ಎಕ್ಸಿಟ್ ಪೋಲ್‌ ಬಿಜೆಪಿ ಕಚೇರಿಯಿಂದ ಬಂದಿವೆ, ಬಂಗಾಳದಲ್ಲಿ ಮತ್ತೆ ನಾವೇ ಸರ್ಕಾರ ರಚಿಸುತ್ತೇವೆ; ಮಮತಾ ಬ್ಯಾನರ್ಜಿ ವಿಶ್ವಾಸ – Kannada News | Exit polls rigged Mamata Banerjee claims TMC will win over 226 seats in West Bengal Assembly elections

ಕೊಲ್ಕತ್ತಾ, ಏಪ್ರಿಲ್ 30: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ನಿರ್ಣಾಯಕ ಗೆಲುವಿನ ಹಾದಿಯಲ್ಲಿದೆ ಎಂದು ಹೇಳಿದ್ದಾರೆ. ಚುನಾವಣೆಯ ಫಲಿತಾಂಶವು ಈಗಾಗಲೇ ತಮ್ಮ ಪಕ್ಷದ ಪರವಾಗಿ ಸ್ಪಷ್ಟವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗೆ ತಮ್ಮ ವಿಶ್ವಾಸವನ್ನು ಬಲಪಡಿಸುತ್ತಾ, “ನಾವು 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

“ಎಕ್ಸಿಟ್ ಪೋಲ್‌ಗಳು ಬಿಜೆಪಿ ಕಚೇರಿಯಿಂದ ಬಂದಿವೆ. ಅದರಲ್ಲಿ ಹೇಳಿರುವ ಸಂಖ್ಯೆಗಳು ಕಟ್ಟುಕಥೆಯಾಗಿದ್ದು, ಟಿಎಂಸಿ ಕಾರ್ಯಕರ್ತರನ್ನು ನಿರಾಶೆಗೊಳಿಸುವ ಉದ್ದೇಶವನ್ನು ಹೊಂದಿವೆ” ಎಂದು ಮಮತಾ ಬ್ಯಾನರ್ಜಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ತಮ್ಮ ಕ್ಷೇತ್ರವಾದ ಭವಾನಿಪುರದಲ್ಲಿ ಇಡೀ ರಾತ್ರಿ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal Election Exit Poll Results 2026: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರೀ ಹಿನ್ನಡೆ; ಬಿಜೆಪಿಗೆ 146-175 ಸ್ಥಾನಗಳ ನಿರೀಕ್ಷೆ

“ಬಿಜೆಪಿ ಅಂತಿಮ ಆಟವಾಡಿದೆ. ನಿಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದರೆ ಷೇರು ಮಾರುಕಟ್ಟೆಗಳು ಉರುಳುತ್ತಿದ್ದವು. ಜನರು ಒಟ್ಟಾಗಿರಬೇಕು. ಮತ ಎಣಿಕೆಯ ಮೇಲೆ ನಿಗಾ ಇಡಬೇಕು. ರಾತ್ರಿಯಿಡೀ ಎಚ್ಚರವಾಗಿರಿ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಅಂತಿಮ ಆಟ ಆಡಿದೆ. ನಿಜವಾದ ಅಂಕಿ-ಅಂಶಗಳು ಬಿಡುಗಡೆಯಾದರೆ ಷೇರು ಮಾರುಕಟ್ಟೆಗಳು ಕುಸಿಯುತ್ತಿದ್ದವು. ಜನರು ಒಟ್ಟಾಗಿ ಉಳಿಯಬೇಕು ಮತ್ತು ಎಣಿಕೆಯ ಮೇಲೆ ನಿಗಾ ಇಡಬೇಕು” ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ:  ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

2026ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳವನ್ನು ಗೆಲ್ಲುತ್ತದೆ ಎಂದು ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಚಾಣಕ್ಯ ಸ್ಟ್ರಾಟಜೀಸ್‌ನ ನಿರ್ಗಮನ ಸಮೀಕ್ಷೆಯು ಬಿಜೆಪಿ 150-160 ವಿಧಾನಸಭಾ ಸ್ಥಾನಗಳನ್ನು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ 130-140 ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜಿಸಿದೆ. ಮ್ಯಾಟ್ರಿಜ್ ನಡೆಸಿದ ಸಮೀಕ್ಷೆಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 146-161 ಸ್ಥಾನಗಳೊಂದಿಗೆ ಗೆಲ್ಲಲಿದೆ, ಟಿಎಂಸಿ 125ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಈ ಒಂದು ಸಲಹೆಯನ್ನು ಪಾಲಿಸಿ – Kannada News | Follow this tip to keep ants out of your sugar container

