All posts by nagaraj11081993

T20 World Cup: ಜಿಂಬಾಬ್ವೆ ವಿರುದ್ಧ ಆಡ್ತಾರಾ ರಿಂಕು ಸಿಂಗ್? ಕೋಚ್ ಹೇಳಿದ್ದೇನು? – Kannada News | Rinku Singh’s T20 World Cup Return: India vs Zimbabwe Match and Playing 11 Status

ರಿಂಕು ಸಿಂಗ್ ತಂಡಕ್ಕೆ ಸೇರಿದರೆ, ಕೋಚ್ ಸೀತಾಂಶು ಕೊಟಕ್ ಭರವಸೆ ನೀಡಿದಂತೆ, ಅವರು ಜಿಂಬಾಬ್ವೆ ವಿರುದ್ಧ ಆಡುವುದು ಖಚಿತ. ಆದಾಗ್ಯೂ ರಿಂಕು ಸಿಂಗ್ ಮನೆಗೆ ಮರಳಿರುವ ಕಾರಣ, ಚೆನ್ನೈನಲ್ಲಿ ಹೆಚ್ಚಿನ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ರಿಂಕು ತಂಡ ಸೇರಿದರೂ ಅವರನ್ನು ಪ್ಲೇಯಿಂಗ್​ 11ನಿಂದ ಹೊರಗಿಡುವ ಸಾಧ್ಯತೆಗಳು ಹೆಚ್ಚಿವೆ.

Source link

ಸಿಜೆ ರಾಯ್ ಮಾದರಿಯಲ್ಲಿ ಮತ್ತೋರ್ವ ಆತ್ಮಹತ್ಯೆ: ಐಟಿಗೆ ಹೆದರಿದ್ರಾ ಬಿಬಿಎಂಪಿ ನಿವೃತ್ತ ಚೀಫ್ ಇಂಜಿನಿಯರ್? – Kannada News | BBMP retired chief engineer parameshwarayya Commits Suicide In Bengaluru Like CJ roy

ಬೆಂಗಳೂರು, (ಫೆಬ್ರವರಿ 25): ಐಟಿ ಅಧಿಕಾರಿಗಳ ದಾಳಿ (IT Raid) ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಬಲಿ ಪಡೆದಿದೆ. ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವಾಗಲೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಐಟಿ ದಾಳಿಯಿಂದ ಖಿನ್ನತೆಗೊಳಗಾಗಿ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ (BBMP retired Chief Engineer) ಪರಮೇಶ್ವರಯ್ಯ ಅವರು ಇಂದು (ಫೆಬ್ರವರಿ 25) ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿರುವ ಎಫ್​​ಐಆರ್​​​ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಿಬಿಎಂಪಿಯ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಮೇಶ್ವರಯ್ಯ (ಪರಮೇಶ್ವರ್), ಕೋರಮಂಗಲದಲ್ಲಿ ವಾಸವಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಇವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಪರಮೇಶ್ವರಯ್ಯ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿಯಾಗಿತ್ತು

2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಆ ವೇಳೆ BBMP ಗುತ್ತಿಗೆದಾರ ಅನಿಲ್ ನಿವಾಸದಲ್ಲಿ ಸೂಟ್ಕೇಸ್‌ನಲ್ಲಿ 3 ಲಾಕರ್‌ ಕೀ 1.35 ಲಕ್ಷ ನಗದು, 275.98 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೇ ಹಲವು ಜಮೀನು, ಸೈಟ್ ದಾಖಲಾತಿ ಪತ್ತೆಯಾಗಿದ್ದವು. ಬಳಿಕ ಅನಿಲ್ ಕುಮಾರ್ ನನ್ನು ವಿಚಾರಣೆಗೊಳಪಡಿಸಿದಾಗ ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಮುಖ್ಯ ಇಂಜಿನಿಯರ್ ಆಗಿದ್ದ ಪರಮೇಶ್ವರಯ್ಯ ಅವರು ಹೆಸರು ಹೇಳಿದ್ದರು. ಇದೆಲ್ಲವೂ ಪರಮೇಶ್ವರಯ್ಯಗೆ ಸೇರಿದ್ದು ಎಂದು ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪರಮೇಶ್ವರಯ್ಯ ಈ ವೇಳೆ ಸೂಟ್ಕೇಸ್‌ ತನ್ನದೇ ಎಂದು ಒಪ್ಪಿಕೊಂಡಿದ್ದರು. ಬಳಿಕ 2021ರ ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳಲ್ಲಿ ಪರಿಶೀಲಿಸಿದ್ದ ಐಟಿ ಅಧಿಕಾರಿಗಳಿಗೆ 3 ಬ್ಯಾಂಕ್ ಲಾಕರ್‌ಗಳಲ್ಲಿ 86.35 ಲಕ್ಷ ರೂ. ನಗದು ಸಹ ಪತ್ತೆಯಾಗಿತ್ತು. ಲಾಕರ್ ಜಿ.ಕಿಶೋರ್ ನಾಯ್ಡು ಎಂಬುವವರ ಹೆಸರಲ್ಲಿ ಇತ್ತು. ಲಾಕರ್ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಹೆಸರಿನಲ್ಲಿತ್ತು.

