All posts by nagaraj11081993

Video: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು – Kannada News | Bengaluru: Special wishes from kids on school bus to newlywed couple in Bengaluru

ಬೆಂಗಳೂರು, ಫೆಬ್ರವರಿ 18: ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಮದುವೆಯ (marriage) ಬಗ್ಗೆ ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವು ಘಟನೆಗಳು ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ನೆನಪಿನಲ್ಲಿ ಬುತ್ತಿಯಲ್ಲಿ ಶಾಶ್ವತವಾಗಿರುವಂತೆ ಮಾಡುತ್ತದೆ. ಬೆಂಗಳೂರಿನಲ್ಲಿ ನವವಿವಾಹಿತ ದಂಪತಿಗೆ ಶಾಲಾ ಬಸ್ಸಿನಲ್ಲಿದ್ದ ಮಕ್ಕಳು (children) ಶುಭಾಶಯಗಳನ್ನು ಕೋರಿದ್ದಾರೆ. ಮಕ್ಕಳ ಅನಿರೀಕ್ಷಿತ ಶುಭಾಶಯಗಳು ದಂಪತಿಗಳ ಮೊಗದಲ್ಲಿ ನಗು ಮೂಡಿಸಿದೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ.

ಹಿಮಾ ಜಿ (Hima G) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದ ಶೀರ್ಷಿಕೆಯಲ್ಲಿ ಯಾದೃಚ್ಛಿಕವಾಗಿ ಶಾಲಾ ಬಸ್ ಆಶೀರ್ವಾದವಾಗಿ ಬದಲಾದಾಗ. ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ, ಒಂದು ಶಾಲಾ ಬಸ್ ಹಾದುಹೋಯಿತು. ಇದ್ದಕ್ಕಿದ್ದಂತೆ ಇಡೀ ಬಸ್ ನಲ್ಲಿದ್ದ ಮಕ್ಕಳು ‘ಹ್ಯಾಪಿ ಮ್ಯಾರೇಜ್ಡ್ ಲೈಫ್!’ ಎಂದು ಕೂಗಲು ಪ್ರಾರಂಭಿಸಿದರು. ಜೋರಾದ ಧ್ವನಿಯಲ್ಲಿ ತುಂಬಾನೇ ಶುದ್ಧವಾಗಿತ್ತು. ಹಾಗೂ ಅನಿರೀಕ್ಷಿತವಾಗಿತ್ತು. ನಾನು ಅದನ್ನು ರೆಕಾರ್ಡ್ ಮಾಡಲು ಸಹ ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶುದ್ಧ ಆಶೀರ್ವಾದಗಳು ನಿಜವಾಗಿಯೂ ಪುಟ್ಟ ಹೃದಯಗಳಿಂದ ಬರುತ್ತವೆ. ನೀವಿಬ್ಬರೂ ನಿಜವಾಗಿಯೂ ಧನ್ಯರು … ಪ್ರತಿಯೊಬ್ಬರೂ ತಮ್ಮ ಪ್ರಮುಖ ದಿನದಂದು ಅಂತಹ ಶುದ್ಧ, ಮುಗ್ಧ ಆಶೀರ್ವಾದಗಳನ್ನು ಪಡೆಯುವುದಿಲ್ಲ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ನವ ಜೋಡಿಯೂ ತಮ್ಮ ಮದುವೆ ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಶಾಲಾ ಬಸ್‌ನಲ್ಲಿದ್ದ ಮಕ್ಕಳು ಈ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಬಸ್ಸಿನೊಳಗಿದ್ದ ಮಕ್ಕಳು “ಹ್ಯಾಪಿ ಮ್ಯಾರೇಜ್ ಲೈಫ್!” ಎಂದು ಒಂದೇ ಸಮನೇ ಕೂಗಲು ಪ್ರಾರಂಭಿಸಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳು ಮನಸಾರೆ ಶುಭಾಶಯ ಕೋರಿದ್ದನ್ನು ನೋಡಿ ಮದುಮಗನು ಖುಷಿಯಲ್ಲಿ ನಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ಈ ವಿಡಿಯೋ ಮೂರು ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಇದು ಹಣದಿಂದ ಖರೀದಿಸಲು ಸಾಧ್ಯವಾಗದ ಆಶೀರ್ವಾದ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಕ್ಕಳು ಶುದ್ಧ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ, ನಿಮಗೆ ಒಳ್ಳೆಯದು ಆಗಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಶಾಶ್ವತವಾಗಿ ನೆನಪಿಸಿಕೊಳ್ಳುವ ಕ್ಷಣಗಳು” ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ – Kannada News | India AI Impact Summit, several innovations from Bharat Gen to Sky Air are on display

ನವದೆಹಲಿ, ಫೆಬ್ರುವರಿ 18: ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ (AI Impact Summit) ಜಾಗತಿಕವಾಗಿ ಅಭಿವೃದ್ಧಿಯಾಗಿರುವ, ಅಭಿವೃದ್ಧಿಯಾಗುತ್ತಿರುವ ಎಐ ತಂತ್ರಜ್ಞಾನಗಳು, ನಾವೀನ್ಯತೆ, ಆವಿಷ್ಕಾರಗಳ ಪ್ರದರ್ಶನವಾಗುತ್ತಿದೆ. ಭಾರತದ ವತಿಯಿಂದ ನೂರಾರು ಸ್ಟಾಲ್​ಗಳಲ್ಲಿ ದೇಶದ ಎಐ ಭವಿಷ್ಯದ ದಿಗ್ಸೂಚಿಯನ್ನು ಕಾಣಬಹುದಾಗಿದೆ. ದೇಶೀಯವಾಗಿ ಅಭಿವೃದ್ಧಿಯಾದ ಎಐ ಫೌಂಡೇಶನಲ್ ಮಾಡಲ್​ಗಳಿಂದ ಹಿಡಿದು ರೋಬೋಟಿಕ್ಸ್​ವರೆಗೆ ನೂರಾರು ಇನ್ನೋವೇಶನ್​ಗಳನ್ನು ಭಾರತೀಯರು ಜಗತ್ತಿಗೆ ತೋರ್ಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಎಐ ಆವಿಷ್ಕಾರಗಳು ನಡೆಯುವುದು ನಿಶ್ಚಿತವೆನಿಸಿದೆ.

