‘ಧುರಂಧರ್ 2’ ಚಿತ್ರಕ್ಕೆ ಶಾಕ್; ಬ್ಯಾನ್ ಆಗುತ್ತಾ ಆದಿತ್ಯ ಧಾರ್ ನಿರ್ಮಾಣ ಸಂಸ್ಥೆ? – Kannada News | Dhurandhar 2 Controversy: Aditya Dhar’s B62 Studios Faces BMC Blacklist Threat

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ. ಈ ಚಿತ್ರದ ಮುಂದುವರಿದ ಭಾಗಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ‘ಧುರಂಧರ್ 2’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗ ಸಿನಿಮಾ ಬಗ್ಗೆ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ವಿವಾದವು ಧುರಂಧರ್ ನಿರ್ಮಾಪಕರು ಮತ್ತು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಇದೆ. ಚಿತ್ರೀಕರಣದ ಸಮಯದಲ್ಲಿ ತಂಡವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ನಿರ್ಮಾಣ ಕಂಪನಿಯ ವಿರುದ್ಧ ಮುನ್ಸಿಪಲ್ ಕಾರ್ಪೊರೇಷನ್ ಹಲವು ಆರೋಪಗಳನ್ನು ಮಾಡಿದೆ.

ನಿರ್ಮಾಣ ತಂಡವು ಅನುಮತಿ ಇಲ್ಲದ ಕಡೆ ಚಿತ್ರೀಕರಣ ನಡೆಸುತ್ತಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ಈ ನಿಟ್ಟಿನಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರ ನಿರ್ಮಾಣ ಕಂಪನಿ ಬಿ62 ಸ್ಟುಡಿಯೋಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಕೇಳಿ ಬಂದಿದೆ. ‘ಧುರಂಧರ್ 2’ ಚಿತ್ರೀಕರಣದ ಸಮಯದಲ್ಲಿ ಸುರಕ್ಷತೆ ಮತ್ತು ನಿಯಮಗಳನ್ನು ಪದೇ ಪದೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ಶೂಟಿಂಗ್ ಸಮಯದಲ್ಲಿ ಭದ್ರತಾ ಪ್ರದೇಶದಲ್ಲಿ ದೊಡ್ಡ ದೊಡ್ಡ ಟಾರ್ಚ್‌ಗಳನ್ನು ಬಳಸಲಾಗಿದೆ. ಇದನ್ನು ಅತ್ಯಂತ ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಲಾಗಿದೆ. ಮುಂಬೈ ಪೊಲೀಸರು ಕೂಡ ಮಧ್ಯಪ್ರವೇಶಿಸಿ ಆ ಉಪಕರಣಗಳನ್ನು ವಶಪಡಿಸಿಕೊಂಡರು. ಇದಲ್ಲದೆ, ಚಿತ್ರದ ಸಿಬ್ಬಂದಿ ಅನುಮತಿಯಿಲ್ಲದೆ ಶೂಟಿಂಗ್ ಸ್ಥಳವನ್ನು ಬದಲಾಯಿಸಿದರು ಮತ್ತು ಅಗತ್ಯ ಅನುಮತಿಯನ್ನು ಪಡೆಯದೆ ಕಟ್ಟಡದ ಟೆರೇಸ್ ಅನ್ನು ಬಳಸಿದರು. ಇದರೊಂದಿಗೆ, ಸ್ಥಳೀಯ ಆಡಳಿತದಿಂದ ಮಾನ್ಯ ಅನುಮತಿಯನ್ನು ಪಡೆಯದೆ ಎರಡು ಜನರೇಟರ್ ವ್ಯಾನ್‌ಗಳು ಸಹ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ಈ ನಿಟ್ಟಿನಲ್ಲಿ ಪಾಲಿಕೆಯು ಜಿಲ್ಲಾಧಿಕಾರಿಗಳಿಗೆ ಔಪಚಾರಿಕ ಪತ್ರವನ್ನು ಕಳುಹಿಸಿದ್ದು, ರಾಜ್ಯದ ಏಕ-ವಿಂಡೋ ಚಿತ್ರೀಕರಣ ಪೋರ್ಟಲ್ ಮೂಲಕ ಸ್ಟುಡಿಯೋವನ್ನು ಚಿತ್ರೀಕರಣದಿಂದ ಶಾಶ್ವತವಾಗಿ ನಿಷೇಧಿಸುವ ಪ್ರಸ್ತಾಪವನ್ನು ಸಲ್ಲಿಸಿದೆ. ಈ ಕ್ರಮದ ಭಾಗವಾಗಿ, ಪಾಲಿಕೆಯು ಈಗಾಗಲೇ 25,000 ರೂ.ಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಮತ್ತು 1 ಲಕ್ಷ ರೂ.ಗಳ ಹೆಚ್ಚುವರಿ ದಂಡವನ್ನು ವಿಧಿಸಲು ಪ್ರಸ್ತಾಪಿಸಿದೆ. ಆದಿತ್ಯ ಧರ್ ಅವರ ಸ್ಟುಡಿಯೋವನ್ನು ಇನ್ನೂ ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ರಣವೀರ್ ಜೊತೆಗೆ, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಕೂಡ ಇದರಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹಿಮದಲ್ಲಿ ಸಿಲುಕಿದ್ದ ವಾಹನವನ್ನು ತಳ್ಳಲು ಸಹಾಯ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು – Kannada News | Kiren Rijiju Steps In to Move Snow Stuck Vehicle in Arunachal’s Harsh Winter

ನವದೆಹಲಿ, ಫೆಬ್ರವರಿ 18: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ, ಹಿಮದಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ತಳ್ಳಲು ಕೇಂದ್ರ ಸಚಿವ ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೋ ಪ್ರದೇಶದ ನಡುವೆ ಈ ಘಟನೆ ನಡೆದಿದ್ದು, ಭಾರಿ ಹಿಮಪಾತವು ಪ್ರಮುಖ ರಸ್ತೆ ತಡೆಗೆ ಕಾರಣವಾಯಿತು. ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ಸ್ಥಳಾಂತರಿಸಲು ಮತ್ತು ದಾರಿಯನ್ನು ತೆರವುಗೊಳಿಸಲು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ತಾವು ಕೂಡ ಸೇರಿ ವಾಹನವನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಖುದ್ದಾಗಿ ಅವರೇ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