ತನಿಖೆಗೆ ಹೆದರಿ ಪರಮೇಶ್ವರಯ್ಯ ಆತ್ಮಹತ್ಯೆ ಶಂಕೆ

ಇನ್ನು 2012ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 29.64 ಲಕ್ಷ ರೂ. ಇತ್ತು. ಆದ್ರೆ, 2021ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 5.85 ಕೋಟಿಗೆ ಹೆಚ್ಚಳವಾಗಿತ್ತು. ಬೆಂಗಳೂರು, ತುಮಕೂರಿನಲ್ಲಿ ನಿವೇಶನ, ಕೋರಮಂಗಲದಲ್ಲಿ ಸೈಟ್, ಮನೆ, ಅಪಾರ್ಟ್‌ಮೆಂಟ್‌ ಹೊಂದಿದ್ದರು. ನಂತರ ಐಟಿ ಅಧಿಕಾರಿಗಳ ತನಿಖೆಯಲ್ಲಿ ಪರಮೇಶ್ವರಯ್ಯ ಭ್ರಷ್ಟಾಚಾರ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಸಿಸಿಬಿಯಲ್ಲಿ 2026ರ ಜನವರಿ 30ರಂದು ಎಫ್ಐಆರ್ ದಾಖಲಾಗಿತ್ತು. ಇದರಿಂದ ಖಿನ್ನತೆಗೊಳಗಾಗಿ ಪರಮೇಶ್ವರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪರಮೇಶ್ವರಯ್ಯ ಅವರ ಈ ಸಾವು ಇತ್ತೀಚೆಗಷ್ಟೇ ನಡೆದಿದ್ದ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುತ್ತಿದೆ. ಸಿಜೆ ರಾಯ್ ಕೂಡ IT ಅಧಿಕಾರಿಗಳು ನಡೆಸಿದ್ದ ಸತತ ದಾಳಿ ಮತ್ತು ವಿಚಾರಣೆಗೆ ಹೆದರಿ ಮಾನಸಿಕವಾಗಿ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪರಮೇಶ್ವರಯ್ಯ ಅದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಬೇಹುಗಾರಿಕೆ ನೀಡಿದ ಮಾಹಿತಿಯಿಂದ ಬೆಚ್ಚಿಬಿದ್ದಿದ್ದರು ಆ್ಯಪಲ್ ಸಿಇಒ ಟಿಮ್ ಕುಕ್ – Kannada News | Apple CEO Tim Cook was shocked when CIA alerted on possible invasion of Taiwan by China

ವಾಷಿಂಗ್ಟನ್, ಫೆಬ್ರುವರಿ 25: ಸುಮಾರು 2 ವರ್ಷದ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ತಯಾರಿಕೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. 100 ಬಿಲಿಯನ್ ಡಾಲರ್ ಎಂದರೆ ಸುಮಾರು 9 ಲಕ್ಷ ಕೋಟಿ ರೂ. ಆ್ಯಪಲ್ ಕಂಪನಿಯ ಈ ನಿರ್ಧಾರ ಸಾಧಾರಣದ್ದಾಗಿರಲಿಲ್ಲ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಂಟೇ ಬೇಡ ಎಂದು ಸುಮ್ಮನ್ನಿದ್ದ ಆ್ಯಪಲ್ ದಿಢೀರನೇ ನಿರ್ಧಾರ ಬದಲಿಸಿದ್ದ ಆಶ್ಚರ್ಯಪಡಬೇಕಾದ ಸಂಗತಿ. ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಟಿಮ್ ಕುಕ್ ಒಳಗಾಗಿರಬಹುದು ಎನ್ನುವುದಕ್ಕೆ ಆಗಿನ್ನೂ ಟ್ರಂಪ್ ಅಧ್ಯಕ್ಷರಾಗಿರಲಿಲ್ಲ. ಹಾಗಿದ್ದರೆ ಆ್ಯಪಲ್ ಕಂಪನಿಯ ಆ ನಿರ್ಧಾರಕ್ಕೆ ಏನು ಕಾರಣ? ವರದಿಗಳ ಪ್ರಕಾರ, ರಹಸ್ಯ ಸಭೆಯೊಂದರಲ್ಲಿ ಟಿಮ್ ಕುಕ್​ಗೆ ಸಿಐಎ ಹೇಳಿದ ಸಂಗತಿಯೊಂದು ಇದಕ್ಕೆ ಕಾರಣ ಎನ್ನಲಾಗಿದೆ.

ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದಾಗಿ ಘೋಷಣೆ ಮಾಡುವ ಸ್ವಲ್ಪ ಮೊದಲು, 2023ರ ಮಧ್ಯಭಾಗದಲ್ಲಿ ಕೆಲ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳ ಜೊತೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ರಹಸ್ಯ ಸಭೆ ನಡೆಸಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್, ಎನ್​ವಿಡಿಯಾದ ಜೆನ್ಸೆನ್ ಹುವಾಂಗ್, ಎಎಂಡಿಯ ಲಿಸಾ ಸು ಅವರು ಈ ಸಭೆಯಲ್ಲಿ ಇದ್ದರು. ಕ್ವಾಲ್​ಕಾಮ್​ನ ಕ್ರಿಸ್ಟಿಯಾನೋ ಅಮೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಚೀನಾ 2027ರಲ್ಲಿ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಸಿಐಎ ಅಧಿಕಾರಿಗಳು ಆ ಸಭೆಯಲ್ಲಿ ಬಿಚ್ಚಿಟ್ಟಿದ್ದರು.

