4 ಕೋಟಿ ರೂ. ಶುಲ್ಕ ವಿನಾಯಿತಿ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಹಾಸನ ಒಕ್ಕಲಿಗರ ಸಂಘ – Kannada News | Hassan vokkaligara sangha thanks To Karnataka Congress Government for RS 4 Crore exemption

ಹಾಸನ, (ಫೆಬ್ರವರಿ 17): ಹಾಸನ ಜಿಲ್ಲಾ ಒಕ್ಕಲಿಗರ ಸಂಘದ (Hassan vokkaligara sangha) ನಿವೇಶನಕ್ಕೆ ‌ಸರ್ಕಾರದಿಂದ 4 ಕೋಟಿ ರೂಪಾಯಿ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಒಕ್ಕಲಿಗರ ಸಂಘ ಸುದ್ದಿಗೋಷ್ಠಿ ನಡೆಸಿದ್ದು, ನಿವೇಶನ ಖರೀದಿ‌ ದರ ರಿಯಾಯಿತಿಗೆ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಗೆ ಧನ್ಯವಾದ ತಿಳಿಸಿದೆ. ಮೂರು ವರ್ಷ ದ ಹಿಂದೆ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಸರ್ಕಾರ ಒಂದು ಎಕರೆ ಭೂಮಿ ನೀಡಿತ್ತು. ಇದಕ್ಕೆ ಭೂಮಿಯ ಶೇಕಡಾ 10 ದರ ನೀಡಿ ಖರೀದಿ ಮಾಡಿತ್ತು. ಈಗ ಈ ಒಂದು ಎಕರೆ ನಿವೇಶನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದೆ. ಹೀಗಾಗಿ ಒಕ್ಕಲಿಗರ ಸಂಘಕ್ಕೆ ನೆರವು ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧಾರವಾಡ ಗುಳೇದಕೊಪ್ಪ ಜಾತ್ರೆ 2026: ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರೆಗೆ ತೆರೆ – Kannada News | Dharwad Guledakoppa Fair: Historic Shivaratotsava with Aerial Floral Tribute and Sandalwood Stars

ಧಾರವಾಡ, ಫೆ.17: ಗುಳೇದಕೊಪ್ಪ ಗ್ರಾಮದಲ್ಲಿ ಫೆಬ್ರವರಿ 12ರಿಂದ 16ರವರೆಗೆ ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರೆಗೆ ಭಕ್ತಿಪೂರ್ವಕ ತೆರೆ ಬಿದ್ದಿದೆ. ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದಲ್ಲಿ ಮೊದಲ ಬಾರಿಗೆ ನೂತನ ಶಿವರಥೋತ್ಸವ ನೆರವೇರಿತು.ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿ,ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುನವಳ್ಳಿಯ ಶಿವಪುತ್ರ ಮಹಾಸ್ವಾಮಿಗಳು, ಕಾದ್ರೋಳ್ಳಿಯ ಗುರುಪುತ್ರ ಮಹಾರಾಜರು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದರು. ಸ್ಯಾಂಡಲ್‌ವುಡ್ ನಟ ಶರಣ್ ಮತ್ತು ನಟಿ ಮಾಲಾಶ್ರೀ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. ರಾಜಾಸ್ಥಾನ, ಒರಿಸ್ಸಾ ಸೇರಿದಂತೆ ವಿವಿಧ ಹೊರರಾಜ್ಯಗಳ ಕಲಾತಂಡಗಳು ಮತ್ತು ಸ್ಥಳೀಯ ಕಲಾವಿದರು ತಮ್ಮ ಪ್ರದರ್ಶನದ ಮೂಲಕ ಜಾತ್ರೆಯ ಮೆರುಗು ಹೆಚ್ಚಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿರ ದಿನಗಳ ಸಂಭ್ರಮವಲ್ಲ, 1000 ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ: ಬಿಜೆಪಿ ವ್ಯಂಗ್ಯ – Kannada News | Haveri BJP Leaders Mocks Karnataka Congress government 1000 days Celebration