15 ವರ್ಷಗಳ ಬಳಿಕ ಮೊದಲ ಸುತ್ತಿನಲ್ಲೇ ಗಂಟು ಮೂಟೆ ಕಟ್ಟಿದ ಆಸ್ಟ್ರೇಲಿಯಾ – Kannada News | How many times australia knocked out in group stage in icc tournament

T20 World Cup 2026: ಟಿ20 ವಿಶ್ವಕಪ್​​ 2026 ರಿಂದ ಆಸ್ಟ್ರೇಲಿಯಾ ತಂಡ ಹೊರಬಿದ್ದಿದೆ. ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಇದರಿಂದ ಉಭಯ ತಂಡಗಳು ಒಂದೊಂದು ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಝಿಂಬಾಬ್ವೆ ತಂಡವು ಒಂದು ಅಂಕ ಪಡೆಯುವುದರೊಂದಿಗೆ ಒಟ್ಟು 5 ಪಾಯಿಂಟ್ಸ್​ನೊಂದಿಗೆ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಹೀಗಾಗಿ 6 ಅಂಕಗಳನ್ನು ಪಡೆದಿರುವ ಶ್ರೀಲಂಕಾ ಮತ್ತು 5 ಅಂಕಗಳಿಸಿರುವ ಝಿಂಬಾಬ್ವೆ ಗ್ರೂಪ್-ಸಿ ಯಿಂದ ಸೂಪರ್-8 ಹಂತಕ್ಕೇರಿದೆ.

15 ವರ್ಷಗಳ ಬಳಿಕ ನಾಕೌಟ್:

ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 2 ಬಾರಿ ಮಾತ್ರ ಗ್ರೂಪ್ ಸ್ಟೇಜ್​​ನಿಂದ ಹೊರಬಿದ್ದಿದೆ. 2009 ರ ವಿಶ್ವಕಪ್​​ನಲ್ಲಿ ಆಸೀಸ್ ಪಡೆ ಎರಡೂ ಪಂದ್ಯಗಳಲ್ಲೂ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ದ್ವಿತೀಯ ಸುತ್ತಿಗೇರದೇ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದೆ.

8 ಬಾರಿ ಮೊದಲ ಸುತ್ತಿನಲ್ಲೇ ಔಟ್:

ಆಸ್ಟ್ರೇಲಿಯಾ ತಂಡವು ಐಸಿಸಿ ಪ್ರಮುಖ ಟೂರ್ನಿಗಳ ಗುಂಪು ಹಂತದಲ್ಲಿ ಈವರೆಗೆ ಒಟ್ಟು 8 ಬಾರಿ ಹೊರಬಿದ್ದಿದೆ. ಮೊದಲ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು 1979 ರಲ್ಲಿ. ಇದಾದ ಬಳಿಕ 1983 ರ ಏಕದಿನ ವಿಶ್ವಕಪ್​ನಲ್ಲೂ ದ್ವಿತೀಯ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಇನ್ನು 1992 ರ ಏಕದಿನ ವಿಶ್ವಕಪ್​​ನಲ್ಲೂ ಆಸೀಸ್ ಪಡೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದರು.

ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್​​​​ನಲ್ಲಿ ಒಮ್ಮೆಯೂ ಮೊದಲ ಸುತ್ತಿನಲ್ಲೇ ಹೊರಬಿದ್ದಿಲ್ಲ ಎಂಬುದು ಉಲ್ಲೇಖಾರ್ಹ. ಆದರೆ 2009ರ ಟಿ20 ವಿಶ್ವಕಪ್​​ನಲ್ಲಿ ದ್ವಿತೀಯ ಸುತ್ತಿಗೇರಲು ವಿಫಲವಾಗಿತ್ತು.

ಇನ್ನು 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಗ್ರೂಪ್ ಸ್ಟೇಜ್​​ನಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿದ್ದರು. ಇದಾದ ಬಳಿಕ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.

ಇದೀಗ 2026ರ ಟಿ20 ವಿಶ್ವಕಪ್​ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಆಸ್ಟ್ರೇಲಿಯಾ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ.

ಇದನ್ನೂ ಓದಿ: W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್

ಆಸ್ಟ್ರೇಲಿಯಾ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದ ಟೂರ್ನಿ ಮತ್ತು ವರ್ಷ:

  • ಏಕದಿನ ವಿಶ್ವಕಪ್: 1979, 1983, 1992
  • ಟಿ20 ವಿಶ್ವಕಪ್: 2009, 2026
  • ಚಾಂಪಿಯನ್ಸ್ ಟ್ರೋಫಿ: 2013, 2017

Source link

ಅಂದುಕೊಂಡ ಸಮಯಕ್ಕೆ ಬರಲ್ಲ ನೀಲ್- ಎನ್​ಟಿಆರ್ ಸಿನಿಮಾ? – Kannada News | Jr NTR Prashanth Neel Film Delayed: New Release Date Diwali or Christmas?

ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಕೈಗೆತ್ತಿಕೊಂಡಾಗ ಅದನ್ನು ಅಂದುಕೊಂಡ ದಿನಾಂಕದಂದು ತೆರೆಗೆ ತರೋದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಕೆಲವರು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ, ಇದು ಅಷ್ಟು ಸುಲಭ ಅಲ್ಲ. ಈಗ ಜೂನಿಯರ್ ಎನ್​​ಟಿಆರ್ (Jr NTR) ಸಿನಿಮಾ ವಿಷಯದಲ್ಲೂ ಹಾಗೆಯೇ ಆಗಿದೆ. ಸಿನಿಮಾ ಅಂದುಕೊಂಡ ದಿನಾಂಕದಂದು ತೆರೆಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ, ದೀಪಾವಳಿ ಅಥವಾ ಕ್ರಿಸ್​​ಮಸ್ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಬಗ್ಗೆ ತಂಡ ಪ್ಲ್ಯಾನ್ ಮಾಡಿದೆ.