ಇದನ್ನೂ ಓದಿ: ‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್

ಗುಪ್ತಚರರು ನೀಡಿದ ಈ ಮಾಹಿತಿಯು ಅಮೆರಿಕದ ಟೆಕ್ ಕಂಪನಿಗಳ ಜಂಘಾಬಲ ಉಡುಗುವಂತೆ ಮಾಡಿತ್ತು. ವಿಶ್ವದ ಅತಿಮೌಲ್ಯದ ಮತ್ತು ಅತಿಶಕ್ತಿಶಾಲಿ ಚಿಪ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಶೇ. 90ರಷ್ಟು ನಡೆಯುವುದು ತೈವಾನ್​ನಲ್ಲೇ. ಅದೇನಾದರೂ ಚೀನಾ ವಶವಾಗಿ ಹೋದರೆ ಚಿಪ್ ಸಪ್ಲೈ ಚೈನ್ ಬಂದ್ ಆದಂತೆಯೇ. ವಿಶ್ವದ ಟೆಕ್ ಸಾಮ್ರಾಜ್ಯದ ಅಧಿಪತಿಯಾಗಿ ಮುಂದುವರಿಯಲು ಅಮೆರಿಕಕ್ಕೆ ಸಾಧ್ಯವಾಗದೇ ಹೋಗುವ ಭಯ.

ಆ್ಯಪಲ್ ಸಿಇಒ ಟಿಮ್ ಕುಕ್ ಅಕ್ಷರಶಃ ಕಂಗಾಲಾಗಿದ್ದರು. ತೈವಾನ್​ನ ಟಿಎಸ್​ಎಂಸಿ (TSMC) ಕಂಪನಿಯು ಆ್ಯಪಲ್​ನ ಎಲ್ಲಾ ಉತ್ಪನ್ನಗಳಿಗೆ ಬೇಕಾದ ವಿಶೇಷ ವಿನ್ಯಾಸದ ಚಿಪ್​ಗಳನ್ನು ತಯಾರಿಸುತ್ತದೆ. ತೈವಾನ್ ಅನ್ನು ಚೀನಾ ಆಕ್ರಮಿಸಿಕೊಂಡರೆ ಆ್ಯಪಲ್ ಕಂಪನಿಯ ಬ್ಯುಸಿನೆಸ್ ಎಲ್ಲವೂ ಚೀನಾ ಮರ್ಜಿಗೆ ಬೀಳಬೇಕಾಗುತ್ತದೆ. ಹೀಗಾಗಿ, ಆ್ಯಪಲ್ ಕಂಪನಿ ಅಮೆರಿಕದೊಳಗೆಯೇ ಚಿಪ್ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲು ಬಂಡವಾಳ ಹಾಕುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಈ ಗಿಡವನ್ನು ನೆಡಿ – Kannada News | To keep snakes away from your home, plant Indian Snakeroot

ಬೇಸಿಗೆ ಕಾಲದಲ್ಲಿ ಹಾವುಗಳ (snakes) ಕಾಟ ಸಿಕ್ಕಾಪಟ್ಟೆ ಇರುತ್ತದೆ. ಬಿಸಿಲಿನ ತಾಪ ತಾಳಲಾರದೆ ಬಿಲದಿಂದ ಹೊರಬರುವ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕುತ್ತಾ ಪೊದೆ, ಮನೆಯಂಗಳದಲ್ಲಿರುವ ಮರಗಿಡಗಳ ಬಳಿ ಬರುತ್ತವೆ. ಮನೆಯೊಳಗೆ ಸಹ ಪ್ರವೇಶಿಸುತ್ತವೆ. ಕೆಲವರ ಮನೆಗಳಲ್ಲಂತೂ ಬೇಸಿಗೆಯಲ್ಲಿ ಹಾವುಗಳ ಸಮಸ್ಯೆ ತೀರಾ ಸಾಮಾನ್ಯವಾಗಿರುತ್ತವೆ. ಇದು ಕಚ್ಚಿದರೆ ಏನಪ್ಪಾ ಗತಿ ಎಂದು ಹಲವರು ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಅದಕ್ಕಾಗಿ ತಮ್ಮನ್ನು ತಾವು ಹಾವುಗಳಿಂದ  ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸರ್ಪಗಂಧದ ಗಿಡವನ್ನು ಮನೆ ಬಾಗಿಲಿನಲ್ಲಿ ನೆಡುವುದರಿಂದಲೂ ಹಾವುಗಳು ಮನೆ ಬಳಿ ಬಾರದಂತೆ ತಡೆಯಬಹುದು. ಈ ಒಂದು ಗಿಡ ಹಾವುಗಳು ಓಡಿಸಲು ತುಂಬಾನೇ ಪರಿಣಾಮಕಾರಿ. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಸರ್ಪಗಂಧ ಸಸ್ಯ ನೆಡಿ:

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಂಗಳದಲ್ಲಿ ಸರ್ಪಗಂಧ ಗಿಡವನ್ನು ನೆಡುವುದು ತುಂಬಾನೇ ಒಳ್ಳೆಯದು.  ಅಪಾರ ಪ್ರಮಾಣದ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡ ಮೆಣಸು, ಹಸಿರು ಮೆಣಸಿನಕಾಯಿ ಮಾದರಿಯ ಕಟುವಾದ ವಾಸನೆಯನ್ನು ಹೊರಸೂಸುತ್ತವೆ,  ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತದೆ. ಇದನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳಿಗೆ ಮಾತ್ರವಲ್ಲ ಈ ಸಸ್ಯ ಎಲ್ಲಾ ಸರೀಸೃಪಗಳ ಶತ್ರು. ಆದ್ದರಿಂದ ಹಾವುಗಳು ಬರಬಾರದೆಂದರೆ ಮನೆ ಸುತ್ತಮುತ್ತಲೂ ಸರ್ಪಗಂಧದ ಸಸ್ಯವನ್ನು ನೆಡಿ.