ಸಿಹಿ ಪದಾರ್ಥಗಳು ಇರುವಲ್ಲಿ, ಇರುವೆಗಳು (ants) ಸುಳಿದಾಡುವುದು ಸರ್ವೆ ಸಾಮಾನ್ಯ. ಅದರಲ್ಲೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಕ್ಕರೆ ಡಬ್ಬಿಗಳು ಇರುವೆಗಳು ಬಹು ಬೇಗನೇ ಆಕರ್ಷಿಸುತ್ತವೆ. ಹೌದು ಸಕ್ಕರೆ ಡಬ್ಬಿಯನ್ನು ಎಷ್ಟೇ ಬಿಗಿಯಾಗಿ ಮುಚ್ಚಿದರೂ ಸಹ ಇರುವೆಗಳು ಸಕ್ಕರೆ ಡಬ್ಬಿಯನ್ನು ಮುತ್ತಿಕೊಳ್ಳುತ್ತವೆ.  ಇದರಿಂದ ಸಕ್ಕರೆಯೂ ಹಾಳಾದಂತಾಗುತ್ತದೆ, ಪದೇ ಪದೇ ಡಬ್ಬವನ್ನು ಕೂಡ ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಹೀಗಿರುವಾಗ ಈ ಒಂದು ವಸ್ತುವನ್ನು ಸಣ್ಣ ಚೀಲದಲ್ಲಿಟ್ಟು ಸಕ್ಕರೆ ಡಬ್ಬದೊಳಗೆ ಇಡುವುದರಿಂದ, ಇರುವೆಗಳು ಆ ಕಡೆ ಬಾರದಂತೆ ನೋಡಿಕೊಳ್ಳಬಹುದು. ಹಾಗಿದ್ರೆ ಯಾವ ವಸ್ತುವನ್ನು ಸಕ್ಕರೆ ಡಬ್ಬದೊಳಗೆ ಇಡಬೇಕು ಎಂಬುದನ್ನು ನೋಡೋಣ ಬನ್ನಿ.

ಸಕ್ಕರೆ ಡಬ್ಬದೊಳಗೆ ಇರುವೆಗಳು ಪ್ರವೇಶಿಸದಂತೆ ನೋಡಿಕೊಳ್ಳಲು ಏನು ಮಾಡಬೇಕು?

ಇರುವೆಗಳನ್ನು ಸಕ್ಕರೆಯಿಂದ ದೂರವಿಡಲು, ನೀವು ಸಕ್ಕರೆ ಡಬ್ಬಿಯಲ್ಲಿ ಲವಂಗದ ಪ್ಯಾಕೆಟ್ ಅನ್ನು ಇಡಬಹುದು. ಲವಂಗದ ಬಲವಾದ ನೈಸರ್ಗಿಕ ಸುವಾಸನೆ ಮತ್ತು ಅದರಲ್ಲಿರುವ ಎಣ್ಣೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ನೀವು ನೇರವಾಗಿ ಸಕ್ಕರೆ ಡಬ್ಬಿಯಲ್ಲಿ ಲವಂಗವನ್ನು ಹಾಕಲು ಬಯಸದಿದ್ದರೆ, ನೀವು 8 ರಿಂದ 10 ಲವಂಗವನ್ನು ಒಂದು ಸಣ್ಣ ಪ್ಯಾಕೆಟ್‌ನಲ್ಲಿಟ್ಟು  ಡಬ್ಬಿಯ ಮೂಲೆಯಲ್ಲಿ ಇಡಬಹುದು. ಇದರಿಂದ ಇರುವೆಗಳು ಸಕ್ಕರೆ ಡಬ್ಬದ ಬಳಿ ಸುಳಿಯುವುದೇ ಇಲ್ಲ.

ಇರುವೆಗಳನ್ನು ಓಡಿಸಲು ಲವಂಗ ಹೇಗೆ ಸಹಾಯ ಮಾಡುತ್ತದೆ?

ಲವಂಗವು ಯುಜೆನಾಲ್ ಎಂಬ ನೈಸರ್ಗಿಕ ಅಂಶವನ್ನು ಹೊಂದಿರುತ್ತದೆ, ಇದು ತುಂಬಾ ಬಲವಾದ ಸುವಾಸನೆಯನ್ನು ಹೊಂದಿದ್ದು, ಈ ಸುವಾಸನೆಯು ಮನುಷ್ಯರಿಗೆ ಆಹ್ಲಾದಕರವಾಗಿರಬಹುದು, ಆದರೆ ಇರುವೆಗಳು ಮತ್ತು  ಸಣ್ಣ ಕೀಟಗಳಿಗೆ ಇಷ್ಟವಾಗುವುದಿಲ್ಲ. ಇರುವೆಗಳು ತಮ್ಮ ದಾರಿಯನ್ನು ಕಂಡುಕೊಳ್ಳಲು ಪರಿಮಳದ ಸೂಚನೆಗಳನ್ನು ಬಳಸುತ್ತವೆ. ಆದರೆ ಲವಂಗದ ಬಲವಾದ ಪರಿಮಳಯುಕ್ತ ವಾಸನೆ ಇರುವೆಗಳ ತಮ್ಮ ದಾರಿ ಮತ್ತು ದಿಕ್ಕನ್ನು ಕಂಡುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಇರುವೆಗಳು ಲವಂಗ ಮತ್ತು ದಾಲ್ಚಿನ್ನಿಯಂತಹ ವಸ್ತುಗಳಿರುವತ್ತ ಸುಳಿಯುವುದಿಲ್ಲ.

ಇದನ್ನೂ ಓದಿ: ಮನೆಯಲ್ಲಿ ಒಂದು ಸಸಿ ನೆಟ್ಟರೆ ಹಲ್ಲಿಗಳ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು

ಇರುವೆಗಳನ್ನು ಓಡಿಸಲು ಬೇರೆ ಯಾವ ವಸ್ತುಗಳು ಸಹಾಯ ಮಾಡಬಹುದು?