ದೆಹಲಿಯ ಗಲ್ಗೋಟಿಯಾ ಯೂನಿವರ್ಸಿಟಿ ಇದೇ ಶೃಂಗಸಭೆಯಲ್ಲಿ ಸ್ಟಾಲ್ ಸ್ಥಾಪಿಸಿ, ಚೀನಾ ನಿರ್ಮಿತ ರೋಬೋನಾಯಿಯನ್ನು ಆವಿಷ್ಕರಿಸಿದ್ದು ತಾನೆಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಗಲ್ಗೋಟಿಯಾ ಯೂನಿವರ್ಸಿಟಿಯ ಒಂದು ಪ್ರಮಾದ ಇಟ್ಟುಕೊಂಡು ಭಾರತದ ಎಐ ಸಾಧನೆಗಳನ್ನು ಹೀಗಳೆಯುವುದು ಸರಿಯಲ್ಲ ಎನ್ನುವ ವಾದ ಇದೆ. ಪತ್ರಕರ್ತ ತಪಸ್ ಭಟ್ಟಾಚಾರಿ ಅವರು ಸಮಿಟ್​ನಲ್ಲಿ ಪ್ರದರ್ಶನಗೊಂಡಿರುವ ಭಾರತದ ಇತರ ಎಐ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕೆಲ ಮಹತ್ವದ ಎಐ ಆವಿಷ್ಕಾರಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ಭಾರತ್ ಜೆನ್ ಎಐ

ಭಾರತ್ ಜೆನ್ ಸಂಸ್ಥೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುವಂತಹ 17 ಬಿಲಿಯನ್ ಪ್ಯಾರಾಮೀಟರ್​ನ ಮಲ್ಟಿಲಿಂಗ್ವಲ್ ಮಾಡಲ್ ಆದ ಪರಮ್ 27ಬಿ ಅನ್ನು ಅನಾವರಣಗೊಳಿಸಿದೆ. ಭಾರತದ ದತ್ತಾಂಶ ಬಳಸಿ ನಿರ್ಮಿತವಾಗಿರುವ ಈ ಎಐ ಮಾಡಲ್, ಆರೋಗ್ಯ, ಫಿನ್​ಟೆಕ್, ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯನ್ನು ಸುಲಭಗೊಳಿಸುತ್ತದೆ.

ParadigmIT ಸೋವರಿನ್ ಎಐ ಬಾಕ್ಸ್

ಪ್ಯಾರಾಡಿಗಮ್​ಐಟಿ ಕಂಪನಿಯ ಸೋವರಿನ್ ಎಐ ಬಾಕ್ಸ್ ಬಹುತೇಕ ದೇಶೀಯವಾಗಿ ನಿರ್ಮಿತಗೊಂಡ ಮಾಡಲ್. ಇದಕ್ಕೆ ಬೇಕಾಗುವ ದತ್ತಾಂಶವೆಲ್ಲವೂ ಭಾರತದ ಒಳಗೆಯೇ ಇರುತ್ತದೆ. ಸೂಕ್ಷ್ಮ ದತ್ತಾಂಶದ ರಕ್ಷಣೆ ಆಗುತ್ತದೆ.

ತಪಸ್ ಭಟ್ಟಾಚಾರಿ ಅವರ ಎಕ್ಸ್ ಪೋಸ್ಟ್

ಸ್ಕೈ ಏರ್ ಮೊಬಿಲಿಟಿ

ಸ್ಕೈ ಏರ್, ಅರೈವ್ ಎಐ ಮತ್ತು ಆಟ್ಟೋನಮಿ ಕಂಪನಿಗಳು ಜೊತೆಯಾಗಿ ಸೇರಿ ವಿಶ್ವದ ಮೊದಲ ಎಂಡ್-ಟು-ಎಂಡ್ ಆಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ನಿರ್ಮಿಸಿವೆ. ಇದರಲ್ಲಿ ಡ್ರೋನ್​ಗಳು ಪಾರ್ಸಲ್​ಗಳನ್ನು ಮನೆಬಾಗಿಲಿಗೆ ಸಾಗಿಸಬಲ್ಲವು. ಪ್ರಯೋಗಾವಧಿಯಲ್ಲಿ 36 ಲಕ್ಷಕ್ಕೂ ಅಧಿಕ ಡೋರ್ ಡೆಲಿವರಿ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸ್ಕೈ ಏರ್ ಮೊಬಿಲಿಟಿ ಭಾರತೀಯ ಮೂಲದ ಕಂಪನಿಯಾಗಿದೆ. ಆಟ್ಟೋನಮಿ ಅಮೆರಿಕನ್ ಕಂಪನಿಯಾದರೂ ಭಾರತೀಯ ಮೂಲದವರು ಕಟ್ಟಿದ ಸಂಸ್ಥೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ತಾರಕರಾಮ್ ಮಾರಂ

ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿದೆ. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದಾಗಿದೆ.

ಹಾಗೆಯೇ, ಸ್ಟಾರ್ಟಪ್ ಸನಾತನ ಎನ್ನುವ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆ ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ.

