Headlines

ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ! – Kannada News | Indian Woman offered job in Portugal Sold To Beer Shop Owner how she is escaped

ನವದೆಹಲಿ, ಆಗಸ್ಟ್ 8: ಕೆಲವೊಮ್ಮೆ ಹಣದ ಬಗ್ಗೆ ನಮಗಿರುವ ಅತಿಯಾದ ವ್ಯಾಮೋಹ, ದುರಾಸೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಹೆಚ್ಚಿನ ಸಂಬಳ ಸಿಗುತ್ತದೆ, ಇನ್ನೂ ಚೆನ್ನಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆ, ಕನಸುಗಳಿಂದ ಪೋರ್ಚುಗಲ್​ಗೆ ಹೋಗಿದ್ದ ಭಾರತೀಯ ಯುವತಿಗೆ ದೊಡ್ಡ ಆಘಾತ ಕಾದಿತ್ತು. ಪೋರ್ಚುಗಲ್​ಗೆ ಹೋಗುತ್ತಿದ್ದಂತೆ ಆಕೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಏಜೆನ್ಸಿ ಆಕೆಯನ್ನು ಅಲ್ಲಿನ ಬಿಯರ್ ಶಾಪ್ ಮಾಲೀಕರಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲದೆ, ವೀಸಾ ಮತ್ತು ಇತರೆ ದಾಖಲೆಗಳ ಕೆಲಸದ ಹೆಸರಿನಲ್ಲಿ ವಂಚಕರು…

Read More

ಸ್ಪೈ ಸಿನಿಮಾಗಳಿಂದ ಸುಸ್ತಾಗಿ ಹಾರರ್ ಸಿನಿಮಾಕ್ಕೆ ಹಾರಿದ ‘ಯಶ್ ರಾಜ್’ – Kannada News | Yash Raj Films to produce its first Horror movie Varun Dhawan will be main lead

ಸಿನಿಮಾ (Cinema) ರಂಗದಲ್ಲಿ ಕಾಲ-ಕಾಲಕ್ಕೆ ಜಾನರ್​​ಗಳು ಬದಲಾಗುತ್ತಲೇ ಇರುತ್ತವೆ. ಪ್ರೇಮಕತೆಯೊಂದು ದೊಡ್ಡ ಹಿಟ್ ಆದರೆ ಎಲ್ಲರೂ ಪ್ರೇಮಕತೆಯ ಹಿಂದೆ ಬೀಳುತ್ತಾರೆ. ಅದೇ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಹಿಟ್ ಆದರೆ ಎಲ್ಲರೂ ಹಾಸ್ಯಪ್ರಧಾನ ಸಿನಿಮಾಗಳನ್ನೇ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್​​ನಲ್ಲಿ‘ಬಯೋಪಿಕ್’ ಜಾನರ್ ಬಲು ಓಡಿತ್ತು. ಒಂದರ ಹಿಂದೊಂದರಂತೆ ಕ್ರೀಡಾಪಟುಗಳ, ರಾಜಕಾರಣಿಗಳ ಬಯೋಪಿಕ್​​ಗಳು ನಿರ್ಮಾಣ ಆದವು. ಆದರೆ ಈಗ ಹಾರರ್ ಸಿನಿಮಾಗಳ ಕಾಲ. ಬಾಲಿವುಡ್​​ನ ಟಾಪ್ ನಿರ್ಮಾಣ ಸಂಸ್ಥೆ ಯಶ್​​ ರಾಜ್ ಫಿಲಮ್ಸ್ ಸಹ ಇದೇ ಮೊದಲ…

Read More

Benefits Of House Cleaning: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ – Kannada News | Cleaning the house can help you stay fit and healthy; do you know how?

ಆರೋಗ್ಯದ ದೃಷ್ಟಿಯಿಂದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅಷ್ಟೇ ಅಲ್ಲದೆ ಮನೆ ಸ್ವಚ್ಛ (house Cleaning) ಮತ್ತು ಅಚ್ಚುಕಟ್ಟಾಗಿದ್ದಾಗ ಮನೆಯ ವಾತಾವರಣ ಸಕಾರಾತ್ಮಕವಾಗಿರುತ್ತದೆ, ಮನಸ್ಥಿತಿಯೂ ಉತ್ತಮವಾಗಿರುತ್ತದೆ. ಆದರೆ ಹೆಚ್ಚಿನವರು ಮನೆ ಗುಡಿಸಬೇಕು, ಒರೆಸಬೇಕು, ಪಾತ್ರೆ ತೊಳಿಬೇಕು ಅಂದ್ರೆ ಸಖತ್‌ ಬೇಜಾರು ಮಾಡಿಕೊಳ್ಳುತ್ತಾರೆ ಮತ್ತು ಮನೆ ಕೆಲಸ ಮಾಡಲು ಹೋಗೋದಿಲ್ಲ, ಇನ್ನೂ ಕೆಲವರು ಮನೆ ಕೆಲಸವನ್ನು ಮಾಡಲು ಕೆಲಸದವರನ್ನೇ ಇಟ್ಟುಕೊಂಡಿರುತ್ತಾರೆ. ಆದರೆ ನಮ್ಮ ಕೈಯಾರೇ ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸಿದರೆ ಹೆಚ್ಚಿನ ಲಾಭವಿದೆಯಂತೆ. ಹೌದು ಮನೆ ಸ್ವಚ್ಛಗೊಳಿಸುವುದರಿಂದ ವಾತಾವರಣ…

