ಕಾಡಾನೆಗಳ ಉಪಟಳದಿಂದ ಪಾರು ಮಾಡುತ್ತೆ ಟೆಂಟಕಲ್ ಫೆನ್ಸಿಂಗ್: ಹೇಗೆ ಗೊತ್ತೇ? – Kannada News | Tentacle Fencing Emerges as Effective Solution to Curb Wild Elephant Menace in Chikkamagaluru
ಚಿಕ್ಕಮಗಳೂರು ಕಾಡಾನೆ ಹಾವಳಿImage Credit source: tv9 ಚಿಕ್ಕಮಗಳೂರು, ಮಾರ್ಚ್ 5: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild Elephants) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಕಾಫಿ ತೋಟಗಳು, ಭತ್ತದ ಗದ್ದೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ಸಂಚಾರ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕಾಡಾನೆ ದಾಳಿಗೆ ಹಲವರು ಮೃತಪಟ್ಟ ಘಟನೆಗಳು ವರದಿಯಾಗಿದ್ದು, ಸ್ಥಳೀಯರು ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಕಾಡಾನೆಗಳ ಶಾಶ್ವತ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಅಗೆದ ಹೊಂಡಗಳು (ಟ್ರೆಂಚ್), ಸೊಲಾರ್ ಬೇಲಿ…