ಕುರ್ಚಿ ಕದನದ ಮಧ್ಯೆ ಸಚಿವ ಸಂಪುಟ ಪುನಾರಚನೆಗೆ ಕೂಗು: ಡಿಕೆ ಶಿವಕುಮಾರ್ ದೆಹಲಿ ಟೂರ್, ಇತ್ತ ಹೋಟೆಲ್ನಲ್ಲಿ ಶಾಸಕರಿಂದ ಡಿನ್ನರ್!
ಬೆಂಗಳೂರು, ಮಾರ್ಚ್ 18: ರಾಜ್ಯ ಕಾಂಗ್ರೆಸ್ನಲ್ಲಿ ಡಿನ್ನರ್ ಮೀಟಿಂಗ್ಗಳ ಸರಣಿ ನಿಲ್ಲುವಂತೆ ಕಾಣ್ತಿಲ್ಲ. ಕಾಂಗ್ರೆಸ್ ಕುರ್ಚಿ ಕದನದ ಮಧ್ಯೆ ಸೈಲೆಂಟಾಗಿ ತೆರೆಮರೆಯಲ್ಲಿ ತಂತ್ರಗಾರಿಕೆ ನಿಲ್ಲುತ್ತಿಲ್ಲ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ರೆ ಇತ್ತ ಶಾಸಕರ ಡಿನ್ನರ್ ಮೀಟಿಂಗ್ ಸರಣಿ ಮುಂದುವರಿದಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಮೊದಲ ಬಾರಿಗೆ ಮತ್ತು 2ನೇ ಬಾರಿಗೆ ಆಯ್ಕೆಯಾದ ಶಾಸಕರು ಮಂಗಳವಾರ ರಾತ್ರಿ ಡಿನ್ನರ್ ಸಭೆ ಸೇರಿದ್ರು. ಕಳೆದ ವಾರವಷ್ಟೇ ಮೂರ್ನಾಲ್ಕು ಬಾರಿ ಆಯ್ಕೆಯಾದ ಹಿರಿಯ ಶಾಸಕರ ಸಭೆ ನಡೆದಿತ್ತು. ಇದರ ಭಾಗವಾಗಿ…