಳಿಂದ ಗೆದ್ದಿತ್ತು. ಆ ನಂತರ, 2024 ರಲ್ಲಿ ಜಾರ್ಜ್‌ಟೌನ್‌ನಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಭಾರತ ತಂಡ 68 ರನ್‌ಗಳಿಂದ ಜಯಗಳಿಸಿ ಫೈನಲ್​ಗೇರಿತ್ತು.

IND vs WI: ಬೇಡ ಎಂದು ಬಿಸಾಡಿದವ ಭಾರತವನ್ನು ಗೆಲ್ಲಿಸಿದ; ಸೆಮೀಸ್​ಗೇರಿದ ಟೀಂ ಇಂಡಿಯಾ

ಗೆದ್ದ ತಂಡಕ್ಕೆ ಚಾಂಪಿಯನ್ ಪಟ್ಟ?

ಈಗ, ಈ ಸೆಮಿಫೈನಲ್‌ನಲ್ಲಿ ಯಾವ ತಂಡ ಗೆದ್ದರೂ ಅದು ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆ ಹೆಚ್ಚಿದೆ. ವಾಸ್ತವವಾಗಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಿಂದಿನ ಎರಡು ಸೆಮಿಫೈನಲ್‌ಗಳನ್ನು ಗೆದ್ದ ತಂಡವು ವಿಶ್ವಕಪ್ ಗೆದ್ದಿದೆ. 2022 ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿ ನಂತರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಹಾಗೆಯೇ 2024 ರಲ್ಲಿ, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು.

Published On – 11:36 pm, Sun, 1 March 26

Source link

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ – Kannada News | Bangaluru Amrutahalli Case: Ex Corporator Son Among 3 Arrested

ಬೆಂಗಳೂರು, ಮಾರ್ಚ್​ 01: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್ (Physical Assult Case) ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ ಮಗ ಸೇರಿದಂತೆ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರ್​​ನ್ನ ಖಾಕಿ ಸೀಜ್ ಮಾಡಿದೆ.

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಲಾಕ್ ಆಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನ ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ: ನಿಖಿಲ್​​ ಯುವತಿಯರ ಜತೆಗೆ ಖುಲ್ಲಂ ಖುಲ್ಲಾ

ಡ್ರಗ್ಸ್ ನೀಡಿ ರೇಪ್ ಮಾಡಿದ್ದಾನೆ ಎನ್ನುವ ದೊಡ್ಡ ಆರೋಪ ಹೊತ್ತಿರುವ ನಿಖಿಲ್​​ನ ಕೆಲಸಕ್ಕೆಲ್ಲಾ ಈ ನಾಲ್ವರು ಕೂಡ ಬಲಗೈ ಎಡಗೈನಂತಿದ್ದರು. ಯಾವಾಗ ನಿಖಿಲ್ ಮತ್ತು ಡಿಕ್ಸನ್ ಬಂಧನವಾಯ್ತೋ ಈ ಮೂವರದ್ದು ಕೂಡ ಇದರಲ್ಲಿ ಪಾತ್ರವಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಈಗ ಬಂಧಿಸಿದ್ದಾರೆ.

ಒಬ್ಬಬ್ಬರದ್ದು ಒಂದೊಂದು ಪಾತ್ರ

ನಿಖಿಲ್- ಪಾರ್ಟಿಯ ಮಾಸ್ಟರ್ ಮೈಂಡ್. ಡಿಕ್ಸನ್ ಸಾಂಡ್ರಾ: ಹುಡುಗಿರನ್ನ ಕರೆತರುವುದು, ಅನಿರುದ್ಧ: ಪಾರ್ಟಿಗೆ ವಿಲ್ಲಾ ಬುಕ್ ಮಾಡಿ, ಹಣದ ವ್ಯವಸ್ಥೆ ಮಾಡಿದ್ದ, ಶ್ರವಣ್‌: ಹುಡುಗಿಯರ ಪಿಕ್ ಮಾಡಿ ಕರೆತರುವುದು, ಮೋಹಿತ್: ಮೂಲತಃ ಗುಜರಾತ್ ಮೂಲದವನಾಗಿದ್ದು ಇವನು ಪಾರ್ಟಿಯಲ್ಲಿದ್ದ.

