ಬೆಂಗಳೂರಿನ ಈ ಕೆರೆಗಳಲ್ಲಿ ಇನ್ನು ಬೋಟಿಂಗ್ ಮಾಡಬಹುದು! ಕೆರೆಗಳ ನಿರ್ವಹಣೆಗೆ ಜಿಬಿಎ ಹೊಸ ಪ್ಲ್ಯಾನ್ – Kannada News | Boating Soon in Bengaluru Lakes! GBA Plans Tourism Boost Across City Waterbodies

ಕೆರೆಗಳ ನಿರ್ವಹಣೆಗೆ ಜಿಬಿಎ ಹೊಸ ಪ್ಲ್ಯಾನ್Image Credit source: tv9

ಬೆಂಗಳೂರು, ಫೆಬ್ರವರಿ 13: ಬೆಂಗಳೂರು (Bangalore) ಒಂದು ಕಾಲದಲ್ಲಿ ಕೆರೆಗಳಿಂದಲೇ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕೆರೆಗಳು ನಿರ್ವಹಣೆಯ ಕೊರತೆಯಿಂದ ಕಲುಷಿತಗೊಂಡು, ಡ್ರೈನೇಜ್ ನೀರು ಸೇರಿ ಅವನತಿಯ ಹಾದಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ, ಜಿಬಿಎ (GBA) ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಈ ಯೋಜನೆಯು ನಗರದ ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಹೊಂದಿದೆ.

ಬೆಂಗಳೂರು ನಗರದಲ್ಲಿ ಒಟ್ಟು 183 ಕೆರೆಗಳಿದ್ದು, ಜಿಬಿಎ ಆರಂಭಿಕ ಹಂತದಲ್ಲಿ ಹಲಸೂರು ಲೇಕ್, ಕಗ್ಗದಾಸಪುರ ಕೆರೆ, ನಾಯಂಡಹಳ್ಳಿ, ಸ್ಯಾಂಕಿ, ಯಲಹಂಕ, ರಾಚೇನಹಳ್ಳಿ, ವೆಂಗಯ್ಯನಕೆರೆ, ಬೇಗೂರು, ರಾಮಪುರ ಮತ್ತು ಮಡಿವಾಳ ಕೆರೆಗಳನ್ನು ಬೋಟಿಂಗ್ ಯೋಜನೆಗೆ ಆಯ್ಕೆ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಬಿಎ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಪರಿಸರಸ್ನೇಹಿ ಬೋಟಿಂಗ್​ಗೆ ಆದ್ಯತೆ

ಈ ಬೋಟಿಂಗ್ ವ್ಯವಸ್ಥೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ, ಅಂದರೆ ಇಂಧನ ರಹಿತ ಮತ್ತು ಮಾಲಿನ್ಯ ರಹಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಕೆರೆಗಳಲ್ಲಿರುವ ಜಲಚರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಕೆರೆಗಳಿಗೆ ಹೆಚ್ಚಿನ ಜನರು ಭೇಟಿ ನೀಡುವಂತೆ ಮಾಡಿ ಅವುಗಳ ನಿರ್ವಹಣೆಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಲ್ಲೇಶ್ವರಂನ ಐತಿಹಾಸಿಕ ಸ್ಯಾಂಕಿ ಕೆರೆಯಲ್ಲೂ ಬೋಟಿಂಗ್ ವ್ಯವಸ್ಥೆಗೆ ಜಿಬಿಎ ಸಿದ್ಧತೆ ನಡೆಸುತ್ತಿದೆ.

ಆದರೆ, ಈ ಪ್ರಸ್ತಾಪದ ಕುರಿತು ಸಾರ್ವಜನಿಕ ವಲಯದಲ್ಲಿ ಕೆಲವು ಪ್ರಶ್ನೆಗಳು ಮೂಡಿವೆ. ಬೆಂಗಳೂರಿನ ಕೆರೆಗಳ ನಿರ್ವಹಣೆ ಕಾರ್ಯವನ್ನು ಪಾಲಿಕೆಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ಹಲವು ಕೆರೆಗಳಲ್ಲಿ ಸಾಕಷ್ಟು ನೀರು ಲಭ್ಯವಿಲ್ಲದೆ, ಬೇಸಿಗೆಯಲ್ಲಿ ಬತ್ತಿ ಹೋಗುವ ಸ್ಥಿತಿ ಇದೆ. ಕೆಲವು ಕೆರೆಗಳಲ್ಲಿ ನೀರಿದ್ದರೆ, ಇನ್ನೊಂದೆಡೆ ಸಂಪೂರ್ಣವಾಗಿ ಖಾಲಿಯಾಗಿರುವ ದೃಶ್ಯ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು, ಕೆರೆಗಳಲ್ಲಿನ ನೀರಿನ ಗುಣಮಟ್ಟ ಮತ್ತು ಲಭ್ಯತೆ ಸುಧಾರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ:  ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್

ಯಲಹಂಕ ಕೆರೆಯಂತಹ ದೊಡ್ಡ ಕೆರೆಗಳಲ್ಲೂ ಬೋಟಿಂಗ್ ಆರಂಭಿಸಲು ಯೋಜಿಸಲಾಗಿದ್ದರೂ, ಶುದ್ಧ ನೀರಿಲ್ಲದ ಕೆರೆಗಳಲ್ಲಿ ಬೋಟಿಂಗ್ ಎಷ್ಟು ಸೂಕ್ತ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಒಟ್ಟಾರೆ, ಜಿಬಿಎ ಜನರ ಆಸಕ್ತಿಗಾಗಿ ಈ ಯೋಜನೆಯನ್ನು ತರುತ್ತಿದ್ದರೂ, ಕೆರೆಗಳ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಸ್ತೆಯಲ್ಲಿ ಬಿದ್ದಿದ್ದ ಗುಬ್ಬಚ್ಚಿಗೆ ನೀರು ಕುಡಿಸಿ ಬಾಯಾರಿಕೆ ನೀಗಿಸಿದ ಕರ್ತವ್ಯ ನಿರತ ಪೊಲೀಸ್ – Kannada News | Policeman quenches thirst of sparrow that fell on road by giving it water