ಜೂನಿಯರ್ ಎನ್​​ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಈ ಮೊದಲು ಘೋಷಣೆ ಮಾಡಲಾಗಿತ್ತು. ಆದರೆ, ಇನ್ನೂ ಸಿನಿಮಾದ ಶೂಟ್ ಪೂರ್ಣಗೊಂಡಿಲ್ಲ. ಸದ್ಯ ತಂಡ ಜೋರ್ಡನ್ ಅಲ್ಲಿದ್ದು, ಕೊನೆಯ ಹಂತದ ಶೂಟ್​​ನಲ್ಲಿ ತೊಡಗಿಕೊಂಡಿದೆ. ಆ ಬಳಿಕ ತಂಡ ಹೈದರಾಬಾದ್​​ಗೆ ಮರಳಲಿದೆ.

ಜೋರ್ಡನ್ ಅಲ್ಲಿ ನಡೆಯೋದು ಕೊನೆಯ ಹಂತದ ಔಟ್​​ಡೋರ್ ಶೂಟ್. ನಂತರ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಇಂಡೋರ್ ಶೂಟ್ ನಡೆಯಲಿದೆಯಂತೆ. ಅದಕ್ಕೂ ಸ್ವಲ್ಪ ಸಮಯ ಹಿಡಿಯಲಿದೆ. ಇದೆಲ್ಲ ಸೇರಿದರೆ ಇನ್ನೂ ಎರಡು ತಿಂಗಳು ಶೂಟಿಂಗ್​​ಗೆ ಸಮಯ ವ್ಯರ್ಥ ಆಗಲಿದೆ. ಹೀಗಾಗಿ, ಜೂನ್ ಸಮಯಕ್ಕೆ ಸಿನಿಮಾ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ.

ಈ ಮೊದಲು ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್ ಎನ್​​ಟಿಆರ್ ಅವರಿಗೆ ಖುಷಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಸಿನಿಮಾ ವಿಳಂಬವಾದರೂ ಟ್ರ್ಯಾಕ್​​ನಲ್ಲಿ ಇದೆಯಲ್ಲ ಎಂಬ ಖುಷಿಯಲ್ಲಿ ಅಭಿಮಾನಿಗಳು ಇದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಪ್ರಶಾಂತ್ ನೀಲ್ ನಿರ್ದೇಶನದ ಕೊನೆಯ ಸಿನಿಮಾ ‘ಸಲಾರ್’ ಸಾಧಾರಣ ಎನಿಸಿಕೊಂಡಿತು. ಈ ಚಿತ್ರದ ಮೂಲಕ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಅವರು ಡಾರ್ಕ್​ ಸ್ಟೈಲ್​ ಅಲ್ಲಿ ಸಿನಿಮಾ ಮಾಡೋ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:32 am, Wed, 18 February 26

Source link

Daily Devotional: ಮನೆಯ ಆಯಸ್ಸು ಎಷ್ಟು ವರ್ಷ ಅದನ್ನು ತಿಳಿದುಕೊಳ್ಳುವುದು ಹೇಗೆ ? – Kannada News | Daily Devotional: How Planetary Transits and Horoscopes Influence Your Homes Age

ಬೆಂಗಳೂರು, ಫೆಬ್ರವರಿ​ 18: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆಯ ಆಯಸ್ಸು ಎಷ್ಟು ವರ್ಷ ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ನಾವು ಜಾತಕ, ವಾಸ್ತುಪುರುಷನ ಸ್ಥಿತಿ ಮತ್ತು ಎಂಟು ಆಯಗಳಾದ ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಇವುಗಳನ್ನು ಪರಿಗಣಿಸುತ್ತೇವೆ. ಆದರೆ, ಇವುಗಳ ಆಧಾರದ ಮೇಲೆ ಮಾತ್ರ ಮನೆಯ ನಿಜವಾದ ಆಯಸ್ಸನ್ನು ನಿರ್ಧರಿಸುವುದು ಕಷ್ಟ ಎಂದು ವಿವರಿಸಲಾಗಿದೆ.

ಮನೆಯ ದೀರ್ಘಾಯುಷ್ಯಕ್ಕೆ ಪ್ರಮುಖವಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚರವನ್ನು ಪರಿಗಣಿಸಬೇಕು. ಗ್ರಹಗಳ ಪ್ರಭಾವವು ಮನೆಯ ಆಯಸ್ಸನ್ನು ನಿರ್ಧರಿಸುತ್ತದೆ. ನೂರಾರು ವರ್ಷಗಳಷ್ಟು ಹಳೆಯದಾದ ಮನೆಗಳು ಇಂದಿಗೂ ಭದ್ರವಾಗಿರುವುದಕ್ಕೆ ಇದೇ ಕಾರಣ. ಅಪಾರ್ಟ್‌ಮೆಂಟ್‌ಗಳಿಗೆ ವೈಯಕ್ತಿಕ ಫ್ಲ್ಯಾಟ್‌ನ ಆಯಸ್ಸು ಹೇಳುವುದು ಕಷ್ಟ. ಜ್ಯೋತಿಷ್ಯದ ಪ್ರಕಾರ, ಲಗ್ನದಲ್ಲಿ ಬುಧನಿದ್ದರೆ 50 ವರ್ಷ, ಲಗ್ನದಿಂದ ನಾಲ್ಕರಲ್ಲಿ ಗುರು ಮತ್ತು 11ರಲ್ಲಿ ಚಂದ್ರನಿದ್ದರೆ 80 ವರ್ಷ, ಲಗ್ನದಲ್ಲಿ ಗುರು, ನಾಲ್ಕರಲ್ಲಿ ಶುಕ್ರ ಮತ್ತು ಆರರಲ್ಲಿ ರವಿ ಇದ್ದರೆ 120 ವರ್ಷದ ಪೂರ್ಣಾಯುಸ್ಸು ಇರುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಅಧಿಕಾರ ಹಂಚಿಕೆ ತಿಕ್ಕಾಟದ ನಡುವೆ ಕೈ ಶಾಸಕರ ವಿದೇಶ ಪ್ರವಾಸ: ಸಿದ್ದರಾಮಯ್ಯ ಆಪ್ತರೇ ಹೆಚ್ಚು, ಡಿಕೆ ಬಣದಲ್ಲಿ ಕಿಚ್ಚು! – Kannada News | Power sharing Rift in Congress: Siddaramaiah Camp MLAs’ Foreign Trip Triggers DK Shivakumar Faction Discontent

ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರುImage Credit source: tv9

ಬೆಂಗಳೂರು, ಫೆಬ್ರವರಿ 18: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಎಂಬ ಚರ್ಚೆಯೇ ಗೊಂದಲದ ಗೂಡಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಬಣದ ಬಹುಪಾಲು ಶಾಸಕರು (Congress MLAs) ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಮೊದಲು ಸರ್ಕಾರಿ ಪ್ರಾಯೋಜಿತ ಎಂಬ ಅರ್ಥದಲ್ಲಿ ಹೊರಬಿದ್ದಿದ್ದ ಈ ಟೂರ್ ವಿಚಾರ, ಈಗ ಖಾಸಗಿ ಟ್ರಿಪ್ ಎಂಬುದು ಗೊತ್ತಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ.

ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು ಯಾರೆಲ್ಲ?

  • ದೇವೇಂದ್ರಪ್ಪ, ಜಗಳೂರು ಶಾಸಕ
  • ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ
  • ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
  • ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
  • ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ
  • ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
  • ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ
  • ಶರಣಗೌಡ ಬಯ್ಯಾಪುರ, ಎಂಎಲ್​ಸಿ
  • ವಸಂತ್ ಕುಮಾರ್, ಎಂಎಲ್​ಸಿ
  • ನಾಗರಾಜ್ ಯಾದವ್, ಎಂಎಲ್​ಸಿ
  • ಡಾ. ಡಿ. ತಿಮಯ್ಯ, ಎಂಎಲ್​ಸಿ

ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್‌ ಮೂಲಕ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವಿಚಾರ ಎಂದರೆ, ಆರಂಭದಲ್ಲಿ 35 ಶಾಸಕರು ಸಿದ್ಧರಾಗಿದ್ದರು. ಬಳಿಕ ಶಾಸಕರ ಸಂಖ್ಯೆ 21ಕ್ಕೆ ಇಳಿದಿತ್ತು. ಆದರೆ ರಾತ್ರಿಯಾಗ್ತಿದ್ದಂತೆಯೇ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.

ಮತ್ತೊಂದೆಡೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಹಾಗೂ ಸಂಬಂಧಿಕರ ಜೊತೆಗೆ ಕೊಲಂಬಿಯಾಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ 7 ಸ್ನೇಹಿತರು, ಸಂಬಂಧಿಕರು, ಪತ್ನಿ ಜತೆ ಎಸ್ಎಸ್ ಮಲ್ಲಿಕಾರ್ಜುನ ಕೆಂಪೇಗೌಡ ಏರ್​ಪೋರ್ಟ್​ನಿಂದ ಥೈಲ್ಯಾಂಡ್​​ನ ಪುಕೆಟ್​ ನಗರಕ್ಕೆ ತೆರದ್ದು, ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಶಾಸಕರು ವಿದೇಶಕ್ಕೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಮಾಹಿತಿ ನೀಡಿದ್ದಾರೆ. ಅವರು ಏನೇ ಮಾಹಿತಿ ನೀಡಿದರೂ, ಖಾಸಗಿ ಟೂರ್ ಈಗ ಪೊಲಿಟಿಕಲ್ ಟೂರ್ ಎನ್ನುವ ರೀತಿಯ ಬಿಂಬಿತವಾಗಿದೆ. ಯಾಕೆಂದರೆ, ಶಾಸಕರೆಲ್ಲ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲೇ ಪ್ರವಾಸ ಹೊರಟಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ನಾನು ವಿದೇಶಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ. ಶಾಸಕರನ್ನು ವಿದೇಶಕ್ಕೆ ಕಳುಹಿಸಲು ನಾನೇನು ಸಿಎಂ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ, ಸಿಎಂ ಕುರ್ಚಿ ಉಳಿಸಿಕೊಳ್ಳುವವರು ಫಾರಿನ್‌ಗೆ ಕಳುಹಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ನುಣುಚಿಕೊಂಡಿದ್ದಾರೆ.

ಶಾಸಕರ ವಿದೇಶ ಪ್ರವಾಸದ ಬಗ್ಗೆ ಯಾರ್ಯಾರು ಏನಂದರು?

ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ದಿನೇಶ್ ಗುಂಡೂರಾವ್, ಸ್ಪಾನ್ಸರ್ ಎಂಬುದು ಊಹಾಪೋಹ ಎಂದಿದ್ದಾರೆ.

ಇನ್ನು ಶಾಸಕ ಶಿವಗಂಗಾ ಬಸವರಾಜ್, ಶಾಸಕರ ವಿದೇಶಿ ಪ್ರವಾಸಕ್ಕೆ ನನ್ನ ಆಕ್ಷೇಪ ಇಲ್ಲ ಎನ್ನುತ್ತಲೇ, ಬಜೆಟ್ ಸಮಯದಲ್ಲಿ ಹೋಗುವುದು ಸೂಕ್ತ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ, ಹೋಗುವವರಿಗೆ ಬೇಡ ಎನ್ನಲು ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ನಡುವೆ ರಾಜ್ಯ ಬಜೆಟ್​​ಗೆ ಅಧಿಕೃತ ಮುಹೂರ್ತ ಫಿಕ್ಸ್

ಶಾಸಕ ಇಕ್ಬಾಲ್ ಹುಸೇನ್, ರಾಮನಗರವೇ ನನ್ನ ಪಾಲಿನ ಫಾರಿನ್ ಎಂದಿದ್ದು, ಕೆಎನ್ ರಾಜಣ್ಣ ಲೋಕೋ ಭಿನ್ನ ರುಚಿಃ ಅಂತಾ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನಾಯಕತ್ವ ಎಂಬ ಬೆಂಕಿಯಲ್ಲಿ ಧಗಧಗಿಸುತ್ತಿರುವ ಕಾಂಗ್ರೆಸ್​ನಲ್ಲಿ ಈಗ ಶಾಸಕರ ಫಾರಿನ್ ಟ್ರಿಪ್ ಬೇರೆಯದ್ದೇ ಗಾಳಿ ಬೀಸುವಂತೆ ಮಾಡಿದೆ. ಗೊಂದಲಕ್ಕೆ ತೆರೆ ಎಳೆಯಬೇಕಿದ್ದ ಹೈಕಮಾಂಡ್, ಸ್ಥಳೀಯ ಸಮಸ್ಯೆ ಎಂದು ಕೈತೊಳೆದುಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:00 am, Wed, 18 February 26

