Chanakya Niti: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಈ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ – Kannada News | Chanakya Niti: Chanakya says a husband should not say these words to his wife

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಮಾತಿನಂತೆ ಕೆಲವೊಂದು ಮಾತುಗಳಿಂದಲೇ ಸಂಬಂಧ ಹಾಳಾಗುತ್ತದೆ. ಹೌದು ಕೆಲವೊಂದು ಕಠೋರ ಮಾತುಗಳು ಸಂಬಂಧದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಅದರಲ್ಲೂ ಗಂಡನಾದವನು (Husband) ತನ್ನ ಹೆಂಡತಿಗೆ ಈ ಕೆಲವೊಂದು ಮಾತುಗಳನ್ನಾಡಿದರೆ ಸುಂದರ ದಾಂಪತ್ಯ ಜೀವನವೇ ಹಾಳಾಗಿ ಹೋಗುವ ಸಾಧ್ಯತೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ದಾಂಪತ್ಯ ಜೀವನದಲ್ಲಿ ಸದಾ ಸಂತೋಷ ನೆಲೆಸಲು, ಗಂಡ ಹೆಂಡತಿ ನೆಮ್ಮದಿಯಿಂದ ಸಂಸಾರ ಸಾಗಿಸಲು ಗಂಡನಾದವನು ಹೆಂಡತಿಯ ಬಳಿ ಯಾವೆಲ್ಲ ಮಾತುಗಳನ್ನು ಆಡಬಾರದು, ಈ ಮಾತುಗಳ ಕಾರಣದಿಂದ ಸಂಸಾರದಲ್ಲಿ ಏನೆಲ್ಲಾ ತೊಂದರೆಗಳು ಉದ್ಭವಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೆಂಡತಿಯ ಬಳಿ ಎಂದಿಗೂ ಈ ಮಾತುಗಳನ್ನಾಡಬೇಡಿ:

ಸಾಮರ್ಥ್ಯ ಮತ್ತು ಸೌಂದರ್ಯವನ್ನು ಪ್ರಶ್ನಿಸುವುದು: ಆಚಾರ್ಯ ಚಾಣಕ್ಯರು ಹೇಳುವಂತೆವ್ಯಕ್ತಿಯ ಆತ್ಮವಿಶ್ವಾಸವೇ ಅವರ ದೊಡ್ಡ ಆಸ್ತಿ. ಗಂಡ ತನ್ನ ಹೆಂಡತಿಯ ನೋಟ, ಅಡುಗೆ ಶೈಲಿ ಅಥವಾ ಮಕ್ಕಳ ಪಾಲನೆಯನ್ನು ಪದೇ ಪದೇ ಟೀಕಿಸಿದರೆ, ಅದು ಅವಳ ಸ್ವಾಭಿಮಾನಕ್ಕೆ ತೀವ್ರ ಹಾನಿ ಮಾಡುತ್ತದೆ. ನಿರಂತರ ಟೀಕೆಗಳು ಹೆಂಡತಿಯ ಮನಸ್ಸನ್ನು ಘಾಸಿ ಮಾಡುತ್ತದೆ ಮತ್ತು  ಮನೆಯಲ್ಲಿ  ತಾನು ಹೊರಗಿನವಳಂತೆ ಭಾವಿಸುವಂತೆ ಮಾಡುತ್ತದೆ, ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಆದ್ದರಿಂದ ಹೆಂಡತಿಯ ಸಾಮರ್ಥ್ಯ ಮತ್ತು ಸೌಂದರ್ಯದ ಬಗ್ಗೆ ಋಣಾತ್ಮಕ ಮಾತುಗಳನ್ನಾಡಬೇಡಿ.

ಇತರ ಮಹಿಳೆಯರೊಂದಿಗೆ ಹೆಂಡತಿಯನ್ನು ಹೋಲಿಸಿ ಮಾತನಾಡುವುದು: ಯಾವುದೇ ಕಾರಣಕ್ಕೂ ಹೆಂಡತಿಯನ್ನು ಬೇರೊಬ್ಬ ಮಹಿಳೆಯೊಂದಿಗೆ ಹೋಲಿಸಿ ಮಾತನಾಡಬೇಡಿ. ಅದು ಸ್ನೇಹಿತರಾಗಿರಲಿ, ಸಂಬಂಧಿಕರಾಗಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ, ನಿಮ್ಮ ಹೆಂಡತಿಯನ್ನು ಬೇರೆಯವರೊಂದಿಗೆ ಎಂದಿಗೂ ಹೋಲಿಸಬೇಡಿ. ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ವಿಶಿಷ್ಟ ಗುಣಗಳಿರುತ್ತದೆ. ಹಾಗಾಗಿ ಹೋಲಿಕೆ ಮಾಡುವುದರಿಂದ  ನಿಮ್ಮ ಹೆಂಡತಿಯಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಅಸಮಾಧಾನವನ್ನು ಉಂಟುಮಾಡುತ್ತವೆ, ಇದು ನಿಧಾನವಾಗಿ ಆಕೆಗೆ ನಿಮ್ಮ ಮೇಲಿರುವ ಪ್ರೀತಿಯನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ ಚಾಣಕ್ಯ.

ನಿಂದನೀಯ ಪದಗಳ ಬಳಕೆ: ನಿಂದನೀಯ ಪದ ಬಳಕೆ, ನಿನ್ನ ಕೈಯಿಂದ ಯಾವ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಿಲ್ಲ ಅಂತೆಲ್ಲಾ ಭಾವನಾತ್ಮಕ ಹಿಂಸೆ ನೀಡಿದರೆ ಸಂಬಂಧ ಹಳಸಿ ಹೋಗುತ್ತದೆ. ಮನೆಯ ಶಾಂತಿ ನೆಮ್ಮದಿಯೂ ಹಾಳಾಗುತ್ತದೆ. ಆದ್ದರಿಂದ ಗಂಡನಾದವನು ಯಾವುದೇ ಕಾರಣಕ್ಕೂ ಹೆಂಡತಿಗೆ ನಿಂದನೀಯ ಪದಗಳಿಂದ ಮಾತನಾಡಬಾರದು.

ಇದನ್ನೂ ಓದಿ: ಪದೇ ಪದೇ ಹಣವನ್ನು ಸಾಲ ಪಡೆಯುವುದರಿಂದ ಏನಾಗುತ್ತದೆ ಗೊತ್ತಾ?

ಅಭಿಪ್ರಾಯಗಳು ಮತ್ತು ತೀರ್ಪುಗಳನ್ನು ನಿರ್ಲಕ್ಷಿಸುವುದು: ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿ ಇಬ್ಬರೂ ಸಮಾನರೇ. ಹೀಗಿರುವಾಗ ಗಂಡನು ಹೆಂಡತಿಯ ಆಲೋಚನೆಗಳು, ಭಾವನೆಗಳು ಅಥವಾ ನಿರ್ಧಾರಗಳನ್ನು ನಿರಂತರವಾಗಿ ನಿರ್ಲಕ್ಷಿಸಿದರೆ, ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಗಂಡನಾದವನು ಹೆಂಡತಿಯ ನಿರ್ಧಾರ, ಮಾತುಗಳಿಗೆ ಗೌರವ ನೀಡಬೇಕು.

ವಿಷಾದ ವ್ಯಕ್ತಪಡಿಸುವುದು: ಕೋಪದಲ್ಲಿ ನಿನ್ನನ್ನು ಯಾಕಾದ್ರೂ ಮಾದುವೆಯಾದ್ನೋ, ಮನೆ ಬಿಟ್ಟು ಹೋಗು ಇಂತಹ ಅಪಾಯಕಾರಿ ಮಾತುಗಳನ್ನಾಡುವುದರಿಂದ ಖಂಡಿತವಾಗಿಯೂ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ ಎಷ್ಟೇ ಕೋಪಗೊಂಡರೂ ಸರಿ ಗಂಡ ತನ್ನ ಹೆಂಡತಿಯ ಮುಂದೆ ಇಂತಹ ಕಠೋರ ಮಾತುಗಳನ್ನಾಡಬಾರದು. ಚಾಣಕ್ಯರ ಪ್ರಕಾರ, ತಾಳ್ಮೆ, ಪ್ರೀತಿ ವಿಶ್ವಾಸ, ನಂಬಿಕೆ, ಹಿತವಾದ ಮಾತು, ಮಾತಿನ ಮೇಲಿನ ಹಿಡಿತ ಇವೆಲ್ಲವೂ ಗಂಡ ಹೆಂಡತಿಯ ಸಂಬಂಧವನ್ನು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ – Kannada News | Bengaluru Terror Conspiracy: NIA Court Sentences Chota Usman to 7 Years Jail for Plotting Release of LeT Terrorist T Nasir

ಬೆಂಗಳೂರು, ಮೇ 2: ಬೆಂಗಳೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್, ಎಲ್ಇಟಿ ಉಗ್ರ ಟಿ. ನಾಸೀರ್‌ನನ್ನು ಕಾನೂನುಬಾಹಿರವಾಗಿ ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದ ಒಂಬತ್ತನೇ ಆರೋಪಿ (A9) ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ (Chota Usman) ಎನ್ಐಎ (NIA) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯು ನ್ಯಾಯಾಲಯದ ಮುಂದೆ ತಪ್ಪು ಒಪ್ಪಿಕೊಂಡಿದ್ದ.

ಇಸ್ಲಾಂಗೆ ಮತಾಂತರಗೊಂಡು ಚೋಟಾ ಉಸ್ಮಾನ್ ಆಗಿದ್ದ ವಿಕ್ರಮ್ ಕುಮಾರ್

ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ. ನಾಸೀರ್ ಪ್ರಭಾವಕ್ಕೊಳಗಾಗಿದ್ದ ವಿಕ್ರಮ್, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಚೋಟಾ ಉಸ್ಮಾನ್ ಎಂದು ಬದಲಾಯಿಸಿಕೊಂಡಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ನಾಸೀರ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಸದಸ್ಯರೊಂದಿಗೆ ಸತತ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸಂಚು ರೂಪಿಸಿದ್ದು ಹೇಗೆ?

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಹಾಗೂ ಇತರ ಉಗ್ರರನ್ನು ಜೈಲಿನಿಂದ ಬಿಡಿಸಿಕೊಳ್ಳಲು ಆರೋಪಿಗಳು ಸಿನಿಮೀಯ ಮಾದರಿಯ ಸ್ಕೆಚ್ ಹಾಕಿದ್ದರು. ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎ9 ಆರೋಪಿ ವಿಕ್ರಮ್ ಕುಮಾರ್ (ಚೋಟಾ ಉಸ್ಮಾನ್), ಅಲ್ಲಿ ಟಿ. ನಾಸೀರ್ ಸಂಪರ್ಕಕ್ಕೆ ಬಂದು ಆತನಿಂದ ತೀವ್ರವಾಗಿ ಪ್ರಭಾವಿತನಾಗಿದ್ದ. ನಾಸೀರ್ ಸೂಚನೆಯಂತೆ ಜೈಲಿನಿಂದ ಹೊರಬಂದ ವಿಕ್ರಮ್, ಇತರ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೊತೆ ಸೇರಿ ಸ್ಫೋಟಕಗಳನ್ನು ಸಂಗ್ರಹಿಸಲು ಶುರುಮಾಡಿದ್ದ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಉಗ್ರರನ್ನು ನ್ಯಾಯಾಲಯದ ವಿಚಾರಣೆಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ, ಗ್ರೆನೇಡ್ ಎಸೆದು ಪೊಲೀಸರನ್ನು ಹತ್ಯೆ ಮಾಡಿ ನಾಸೀರ್‌ನನ್ನು ಅಪಹರಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹರಿಯಾಣದ ಅಂಬಾಲಾದಿಂದ ಗ್ರೆನೇಡ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಕೇವಲ ಗ್ರೆನೇಡ್ ಅಷ್ಟೇ ಅಲ್ಲದೆ, ದಾಳಿಗೆ ಅಗತ್ಯವಾದ ಮಾರಕಾಸ್ತ್ರಗಳು ಮತ್ತು ವಾಹನಗಳ ವ್ಯವಸ್ಥೆಯನ್ನೂ ಈ ಗ್ಯಾಂಗ್ ಮಾಡಿಕೊಂಡಿತ್ತು ಎಂಬ ಆಘಾತಕಾರಿ ವಿಷಯ ಎನ್​ಐಎ ತನಿಖೆಯಲ್ಲಿ ಬಯಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂಚ ರಾಜ್ಯ ಫಲಿತಾಂಶಕ್ಕೆ ಮುಂಚೆ ಅಮಿತ್ ಶಾರ ಭೇಟಿಯಾದ ರಿಷಬ್ ಶೆಟ್ಟಿ – Kannada News | Rishab Shetty met Amit Shah shared photos on Social Media