ಇದನ್ನೂ ಓದಿ: ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವ ತಪ್ಪನ್ನು ಮಾಡಲೇಬೇಡಿ

ಇದಲ್ಲದೆ ಸರ್ಪಗಂಧ ಸಸ್ಯದ ಬೇರುಗಳನ್ನು ಮನೆಯ ಮುಂದೆ ಇಟ್ಟರೆ ಅಥವಾ ಕಿಟಕಿ, ಬಾಗಿಲುಗಳ ಬಳಿ ಕಟ್ಟಿದರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಈ ಸಸ್ಯದ ಬೇರುಗಳಿಂದ ಹೊರಹೊಮ್ಮುವ ಬಲವಾದ ವಾಸನೆಯು ಹಾವುಗಳು ಬರುವುದನ್ನು ತಡೆಯುತ್ತದೆ. ಜೊತೆಗೆ ಸರ್ಪಗಂಧದ ಬೀಜಗಳು ಸಹ ಹಾವುಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಈ ಬೀಜಗಳು ಆಲ್ಕಲಾಯ್ಡ್‌ಗಳು, ರೆಸರ್ಪೈನ್, ಸರ್ಪೆಂಟೈನ್ ಮತ್ತು ಅಜ್ಮಲೈಸಿನ್ ನಂತಹ ಔಷಧೀಯ ಗುಣಗಳನ್ನು ಹಾಗೂ ಬಲವಾದ ವಾಸನೆಯನ್ನು ಹೊಂದಿದ್ದು, ಇವು ಹಾವುಗಳು ಬಾರದಂತೆ ತಡೆಯುತ್ತವೆ.

ಸರ್ಪಗಂಧ ಸಸ್ಯ ಮಾತ್ರವಲ್ಲ ಚೆಂಡುಹೂವಿನ ಗಿಡ,  ತುಳಸಿ ಗಿಡ, ಲೆಮನ್‌ ಗ್ರಾಸ್‌ ಸಸ್ಯಗಳನ್ನು ನೆಡುವ ಮೂಲಕವೂ ಹಾವುಗಳು ಮನೆ ಸುತ್ತಮುತ್ತ ಸುಳಿಯದಂತೆ ನೋಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹದಗೆಟ್ಟ ರಸ್ತೆಯಿಂದ ಮತ್ತೊಂದು ಅವಾಂತರ: ಸ್ಕಿಡ್​ ಆದ ಬೈಕ್; ತಂದೆ, ಮಕ್ಕಳು ಜಸ್ಟ್​​ ಮಿಸ್​​​ – Kannada News | Bengaluru Road Accident: Father and Kids Fall Due to Anekal Bad Roads

ಆನೇಕಲ್, ಫೆಬ್ರವರಿ 25: ಬೆಂಗಳೂರಿನಲ್ಲಿ ರಸ್ತೆ ಹದಗೆಟ್ಟಿದ್ದರಿಂದ ಮತ್ತೊಂದು ಅವಾಂತರ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದ ಶೆಲ್ ಪೆಟ್ರೋಲ್ ಬಂಕ್​ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸವಾರ ಆಯತಪ್ಪಿ ಬಿದ್ದಿರುವಂತಹ ಘಟನೆ ನಡೆದಿದೆ. ಬೈಕ್​​ನಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ತೆರಳುವಾಗ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ತಂದೆ, ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಹಿನ್ನೆಲೆ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು… – Kannada News | From Cash payment to withdrawal, 16 financial transactions that Income Tax department observes

ಜನರು ಮತ್ತು ಸಂಸ್ಥೆಗಳ ಆದಾಯಕ್ಕೆ ಕಾನೂನಿನ ಪ್ರಕಾರ ತೆರಿಗೆ ಪಾವತಿಯಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಐಟಿ ಇಲಾಖೆಯದ್ದಾಗಿರುತ್ತದೆ. ಜನರು ದೊಡ್ಡ ಮಟ್ಟದ ಆದಾಯ ಹೊಂದಿದ್ದರೆ ಅದನ್ನು ಪತ್ತೆ ಮಾಡಲು ಇಲಾಖೆ (Income Tax) ಬಳಿ ವಿವಿಧ ಮಾರ್ಗೋಪಾಯಗಳಿವೆ. ಅದಕ್ಕಾಗಿ ಬ್ಯಾಂಕು, ಪೋಸ್ಟ್ ಆಫೀಸ್ ಇತ್ಯಾದಿ ಹಣಕಾಸು ಸಂಸ್ಥೆಗಳ ನೆರವನ್ನು ಐಟಿ ಇಲಾಖೆ ಪಡೆಯುತ್ತದೆ. ಒಬ್ಬ ವ್ಯಕ್ತಿಯಿಂದ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ಆದಾಗ ಸ್ಟೇಟ್ಮೆಂಟ್ ಆಫ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಎನ್ನುವ ಮಾರ್ಗದ ಮೂಲಕ ಮಾಹಿತಿ ಪಡೆಯುತ್ತದೆ. ಆಗ ಇಲಾಖೆಯು ಆ ವ್ಯಕ್ತಿಯ ಹಣಕಾಸು ಚಟುವಟಿಕೆ, ಆದಾಯ ಮೂಲಗಳನ್ನು ಶೋಧಿಸುವ ಕಾರ್ಯ ಆರಂಭಿಸಲು ಸಾಧ್ಯವಾಗುತ್ತದೆ. ಅಂಥ ಕೆಲ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕ್ಯಾಷ್ ಪೇಮೆಂಟ್

ಬ್ಯಾಂಕ್ ಡ್ರಾಫ್ಟ್, ಪೇ ಆರ್ಡರ್, ಬ್ಯಾಂಕರ್ಸ್ ಚೆಕ್​ಗಳಿಗೆ ಮಾಡುವ ಒಟ್ಟಾರೆ ಕ್ಯಾಷ್ ಪೇಮೆಂಟ್ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿದ್ದರೆ, ಅದನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು ಎನ್ನುತ್ತದೆ ನಿಯಮ.

