ಬೆಂಕಿ ಅವಘಡ: ಪ್ರಾಣ ಲೆಕ್ಕಿಸದೇ ಪಿಜಿಯಿಂದ ಹಾರಿ ಜೀವ ಉಳಿಸಿಕೊಂಡ ಯುವತಿಯರು, 50 ಮಂದಿ ಜಸ್ಟ್ ಮಿಸ್ – Kannada News | Bengaluru: 50 PG Girls Narrowly Escape After Banner Warehouse Catches Fire in Nandini Layout; Dramatic CCTV Footage Emerges

ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪದ ಬ್ಯಾನರ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 50 ಯುವತಿಯರು ಅಪಾಯದಿಂದ ಪಾರಾಗಿದ್ದು, ಭಾರಿ ದುರಂತ ತಪ್ಪಿದೆ. ಬೆಂಕಿ ಗೋದಾಮಿಗೆ ಹತ್ತಿಕೊಂಡು ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡಕ್ಕೂ ವ್ಯಾಪಿಸಲು ಶುರುವಾಗಿತ್ತು. ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿದ ತಕ್ಷಣ, ಪಿಜಿಯಲ್ಲಿ ವಾಸವಿದ್ದ ಯುವತಿಯರು ಪ್ರಾಣದ ಹಂಗು ತೊರೆದು ಕಟ್ಟಡದಿಂದ ಹೊರಗೆ ಜಿಗಿದು ಓಡಿದ್ದಾರೆ. ಕೆಲವರು ಜೀವ ಉಳಿಸಿಕೊಳ್ಳಲು ಜಿಗಿದು ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ ಸಿಸಿಟಿವಿ ದೃಶ್ಯಾವಳಿ ಸಹಿತ ವರದಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಮೂಹಿಕ ವಿವಾಹದಲ್ಲಿ ಅನಿರೀಕ್ಷಿತ ಅತಿಥಿಯಾಗಿ ಬಂದ ಬಿರುಗಾಳಿ, ಸಪ್ತಪದಿ ತುಳಿಯುವುದ ಬಿಟ್ಟು ಓಡಿಹೋದ 36 ಜೋಡಿಗಳು – Kannada News | Rajasthan: Sudden Storm Disrupts Mass Wedding, Couples Rush to Safety

ಜೈಪುರ, ಏಪ್ರಿಲ್ 28: ಸಾಮೂಹಿಕ ವಿವಾಹ ಸಮಾರಂಭದ ವೇಳೆ ಬಿರುಗಾಳಿ ಬೀಸಿ ನವ ಜೋಡಿಗಳು ಹೆದರಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಬೇಸಿಗೆಯ ಆರಂಭದ ಬಿಸಿಲಿಗೆ ತತ್ತರಿಸಿದ್ದ ರಾಜಸ್ಥಾನದ ಟೋಂಕ್‌ನಲ್ಲಿ ಗುಡುಗು ಸಹಿತ ಮಳೆ ಎಲ್ಲರಿಗೂ ಸಂತೋಷ ನೀಡಬೇಕಿತ್ತು. ಆದರೆ, ಧಾಕಡ್ ಸಮುದಾಯ ಆಯೋಜಿಸಿದ್ದ 36 ಜೋಡಿಗಳ ಸಾಮೂಹಿಕ ವಿವಾಹದ ಮಂಟಪದಲ್ಲಿ ಬಿರುಗಾಳಿ, ಮಳೆ ಭೀಕರ ಅನಾಹುತವನ್ನೇ ಸೃಷ್ಟಿಸಿತ್ತು. ಹೂವಿನ ಅಲಂಕಾರ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದ ವಧು-ವರರು ಮತ್ತು ಅವರ ಸಂಬಂಧಿಕರಿಂದ ಮೈದಾನ ತುಂಬಿ ತುಳುಕುತ್ತಿತ್ತು. ಬಿರುಗಾಳಿಯ ವೇಗ ಎಷ್ಟಿತ್ತೆಂದರೆ, ಬೃಹತ್ ಟೆಂಟ್​ಗಳು ಕಿತ್ತು ಗಾಳಿಯಲ್ಲಿ ಹಾರತೊಡಗಿದ್ದವು. ಮದುವೆಗಾಗಿ ತಂದಿದ್ದ ಉಡುಗೊರೆಗಳು, ಪಾತ್ರೆ ಪದಾರ್ಥಗಳು ಮತ್ತು ಮಂಟಪದ ಸಾಮಗ್ರಿಗಳು ಹತ್ತಿರದ ಹೊಲಗಳಿಗೆ ಚೆಲ್ಲಾಪಿಲ್ಲಿಯಾಗಿ ಹೋದವು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