ನಮ್ಮಲ್ಲಿ ಕೆಲವರಿಗೆ ಈ ಪ್ರಾಣಿ (Animal), ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವುಗಳಿಗೆ ಆಹಾರ ಹಾಕುವುದು, ನೀರು ಕುಡಿಯಲು ಇಡುವುದು ಹೀಗೆ ಅವುಗಳ ಹಸಿವು ನೀಗಿಸುವಂತಹ ಪ್ರಯತ್ನ ಮಾಡ್ತಾರೆ. ಈ ಮೂಕ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದೆ ಎಂದರೆ ತಮ್ಮ ಪ್ರಾಣ ಒತ್ತೆ ಇಟ್ಟು ಅವುಗಳನ್ನು ರಕ್ಷಿಸುತ್ತಾರೆ. ಈ ವಿಡಿಯೋ ನೋಡಿದರೆ ಪೊಲೀಸಪ್ಪನ ಒಳ್ಳೆಯ ಮನಸ್ಸಿಗೆ ನೀವು ಕರಗಿ ಹೋಗ್ತೀರಾ. ಬಿಸಿಲಿನ ಝಳಕ್ಕೆ ರಸ್ತೆಯಲ್ಲಿ ಬಿದ್ದಿದ್ದ ಗುಬ್ಬಚ್ಚಿಗೆ ನೀರು ಕೊಟ್ಟು ಪೊಲೀಸರೊಬ್ಬರು ಬಾಯಾರಿಕೆ ನೀಗಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Prakash Gadivaddar ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರು ವಾಹನದಲ್ಲಿ ಹೋಗುತ್ತಿದ್ದ ವೇಳೆ ಗುಬ್ಬಚ್ಚಿಯೊಂದು ವಾಹನದೊಳಗೆ ಬಂದು ಏನೋ ಸೂಚನೆ ನೀಡಿದೆ. ಇದನ್ನು ಗಮನಿಸಿದ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಗುಬ್ಬಚ್ಚಿ ಮರಿಯೊಂದು ಬಿಸಿಲಿನ ಝಳಕ್ಕೆ ರಸ್ತೆಗೆ ಬಿದ್ದಿದೆ. ಕೊನೆಗೆ  ಗುಬ್ಬಚ್ಚಿಯನ್ನು ಮೆಲ್ಲನೆ ಮೇಲಕ್ಕೆತ್ತಿ ಅದಕ್ಕೆ ನೀರು ಕುಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕಾಡುಕೋಣ ಹೇಗೆ ಘೀಳಿಡುತ್ತಿದೆ ಗೊತ್ತಾ? ಈ ವಿಡಿಯೋ ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆ ನಿಮ್ಮ ಒಳ್ಳೆಯ ಮನಸ್ಸು ಕಂಡು ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಮಾಡರ್ನ್ ಪಕ್ಷಿ ಪ್ರೇಮಿ ಸಲಿಂಅಲಿ ಸರ್ ನೀವು. ವೃತ್ತಿ ಜೀವನದ ಜೊತೆಯಲ್ಲಿಯೇ ಪ್ರಾಣಿ ಪಕ್ಷಗಳನ್ನು ಸಂರಕ್ಷಿಸುವಲ್ಲಿ ನಿಮ್ಮ ಪಾತ್ರ ಅಪಾರ ಸರ್.. ಸಾಮಾಜಿಕ ಜಾಲತಾಣದಲ್ಲಿ ನೋಡ್ತಿರ್ತೀವಿ ಸರ್ ಆ ದೇವರು ನಿಮಗೆ ಆಯುಶ್ಯ ಆರೋಗ್ಯಸ್ಥೆ ಕೊಟ್ಟು ಕಾಪಾಡಲಿ ಸರ್ ಜೀ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮೂಕ ಪಕ್ಷಿಗಳ ಹಿತೈಷಿಗೆ ನಮನಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ – Kannada News | Solar Eclipse 2026: Astrological Predictions for Gemini by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ, ವಿಶೇಷವಾಗಿ ಮೃಗಶಿರಾ, ಆರಿದ್ರಾ ಮತ್ತು ಪುನರ್ವಸು ನಕ್ಷತ್ರದವರಿಗೆ ಬಹಳಷ್ಟು ಶುಭ ಫಲಗಳನ್ನು ನೀಡಲಿದೆ. ಒಂಬತ್ತನೇ ಮನೆಯಲ್ಲಿ ಸಂಭವಿಸುತ್ತಿರುವ ಈ ಗ್ರಹಣವನ್ನು ಗುರು ಗ್ರಹವೂ ವೀಕ್ಷಿಸುತ್ತಿರುವುದರಿಂದ ಕಲಹಗಳು ಮತ್ತು ಅಪವಾದಗಳಿಂದ ದೂರವಿರಲು ಸಹಾಯವಾಗುತ್ತದೆ. ಧನ ಯೋಗ, ಆರ್ಥಿಕ ಲಾಭ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ, ಪ್ರಯತ್ನಗಳಲ್ಲಿ ಸಫಲತೆ, ಹಾಗೂ ಉದ್ಯೋಗದಲ್ಲಿ ಸ್ಥಿರತೆ ಮತ್ತು ಜವಾಬ್ದಾರಿಗಳ ಹೆಚ್ಚಳ ಸಾಧ್ಯ. ಮಾರಾಟಗಾರರು, ಆನ್‌ಲೈನ್ ಉದ್ಯಮಿಗಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಚಾಲಕರು ಮತ್ತು ರೈತರಿಗೆ ಈ ಅವಧಿ ಉತ್ತಮವಾಗಿರುತ್ತದೆ. ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಆರೋಗ್ಯದಲ್ಲಿ ಚೇತರಿಕೆ, ಪಾಲುದಾರಿಕೆಯಿಂದ ಲಾಭ, ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಶುಭವಾಗಲಿದೆ. ವಿವಾಹ ವಿಷಯಗಳಲ್ಲೂ ಸಫಲತೆ ಸಾಧ್ಯ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ – Kannada News | Mumbai: Ticket Collector Turns Lifesaver for Elderly Man in Dramatic Station Incident