ಅಗ್ನೀವ ಮತ್ತು ಆದಿತ್ಯ ಎನ್ನುವ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೋಬೋಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳ ಎಐ ಮಾಡಲ್​ಗಳು, ರಿಲಾಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಎಐ ಸಾಧನೆಗಳು ಸಮಿಟ್​ನಲ್ಲಿ ಅನಾವರಣಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳು ಎಷ್ಟೇ ಕಷ್ಟಪಟ್ಟು ಓದಿದ್ರೂ, ಹೆಬ್ಬೆಟ್ಟು ಹಾಕುವ ಮಂತ್ರಿಗಳ ಮಾತು ಕೇಳಲೇಬೇಕು: ಕಾಂಗ್ರೆಸ್​​ ಸಚಿವೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಸ್ಥಾನಮಾನ ಮತ್ತು ಅಧಿಕಾರಿಗಳ ಕಾರ್ಯವೈಖರಿಯ ನಡುವಿನ ಸಮರ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಒಂದು ಮಾತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. “ರಾಜಕೀಯದಲ್ಲಿ ಹೆಬ್ಬೆಟ್ಟು ಮುಖ್ಯಮಂತ್ರಿಯಾಗಬಹುದು, ಆದರೆ ಎಷ್ಟೇ ಓದಿ ಅಧಿಕಾರಿಗಳಾದರೂ ಅವರು ನಮ್ಮ ಕೆಳಗೆ ಕೆಲಸ ಮಾಡಬೇಕು ಎಂದು ತೆಲಂಗಾಣದ ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. ಮುಲುಗಿನ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (FCRI) ನೆನ್ನೆ (ಫೆ. 17) ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಅತೀವವಾಗಿ ಶ್ರಮಪಡಬೇಕು, ಹಗಲು-ರಾತ್ರಿ ಓದಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಅಧಿಕಾರಿಗಳಾದ ಮೇಲೂ, ಅಂತಿಮವಾಗಿ ಅವರು ನಮ್ಮ (ರಾಜಕಾರಣಿಗಳ) ನಿರ್ದೇಶನದಂತೆ ನಡೆಯಬೇಕು” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್​ ಸೀಸನ್-16ರ ಮೊದಲ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್) ಈ ಪಂದ್ಯಕ್ಕೆ ಅತಿಥ್ಯ ವಹಿಸುವ ಸಾಧ್ಯತೆಯಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಈಗಾಗಲೇ ಚೆನ್ನೈಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬಿಗ್ ಬ್ಯಾಷ್​ ಲೀಗ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುತ್ತಿರುವುದೇಕೆ?

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಕಳೆದ 15 ಸೀಸನ್​ಗಳನ್ನು ಆಸ್ಟ್ರೇಲಿಯಾದಲ್ಲೇ ಆಯೋಜಿಸಿದ್ದರು. ಇದೀಗ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…

ಹೂಡಿಕೆದಾರರ ಸೆಳೆತ: ಬಿಬಿಎಲ್‌ನ ಕೆಲವು ಫ್ರಾಂಚೈಸಿಗಳನ್ನು (ತಂಡಗಳನ್ನು) ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವ ಮೂಲಕ ಐಪಿಎಲ್ ತಂಡಗಳ ಮಾಲೀಕರು ಅಥವಾ ಭಾರತೀಯ ಉದ್ಯಮಿಗಳನ್ನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.

ಮಾರುಕಟ್ಟೆ ವಿಸ್ತರಣೆ: ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿದೆ. ಇಲ್ಲಿನ ಅಪಾರ ಅಭಿಮಾನಿ ಬಳಗವನ್ನು ತಲುಪುವ ಮೂಲಕ ಲೀಗ್‌ನ ಜನಪ್ರಿಯತೆ ಮತ್ತು ಪ್ರಸಾರ ಹಕ್ಕುಗಳ ಮೌಲ್ಯವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಬಯಸಿದೆ.

ಜಾಗತಿಕ ಪೈಪೋಟಿ: ಪ್ರಸ್ತುತ ಸೌತ್ ಆಫ್ರಿಕಾ ಟಿ20 ಲೀಗ್ (SA20) ಮತ್ತು ಇಂಟರ್​ನ್ಯಾಷನಲ್ ಲೀಗ್ ಟಿ20 (ILT20-ಯುಎಇ) ಲೀಗ್‌ಗಳು ಭಾರತೀಯ ಉದ್ಯಮಿಗಳ ಹೂಡಿಕೆಯಿಂದಾಗಿ ವೇಗವಾಗಿ ಬೆಳೆಯುತ್ತಿವೆ. ಈ ಲೀಗ್‌ಗಳಿಗೆ ಪೈಪೋಟಿ ನೀಡಲು ಮತ್ತು ಐಪಿಎಲ್ ನಂತರದ ವಿಶ್ವದ 2ನೇ ಶ್ರೇಷ್ಠ ಲೀಗ್ ಎನಿಸಿಕೊಳ್ಳಲು ಬಿಗ್ ಬ್ಯಾಷ್ ಲೀಗ್​ ಹೊಸ ಪ್ರಯತ್ನಕ್ಕೆ ಕೈ ಹಾಕಲು ಮುಂದಾಗಿದೆ.

ಈಗಾಗಲೇ ಹಾಲಿ ಚಾಂಪಿಯನ್ ಪರ್ತ್ ಸ್ಕಾಚರ್ಸ್ ತಂಡವು ಭಾರತದಲ್ಲಿ ಉದ್ಘಾಟನಾ ಪಂದ್ಯವಾಡಲು ಒಪ್ಪಿಗೆ ಸೂಚಿಸಿದೆ. ಇತ್ತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ನ ಅಧಿಕಾರಿಗಳು​ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್)  ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಇದಾಗ್ಯೂ ಬಿಗ್ ಬ್ಯಾಷ್ ಲೀಗ್​ನ ಮೊದಲ ಪಂದ್ಯಕ್ಕೆ ಬಿಸಿಸಿಐ ಅನುಮತಿ ನೀಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಐಪಿಎಲ್​ನ ಜನಪ್ರಿಯತೆ ಕುಗ್ಗ ಬಾರದೆಂಬ ಕಾರಣಕ್ಕೆ ಬಿಸಿಸಿಐ ಭಾರತೀಯ ಪುರುಷ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ.

ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಬಿಗ್ ಬ್ಯಾಷ್ ಲೀಗ್ ಭಾರತದಲ್ಲೇ ಪಂದ್ಯ ಆಯೋಜಿಸಲು ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದ್ದಾರಾ ಎಂಬುದೇ ಈಗ ಕುತೂಹಲ.

 

Source link

ಗೊಂದಲದ ಗೂಡಾದ ‘ಡಾನ್ 3’ ಸಿನಿಮಾ; ಮಧ್ಯಸ್ಥಿಕೆ ವಹಿಸಿದ ಸ್ಟಾರ್ ಹೀರೋ – Kannada News | Don 3 Controversy: Aamir Khan Steps In to Resolve Ranveer Singh Farhan Akhtar Dispute

‘ಡಾನ್ 3’ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಚಿತ್ರದ ಶೂಟಿಂಗ್ ಶುರುವಾಗಿಲ್ಲ. ಇದಕ್ಕೆ ಕಾರಣವೂ ಇದೆ. ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಡಾನ್ ಪಾತ್ರ ಮಾಡಬೇಕಿರೋ ರಣವೀರ್ ಸಿಂಗ್ ಮಧ್ಯೆ ಯಾವುದೂ ಸರಿ ಇಲ್ಲ. ರಣವೀರ್ ಸ್ಕ್ರಿಪ್ಟ್ ವಿಷಯದಲ್ಲಿ ಖುಷಿಯಾಗಿಲ್ಲ ಎನ್ನಲಾಗಿದೆ. ಸಂಭಾವನೆ ವಿಷಯದಲ್ಲೂ ಕಿರಿಕ್ ಆಗಿದೆ. ಹೀಗಿರುವಾಗಲೇ ‘ಡಾನ್ 3’ ಸಿನಿಮಾದ ವಿವಾದ ಬಗೆಹರಿಸಲು ಆಮಿರ್ ಖಾನ್ ಆಗಮಿಸಿದ್ದಾರೆ ಎನ್ನಲಾಗಿದೆ.

ಚಿತ್ರರಂಗದ ಬಗ್ಗೆ ಆಮಿರ್ ಖಾನ್ ಹೆಚ್ಚು ಕಾಳಜಿವಹಿಸುತ್ತಾರೆ. ಏನೇ ಆದರೂ ಸರಿ ಒಳ್ಳೆಯ ಸಿನಿಮಾ ಬರಬೇಕು ಎಂಬುದು ಅವರ ಗುರಿ. ‘ಡಾನ್ 3’ ಸಿನಿಮಾ ಸೆಟ್ಟೇರಿದರೆ ಒಂದಷ್ಟು ಮಂದಿ ಕೆಲಸ ಸಿಗುತ್ತದೆ. ಸಿನಿಮಾ ಹಿಟ್ ಆದರೆ, ಬಾಲಿವುಡ್​​ನಲ್ಲಿ ಒಂದೊಳ್ಳೆಯ ಬಿಸ್ನೆಸ್ ಆಗುತ್ತದೆ ಎಂಬುದು ಆಮಿರ್ ಉದ್ದೇಶ. ಹೀಗಾಗಿ, ಸಿನಿಮಾ ನಿಲ್ಲಬಾರದು ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ.

‘ಡಾನ್ 3’ ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಸಿನಿಮಾದ ಸ್ಕ್ರಿಪ್ಟ್ ಕೆಲಸ, ಟೀಸರ್ ಶೂಟ್ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಈಗ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿರುವುದರಿಂದ, ಅವರು 40 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಫರ್ಹಾನ್ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ ರಣವೀರ್ ಸಿಂಗ್ ಅವರು ಹೊಸ ಆರೋಪ ಮಾಡಿದ್ದಾರೆ. ‘ಫರ್ಹಾನ್ ಅಖ್ತರ್​​ಗೆ ಡಾನ್ ಪಾತ್ರದಲ್ಲಿ ಹೃತಿಕ್​​ನ ಆಯ್ಕೆ ಮಾಡಿಕೊಳ್ಳುವ ಆಲೋಚನೆ ಇದೆ’ ಎಂದಿದ್ದಾರೆ. ಆದರೆ, ಹೃತಿಕ್ ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ‘ಡಾನ್ 3’ ಗೊಂದಲದ ಗೂಡಾಗಿದೆ.

ಸದ್ಯದ ಮಾಹಿತಿ ಪ್ರಕಾರ ಆಮಿರ್ ಖಾನ್ ಅವರು ರಣವೀರ್ ಹಾಗೂ ಫರ್ಹಾನ್ ಒಡೆತನದ ಎಕ್ಸೆಲ್ ಎಂಟರ್​​ಟೇನ್​ಮೆಂಟ್ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ಇದ್ದಾರೆ. ಆಮಿರ್ ತಮ್ಮದೇ ಮನೆಯಲ್ಲಿ ಸಿನಿಮಾಗೆ ಸಂಬಂಧಿಸಿದವರನ್ನು ಕರೆಸಿ ಸಭೆ ಆಯೋಜನೆ ಮಾಡಿದ್ದರು ಎಂದು ಹೇಳಲಾಗುತ್ತಾ ಇದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕರೆ ಒಂದೊಳ್ಳೆಯ ಸಿನಿಮಾ ನಿರೀಕ್ಷಿಸಬಹುದು.