ನಿಮ್ಮ ಬಳಿ ಲವಂಗವಿಲ್ಲದಿದ್ದರೆ, ದಾಲ್ಚಿನ್ನಿ ತುಂಡುಗಳು ಸಹ ಉತ್ತಮ ಆಯ್ಕೆಯಾಗಿದೆ. ಅಂತಹ ವಸ್ತುಗಳನ್ನು ಸಕ್ಕರೆ ಡಬ್ಬಿಯಲ್ಲಿ ಸಂಗ್ರಹಿಸುವಾಗ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಸಕ್ಕರೆಗೆ ಏನೂ ಬರದಂತೆ ಅವುಗಳನ್ನು ಚೀಲದಲ್ಲಿ ಇಡುವುದು ಉತ್ತಮ. ನೀವು ಡಬ್ಬಿಯನ್ನು ತೆರೆದಿಟ್ಟರೆ ಇರುವೆಗಳು ಮತ್ತೆ ಮುತ್ತಿಕೊಳ್ಳುತ್ತವೆ. ಹಾಗಾಗಿ ಯಾವಾಗಲೂ ಬಿಗಿಯಾಗಿ ಮುಚ್ಚಿಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RCB Playing XI: ಆರ್​​ಸಿಬಿ ಮೊದಲು ಬ್ಯಾಟಿಂಗ್; ಚೇತರಿಸಿಕೊಳ್ಳದ ಸಾಲ್ಟ್ – Kannada News | GT vs RCB Playing XI Gujarat Titans vs Royal Challengers Bengaluru Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್​ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಎರಡೂ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಗುಜರಾತ್​ಗೆ ಸೇಡಿನ ಸಮರವಾಗಿದೆ. ಇನ್ನು ಲೀಗ್​ನಲ್ಲಿ ಉಭಯ ತಂಡಗಳ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಗುಜರಾತ್ ಟೈಟಾನ್ಸ್ ಇದುವರೆಗೆ ಎಂಟು ಪಂದ್ಯಗಳನ್ನು ಆಡಿದ್ದು, ನಾಲ್ಕು ಪಂದ್ಯಗಳನ್ನು ಗೆದ್ದು ನಾಲ್ಕು ಸೋತಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಂಟು ಪಂದ್ಯಗಳನ್ನು ಆಡಿದ್ದು, ಆರು ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳನ್ನು ಸೋತಿದೆ. ಈ ಮೂಲಕ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಟಾಸ್ ಗೆದ್ದ ಗುಜರಾತ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಬಳಿಕ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇತ್ತ ಈ ಪಂದ್ಯಕ್ಕೆ ಫಿಲ್ ಸಾಲ್ಟ್ ಚೇತರಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಈ ಪಂದ್ಯಕ್ಕೂ ಅವರು ಅಲಭ್ಯರಾಗಿದ್ದಾರೆ.

ಮುಖಾಮುಖಿ ದಾಖಲೆ

ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ ಏಳು ಪಂದ್ಯಗಳು ನಡೆದಿವೆ. ಇವುಗಳಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್‌ಗಿಂತ ಸ್ವಲ್ಪ ಮುಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕು ಪಂದ್ಯಗಳನ್ನು ಗೆದ್ದರೆ, ಗುಜರಾತ್ ಟೈಟಾನ್ಸ್ ಮೂರು ಪಂದ್ಯಗಳನ್ನು ಗೆದ್ದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಎರಡೂ ತಂಡಗಳ ನಡುವೆ ಕೇವಲ ಒಂದು ಪಂದ್ಯ ಮಾತ್ರ ನಡೆದಿದ್ದು, ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ. ಎರಡೂ ತಂಡಗಳ ನಡುವಿನ ಹಿಂದಿನ ಏಳು ಪಂದ್ಯಗಳು ಚೇಸಿಂಗ್ ತಂಡ ಗೆಲ್ಲುವುದರೊಂದಿಗೆ ಕೊನೆಗೊಂಡಿವೆ.

GT vs RCB IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್.

ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ನಿಶಾಂತ್ ಸಿಂಧು,ಕುಲ್ವಂತ್ ಖೆಜ್ರೋಲಿಯಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:11 pm, Thu, 30 April 26

Source link

ನೆಟ್‌ಫ್ಲಿಕ್ಸ್‌ನಲ್ಲಿ ಸಂಚಲನ ಮೂಡಿಸುತ್ತಿದೆ ‘ಇಫ್ ವಿಷಸ್ ಕುಡ್ ಕಿಲ್’: ಏನಿದರ ಕತೆ?

ಕಳೆದ ಆರೇಳು ವರ್ಷಗಳಿಂದ ಕೊರಿಯನ್ ಸಿನಿಮಾಗಳು (Cinema) ಮತ್ತು ಸರಣಿಗಳು ಜಾಗತಿಕ ಮಟ್ಟದಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿವೆ. ಕೋವಿಡ್ ಸಮಯದಲ್ಲಿ ಬಿಡುಗಡೆ ಆದ ಕೆಲ ಕೊರಿಯನ್ ಸಿನಿಮಾಗಳು, ಆ ಬಳಿಕ ಬಂದ ‘ಸ್ಕ್ವಿಡ್ ಗೇಮ್ಸ್’ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿವೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಕೊರಿಯನ್ ವೆಬ್ ಸರಣಿ ಸಖತ್ ಸದ್ದು ಮಾಡುತ್ತಿದ್ದು, ಟಾಪ್ ಟ್​ರೆಂಡಿಂಗ್​​ನಲ್ಲಿದೆ. ಅದುವೇ ಇತ್ತೀಚೆಗೆ ಬಿಡುಗಡೆ ಆದ ‘ಇಫ್ ವಿಷಸ್ ಕುಡ್ ಕಿಲ್’. ಪ್ರೇಕ್ಷಕರಲ್ಲಿ ಭೀತಿ ಮತ್ತು ಕುತೂಹಲ ಎರಡನ್ನೂ ಒಟ್ಟಿಗೆ ಉಂಟು ಮಾಡುತ್ತಿರುವ ಈ ವೆಬ್ ಸರಣಿ, ಮನುಷ್ಯನ ಕರಾಳ ಆಸೆಗಳ ಬಗೆಗಿನ ಕತೆಯನ್ನು ಒಳಗೊಂಡಿದೆ. ಏಪ್ರಿಲ್ 24 ರಂದು ಈ ವೆಬ್ ಸರಣಿ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

