ಮೈಸೂರು, ಆಗಸ್ಟ್ 1: ಸಾಂಸ್ಕೃತಿಕ ನಗರಿ ಮೈಸೂರು ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕೆ ಸಜ್ಜಾಗಿದೆ. ರಾಮಕೃಷ್ಣ ಆಶ್ರಮದಲ್ಲಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಲು ಮೋದಿ ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತಲುಪುವ ಪ್ರಧಾನಿ, ಅಲ್ಲಿಂದ ಸೇನಾ ಚಾಪರ್ ಮೂಲಕ ಓವಲ್ ಮೈದಾನಕ್ಕೆ ಬರಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಓವಲ್ ಮೈದಾನದ ಸುತ್ತಮುತ್ತ, ರಾಮಕೃಷ್ಣ ಆಶ್ರಮದ ರಸ್ತೆಯುದ್ದಕ್ಕೂ ಮತ್ತು ಪ್ರಮುಖ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರ ನೇತೃತ್ವದಲ್ಲಿ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ ಒಬ್ಬ ಎಸ್ಪಿ, ಒಬ್ಬ ಕಮಿಷನರ್, ನಾಲ್ಕು ಅಡಿಷನಲ್ ಎಸ್ಪಿಗಳು, 18 ಇನ್ಸ್ಪೆಕ್ಟರ್ಗಳು, 40 ಸಬ್ ಇನ್ಸ್ಪೆಕ್ಟರ್ಗಳು, 550 ಪುರುಷ ಸಿಬ್ಬಂದಿ, 350 ಮಹಿಳಾ ಸಿಬ್ಬಂದಿ ಮತ್ತು 250 ಹೋಮ್ ಗಾರ್ಡ್ಗಳು ಸೇರಿದ್ದಾರೆ.
ಮೆಟಲ್ ಡಿಟೆಕ್ಟರ್ಗಳನ್ನು ಅಳವಡಿಸಲಾಗಿದ್ದು, ವಿಐಪಿ, ವಿವಿಐಪಿ, ಶಾಸಕರು, ಸಚಿವರಂತಹ ಅನುಮತಿ ಹೊಂದಿದವರಿಗೆ ಮಾತ್ರ ಪ್ರವೇಶವಿರುತ್ತದೆ. ಉಳಿದ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