Source link

ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್ – Kannada News | O Romeo Disaster: How Bollywood PR and Fake Reviews Failed Against Audience Power

ಬಾಲಿವುಡ್ ಅಲ್ಲಿ ಪಿಆರ್​ ತಂತ್ರಗಳು ಹೆಚ್ಚು ಕೆಲಸ ಮಾಡುತ್ತವೆ. ಕೆಲವು ಸಿನಿಮಾ ಹಿಟ್ ಅಥವಾ ಫ್ಲಾಪ್​​ನ ನಿರ್ಧಾರ ಮಾಡೋದು ಇವರೇ. ಆದರೆ, ಈಗ ಆಡಿಯನ್ಸ್ ಬದಲಾಗಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಸ್ಪಷ್ಟವಾಗಿ ಕಂಡು ಹಿಡಿಯುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬಾಲಿವುಡ್​ ಅಲ್ಲಿ ಪಿಆರ್ ಟೆಕ್ನಿಕ್ ಮೂಲಕ ಗೆಲ್ಲುವ ಪ್ರಯತ್ನವನ್ನು ‘ಓ ರೋಮಿಯೋ’ ಸಿನಿಮಾ ಮಾಡಿತ್ತು. ಆದರೆ, ಈ ತಂತ್ರಕ್ಕೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.

‘ಓ ರೋಮಿಯೋ’ ಚಿತ್ರದಲ್ಲಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 13ರಂದು ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ನೋಡಿದ ಅನೇಕ ವಿಮರ್ಶಕರು ಹಾಡಿ ಹೊಗಳಿದರು. ‘ಸಿನಿಮಾ ಅದ್ಭುತವಾಗಿದೆ, ಮತ್ತೊಂದು ಅನಿಮಲ್ ರೀತಿಯಲ್ಲಿ ಸಿನಿಮಾ ಇದೆ’ ಎಂದೆಲ್ಲ ವಿಮರ್ಶೆ ಕೊಟ್ಟರು. ಮೊದಲ ದಿನ ಈ ಚಿತ್ರ 8.5 ಕೋಟಿ ರೂಪಾಯಿ ಗಳಿಕೆ ಮಾಡಿತು.

ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಎರಡನೇ ದಿನ ಪ್ರೇಕ್ಷಕರು ಥಿಯೇಟರ್​​ಗೆ ತೆರಳಿದರು. ಇದರಿಂದ ಸಿನಿಮಾ 12.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಭಾನುವಾರ ಕೂಡ ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಚಿತ್ರದ ಒಟ್ಟಾರೆ ಕಲೆಕ್ಷನ್ 32 ಕೋಟಿ ರೂಪಾಯಿ ಆಗಿದೆ.

ಆ ಬಳಿಕ ಗೊತ್ತಾಯ್ತು ನೋಡಿ ಸಿನಿಮಾದ ನಿಜವಾದ ಬಣ್ಣ. ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಥಿಯೇಟರ್​ಗೆ ತೆರಳಿದ ಅನೇಕರು ಸಿಟ್ಟಲ್ಲಿ ಮರಳಿದ್ದಾರೆ. ‘ಇದು ಮೀಶೋ ಅನಿಮಲ್’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ತುಂಬಾನೇ ಹಿಂಸೆ ಇದೆ ಎಂದು ಹೇಳಿದ್ದಾರೆ. ಸಿನಿಮಾ ಸದ್ಯ ಸೋಲಿನ ಹಾದಿಯಲ್ಲಿ ಸಾಗುತ್ತಿದೆ. ಇದು ಪಿಆರ್ ತಂತ್ರ ಎಂದು ಅನೇಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಖಾನ್​​ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು

ಐಎಂಡಿಬಿಯಲ್ಲಿ ಚಿತ್ರಕ್ಕೆ 6.4 ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಸಿಗುತ್ತಿದ್ದಂತೆ ಕೋರ್ಟ್​​ನಿಂದ ಆದೇಶ ತಂದ ನಿರ್ಮಾಣ ಸಂಸ್ಥೆ ರೇಟಿಂಗ್​​ ನೀಡುವ ಆಯ್ಕೆಯನ್ನೇ ನಿಷ್ಕ್ರಿಯ ಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಲವೇ ದಿನಗಳವರೆಗಿರುವ ಅದ್ಭುತವಾದ ಏಳು ಯೋಗಗಳು..

​ವೇದಾಂಗಗಳಲ್ಲಿ ಒಂದಾದ ಖಗೋಳ ಶಾಸ್ತ್ರದ ಪ್ರಕಾರ ಗ್ರಹಗಳು ನಿರ್ದಿಷ್ಟ ಸ್ಥಾನಗಳಲ್ಲಿ ಒಂದಾದಾಗ ಯೋಗಗಳು ಸೃಷ್ಟಿಯಾಗುತ್ತವೆ. ಕುಂಭ ಹಾಗೂ ಮಕರದಲ್ಲಿ ಉಂಟಾದ ಗ್ರಹಗಳ ಸಂಯೋಗದಿಂದ ಶಶ, ಗಜಕೇಸರಿ, ಶಶಿಮಂಗಳ, ಬುಧಾದಿತ್ಯ, ಧನ, ಬಲ, ಪಾಶ ಯೋಗಗಳು ಸಂಭವಿಸಲಿವೆ. ಪ್ರತಿಯೊಂದು ಯೋಗಕ್ಕೂ ಆಯಾ ರಾಶಿಯ ಅಧಿಪತಿ ಮತ್ತು ಗ್ರಹಗಳ ಮೈತ್ರಿಯ ಆಧಾರದ ಮೇಲೆ ಫಲಗಳು ಬದಲಾಗುತ್ತವೆ.