ಸಿನಿಮಾ (Cinema) ಮತ್ತು ರಾಜಕೀಯ ಭಾರತದಲ್ಲಿ ಜೊತೆ-ಜೊತೆಯಾಗಿಯೇ ಸಾಗುತ್ತದೆ. ಸಿನಿಮಾ ತಾರೆಯರು ರಾಜಕಾರಣಕ್ಕೆ ಬರುವುದು ಭಾರತದಲ್ಲಿ ಬಹಳ ಸಾಮಾನ್ಯ. ಈಗಲೂ ಸಹ ಹಲವಾರು ಮಂದಿ ಸಿನಿಮಾ ತಾರೆಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ರಾಜಕಾರಣಿಗಳು ಸಹ ತಮ್ಮ ಪಕ್ಷದ ಪ್ರಚಾರಕ್ಕೆ, ಪಕ್ಷದ ನೀತಿಗಳ ಪ್ರಚಾರಕ್ಕೆ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ, ಜನಪ್ರಿಯ ನಟ-ನಟಿಯರು ರಾಜಕಾರಣಿಗಳ ಭೇಟಿ ಆಗುವುದು ಸಾಮಾನ್ಯ ಮತ್ತು ಕುತೂಹಲಕಾರಿಯೂ ಹೌದು. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೇಂದ್ರ ಗೃಹ ಮಂತ್ರಿ, ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ.

ರಿಷಬ್ ಶೆಟ್ಟಿ ಅವರು, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಜೊತೆಗಿನ ಭೇಟಿಯ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅಮಿತ್ ಶಾ ಮತ್ತು ರಿಷಬ್ ಶೆಟ್ಟಿ ಅವರು ನಗುತ್ತಾ ಚರ್ಚಿಸುತ್ತಿರುವುದು ಕಾಣುತ್ತಿದೆ. ಚಿತ್ರ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ‘ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿತು. ಅವರು ಕಾಂತಾರ ಮತ್ತು ಕಾಂತಾರ ಅಧ್ಯಾಯ 1 ಸಿನಿಮಾಗಳ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡರು. ಅದು ನನ್ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಯಿತು. ನನ್ನ ಮುಂಬರುವ ಸಿನಿಮಾಗಳ ಬಗ್ಗೆ ಕೇಳಿ ಮಾಹಿತಿ ಪಡೆದರು. ಅವರು ನಮ್ಮ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಚಲನಚಿತ್ರ ನಿರ್ಮಾಣದ ಬಗ್ಗೆ ತಮ್ಮ ಆಳವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ. ಇಬ್ಬರೂ ಸಹ ಈ ಬಗ್ಗೆ ಚರ್ಚಿಸಿದ್ದು ಬಹಳ ಸಂತೋಷ ಎನಿಸಿತು’ ಎಂದಿದ್ದಾರೆ.

ಇದನ್ನೂ ಓದಿ:ಸದ್ದಿಲ್ಲದೆ ತೆಲುಗಿನಲ್ಲಿ ರಿಲೀಸ್ ಆಗೋಕೆ ರೆಡಿ ಆಯ್ತು ರಿಷಬ್ ಶೆಟ್ಟಿ ಸಿನಿಮಾ

ರಿಷಬ್ ಶೆಟ್ಟಿ ಅವರು 2023 ರಲ್ಲಿ ಪ್ರಧಾನಿ ಮೋದಿ ಅವರನ್ನು ಸಹ ಭೇಟಿ ಆಗಿದ್ದರು. ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಯಶ್, ರಿಷಬ್ ಶೆಟ್ಟಿ ಅವರುಗಳನ್ನು ಭೇಟಿ ಆಗಿದ್ದರು. ಆ ವೇಳೆ ಮೋದಿ ಅವರ ಭೇಟಿ ಬಗ್ಗೆ ಮಾತನಾಡಿದ್ದ ನಟ ರಿಷಬ್ ಶೆಟ್ಟಿ, ‘ಪ್ರಧಾನಿ ಮೋದಿ ಅವರನ್ನು ನಾನು ಒಬ್ಬ ಮಹಾನ್ ನಾಯಕ ಎಂದು ಪರಿಗಣಿಸುತ್ತೇನೆ ಮತ್ತು ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಅವರು ಕನ್ನಡ ಚಲನಚಿತ್ರೋದ್ಯಮದ ಬಗ್ಗೆ, ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಮತ್ತು ನಮಗೆ ಯಾವ ವಿಷಯಗಳ ಅಗತ್ಯ ಇದೆ. ಇತ್ಯಾದಿಗಳ ಬಗ್ಗೆ ಕೇಳಿದರು ಮತ್ತು ಅವರು ಏನು ಮಾಡಬಹುದು ಎಂಬುದನ್ನು ಸಹ ಹೇಳಿದರು. ಅವರು ಕಾಂತಾರ ಚಿತ್ರವನ್ನು ಶ್ಲಾಘಿಸಿದರು’ ಎಂದಿದ್ದರು.