Read More

IND vs SL: ಸಾಯಿ ಸುದರ್ಶನ್ ಬದಲಿಗೆ ಯಾರಿಗೆ ಸಿಗಲಿದೆ ಅವಕಾಶ? ರೇಸ್​ನಲ್ಲಿ ಇಬ್ಬರು

ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಇನ್ನೂ ಆರಂಭವಾಗಿಲ್ಲ, ಆದರೆ ಭಾರತ ತಂಡ ಈಗಾಗಲೇ ಎರಡು ಆಘಾತಗಳನ್ನು ಎದುರಿಸಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬಳಿಕ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೂಡ ಈ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಸುದರ್ಶನ್ ಇನ್ನೂ ಫಿಟ್ ಆಗದ ಕಾರಣ ಅವರನ್ನು ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ(PC-PTI). ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದಿರವ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದಾಗ್ಯೂ ಸುದರ್ಶನ್ ಈ ಸರಣಿಯಿಂದ ಹೊರಬಿದ್ದಿರುವುದು ಖಚಿತವಾಗಿದೆ ಎಂದು ವರದಿಯಾಗಿದೆ. ಹೀಗಾಗಿ…

Read More

ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ – Kannada News | A Man Lost his Rs 1 Lakh during New Minister KS Basavanthappa Welcome in mayakonda

ದಾವಣಗೆರೆ, (ಆಗಸ್ಟ್ 08): ನೂತನ ಸಚಿವರಾಗಿ ಕೆಎಸ್ ಬಸವಂತಪ್ಪ ಅವರು ಇಂದು (ಆಗಸ್ಟ್ 08) ಮೊದಲ ಬಾರಿಗೆ ಸ್ವಕ್ಷೇತ್ರ ಮಾಯಕೊಂಡಕ್ಕೆ ಆಗಮಿಸಿದ್ದು, ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನೂತನ ಮಂತ್ರಿಗೆ ಹೂಗುಚ್ಚ ನೀಡಿ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಆದ್ರೆ, ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು….ಬಸವಂತಪ್ಪನವರನ್ನು ಬರಮಾಡಿಕೊಳ್ಳುವ ಬರದಲ್ಲಿದ್ದ ಅಭಿಮಾನಿಯೊಬ್ಬರ ಜೇಬಿಗೆ ಕತ್ತರಿ ಹಾಕಿ ಒಂದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿದ್ದಾರೆ. ಹೌದು….ನೀರ್ಥಡಿ ಗ್ರಾಮದ ಸಂತೋಷ ಎನ್ನುವಾತ ಸಚಿವರ ಸ್ವಾಗತಕ್ಕೆ…

Read More

“ಚಿಪ್‌ನಿಂದ ಶಿಪ್‌ವರೆಗೆ ಎಲ್ಲವೂ ನಿಮ್ಮ ಕೈಗಳಲ್ಲೇ ತಯಾರಾಗಲಿದೆ”: ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ – Kannada News | Modi Lauds Youth Innovation: From Chips to Ships, India’s Tech Future is Bright

ದೆಹಲಿ, ಆ.8: “ಚಿಪ್‌ನಿಂದ ಹಿಡಿದು ಶಿಪ್‌ವರೆಗೆ (Chip to Ship) ಎಲ್ಲವೂ ಇಲ್ಲೇ, ನಿಮ್ಮದೇ ಕೈಗಳಿಂದ ತಯಾರಾಗಲಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವಶಕ್ತಿ ಹಾಗೂ ತಂತ್ರಜ್ಞರನ್ನು ಉದ್ದೇಶಿಸಿ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಐಐಟಿ ನವದೆಹಲಿಯ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಯುವಜನತೆ ಮಾಡುತ್ತಿರುವ ಅಭೂತಪೂರ್ವ ಆವಿಷ್ಕಾರಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸಣ್ಣ ಕಂಪ್ಯೂಟರ್ ಚಿಪ್‌ನಿಂದ ಹಿಡಿದು ಬೃಹತ್ ಹಡಗುಗಳು ಮತ್ತು ಯುದ್ಧನೌಕೆಗಳವರೆಗೆ…

Read More

ಉಡುಪಿಯಲ್ಲಿ ಕೈ ಮುಖಂಡ ಶೂಟೌಟ್: ಯುಪಿ ಮೂಲದ ಶೂಟರ್ಸ್​ ಖಾಕಿ ಬಲೆಗೆ ಬಿದ್ದಿದ್ಹೇಗೆ? – Kannada News | Congress Leader Shot in Udupi: How Police Nabbed UP Based Shooters

ಡೇವಿಡ್ ಡಿಸೋಜಾ, ಬಂಧಿತರುImage Credit source: tv9 kannada ಉಡುಪಿ, ಆಗಸ್ಟ್​​ 08: ಕರಾವಳಿ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಒಂದು ವಾರದ ಅಂತರದಲ್ಲಿ ಎರಡು ಶೂಟೌಟ್ (Shootout) ನಡೆದಿದೆ. ನಿನ್ನೆ ಉಡುಪಿಯಲ್ಲಿ (udupi) ಹಾಡಹಗಲೇ ನಡು ರಸ್ತೆಯಲ್ಲಿ ಊರಿನ ಜನಪ್ರಿಯ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ, ಅದೇ ಗ್ರಾಮದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ನಟೋರಿಯಸ್ ವ್ಯಕ್ತಿತ್ವದ ಡೇವಿಡ್ ಡಿಸೋಜ. ಈತನ ಕೊಲೆಯ ಕಥೆ ಎಷ್ಟು ರೋಚಕವಾಗಿದೆಯೋ ಆರೋಪಿಗಳ ಪತ್ತೆಯೂ ಅಷ್ಟೇ ಸಿನಿಮೀಯವಾಗಿದೆ. ಕಂಡಕಂಡವರಿಗೆ…

Read More

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು? – Kannada News | Home Minister Priyank Kharge Talks about illegal immigrants In Bengaluru

ಬೆಂಗಳೂರು, (ಆಗಸ್ಟ್ 08): ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದಲ್ಲಿ ಡಿಸಿಪಿ ಎಂ.ನಾರಾಯಣ್ ನೇತೃತ್ವದಲ್ಲಿ 23 ಪೊಲೀಸರ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದು, 29 ಸ್ಥಳಗಳಲ್ಲಿ 1909 ಜನರನ್ನ ವಶಕ್ಕೆ ಪಡೆದಿದ್ದಾರೆ. ಈ ಪೈಕಿ 15 ಮಂದಿ ಬಾಂಗ್ಲಾ ವಲಸಿಗರು ಎಂಬುವುದು ದೃಢಪಟ್ಟಿದ್ದು, ಬಾಂಗ್ಲಾದ ಬಾಗೇರಹತ್​​ನ ಖುಲ್ನಾ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇವರ ಬಳಿ ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ಆಧಾರ್ ಕಾರ್ಡ್ ಪತ್ತೆಯಾಗಿದ್ದು, 1,894 ಅಕ್ರಮ ವಲಸಿಗರ…

Read More

‘ಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ’: ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯ – Kannada News | Minister Kashappanavar to be CM? Siddanakolla Swamiji’s Prophecy Shakes Karnataka

ಬಾಗಲಕೋಟೆ, ಆ. 08: ನೂತನವಾಗಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯಾನಂದ ಕಾಶಪ್ಪನವರ್ ಅವರು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಪ್ರಸಿದ್ಧ ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವೇಳೆ, ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. “ನಿನ್ನ ಕೋಪವನ್ನು (ಸಿಟ್ಟು) ಸಂಪೂರ್ಣವಾಗಿ ತ್ಯಾಗ ಮಾಡಿದರೆ ನೀನು ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ” ಎಂದು ಶಿವಕುಮಾರ ಶ್ರೀಗಳು ನೂತನ ಸಚಿವರಿಗೆ ಆಶೀರ್ವದಿಸಿದ್ದಾರೆ. ಸಚಿವ ವಿಜಯಾನಂದ ಕಾಶಪ್ಪನವರ್ ಅವರು…

Read More

IND vs SL: ಎಡಗೈ ವೇಗಿಯ ಮುಂದೆ ಮತ್ತೆ ಸೊನ್ನೆ ಸುತ್ತಿದ ಯಶಸ್ವಿ ಜೈಸ್ವಾಲ್

ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಕಳಪೆ ಫಾರ್ಮ್ ಕಳವಳಕಾರಿಯಾಗಿದೆ. ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ಕೇವಲ 2 ಎಸೆತಗಳಲ್ಲಿ ಔಟಾದರು(PC-PTI). ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಎಡಗೈ ವೇಗಿಗೆ ವಿಕೆಟ್ ಒಪ್ಪಿಸಿದ್ದು, ತಂಡವನ್ನು ಸಂಕಷ್ಟಕ್ಕೀಡುಮಾಡಿದೆ. ವಾಸ್ತವವಾಗಿ ಜೈಸ್ವಾಲ್ ಕೆಲವು ಸಮಯದಿಂದ ಎಡಗೈ ವೇಗಿಗಳ…

Read More