ಮುಂಬೈ, ಫೆಬ್ರವರಿ 13: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯನ್ನು ಟಿಸಿ ದೇವರಂತೆ ಬಂದು ರಕ್ಷಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಜನದಟ್ಟಣೆ, ರಶ್ ಮತ್ತು ಸಮಯದ ಕೊರತೆಯ ನಡುವೆ, ಸಣ್ಣ ನಿರ್ಲಕ್ಷ್ಯವೂ ಸಹ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಕುರ್ಲಾ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಬಿದ್ದಿದ್ದರು. ಟಿಸಿ ಈ ಘಟನೆಯನ್ನು ಗಮನಿಸಿ ಕೂಡಲೇ ಸಹಾಯಕ್ಕಾಗಿ ಧಾವಿಸಿದ್ದಾರೆ. ಈ ಇಡೀ ಘಟನೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಾರಕ್ಕೆ 800 ರೂ. ಸಂಬಳ: ಜೀತಕ್ಕೆ ದುಡಿಯುತ್ತಿದ್ದ ಒಡಿಶಾ ಮುಲದ 24 ಮಂದಿ ಕಾರ್ಮಿಕರ ರಕ್ಷಣೆ – Kannada News | Odisha Bonded Laborers Rescued from Bagalkot Brick Kiln: Case Filled Against Owner

ರಕ್ಷಣೆ ಮಾಡಲಾದ ಕಾರ್ಮಿಕರುImage Credit source: Tv9 Kannada

ಬಾಗಲಕೋಟೆ, ಫೆಬ್ರವರಿ 13: ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಮಂದಿಯನ್ನು ಇಳಕಲ್ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಈರಪ್ಪ ಕುಂಬಾರ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ‌‌ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಕೇಸ್​​ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ಹಲವರು ದುಡಿಯುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾ ಆಡಳಿತಕ್ಕೆ ದೂರು ಬಂದಿದ್ದ ಹಿನ್ನೆಲೆ, ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್​​ ದೂರದಲ್ಲಿರುವ ಸಂಕ್ಲಾಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಒತ್ತೆಯಾಳು ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಆ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 99 ಜೀತದಾಳುಗಳ ರಕ್ಷಣೆ ಮಾಡಿದಂತಾಗಿದೆ. ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ರಕ್ಷಣೆಯ ಬಳಿಕ ಅವರೆಲ್ಲರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಎಲ್ಲರೂ ಆರೋಗ್ಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರನ್ನು ಮರಳಿ ಒಡಿಶಾಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ; ಝೀರೋ ಟ್ರಾಫೀಕ್​ನಲ್ಲಿ ಕಿಡ್ನಿ ರವಾನೆ

ಕಾರ್ಮಿಕರ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ


ಮಾಹಿತಿಯ ಪ್ರಕಾರ ರಕ್ಷಿಸಲ್ಪಟ್ಟ ಕಾರ್ಮಿಕರು ಒಂಭತ್ತು ಕುಟುಂಬಗಳಿಗೆ ಸೇರಿದವರು ಎನ್ನಲಾಗಿದ್ದು, ಇವರು ಮೊದಲು ಕೆಲಸಕ್ಕಾಗಿ ವಿಜಯವಾಡಕ್ಕೆ ಬಂದಿದ್ದರು. ಬಳಿಕ ಅವರನ್ನು ಬಾಗಲಕೋಟೆಗೆ ಕರೆತಂದು ಕೆಲಸ ಮಾಡಿಸಲಾಗುತ್ತಿತ್ತು. ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಿದ ಪ್ರತೀ ಕುಟುಂಬಕ್ಕೂ ವಾರಕ್ಕೆ ಕೇವಲ 800 ರೂ. ವೇತನ ನೀಡಲಾಗುತ್ತಿತ್ತು. ವಾರದಲ್ಲಿ ಒಬ್ಬ ಕುಟುಂಬ ಸದಸ್ಯನಿಗಷ್ಟೇ ಮಾರುಕಟ್ಟೆಗೆ ಹೋಗಲು ಅನುಮತಿ ಇತ್ತು. ಮಾಲೀಕ ಹಾಗೂ ಅವನ ಇಬ್ಬರು ಪುತ್ರರು ಕಾರ್ಮಿಕರ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸುತ್ತಿದ್ದರು.ಈ ಬಗ್ಗೆ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಅಲ್ಲದೆ ಈ ಕಾರ್ಮಿಕರು ಇಟ್ಟಿಗೆಗಳಿಂದ ನಿರ್ಮಿಸಿದ ಅಸುರಕ್ಷಿತ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಕನಿಷ್ಠ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯಗಳೂ ಇವರಿಗೆ ಇರಲಿಲ್ಲ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ; ಬಿಗ್ ಬಾಸ್ ಸ್ಪರ್ಧಿಗಳ ಪಾಡು ನೋಡಿ