‘ಇಫ್ ವಿಷಸ್ ಕುಡ್ ಕಿಲ್’ ವೆಬ್ ಸರಣಿಯು ಭಿನ್ನ ರೀತಿಯ ಕತೆಯನ್ನು ಒಳಗೊಂಡಿದೆ. ಹೈಸ್ಕೂಲ್ ಯುವಕರಿಗೆ ‘ಗಿರಿಗೊ’ ಹೆಸರಿನ ಮೊಬೈಲ್ ಅಪ್ಲಿಕೇಶನ್​ ಬಗ್ಗೆ ಗೊತ್ತಾಗುತ್ತದೆ. ಆ ಅಪ್ಲಿಕೇಶನ್​​ನಲ್ಲಿ ಯಾರು ಏನೇ ಕೇಳಿಕೊಂಡರೂ ಅದು ನೆರವೇರುತ್ತದೆ. ಈ ಅಪ್ಲಿಕೇಶನ್ ಅನ್ನು ಆ ಯುವಕರು ಟ್ರೈ ಮಾಡುತ್ತಾರೆ. ಅವರು ಹೇಳಿದಂತೆ ಅವರ ಕೋರಿಕೆ ಈಡೇರುತ್ತದೆ ಆದರೆ ಅದಾದ ಬಳಿಕ ನಿಜವಾದ ಹಾರರ್ ಶುರು ಆಗುತ್ತದೆ. ಯಾರು ವಿಶ್ ಕೇಳಿರುತ್ತಾರೆಯೋ, ಆ ವಿಶ್ ಈಡೇರಿದ 24 ಗಂಟೆಗಳ ಬಳಿಕ ವಿಶ್ ಕೇಳಿದ ವ್ಯಕ್ತಿ ಸಾಯಬೇಕಾಗುತ್ತದೆ.

ಇದನ್ನೂ ಓದಿ:‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ?

ಕೆಲ ವಿದ್ಯಾರ್ಥಿಗಳು ಸಾಯುತ್ತಾರೆ, ಇನ್ನು ಕೆಲವರು ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ, ಕೆಲವರು ಈ ಸಾವಿನ ಸೈಕಲ್ ಅನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ಇದೆಲ್ಲ ಏಕೆ ಶುರುವಾಯ್ತು, ಇದರ ಹಿಂದೆ ಯಾರಿದ್ದಾರೆ ಎಂದೆಲ್ಲ ಹುಡುಕಾಟ ಶುರು ಆಗುತ್ತದೆ. ವೆಬ್ ಸರಣಿಯ ಕೆಲವು ದೃಶ್ಯಗಳು, ಭಯ, ಕುತೂಹಲ ಉಂಟು ಮಾಡುತ್ತವೆ. ರಕ್ತಪಾತವಂತೂ ವಿಪರೀತವಾಗಿದೆ. ಕೆಲವು ದೃಶ್ಯಗಳನ್ನು ಅಳ್ಳೆದೆಯವರು ನೋಡಲು ಸಹ ಆಗದಂತಿದೆ. ಆದರೆ ನೆಟ್​​ಪ್ಲಿಕ್ಸ್​​ನಲ್ಲಿ ಈ ವೆಬ್ ಸರಣಿ ಸಖತ್ ಟ್ರೆಂಡಿಂಗ್​ನನಲ್ಲಿದೆ.

ವೆಬ್ ಸರಣಿಯ ಕತೆಯನ್ನು ಪಾರ್ಕ್ ಜೂಂಗ್ ಸೀಪ್ ಬರೆದಿದ್ದು, ನಿರ್ದೇಶನ ಮಾಡಿರುವುದು ಪಾರ್ಕ್ ಯೋನ್ ಸೀ. ಪ್ರಸ್ತುತ ನೆಟ್​​ಫ್ಲಿಕ್ಸ್​​ನ ಟಾಪ್ ಟ್ರೆಂಡಿಂಗ್ ವೆಬ್ ಸರಣಿ ಇದಾಗಿದ್ದು, ಲಕ್ಷಾಂತರ ಗಂಟೆಗಳ ವೀಕ್ಷಣೆಯನ್ನು ಈಗಾಗಲೇ ಈ ವೆಬ್ ಸರಣಿ ಕಂಡಿದೆ. ವೆಬ್ ಸರಣಿಯ ಬಗ್ಗೆ ಸಾಕಷ್ಟು ಪಾಸಿಟಿವ್ ವಿಮರ್ಶೆಗಳು ಸಹ ವ್ಯಕ್ತವಾಗಿವೆ. ಎಂಟು ಎಪಿಸೋಡ್​​ಗಳ ವೆಬ್ ಸರಣಿ ಇದಾಗಿದ್ದು, ವೆಬ್ ಸರಣಿಯ ಎರಡನೇ ಭಾಗಕ್ಕಾಗಿ ಈಗಾಗಲೇ ಪ್ರೇಕ್ಷಕರು ಬೇಡಿಕೆ ಇಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

