ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 22 ರಿಂದ 28 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರದಲ್ಲಿ ಆಗುವ ಆಗುಹೋಗುಗಳು, ತಿಥಿಗಳ ಮಹತ್ವ ಮತ್ತು ವಿಶೇಷ ಘಟನೆಗಳ ಕುರಿತು ಮಾಹಿತಿ ನೀಡಲಾಗಿದೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು ಮತ್ತು ಶುಕ್ಲ ಪಕ್ಷ ಈ ವಾರದಲ್ಲಿ ಇರಲಿದೆ. ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ ಮತ್ತು ಚತುರ್ದಶಿ ತಿಥಿಗಳು ಬರುತ್ತವೆ. ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತೋತ್ಸವ, ಹೊಸೂರಿನಲ್ಲಿ ರಥೋತ್ಸವ, ಹಿಂಗಳೇಶ್ವರದಲ್ಲಿ ಸಿದ್ದಲಿಂಗೇಶ್ವರ ಪುಣ್ಯಾರಾಧನೆ, ಶ್ರೀರಂಗಪಟ್ಟಣದಲ್ಲಿ ರಥೋತ್ಸವ, ಹೊಸಹೊಳಲಿನಲ್ಲಿ ಉತ್ಸವ ಈ ವಾರದಲ್ಲಿ ನಡೆಯಲಿವೆ. ಶನಿ ಪ್ರದೋಷ, ಕೆಂಪೇಗೌಡರ ಜಯಂತೋತ್ಸವ ಮತ್ತು ನಿರ್ಜಲ ಏಕಾದಶಿಯೂ ಈ ವಾರದ ವಿಶೇಷ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