DC vs RCB, IPL 2026: ಆರ್‌ಸಿಬಿ ವಿರುದ್ಧದ ಅವಮಾನಕರ ಸೋಲಿನ ನಂತರ ಅಕ್ಷರ್ ಪಟೇಲ್​ರಿಂದ ದೊಡ್ಡ ಹೇಳಿಕೆ – Kannada News | Axar Patel Post Match Presentation statement after loss against Royal Challengers Bengaluru

ಬೆಂಗಳೂರು (ಏ. 28): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 39 ನೇ ಪಂದ್ಯದಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧ 75 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‌ಗಳಿಂದ ಸೋತಿತು. ಈ ಹೀನಾಯ ಸೋಲಿನ ನಂತರ, ಏನಾಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ನಾಯಕ ಅಕ್ಷರ್ ಪಟೇಲ್ ಹೇಳಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಟ್ಟ ಆರಂಭವನ್ನು ಪಡೆದು ಕೇವಲ 16.3 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

ಪಂದ್ಯ ಸೋತ ನಂತರ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, “ಏನಾಯಿತು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಆದರೆ ಕ್ರಿಕೆಟ್‌ನಲ್ಲಿ ನೀವು ಪ್ರತಿದಿನ ಜಾಗರೂಕರಾಗಿರಬೇಕು. ಮುಂದಿನ ಪಂದ್ಯಕ್ಕೆ ತಯಾರಿ ಮಾಡುವಾಗ, ನೀವು ಅದನ್ನು ಮರೆತು ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ದೆಲ್ಲಿ

ಈ ಋತುವಿನಲ್ಲಿ ಡಿಸಿ ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿತು. ನಂತರ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದ ಸೋಲನ್ನು ಅನುಭವಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಕೊನೆಯ ಆರು ಪಂದ್ಯಗಳಲ್ಲಿ ಐದನ್ನು ಸೋತಿದೆ. ಜಿಟಿ ವಿರುದ್ಧದ ಪಂದ್ಯದ ನಂತರ ತಂಡದ ಅದೃಷ್ಟ ಬದಲಾಗಿದೆಯೇ ಎಂದು ಕೇಳಿದಾಗ, “ಹೌದು, ನಾನು ಇಂದಿನ ಬಗ್ಗೆ ಮಾತನಾಡುತ್ತಿದ್ದರೆ, ನೀವು ಹಾಗೆ ಭಾವಿಸಬಹುದು, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಆ ಕ್ಯಾಚ್ ತೆಗೆದುಕೊಂಡಿದ್ದರೆ ಅಥವಾ ಆ ರನ್ ಪೂರ್ಣಗೊಳಿಸಿದ್ದರೆ, ಬಹುಶಃ ಆವೇಗ ಮುಂದುವರಿಯುತ್ತಿತ್ತು ಎಂದು ನೀವು ಭಾವಿಸಬಹುದು. ಆದರೆ ಈ ವಿಷಯಗಳು ಸಂಭವಿಸುತ್ತವೆ” ಎಂದು ಅಕ್ಷರ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಅಕ್ಷರ್, “ಐಪಿಎಲ್ ತುಂಬಾ ಕಠಿಣ ಪಂದ್ಯಾವಳಿ. ಎಲ್ಲವೂ ಸರಾಗವಾಗಿ ನಡೆಯುತ್ತದೆ ಎಂದು ನೀವು ಒಂದು ದಿನವೂ ಯೋಚಿಸಲು ಸಾಧ್ಯವಿಲ್ಲ. ನೀವು ಪ್ರತಿ ಬಾರಿಯೂ ಹೊರಗೆ ಬಂದು ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಹೌದು, ಆವೇಗ ಮುಖ್ಯ, ಆದರೆ ನೀವು ಇದು ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತಲೇ ಇರಬಾರದು. ನಿಮ್ಮ ಮುಂದೆ ಏನಿದೆ ಎಂಬುದರ ಮೇಲೆ ಗಮನಹರಿಸುವುದು ಉತ್ತಮ” ಎಂಬುದು ಅಕ್ಷರ್ ಮಾತು.