‘ಬಿಗ್ ಬಾಸ್’ ಈ ಸೀಸನ್ ಸ್ಪರ್ಧಿಗಳನ್ನು ಇಟ್ಟುಕೊಂಡು ‘ದೊಡ್ಮನೆ ಹಬ್ಬ’ ಆಯೋಜನೆ ಮಾಡಲಾಗಿದೆ. ಈ ಹಬ್ಬದಲ್ಲಿ ಸಾಕಷ್ಟು ಫನ್ ಇತ್ತು. ಕಿವಿಗೆ ಹೆಡ್ ಫೋನ್ ಮಾದರಿಯನ್ನು ಹಾಕಿ ಒಂದು ಲೈನ್ ಹೇಳಿಸಲಾಯಿತು. ಆರಂಭದಲ್ಲಿ ಹೇಳಿದ್ದು ಒಂದಾದರೆ, ಕೊನೆಯ ವ್ಯಕ್ತಿ ಬರೋವರೆಗೆ ಅದು ಇನ್ನೊಂದು ರೀತಿಯಲ್ಲಿ ತಿರುಗಿತು. ಈ ಫನ್ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಜನವರಿ 14 ಅಂದರೆ ಶನಿವಾರ ಸಂಜೆ 6ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಬಿಎನ್​​ಪಿಯ ತಾರಿಕ್ ರೆಹಮಾನ್ ಒಟ್ಟು ಆಸ್ತಿ ಎಷ್ಟು? – Kannada News | Bangladesh’s next PM Tarique Rahman: BNP Leader’s Assets and Election Victory Overview

ಢಾಕಾ, ಫೆಬ್ರವರಿ 13: ಬಾಂಗ್ಲಾದೇಶ(Bangladesh)ದಲ್ಲಿ ಅಶಾಂತಿ ನೆಲೆಸಿದೆ. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಚುನಾವಣಾ ಫಲಿತಾಂಶಗಳು ಸೂಚಿಸುತ್ತಿಚೆ. ಸುಮಾರು ಎರಡು ದಶಕಗಳ ನಂತರ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ಅವರ ಮೈತ್ರಿಕೂಟ ಈಗಾಗಲೇ ಬಹುಮತದ ಗಡಿ ದಾಟಿದೆ. ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಿಎನ್‌ಪಿ ಸರ್ಕಾರದಲ್ಲಿ ಪ್ರಧಾನಿಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. 17 ವರ್ಷಗಳ ವನವಾಸದ ನಂತರ ಬಾಂಗ್ಲಾದೇಶಕ್ಕೆ ಮರಳಿರುವ ತಾರಿಕ್ ರೆಹಮಾನ್, ಒಂದೂವರೆ ತಿಂಗಳಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ. ಹಾಗಾದರೆ ಅವರ ಆಸ್ತಿಯ ಒಟ್ಟು ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭ್ರಷ್ಟಾಚಾರದ ಆರೋಪದ ಮೇಲೆ ತಾರಿಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು.  ಈ ಘಟನೆ ನಡೆದಿದ್ದು 2008ರಲ್ಲಿ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಾರಿಕ್ ಚಿಕಿತ್ಸೆಗಾಗಿ ತನ್ನ ಕುಟುಂಬದೊಂದಿಗೆ ಲಂಡನ್​​ಗೆ ಹೋಗಿದ್ದರು. ಎಂದಿಗೂ ಹಿಂದಿರುಗಲಿಲ್ಲ. 17 ವರ್ಷಗಳ ಸ್ವಯಂ ಪ್ರೇರಿತ ಗಡಿಪಾರು ನಂತರ ತಾರಿಕ್ ರೆಹಮಾನ್ ಕಳೆದ ವರ್ಷ ಡಿಸೆಂಬರ್ 25ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಆ ಸಮಯದಲ್ಲಿ ಐದು ದಿನಗಳ ಬಳಿಕ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್​ಪಿ ನಾಯಕಿ ಖಲೀದಾ ಜಿಯಾ ಅವರ ಮೃತಪಟ್ಟರು. ಪಕ್ಷದ ಜವಾಬ್ದಾರಿ ತಾರಿಕ್ ರೆಹಮಾನ್ ಅವರ ಹೆಗಲ ಮೇಲೆ ಬಿದ್ದಿತ್ತು.

ಬಾಂಗ್ಲಾದೇಶಕ್ಕೆ ಹಿಂದಿರುಗಿದ ನಂತರ, ತಾರಿಕ್ ಚುನಾವಣೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಅವರು ಬೊಗ್ರಾ -6 ಮತ್ತು ಢಾಕಾ -17 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದರು. ಅವರು ಎರಡೂ ಕ್ಷೇತ್ರಗಳನ್ನು ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ.

ತಾರಿಕ್ ರೆಹಮಾನ್ ಆಸ್ತಿ
ಚುನಾವಣಾ ಅಫಿಡವಿಟ್ ಪ್ರಕಾರ, 57 ವರ್ಷದ ತಾರಿಕ್ ರೆಹಮಾನ್ ಅವರ ಒಟ್ಟು ಆಸ್ತಿ 1.97 ಕೋಟಿ ಟಾಕಾ. ಅವರು ಬ್ಯಾಂಕ್ ಠೇವಣಿ, ಚಿನ್ನ ಮತ್ತು ಆಭರಣಗಳು, ಪೀಠೋಪಕರಣಗಳನ್ನು ಹೊಂದಿದ್ದಾರೆ, ಒಟ್ಟಾರೆಯಾಗಿ, ಅವರು 1.93 ಕೋಟಿ ಟಾಕಾ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಷೇರುಗಳಿಂದ ಬರುವ ಭಾರಿ ಆದಾಯವೂ ಸೇರಿದೆ.
ತಾರೊಕ್ ಅವರ ಬಳಿ 31 ಲಕ್ಷ 58 ಸಾವಿರ ಟಾಕ್ ಬ್ಯಾಂಕ್ ಠೇವಣಿ ಮತ್ತು ನಗದು ಇದೆ. ಅವರ ಬಳಿ 68 ಲಕ್ಷ ಒಂದೂವರೆ ಟಾಕಾ ಮೌಲ್ಯದ ಷೇರುಗಳಿವೆ.

