ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ.. – Kannada News | Ravi in Mesha Rashi: Career, Health, and Life Predictions for All Zodiacs

​ರವಿಯು ಮೇಷ ರಾಶಿಯಲ್ಲಿದ್ದು ಈ ಕೆಳಗಿನ ವಿಭಾಗಗಳಲ್ಲಿದ್ದಾನೆ. ಇಲ್ಲಿ ರವಿ ಬಲಿಷ್ಠ. ಕುಜ ದ್ರೇಕ್ಕಾಣದಲ್ಲಿದ್ಸದು ಇದು ಸತ್ವ ಮತ್ತು ಸಾಹಸವನ್ನು ಸೂಚಿಸುತ್ತದೆ. ಚಂದ್ರ ಹೋರೆಯು ಸೌಮ್ಯತೆ ಮತ್ತು ಮಾನಸಿಕ ಬಲವನ್ನು ನೀಡುತ್ತದೆ. ​ಬುಧನ ನವಾಂಶವು ರವಿ ಸ್ವಲ್ಪ ಬೌದ್ಧಿಕ ಚತುರತೆಯನ್ನು ಪಡೆಯುತ್ತಾನೆ. ಬುಧನ ತ್ರಿಂಶಾಂಶದಿಂದವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲಕ್ಕೆ ಒತ್ತು ನೀಡುತ್ತದೆ. ಕುಜ ದ್ವಾದಶಾಂಶದಲ್ಲಿ ಅಧಿಕಾರ ಮತ್ತು ಶಕ್ತಿಯನ್ನು ಪುನರುಚ್ಚರಿಸುತ್ತದೆ.

ರಾಶಿಗಳ ಮೇಲೆ ಸಾಮಾನ್ಯ ಪರಿಣಾಮಗಳು

​ರವಿಯು ಮೇಷದಲ್ಲಿ ಬಲಿಷ್ಠನಾಗಿರುವುದರಿಂದ ಮತ್ತು ವರ್ಗಗಳಲ್ಲಿ ಮಂಗಳ ಹಾಗೂ ಬುಧನ ಪ್ರಭಾವ ಹೆಚ್ಚಿರುವುದರಿಂದ ಈ ಕೆಳಗಿನ ಫಲಗಳನ್ನು ನಿರೀಕ್ಷಿಸಬಹುದು.

​ಮೇಷ, ಸಿಂಹ, ಧನು ರಾಶಿಯಲ್ಲಿ ಇದ್ದರೆ ಅದ್ಭುತ ಆತ್ಮವಿಶ್ವಾಸ, ಆಡಳಿತಾತ್ಮಕ ಜಯ ಮತ್ತು ಸಮಾಜದಲ್ಲಿ ಗೌರವ ಪ್ರಾಪ್ತಿ. ​ಮಿಥುನ, ತುಲಾ, ಕುಂಭದಲ್ಲಿ ರವಿ ಇದ್ದರೆ ಹೊಸ ಯೋಜನೆಗಳ ಆರಂಭ, ಉತ್ತಮ ಸಂವಹನ ಮತ್ತು ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು. ​ವೃಷಭ, ಕನ್ಯಾ, ಮಕರದಲ್ಲಿ ರವಿ ಇದ್ದರೆ ವೃತ್ತಿಯಲ್ಲಿ ಪ್ರಗತಿ, ಆದರೆ ಕೆಲಸದ ಒತ್ತಡ ಮತ್ತು ಪಿತ್ತ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.​ಕರ್ಕಾಟಕ, ವೃಶ್ಚಿಕ, ಮೀನದಲ್ಲಿ ರವಿ ಇದ್ದರೆ ಮಿಶ್ರಫಲ. ಆಸ್ತಿ ವಿಚಾರದಲ್ಲಿ ಲಾಭವಾದರೂ, ಮಾನಸಿಕ ಅಶಾಂತಿ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

​ರವಿ ದಶೆಯ ಶುಭ-ಅಶುಭ ಫಲಗಳು

​ರವಿಯ ದಶೆಯು ವ್ಯಕ್ತಿಯ ಜಾತಕದಲ್ಲಿ ರವಿಯ ಸ್ಥಾನ ಮತ್ತು ಲಗ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಶುಭ ಫಲ :

​ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ಲಗ್ನದವರಿಗೆ ರವಿ ದಶೆಯು ಸಾಮಾನ್ಯವಾಗಿ ಶುಭ ಫಲ ನೀಡುತ್ತದೆ. ಸರ್ಕಾರಿ ಉದ್ಯೋಗ, ರಾಜಕೀಯ ಲಾಭ, ತಂದೆಯಿಂದ ಆಸ್ತಿ ಅಥವಾ ಸಹಾಯ, ಮತ್ತು ಸಮಾಜದಲ್ಲಿ ಉನ್ನತ ಪದವಿ ಸಿಗುತ್ತದೆ.

ಅಶುಭ ಫಲ :

​ವೃಷಭ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನದವರಿಗೆ ರವಿ ದಶೆಯು ಸವಾಲುಗಳನ್ನು ತರಬಹುದು. ಕಣ್ಣಿನ ಸಮಸ್ಯೆ, ಉಷ್ಣ ಸಂಬಂಧಿ ಕಾಯಿಲೆಗಳು, ಮೇಲಧಿಕಾರಿಗಳೊಂದಿಗೆ ಸಂಘರ್ಷ ಅಥವಾ ಅನಗತ್ಯ ಅಲೆದಾಟ ಉಂಟಾಗಬಹುದು.

ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ

​ಮಿಶ್ರ ಫಲ :

​ಮಿಥುನ ಲಗ್ನದವರಿಗೆ ರವಿ ದಶೆಯು ಪ್ರಯತ್ನಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಸಣ್ಣಪುಟ್ಟ ಅಡೆತಡೆಗಳ ನಂತರ ಯಶಸ್ಸು ಸಿಗುತ್ತದೆ.

​ಜಾತಕದಲ್ಲಿ ರವಿಯು 6, 8 ಅಥವಾ 12ನೇ ಮನೆಯಲ್ಲಿದ್ದರೆ ಅಥವಾ ಶನಿಯ ದೃಷ್ಟಿಯಲ್ಲಿದ್ದರೆ, ಶುಭ ಲಗ್ನವಾಗಿದ್ದರೂ ಮಿಶ್ರ ಫಲಗಳನ್ನೇ ನಿರೀಕ್ಷಿಸಬೇಕಾಗುತ್ತದೆ.

ಸೂರ್ಯನು ಇಲ್ಲಿ ಬುಧನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಈ ದಶೆಯಲ್ಲಿ ವ್ಯಕ್ತಿಯು ಕೇವಲ ದೈಹಿಕ ಬಲಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿವಂತಿಕೆಯನ್ನು ಬಳಸಿ ಕಾರ್ಯಸಿದ್ಧಿ ಮಾಡಿಕೊಳ್ಳುತ್ತಾನೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:56 pm, Tue, 5 May 26

Source link

Leave a Reply

Your email address will not be published. Required fields are marked *