RCB Playoffs Scenario: ದಾಖಲೆಯ ಗೆಲುವಿನೊಂದಿಗೆ ಪ್ಲೇಆಫ್‌ಗೆ ಹತ್ತಿರವಾದ ಆರ್‌ಸಿಬಿ: ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಈ ಸೋಲಿನಿಂದ ದೆಹಲಿ ತಂಡ ಹೇಗೆ ಚೇತರಿಸಿಕೊಳ್ಳುತ್ತದೆ?

ಈ ಪಂದ್ಯದಿಂದ ಮುಂದುವರಿಯುವ ಬಗ್ಗೆ ಮಾತನಾಡಿದ ಅಕ್ಷರ್, “ನಾವು ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ನೀವು ನಕಾರಾತ್ಮಕವಾಗಿ ಯೋಚಿಸಿದರೆ, ನೀವು ಪಂದ್ಯವನ್ನು ಕಳೆದುಕೊಳ್ಳುತ್ತೀರಿ. ನೀವು ಸಕಾರಾತ್ಮಕವಾಗಿ ಯೋಚಿಸಿದರೆ, ನೀವು ಉತ್ತಮ ಪ್ರದರ್ಶನ ನೀಡುತ್ತೀರಿ. ಆದ್ದರಿಂದ ನಾವು ಇದನ್ನು ಮರೆತು ಮುಂದುವರಿಯಬೇಕು. ನಾನು ತಂಡಕ್ಕೂ ಅದನ್ನೇ ಹೇಳುತ್ತೇನೆ: ಒಂದು ಕೆಟ್ಟ ಪಂದ್ಯ ಎಂದರೆ ನೀವು ಪರಸ್ಪರ ಬೆರಳು ತೋರಿಸಲು ಅಥವಾ ಬ್ಯಾಟ್ಸ್‌ಮನ್‌ಗಳನ್ನು ದೂಷಿಸಲು ಪ್ರಾರಂಭಿಸಬೇಕು ಎಂದಲ್ಲ. ನಾವು ಸಕಾರಾತ್ಮಕವಾಗಿರಬೇಕು ಸರಿಯಾದ ಮನಸ್ಥಿತಿಯನ್ನು ಕಾಪಾಡಿಕೊಳ್ಳಬೇಕು.”

“ಆರ್​ಸಿಬಿ ತಂಡದಲ್ಲಿರುವವರು ವಿಶ್ವ ದರ್ಜೆಯ ಬೌಲರ್‌ಗಳು ಮತ್ತು ಚೆಂಡನ್ನು ಎಲ್ಲಿ ಬೇಕಾದರೂ ಸ್ವಿಂಗ್ ಮಾಡಬಹುದು; ಅವರು ಪ್ರತಿಯೊಂದು ಮೈದಾನದಲ್ಲೂ ಅದನ್ನು ಮಾಡಿದ್ದಾರೆ. ಆದರೆ ನಮ್ಮ ಆರಂಭಿಕರು ಅಥವಾ ನಮ್ಮ ಯಾವುದೇ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೊದಲ ಕೆಲವು ಓವರ್‌ಗಳಲ್ಲಿ ಉತ್ತಮವಾಗಿ ಆಡಿದ್ದರೆ, ಅದು ವ್ಯತ್ಯಾಸವನ್ನುಂಟುಮಾಡಬಹುದಿತ್ತು. ಆದರೆ ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.” ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​​ಸಿಬಿ ಅದ್ಭುತವ ವಿನ್ ಬಳಿಕ ಕೊಹ್ಲಿ ನಗು ನೋಡಿ – Kannada News | After Fabolous Win Virat Kohli Sweet Smile Video Goes viral