ಇದನ್ನೂ ಓದಿ: ‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ

ಸದ್ಯದ ಬೆಳವಣಿಗೆಯಿಂದ ಶಾರುಖ್ ಖಾನ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಏಕೆಂದರೆ, ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿದ್ದರು. ‘ಡಾನ್ 3’ ಚಿತ್ರದಲ್ಲಿ ಅವರಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಲ್ಮಾನ್​ ಖಾನ್​ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ – Kannada News | Why Salman Khan not married father Salim Khan explained once

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಸ್ಟಾರ್ ನಟ, ಅವರನ್ನು ಭಾಯ್​ ಜಾನ್ ಎಂದು ಸಹ ಕರೆಯಲಾಗುತ್ತದೆ. ಹಲವು ದಶಕಗಳ ಕಾಲ ಬಾಲಿವುಡ್​ ಸ್ಟಾರ್ ನಟನಾಗಿ ಉಳಿದಿರುವ ಸಲ್ಮಾನ್ ಖಾನ್ ಒಂದು ಸಮಯದಲ್ಲಿ ಯುವತಿಯರ ಫೇವರೇಟ್ ನಟರಾಗಿದ್ದರು. ಸಲ್ಮಾನ್ ಖಾನ್ ಅವರ ಹೆಸರು ಹಲವಾರು ನಟಿಯರೊಟ್ಟಿಗೆ ಕೇಳಿ ಬಂದಿದೆ. ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಒಬ್ಬಿಬ್ಬರಲ್ಲ. ಆದರೆ ಯಾರನ್ನೂ ಅವರು ಮದುವೆ ಆಗಿಲ್ಲ. ಈಗಲೂ ಸಹ ಸಲ್ಮಾನ್ ಖಾನ್ ಸಿಂಗಲ್. ಆದರೆ ಸಲ್ಮಾನ್ ಖಾನ್ ಏಕೆ ಮದುವೆ ಆಗಲಿಲ್ಲ, ಅವರ ಪ್ರೇಮಪ್ರಸಂಗಗಳು ಅರ್ಧದಲ್ಲೇ ಏಕೆ ನಿಂತು ಹೋದವು ಎಂಬ ಬಗ್ಗೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹಿಂದೊಮ್ಮೆ ಹೇಳಿಕೊಂಡಿದ್ದರು.

ಸಲ್ಮಾನ್ ಖಾನ್​ ಭಿನ್ನ ಮನಸ್ಥಿತಿಯ ಬಗ್ಗೆ ಮಾತನಾಡಿದ್ದ ಸಲೀಂ ಖಾನ್, ‘ಸಲ್ಮಾನ್ ಖಾನ್​ ಮನಸ್ಥಿತಿ ತುಸು ಭಿನ್ನವಾದುದು, ಆತನಿಗೆ ತನ್ನ ತಾಯಿಯ ಮೇಲೆ ವಿಪರೀಪ ಪ್ರೀತಿ. ತಾನು ಪ್ರೀತಿಸುವ ಯುವತಿಯರಲ್ಲಿ ತನ್ನ ತಾಯಿಯನ್ನು ಕಾಣಲು ತವಕಿಸುತ್ತಿದ್ದ. ಸಲ್ಮಾನ್ ಖಾನ್ ಪ್ರೀತಿಸಿದ ಯುವತಿಯರು ಸಿನಿಮಾ ರಂಗದವರೇ ಆಗಿರುತ್ತಿದ್ದರು. ಅವರನ್ನು ಮದುವೆಯಾಗಿ ಆತ ತಮ್ಮ ತಾಯಿಯಂತೆ ಮನೆಯಲ್ಲಿ ಇರಿಸಲು ಬಯಸುತ್ತಿದ್ದ ಎನಿಸುತ್ತದೆ. ಆದರೆ ಸಿನಿಮಾ ರಂಗದ ಯುವತಿಯರು ಸಾಕಷ್ಟು ಆಸೆ, ವೃತ್ತಿಯಲ್ಲಿ ನಿರೀಕ್ಷೆಗಳನ್ನು ಇರಿಸಿಕೊಂಡವರಾಗಿರುತ್ತಾರೆ, ಅವರಿಗೆ ಮನೆಯಲ್ಲಿ ಕೂರುವುದು ಇಷ್ಟವಾಗಲ್ಲ, ಹಾಗಾಗಿ ಸಲ್ಮಾನ್ ಖಾನ್​ರ ಬಹುತೇಕ ಪ್ರೇಮಪ್ರಸಂಗಗಳು ಮದುವೆಯ ವರೆಗೂ ಬರಲೇ ಇಲ್ಲ’ ಎಂದಿದ್ದರು ಸಲೀಂ.

‘ತಾನು ಮದುವೆ ಆಗುವ ಯುವತಿ, ತನ್ನ ಮನೆಯಲ್ಲಿರಬೇಕು, ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಹೋಮ್​​ವರ್ಕ್ ಮಾಡಿಸಬೇಕು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕು, ಹೀಗೆ ತನ್ನ ತಾಯಿ ತನಗೆ ಮಾಡಿದ್ದೆಲ್ಲವನ್ನೂ ನನ್ನ ಪತ್ನಿ ಮಾಡಬೇಕು ಎಂಬ ನಿರೀಕ್ಷೆ ಸಲ್ಮಾನ್ ಖಾನ್​ನದ್ದಾಗಿತ್ತು ಆದರೆ ಅದು ಸಾಧ್ಯವಿರಲಿಲ್ಲ. ನಟಿಯರಿಗೆ ನಿರೀಕ್ಷೆಗಳಿರುತ್ತವೆ, ಆಕಾಂಕ್ಷೆಗಳಿರುತ್ತವೆ, ವೃತ್ತಿಯಲ್ಲಿ ಸಾಧನೆ ಮಾಡುವ ಹಂಬಲ ಇರುತ್ತದೆ, ಅವರಿಗೆ ಇದೆಲ್ಲ ಮಾಡಲು ಸಾಧ್ಯವಾಗುವುದಿಲ್ಲ, ಅದು ತಪ್ಪು ಸಹ ಅಲ್ಲ. ಹಾಗಾಗಿ ಸಲ್ಮಾನ್ ಖಾನ್​ ಮದುವೆ ಆಗಲಿಲ್ಲ’ ಎಂದಿದ್ದರು ಸಲೀಂ ಖಾನ್.