ಪಿಪಿಐಗಳಿಗೆ ಪಾವತಿ

ಆರ್​ಬಿಐನಿಂದ ನೀಡಲಾದ ಪಿಪಿಐಗೆ (ಪ್ರೀಪೇಡ್ ಇನ್​ಸ್ಟ್ರುಮೆಂಟ್ಸ್) ಕ್ಯಾಷ್ ಪಾವತಿ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದರೆ ಅದು ಐಟಿ ಗಮನಕ್ಕೆ ಹೋಗುತ್ತದೆ.

ಕ್ಯಾಷ್ ಡೆಪಾಸಿಟ್

ಒಬ್ಬ ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಚಾಲ್ತಿ ಖಾತೆಗಳಿಗೆ (ಕರೆಂಟ್ ಅಕೌಂಟ್) ಒಂದು ಹಣಕಾಸು ವರ್ಷದಲ್ಲಿ ಒಟ್ಟಾರೆ 50 ಲಕ್ಷ ರೂಗೂ ಹೆಚ್ಚಿನ ಕ್ಯಾಷ್ ಡೆಪಾಸಿಟ್ ಆದರೆ…

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಕ್ಯಾಷ್ ವಿತ್​ಡ್ರಾಯಲ್

ಒಬ್ಬ ವ್ಯಕ್ತಿಯ ಕರೆಂಟ್ ಅಕೌಂಟ್​ಗಳಿಂದ ವರ್ಷದಲ್ಲಿ ಒಟ್ಟು 50 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ಅನ್ನು ವಿತ್​ಡ್ರಾ ಮಾಡಿದಾಗ…

ಸೇವಿಂಗ್ ಅಕೌಂಟ್​ಗಳಿಗೆ ಕ್ಯಾಷ್ ಡೆಪಾಸಿಟ್

ಕರೆಂಟ್ ಅಕೌಂಟ್ ಅಲ್ಲದ ಮತ್ತು ಫಿಕ್ಸೆಡ್ ಡೆಪಾಸಿಟ್ ಹೊರತುಪಡಿಸಿ, ಇತರ ಅಕೌಂಟ್​ಗಳಿಗೆ ಒಂದು ವರ್ಷದಲ್ಲಿ ಇಡಲಾದ ಕ್ಯಾಷ್ ಡೆಪಾಸಿಟ್ 10 ಲಕ್ಷ ರೂ ಮೀರಿದಾಗ ಅದನ್ನು ಐಟಿ ಗಮನಕ್ಕೆ ತರಲಾಗುತ್ತದೆ.

ಕ್ಯಾಷ್ ಪೇಮೆಂಟ್ ಮಿತಿ

ಸರಕು ಮತ್ತು ಸೇವೆಗಳ ಮಾರಾಟದಲ್ಲಿ ಒಂದು ವಹಿವಾಟಿನಲ್ಲಿ 2 ಲಕ್ಷ ರೂಗಿಂತ ಅಧಿಕ ಕ್ಯಾಷ್ ಪೇಮೆಂಟ್ ಬಂದಾಗ ಅದು ಐಟಿ ಗಮನಕ್ಕೆ ಹೋಗಬಹುದು.

ಕ್ರೆಡಿಟ್ ಕಾರ್ಡ್​ಗೆ ಕ್ಯಾಷ್ ಪೇಮೆಂಟ್

ಕ್ರೆಡಿಟ್ ಕಾರ್ಡ್​ಗಳಿಗೆ ಒಂದು ವರ್ಷದಲ್ಲಿ ಒಂದು ಲಕ್ಷ ರೂಗಿಂತ ಅಧಿಕ ಪಾವತಿಯನ್ನು ಕ್ಯಾಷ್​ನಲ್ಲಿ ಮಾಡಿದಾಗ…

ಕ್ರೆಡಿಟ್ ಕಾರ್ಡ್​ಗೆ ಇತರ ಪೇಮೆಂಟ್

ಕ್ರೆಡಿಟ್ ಕಾರ್ಡ್​ಗೆ ಕ್ಯಾಷ್ ಹೊರತುಪಡಿಸಿ ಇತರ ಮಾರ್ಗಗಳಲ್ಲಿ ಪೇಮೆಂಟ್ ಮಾಡಿದಾಗ ಅದು ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಅಧಿಕ ಇದ್ದಾಗ, ಐಟಿ ಗಮನಕ್ಕೆ ಹೋಗುತ್ತದೆ.

ನಿಶ್ಚಿತ ಠೇವಣಿ

ಟೈಮ್ ಡೆಪಾಸಿಟ್ ಅಥವಾ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತ ಹಾಕಿದಾಗ…

ಬಾಂಡ್ ಅಥವಾ ಡಿಬಂಚರ್

ಬಾಂಡ್ ಅಥವಾ ಡಿಬಂಚರ್​ಗಳ ಖರೀದಿಗೆ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚು ಹಣ ವ್ಯಯಿಸಿದಾಗ…

ಷೇರು ಖರೀದಿಗೆ…

ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಷೇರುಗಳನ್ನು ಖರೀದಿಸಿದಾಗ…

ಷೇರು ಮರುಖರೀದಿ…

ಓಪನ್ ಮಾರ್ಕೆಟ್ ಖರೀದಿ ಹೊರತಾಗಿ, ಷೇರುಗಳ ಮರುಖರೀದಿಗೆ ಒಂದು ವರ್ಷದಲ್ಲಿ 10 ಲಕ್ಷ ರೂ ಮೊತ್ತವಾದಾಗ…

ಮ್ಯೂಚುವಲ್ ಫಂಡ್ ಖರೀದಿ

ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಮ್ಯೂಚುವಲ್ ಫಂಡ್ ಯುನಿಟ್​​ಗಳನ್ನು ಖರೀದಿಸಿದಾಗ…

ಇದನ್ನೂ ಓದಿ: Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಸ್ಥಿರಾಸ್ತಿಯ ಖರೀದಿ ಅಥವಾ ಮಾರಾಟ

ನಿವೇಶನ, ಮನೆ ಇತ್ಯಾದಿ ಚಿರಾಸ್ತಿಯ ವಹಿವಾಟು ಮೌಲ್ಯ ಅಥವಾ ಸ್ಟ್ಯಾಂಪ್ ವ್ಯಾಲ್ಯುಯೇಶನ್ 30 ಲಕ್ಷ ರೂಗಿಂತ ಹೆಚ್ಚಿದ್ದಾಗ…

ಫಾರೆಕ್ಸ್ ವಹಿವಾಟು

ವಿದೇಶೀ ಕರೆನ್ಸಿಯ ಮಾರಾಟ ಅಥವಾ ಫಾರೆಕ್ಸ್ ಕಾರ್ಡ್ ಕ್ರೆಡಿಟ್ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದಾಗ…

ವಿದೇಶೀ ಕರೆನ್ಸಿ ಖರೀದಿ…

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಟ್ರಾವೆಲರ್ಸ್ ಚೆಕ್, ಡ್ರಾಫ್ಟ್ ಅಥವಾ ಇನ್ಯಾವುದೇ ಇನ್ಸ್​ಟ್ರುಮೆಂಟ್ ಮೂಲಕ ವಿದೇಶೀ ಕರೆನ್ಸಿ ಖರೀದಿಗೆ ಮಾಡುವ ವೆಚ್ಚ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದಾಗ…

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಶ್…‌ ನಿಮ್ಮ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಬೇಡಿ – Kannada News | Chanakya Niti: Chanakya says that these personal secrets should not be shared with anyone

ಉತ್ತಮ ಜೀವನ ನಡೆಸಬೇಕೆಂಬುದು ಪ್ರತಿಯೊಬ್ಬರ ಆಸೆ. ಆದರೆ ಅದಕ್ಕೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಮುಖ್ಯವಾಗಿ ಒಳ್ಳೆಯ, ಯಶಸ್ವಿ ಜೀವನ ನಡೆಸಬೇಕು ಎಂದಾದರೆ ಈ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದಿದ್ದಾರೆ. ಏಕೆಂದರೆ ಈ ರೀತಿ ಎಲ್ಲಾ ರಹಸ್ಯಗಳನ್ನು ಇತರರ ಬಳಿ ಹಂಚಿಕೊಂಡಾಗ ತೊಂದರೆಗಳಾಗುವುದೇ ಹೆಚ್ಚು. ಹಾಗಿದ್ರೆ ಯಾವ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿಡುವುದೇ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:

ಸಂಪತ್ತು ಮತ್ತು ಆದಾಯ: ಒಬ್ಬ ವ್ಯಕ್ತಿಯು ತನ್ನ ಗಳಿಕೆ, ಉಳಿತಾಯ, ಹೂಡಿಕೆಗಳು ಅಥವಾ ಆಸ್ತಿಗಳ ಬಗ್ಗೆ ಇತರರೊಂದಿಗೆ ಬಹಿರಂಗವಾಗಿ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಇದು ಇನ್ನೊಬ್ಬರಿಗೆ ನಿಮ್ಮ ಮೇಲೆ ಅಸೂಯೆ ಭಾವನೆ ಮಾತ್ರವಲ್ಲ, ನಿಮ್ಮ ಮೇಲೆ ಬೆದರಿಕೆಯನ್ನೂ ಒಡ್ಡುತ್ತದೆ ಎನ್ನುತ್ತಾರೆ ಚಾಣಕ್ಯ. ಭದ್ರತೆಯ ದೃಷ್ಟಿಯಿಂದ ಸಂಪತ್ತನ್ನು ರಹಸ್ಯವಾಗಿಡುವುದು ಒಳ್ಳೆಯದು.

ನಿಮ್ಮ ದೌರ್ಬಲ್ಯಗಳು: ತಮ್ಮ ನ್ಯೂನತೆಗಳನ್ನು ಬಹಿರಂಗವಾಗಿ ಬಹಿರಂಗಪಡಿಸುವ ವ್ಯಕ್ತಿಯೇ ಹೆಚ್ಚಾಗಿ ಶತ್ರುಗಳ ದಾಳಕ್ಕೆ ಮೊದಲ ಗುರಿಯಾಗುತ್ತಾನೆ. ಶತ್ರು ಮೊದಲು ದೌರ್ಬಲ್ಯಗಳನ್ನು ಹುಡುಕುತ್ತಾನೆ ಎಂದು ಚಾಣಕ್ಯ ಹೇಳುತ್ತಾನೆ, ಆದ್ದರಿಂದ ನಿಮ್ಮ ದೌರ್ಬಲ್ಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಉತ್ತಮ.