ಹೀಗೆ ನಿಖಿಲ್ ನಡೆಸುತ್ತಿದ್ದ ಪಾರ್ಟಿಯಲ್ಲಿ ಈ ನಾಲ್ವರು ಒಂದಲ್ಲಾ ಒಂದು ರೀತಿ ಪಾತ್ರದಾರಿಗಳಾಗಿದ್ದರು. ಇನ್ನು ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಮಗನಾಗಿದ್ದು, ಕಂಟ್ರಾಕ್ಟರ್ ಕೂಡ ಆಗಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಈ ಆರೋಪಿಗಳ ನೀಚತನದ ಬಗ್ಗೆ ತನಿಖೆ ಚುರುಕಾಗಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ?

ಮತ್ತೊಂದು ಕಡೆ ಪ್ರೇಮಿಗಳ ದಿನಾಚರಣೆ ದಿನ ನಡೆದ ಪಾರ್ಟಿ ನಂತರ ನಿಖಿಲ್ ಸಂತ್ರಸ್ಥೆಯನ್ನ ಡ್ರಾಪ್ ಮಾಡಿದ್ದ. ಈ ವೇಳೆ ನಿಖಿಲ್ ಇದೇ KA 05-NC 7299 ನೋಂದಣಿ ಫಾರ್ಚುನರ್ ಕಾರಿನಲ್ಲಿ ಯುವತಿಯನ್ನ ಹತ್ತಿಸಿಕೊಂಡು ಅಲ್ಲು ಕಿರುಕುಳ ನೀಡಿ ಬೆದರಿಕೆ ಹಾಕಿದ್ದ.

ಕಾರು ವಶಕ್ಕೆ 

ಪಾರ್ಟಿ ಬಳಿಕ ಯುವತಿಯನ್ನ ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದ ನಿಖಿಲ್, ನಡೆದ ವಿಚಾರವನ್ನ ಯಾರಿಗೂ ಹೇಳದಂತೆ ಅಸಭ್ಯವಾಗಿ ವರ್ತಿಸುತ್ತಲೇ ಯುವತಿಗೆ ಬೆದರಿಕೆ ಹಾಕಿದ್ದ ಅಂತನೂ ಯುವತಿ ಆರೋಪಿಸಿದ್ದಾಳೆ. ಸದ್ಯ ಈ ತನಿಖೆಯ ಭಾಗವಾಗಿ ಪೊಲೀಸರು ಈ ಕಾರನ್ನ ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಮತ್ತೆ ಯಾರ ಕೈಗೆ ಕೋಳ ಬೀಳುತ್ತೋ ಕಾದು ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI: ಬೇಡ ಎಂದು ಬಿಸಾಡಿದವ ಭಾರತವನ್ನು ಗೆಲ್ಲಿಸಿದ; ಸೆಮೀಸ್​ಗೇರಿದ ಟೀಂ ಇಂಡಿಯಾ – Kannada News | Sanju Samson’s Heroics: India Beats West Indies to Qualify for T20 World Cup Semifinals

ಕೋಲ್ಕತ್ತಾದ ಈಡನ್​ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ಸುತ್ತಿನ ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೊದಲೇ ಹೇಳಿದಂತೆ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿಗಾಗಿ ರಣತಂತ್ರವನ್ನೇ ಹೆಣೆದಿದ್ದವು. ಆದರೆ ಕೆಚ್ಚೆದೆಯ ಆಟವನ್ನಾಡಿದ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆಯಿತು. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಎಂದರೆ ತಪ್ಪಾಗಲಾರದು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಸಂಜು ಅವರ ಈ ಸ್ಮರಣೀಯ ಇನ್ನಿಂಗ್ಸ್​ನಿಂದಾಗಿ ವಿಂಡೀಸ್ ನೀಡಿದ 195 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತು.

Source link

ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ – Kannada News | Once Again kadsiddheshwara swamiji controversy Statement On Sharanas at Bagalkot

ಬಾಗಲಕೋಟೆ, ಮಾರ್ಚ್ 01): ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ಚಪ್ಪಲಿ ಎಸೆತದ‌ ಕಿಚ್ಚು ಇಂದಿಗೂ ಆರಿಲ್ಲ.ಮಸೀದಿಯಿಂದ ಚಪ್ಪಲಿ ಕಲ್ಲು ಎಸೆತದಿಂದ ಕೇಸರಿ‌ಕಲಿಗಳ ಕೋಪ ಇಂದಿಗೂ ಆರಿಲ್ಲ.ಇದರ ಮಧ್ಯೆ ನಗರದಲ್ಲಿ ಇಂದು ಬೃಹತ್ ವಿರಾಟ್ ಹಿಂದೂ ಸಮ್ಮೇಳನ ನಡೆಯಿತು.ವಿವಾದಿತ ಸ್ಥಳದಲ್ಲೇ‌ ಭರ್ಜರಿ ಮೆರವಣಿಗೆ ಮಾಡಿ ಹಿಂದೂಗಳು ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು. ಇದೇ ವೇಳೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇತ್ತೀಚೆಗೆ ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿ ಭಾರೀ ಸುದ್ದಿಯಲ್ಲಿದ್ದ ಕನ್ನೇರಿ ಸ್ವಾಮೀಜಿ , ಇದೀಗ ಮತ್ತೆ ಗುಡುಗಿದ್ದಾರೆ. ಶರಣರು ಹಿಂದೂಗಳಲ್ಲ ಎಂದು ವಿವದಾತ್ಮಕ ಹೇಳಿಕೆ ನೀಡಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂದು ಕಾದುನೋಡಬೇಕಿದೆ.

Source link

‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ – Kannada News | Ram Charan started Peddi movie Dubbing here is the video

ರಾಮ್ ಚರಣ್ (Ram Charan), ಜಾನ್ಹವಿ ಕಪೂರ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ನಟ ರಾಮ್ ಚರಣ್ ಅವರು ಇದೀಗ ಸಿನಿಮಾದ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. ಜೊತೆಗೆ ನಿರ್ದೇಶಕ ಬುಜ್ಜಿಬಾಬು ಸನಾ ಸಹ ಇದ್ದಾರೆ. ಬುಜ್ಜಿಬಾಬು ಸಹ ಈ ಸಿನಿಮಾದಲ್ಲಿ ನಟಿಸಿದಂತಿದ್ದು, ಅದರ ಬಗ್ಗೆಯೇ ನಟ ರಾಮ್ ಚರಣ್ ಬುಜ್ಜಿ ಬಾಬು ಅವರ ಕಾಲೆಳೆಯುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಮ್ಮಿಂಗ್ ಪೂಲ್​​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ – Kannada News | Youth drowns to death in swimming pool at Haveri, Last Moments Captured In CCTV

ಹಾವೇರಿ, (ಮಾರ್ಚ್ 01): ಈಜುಕೊಳದಲ್ಲಿ ಈಜಲು ಹೋದ ಯುವಕ ದುರಂತ ಸಾವು ಕಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಕಾಕೋಳದಲ್ಲಿ ನಡೆದಿದೆ. ಡಕಣಾಚಾರಿ ನಾಗರಾಜ್ ಬಡಿಗೇರ್ (23) ಮೃತ ಯುವಕ. ನಾಗರಾಜ್ ಗೆಳೆಯರೊಂದಿಗೆ ಕಾಕೋಳ ರಸ್ತೆಯಲ್ಲಿರೋ ಮಹಾಕೊಟೇಶ್ವರ ಈಜುಕೊಳದಲ್ಲಿ ಸ್ವಿಮ್ಮಿಂಗ್ ಆಡಲು ಹೋಗಿದ್ದು, ಈ ವೇಳೆ ದುರಂತ ಸಾವು ಕಂಡಿದ್ದಾರೆ. ಮೊದಲು ಸ್ನೇಹಿತರೊಂದಿಗೆ ಈಜಾಡಿದ್ದಾನೆ. ಬಳಿಕ ತಲೆ ಕೆಳಗೆ ಮಾಡಿ ಡೈವ್ ಹೊಡೆದಿದ್ದಾನೆ. ಆದ್ರೆ, ಡೈವ್ ಹೊಡೆದವ ಮೇಲೇಳಲೇ ಇಲ್ಲ. ಹಾಗೇ ಮುಳುಗಿದ್ದಾನೆ. ಪಕದಲ್ಲಿ ಗೆಳೆಯರು ಆಟವಾಡುತ್ತಿದ್ದರೂ ಸಹ ಗಮನಿಸಿಲ್ಲ. ಬಳಿಕ ದಡದಲ್ಲಿದ್ದ ಮತ್ತೋರ್ವ ಗಮನಿಸಿ ಬಂದು ನಾಗರಾಜ್​​​ನನ್ನು ಮೇಲೆತ್ತೆ ದಡಕ್ಕೆ ತಂದಿದ್ದಾರೆ. ಆದ್ರೆ, ದುರದೃಷ್ಟವಶಾತ್ ಅಷ್ಟೊತ್ತಿಗಾಗಲೇ ನಾಗರಾಜ್ ನೀಡು ಕುಡಿದು ಸಾವನ್ನಪ್ಪಿದ್ದ. ನಾಗರಾಜ್ ಮುಳುಗಿ ಸಾವನ್ನಪ್ಪಿದ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ.

Source link

‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್ – Kannada News | Sanjana Anand talks about Hayagrriva Kannada movie

ಧನ್ವೀರ್ ಗೌಡ (Dhanveer Gowda) ನಟನೆಯ ‘ಹಯಗ್ರೀವ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಮೊದಲ ದಿನ ಕಾರಣಾಂತರಗಳಿಂದ ಸಿನಿಮಾದ ಶೋಗಳು ರದ್ದಾಗಿದ್ದವಾದರೂ ಆ ನಂತರ ಸಂಜೆ ವೇಳೆ ಸಿನಿಮಾ ಬಿಡುಗಡೆ ಆಗಿ, ಪ್ರೇಕ್ಷಕರಿಂದ ಉತ್ತರ ಆರಂಭಿಕ ಪ್ರತಿಕ್ರಿಯೆ ಪಡೆದುಕೊಂಡಿದೆ. ‘ಹಯಗ್ರೀವ’ ಸಿನಿಮಾ ಭಿನ್ನ ರೀತಿಯ ಕತೆ ಹೊಂದಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ನಟಿ ಸಂಜನಾ ಆನಂದ್, ತಮ್ಮ ನಟನೆಯ ‘ಹಯಗ್ರೀವ’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ವರ್ಗಾವಣೆ ಲಂಚಾವತಾರ: ಡಿಜಿಗೆ ಲೋಕಾಯುಕ್ತ ಇನ್ಸ್​​ಪೆಕ್ಟರ್​ ಮಹತ್ವದ ಪತ್ರ – Kannada News | Digital Counselling for Police Transfers: Lokayukta Inspector Urges DG Amid Bribery Allegations

ಪ್ರಾತಿನಿಧಿಕ ಚಿತ್ರImage Credit source: varthabharati

ಬೆಂಗಳೂರು, ಮಾರ್ಚ್​​ 01: ಇತ್ತೀಚಿಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ (Police transfers) ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಲಕ್ಷಾಂತರ, ಕೋಟ್ಯಂತರ ರೂ ಲಂಚ ಪಡೆದು ಅಥವಾ ರಾಜಕಾರಣಿಗಳಿಗೆ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಕೌನ್ಸಿಲಿಂಗ್​​ ಮೂಲಕ ವರ್ಗಾವಣೆ ಮಾಡುವಂತೆ ರಾಜ್ಯ ಲೋಕಾಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯನ ಗೌಡ ಬಿ.ಪಿ ಎಂಬುವವರಿಂದ ಡಿಜಿಗೆ ಪತ್ರ ಬರೆಯಲಾಗಿದೆ. ಸದ್ಯ ಈ ಪತ್ರ ಎಲ್ಲೆಡೆ ವೈರಲ್​ ಆಗುತ್ತಿದೆ.

ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರವಾಗಿ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಲಂಚ ನೀಡಿ ಪೋಸ್ಟಿಂಗ್ ಪಡೆಯಬೇಕು ಎಂಬ ವಿಚಾರ ಹರಿದಾಡುತ್ತಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಕೂಡ ಸಾಕಷ್ಟು ಚರ್ಚೆ ಆಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಜಿಟಲ್ ಕೌನ್ಸಿಲಿಂಗ್​​ ಮೂಲಕ ವರ್ಗಾವಣೆ ಮಾಡುವಂತೆ ಬ್ಯಾಟರಾಯನ ಗೌಡ ಬಿ.ಪಿ ಡಿಜಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಇನ್ನು ಇತ್ತೀಚೆಗೆ ಕೆಲವು ಅಧಿಕಾರಿಗಳನ್ನು ಡಿಜಿಟಲ್ ಕೌನ್ಸಿಲಿಂಗ್​ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. A,B,C,D ಗ್ರೂಪ್​ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯ ಪಿಡಿಓಗಳನ್ನ ಡಿಜಿಟಲ್ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರ ಬಗ್ಗೆ ರಾಜಕಾರಣಿಗಳು ಸೇರಿದಂತೆ ಜನರಿಂದ ಕೂಡ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಇದೇ ಮಾದರಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡುವಂತೆ ಸುಮಾರು 14 ನಿಬಂಧನೆಗಳನ್ನು ಬ್ಯಾಟರಾಯನ ಗೌಡ ಬಿ.ಪಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು

ಪತ್ರದಲ್ಲಿ ಉಲ್ಲೇಖಿಸಿರುವ ನಿಬಂಧನೆಗಳೊಂದಿಗೆ ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯನ್ನು ಮಾಡಿದಲ್ಲಿ ಇಲಾಖೆಯಲ್ಲಿ ಪಾರದರ್ಶಕ, ರಾಜಕೀಯ ಹಸ್ತಕ್ಷೆಪರಹಿತ, ನಿಷ್ಪಕ್ಷಪಾತ, ಭ್ರಷ್ಟಾಚಾರ ರಹಿತ, ಒತ್ತಡರಹಿತ, ಸಮಗತೆ, ದಕ್ಷತೆ ಮತ್ತು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಸಮಾಜದಲ್ಲಿ ಇಲಾಖೆಯ ಘನತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್‌ ಮುಖಾಂತರ ವರ್ಗಾವಣೆ ಮಾಡಲು ರಾಜ್ಯ ಲೋಕಾಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯನ ಗೌಡ ಬಿ.ಪಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆಗೆ 9 ತಿಂಗಳ ಮುಂಚೆಯೇ ಹೊರಬಿತ್ತು ‘ರಾಮಾಯಣ’ ಸಿನಿಮಾ ವಿಮರ್ಶೆ – Kannada News | Ramayana movie first reviews out, people loved the movie

ರಣ್​​ಬೀರ್ ಕಪೂರ್ (Ranbir Kapoor) ಮತ್ತು ಯಶ್ ಒಟ್ಟಿಗೆ ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನ್ನಲಾಗುತ್ತಿದೆ. ಆಸ್ಕರ್ ವಿಜೇತ ಹಾಲಿವುಡ್​ ವಿಎಫ್​​ಎಕ್ಸ್ ಸಂಸ್ಥೆಯಾದ ಡಿಎನ್​​ಇಜಿಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಕತೆಯನ್ನು ಭಾರಿ ಅದ್ಧೂರಿಯಾಗಿ, ಇಡೀ ವಿಶ್ವವೇ ತಿರುಗಿ ನೋಡುವಂತೆ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಒಂಬತ್ತು ತಿಂಗಳು ಇರುವಾಗದೇ ಸಿನಿಮಾದ ರಿವ್ಯೂ (ವಿಮರ್ಶೆ) ಹೊರಬಿದ್ದಿದೆ.