ರಿಷಬ್ ಶೆಟ್ಟಿ ಅವರು ಸಿನಿಮಾ ಮಂದಿಯ ಜೊತೆಗೆ ಮಾತ್ರವೇ ಅಲ್ಲದೆ ಹಲವಾರು ರಾಜಕಾರಣಿಗಳ ಜೊತೆಗೂ ಆಪ್ತ ನಂಟು ಹೊಂದಿದ್ದಾರೆ. ವಿಶೇಷವಾಗಿ ಬಿಜೆಪಿ ಮುಖಂಡರುಗಳ ಜೊತೆಗೆ ರಿಷಬ್ ಶೆಟ್ಟಿ ಅವರಿಗೆ ಆಪ್ತ ನಂಟು ಇದೆ. ಕೆಲ ವರ್ಷಗಳ ಬಳಿಕ ರಿಷಬ್ ಶೆಟ್ಟಿ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ಆಶ್ಚರ್ಯವಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಈ ವಸ್ತುಗಳನ್ನು ಎಂದಿಗೂ ನೇರವಾಗಿ ಯಾರ ಕೈಗೂ ನೀಡಬೇಡಿ; ಮನೆಯ ಸಮೃದ್ಧಿಗೆ ತೊಂದರೆಯಾಗಬಹುದು! – Kannada News | Avoid Poverty: Never Hand Over These 4 Items Directly

ಜ್ಯೋತಿಷ್ಯ ಶಾಸ್ತ್ರ ಮತ್ತು ಧರ್ಮಗ್ರಂಥಗಳ ಪ್ರಕಾರ, ದೈನಂದಿನ ಜೀವನದಲ್ಲಿ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಮನೆಯ ಸುಖ-ಸಮೃದ್ಧಿಯ ಮೇಲೆ ಭಾರಿ ಪರಿಣಾಮ ಬೀರಬಹುದು. ವಿಶೇಷವಾಗಿ ಕೆಲವು ವಸ್ತುಗಳನ್ನು ಇತರರ ಕೈಗೆ ನೇರವಾಗಿ ನೀಡುವ ಅಭ್ಯಾಸವು ದಾರಿದ್ರ್ಯಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಸಂಬಂಧಗಳಲ್ಲಿ ಬಿರುಕು ಮೂಡದಂತೆ ಮತ್ತು ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಮಾಡಲು ಯಾವ ವಸ್ತುಗಳನ್ನು ನೇರವಾಗಿ ನೀಡಬಾರದು ಎಂಬ ವಿವರ ಇಲ್ಲಿದೆ.

ಉಪ್ಪು ಮತ್ತು ಮೆಣಸಿನಕಾಯಿ:

ಉಪ್ಪು ಜೀವನದ ರುಚಿಯ ಸಂಕೇತ ಮಾತ್ರವಲ್ಲ, ಅದು ಗ್ರಹಗತಿಗಳ ಮೇಲೂ ಪ್ರಭಾವ ಬೀರುತ್ತದೆ. ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಉಪ್ಪನ್ನು ಎಂದಿಗೂ ಮತ್ತೊಬ್ಬರ ಕೈಗೆ ನೇರವಾಗಿ ನೀಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗಬಹುದು ಮತ್ತು ನೀಡಿದವರ ಹಾಗೂ ಪಡೆದವರ ನಡುವೆ ಕಲಹ ಉಂಟಾಗಬಹುದು. ಅದೇ ರೀತಿ, ಮೆಣಸಿನಕಾಯಿಯನ್ನು ನೇರವಾಗಿ ನೀಡುವುದರಿಂದ ಸಂಬಂಧಗಳಲ್ಲಿ ಕಹಿ ಅಥವಾ ಖಾರ ಉಂಟಾಗಿ, ಮನಸ್ತಾಪಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇವುಗಳನ್ನು ನೀಡುವಾಗ ಪಾತ್ರೆಯಲ್ಲಿ ಅಥವಾ ಟೇಬಲ್ ಮೇಲೆ ಇಟ್ಟು ನೀಡುವುದು ಉತ್ತಮ.

ಕರವಸ್ತ್ರ ನೀಡುವ ಅಭ್ಯಾಸದ ಬಗ್ಗೆ ಎಚ್ಚರ:

ಸಾಮಾನ್ಯವಾಗಿ ಮನೆಯಿಂದ ಹೊರಹೋಗುವಾಗ ಪತ್ನಿಯರು ಪತಿಯ ಕೈಗೆ ಕರವಸ್ತ್ರವನ್ನು (Handkerchief) ನೀಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರವಸ್ತ್ರವನ್ನು ಮತ್ತೊಬ್ಬರ ಕೈಗೆ ನೀಡುವುದು ಅಥವಾ ಇತರರ ಕರವಸ್ತ್ರವನ್ನು ನಾವು ಬಳಸುವುದು ಅಶುಭ. ಇದು ವ್ಯಕ್ತಿಯ ಜೀವನದಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಪ್ರಗತಿಗೆ ಅಡೆತಡೆಗಳನ್ನು ಉಂಟುಮಾಡಬಹುದು. ಹಳೆಯ ನಂಬಿಕೆಗಳ ಪ್ರಕಾರ, ಇದು ಆತ್ಮೀಯರ ನಡುವೆ ದೂರವನ್ನು ಸೃಷ್ಟಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಶನಿ ದೋಷಕ್ಕೆ ಕಾರಣವಾಗಬಹುದು ಕಬ್ಬಿಣ:

ಶಾಸ್ತ್ರಗಳ ಪ್ರಕಾರ, ಕಬ್ಬಿಣದ ವಸ್ತುಗಳನ್ನು ಶನಿ ದೇವರಿಗೆ ಪ್ರಿಯವಾದ ಲೋಹವೆಂದು ಪರಿಗಣಿಸಲಾಗುತ್ತದೆ. ಕಬ್ಬಿಣದ ವಸ್ತುಗಳನ್ನು ದಾನವಾಗಿ ನೀಡಬಹುದು ಅಥವಾ ಕೊಳ್ಳಬಹುದು, ಆದರೆ ಯಾರಿಗಾದರೂ ನೇರವಾಗಿ ಕೈಯಿಂದ ಕೈಗೆ ನೀಡುವುದು ಶನಿ ದೋಷಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಕಬ್ಬಿಣದ ವಸ್ತುಗಳನ್ನು ಈ ರೀತಿ ವಿನಿಮಯ ಮಾಡಿಕೊಳ್ಳುವುದರಿಂದ ಹಣಕಾಸಿನ ನಷ್ಟ ಮತ್ತು ಅನಾರೋಗ್ಯದ ಸಮಸ್ಯೆಗಳು ಕಾಡಬಹುದು.

ಸಮೃದ್ಧಿಗಾಗಿ ಪಾಲಿಸಬೇಕಾದ ನಿಯಮಗಳು:

ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ಈ ಮೇಲೆ ತಿಳಿಸಿದ ವಸ್ತುಗಳನ್ನು ನೀಡುವಾಗ ಕೆಳಗೆ ಇಟ್ಟು ನೀಡುವುದು ಅಥವಾ ಮಧ್ಯದಲ್ಲಿ ಒಂದು ತಟ್ಟೆಯನ್ನು ಬಳಸುವುದು ಸೂಕ್ತ. ಯಾವುದೇ ವಸ್ತುವನ್ನು ನೀಡುವಾಗ ಮನಸ್ಸಿನಲ್ಲಿ ದ್ವೇಷವಿಲ್ಲದೆ, ಗೌರವದಿಂದ ನೀಡುವುದು ಕೂಡ ಮುಖ್ಯವಾಗಿದೆ. ಈ ಸಣ್ಣ ಬದಲಾವಣೆಗಳು ಮನೆಯಲ್ಲಿ ಶಾಂತಿ ಮತ್ತು ಐಶ್ವರ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ – Kannada News | Plant these plants at home to get rid of mosquitoes

ಬೇಸಿಗೆಯ ಸಮಯದಲ್ಲಿ ಉರಿ ಬಿಸಿಲು, ಸೆಖೆ ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಸೊಳ್ಳೆಗಳ (mosquitoes) ಹಾವಳಿ. ಈ ಸೊಳ್ಳೆಗಳು ಮನೆಯೊಳಗೆ ನುಗ್ಗಿ ಮನುಷ್ಯರ ರಕ್ತ ಹೀರಿ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ರೋಗಗಳ ಅಪಾಯವನ್ನೂ ಹೆಚ್ಚಿಸುತ್ತವೆ. ಹಾಗಾಗಿ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇವು ಸೊಳ್ಳೆಯನ್ನು ಓಡಿಸುವುದೇನೋ ನಿಜ, ಆದರೆ ಈ ಉತ್ಪನ್ನಗಳಿಂದ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಿರುವಾಗ ಈ ಕೆಲವೊಂದು ಪವರ್‌ಫುಲ್‌ ಗಿಡಗಳನ್ನು ಮನೆ ಸುತ್ತ, ಬಾಲ್ಕನಿಯಲ್ಲಿ ನೆಡುವ ಮೂಲಕ ಸೊಳ್ಳೆಗಳು ಮನೆ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು. ಸೊಳ್ಳೆಗಳನ್ನು ಓಡಿಸಲು ಯಾವೆಲ್ಲಾ ಗಿಡಗಳನ್ನು ನೆಟ್ಟರೆ ಉತ್ತಮ ಎಂಬುದನ್ನು ನೋಡೋಣ ಬನ್ನಿ.

ಈ ಗಿಡಗಳನ್ನು ನೆಟ್ಟರೆ ಮನೆ ಬಳಿ ಒಂದು ಸೊಳ್ಳೆಯೂ ಸೋಕುವುದಿಲ್ಲ:

ತುಳಸಿ: ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯ ಧಾರ್ಮಿಕ ಮಹತ್ವದೊಂದಿಗೆ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿವೆ. ಅಲ್ಲದೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವ ಮೂಲಕ ಸೊಳ್ಳೆ, ಕೀಟ, ಹಲ್ಲಿಗಳ ಕಾಟದಿಂದಲೂ ಮುಕ್ತಿ ಪಡೆಯಬಹುಉ. ತುಳಸಿ ಸಸ್ಯವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಅದರ ಸುವಾಸನೆಯು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಮತ್ತು ಈ ಸಸ್ಯ ಪರಿಸರವನ್ನು ಶುದ್ಧೀಕರಿಸುತ್ತದೆ.

ಪುದೀನ: ಪುದೀನಾದ ಬಲವಾದ  ಬಲವಾದ ಮತ್ತು ವಿಶಿಷ್ಟವಾದ ಸುವಾಸನೆಯು ಮನೆಯಿಂದ ಸೊಳ್ಳೆಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೊಳ್ಳೆಗಳು, ಕೀಟಗಳು, ಜೋಡಗಳು ಪುದೀನದ ಬಲವಾದ ಸುವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಪಾಟ್‌ಗಳಲ್ಲಿ ಪುದೀನಾ ಗಿಡವನ್ನು ನೆಟ್ಟು, ಕಿಟಕಿ ಬಾಲ್ಕನಿಗಳಲ್ಲಿ ಇಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು.