ಭವಿಷ್ಯದ ಯೋಜನೆಗಳು: ನಿಮ್ಮ ದೀರ್ಘಾವಧಿಯ ಯೋಜನೆಗಳನ್ನು  ಇತರರೊಂದಿಗೆ ಹಂಚಿಕೊಳ್ಳುವುದು ದೊಡ್ಡ ತಪ್ಪು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಗುರಿಯನ್ನು ಸಾಧಿಸುವ ಮೊದಲು ಅವುಗಳನ್ನು ಬಹಿರಂಗಪಡಿಸುವುದು ಅಡ್ಡಿಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವುದು ಉತ್ತಮ.

ಕುಟುಂಬ ವಿವಾದಗಳು ಮತ್ತು ಸಂಘರ್ಷಗಳು: ಕುಟುಂಬದೊಳಗಿನ ವಿವಾದಗಳು, ಸಂಘರ್ಷಗಳ ಕುರಿತು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಇದರಿಂದ ಸಮಸ್ಯೆಗಳು ಇನ್ನಷ್ಟು ಹದಗೆಡುತ್ತದೆ. ಹೊರಗಿನವರು ಇದರ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕುಟುಂಬದ ಗಲಾಟೆಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಉತ್ತಮ.

ಇದನ್ನೂ ಓದಿ: ಮನೆಯ ಶಾಂತಿ ನೆಮ್ಮದಿ ಸರ್ವನಾಶವಾಗಲು ಇವೇ ಮುಖ್ಯ ಕಾರಣಗಳು

ವೈಫಲ್ಯಗಳು: ನಿಮ್ಮ ವೈಫಲ್ಯಗಳ ಬಗ್ಗೆ ಇತರರ ಬಳಿ ಯಾವುದೇ ಕಾರಣಕ್ಕೂ ಶೇರ್‌ ಮಾಡಬೇಡಿ. ಇದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ವೈಫಲ್ಯದಿಂದ ಜೀವನ ಪಾಠವನ್ನು ಕಲಿಯಿರಿ, ಆದರೆ ಆ ವೈಫಲ್ಯಗಳ ಬಗ್ಗೆ ಎಲ್ಲರೊಂದಿಗೆ ಹಂಚಿಕೊಂಡು ಬರಬೇಡಿ, ಇದರಿಂದ ನಿಮಗೆಯೇ ಹಾನಿ ಎಂದಿದ್ದಾರೆ ಆಚಾರ್ಯ ಚಾಣಕ್ಯ.

ಆರ್ಥಿಕ ನಷ್ಟ: ನಿಮಗಾದ ಆರ್ಥಿಕ ನಷ್ಟದ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ರೀತಿ ಹೇಳುವುದರಿಂದ ಕಷ್ಟದ ಸಮಯದಲ್ಲಿ ನಿಮಗೆ ಯಾರೂ ಸಹಾಯ ಮಾಡುವುದಿಲ್ಲ, ಬದಲಾಗಿ ನಿಮ್ಮಿಂದ ದೂರ ಉಳಿಯುವುದೇ ಉತ್ತಮ ಎಂದು ಭಾವಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆನ್ನೈ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಇಂಡಿಗೋ ವಿಮಾನದೊಳಗೆ ಸಿಲುಕಿಕೊಂಡ ಪ್ರಯಾಣಿಕರು – Kannada News | Over 200 passengers stuck on IndiGo Wait Inside Flight at Chennai airport for 5 hours

ಚೆನ್ನೈ, ಫೆಬ್ರವರಿ 25: ಇಂಡಿಗೋ ವಿಮಾನವು ಚೆನ್ನೈನಿಂದ ಸಿಂಗಾಪುರಕ್ಕೆ ಹೊರಡುವ ಮೊದಲು 200ಕ್ಕೂ ಹೆಚ್ಚು ಪ್ರಯಾಣಿಕರು ಇಂಡಿಗೋ (IndiGo) ವಿಮಾನದೊಳಗೆ 5 ಗಂಟೆಗಳ ಕಾಲ ಕಾಯುವಂತಾಯಿತು. ವಿಮಾನ ಹತ್ತಿದ ನಂತರ ಸುಮಾರು 5 ಗಂಟೆಗಳ ಕಾಲ ಅಂದರೆ ಚೆನ್ನೈನಿಂದ ಸಿಂಗಾಪುರ ತಲುಪುವ ಸಮಯಕ್ಕಿಂತ ಹೆಚ್ಚು ಕಾಲ ವಿಮಾನದೊಳಗೆ ಕುಳಿತು ಕಾಯುವಂತಾಯಿತು. ಇದರಿಂದ ಹತಾಶೆಗೊಂಡ ಪ್ರಯಾಣಿಕರು ಅಸಮಾಧಾನ ಹೊರಹಾಕಿದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಯ ಮೇಲೆ ಕೋಪ ವ್ಯಕ್ತಪಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

ಈ ಘಟನೆ ನಡೆದ ನಂತರ ಇಂಡಿಗೋ ಸ್ಪಷ್ಟನೆಯನ್ನೂ ನೀಡಿದೆ. ಕ್ಯಾಬಿನ್ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವುದನ್ನು ಪೈಲಟ್ ಗಮನಿಸಿ ಎಂಜಿನಿಯರಿಂಗ್ ತಂಡಕ್ಕೆ ಎಚ್ಚರಿಕೆ ನೀಡಿದ್ದರಿಂದ ವಿಳಂಬ ಸಂಭವಿಸಿದೆ ಎಂದು ಇಂಡಿಗೋ ವಿವರಿಸಿದೆ. ಈ ವೇಳೆ ಕಾಕ್‌ಪಿಟ್ ಸಿಬ್ಬಂದಿ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೆಷನ್‌ಗಳನ್ನು (ಎಫ್‌ಡಿಟಿಎಲ್) ಮೀರಿದ್ದರು. ಹೀಗಾಗಿ, ಬದಲಿ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕಿತ್ತು. ಇದು ವಿಮಾನ ಹಾರಾಟದ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Wed, 25 February 26