‘ರಾಮಾಯಣ’ ಸಿನಿಮಾದ ಮೊದಲ ಕಟ್ ಅಥವಾ ಆಕ್ಷನ್ ಕಟ್ ಆವೃತ್ತಿಯನ್ನು ಚಿತ್ರತಂಡವು ಈಗಾಗಲೇ ಆಯ್ದ ಕೆಲ ಪ್ರೇಕ್ಷಕರಿಗೆ ಪ್ರದರ್ಶಿಸಿದೆ. ಲಾಸ್ ಏಂಜಲ್ಸ್​​ನ ಸಿನೆಮಾರ್ಕ್ ವಿಸ್ತಾ ಸ್ಕ್ರೀನ್​​ನಲ್ಲಿ ಆಯ್ದ ಜನರಿಗೆ ಚಿತ್ರತಂಡವು ‘ರಾಮಾಯಣ’ ಸಿನಿಮಾವನ್ನು ಪ್ರದರ್ಶಿಸಿದೆ. ಈ ಗ್ರೂಪ್​​ನಲ್ಲಿ 18 ರಿಂದ 60 ವರ್ಷ ವಯಸ್ಸಿನ ಹಲವು ಕ್ಷೇತ್ರಗಳಿಗೆ ಸೇರಿದ ಪ್ರೇಕ್ಷಕರು ಇದ್ದರಂತೆ. ‘ರಾಮಾಯಣ’ ಸಿನಿಮಾದ ಫಸ್ಟ್ ಕಾಪಿಯನ್ನು ಪ್ರೇಕ್ಷಕರಿಗೆ ತೋರಿಸಲಾಗಿದ್ದು, ಅವರಿಂದ ಪ್ರತಿಕ್ರಿಯೆಗಳನ್ನು ಸಹ ಪಡೆಯಲಾಗಿದೆ.

‘ರಾಮಾಯಣ’ ಸಿನಿಮಾದ ಮೊದಲ ಕಟ್ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾದ ಅದ್ಧೂರಿತನ ಪ್ರೇಕ್ಷಕರಿಗೆ ಸಖತ್ ಇಷ್ಟವಾಯ್ತಂತೆ. ಅಲ್ಲದೆ ಕತೆಯಲ್ಲಿನ ಭಾವುಕ ಅಂಶಗಳು, ಹೀರೋಯಿಕ್ ಅಂಶಗಳು, ನೆಲಮೂಲದೊಟ್ಟಿಗೆ ಸಂಬಂಧ ಹೊಂದಿರುವಂತೆ ತೋರಿಸಲಾಗಿರುವ ಕತೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಯ್ತಂತೆ.

ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್

ಪ್ರೇಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಕೆಲವು ತೀರ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುತ್ತಿದೆ ಎನ್ನಲಾಗಿದೆ. ಸಿನಿಮಾ ಬಿಡುಗಡೆ ಇನ್ನೂ ಒಂಬತ್ತು ತಿಂಗಳು ಬಾಕಿ ಇದ್ದು, ವಿಎಫ್​​ಎಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಈ ಸಮಯವನ್ನು ಚಿತ್ರತಂಡ ಬಳಸಿಕೊಳ್ಳಲಿದೆ.

‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್, ರಾವಣನ ಪಾತ್ರದಲ್ಲಿ ನಟ ಯಶ್, ಸೀತಾಮಾತೆಯ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್ ಸೇರಿದಂತೆ ಇನ್ನೂ ಹಲವು ಖ್ಯಾತ ನಟ-ನಟಿಯರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:49 pm, Sun, 1 March 26

Source link

Exit mobile version