ಹಾವೇರಿ, (ಫೆಬ್ರವರಿ 17): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government)  ಸಾವಿರ ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ (Haveri) ಅದ್ದೂರಿಯಾಗಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಒಂದು ಲಕ್ಷ ಜನರಿಗೆ ಭೂ ಗ್ಯಾರಂಟಿ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ಇದು ಸರ್ಕಾರದ ಸಮಾವೇಶ ಆಗಿರಲಿಲ್ಲ. ಬದಲಾಗಿ ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಸಮಾವೇಶ ಆಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಾವಿರ ದಿನಗಳ ಆರ್ಥಿಕ ದಿವಾಳಿಯ ಸಂಕೇತ. ಪೌತಿ ಖಾತೆಗಳಿಗೆ ಪಟ್ಟಾ ಕೊಟ್ಟಿದ್ದಾರೆ.ಅಪ್ಪನ ಆಸ್ತಿ ಮಗನಿಗೆ ಹೋಗುತ್ತದೆ. ಅದನ್ನು ಇವರು ಹಕ್ಕುಪತ್ರ ಕೊಟ್ಟಿದ್ದಾರೆ. ದೂದಿಹಳ್ಳಿ, ಚನ್ನಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಐದರಿಂದ ಹತ್ತು ಸಾವಿರದವರೆಗೆ ಹಣ ತೆಗೆದುಕೊಂಡು ಪಟ್ಟಾ ಕೊಟ್ಟಿದ್ದಾರೆ. 40 ಜನರನ್ನು ಕರೆತರಲು ಐದು ಬಸ್ ಗಳು ಹೋಗಿವೆ. ಶಾಲಾ ಬಸ್ ಗಳನ್ನೂ ತೆಗೆದುಕೊಂಡಿದ್ದರು. ಶಾಲಾ ಶಿಕ್ಷಕರನ್ನು ಈ ಸಮಾವೇಶಕ್ಕೆ, ಇಡಿ ಸರಕಾರಿ ಅಧಿಕಾರಿಗಳನ್ನು ಸಮಾವೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ರಟ್ಟೀಹಳ್ಳಿ ಐಬಿ ಕೆಲಸವೇ ಆಗಿಲ್ಲ. ಹೊರಗಡೆ ಸುಣ್ಣ ಹೊಡೆದು ಚಂದವಾಗಿ ಕಾಣುವಂತೆ ಮಾಡಿ ಅದನ್ನು ಉದ್ಘಾಟನೆ ಮಾಡಿದ್ದಾರೆ. ಶಾಸಕರು ಕಲ್ಲಲ್ಲಿ ಹೆಸರು, ಕತ್ರಿ ಪ್ರಯೋಗ ಮಾಡಿದರೆ ಸಾಕು ಅಂತಾ ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಸಾರಿಗೆ ಇಲಾಖೆ ಬಸ್ ಅಲ್ಲದೆ, ಖಾಸಗಿ ಶಾಲೆಯ ಬಸ್ ಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಶಾಲೆಗೆ ರಜೆ ಕೊಟ್ಟಿದ್ದಾರೆ. ಒಂದೊಂದು ಬಸ್ ನಲ್ಲಿ ಕೇವಲ 8-10 ಜನರು ಬಂದಿದ್ದಾರೆ. ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಸಕ್ರಮ, ಬಗರ್‌ ಹುಕುಂಗೆ ಪಟ್ಟಾ ಕೊಟ್ಟರೆ ತಕರಾರಿಲ್ಲ. ತರಾತುರಿಯಲ್ಲಿ ಸಮಾವೇಶ‌ ಮಾಡಿದ್ದು ಏಕೆ? ತಪ್ಪು ಇದ್ದಲ್ಲಿ ಆರೋಪ ಮಾಡಲೇಬೇಕಲ್ವಾ?ಪಟ್ಟಾ ಕೊಟ್ಟಿದ್ದು ತಪ್ಪು ಅಂತಾ ನಾವು ಹೇಳಿಲ್ಲ.ದೊಡ್ಡ ಸಂಖ್ಯೆ ತೋರಿಸಬೇಕು ಅಂತಾ ಪೌತಿ ಆದವರಿಗೂ ಪಟ್ಟಾ ಕೊಟ್ಟಿದ್ದಾರೆ.ಇ-ಸ್ವತ್ತು ಕೊಡಲು ಸಿಎಂ ಅವರೇ ಬರಬೇಕಾ? ಸರಕಾರಕ್ಕೆ ಇನ್ನೆಷ್ಟು ದಿನ ಆಯುಷ್ಯ ಎಂಬುದು ಗೊತ್ತಿಲ್ಲ. ಸುಳ್ಳೇ ಅವರೆ ಮನೆ ದೇವರು, ಸಿಎಂ ಅವರಿಂದ ಹಿಡಿದು ಎಲ್ಲರೂ ಸುಳ್ಳನ್ನೇ ಹೇಳುತ್ತಾ ಹೊರಟಿದ್ದಾರೆ. ಇಡಿ ಸರಕಾರ, ಆಡಳಿತ ಸತ್ತು ಹೋಗಿದೆ. ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗ ಹಬ್ಬವಾಗಿದೆ. ಅಲ್ಲದೇ ನ್ಯಾಯಾಲಯದಲ್ಲಿ ಸ್ಟೇ ಇರೋ ಪ್ರಕರಣಗಳಿಗೆ ಹಕ್ಕು ಪತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಟ್ನಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಹಾವೇರಿಯಲ್ಲಿ ಅದ್ದೂರಿಯಾಗಿ ಮಾಡಿ ಸರ್ಕಾರದ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಸಮಾವೇಶ ಅಲ್ಲಾ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪುರುಷರಲ್ಲಿ ವಯಸ್ಸಾದಂತೆ ಕಡಿಮೆಯಾಗುತ್ತಿರುವ ವೈ ಕ್ರೋಮೋಸೋಮ್ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆಯೇ? – Kannada News | Men’s Health Alert: Y Chromosome Vanishing

ಬಹುಕಾಲದಿಂದ ವಿಜ್ಞಾನಿಗಳು ವಯಸ್ಸಾದ ಹಾಗೆ ಪುರುಷರ ದೇಹದ ಕೆಲವು ಕೋಶಗಳಲ್ಲಿ ವೈ ಕ್ರೋಮೋಸೋಮ್ (Y Chromosome) ಅಥವಾ ವೈ ವರ್ಣತಂತು ಕಡಿಮೆಯಾಗುತ್ತಿರುವುದು ಯಾವುದೇ ರೀತಿಯ ದೊಡ್ಡ ಪರಿಣಾಮ ಉಂಟುಮಾಡುವುದಿಲ್ಲ ಎಂದು ಭಾವಿಸಿದ್ದರು. ಈ ವೈ ಕ್ರೋಮೋಸೋಮ್‌ನಲ್ಲಿ ಪುರುಷ ಲಿಂಗ ನಿರ್ಧಾರಕ್ಕೆ ಸಂಬಂಧಿಸಿದ ಕೆಲವು ಜೀನ್ ಗಳು ಮಾತ್ರ ಇರುವುದರಿಂದ, ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಆಗಲಾರದು ಎಂದು ಅಂದುಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅಧ್ಯಯನಗಳು ಇದಕ್ಕೆ ಬೇರೆ ರೀತಿಯ ಚಿತ್ರಣವನ್ನೇ ನೀಡುತ್ತಿವೆ. ಹೌದು, ವೈ ಕ್ರೋಮೋಸೋಮ್ ಕಡಿಮೆಯಾಗುವುದಕ್ಕೂ ಹೃದಯರೋಗ, ಕ್ಷಯ ರೋಗಗಳು, ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೂ ಸಂಬಂಧವಿದೇ ಎಂಬುದು ಸಾಕ್ಷ್ಯಗಳಿಂದ ದೃಢವಾಗಿದೆ. ಇದರಿಂದ ಪುರುಷರ ಆಯುಷ್ಯ ಕಡಿಮೆಯಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿಯುವುದು ಅನಿವಾರ್ಯವಾಗಿದೆ.

ಹೊಸ ತಂತ್ರಜ್ಞಾನಗಳ ಮೂಲಕ Y ಕ್ರೋಮೋಸೋಮ್‌ನ ಜೀನ್ ಗಳನ್ನು ಪತ್ತೆಹಚ್ಚುವಲ್ಲಿ ಪ್ರಗತಿ ಕಂಡುಬಂದಿದೆ. ಇದರ ಫಲವಾಗಿ ಪುರುಷರಿಗೆ ವಯಸ್ಸಾದಂತೆ ದೇಹಕೋಶಗಳಲ್ಲಿ Y ನಷ್ಟ ಹೆಚ್ಚಾಗಿರುವುದು ಕಂಡುಬಂದಿದೆ. 60 ವರ್ಷದ ಪುರುಷರಲ್ಲಿ ಸುಮಾರು 40% ಜನರಲ್ಲಿ Y ಕ್ರೋಮೋಸೋಮ್‌ ಕಣ್ಮರೆಯಾಗುತ್ತಿರುವುದು ಕಂಡುಬಂದಿದೆ. ಇನ್ನು 90 ವರ್ಷದವರಲ್ಲಿ ಇದು 57% ರಷ್ಟು ಹೆಚ್ಚುತ್ತದೆ. ಧೂಮಪಾನ ಮತ್ತು ಕಾರ್ಸಿನೋಜೆನ್‌ಗಳಿಗೆ (ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳು) ಒಡ್ಡಿಕೊಳ್ಳುವುದು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. Y ಕ್ರೋಮೋಸೋಮ್‌ ಕಡಿಮೆಯಾಗುವುದು ಎಲ್ಲಾ ಕೋಶಗಳಲ್ಲಿಯೂ ಆಗುವುದಿಲ್ಲ. ಕೆಲವು ಕೋಶಗಳು ಮಾತ್ರ Y ಕಳೆದುಕೊಳ್ಳುತ್ತವೆ. ಹೀಗಾಗಿ ದೇಹದಲ್ಲಿ Y ಇರುವ ಮತ್ತು ಇಲ್ಲದ ಕೋಶಗಳ ಮಿಶ್ರಣ (ಮೋಸಾಯಿಕ್ ಸ್ಥಿತಿ) ಉಂಟಾಗುತ್ತದೆ. ಆದರೆ ಪ್ರಯೋಗಾಲಯದಲ್ಲಿ Y ಇಲ್ಲದ ಕೋಶಗಳು ವೇಗವಾಗಿ ಬೆಳೆಯುವುದನ್ನು ಗಮನಿಸಲಾಗಿದ್ದು ಇದು ಗಡ್ಡೆಗಳು (ಟ್ಯೂಮರ್‌ಗಳು) ಬೆಳೆಯಲು ಸಹಾಯಕವಾಗಬಹುದು.