ಅವರ ಬಳಿ 90 ಲಕ್ಷ 24 ಸಾವಿರ ಮೌಲ್ಯದ ಸ್ಥಿರ ಠೇವಣಿಗಳಿವೆ. 1 ಲಕ್ಷ 20 ಸಾವಿರ ಟಾಕಾ ಮೌಲ್ಯದ ಇತರ ಠೇವಣಿಗಳಿವೆ. ಪೀಠೋಪಕರಣಗಳ ಮೌಲ್ಯ ಸುಮಾರು 1 ಲಕ್ಷ 80 ಸಾವಿರ ಟಾಕಾ. ತಾರಿಕ್ ರೆಹಮಾನ್ ಅಪಾರ ಪ್ರಮಾಣದ ರಿಯಲ್ ಎಸ್ಟೇಟ್ ಹೊಂದಿದ್ದಾರೆ. ಅವರು ಎರಡು ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ, ಅದನ್ನು ಖರೀದಿಸುವ ಸಮಯದಲ್ಲಿ 345,000 ಟಾಕಾಗಳಿಗೆ ಖರೀದಿಸಲಾಗಿತ್ತು. ತಾರಿಕ್ ರೆಹಮಾನ್ ಮತ್ತು ಅವರ ಪತ್ನಿ ಮತ್ತು ಮಗಳು ಯಾವುದೇ ಸಾಲವನ್ನು ಹೊಂದಿಲ್ಲ. ಅವರು 2025-26 ರ ಹಣಕಾಸು ವರ್ಷದಲ್ಲಿ 1 ಲಕ್ಷ 1 ಸಾವಿರ 453 ಟಾಕಾ ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ.

ಮತ್ತೊಂದೆಡೆ, ತಾರಿಕ್ ರೆಹಮಾನ್ ವಿರುದ್ಧ ಪ್ರಸ್ತುತ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. 2004 ರಿಂದ ಅವರ ವಿರುದ್ಧ ದಾಖಲಾಗಿರುವ ಎಲ್ಲಾ 77 ಪ್ರಕರಣಗಳನ್ನು ಹಂತ ಹಂತವಾಗಿ ಪರಿಹರಿಸಲಾಗಿದೆ. ಕೆಲವರಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ, ಕೆಲವು ಪ್ರಕರಣಗಳಲ್ಲಿ ಹಿಂಪಡೆಯಲಾಗಿದೆ ಅಥವಾ ಕೆಲವು ಪ್ರಕರಣಗಳಲ್ಲಿ ವಜಾಗೊಳಿಸಲಾಗಿದೆ. ತಾರಿಕ್ ಅವರನ್ನು ಹಲವಾರು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ.

ಮತ್ತಷ್ಟು ಓದಿ: ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್​ಪಿ ಐತಿಹಾಸಿಕ ಗೆಲುವು ಸಾಧಿಸಿದರೂ ಖುಷಿಯ ಮೆರವಣಿಗೆಯೇ ಇಲ್ಲ

ಹೆಚ್ಚಿನ ಪ್ರಕರಣಗಳು 2004, 2007, 2014 ಮತ್ತು 2015 ರಲ್ಲಿ ದಾಖಲಾಗಿವೆ. ಮಾರ್ಚ್ 2007 ರಲ್ಲಿ ಹೊರಡಿಸಲಾದ ತುರ್ತು ಅಧಿಕಾರ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಒಂದು ಪ್ರಕರಣವನ್ನು ವಜಾಗೊಳಿಸಲಾಯಿತು ಮತ್ತು ಏಪ್ರಿಲ್ 16, 2009 ರಂದು ಖುಲಾಸೆಗೊಳಿಸಲಾಯಿತು.

ಅಫಿಡವಿಟ್ ಪ್ರಕಾರ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ತಾರಿಕ್ ರೆಹಮಾನ್ 42 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರು. 2014 ರಲ್ಲಿ ಒಂದು ಪ್ರಕರಣ, 2015 ರಲ್ಲಿ ಮೂರು, 2016 ರಲ್ಲಿ ಎಂಟು, 2017 ರಲ್ಲಿ ಆರು, 2018 ರಲ್ಲಿ ನಾಲ್ಕು, 2019 ರಲ್ಲಿ ಐದು, 2020 ರಲ್ಲಿ ಒಂದು, 2021 ರಲ್ಲಿ ಒಂದು ಮತ್ತು 2022 ರಲ್ಲಿ ಐದು ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್​ಫ್ಲೇಶನ್ ದಾಖಲು – Kannada News | Retail inflation at 2.8pc in January 2026, based on new CPI series with 2024 as base year