​ಶಶ ಮಹಾಪುರುಷ ಯೋಗ

ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಶನಿಯು ಮಿತ್ರ ಅಥವಾ ಸ್ವಕ್ಷೇತ್ರಾಧಿಪತಿಯಾಗಿರುವುದರಿಂದ, ಜೀವನದಲ್ಲಿ ಸ್ಥಿರತೆ, ಅಪಾರವಾದ ಆಸ್ತಿ-ಪಾಸ್ತಿ, ಸಮಾಜದಲ್ಲಿ ಉನ್ನತ ಗೌರವ ಮತ್ತು ದೀರ್ಘಾಯುಷ್ಯವನ್ನು ನೀಡುತ್ತಾನೆ. ಇವರು ಮಾಡುವ ಕೆಲಸದಲ್ಲಿ ನಿಧಾನವಾದರೂ ಶಾಶ್ವತವಾದ ಯಶಸ್ಸು ಸಿಗುತ್ತದೆ.

ಮೇಷ, ಸಿಂಹ, ವೃಶ್ಚಿಕ ರಾಶಿಯವರಿಗೆ ಶನಿಯು ಅಧಿಪತಿಗೆ ಶತ್ರುವಾಗಿರುವುದರಿಂದ, ಜೀವನದಲ್ಲಿ ಅತಿಯಾದ ಶ್ರಮ, ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡವನ್ನು ತರಬಹುದು. ಆದರೆ ಶಿಸ್ತನ್ನು ಕಲಿಸುತ್ತಾನೆ.

​ಕರ್ಕಾಟಕ, ಧನು, ಮೀನ ರಾಶಿಯವರಿಗೆ ಮಧ್ಯಮ ಫಲ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ, ಆದರೆ ಕೌಟುಂಬಿಕ ಜವಾಬ್ದಾರಿಗಳು ಹೊರೆಯೆನಿಸಬಹುದು.

ಗಜಕೇಸರಿ ಯೋಗ

​ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಇದು ಅತ್ಯಂತ ಶುಭದಾಯಕ. ಸಮಾಜದಲ್ಲಿ ನಾಯಕತ್ವ, ರಾಜಕೀಯ ಯಶಸ್ಸು, ಸಕಲ ಸುಖ-ಭೋಗಗಳು ಮತ್ತು ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಇವರ ಮಾತು ಮಂತ್ರದಂತೆ ಕೆಲಸ ಮಾಡುತ್ತದೆ.

​ವೃಷಭ, ತುಲಾ, ಮಕರ, ಕುಂಭದವರಿಗೆ ಮಧ್ಯಮ ಫಲ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ, ಆದರೆ ಅದೃಷ್ಟಕ್ಕಿಂತ ಹೆಚ್ಚಾಗಿ ಸ್ವಂತ ಶ್ರಮದಿಂದಲೇ ಯಶಸ್ಸು ಕಾಣಬೇಕಾಗುತ್ತದೆ.

ಮಿಥುನ, ಕನ್ಯಾವರಾಶಿಯವರಿಗೆ ಜ್ಞಾನ ಮತ್ತು ವಿದ್ಯಾಭ್ಯಾಸದಲ್ಲಿ ಉನ್ನತ ಪ್ರಗತಿ ಇರುತ್ತದೆ. ಆದರೆ ಅತಿಯಾದ ಆಲೋಚನೆಯಿಂದ ಮಾನಸಿಕ ಶಾಂತಿ ಸ್ವಲ್ಪ ಕಡಿಮೆ ಇರಬಹುದು.

​ಶಶಿ-ಮಂಗಳ ಯೋಗ

​ಮೇಷ, ವೃಶ್ಚಿಕ, ಕರ್ಕಾಟಕ, ಧನು ರಾಶಿಯವರಿಗೆ ಹಣದ ಹರಿವು ನಿರಂತರವಾಗಿರುತ್ತದೆ. ರಿಯಲ್ ಎಸ್ಟೇಟ್ ಅಥವಾ ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಭಾರಿ ಲಾಭವಾಗುತ್ತದೆ. ಇವರು ಅತೀ ಸಣ್ಣ ವಯಸ್ಸಿನಲ್ಲೇ ಶ್ರೀಮಂತರಾಗುವ ಯೋಗವಿರುತ್ತದೆ.

​ವೃಷಭ, ಮಿಥುನ, ಕನ್ಯಾ, ತುಲಾ ರಾಶಿವರಿಗೆ ಮಿಶ್ರ ಫಲ. ಹಣ ಬಂದರೂ ಅಷ್ಟೇ ವೇಗವಾಗಿ ಖರ್ಚಾಗುತ್ತದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ.

ಸಿಂಹ, ಮಕರ, ಕುಂಭದವರಿಗೆ ಮಧ್ಯಮ ಫಲ. ಸಾಹಸಮಯ ಕೆಲಸಗಳಿಂದ ಧನಲಾಭವಾಗುತ್ತದೆ. ಸೋದರರಿಂದ ಬೆಂಬಲ ಸಿಗಲಿದೆ.

​ಬುಧ-ಆದಿತ್ಯ ಯೋಗ

ಮಿಥುನ, ಕನ್ಯಾ, ಸಿಂಹ, ಮೇಷ ರಾಶಿಯವರು ಅದ್ಭುತ ಬುದ್ಧಿವಂತರು. ಗಣಿತ, ವಿಜ್ಞಾನ, ಬರವಣಿಗೆ ಅಥವಾ ಸಂವಹನ ಕ್ಷೇತ್ರದಲ್ಲಿ ಜಗತ್ಪ್ರಸಿದ್ಧರಾಗುತ್ತಾರೆ. ಸರ್ಕಾರಿ ಉದ್ಯೋಗ ಅಥವಾ ಉನ್ನತ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯುತ್ತಾರೆ.

​ವೃಷಭ, ತುಲಾ, ಮಕರ, ಕುಂಭ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಚತುರತೆ ತೋರುತ್ತಾರೆ. ಉತ್ತಮ ಭಾಷಣಕಾರರಾಗಿ ಗುರುತಿಸಿಕೊಳ್ಳುತ್ತಾರೆ.