ಇದನ್ನೂ ಓದಿ: ಬಾಯಿಯ ಆರೋಗ್ಯಕ್ಕೂ ಹೃದಯಕ್ಕೂ ಸಂಬಂಧವಿದೆಯೇ; ಈ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಅನುಪಮಾ ವಿ. ಹೆಗ್ಡೆ

ಈ ಹಿಂದೆ Y ಕ್ರೋಮೋಸೋಮ್‌ ಲಿಂಗ ನಿರ್ಧಾರ, ವೀರ್ಯ ಉತ್ಪಾದನೆಗಳಿಗೆ ಸಂಬಂಧಿಸಿದೆ. ಆದ್ದರಿಂದ ದೇಹದ ಇತರ ಕೋಶಗಳಿಗೆ ಇದು ಅಗತ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಇವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದದೆ.

ಹೃದಯರೋಗ: ಜರ್ಮನಿಯಲ್ಲಿ ನಡೆದ ದೊಡ್ಡ ಅಧ್ಯಯನವು, 60 ವರ್ಷ ಮೇಲ್ಪಟ್ಟ ಪುರುಷರಲ್ಲಿ Y ನಷ್ಟ ಹೆಚ್ಚಿರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ ಎಂದು ತೋರಿಸಿದೆ.

ಅಲ್ಜೈಮರ್: ಈ ರೋಗಿಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಾಗಿರುವ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.

ಮೂತ್ರಪಿಂಡ ಸಮಸ್ಯೆ: Y ಕ್ರೋಮೋಸೋಮ್‌ ಕ್ಷೀಣಿಸಿದಾಗ ಮೂತ್ರಪಿಂಡ ಸಮಸ್ಯೆಗಳು ಹೆಚ್ಚಾಗಿ ಕಂಡುಬರಬಹುದು.

ಕ್ಯಾನ್ಸರ್: ಅನೇಕ ರೀತಿಯ ಕ್ಯಾನ್ಸರ್ ಕೋಶಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಿರುವುದು ಕಂಡುಬರುತ್ತದೆ.

ಆದರೆ Y ಕ್ರೋಮೋಸೋಮ್‌ ಕಡಿಮೆಯಾಗಿರುವುದೇ ಕಾಯಿಲೆಗೆ ಕಾರಣವೇ? ಅಥವಾ ಕಾಯಿಲೆಯಿಂದಲೇ Y ನಷ್ಟವಾಗುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದೆ ಬರುವಂತಹ ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವುದು ಬಹಳ ಅವಶ್ಯಕವಾಗಿದೆ. ಆಗ ಹೃದಯ ಕಾರ್ಯ, ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಅಪಾಯ ಇವುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನಷ್ಟು ಸ್ಪಷ್ಟವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ – Kannada News | Kaveri Baruah apologies after making baseless allegations on Allu Arjun

ಟಾಲಿವುಡ್ ನಟ ಅಲ್ಲು ಅರ್ಜುನ್ ಬಗ್ಗೆ ಕೆಲವು ಆರೋಪಗಳನ್ನು ಮಾಡಲಾಗಿತ್ತು. ಇತ್ತೀಚೆಗೆ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ್ದ ಕಾವೇರಿ (Kaveri Baruah) ಎಂಬ ಮಹಿಳೆಯೊಬ್ಬರು ಇಲ್ಲಸಲ್ಲದ ಆರೋಪ ಮಾಡಿದ್ದರು. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವಾಗ 42 ನಿಮಯಗಳನ್ನು ಹಾಕಲಾಗುತ್ತದೆ ಎಂದು ಅವರು ಹೇಳಿದ್ದರು. ಆ ನಿಯಮಗಳು ತುಂಬ ವಿಚಿತ್ರವಾಗಿದ್ದವು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಈಗ ಆರೋಪ ಮಾಡಿದ ಮಹಿಳೆಯೇ ಉಲ್ಟಾ ಹೊಡೆದಿದ್ದಾರೆ. ಅಲ್ಲು ಅರ್ಜುನ್ (Allu Arjun) ಬಳಿ ಆಕೆ ಕ್ಷಮೆ ಕೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪಾಡ್​ಕಾಸ್ಟ್​ಗಳು ಸಖತ್ ಜನಪ್ರಿಯವಾಗಿವೆ. ಆದರೆ ವೀವ್ಸ್ ಮತ್ತು ಲೈಕ್ಸ್ ಪಡೆಯುವ ಸಲುವಾಗಿ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕಾವೇರಿ ಎಂಬ ಮಹಿಳೆ ಕೂಡ ಹಾಗಯೇ ಮಾಡಿದ್ದಾರೆ. ಯೂಟ್ಯೂಬ್​​ನಲ್ಲಿ ಸಂದರ್ಶನ ನೀಡಿದ ಅವರು ಅಸಂಬದ್ಧವಾಗಿ ಮಾತನಾಡಿದ್ದರು. ಅದರಿಂದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಬೇಸರ ಆಗಿತ್ತು.