ಇದನ್ನೂ ಓದಿ:ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಸಹ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿ, ‘ನನಗೆ ನನ್ನ ತಾಯಿಯೆಂದರೆ ಬಹಳ ಪ್ರೀತಿ, ನನ್ನ ಜೀವನದಲ್ಲಿ ನನಗೆ ಏನಾದರೂ ಅದ್ಭುತ ಉಡುಗೊರೆ ಸಿಕ್ಕಿದ್ದರೆ ಅದು ನನ್ನ ತಾಯಿಯೇ. ನನ್ನ ತಂದೆ ಬೇರೊಂದು ಮದುವೆ ಆದಾಗ ನನಗೆ ಅತೀವ ಸಿಟ್ಟು ಬಂದಿತ್ತು. ನನ್ನ ತಾಯಿಯ ದುಃಖವನ್ನು ನನಗೆ ನೋಡಲು ಆಗಿರಲಿಲ್ಲ. ನನ್ನ ತಂದೆ ಯಾವಾಗ ಮನೆಗೆ ಬರುವರೋ ಎಂದು ನನ್ನ ತಾಯಿ ಕಾಯುತ್ತಿದ್ದಾಗ ಅದನ್ನು ನೋಡಿ ನನಗೆ ಬಹಳ ದುಃಖವಾಗುತ್ತಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಸಲ್ಮಾನ್ ಖಾನ್ ತಾಯಿಯ ಹೆಸರು ಸುಶೀಲ ಆದರೆ ಸಲೀಂ ಖಾನ್, ಸುಶೀಲಾ ಅವರಿಗೆ ವಿಚ್ಛೇದನ ನೀಡಿ ಹೆಲೆನ್ ಅವರನ್ನು ವಿವಾಹವಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:23 pm, Wed, 18 February 26

Source link

ಬಲವಂತವಾಗಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್: ಹನಿಟ್ರ್ಯಾಪ್ ಮಾಡಿಸಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಬಂಧನ – Kannada News | Honey Trap Gang Arrested in Hassan: Woman Lecturer Led Fake Case Extortion Racket in Holenarasipura

ಆರೋಪಿಗಳಾದ ಸಿದ್ಧೀಕ್ ಹಾಗೂ ನಾಗಲಕ್ಷ್ಮೀImage Credit source: tv9

ಹಾಸನ, ಫೆಬ್ರವರಿ 18: ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ (Honey Trap) ಮೂಲಕ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಹಾಸನದ (Hassan) ಹೊಳೆನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆ ನಾಗಲಕ್ಷ್ಮೀ, ಆಕೆಯ ಪತಿ ಸಿದ್ಧೀಕ್ ಹಾಗೂ ಪ್ರೈವೇಟ್ ಲ್ಯಾಬ್ ಟೆಕ್ನಿಷಿಯನ್ ಧರ್ಮರಾಜು ಅಲಿಯಾಸ್ ಫಣಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಮುಂದಿಟ್ಟುಕೊಂಡು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಇವರ ಮೇಲಿದ್ದು, ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯೆ ಪರಿಚಯಸ್ಥನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸಲು ಬಲವಂತ

ಫೆಬ್ರವರಿ 13ರಂದು ಸಂತ್ರಸ್ತ ಮಹಿಳೆಯ ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ಬಂದಿದ್ದರು. ಆ ವೇಳೆ, ಮತ್ತೊಬ್ಬ ಮಹಿಳೆ ಆತ ಸಂತ್ರಸ್ತೆ ಜತೆ ಇರುವ ಆತನ ಫೋಟೋ ತೆಗೆದು ನಾಗಲಕ್ಷ್ಮಿಗೆ ಕಳುಹಿಸಿದ್ದಳು ಎನ್ನಲಾಗಿದೆ. ನಂತರ ಇದೇ ವಿಚಾರವನ್ನು ನೆಪ ಮಾಡಿಕೊಂಡು ನಾಗಲಕ್ಷ್ಮೀ ಮತ್ತು ಆಕೆಯ ತಂಡ ಮನೆಗೆ ಬಂದು, ಪರಿಚಯಸ್ಥನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಒತ್ತಾಯ ಮಾಡಿತ್ತು ಎಂಬುದು ತಿಳಿದುಬಂದಿದೆ.

ಬಲವಂತವಾಗಿ ಖಾಸಗಿ ಅಂಗಾಂಗ ಮುಟ್ಟಿ ತಪಾಸಣೆ

ರೇಪ್ ಕೇಸ್ ದಾಖಲಿಸಲು ಮಹಿಳೆ ಒಪ್ಪದ ಹಿನ್ನೆಲೆಯಲ್ಲಿ, ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿದ್ದ ಫಣಿಯನ್ನು ಆರೋಪಿಗಳು ಮನೆಗೆ ಕರೆಸಿಕೊಂಡಿದ್ದಾರೆ. ಆತ ಬಲವಂತವಾಗಿ ಸಂತ್ರಸ್ತೆಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾ ಮೆಡಿಕಲ್ ಪರೀಕ್ಷೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ, ‘ನಿನ್ನ ವಿರುದ್ಧ ಸಾಕ್ಷ್ಯ ಇದೆ, ಪ್ರಕರಣ ಕೊಡದಿದ್ದರೆ ಗಂಡನಿಗೆ ವಿಷಯ ಹೇಳುತ್ತೇವೆ’ ಎಂದು ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಸಾಂತ್ವನ ಕೇಂದ್ರಕ್ಕೆ ಕಳುಹಿಸಿದಾಗ ರಟ್ಟಾಯ್ತು ಗುಟ್ಟು

ಫೆಬ್ರವರಿ 15ರಂದು ಸಂತ್ರಸ್ತೆಯನ್ನು ಆರೋಪಿಗಳು ಬಲವಂತವಾಗಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಆದರೂ ಮಹಿಳೆ ದೂರು ನೀಡಲು ಹಿಂದೇಟು ಹಾಕಿ ಕಣ್ಣೀರಿಟ್ಟಿದ್ದಳು. ಅನುಮಾನಗೊಂಡ ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ದಂಧೆ ಸಂಪೂರ್ಣವಾಗಿ ಬಯಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಅರೆಕಾಲಿಕ ಉಪನ್ಯಾಸಕಿಯೇ ಕಿಂಗ್​ಪಿನ್!