ನವದೆಹಲಿ, ಫೆಬ್ರುವರಿ 13: ಭಾರತದ ರೀಟೇಲ್ ಹಣದುಬ್ಬರ (Retail Inflation) ಜನವರಿಯಲ್ಲಿ ಶೇ. 2.8 ಎಂದು ದಾಖಲಾಗಿದೆ. ಬದಲಾವಣೆ ಮಾಡಲಾದ ಮಾನಕದ ಪ್ರಕಾರ ಹಣದುಬ್ಬರ ಲೆಕ್ಕಾಚಾರ ಮಾಡಲಾಗಿದೆ. ಮೂಲ ವರ್ಷ ಅಥವಾ ಬೇಸ್ ವರ್ಷವನ್ನು 2012ರಿಂದ 2024ಕ್ಕೆ ಬದಲಾಯಿಸಲಾಗಿದೆ. 2023-24ರ ಗೃಹ ಅನುಭೋಗ ಸಮೀಕ್ಷೆಯ ದತ್ತಾಂಶವನ್ನು ಬಳಸಿ ದೇಶಾದ್ಯಂತ ಅನುಭೋಗ ಮಾದರಿ (consumption pattern) ಆಗಿರುವ ಬದಲಾವಣೆಯನ್ನು ಗುರುತಿಸಲಾಗಿದೆ. ಹಣದುಬ್ಬರ ಲೆಕ್ಕಾಚಾರ ಪಟ್ಟಿಯಲ್ಲಿರುವ ಸರಕುಗಳಿಗೆ ಹೊಸ ಸೇರ್ಪಡೆ ಮತ್ತು ವೈಟೇಜ್ ಅನ್ನು ಕೊಡಲಾಗಿದೆ. ಆಹಾರಕ್ಕಿರುವ ವೈಟೇಜ್ ಅನ್ನು ಕಡಿಮೆ ಮಾಡಲಾಗಿದೆ. ಹೀಗೆ ವಿವಿಧ ಮಾನಕ ಬದಲಾವಣೆಗಳೊಂದಿಗೆ ದಾಖಲಾಗಿರುವ ಜನವರಿಯ ಹಣದುಬ್ಬರ ಹೆಚ್ಚು ನಿಖರ ಎಂದು ನಂಬಲಾಗಿದೆ.

ಒಟ್ಟಾರೆ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ 1.3 ಇತ್ತು. ಅದು 2012 ಅನ್ನು ಬೇಸ್ ಇಯರ್ ಆಗಿಸಿಕೊಂಡ ಹಳೆಯ ಸರಣಿಯ ಪ್ರಕಾರ ಲೆಕ್ಕಾಚಾರ ಮಾಡಲಾದ ಹಣದುಬ್ಬರ ದರವಾಗಿತ್ತು. ಜನವರಿಯಲ್ಲಿ ಹೊಸ ಸರಣಿಯ ಲೆಕ್ಕಾಚಾರ ನಡೆದಿದೆ. ಅದರ ಪ್ರಕಾರ, ಹಣದುಬ್ಬರ ಶೇ. 2.8 ಎಂದಿದೆ. ಇದರಲ್ಲಿ ಆಹಾರ ಹಣದುಬ್ಬರ ಶೇ. 2.1 ಇದೆ. ಗ್ರಾಮೀಣ ಹಣದುಬ್ಬರ ಶೇ. 2.7 ಇದ್ದರೆ, ನಗರದ ಹಣದುಬ್ಬರ ಶೇ. 2.8 ಇದೆ.

ಇದನ್ನೂ ಓದಿ: ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…

ಒಡವೆಗಳ ಬೆಲೆಯಲ್ಲಿ ಭರ್ಜರಿ ಏರಿಕೆ..

ಚಿನ್ನ, ಬೆಳ್ಳಿ ಒಡವೆ, ಪರ್ಸನಲ್ ಕೇರ್, ಸಾಮಾಜಿಕ ರಕ್ಷಣೆ ಮತ್ತಿತರ ಸರಕುಗಳ ಬೆಲೆ ಏರಿಕೆ ಶೇ. 19 ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರಲ್ಲಿ ಬೆಳ್ಳಿ ಒಡವೆಯ ಹಣದುಬ್ಬರವೇ ಜನವರಿಯಲ್ಲಿ ಶೇ. 160 ಇದೆ.

ಬೆಳ್ಳಿ ಒಡವೆ, ಟೊಮೆಟೋ, ಕೊಬ್ಬರಿ, ಚಿನ್ನದ ಒಡವೆ, ಕೊಬ್ಬರಿ ಎಣ್ಣೆ ಬೆಲೆಗಳಲ್ಲಿ ಭರ್ಜರಿ ಏರಿಕೆ ಆಗಿದ್ದು ಜನವರಿಯಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖ ಕಾರಣವಾಗಿವೆ.

ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ಬಟಾಣಿ ಸೇರಿದಂತೆ ತರಕಾರಿಗಳ ಬೆಲೆ ಕಡಿಮೆಗೊಂಡಿದ್ದು ಹಣದುಬ್ಬರ ಮಿತಿಮೀರಿ ಹೋಗದಂತೆ ನಿಯಂತ್ರಣಗೊಂಡಿದೆ.

ತಂಬಾಕು, ರೆಸ್ಟೋರೆಂಟ್, ಹೋಟೆಲ್, ಉಡುಗೆ ತೊಡುಗೆ, ಶಿಕ್ಷಣ ಕ್ಷೇತ್ರಗಳಲ್ಲಿ ಹಣದುಬ್ಬರವು ಶೇ. 2.8ಕ್ಕಿಂತಲೂ ಹೆಚ್ಚಿದೆ.

ಹೊಸ ಸಿಪಿಐ ಸರಣಿಯಲ್ಲಿ ಬದಲಾವಣೆಗಳೇನು?

  • ಮೂಲ ವರ್ಷ 2012ರಿಂದ 2024ಕ್ಕೆ ಬದಲಾವಣೆ
  • ಸಿಪಿಐ ಸರಣಿಯಲ್ಲಿ ಗಣನೆಯಲ್ಲಿರುವ ಅಂಶಗಳ ಸಂಖ್ಯೆ 299ರಿಂದ 358ಕ್ಕೆ ಏರಿಕೆ.
  • ಸರಕುಗಳ ಸಂಖ್ಯೆ 259ರಿಂದ 308ಕ್ಕೆ ಏರಿಕೆ. ಸರ್ವಿಸ್ ಅಂಶಗಳು 40ರಿಂದ 50ಕ್ಕೆ ಏರಿಕೆ.

ಇದನ್ನೂ ಓದಿ: ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

ಸಿಪಿಐ ಸರಣಿಗೆ ಹೊಸದಾಗಿ ಸೇರ್ಪಡೆಯಾದ ಅಂಶಗಳಿವು…

ಗ್ರಾಮೀಣ ವಸತಿ, ಆನ್ಲೈನ್ ಮೀಡಿಯಾ ಸರ್ವಿಸ್ ಪ್ರೊವೈಡರ್, ಸ್ಟ್ರೀಮಿಂಗ್ ಸರ್ವಿಸ್, ಮೌಲ್ಯ ವರ್ಧಿತ ಡೈರಿ ಉತ್ಪನ್ನಗಳು, ಬಾರ್ಲೆ ಉತ್ಪನ್ನಗಳು, ಪೆನ್ ಡ್​ರೈವ್, ಬಾಹ್ಯ ಹಾರ್ಡ್ ಡಿಸ್ಕ್, ಅಟೆಂಡೆಂಟ್, ಬೇಬಿಸಿಟ್ಟರ್, ವ್ಯಾಯಾಮ ಉಪಕರಣ ಮೊದಲಾದವು.

ಗಣನೆಯಿಂದ ಕೈಬಿಡಲಾದ ವಸ್ತುಗಳು

ವಿಸಿಆರ್, ವಿಸಿಡಿ, ಡಿವಿಡಿ ಪ್ಲೇಯರ್​ಗಳು, ರೇಡಿಯೋ, ಟೇಪ್ ರೆಕಾರ್ಡರ್, ಸೆಕೆಂಟ್ ಹ್ಯಾಂಡ್ ಬಟ್ಟೆ, ಕ್ಯಾಸೆಟ್, ಹಗ್ಗ ಇತ್ಯಾದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ! 47 ಎಕರೆ ಭೂಮಿ ವಸತಿ ವಲಯಕ್ಕೆ ಬದಲಿಸಲು ಹುನ್ನಾರ? – Kannada News | Corruption Allegations Persist in Mysuru Development Authority (MDA) Despite Rebranding

ಮೈಸೂರು, ಫೆಬ್ರವರಿ 13: ಮುಡಾ ಈಗ ಎಂಡಿಎ (MDA)ಆಗಿ ಹೆಸರು ಬದಲಾದರೂ ಅಕ್ರಮಗಳು ನಿಲ್ಲಲಿಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪಿಸಿದ್ದಾರೆ. 2025ರ ಆಗಸ್ಟ್ 8ರಂದು ನಡೆದ ಎಂಡಿಎ ಮೊದಲ ಸಭೆಯಲ್ಲೇ 4.27 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ 47 ಎಕರೆ ಕೃಷಿ ವಲಯದ ಭೂಮಿಯನ್ನು ವಸತಿ ವಲಯಕ್ಕೆ ಬದಲಿಸಲು ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಮುಡಾ ಪ್ರಭಾರ ಆಯುಕ್ತ ರಕ್ಷಿತ್, ಪರಿಷತ್ ಸದಸ್ಯ ಮಧು ಮಾದೇಗೌಡ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಂಬಂಧಿಕರಿಗೆ ಅನುಕೂಲವಾಗಲು ಕಾನೂನು ಉಲ್ಲಂಘನೆ ನಡೆದಿದೆ ಎಂದು ಹೇಳಿ, ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Kumbha Sankramana 2026: ಇಂದು ಕುಂಭ ರಾಶಿಗೆ ಸೂರ್ಯ ಪ್ರವೇಶ; ಮಾ.15 ರವರೆಗೆ ಈ ರಾಶಿಯವರು ಜಾಗರೂಕರಾಗಿರಿ – Kannada News | Kumbha Sankramana 2026: Auspicious and Inauspicious Effects on All Zodiac Signs

2026 ರ ಫೆಬ್ರವರಿ 13 ರಂದು, ಸಂಜೆ 4 ಗಂಟೆ 14 ನಿಮಿಷಕ್ಕೆ ಸೂರ್ಯ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಚಾರವು ಮುಂದಿನ ತಿಂಗಳ ಮಾರ್ಚ್ 15 ರವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಸೂರ್ಯನ ಈ ಸಂಚಾರ ಯಾವ ರೀತಿ ಪ್ರಬಾವ ಬೀರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯವರಿಗೆ ಸೂರ್ಯನ ಈ ಸಂಚಾರವು 11ನೇ ಮನೆಯಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಬಹಳಷ್ಟು ಶುಭ ಫಲಗಳು ಲಭಿಸುತ್ತವೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಸೂರ್ಯನ 10ನೇ ಮನೆ, ಅಂದರೆ ಕರ್ಮಸ್ಥಾನದಲ್ಲಿ ಸಂಚಾರವು ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಕೆಲಸಗಳಲ್ಲಿ ಶುಭವಾಗುತ್ತದೆ, ವ್ಯಾಪಾರದಲ್ಲಿ ಲಾಭ, ಹಳೆಯ ಬಾಕಿ ವಸೂಲಿ ಮತ್ತು ಸಾಲ ಮಂಜೂರಿಯಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣುತ್ತಾರೆ. ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ.