ಕಾವೇರಿ ಹೇಳಿದ್ದೇನು? ‘ದಕ್ಷಿಣದ ಸ್ಟಾರ್ ಹೀರೋಗಳ ಸುತ್ತ ಜನರು ತುಂಬಿಕೊಂಡಿರುತ್ತಾರೆ. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ನಮಗೆ 42 ನಿಮಯಗಳ ಪಟ್ಟಿ ನೀಡಲಾಗಿತ್ತು. ಹಲವು ಮ್ಯಾನೇಜರ್ ಇದ್ದರು. ಅವರು ತುಂಬಾ ಕಟ್ಟುನಿಟ್ಟು. ಸರ್ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ, ಕೈ ಕುಲಕಬೇಡಿ, ಅವರ ಎದುರು ಮೊಬೈಲ್ ಫೋನ್ ಬಳಸಬೇಡಿ ಎಂಬಿತ್ಯಾದಿ ರೂಲ್ಸ್ ಪಟ್ಟಿ ನೀಡಿದ್ದರು’ ಎಂದಿದ್ದಾರೆ ಕಾವೇರಿ.

ಯಾವುದೇ ಆಧಾರ ಇಲ್ಲದೇ ಈ ರೀತಿ ಹೇಳಿಕೆ ನೀಡಿದ್ದರಿಂದ ಅಲ್ಲು ಅರ್ಜುನ್ ತಂಡದವರು ಕಾವೇರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಅದರಿಂದಾಗಿ ಕಾವೇರಿ ಎಚ್ಚೆತ್ತುಕೊಂಡಿದ್ದಾರೆ. ತಾವು ನೀಡಿದ್ದ ಹೇಳಿಕೆಗೆ ಯಾವುದೇ ಆಧಾರ ಇಲ್ಲ, ತಮ್ಮಿಂದ ತಪ್ಪಾಗಿದೆ ಎಂದು ಅವರು ಈಗ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ

‘ನನ್ನ ಹೇಳಿಕೆ ತಪ್ಪಾಗಿದೆ. ಅದಕ್ಕೆ ಯಾವುದೇ ಆಧಾರ ಇಲ್ಲ. 42 ನಿಯಮಗಳು ಇರುವ ಯಾವುದೇ ಪಟ್ಟಿಯನ್ನು ನನಗೆ ಅಲ್ಲು ಅರ್ಜುನ್ ಕಡೆಯವರು ನೀಡಿರಲಿಲ್ಲ. ಮಾತಿನ ಭರದಲ್ಲಿ ನಾನು ಅದನ್ನೆಲ್ಲ ಹೇಳಿದೆ. ಆ ರೀತಿ ಮಾತನಾಡಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಅಲ್ಲು ಅರ್ಜುನ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ’ ಎಂದು ಕಾವೇರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆಯಲ್ಲಿ ಸಾಕುನಾಯಿ ಮೇಲೆ ಕಾರು ಹತ್ತಿಸಿ ಕೊಂದ ಚಾಲಕ; ವಿಡಿಯೋ ವೈರಲ್

ಕಾನ್ಪುರ, ಫೆಬ್ರವರಿ 17: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಾಕು ನಾಯಿಗೆ ಸರಪಳಿ ಹಾಕಿ ಹಿಡಿದುಕೊಂಡು ಮಾಲೀಕ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾ ಇದ್ದರು. ಈ ವೇಳೆ ಅವರು ರಸ್ತೆಬದಿಯಲ್ಲಿ ನಡೆಯುತ್ತಿದ್ದಾಗ, ಕಾರು ಆ ನಾಯಿಯ (Dog) ಮೇಲೆ ಹತ್ತಿಕೊಂಡು ಹೋಗಿದೆ. ಇದರಿಂದ ಆ ನಾಯಿಗೆ ತೀವ್ರವಾಗಿ ಪೆಟ್ಟಾಗಿ ಸಾವನ್ನಪ್ಪಿದೆ. ಕಾರು ಚಾಲಕನ ವಿರುದ್ಧ ಮಾಲೀಕರು ದೂರು ದಾಖಲಿಸಿದ್ದಾರೆ. ಈ ದೃಶ್ಯ ಅಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಕಾರು ಚಾಲಕ ಹಾಗೂ ನಾಯಿಯ ಮಾಲೀಕ ಇಬ್ಬರದ್ದೂ ತಪ್ಪಿದೆ. ಕಾರು ಚಾಲಕ ನಿಧಾನವಾಗಿ ಎಚ್ಚರಿಕೆಯಿಂದ ಕಾರು ಚಲಾಯಿಸಬೇಕಿತ್ತು. ನಾಯಿಯ ಮಾಲೀಕ ಜನಸಂದಣಿ ಇರುವ ರಸ್ತೆಯಲ್ಲಿ ನಾಯಿಯನ್ನು ಕರೆದುಕೊಂಡು ಬರಬಾರದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar arrives at Hassan SP office to give complaint

