ಬಿಸಿಲ ಬೇಗೆಗೆ ಕಾಡಾನೆಯ ಮಣ್ಣಿನ ಮಜ್ಜನ! ಸಫಾರಿಗೆ ಹೋದವರಿಗೆ ಕಂಡ ಮನಮೋಹಕ ದೃಶ್ಯ ಇಲ್ಲಿದೆ ನೋಡಿ – Kannada News | Elephant Mud Bath: Thrilled Tourists Witness Wild Elephant Beat Heat on Safari

ಚಾಮರಾಜನಗರ, ಏಪ್ರಿಲ್ 20: ನಗರದ ಕೆ.ಗುಡಿಯ ಅರಣ್ಯ ಪ್ರದೇಶದಲ್ಲಿ ಬಿಸಿಲಿನ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಕಾಡಾನೆ ಮಣ್ಣಿನಲ್ಲಿ ಮಜ್ಜನ ಮಾಡಿಕೊಳ್ಳುತ್ತಿರುವ ಮನಮೋಹಕ ದೃಶ್ಯ ಗಮನ ಸೆಳೆದಿದೆ. ಜಂಗಲ್ ಲಾಡ್ಜ್ ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ಅಪರೂಪದ ಕ್ಷಣವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ತಾಪಮಾನ ಏರಿಕೆಯಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಲು ಮತ್ತು ಚರ್ಮವನ್ನು ರಕ್ಷಿಸಿಕೊಳ್ಳಲು ಆನೆಗಳು ಮಣ್ಣು ಅಥವಾ ಕೆಸರಿನಲ್ಲಿ ಮಜ್ಜನ ಮಾಡುವುದು ಸಾಮಾನ್ಯ. ಇಲ್ಲಿ ಗಜರಾಜನು ಮಣ್ಣಿನಲ್ಲೇ ಮಿಂದೆದ್ದಿರುವುದು ಪ್ರವಾಸಿಗರನ್ನು ಪುಳಕಿತರನ್ನಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *