Headlines

RCB ಗೆಲುವಿಗೆ ಕಾರಣವಾದ 4 ಎಸೆತಗಳು..!

RCB ಗೆಲುವಿಗೆ ಕಾರಣವಾದ 4 ಎಸೆತಗಳು..!

ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಮ್ಯಾಚ್​ನಲ್ಲಿ ಆರ್​ಸಿಬಿ ತಂಡವು ರೋಚಕ ಜಯ ಸಾಧಿಸಿದೆ. ಆರ್​ಸಿಬಿ ತಂಡದ ಈ ಗೆಲುವಿಗೆ ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ದಾರ್ ಎಷ್ಟು ಕಾರಣರೋ,  ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ​ ರಾಜ್​ ಬಾವ ಕೂಡ ಅಷ್ಟೇ ಕಾರಣರು.

ಏಕೆಂದರೆ ಈ ಮ್ಯಾಚ್​ನ ಅಂತಿಮ ಓವರ್​ನಲ್ಲಿ ಆರ್​ಸಿಬಿ ತಂಡಕ್ಕೆ 15 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ರಾಜ್​ ಬಾವ ಬರೋಬ್ಬರಿ 10 ಎಸೆತಗಳನ್ನು ಎಸೆದಿದ್ದರು. ಅಂದರೆ ಹೆಚ್ಚುವರಿ ಮೂರು ಎಸೆತಗಳೇ ಮುಂಬೈ ಇಂಡಿಯನ್ಸ್ ಪಾಲಿಗೆ ಮುಳುವಾಯಿತು.

ರಾಜ್​ ಬಾವ ಕೊನೆಯ ಓವರ್​:

ಮೊದಲ ಎಸೆತವನ್ನು ವೈಡ್ ಎಸೆದಿದ್ದ ರಾಜ್ ಬಾವ, ಮರು ಎಸೆತದಲ್ಲಿ ನೋ ಬಾಲ್ ಮಾಡಿದರು. ಪರಿಣಾಮ ಆರ್​ಸಿಬಿ ತಂಡಕ್ಕೆ 2 ರನ್​ಗಳು ಸಿಕ್ಕವು. ಇನ್ನು ಫ್ರಿಹಿಟ್ ಎಸೆತದಲ್ಲಿ ಒಂದು ರನ್ ನೀಡಿದರು.

ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಇದರಿಂದ ಎಕ್ಸ್​ಟ್ರಾ ಇನ್ನೊಂದು ರನ್ ಸಿಕ್ಕಿತು. ಆ ಬಳಿಕ ರೊಮಾರಿಯೊ ಶೆಫರ್ಡ್ ವಿಕೆಟ್ ಪಡೆದರು. ಆದರೆ ಆ ಬಳಿಕ ಭುವನೇಶ್ವರ್ ಕುಮಾರ್​​ಗೆ ಬಾನ್ಸರ್ ಎಸೆಯಲು ಹೋಗಿ ಮತ್ತೊಂದು ವೈಡ್ ನೀಡಿದರು. ಮರು ಎಸೆತದಲ್ಲಿ ಭುವಿ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ ಒಂದು ರನ್ ಕಲೆಹಾಕುವ ಮೂಲಕ ರಾಸಿಖ್ ದಾರ್​ಗೆ ಸ್ಟ್ರೈಕ್ ನೀಡಿದರು.

ಅದರಂತೆ ಅಂತಿಮ ಎಸೆತದಲ್ಲಿ ಆರ್​ಸಿಬಿ ತಂಡಕ್ಕೆ 2 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ರಾಸಿಖ್ ನೀಡಿದ ಕ್ಯಾಚ್ ಕೈಚೆಲ್ಲುವ ಮೂಲಕ ರಾಜ್ ಬಾವ 2 ರನ್​ ಬಿಟ್ಟು ಕೊಟ್ಟರು. ಈ ಮೂಲಕ ಆರ್​ಸಿಬಿ ತಂಡ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ದಾಖಲಿಸಿತು.

ಅಂದರೆ ಇಲ್ಲಿ ರಾಜ್​ ಬಾವ ಕೊನೆಯ ಓವರ್​ನಲ್ಲಿ ಮೂರು ವೈಡ್ ಹಾಗೂ ಒಂದು ನೋ ಬಾಲ್ ಎಸೆಯುವ ಮೂಲಕ ಒಟ್ಟು 10 ಎಸೆತಗಳನ್ನು ಎಸೆದಿದ್ದರು. ಈ ಹೆಚ್ಚುವರಿ 4 ಎಸೆತಗಳ ಮೂಲಕ ಆರ್​ಸಿಬಿ  5 ರನ್​ಗಳನ್ನು ಕಲೆಹಾಕಿದ್ದರು. ಅಂದರೆ ರಾಜ್​ ಬಾವ ಎಸೆದ ಹೆಚ್ಚುವರಿ ಎಸೆತಗಳೇ ಆರ್​ಸಿಬಿ ಗೆಲುವಿಗೆ ಕಾರಣವಾಯ್ತು ಎಂದರೆ ತಪ್ಪಾಗಲಾರದು.

 

 

Source link

Leave a Reply

Your email address will not be published. Required fields are marked *