ಲೆಮನ್‌ ಗ್ರಾಸ್:‌ ಲೆಮನ್‌ ಗ್ರಾಸ್‌ ಅಡುಗೆಯ ಸುವಾಸನೆ ಹೆಚ್ಚಿಸುವುದು ಮಾತ್ರವಲ್ಲದೆ,  ಮನೆಯ ವಾತಾವರಣವನ್ನು ಸುರಕ್ಷಿತವಾಗಿ ಮತ್ತು ತಾಜಾವಾಗಿಡಲು ಸಹಕಾರಿ.  ಇದರ ಪ್ರಬಲ ಹಾಗೂ ರಿಫ್ರೆಶಿಂಗ್‌ ಪರಿಮಳ ಮನುಷ್ಯರಾದ ನಮಗೆ ಇಷ್ಟವಾಗುತ್ತದೆ. ಆದರೆ ಸೊಳ್ಳೆಗಳು ಇದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆ ಸುತ್ತ ಲೆಮನ್‌ ಗ್ರಾಸ್‌ ಗಿಡವನ್ನು ನೆಡುವ ಮೂಲಕ ಸೊಳ್ಳೆಗಳ ಹಾವಳಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಇದನ್ನೂ ಓದಿ: ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಒಂದು ಸಲಹೆಯನ್ನು ಪಾಲಿಸಿ

ಚೆಂಡು ಹೂವಿನ ಗಿಡ: ಚೆಂಡು ಹೂವಿನ ಗಿಡಗಳು ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದರ ಜೊತೆಗೆ ಕೀಟ ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತವೆ ಹೌದು ಸೊಳ್ಳೆಗಳು ಚೆಂಡು ಹೂವಿನ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಮನೆ ಸುತ್ತಲೂ ಈ ಗಿಡವನ್ನು ನೆಡುವ ಮೂಲಕ ನೈಸರ್ಗಿಕ ರೀತಿಯಲ್ಲಿ ಸೊಳ್ಳೆಗಳು ಮನೆ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು.

ಬೇವು:  ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಬೇವು ಸೊಳ್ಳೆಗಳನ್ನು ಓಡಿಸಲು ಸಹ ಸಖತ್‌ ಪರಿಣಾಮಕಾರಿ. ಈ ಗಿಡದ ಎಲೆಗಳು ಮತ್ತು ಸುವಾಸನೆಯು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಅಲ್ಲದೆ ಬೇವಿನ ಗಿಡ  ಮನೆಯ ವಾತಾವರಣವನ್ನು ತಾಜಾ ಮತ್ತು ಸ್ವಚ್ಛವಾಗಿರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನ ಕುಟುಂಬದ ನಿಗೂಢ ಸಾವಿಗೆ ಕಲ್ಲಂಗಡಿ ಕಾರಣವೇ? ಇಲ್ಲಿದೆ ಅಸಲಿ ಸಂಗತಿ – Kannada News | Mumbai family deaths Mystery Deepens No adulteration in watermelon says FDA crime news in kannada

ಮುಂಬೈ, ಮೇ 2: ಮುಂಬೈನ ಗಂಡ, ಹೆಂಡತಿ, ಇಬ್ಬರು ಮಕ್ಕಳು ರಾತ್ರಿ ಕಲ್ಲಂಗಡಿ (Watermelon) ತಿಂದ ನಂತರ ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಿನನಿತ್ಯ ತಿನ್ನುವ ಹಣ್ಣು ಕೂಡ ನಮ್ಮ ಆರೋಗ್ಯಕ್ಕೆ ಸುರಕ್ಷಿತವಲ್ಲವಾ? ಎಂಬ ಚರ್ಚೆಗಳು ನಡೆದಿದ್ದವು. ಅದಾದ ಕೆಲವು ದಿನಗಳ ನಂತರ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ (FDA) ಮೃತರ ಮನೆಯಿಂದ ಸಂಗ್ರಹಿಸಿದ ಕಲ್ಲಂಗಡಿ, ಬಿರಿಯಾನಿ, ನೀರು ಮತ್ತು ಮಸಾಲೆಗಳ ಮಾದರಿಗಳ ಮೇಲೆ ನಡೆಸಿದ ಪ್ರಾಥಮಿಕ ಪರೀಕ್ಷೆಗಳಲ್ಲಿ ಕಲಬೆರಕೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ಮುಂಬೈನ ಪೆಂಡಿ ಬಜಾರ್ ಪ್ರದೇಶದ ಅಬ್ದುಲ್ಲಾ ಟೊಕಾಡಿಯಾ (44), ಅವರ ಪತ್ನಿ ನಸ್ರೀನ್ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (12) ರಾತ್ರಿ ಊಟ ಮಾಡಿ, ಕಲ್ಲಂಗಡಿ ಹಣ್ಣು ತಿಂದು ಮಲಗಿದ ನಂತರ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹೊಸ ಮಾಹಿತಿ ಸಿಕ್ಕಿದೆ. ಆ ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ತಿಂದ ನಂತರ ಕುಟುಂಬವು ಅಸ್ವಸ್ಥಗೊಂಡಿರುವಂತೆ ತೋರುತ್ತದೆ. ಇದು ಸಿಹಿ ಅಥವಾ ಬಣ್ಣಕ್ಕಾಗಿ ಹಣ್ಣಿನಲ್ಲಿ ಕೆಲವು ರಾಸಾಯನಿಕಗಳನ್ನು ಬೆರೆಸಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ, ಇದನ್ನು ತನಿಖೆ ಮಾಡಿದ ಆಹಾರ ಮತ್ತು ಔಷಧ ಆಡಳಿತ (FDA) ಅವರ ಮನೆಯಲ್ಲಿ ಇದ್ದ ಕಲ್ಲಂಗಡಿಯಿಂದ ಹಿಡಿದು ಬೇಯಿಸಿದ ಅನ್ನ ಮತ್ತು ಮಸಾಲೆಗಳವರೆಗೆ ಎಲ್ಲವನ್ನೂ ಪರಿಶೀಲಿಸಿತು.

ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ಆದರೆ, ಆ ಪರೀಕ್ಷೆಯಲ್ಲಿ ಹಣ್ಣಿನ ಬಣ್ಣ, ಸಿಹಿ ಹೆಚ್ಚಿಸಲು ಯಾವುದೇ ಕೃತಕ ಬಣ್ಣ ನೀಡುವ ವಸ್ತುಗಳು ಅಥವಾ ರಾಸಾಯನಿಕವನ್ನು ಸೇರಿಸಿಲ್ಲ ಎಂದು ದೃಢಪಟ್ಟಿದೆ. ಇದು ಈ ಪ್ರಕರಣದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದಲ್ಲದೆ, ಮೃತರ ಶವಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮೃತರ ಪ್ರಮುಖ ಅಂಗಗಳಾದ ಮೆದುಳು, ಹೃದಯ ಮತ್ತು ಕರುಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಸಾಮಾನ್ಯ ಫುಡ್ ಪಾಯಿಸನಿಂಗ್ ಅಲ್ಲ. ದೇಹದ ಎಲ್ಲಾ ಪ್ರಮುಖ ಅಂಗಗಳು ಒಂದೇ ಸಮಯದಲ್ಲಿ ಬಣ್ಣವನ್ನು ಬದಲಾಯಿಸಲು ಯಾವುದಾದರೂ ವಿಷಕಾರಿ ವಸ್ತುವು ದೇಹದಾದ್ಯಂತ ರಕ್ತದ ಮೂಲಕ ಬಹಳ ಬೇಗನೆ ಹರಿಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಈ ತನಿಖೆಯಲ್ಲಿನ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ ಎಂಬ ಮಾದಕ ವಸ್ತುವಿನ ಅಂಶಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ಇದು ಈ ಪ್ರಕರಣವನ್ನು ಸಂಪೂರ್ಣವಾಗಿ ವಿಭಿನ್ನ ದಿಕ್ಕಿನತ್ತ ಕೊಂಡೊಯ್ದಿದೆ. ಇದು ಆತ್ಮಹತ್ಯೆಯೋ, ಪ್ಲಾನ್ ಮಾಡಿ ಮಾಡಲಾದ ಕೊಲೆಯೋ ಅಥವಾ ಅನಿರೀಕ್ಷಿತವಾಗಿ ನಡೆದ ಘಟನೆಯೋ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ನೀರಿನ ಮಾದರಿಗಳ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ. ಆ ಮನೆಯಲ್ಲಿದ್ದ ಬೇಯಿಸಿದ ಮಾಂಸದ ಮಾದರಿಗಳನ್ನು ಪ್ರೋಟೀನ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇತರ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಯಾವುದೇ ಬ್ಯಾಕ್ಟೀರಿಯಾದ ಸೋಂಕುಗಳು ಅಥವಾ ಪತ್ತೆಯಾಗದ ವಿಷಕಾರಿ ಅಂಶಗಳು ಇವೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ವಿವರವಾದ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ. ಪೂರ್ಣ ವಿಧಿವಿಜ್ಞಾನ ವರದಿ ಹೊರಬಂದ ನಂತರವೇ ಆ ನಾಲ್ವರು ಜೀವಗಳನ್ನು ಬಲಿ ತೆಗೆದುಕೊಂಡ ಹಸಿರು ವಿಷ ಯಾವುದು ಎಂಬ ನಿಗೂಢ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ – Kannada News | Vinay Kulkarni Disqualified as MLA: Official Order Issued Following Life Imprisonment in Yogesh Gowda Murder Case

ವಿನಯ್ ಕುಲಕರ್ಣಿ ಹಾಗೂ ವಿಧಾನಸೌಧImage Credit source: tv9

ಬೆಂಗಳೂರು, ಮೇ 2: ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಜಿದ್ದಾಜಿದ್ದಿನ ನಂತರ, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಶನಿವಾರ ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ ಈ ಅನರ್ಹತೆ ಆದೇಶವನ್ನು ಹೊರಡಿಸಲಾಗಿದೆ. ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಯಾದಲ್ಲಿ ಅವರು ತಕ್ಷಣವೇ ಶಾಸಕ ಸ್ಥಾನಕ್ಕೆ ಅನರ್ಹರಾಗುತ್ತಾರೆ.

ಬಿಜೆಪಿ ಆರೋಪ ಮತ್ತು ಆದೇಶ

ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ನಂತರವೂ ವಿಧಾನಸಭೆ ಸಚಿವಾಲಯ ಅನರ್ಹತೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಗಂಭೀರವಾಗಿ ಆರೋಪಿಸಿತ್ತು. ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಲು ಸರ್ಕಾರ ಸಮಯಾವಕಾಶ ಮಾಡಿಕೊಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಇದೀಗ ಎಲ್ಲಾ ಆಸರೆಗಳಿಗೆ ತೆರೆ ಬಿದ್ದಿದ್ದು, ಅಧಿಕೃತವಾಗಿ ವಿನಯ್ ಕುಲಕರ್ಣಿ ಮಾಜಿ ಶಾಸಕರಾಗಿದ್ದಾರೆ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

Published On – 5:46 pm, Sat, 2 May 26

Source link

‘ಸತ್ಯಕ್ಕೆ ಜಯವಾಗಿದೆ’: ಮರು ಮತ ಎಣಿಕೆಯಲ್ಲಿ ಗೆಲುವು ಬೆನ್ನಲ್ಲೇ ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು – Kannada News | Sringeri Postal Ballot Recount: MLA TD Rajegowda Wins, Watch What He Said After Victory

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ, ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Vasthu Tips: ಮನೆಯ ಮುಂದೆ ಮಾವಿನ ಮರವಿದ್ದರೆ ಏನಾಗುತ್ತೆ? ವಾಸ್ತು ಶಾಸ್ತ್ರದ ಈ ಸತ್ಯ ನಿಮಗೆ ಗೊತ್ತಿರಲಿ! – Kannada News | Vastu for Mango Tree: Plant Right or Face Home Troubles

ಮನೆಯ ಮುಂದೆ ಮಾವಿನ ಮರವಿದ್ದರೆ ಏನಾಗುತ್ತೆ?