GT vs RCB IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Gujarat Titans vs Royal Challengers Bengaluru IPL 2026 Live Cricket Score GT vs RCB Match on 30th April latest news in Kannada

ಐಪಿಎಲ್ 2026ರ 42 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಇದಕ್ಕೂ ಮೊದಲು ಉಭಯ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಆರ್​ಸಿಬಿ ಸುಲಭವಾಗಿ ಗೆದ್ದುಕೊಂಡಿತ್ತು. ಇದೀಗ ಆರ್​ಸಿಬಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಇತ್ತ ಗುಜರಾತ್ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

Published On – 7:02 pm, Thu, 30 April 26

Source link

ಮದುವೆಯ ಡಿಜೆ ಸೌಂಡ್​​ನಿಂದ 140 ಕೋಳಿಗಳಿಗೆ ಹೃದಯಾಘಾತ! – Kannada News | 140 Chickens Died by Cardiac arrest After Wedding DJ played loudly in Uttar Pradesh

ಸುಲ್ತಾನ್‌ಪುರ, ಏಪ್ರಿಲ್ 30: ಮದುವೆಗಳಲ್ಲಿ ಡಿಜೆ ಶಬ್ದ ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಸುಲ್ತಾನ್‌ಪುರದ ಬಲ್ದಿರಾಯ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ ಈ ಡಿಜೆ ಶಬ್ದವೇ ನೂರಾರು ಕೋಳಿಗಳ ಸಾವಿಗೆ (Chicken Death) ಕಾರಣವಾಗಿದೆ. ಮದುವೆ ಮೆರವಣಿಗೆಯ ಸಮಯದಲ್ಲಿ ಜೋರಾಗಿ ಡಿಜೆ ಸಂಗೀತ ಹಾಕಿದ್ದರಿಂದ ದರಿಯಾಪುರ ಗ್ರಾಮದ ಕೋಳಿ ಸಾಕಣೆ ಕೇಂದ್ರದಲ್ಲಿ 140 ಕೋಳಿಗಳು ಸಾವನ್ನಪ್ಪಿವೆ. ಈ ವಿಚಿತ್ರ ಪ್ರಕರಣ ಈಗ ಕಾನೂನು ತಿರುವು ಪಡೆದುಕೊಂಡಿದೆ.

ದರಿಯಾಪುರ ಗ್ರಾಮದ ನಿವಾಸಿ ಬಬ್ಬನ್ ವಿಶ್ವಕರ್ಮ ಅವರ ವಿವಾಹವು ಏಪ್ರಿಲ್ 25ರಂದು ನಿಗದಿಯಾಗಿತ್ತು. ಕುಡ್ವಾರ್‌ನ ರಾಮ್ ಭದ್ರ ಪೂರ್ವಾ ಗ್ರಾಮದಿಂದ ವಿವಾಹ ಮೆರವಣಿಗೆ ಬಂದಿತು. ಡಿಜೆ ಪೂರ್ಣ ಪ್ರಮಾಣದಲ್ಲಿ ನುಡಿಸುತ್ತಿತ್ತು. ಮೆರವಣಿಗೆ ಸಬೀರ್ ಅಲಿಯವರ ಕೋಳಿ ಸಾಕಣೆ ಕೇಂದ್ರದ ಮೂಲಕ ಹಾದು ಹೋದಾಗ ಸಂಗೀತವು ತುಂಬಾ ಜೋರಾಗಿತ್ತು. ಅದು ಫಾರಂನಲ್ಲಿನ ಕೋಳಿಗಳಲ್ಲಿ ಭಯವನ್ನು ಉಂಟುಮಾಡಿತು.

ಇದನ್ನೂ ಓದಿ: ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು

ತೋಟದ ಮಾಲೀಕ ಸಬೀರ್ ಅಲಿ ಅವರ ಪ್ರಕಾರ, ಡಿಜೆ ಸಂಗೀತದ ಕಂಪನಗಳು ಮತ್ತು ವಿಪರೀತವಾದ ಶಬ್ದ ಕೋಳಿಗಳನ್ನು ಭಯಭೀತಗೊಳಿಸಿತು. ಇದರಿಂದ ಕ್ಷಣಾರ್ಧದಲ್ಲಿ 140 ಕೋಳಿಗಳು ಸತ್ತವು. ಡಿಜೆಗೆ ಧ್ವನಿಯನ್ನು ಕಡಿಮೆ ಮಾಡಲು ವಿನಂತಿಸಿದರೂ ಮದುವೆ ಮನೆಯವರು ಒಪ್ಪಿರಲಿಲ್ಲ ಅವರ ಮನವಿಗಳನ್ನು ನಿರ್ಲಕ್ಷಿಸಲಾಯಿತು ಎಂದು ಸಬೀರ್ ಆರೋಪಿಸಿದ್ದಾರೆ. ಇದರಿಂದಾದ ನಷ್ಟದಿಂದ ನೊಂದ ಸಬೀರ್ ಸ್ಥಳೀಯ ಪೊಲೀಸ್ ಠಾಣೆಗೆ ಮೇಲ್ಮನವಿ ಸಲ್ಲಿಸಿದರು.