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಾಗಲಕ್ಷ್ಮೀ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದು, ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಆಕೆಯ ಹೆಸರು ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. ನಾಗಲಕ್ಷ್ಮೀ ಮತ್ತು ತಂಡ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ದಂಧೆ ನಡೆಸುತ್ತಿತ್ತು ಎನ್ನುವ ಮಾಹಿತಿ ದೊರೆತಿದೆ.

ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ

ಸದ್ಯ ಹೊಳೆನರಸೀಪುರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಇನ್ನೂ ಹೆಚ್ಚಿನ ಮಹಿಳೆಯರು ದೂರು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಕಿ ಹೊತ್ತಿಕೊಂಡು ಧಗಧಗಿಸಿದ ಖಾಸಗಿ ಬಸ್​​: ಅಕ್ಕ ಪಕ್ಕದಲ್ಲಿದ್ದ ವಾಹನಗಳಿಗೂ ಹಾನಿ – Kannada News | Private Bus Catches Fire Near Chandra Layout BMTC Depot in Bengaluru

ಬೆಂಗಳೂರೂ, ಫೆಬ್ರವರಿ 18: ನಗರದ ಚಂದ್ರಾಲೇಔಟ್​ನ ಬಿಎಂಟಿಸಿ ಡಿಪೋ ಬಳಿ ಖಾಸಗಿ ಬಸ್​ವೊಂದು ಹೊತ್ತಿ ಉರಿದಿದೆ. ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ. ಬೆಂಕಿಯ ಜ್ವಾಲೆ ಬಸ್‌ನ ಅಕ್ಕಪಕ್ಕ ನಿಲ್ಲಿಸಿದ್ದ ಇತರ ವಾಹನಗಳಿಗೂ ಹಬ್ಬಿ, ಅವಕ್ಕೂ ಹಾನಿಯಾಗಿವೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ ಹೊತ್ತಿ ಉರಿಯಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆನ್ಲೈನ್​ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು! – Kannada News | Bangalore Rental Home Cyber Fraud: AI Photo Scams Target Renters Online

ಆನ್ಲೈನ್ ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು!

ಬೆಂಗಳೂರು, ಫೆಬ್ರವರಿ 18: ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರನ್ನೇ ಟಾರ್ಗೆಟ್ ಮಾಡಿಕೊಂಡು ಸೈಬರ್ ವಂಚಕರು ಹೊಸ ತಂತ್ರದ ಮೂಲಕ ಹಣ ದೋಚುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿವೆ. ಐಷಾರಾಮಿ ಫ್ಲಾಟ್‌ಗಳ ಎಐ ಫೋಟೋಗಳನ್ನು ಬಳಸಿ ಜಾಹೀರಾತು ಹಾಕಿ, ನಂತರ ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂ. ಜೇಬಿಗೆ!

ಇತ್ತೀಚೆಗೆ ಹೌಸಿಂಗ್ ಡಾಟ್ ಕಾಮ್ (Housing.com) ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಆಕರ್ಷಕ ಫೋಟೋಗಳೊಂದಿಗೆ ಫ್ಲಾಟ್ ಲಭ್ಯವಿದೆ ಎಂದು ಪೋಸ್ಟ್ ಮಾಡಿ ಜನರಿಂದ ಹಣ ದೋಚುವ ವಂಚಕರ ಜಾಲ ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮನೆ ನೋಡಲು ಬರುವ ಮುನ್ನ ‘ವಿಜಿಟರ್ ಪಾಸ್’, ‘ರಿಫಂಡೇಬಲ್ ಅಡ್ವಾನ್ಸ್’ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಮೋಸಗಾರರು ನಕಲಿ ವಿಳಾಸ ನೀಡಿ ಸ್ಥಳಕ್ಕೆ ಬರಲು ಸೂಚಿಸುತ್ತಿದ್ದರು. ಆದರೆ ಅಲ್ಲಿಗೆ ಹೋದಾಗ ಆ ಹೆಸರಿನ ಯಾವುದೇ ಫ್ಲಾಟ್ ಇಲ್ಲವೆಂದು ತಿಳಿದಿದಾಗಲೇ ಜನರಿಗೆ ಮೋಸ ಹೋಗಿದ್ದೇವೆಂದು ತಿಳಿಯುತ್ತಿತ್ತೆಂದು ಹೇಳಲಾಗಿದೆ.

ಇದನ್ನೂ ಓದಿ ಬಲವಂತವಾಗಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್: ಹನಿಟ್ರ್ಯಾಪ್ ಮಾಡಿಸಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಬಂಧನ

ಇದೇ ರೀತಿ ಬೆಂಗಳೂರಿನ ವೈದ್ಯೆ ಸೌಮ್ಯ ಎಂಬವರು ಬಾಡಿಗೆ ಮನೆ ಹುಡುಕುವ ವೇಳೆ ಬಲೆಗೆ ಬಿದ್ದಿದ್ದಾರೆ. ಫೋಟೋ ನೋಡಿ ಮನೆ ನೋಡಲು ಮೊದಲು 2 ಸಾವಿರ ರೂಪಾಯಿ ‘ವಿಜಿಟರ್ ಪಾಸ್’ ಹೆಸರಿನಲ್ಲಿ, ಬಳಿಕ 7 ಸಾವಿರ ರೂಪಾಯಿ ಅಡ್ವಾನ್ಸ್ ಹೆಸರಿನಲ್ಲಿ ಪಾವತಿಸಿದ್ದಾರೆ. ಹಂತ ಹಂತವಾಗಿ 10 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಬಳಿಕ ನೀಡಿದ ವಿಳಾಸಕ್ಕೆ ತೆರಳಿದಾಗ ಅಲ್ಲಿ ಯಾವುದೇ ಫ್ಲಾಟ್ ಇಲ್ಲದಾಗ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿನ ಭದ್ರತಾ ಸಿಬ್ಬಂದಿ ಈ ರೀತಿಯ ವಂಚನೆಗೆ ಇನ್ನೂ ಹಲವರು ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಂಗಾರದಂಗಡಿ ದರೋಡೆ ನಾಟಕ ಮಾಡಿ ಖಾಕಿ ಕೈಲಿ ಲಾಕ್​​ ಆದ ಮಾಲೀಕ – Kannada News | Kyatanahalli Gold Shop Owner’s Drama: Stages Fake Robbery and Acid Attack to Dodge Creditors

ಬಂಗಾರದ ಅಂಗಡಿ ಮಾಲೀಕ ಜಿತೇಂದ್ರImage Credit source: Tv9 Kannada

ಮಂಡ್ಯ, ಫೆಬ್ರವರಿ 18: ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ತನ್ನ ಮೇಲೆ ಆ್ಯಸಿಡ್​ ದಾಳಿ ನಡೆಸಿ ಬಂಗಾರದ ಅಂಗಡಿ ದರೋಡೆ ಮಾಡಲಾಗಿದೆ ಎಂದು ಸಿನಿಮೀಯ ಮಾದರಿ ಕತೆ ಹೆಣೆದಿದ್ದ ಚಿನ್ನದ ಅಂಗಡಿ ಮಾಲೀಕ ಕೊನೆಗೆ ತಾನೇ ಪೊಲೀಸರ ಬಳಿ ಲಾಕ್​​ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಮಹಾಲಕ್ಷ್ಮೀ ಜ್ಯುವೆಲರಿ ಶಾಪ್ ನಡೆಸುತ್ತಿದ್ದ ಜಿತೇಂದ್ರ ಆರೋಪಿಯಾಗಿದ್ದು ಈತನ ವಿರುದ್ಧ ಕ್ಯಾತನಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕತೆ ಹೇಳಿ ಸಿಕ್ಕಿಬಿದ್ದ ಆರೋಪಿ

ರಾಜಸ್ಥಾನದಿಂದ ಬಂದು ಕಳೆದ ಹಲವು ವರ್ಷಗಳಿಂದ ಕ್ಯಾತನಹಳ್ಳಿಯಲ್ಲಿ ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದ ಜಿತೇಂದ್ರ ಸಿಂಗ್, ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ ಬಂಗಾರದ ಅಂಗಡಿ ದೋಚಿದ್ದಾರೆ ಎಂದು ಆರೋಪಿಸಿದ್ದ. ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದರೋಡೆ ಆಗಿದೆ ಎಂದು ತಿಳಿಸಿದ್ದ. ಗಾಯಗೊಂಡು ಈತ ಆಸ್ಪತ್ರೆ ಸೇರಿದ ಹಿನ್ನೆಲೆ ಪೊಲೀಸರು ಸುಮೋಟೋ ಕೇಸ್​​ ದಾಖಲು ಮಾಡಿಕೊಂಡು ತನಿಖೆಗಿಳಿದಿದ್ದರು. ಈ ವೇಳೆ ಜಿತೇಂದ್ರ ಸಿಂಗ್ ಮುಖಕ್ಕೆ ಮಾತ್ರ ಗಾಯವಾಗಿರೋದು ಪೊಲೀಸರ ಅನುಮಾನಕ್ಕೆ ಕಾರಣವಾಗದೆ. ಆ್ಯಸಿಡ್​​ ಎರಚಿ ಆರೋಪಿಗಳು ದರೋಡೆ ನಡೆಸಿದ್ದರೆ ಅದು ಈತನ ಕಣ್ಣಿಗೂ ಹಾನಿ ಮಾಡಬೇಕಿತ್ತು, ಆದರೆ ಆಗಿರಲಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಕಾರ್ಖಾನೆ ಸ್ಥಳಾಂತರದ ವೇಳೆ ಅವಘಡ; ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು

ಗಗನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಪ್ಲ್ಯಾನ್​​ ಮಾಡಿದ್ದ. ಚಿನ್ನಕ್ಕೆ ಬಳಸುವ ರಾಸಾಯನಿಕ ಮುಖಕ್ಕೆ ಬಳಿದುಕೊಂಡಿದ್ದ ಈತ, ಅಂಗಡಿ ದರೋಡೆ ನಡೆದಿದೆ. ಆರೋಪಿಗಳು ಸಿಸಿಟಿವಿ DVRನೂ ಬಿಡದೆ ಕದ್ದು ಎಸ್ಕೇಪ್​​ ಆಗಿದ್ದಾರೆ ಎಂದಿದ್ದ. ಡ್ರಾಮಾ ಮಾಡಿ ಎಲ್ಲರನ್ನು ನಂಬಿಸಿ ಕೆಲ ದಿನಗಳ ಬಳಿಕ ಅಂಗಡಿ ಮುಚ್ಚಿಕೊಂಡು ರಾಜಸ್ಥಾನಗೆ ಮರಳಲು ಪ್ಲ್ಯಾನ್ ಮಾಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಸತ್ಯಾಸತ್ಯತೆ ಬಯಲಿಗೆಳೆದ ಪೊಲೀಸರು ಚಿನ್ನದಂಗಡಿ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:57 am, Wed, 18 February 26

Source link