​ಕರ್ಕಾಟಕ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಜ್ಞಾನ ಹೆಚ್ಚಿದ್ದರೂ ಅದನ್ನು ಪ್ರಾಯೋಗಿಕವಾಗಿ ಬಳಸುವಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು.

​ಧನ ಯೋಗ

​ವೃಷಭ, ತುಲಾ, ಮಕರ, ಕುಂಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಹೆಚ್ಚು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಐಷಾರಾಮಿ ಜೀವನ ನಡೆಸುತ್ತಾರೆ.

​ಮೇಷ, ಸಿಂಹ, ವೃಶ್ಚಿಕ, ಧನು ರಾಶಿಯವರಿಗೆ ಕಠಿಣ ಪರಿಶ್ರಮದಿಂದ ಶೂನ್ಯದಿಂದ ಸಾಮ್ರಾಜ್ಯ ಕಟ್ಟುತ್ತಾರೆ. ಇವರಿಗೆ ಹಣದ ಕೊರತೆ ಎಂದಿಗೂ ಎದುರಾಗುವುದಿಲ್ಲ.

ಮಿಥುನ, ಕನ್ಯಾ, ಕರ್ಕಾಟಕ, ಮೀನ ರಾಶಿಯವರಿಗೆ ಮಧ್ಯಮ ಫಲ. ಬಂದ ಹಣವನ್ನು ಉಳಿಸುವುದು ಇವರಿಗೆ ಸವಾಲಿನ ಕೆಲಸವಾಗಬಹುದು.

​ಬಲ ಯೋಗ

ಮೇಷ, ವೃಶ್ಚಿಕ, ಮಕರ, ಸಿಂಹ: ಈ ರಾಶಿಯವರು ಮಹಾನ್ ಸಾಹಸಿಗಳು. ಸೈನ್ಯ, ಪೊಲೀಸ್ ಅಥವಾ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಇವರು ಎದೆಗುಂದುವುದಿಲ್ಲ.

​ಕನ್ಯಾ, ಮಿಥುನ, ತುಲಾ ರಾಶಿಯಬರು ದೈಹಿಕ ಬಲಕ್ಕಿಂತ ಬುದ್ಧಿಬಲವನ್ನು ಹೆಚ್ಚು ಬಳಸುತ್ತಾರೆ. ವಿರೋಧಿಗಳನ್ನು ತಂತ್ರದಿಂದ ಸೋಲಿಸುತ್ತಾರೆ.

​ಉಳಿದ ರಾಶಿಯವರಿಗೆ ಸಾಧಾರಣ ಫಲ. ಜೀವನದಲ್ಲಿ ಬರುವ ಸಣ್ಣಪುಟ್ಟ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.

ಪಾಶ ಯೋಗ :

ಎಲ್ಲ ದ್ವಾದಶ ರಾಶಿಗಳಿಗೂ ಈ ಯೋಗವು ವ್ಯಕ್ತಿಯನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಸದಾ ಜನರ ನಡುವೆ ಇರುತ್ತಾರೆ. ಇವರಿಗೆ ಮಿತ್ರರ ಮತ್ತು ಹಿತೈಷಿಗಳ ದೊಡ್ಡ ಬಳಗವೇ ಸೃಷ್ಟಿಯಾಗಿರುತ್ತದೆ.

​ಶುಭ ಫಲ: ರಾಜಕೀಯ ಅಥವಾ ಸಮಾಜ ಸೇವೆಯಲ್ಲಿರುವವರಿಗೆ ಇದು ಅತ್ಯುತ್ತಮ ಯೋಗ. ಇವರು ಮಾಡುವ ಕೆಲಸಕ್ಕೆ ಸಮಾಜದ ಮನ್ನಣೆ ಬೇಗನೆ ಸಿಗುತ್ತದೆ.

​ಅಶುಭ ಫಲ: ಹನ್ನೆರಡು ರಾಶ್ಯಾಧಿಪತಿಗಳಲ್ಲಿ ಒಬ್ಬರು ನೀಚನಾಗಿದ್ದರೂ ಅಥವಾ ನೀಚ ಗಾಮಿಯಾಗಿದ್ದರೂ ಪರಾವಲಂಬನೆ ಜಾಸ್ತಿಯಾಗಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು.

ಈ ಏಳು ಯೋಗಗಳು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಭಾಗ್ಯಶಾಲಿಯನ್ನಾಗಿ ಮಾಡುತ್ತವೆ. ಈ ಕುಂಡಲಿಯಲ್ಲಿ ಶನಿ ಮತ್ತು ಗುರು ಬಲವಾಗಿರುವುದರಿಂದ ಕುಂಭ, ಮಕರ, ಧನು ಮತ್ತು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಹೆಚ್ಚಿನ ಶುಭ ಫಲಗಳು ದೊರೆಯಲಿವೆ.

– ಲೋಹಿತ ಹೆಬ್ಬಾರ್

Source link

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಹಣಕಾಸಿನ ಲಾಭಕ್ಕೆ ಒತ್ತಾಯಿಸುವರು – Kannada News | Horoscope 18 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಯಾರೂ ನಿಮ್ಮ ಬಗ್ಗೆ ಹೇಳದಿದ್ದಾಗ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ನಿಮ್ಮ ಬಗ್ಗೆ‌ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ವೃಷಭ ರಾಶಿ:

ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸರಕಿನ ಆಮದು ಮಾಡಿಕೊಳ್ಳಲು ತೊಂದರೆ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ‌ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ಪರೋಪಕಾರಕ್ಕೆ ಪ್ರತ್ಯುಪಕಾರದ ಚಿಂತನೆ ಇರಲಿ. ಬೆನ್ನು ನೋವಿನಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ:

ಲೆಕ್ಕಪತ್ರದ ವಿಚಾರದಲ್ಲಿ‌ ನಿರ್ದಿಷ್ಟತೆಯನ್ನು ಅಪೇಕ್ಷಿಸುವಿರಿ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ.‌ ನಿಮ್ಮಿಂದ ನೌಕರರಿಗೆ ಭಡ್ತಿ ಸಿಗಲಿದೆ. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌ ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ.