ವಾಸ್ತು ಶಾಸ್ತ್ರವು ಮನೆಯ ಪ್ರತಿಯೊಂದು ದಿಕ್ಕು ಮತ್ತು ವಸ್ತುವಿನ ಬಗ್ಗೆ ವಿಶೇಷ ನಿಯಮಗಳನ್ನು ಹೊಂದಿದೆ. ವಿಶೇಷವಾಗಿ ಮನೆಯ ಸುತ್ತಮುತ್ತ ಬೆಳೆಸುವ ಮರಗಿಡಗಳು ಕುಟುಂಬದ ಸದಸ್ಯರ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅನೇಕ ಜನರು ತಾಜಾ ಗಾಳಿ ಮತ್ತು ರುಚಿಕರವಾದ ಹಣ್ಣುಗಳಿಗಾಗಿ ಮನೆಯ ಮುಂದೆಯೇ ಮಾವಿನ ಮರಗಳನ್ನು ನೆಡುತ್ತಾರೆ. ಮಾವಿನ ಎಲೆಗಳು ಮತ್ತು ಹಣ್ಣುಗಳು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಶುಭವೆಂದು ಪರಿಗಣಿತವಾಗಿರುವುದರಿಂದ, ಇದನ್ನು ಮನೆಯ ಮುಂದೆ ಬೆಳೆಸುವುದು ಒಳ್ಳೆಯದು ಎಂಬ ನಂಬಿಕೆ ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ದೃಷ್ಟಿಕೋನದಲ್ಲಿ ಇದು ಯಾವಾಗಲೂ ಶುಭಕರವಲ್ಲ.

ಮನೆಯ ಮುಂದೆ ಮಾವಿನ ಮರ ಅಶುಭ ಏಕೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂಭಾಗದಲ್ಲಿ ಮಾವಿನ ಮರ ಇರುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಮರದ ನೆರಳು ಮನೆಯ ಮೇಲೆ ಬೀಳುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎಂದು ವಿದ್ವಾಂಸರು ಎಚ್ಚರಿಸುತ್ತಾರೆ. ಮಾವಿನ ಮರದ ನೆರಳು ಮನೆಯ ಮೇಲೆ ಬಿದ್ದರೆ ಅದು ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳಬಹುದು ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವನ್ನು ಹೆಚ್ಚಿಸಬಹುದು. ಅಲ್ಲದೆ, ಮನೆಯ ಮುಖ್ಯ ದ್ವಾರದ ಎದುರೇ ದೊಡ್ಡ ಮರವಿದ್ದರೆ ಅದು ಮನೆಗೆ ಬರಬೇಕಾದ ಸಕಾರಾತ್ಮಕ ಶಕ್ತಿ ಮತ್ತು ಸೂರ್ಯನ ಬೆಳಕನ್ನು ತಡೆಯುತ್ತದೆ, ಇದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು.

ಕುಟುಂಬದ ಮೇಲೆ ಉಂಟಾಗುವ ಪರಿಣಾಮಗಳು:

ಮನೆಯ ಮುಂದೆ ಮಾವಿನ ಮರವಿದ್ದರೆ ಅದು ಆರ್ಥಿಕ ಸಂಕಷ್ಟಗಳಿಗೆ ದಾರಿಯಾಗಬಹುದು ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಕೇವಲ ಹಣಕಾಸಿನ ಸಮಸ್ಯೆ ಮಾತ್ರವಲ್ಲದೆ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಮತ್ತು ಮಾನಸಿಕ ನೆಮ್ಮದಿ ಕಡಿಮೆಯಾಗಲು ಕಾರಣವಾಗಬಹುದು ಎಂಬ ನಂಬಿಕೆಯಿದೆ. ಕೆಲವು ವಿದ್ವಾಂಸರ ಪ್ರಕಾರ, ಮಾವಿನ ಮರವು ಹೆಚ್ಚಿನ ಸಂಖ್ಯೆಯ ಕೀಟಗಳನ್ನು ಆಕರ್ಷಿಸುವುದರಿಂದ ಮತ್ತು ಅದರ ನೆರಳು ನಿರಂತರವಾಗಿ ಮನೆಯ ಮೇಲಿರುವುದರಿಂದ ದುಷ್ಟ ಶಕ್ತಿಗಳ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಮನೆಯ ನೇರ ಮುಂಭಾಗದಲ್ಲಿ ಈ ಮರವನ್ನು ಬೆಳೆಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸೂಕ್ತ ದಿಕ್ಕು ಮತ್ತು ಪರಿಹಾರಗಳು:

ಮಾವಿನ ಮರವು ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿರುವುದರಿಂದ, ಅದನ್ನು ನೆಡಲು ಬಯಸುವವರು ಸರಿಯಾದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಂಗಳದಲ್ಲಿ ಮಾವಿನ ಮರವನ್ನು ನೆಡಬೇಕೆಂದರೆ ಅದನ್ನು ‘ನೈಋತ್ಯ’ (South-West) ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಮರವನ್ನು ನೆಡುವಾಗ ಅದು ಮನೆಯ ಗೋಡೆಯಿಂದ ಸ್ವಲ್ಪ ದೂರವಿರಲಿ ಮತ್ತು ಅದರ ನೆರಳು ಮನೆಯ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಈ ರೀತಿ ಸರಿಯಾದ ದಿಕ್ಕಿನಲ್ಲಿ ಮರವನ್ನು ಬೆಳೆಸುವುದರಿಂದ ಮಾವಿನ ಮರದ ಪವಿತ್ರತೆ ಮತ್ತು ವಾಸ್ತು ಎರಡನ್ನೂ ಸಮತೋಲನಗೊಳಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸತ್ಯಕ್ಕೆ ಜಯವಾಗಿದೆ’: ಮರು ಮತ ಎಣಿಕೆಯಲ್ಲಿ ಗೆಲುವು ಬೆನ್ನಲ್ಲೇ ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು – Kannada News | Sringeri Postal Ballot Recount: MLA TD Rajegowda Wins, Watch What He Said After Victory

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ, ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version