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​​ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ ಅದ್ಭುತ ಗೆಲುವು ಸಾಧಿಸಿದೆ. ಕೇವಲ 76 ರನ್​​ಗಳ ಟಾರ್ಗೆಟ್​​ ಅನ್ನು 6.3 ಓವರ್​​ಗಳಲ್ಲಿ ತಂಡ ಪೂರ್ಣಗೊಳಿಸಿದೆ. ವಿನ್ ಆದ ಬಳಿಕ ಕೊಹ್ಲಿ ಅವರ ಮುದ್ದಾದ ನಗುವಿನ ವಿಡಿಯೋ ವೈರಲ್ ಆಗಿದೆ. ಅವರು ಮೈದಾನದಲ್ಲಿ ತುಂಬಾನೇ ಅಗ್ರೆಷನ್ ತೋರಿಸುತ್ತಾರೆ. ಅದೇ ರೀತಿ ಅವರ ಮುದ್ದಾದ ನಗುವಿನ ವಿಡಿಯೋ ಕೂಡ ವೈರಲ್ ಆಗುತ್ತದೆ. ವಿಡಿಯೋ ಮೇಲ್ಭಾಗದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ, ಇಬ್ಬರು ಸಾವು, ಆರು ಮಂದಿಗೆ ಗಾಯ – Kannada News | Bus Fire in Hansi Turns Fatal, Multiple Injured

ಹರಿಯಾಣ, ಏಪ್ರಿಲ್ 28: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ ಹೊತ್ತಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಿವಾನಿ-ಹನ್ಸಿ ರಸ್ತೆಯಲ್ಲಿ ಖಾಸಗಿ ಬಸ್‌ನಲ್ಲಿ ಮಿಲ್ಕ್‌ಪುರ್ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಬಸ್ ಭಿವಾನಿಯಿಂದ ಹನ್ಸಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.ಹೆಚ್ಚಿನ ಪ್ರಯಾಣಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಇಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ. ಗಾಯಾಳುಗಳು ಪ್ರಸ್ತುತ ಹನ್ಸಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಸಿಲಿನ ಬೇಗೆಗೆ ಕೋಲ್ಡ್ ಬಿಯರ್​ಗೆ ಭಾರಿ ಬೇಡಿಕೆ! ಬೆಂಗಳೂರಿನಲ್ಲಿ ಸ್ಟಾಕ್ ಕೊರತೆ – Kannada News | Bengaluru Heatwave: Beer Sales Surge by 50 percent as Drinkers Ditch Hard Liquor; Supply Shortage Hits City

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ ಹೆಚ್ಚುತ್ತಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಈ ಬೇಸಿಗೆಯ ಹೊಡೆತಕ್ಕೆ ಮದ್ಯಪ್ರಿಯರು ಆಯ್ಕೆಯನ್ನು ಬದಲಿಸಿಕೊಂಡಿದ್ದು, ಹಾರ್ಡ್ ಡ್ರಿಂಕ್ಸ್ ಅಥವಾ ಮದ್ಯ (Liquor) ಬದಿಗಿಟ್ಟು ಚಿಲ್ಡ್ ಬಿಯರ್ (Chilled Beer) ಮೊರೆ ಹೋಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ (Beer Sales) ಶೇ 50 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ (Beer Supply Shortage) ಆಗದಿರುವುದು ಮದ್ಯ ಮಾರಾಟಗಾರರ ಆತಂಕಕ್ಕೆ ಕಾರಣವಾಗಿದೆ.

ಬಿಯರ್ ಹವಾ, ಐಎಂಎಲ್ ಡೌನ್

ಬೆಂಗಳೂರಿನಲ್ಲಿ ತಾಪಮಾನವು ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ತಂಪು ಪಾನೀಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ವಿಚಾರಕ್ಕೆ ಬಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಐಎಂಎಲ್ (IML) ಅಥವಾ ಹಾರ್ಡ್ ಡ್ರಿಂಕ್ಸ್ ವ್ಯಾಪಾರವು ಶೇ 20 ರಷ್ಟು ಕುಸಿತ ಕಂಡಿದೆ. ಇದಕ್ಕೆ ವಿರುದ್ಧವಾಗಿ ಬಿಯರ್ ಮಾರಾಟ ದುಪ್ಪಟ್ಟಾಗಿದೆ. ಈ ಹಿಂದೆ ದಿನಕ್ಕೆ 100 ಬಿಯರ್ ಬಾಟಲಿಗಳು ಮಾರಾಟವಾಗುತ್ತಿದ್ದ ಮಳಿಗೆಗಳಲ್ಲಿ ಈಗ 200ಕ್ಕೂ ಹೆಚ್ಚು ಬಿಯರ್ ಬಾಟಲಿಗಳು ಖಾಲಿಯಾಗುತ್ತಿವೆ.

ಬಿಯರ್ ಪೂರೈಕೆಯಲ್ಲಿ ಸಮಸ್ಯೆ

ಬಿಯರ್ ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದರೂ, ಮದ್ಯದಂಗಡಿಗಳಿಗೆ ಸರಿಯಾದ ಸಮಯಕ್ಕೆ ಸ್ಟಾಕ್ ತಲುಪುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ. ‘ಬಿಸಿಲಿನಿಂದಾಗಿ ಜನರು ಹಾಟ್ ಡ್ರಿಂಕ್ಸ್ ಬಿಟ್ಟು ಬಿಯರ್ ಕೇಳುತ್ತಿದ್ದಾರೆ, ಆದರೆ ಸಪ್ಲೈ ಸರಿಯಾಗಿಲ್ಲದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ’ ಎಂದು ಮದ್ಯ ಮಾರಾಟಗಾರರಾದ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ. ಇತ್ತ ಮದ್ಯಪ್ರಿಯರು ಕೂಡ ‘ಬಿಸಿಲಿನ ತಾಪಕ್ಕೆ ದಿನಕ್ಕೆರಡು ಚಿಲ್ಡ್ ಬಿಯರ್ ಕುಡಿದರಷ್ಟೇ ಸಮಾಧಾನ’ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!

ಒಟ್ಟಾರೆಯಾಗಿ, ಈ ಬಾರಿಯ ಕಡು ಬೇಸಿಗೆಯು ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದರೂ, ರಾಜ್ಯ ಸರ್ಕಾರದ ಖಜಾನೆಗೆ ಮಾತ್ರ ಬಿಯರ್ ಮಾರಾಟದ ಮೂಲಕ ಭರ್ಜರಿ ಆದಾಯವನ್ನು ತಂದುಕೊಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮೃತಧಾರೆ’ ಧಾರಾವಾಹಿಗೆ ಅಖಿಲಾಂಡೇಶ್ವರಿಯ ಎಂಟ್ರಿ – Kannada News | Amruthadhare Serial Twist: Gautam Devan’s Plan to Shock JD and Akhilandeshwari Entry

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವು ಎದುರಾಯಿತು. ಈಗ ಜೆಡಿಗೆ ಶಾಕ್ ಕೊಡೋಕೆ ಗೌತಮ್ ದೀವಾನ್ ರೆಡಿ ಆಗಿದ್ದಾನೆ. ಹಾಗಾದರೆ ಏನು ಆ ಶಾಕ್ ಏನು? ಅದನ್ನು ನಾವು ಇಂದು ಹೇಳುತ್ತಾ ಇದ್ದೇವೆ. ಗೌತಮ್ ಸಾಕಷ್ಟು ಸಾಲ ಮಾಡಿಕೊಂಡಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಆತ ಕಂಪನಿಯನ್ನು ಮಾರಿ ಹೋಗುವ ಪ್ಲ್ಯಾನ್ ಅಲ್ಲಿ ಇದ್ದಾನೆ. ಆದರೆ, ಅಂದುಕೊಂಡಂತೆ ಇಲ್ಲಿ ನಡೆಯುತ್ತಿಲ್ಲ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಒಂದು ದೊಡ್ಡ ತಿರುವು ಎದುರಾಗಿದೆ. ಆ ತಿರುವಿನ ಬಗ್ಗೆ ನಾವು ವಿವರಿಸುತ್ತಿದ್ದೇವೆ. ಜೆಡಿ ಒಂದು ಬೆಟ್ಟಿಂಗ್ ಕಂಪನಿ ಮೇಲೆ ಹೂಡಿಕೆ ಮಾಡಿದ್ದ. ಅದು ನೂರಾರು ಕೋಟಿ ರೂಪಾಯಿ. ಈಗ ದುಡ್ಡು ಕೊಟ್ಟವನು ಬಂದು ಈತನ ಹಿಂದೆ ಬಿದ್ದಿದ್ದಾನೆ. ಹೀಗಾಗಿ ಕಂಪನಿಯನ್ನು ಮಾರಿ ಹೋಗಲು ನಿರ್ಧರಿಸಿದ್ದಾನೆ ಜೆಡಿ.