ಮಿಥುನ ರಾಶಿ:

ಮಿಥುನ ರಾಶಿಯವರಿಗೆ ಕುಂಭ ಸಂಕ್ರಮಣವು ಭಾಗ್ಯಸ್ಥಾನದಲ್ಲಿ ನಡೆಯುತ್ತದೆ. ಪ್ರವಾಸ ಯೋಗ ಕೂಡಿ ಬರುತ್ತದೆ. ತಂದೆ-ತಾಯಿಗಳ ಪರಿಪೂರ್ಣ ಆಶೀರ್ವಾದ ಸಿಗುತ್ತದೆ. ರೈತಾಪಿ ವರ್ಗದವರಿಗೆ ಒಳಿತಾಗುತ್ತದೆ. ಅದೃಷ್ಟವೂ ಜೊತೆಗೂಡಲಿದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸೂರ್ಯನ ಸಂಚಾರವಿರುತ್ತದೆ. ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಬಹುದಾದ್ದರಿಂದ ಜಾಗರೂಕರಾಗಿರಬೇಕು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಸೂರ್ಯ ಸಂಚಾರವು ಪ್ರಾರಂಭವಾಗುತ್ತದೆ. ಇದು ಶನಿಯ ಮನೆಯಾಗಿರುವುದರಿಂದ ಗಂಡ-ಹೆಂಡತಿಯರ ಜಗಳ, ಪಾಲುದಾರಿಕೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಸೂರ್ಯನ ಸಂಚಾರವು ಆರನೇ ಮನೆಯಲ್ಲಿ ನಡೆಯುವುದರಿಂದ ತುಂಬಾನೇ ಅದೃಷ್ಟ ತರಲಿದೆ. ಸಾಕಷ್ಟು ಶುಭಫಲಗಳು ಸಿಗುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಔಷಧಿ ವ್ಯಾಪಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯಲ್ಲಿರುವವರಿಗೆ ಬಹಳ ಉತ್ತಮವಾಗಿರುತ್ತದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಐದನೇ ಮನೆಯಲ್ಲಿ ಸೂರ್ಯನ ಸಂಚಾರವು ಮಿಶ್ರ ಫಲಗಳನ್ನು ಕೊಡುತ್ತದೆ. ಆದರೂ ಆರ್ಥಿಕವಾಗಿ, ಕೀರ್ತಿ ಮತ್ತು ಪ್ರತಿಷ್ಠೆಯ ವಿಷಯದಲ್ಲಿ ಉತ್ತಮ ಫಲಗಳು ಇರುತ್ತವೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ನಾಲ್ಕನೇ ಮನೆ, ಅಂದರೆ ಅರ್ಧಾಷ್ಟಮದಲ್ಲಿ ರವಿಯ ಸಂಚಾರವು ಮನೆ ಅಥವಾ ಸೈಟಿನ ವಿಚಾರದಲ್ಲಿ, ಸಣ್ಣಪುಟ್ಟ ಸಮಸ್ಯೆಗಳಲ್ಲಿ ಮತ್ತು ತಂದೆ-ತಾಯಿಗಳ ವಿಷಯದಲ್ಲಿ ಜಾಗರೂಕರಾಗಿರಲು ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮತ್ತು ವಾಹನ ಚಾಲನೆಯಲ್ಲಿಯೂ ಜಾಗ್ರತೆ ವಹಿಸಬೇಕು.

ಧನುಸ್ಸು ರಾಶಿ:

ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸೂರ್ಯನ ಸಂಚಾರದಿಂದ ಬಹಳಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ಅದೃಷ್ಟವೂ ಜೊತೆಗೂಡಲಿದೆ

ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ

ಮಕರ ರಾಶಿ:

ಮಕರ ರಾಶಿಯವರಿಗೆ ದ್ವಿತೀಯ ಸ್ಥಾನದಲ್ಲಿ ಸೂರ್ಯ ಭಗವಾನ್‌ರ ಸಂಚಾರವು ಭಯದ ವಾತಾವರಣವನ್ನು ದೂರ ಮಾಡುತ್ತದೆ. ಕೆಲಸಕಾರ್ಯಗಳಲ್ಲಿ ಶುಭವಾಗುತ್ತದೆ, ರೈತಾಪಿ ವರ್ಗದವರಿಗೆ ಒಳ್ಳೆಯದಾಗುತ್ತದೆ. ವ್ಯಾಪಾರ ವ್ಯವಹಾರಗಳು ಉತ್ತಮವಾಗಿರುತ್ತವೆ ಮತ್ತು ಕುಟುಂಬ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ.

ಕುಂಭ ರಾಶಿ:

ಕುಂಭ ರಾಶಿಯವರಿಗೆ ಜನ್ಮರಾಶಿಯಲ್ಲಿಯೇ ರವಿಯ ಸಂಚಾರದ ಫಲಾಫಲಗಳನ್ನು ನೋಡಿದಾಗ, ವಿವಾಹ ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗುತ್ತದೆ. ಆದರೆ ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಭಯದ ವಾತಾವರಣವೂ ಉಂಟಾಗಬಹುದು.

ಮೀನ ರಾಶಿ:

ಮೀನ ರಾಶಿಯವರಿಗೆ 12ನೇ ಮನೆ, ಅಂದರೆ ದುಸ್ಥಾನದಲ್ಲಿ ರವಿಯ ಸಂಚಾರವಿರುವುದರಿಂದ ಅನಗತ್ಯ ಟೆನ್ಷನ್‌ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆದಷ್ಟು ಆರಾಮಾಗಿ, ಸಂತೃಪ್ತಿಯಿಂದ ಇರಬೇಕು. ಅಪವಾದಗಳು ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಉತ್ತಮವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version