ಕರ್ಕಾಟಕ ರಾಶಿ:

ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಅರ್ಧಬಲದಷ್ಟು ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನೀವಿಲ್ಲದವರಲ್ಲಿ ನಿಮ್ಮನ್ನು ಹುಡುಕುವ ಪ್ರಯತ್ನ ವ್ಯರ್ಥ. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಆಸಕ್ತಿ ಇಲ್ಲದಿದ್ದರೂ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು.

ಸಿಂಹ ರಾಶಿ:

ಧನಾತ್ಮಕ ಆಲೋಚನೆಗೆ ಸ್ಪಂದನೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ನಿಮ್ಮ ವಿಚಾರದಲ್ಲಿ ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕೆಲಸದ ಆಯಾಸದಿಂದ ಆರೋಗ್ಯವು ಕೆಡಬಹುದು.

ಕನ್ಯಾ ರಾಶಿ:

ಪಾಲುದಾರಿಕೆಗೆ ಅನ್ಯರ ಸೇರ್ಪಡೆ ಸಾಧ್ಯತೆ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ.‌ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು.

ತುಲಾ ರಾಶಿ:

ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಭೂಮಿಯಲ್ಲಿ ಹೊಸ ಸಸ್ಯಗಳ ಆರೋಪಣೆ ಮಾಡುವಿರಿ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಕಛೇರಿಯ ತುರ್ತು ಸ್ಥಿತಿಯು ನಿಮಗೆ ಗೊತ್ತಾಗದೇ ಆರಾಮಾಗಿ ಇರುವಿರಿ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ.

ವೃಶ್ಚಿಕ ರಾಶಿ:

ದಿನ ಪೂರ್ತಿ ಬೆವರು ಹರಿಸಿ ಮಾಡಿದ ಕೆಲಸಕ್ಕೆ ದಿನದ ಕೊನೆಗೆ ಶುಭ ಫಲವು ಸಿಗುವುದು. ಉದ್ಯೋಗ ಶಿಸ್ತಿಗೆ ಮಹಿಳೆಯರನ್ನು ಜೋಡಿಸಿಕೊಳ್ಳುವಿರಿ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ದಾಂಪತ್ಯದಲ್ಲಿ ಅನುಮಾನದ ಹೊಗೆಯಾಡುವುದು. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ಮಾತನಾಡುವಾಗ ಸೂಕ್ಷ್ಮಸಂಗತಿಗಳನ್ನು ಮರೆಯಬಾರದು.

ಧನು ರಾಶಿ:

ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಪರಿಚಿತರ ಹೊಸ ಮುಖಗಳು ಅನಾವರಣವಾಗುವುದು. ನಿಮ್ಮ ಧಾರ್ಮಿಕ ನಂಬುಗೆಗೆ ಯಾರಿಂದಲಾದರೂ ಘಾಸಿ ಉಂಟಾದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ವಾಹನದಲ್ಲಿ ಸಂಚಾರ ಮಾಡುವುದಕ್ಕೆ ಕೆಲವು ತೆಡೆಗಳು ಬರಬಹುದು. ದೈಹಿಕ‌ಶ್ರಮವು ಇಂದು ಹೆಚ್ಚಿದ್ದು, ಲಾಭವೂ ಸಮಾಧಾನವನ್ನು ತರುವುದು.

ಮಕರ ರಾಶಿ:

ಇಂದಿನ‌ ಪ್ರಯಾಣದಲ್ಲಿ ಬಂಧುಗಳು ಅನಿರೀಕ್ಷಿತವಾಗಿ ಸಿಗುವರು. ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವನ್ನು ಮಾಡಿಕೊಂಡು ಸಂಕಟಪಡಬೇಕಾಗುವುದು.

ಕುಂಭ ರಾಶಿ:

ನೀವು ಯಾರ ಕೈಗೂ ಸುಲಭಕ್ಕೆ ಸಿಗದೇ, ಎಲ್ಲ ಜವಾಬ್ದಾರಿಗಳಿಂದ ದೂರವಿರುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ವಿದೇಶದಿಂದ ಮರಳುವ ಯೋಚನೆ ಇರುವುದು. ಪ್ರಯಾಣವು ಆರಂಭದಲ್ಲಿ ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು.

ಮೀನ ರಾಶಿ:

ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕುಟುಂಬ ಹಾಗೂ ಪ್ರೇಮದ ನಡುವೆ ಸಿಕ್ಕಿಬಿದ್ದು ಗೊಂದಲ ಕಾಡುವುದು. ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಭ್ರಮೆಯಲ್ಲಿ ಇರುವಿರಿ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಧನಿಷ್ಠಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶತಭಿಷಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:06, ಯಮಗಂಡ ಕಾಲ 08:16 – 09:43, ಗುಳಿಕ ಕಾಲ 11:11 – 12:38

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 18ರ ದಿನಭವಿಷ್ಯ

ಮುಕುಂದ ಮಾಲಾ ಸ್ತೋತ್ರದ ಶ್ರವಣ ಅಥವಾ ಪಠಣವನ್ನು ಮಾಡಿ. ದೂರವಾದ ಸ್ನೇಹ- ಸಂಬಂಧ ಮತ್ತೆ ಸರಿಹೋಗುವುದಕ್ಕೆ ಹಾಗೂ ಉದ್ಯೋಗ, ವ್ಯಾಪಾರ- ವ್ಯವಹಾರಗಳಲ್ಲಿ ಯಶಸ್ಸು ಕಾಣುವುದಕ್ಕೆ ಸಹಕಾರಿ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದೆನಿಸಿದ್ದು ನನಗೂ ಮುಖ್ಯ ವಿಷಯ ಏಕಾಗಿರಬೇಕು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮಲ್ಲಿ ಕೆಲವರು ಡಿಷ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯ ಸ್ವಚ್ಛತೆಗಾಗಿಯೇ ಯಂತ್ರಗಳನ್ನು ಖರೀದಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನೂ ಕೆಲವರು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆ ಸಹ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪಿಕೊಂಡು ಬಿಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಬಂದಿದ್ದ ಅವಕಾಶವೊಂದು ಅಥವಾ ಈಗಾಗಲೇ ಕೆಲಸ ಅರಂಭಿಸಿಯಾಗಿದೆ ಎಂಬುದೊಂದನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿಟ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿಕೊಳ್ಳಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version