ವಿಶೇಷ ಎಂದರೆ ಈ ಕಂಪನಿಯನ್ನು ಖರೀದಿ ಮಾಡಲು ಮುಂದಾಗಿರೋದು ಗೌತಮ್ ಅನ್ನೋದು ವಿಶೇಷ. ‘ಪಾರು’ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರವನ್ನು ವಿನಯಾ ಪ್ರಸಾದ್ ಮಾಡಿದ್ದರು. ಈಗ ಆ ಪಾತ್ರವನ್ನು ಮತ್ತೆ ಕರೆತರಲಾಗಿದೆ ಎಂಬುದು ವಿಶೇಷ. ಗೌತಮ್ ದೀವಾನ್ ಉದ್ಯಮಕ್ಕೆ ಹೂಡಿಕೆ ಮಾಡಲು ಸಹಾಯಕ್ಕೆ ಬರುವ ವ್ಯಕ್ತಿಯಾಗಿ ವಿನಯಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ.

ಗೌತಮ್ ದೀವಾನ್ ತಮ್ಮ ಉದ್ಯಮ ವಿಸ್ತರಣೆಗೆ ಹಣದ ಸಹಾಯ ಕೇಳಿ ಅಖಿಲಾಂಡೇಶ್ವರಿ ಬಳಿ ಹೋಗುತ್ತಾನೆ. ಆ ಸಮಯಕ್ಕೆ ಸರಿಯಾಗಿ ತಮ್ಮದೇ ಮನೆ ಹರಾಜಿಗೆ ಬಂದಿರೋ ವಿಷಯ ಗೊತ್ತಾಗುತ್ತದೆ. ಆಗ ಅಖಿಲಾಂಡೇಶ್ವರಿ ಬಳಿ ಬ್ಲ್ಯಾಂಕ್ ಚೆಕ್ ಪಡೆದು ಗೌತಮ್ ಹೋಗುತ್ತಾನೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಇನ್ನು, ಗೌತಮ್ ತಾಯಿ ಕಷ್ಟದಲ್ಲಿ ಇದ್ದಾಳೆ. ಆಕೆಯೂ ಸಾಲ ಮಾಡಿ ಸಿಕ್ಕಿ ಬಿದ್ದಿದ್ದಾಳೆ. ಹೀಗಿರುವಾಗಲೇ ಸಾಲ ಕೊಟ್ಟಿರುವವಳು ಆಕೆಯನ್ನು ಕಿಡ್ನ್ಯಾಪ್ ಮಾಡಿ ಹಿಡಿದಿಟ್ಟುಕೊಂಡಿದ್ದಳು. ಆಕೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಇವಳನ್ನು ಸೇವ್ ಮಾಡುವ ಕೆಲಸವನ್ನು ಗೌತಮ್ ದೀವಾನ್ ಮಾಡಿದ್ದಾನೆ. ಶಕುಂತಲ ಸಂಪೂರ್ಣವಾಗಿ ಬದಲಾಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB Playoffs Scenario: ದಾಖಲೆಯ ಗೆಲುವಿನೊಂದಿಗೆ ಪ್ಲೇಆಫ್‌ಗೆ ಹತ್ತಿರವಾದ ಆರ್‌ಸಿಬಿ: ಇನ್ನೆಷ್ಟು ಪಂದ್ಯ ಗೆಲ್ಲಬೇಕು? – Kannada News | RCB moves closer to playoffs with record win vs Delhi capitlas Here is the IPL 2026 Playoffs Scenario

ಐಪಿಎಲ್ 2026 ರ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವು ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಮೊದಲ ನಾಲ್ಕು ಓವರ್‌ಗಳಲ್ಲಿ ಎಂಟು ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದರು. ಆರ್‌ಸಿಬಿ 6.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ತಲುಪುವ ಸಾಧ್ಯತೆಗಳು ಹೆಚ್ಚು ಕಷ್ಟಕರವಾಗಿದೆ, ಆದರೆ ಆರ್‌ಸಿಬಿಯ ಹಾದಿ ಸುಲಭವಾಗಿದೆ.