ಹಾಸನದಲ್ಲಿನ ನಿವೇಶನದ ಗಲಾಟೆಗೆ ಸಂಬಂಧಪಟ್ಟಂತೆ ಯಶ್ ತಾಯಿ (Yash mother) ಪುಷ್ಪಾ ಅರುಣ್ ಕುಮಾರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಎಸ್​​ಪಿ ಕಚೇರಿ ಹೊರಗೆ ಅವರು ಕಾದು ಕುಳಿತಿದ್ದಾರೆ. ಸೈಟ್ ಗಲಾಟೆಯಲ್ಲಿ ಸರಿಯಾಗಿ ತನಿಖೆ ಆಗಿಲ್ಲ ಎಂದು ದೂರು ನೀಡಲು ಅವರು ಬಂದಿದ್ದಾರೆ. ಕ್ರಯಪತ್ರಗಳ ದಾಖಲೆ ಸಮೇತವಾಗಿ ಅವರು ಎಸ್​ಪಿ ಕಚೇರಿಗೆ ಆಗಮಿಸಿದ್ದಾರೆ. ‘ಸೈಟ್ ಗಲಾಟೆಗೆ ಸಂಬಂಧಿಸಿದಂತೆ ತಕ್ಷಣ ದೂರು ನೀಡಿದ್ದೆ. ಹಾಸನ ಬಡಾವಣೆ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ರೌಡಿಸಂ ಮತ್ತು ಭೂ ಮಾಫಿಯಾದವರಿಗೆ ಸಹಕಾರ ನೀಡುತ್ತಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ’ ಎಂದು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಡ್ತಿ ವಿಚಾರಕ್ಕೆ ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಶಿಕ್ಷಕಿ – Kannada News | Bengaluru School Shocker: Principal Teacher Fight, Assault Allegations in Basavanagudi

ಬೆಂಗಳೂರು, ಫೆ.17: ಬಸವನಗುಡಿ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಸ್ತು ಕಲಿಸಬೇಕಾದ ಗುರುಗಳೇ ಕ್ಲಾಸ್​​ ರೂಮ್​​​ನಲ್ಲಿ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಮತ್ತು ಶಿಕ್ಷಕಿ ರೇಷ್ಮಾ ನಡುವೆ ಈ ಗಲಾಟೆ ನಡೆದಿದೆ. ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿ ಶಾಲಾ ಆಡಳಿತ ಮಂಡಳಿಯು ಅವರಿಗೆ ಬಡ್ತಿ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ಇದು ಪ್ರಿನ್ಸಿಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಪ್ರಿನ್ಸಿಪಾಲ್ ಕಡೆಯವರು ಹಾಗೂ ಶಿಕ್ಷಿಕಯ ಕಡೆಯವರು ವಿದ್ಯಾರ್ಥಿಗಳ ಸಮ್ಮುಖದಲ್ಲೇಹೊಡೆದಾಟದ ಹಂತಕ್ಕೆ ತಲುಪಿದ್ದಾರೆ. ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರು ಹೊರಗಿನ ಜನರನ್ನು ಕರೆಸಿ ತನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಶಿಕ್ಷಕಿ ರೇಷ್ಮಾ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ – Kannada News | Reliance Jio presents various AI models from Jio Stacks to Jio AI Home at India AI Summit

ನರೇಂದ್ರ ಮೋದಿ ಮತ್ತು ಆಕಾಶ್ ಅಂಬಾನಿ

ನವದೆಹಲಿ, ಫೆಬ್ರುವರಿ 17: ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ಜಿಯೋ ಸಂಸ್ಥೆ (Reliance Jio) ಎಐ ಸೆಕ್ಟರ್​ನಲ್ಲಿ ಪ್ರಬಲ ಹೆಜ್ಜೆಗಳನ್ನು ಇಡುತ್ತಿದೆ. ಶಿಕ್ಷಣ, ಆರೋಗ್ಯ, ಡಿಜಿಟಲ್ ಹಾಗು ಇತರೆ ಸೆಕ್ಟರ್​ಗಳಲ್ಲಿ ವಿವಿಧ ಎಐ ಮಾಡಲ್​ಗಳನ್ನು ಜಿಯೋ ರೂಪಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್​ನ (India AI Impact Summit) ಮೊದಲ ದಿನ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್​ನ ಛೇರ್ಮನ್ ಆಕಾಶ್ ಅಂಬಾನಿ (Akash Ambani) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಯೋದ ವಿವಿಧ ಎಐ ಆವಿಷ್ಕಾರಗಳನ್ನು ಪರಿಚಯಿಸಿದರು. ಜಿಯೋ ಎಐ ಸ್ಟ್ಯಾಕ್​ನಿಂದ ಹಿಡಿದು ಜಿಯೋ ಆರೋಗ್ಯ ಎಐವರೆಗೆ ವಿವಿಧ ಎಐ ಮಾಡಲ್​ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸಿದರು.

ಜಿಯೋ ಎಐ ಸ್ಟ್ಯಾಕ್

ಇದು ಎಐ ಫೌಂಡೇಶನಲ್ ಲೇಯರ್. ವಿವಿಧ ಆ್ಯಪ್​ಗಳು ಮತ್ತು ಸರ್ವಿಸ್​ಗಳಲ್ಲಿ ಎಐ ಅಳವಡಿಕೆ ಹೆಚ್ಚಿಸಲು ಸಾಧ್ಯವಾಗಿಸುವ ತಳಹದಿ ಇದು ಎನ್ನಲಾಗಿದೆ.

ಜಿಯೋ ಸಂಸ್ಕೃತಿ ಎಐ

ಇದು ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ನೆರವಾಗುತ್ತದೆ. ಪಾರಂಪರಿಕ ಗ್ರಂಥಗಳ ಡಿಜಿಟಲೀಕರಣ, ಭಾಷಾಂತರ ಇತ್ಯಾದಿ ಎಐ ಶಕ್ತ ಸಾಧನಗಳ ನಿಯೋಜನೆಗೆ ಒತ್ತು ಕೊಡಲಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ಜಿಯೋ ಆರೋಗ್ಯ ಎಐ

ಇದು ಹೆಲ್ತ್ ಸೆಕ್ಟರ್​ನಲ್ಲಿ ಕ್ರಾಂತಿ ತರಬಲ್ಲ ಎಐ ಮಾಡಲ್. ವಿಶೇಷವಾಗಿ ರೂಪಿಸಲಾದ ಸ್ಮಾರ್ಟ್ ಮಿರರ್ ಮುಂದೆ ವ್ಯಕ್ತಿ ನಿಂತಾಗ ಅವರ ಕಣ್ಣು, ಚರ್ಮ ಹಾಗು ಇತರೆ ಸೂಚನೆಗಳ ಆಧಾರದ ಮೇಲೆ ರೀಡಿಂಗ್ ತೆಗೆದುಕೊಳ್ಳುತ್ತದೆ. ಈ ದತ್ತಾಂಶವನ್ನು ವಿಶ್ಲೇಷಿಸಿ, ಆ ವ್ಯಕ್ತಿ ಪ್ರಾಥಮಿಕ ಹೆಲ್ತ್ ಅನಾಲಿಸಿಸ್ ಮಾಡಿ ರಿಪೋರ್ಟ್ ಕೊಡುತ್ತದೆ. ಅಗತ್ಯ ಬಿದ್ದರೆ ವ್ಯಕ್ತಿಯನ್ನು ವೈದ್ಯರ ಸಮಾಲೋಚನೆಗೆ ಶಿಫಾರಸು ಮಾಡುತ್ತದೆ ಈ ಎಐ ಮಾಡಲ್. ಪ್ರಾಥಮಿಕ ರೋಗ ತಪಾಸಣೆ ಮತ್ತು ಸಲಹೆಯ ಕಾರ್ಯವನ್ನು ಈ ಎಐ ಮಾಡಬಲ್ಲುದು. ಇದರಿಂದ ರೋಗಿಗೆ ಸಾಕಷ್ಟು ವೆಚ್ಚ ಉಳಿತಾಯ ಸಾಧ್ಯವಾಗುತ್ತದೆ.

ಜಿಯೋ ಶಿಕ್ಷಾ ಎಐ

ಇದು ಶಿಕ್ಷಣವನ್ನು ಎಲ್ಲರಿಗೂ ದಕ್ಕುವಂತೆ ಮಾಡಲು ನೆರವಾಗುವ ಎಐ ಮಾಡಲ್. ವಿದ್ಯಾರ್ಥಿಗೆ ವೈಯಕ್ತೀಕರಿಸಿದ ಕಲಿಕಾ ಮಾರ್ಗಗಳನ್ನು ಇದು ನೀಡುತ್ತದೆ. ಕಲಿಕೆಯನ್ನು ಸುಲಭವಾಗಿಸುತ್ತದೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ಜಿಯೋ ಎಐ ಹೋಮ್

ಮನೆಯೊಳಗಿನ ಪರಿಸರಕ್ಕೆ ಎಐ ಅನ್ನು ಅಳವಡಿಸಿ, ಸ್ಮಾರ್ಟ್ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಜಿಯೋ ಎಐ ಹೋಮ್. ಮನೆಯೊಳಗಿನ ವಿವಿಧ ಸಾಧನಗಳು ಇಂಟರ್​ಕನೆಕ್ಟ್ ಆಗಿರುತ್ತವೆ. ಟಿವಿ, ಫ್ರಿಡ್ಜ್, ಲೈಟ್ ಇತ್ಯಾದಿ ಎಲ್ಲವನ್ನೂ ಸ್ಮಾರ್ಟ್ ಆಗಿ ನಿಯಂತ್ರಿಸಲು, ನಿಭಾಯಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಯೌವನದಲ್ಲಿ ಈ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು – Kannada News | Chanakya Niti: Do these things today to make old age happy

ಯೌವನದಲ್ಲಿರುವಾಗ ಮಾಡುವ ಕೆಲವೊಂದು ತಪ್ಪುಗಳು ವೃದ್ಧಾಪ್ಯವನ್ನು (old age) ನರಕ ಮಾಡುತ್ತಂತೆ. ಹೌದು ಇಂದು ಮಾಡುವ ತಪ್ಪಿನಿಂದ ಕೊನೆಗಾಲದಲ್ಲಿ ಮಕ್ಕಳ ಪ್ರೀತಿಯೂ ಸಿಗೋದಿಲ್ಲ, ನೆಮ್ಮದಿಯೂ ಇರೋಲ್ಲ, ಮುಖ್ಯವಾಗಿ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವೃದ್ಧಾಪ್ಯವು ಶಾಂತಿ ಮತ್ತು ಸಂತೋಷದಿಂದ ಕೂಡಿರಬೇಕೆಂದರೆ ಯೌನದಲ್ಲಿರುವಾಗ ಈ ಒಂದಷ್ಟು ಕೆಲಸಗಳನ್ನು ತಪ್ಪದೆ ಮಾಡಲೇಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಗಿದ್ರೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ಮುಂಚಿತವಾಗಿಯೇ ಏನೆಲ್ಲಾ ಮಾಡಬೇಕು ಎಂಬುದನ್ನು ತಿಳಿಯಿರಿ.

ವೃದ್ಧಾಪ್ಯವು ಸಂತೋಷದಿಂದ ಕೂಡಿರಲು ಈ ಕೆಲಸಗಳನ್ನು ಇಂದೇ ಮಾಡಿ:

ಹಣ ಉಳಿತಾಯ ಬಹಳ ಮುಖ್ಯ: ಯೌವನದ ಆಸೆಗಳನ್ನು ಅನುಸರಿಸಲು ನಿಮ್ಮ ಎಲ್ಲಾ ಗಳಿಕೆಯನ್ನು ವ್ಯರ್ಥ ಮಾಡುವುದು ಅತ್ಯಂತ ಮೂರ್ಖತನವೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಿಮ್ಮ ಸ್ವಂತ ಮಗ ಕೂಡ ವೃದ್ಧಾಪ್ಯದಲ್ಲಿ ನಿಮ್ಮನ್ನು ಕೈಬಿಡಬಹುದು, ಇಂತಹ ಸಮಯದಲ್ಲಿ ನೀವು ಕೂಡಿಟ್ಟ ಹಣ, ನೀವು ಗಳಿಸಿದ ಆಸ್ತಿ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ನಿಮಗಾಗಿ, ನಿಮ್ಮ ಸ್ವಂತಕ್ಕಾಗಿ ಒಂದಷ್ಟು ಹಣವನ್ನು ಕೂಡಿಡಿ. ಇದು ನೀವು ವೃದ್ಧಾಪ್ಯದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದನ್ನು ತಪ್ಪಿಸುತ್ತದೆ, ನೆಮ್ಮದಿಯ, ಸ್ವಾಭಿಮಾನದ ಜೀವನ ನಡೆಸಲಲು ಅನುವು ಮಾಡಿಕೊಡುತ್ತದೆ.

ನಿಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸಿ: ನಮ್ಮ ಯೌವನದಲ್ಲಿ, ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕು ಅದಕ್ಕಾಗಿ ದೈಹಿಕ ವ್ಯಾಯಾಮ ಮಾಡಬೇಕು, ಸಮತೋಲಿತ, ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ವೃದ್ಧಾಪ್ಯದಲ್ಲಿ ಆಸ್ಪತ್ರೆಯಲ್ಲೇ ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ.

ಇದನ್ನೂ ಓದಿ: ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ

ನಿಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಿ: ನಿಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವರನ್ನೇ ಆಸ್ತಿ ಮಾಡಿ. ಒಳ್ಳೆಯ ಸಂಸ್ಕಾರಗಳನ್ನು ಕಲಿಸಿ. ಇಂತಹ ಮಕ್ಕಳು ಖಂಡಿತವಾಗಿಯೂ ಕೊನೆಗಾಲದಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬರೀ ವಿದ್ಯೆ ಕಲಿಸಿ, ಸಂಸ್ಕಾರ, ಹೆತ್ತವರ ಮೌಲ್ಯ ಏನೆಂಬುದನ್ನು ಕಲಿಸದಿದ್ದರೆ, ಅಂತಹ ಮಕ್ಕಳಿಂದ ಕೊನೆಗಾದಲ್ಲಿ ಬರಿ ನೋವನ್ನೇ ತಿನ್ನಬೇಕಾಗುತ್ತದೆ. ಆದ್ದರಿಂದ ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತ ಗಮನ ನೀಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಧಾರ್ಮಿಕ ಯಾರ್ಯ ಮತ್ತು ದಾನ, ಸದ್ಗುಣ:  ಯೌವನದಲ್ಲಿ ಮಾಡುವ ದಾನ ಮತ್ತು ಒಳ್ಳೆಯ ಕಾರ್ಯಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಸಂತೋಷವನ್ನು ನೀಡುವುದು ಮಾತ್ರವಲ್ಲ ಕೊನೆಗಾಲದಲ್ಲಿ ಈ ದಾನ ಧರ್ಮ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version