ಡಿಜೆಯಿಂದ ಬಂದ ತೀವ್ರವಾದ ಶಬ್ದವು ಕೋಳಿಗಳಲ್ಲಿ ಭಯಭೀತತೆಯನ್ನು ಉಂಟುಮಾಡಿತು. ಪಕ್ಷಿಗಳು ಆ ಶಬ್ದವನ್ನು ಸಹಿಸಲಾರದೆ 140 ಪಕ್ಷಿಗಳು ಸಾವನ್ನಪ್ಪಿದವು ಎಂದು ಅವರು ಹೇಳಿದರು.

ಇದನ್ನೂ ಓದಿ: ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ

ಈ ವಿಷಯದ ಗಂಭೀರತೆ ಮತ್ತು ಅದು ಉಂಟುಮಾಡುವ ಸಾರ್ವಜನಿಕ ತೊಂದರೆಯನ್ನು ಪರಿಗಣಿಸಿ, ಸಬ್-ಇನ್ಸ್‌ಪೆಕ್ಟರ್ ಭರತ್ ಸಿಂಗ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡರು. ಕುಡ್ವಾರ್‌ನ ಪಾರ್ಸಿಪುರ ನಿವಾಸಿ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಬ್ದ ಮಾಲಿನ್ಯ ಕೋಳಿಗಳ ಸಾವಿಗೆ ನಿಜವಾಗಿಯೂ ಕಾರಣವೇ ಎಂದು ನಿರ್ಧರಿಸಲು ಪೊಲೀಸರು ಈಗ ಈ ವಿಷಯವನ್ನು ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ – Kannada News | Symptoms of Dehydration in Toddlers: When to See a Doctor

ದೇಶದ ಅನೇಕ ಭಾಗಗಳಲ್ಲಿ ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇದು ಎಲ್ಲರಿಗೂ ತಿಳಿದಂತಹ ವಿಚಾರ. ಈ ರೀತಿ ಉಷ್ಣತೆ ಹೆಚ್ಚುತ್ತಿರುವ ಪರಿಣಾಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಡಿಹೈಡ್ರೇಶನ್ (Dehydration) ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಪೀಡಿಯಾಟ್ರಿಕ್ ವಿಭಾಗದ ಡಾ. ವಿಪಿನ್ ಚಂದ್ರ ಉಪಾಧ್ಯಾಯ ಅವರ ಪ್ರಕಾರ, ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಬೆವರುವುದು ಸಾಮಾನ್ಯ. ಈ ವೇಳೆ ದೇಹದಿಂದ ನೀರು ವೇಗವಾಗಿ ಹೊರಹೋಗುತ್ತದೆ. ಜೊತೆಗೆ, ಸಾಕಷ್ಟು ನೀರು ಕುಡಿಯದಿರುವುದು, ಹೆಚ್ಚು ಹೊತ್ತು ಬಿಸಿಲಿನಲ್ಲಿ ಆಟವಾಡುವುದು, ಅಥವಾ ವಾಂತಿ-ಜಲದೋಷದಂತಹ ಸಮಸ್ಯೆಗಳು ಡಿಹೈಡ್ರೇಶನ್‌ಗೆ ಕಾರಣವಾಗುತ್ತವೆ. ಹಾಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ಡಿಹೈಡ್ರೇಶನ್ ಆದಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಿಹೈಡ್ರೇಶನ್ ಲಕ್ಷಣಗಳು;

ಮಕ್ಕಳಲ್ಲಿ ಡಿಹೈಡ್ರೇಶನ್ ಉಂಟಾದಾಗ ಕೆಲ ಪ್ರಮುಖ ಲಕ್ಷಣಗಳು ಕಾಣಿಸುತ್ತವೆ. ಬಾಯಾರಿಕೆ ಹೆಚ್ಚಾಗುವುದು, ತುಟಿ ಮತ್ತು ಬಾಯಿ ಒಣಗುವುದು ಪ್ರಾರಂಭಿಕ ಲಕ್ಷಣಗಳು. ಮಕ್ಕಳು ಸುಸ್ತಾಗುವುದು, ಕಿರಿಕಿರಿ ತೋರಿಸುವುದು ಮತ್ತು ಆಟದಲ್ಲಿ ಆಸಕ್ತಿ ಕಡಿಮೆ ಆಗುವುದು ಗಮನಿಸಬಹುದು. ಕೆಲವೊಮ್ಮೆ ಮೂತ್ರ ಪ್ರಮಾಣ ಕಡಿಮೆಯಾಗುವುದು ಅಥವಾ ಗಾಢ ಹಳದಿ ಬಣ್ಣದಲ್ಲಿ ಮೂತ್ರ ಹೊರಹೋಗುವುದು ಕೂಡ ಡಿಹೈಡ್ರೇಶನ್ ಸೂಚನೆಯಾಗಿರಬಹುದು. ಇದರ ಜೊತೆಗೆ, ಕಣ್ಣುಗಳು ಒಳಗೆ ಕುಸಿದಂತೆ ಕಾಣಿಸುವುದು ಮತ್ತು ಅಳುವಾಗ ಕಣ್ಣೀರು ಕಡಿಮೆಯಾಗಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ

ಡಿಹೈಡ್ರೇಶನ್ ತಡೆಗಟ್ಟಲು ಸಲಹೆಗಳು:

ಡಿಹೈಡ್ರೇಶನ್ ತಪ್ಪಿಸಲು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಸುವುದು ಅತ್ಯಂತ ಮುಖ್ಯ. ನೀರಿನ ಜೊತೆಗೆ ಎಳನೀರು, ಮಜ್ಜಿಗೆ ಮತ್ತು ಮನೆಯಲ್ಲಿ ತಯಾರಿಸಿದ ಓಆರ್‌ಎಸ್ ನೀಡುವುದು ಉತ್ತಮ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಆಟವಾಡುವುದನ್ನು ತಪ್ಪಿಸಿ, ಹೊರಗೆ ಹೋಗುವಾಗ ತಲೆಯನ್ನು ಮುಚ್ಚಿಕೊಳ್ಳುವುದು ಅಗತ್ಯ. ಹಗುರವಾದ ಮತ್ತು ಪೌಷ್ಟಿಕ ಆಹಾರ ನೀಡುವುದು ಕೂಡ ಸಹಾಯಕ. ಜೊತೆಗೆ ಸ್ವಚ್ಛತೆ ಕಾಪಾಡುವುದರಿಂದ ಸೋಂಕುಗಳನ್ನು ತಪ್ಪಿಸಬಹುದು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಮಗು ತುಂಬಾ ಸುಸ್ತಾಗಿದ್ದರೆ, ಪದೇ ಪದೇ ವಾಂತಿ ಮಾಡುತ್ತಿದ್ದರೆ ಅಥವಾ ಮೂತ್ರ ಸಂಪೂರ್ಣವಾಗಿ ಕಡಿಮೆಯಾಗುವುದು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ – Kannada News | Dharwad Aditya Suicide Case: vidyagiri Police Station Inspector Rafiq Suspended

ಆದಿತ್ಯಾ, ರಫೀಕ್ (ಇನ್ಸ್​​ಪೆಕ್ಟರ್)

ಧಾರವಾಡ, (ಏಪ್ರಿಲ್ 30): ವಿದ್ಯಾರ್ಥಿ  ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ (Dharwad Aditya Suicide Case) ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​ನನ್ಜು ಅಮಾನತು ಮಾಡಲಾಗಿದೆ. ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್‌ ನನ್ನು ಅಮಾನತು ಮಾಡಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೊಕ್ಕಣ್ಣನವರ್ ಮತ್ತು ಸಯ್ಯದ್ ನನ್ನು ನಿನ್ನೆ (ಏಪ್ರಿಲ್ 29) ಅಮಾನತು ಮಾಡಲಾಗಿತ್ತು. ಆದ್ರೆ, ಪ್ರಕರಣ ಗಂಭೀರ ಪಡೆದುಕೊಳ್ಳುತ್ತಿದ್ದಂತೆಯೇ ಇಂದು (ಏಪ್ರಿಲ್ 30) ಇನ್ಸ್​ಪೆಕ್ಟರ್​​ನನ್ನು ಸಹ ಸಸ್ಪೆಂಡ್​ ಮಾಡಲಾಗಿದೆ.

ಗಾಂಜಾ ಸೇವನೆ ಆರೋಪದಡಿ ವಿದ್ಯಾರ್ಥಿ ಆದಿತ್ಯನನ್ನು ವಶಕ್ಕೆ ಪಡೆಯಲಾಗಿತ್ತು. ಪರೀಕ್ಷೆಯಲ್ಲಿ ಗಾಂಜಾ ಸೇವನೆ ನೆಗೆಟಿವ್ ಬಂದಿದ್ದರೂ, ಪೊಲೀಸರು ಆದಿತ್ಯನಿಂದ 2,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಾಯಿಯಿಂದ ಹಣ ಕೊಡಿಸಲು ಆದಿತ್ಯ ಯತ್ನಿಸಿದ್ದು, ಆದ್ರೆ, ತಾಯಿ ನಿರಾಕರಿಸಿದ ಕಾರಣ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಆದಿತ್ಯ ಮಗ್ಯಾಗೇರಿ ಮಂಗಳವಾರ (ಏ.28) ನೇಣಿಗೆ ಶರಣಾಗಿದ್ದ.

ಇದನ್ನೂ ನೋಡಿ: ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಪೊಲೀಸ್​ ಸಿಬ್ಬಂದಿಗೆ ಬಿಗ್​​ ಶಾಕ್​​

ಸೋಮವಾರ ರಾತ್ರಿ ಆದಿತ್ಯ ತನ್ನ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯ ಒತ್ತಡವೇ ಈ ಭೀಕರ ಘಟನೆಗೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದ್ದರು.

ಇನ್ನು, ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ದೂರು ದಾಖಲಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಆ ವೇಳೆ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡಲ್ಲ ಎಂದಿದ್ದರು. ಇದರ ಬೆನ್ನಲ್ಲೇ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳನ್ನು ಸಸ್ಪೆಂಡ್​​ ಮಾಡಲಾಗಿತ್ತು. ಆದರೂ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದು,ಗೃಹ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಇದರ ಬೆನ್ನಲ್ಲೇ ಇದೀಗ ಇನ್ಸ್​​ಪೆಕ್ಟರ್​​ ರಫೀಕ್ ನನ್ನು ಸಹ ಅಮಾನತು ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:38 pm, Thu, 30 April 26

Source link

ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ – Kannada News | Bengaluru Rain Disaster: CM Siddaramaiah Orders Immediate Action, Boosts Monsoon Preparedness

ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆImage Credit source: x.com/siddaramaiah

ಬೆಂಗಳೂರು, ಏಪ್ರಿಲ್​​ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು (Bowring Hospital Wall Collapse) ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅಮಾನತುಗೊಳಿಸಿ, ನೋಟಿಸ್ ಜಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದ್ದಾರೆ.

ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು, ಏಳು ಮಂದಿ ಸಾವನ್ನಪ್ಪಿದ ಹಿನ್ನೆಲೆ ಇಂದು ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದರು. ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ ಎಂದು ಸಭೆಯಲ್ಲಿ ಬೌರಿಂಗ್‌ ಆಸ್ಪತ್ರೆ ಮುಖ್ಯಸ್ಥರನ್ನು ಸಿಎಂ ತರಾಟೆಗೆ ತೆಗೆದುಕೊಂಡರು. ಕೂಡಲೇ ಸಂಬಂಧಪಟ್ಟ ಇಇ ಅಮಾನತುಗೊಳಿಸುವಂತೆ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​​

ಕೇವಲ ಒಂದು ಗಂಟೆಯ ಮಳೆಗೆ ನಗರದಲ್ಲಿ 250ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿರುವ ಮತ್ತು ರಸ್ತೆಗಳು ಜಲಾವೃತವಾಗಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ, 90 ಮಿ.ಮೀ. ಮಳೆಯಾದರೂ ಯಾಕೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಮುಂಗಾರು ಮಳೆ ಆರಂಭಕ್ಕೂ ಮೊದಲೇ ಅಗತ್ಯ ಸಿದ್ಧತೆಗೆ ಸಿಎಂ ಸೂಚನೆ

ನಗರದ ಮೂಲಸೌಕರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ ಸಿಎಂ, ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ತುರ್ತಾಗಿ ಮುಚ್ಚಬೇಕು, ರಾಜಕಾಲುವೆಗಳಲ್ಲಿನ ಹೂಳನ್ನು ತೆರವುಗೊಳಿಸಬೇಕು ಮತ್ತು ಅಂಡರ್ ಪಾಸ್​ಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ಒಂದು ವೇಳೆ ಅಂಡರ್ ಪಾಸ್​ಗಳಲ್ಲಿ ನೀರು ತುಂಬಿದರೆ ಪಂಪ್ ಸೆಟ್ ಬಳಸಿ ಕೂಡಲೇ ನೀರು ಹೊರಹಾಕಲು ವ್ಯವಸ್ಥೆ ಮಾಡಬೇಕು ಹಾಗೂ ಅಗತ್ಯಬಿದ್ದರೆ ಅಂಡರ್ ಪಾಸ್ ಮುಚ್ಚುವಂತೆಯೂ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್!

ಇನ್ನು ಮುಂಜಾಗ್ರತಾ ಕ್ರಮವಾಗಿ, ನಗರದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಿದ ಸಿದ್ದರಾಮಯ್ಯ, ಅಪಾಯಕಾರಿ ಸ್ಥಿತಿಯಲ್ಲಿರುವ ಖಾಸಗಿ ಕಾಂಪೌಂಡ್ ಹಾಗೂ ಕಟ್ಟಡಗಳ ಮಾಲೀಕರಿಗೆ ಕೂಡಲೇ ನೋಟಿಸ್ ಜಾರಿ ಮಾಡಲು ತಿಳಿಸಿದರು. ಅಲ್ಲದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು ಮತ್ತು ಒಣಗಿದ ಮರಗಳ ರೆಂಬೆಗಳನ್ನು ಆಡಿಟ್ ಮಾಡಿ ಕೂಡಲೇ ತೆರವುಗೊಳಿಸುವಂತೆ ಜಿಬಿಎ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:29 pm, Thu, 30 April 26

Source link

Video: ಜೀವದ ಜೊತೆ ಚೆಲ್ಲಾಟ; ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ – Kannada News | Moving Train Accident: Man Falls While De boarding, Highlighting Urgent Railway Safety Risks

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಸಾಹಸ ಮಾಡಿ ವ್ಯಕ್ತಿಯೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಬಾಗಿಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ರೈಲು ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸುತ್ತಿದ್ದಂತೆ ಕೆಳಕ್ಕೆ ಜಿಗಿದಿದ್ದು, ವೇಗವಾಗಿ ರೈಲು ಚಲಿಸುತ್ತಿದ್ದ ಪರಿಣಾಮ ಸಮತೋಲನ ತಪ್ಪಿ ನೆಲಕ್ಕೆ ಅಪ್ಪಳಿಸಿದ್ದಾನೆ. ಈ ಭೀಕರ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜೀವಕ್ಕೆ ಅಪಾಯ ತರುವ ಇಂತಹ ಸಾಹಸಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಸಂಪೂರ್ಣವಾಗಿ ನಿಲ್ಲುವ ಮುನ್ನ ಇಳಿಯುವುದು ಅಥವಾ ಹತ್ತುವುದು ಕಾನೂನುಬಾಹಿರ ಮತ್ತು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ಬೇಜವಾಬ್ದಾರಿಯುತ ನಡವಳಿಕೆಗಳು ತೀವ್ರ ಗಾಯ ಅಥವಾ ಸಾವಿಗೆ ಕಾರಣವಾಗಬಹುದು, ಆದ್ದರಿಂದ ಪ್ರಯಾಣಿಕರು ಯಾವಾಗಲೂ ರೈಲು ನಿಂತ ನಂತರವೇ ಇಳಿಯಬೇಕು ಎಂದು ತಿಳಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version