ಪ್ಲೇಆಫ್‌ಗೆ ಹತ್ತಿರವಾಗುತ್ತಿರುವ ಆರ್‌ಸಿಬಿ

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟು ಪಂದ್ಯಗಳಿಂದ 12 ಅಂಕಗಳನ್ನು ಗಳಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
  • ಒಂದು ತಂಡ 16 ಅಂಕಗಳನ್ನು ತಲುಪಿದರೆ, ಅದು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಎಂರ್ಥ.
  • ಪ್ಲೇಆಫ್ ತಲುಪಲು ಆರ್‌ಸಿಬಿಗೆ ಕೇವಲ ಎರಡು ಗೆಲುವುಗಳು ಬೇಕಾಗಿವೆ.
  • ಆರ್‌ಸಿಬಿ ತಂಡವು ಇನ್ನೂ ಆರು ಪಂದ್ಯಗಳನ್ನು ಆಡಬೇಕಾಗಿದೆ, ಮತ್ತು ಪ್ಲೇಆಫ್ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇವಲ ಎರಡು ಗೆಲುವುಗಳು ಮಾತ್ರ ಅಗತ್ಯವಿದೆ.
  • ತಂಡವು ಅಗ್ರ-2 ರಲ್ಲಿ ಸ್ಥಾನ ಪಡೆದರೆ, ಫೈನಲ್ ತಲುಪಲು ಎರಡು ಅವಕಾಶಗಳನ್ನು ಪಡೆಯುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಸಮೀಕರಣ

8 ಪಂದ್ಯಗಳಲ್ಲಿ 3 ಗೆಲುವು ಮತ್ತು 5 ಸೋಲುಗಳೊಂದಿಗೆ, ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ತಂಡವು ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದಿದೆ. ಅಂದಿನಿಂದ, ಅವರು ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. 16 ಅಂಕಗಳನ್ನು ತಲುಪಲು, ಅಕ್ಷರ್ ಪಟೇಲ್ ತಂಡವು ಉಳಿದ 6 ಪಂದ್ಯಗಳಲ್ಲಿ 5 ರಲ್ಲಿ ಗೆಲ್ಲಬೇಕಾಗುತ್ತದೆ. ತಂಡಗಳು 14 ಅಂಕಗಳೊಂದಿಗೆ ಪ್ಲೇಆಫ್ ತಲುಪಬಹುದು. ಆದರೆ ಅದಕ್ಕಾಗಿ, ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಿವ್ವಳ ರನ್ ದರವನ್ನು ಸುಧಾರಿಸಬೇಕಾಗುತ್ತದೆ, ಪ್ರಸ್ತುತ ಡಿಸಿ ರನ್​ರೇಟ್ -1.06 ಆಗಿದೆ. 2024 ರ ಋತುವಿನಲ್ಲಿ ಡೆಲ್ಲಿ 14 ಅಂಕಗಳನ್ನು ಹೊಂದಿತ್ತು. ಆರ್‌ಸಿಬಿ 14 ಅಂಕಗಳೊಂದಿಗೆ ಪ್ಲೇಆಫ್ ತಲುಪಿತು ಆದರೆ ಕಳಪೆ ನಿವ್ವಳ ರನ್ ದರದಿಂದಾಗಿ ಸೋತಿತು.

DC vs RCB: ಡೆಲ್ಲಿ ವಿರುದ್ಧದ ಸೇಡಿನ ಸಮರವನ್ನು ಗೆದ್ದು ಬೀಗಿದ ಆರ್​ಸಿಬಿ

ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ಗೆಲುವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ವಿರುದ್ಧ ಸುಲಭವಾಗಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 81 ಎಸೆತಗಳು ಬಾಕಿ ಇರುವಾಗ 9 ವಿಕೆಟ್‌ಗಳಿಂದ ಜಯಗಳಿಸಿತು. ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಮೂಲಕ 7 ನೇ ಓವರ್‌ನಲ್ಲಿಯೇ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಗೆಲುವು ಸಾಧಿಸಿದ ಸಾಧನೆ ಮಾಡಿದೆ. ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಉಳಿದಿರುವ ಚೆಂಡುಗಳೊಂದಿಗೆ ಅತಿದೊಡ್ಡ ಗೆಲುವಿನ ದಾಖಲೆಯನ್ನು ಹೊಂದಿದೆ. 2008 ರ ಋತುವಿನಲ್ಲಿ ತಂಡವು ಕೆಕೆಆರ್ ಅನ್ನು 87 ಎಸೆತಗಳು ಬಾಕಿ ಇರುವಾಗ ಸೋಲಿಸಿತ್ತು. ಆರ್‌ಸಿಬಿ ತಂಡವು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐಪಿಎಲ್‌ನಿಂದ ಹೊರಬಿದ್ದಿರುವ ಕೊಚ್ಚಿ ಟಸ್ಕರ್ಸ್ ಕೇರಳ, 2011 ರಲ್ಲಿ 76 ಎಸೆತಗಳು ಬಾಕಿ ಇರುವಾಗ ರಾಜಸ್ಥಾನ ರಾಯಲ್ಸ್ ಅನ್ನು ಸೋಲಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಇಂದು ಬೆಳಗಾವಿಯ ಏರ್ ಕ್ವಾಲಿಟಿ ಎಲ್ಲದಕ್ಕಿಂತ ಬೆಸ್ಟ್! – Kannada News | Bangalore Air Pollution Crisis: Belagavi Air Quality is better than most cities

ಇಂದು ಬೆಳಗಾವಿಯ ಏರ್ ಕ್ವಾಲಿಟಿ ಎಕ್ಕದಕಿಂತ ಬೆಸ್ಟ್!

ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ಬೆಂಗಳೂರು, ಮಂಗಳೂರಿನ ಏರ್ ಕ್ವಾಲಿಟಿ (Bengaluru Air Quality) ತಕ್ಕಮಟ್ಟಿಗೆ ಸುಧಾರಿಸಿದೆ. ಆದರೂ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಬೆಳಗಾವಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಳಗಾವಿಯ ಏರ್ ಕ್ವಾಲಿಟಿ ಇಂದು ಕೇವಲ 40ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 131ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 100ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 135
  • ಮಂಗಳೂರು-126
  • ಮೈಸೂರು – 113
  • ಬೆಳಗಾವಿ – 40
  • ಕಲಬುರ್ಗಿ-95
  • ಶಿವಮೊಗ್ಗ –106
  • ಬಳ್ಳಾರಿ – 137
  • ಹುಬ್ಬಳ್ಳಿ- 60
  • ಉಡುಪಿ –124
  • ವಿಜಯಪುರ – 93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆ, ವೈದ್ಯಕೀಯ ಉಪಕರಣಗಳ ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವು – Kannada News | Hospital Lift Accident Claims Life of Staffer, Safety Under Scrutiny

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 50 ವರ್ಷ ವಯಸ್ಸಿನ ಜ್ಯೋತಿ ಅಹಿರೆ ಎಂಬುವವರ ತಲೆ ಲಿಫ್ಟ್​ನಲ್ಲಿ ಸಿಲುಕಿ ಒದ್ದಾಡಿದ್ದಾರೆ. ಸಿಸಿಟಿವಿಯಲ್ಲಿ ಈ ಭಯಾನಕ ಕ್ಷಣ ಸೆರೆಯಾಗಿದೆ.
ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಆದರೆ ಗಾಯಗಳಿಂದಾಗಿ ಅವರು ಸಾವನ್ನಪ್ಪಿದರು. ಈ ಘಟನೆಯು ಆಸ್ಪತ್ರೆಯಲ್ಲಿನ ಸುರಕ್ಷತಾ ಲೋಪದ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Exit mobile version