Source link

ಕೊರೊನಾ ಬಳಿಕ ಮೊದಲ ಬಾರಿಗೆ ರೇಷ್ಮೆ ಗೂಡಿಗೆ ಬಂಗಾರದ ಬೆಲೆ: ದಾಖಲೆ ದರಕ್ಕೆ ರೈತರು ಫುಲ್ ಖುಷ್ – Kannada News | Kolar: Record Silk Cocoon Prices; Farmers Get Boost Amidst Production Challenges

ಕೋಲಾರ, ಫೆಬ್ರವರಿ 25: ಕೋಲಾರ ಸಿಲ್ಕ್ ಮತ್ತು ಮಿಲ್ಕ್​ ಉತ್ಪಾದನೆಯಲ್ಲಿ ಹೆಸರುವಾಸಿಯಾದ ಜಿಲ್ಲೆ. ಅಪರೂಪಕ್ಕೆ ಒಮ್ಮೆ ಸಿಲ್ಕ್ (Silk) ಉತ್ಪಾದನೆ ಮಾಡುವ ರೈತರ ಮುಖದಲ್ಲಿ ಸಂತಸ ಮೂಡುವಂತ ಬೆಲೆ ರೈತರಿಗೆ ಸಿಗುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದೆ. ಕೆಜಿಗೆ ಸಾವಿರಾರು ರೂ ಮಾರಾಟ ಹಿನ್ನೆಲೆ ರೇಷ್ಮೆ ಬೆಳೆಗಾರರು ಸಂತಸಗೊಂಡಿದ್ದಾರೆ.

800 ರಿಂದ 1000 ರೂ

ಕಳೆದ ಎರಡು ಮೂರು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಮುಖದಲ್ಲಿ ನಗು ದುಪ್ಪಟ್ಟಾಗಿದೆ. ಅದಕ್ಕೆ ಕಾರಣ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಕೆಜಿ ಬಯೋಲ್ಟಿನ್​ ರೇಷ್ಮೆ 800 ರಿಂದ 1000 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಕಷ್ಟಪಟ್ಟು ಬೆಳೆದ ರೇಷ್ಮೆ ಬೆಳೆಗಾರರ ಮುಖದಲ್ಲಿ ಸಂತೋಷ ಹಿಮ್ಮಡಿಯಾಗುತ್ತಿದೆ.

ಇದನ್ನೂ ಓದಿ: ದೇಶ-ವಿದೇಶಗಳಿಗೆ ಹಣ್ಣು, ತರಕಾರಿ, ಹೂವು ರಫ್ತು ಮಾಡುವ ‘ಕೃಷಿ ಕಣಜ’ ಕೋಲಾರಕ್ಕೆ ದೊಡ್ಡ ಸಂಕಷ್ಟ

ಕೊರೊನೊ ಕಾಲದಲ್ಲಿ ಚೀನಾ ರೇಷ್ಮೆಯ ಆಮದು ನಿಲ್ಲಿಸಿದ್ದ ಸಮಯದಲ್ಲಿ ರೇಷ್ಮೆಗೆ ಈ ರೀತಿಯ ಬೆಲೆ ಬಂದಿತ್ತು. ಅದಾದ ನಂತರ ಇಷ್ಟು ಬೆಲೆ ಬಂದಿರುವುದು ರೇಷ್ಮೆ ಬೆಳೆಗಾರರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಆದರೆ ರೇಷ್ಮೆ ಬೆಲೆ ಏರಿಕೆಯಾಗಲು ಕಾರಣ ವಾತಾವರಣದಲ್ಲಿನ ಏರುಪೇರು. ಹಿಪ್ಪುನೇರಳೆ ಬೆಳೆ ಗುಣಮಟ್ಟ ಕುಸಿತ ಹಾಗೂ ರೇಷ್ಮೆ ಗೂಡು ಉತ್ಪಾದನೆಯಲ್ಲೂ ತೀವ್ರ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಯೋಲ್ಟಿನ್ ರೇಷ್ಮೆಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ರೇಷ್ಮೆ ನೂಲು ತೆಗೆಯುವ ರೀಲರ್ಸ್ ಹೆಚ್ಚಿನ ಬೆಲೆ ಕೊಟ್ಟು ರೇಷ್ಮೆ ಗೂಡು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ಕೂಡ ಸಂತೋಷಗೊಂಡಿದ್ದಾರೆ.

ಇನ್ನು ಕೋಲಾರ ಜಿಲ್ಲೆಯಲ್ಲಿ ಹಲವು ದಶಕಗಳಿಂದ ರೇಷ್ಮೆ ಬೆಳೆಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಜಿಲ್ಲೆಯಲ್ಲಿ ಸುಮಾರು 20,134 ಹೆಕ್ಟೇರ್​ ಪ್ರದೇಶದಲ್ಲಿ ಹಿಪ್ಪುನೇರಳಿ ಅಥವಾ ಮಲ್ಬರಿ ಬೆಳೆ ಬೆಳೆಯಲಾಗುತ್ತಿದ್ದು, 11,500  ಮೆಟ್ರಿಕ್​ ಟನ್​ನಷ್ಟು ರೇಷ್ಮೆ ಉತ್ಪಾದನೆ ಮಾಡಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಸುಮಾರು 1477 ಗ್ರಾಮಗಳ 19,739 ಜನ ರೈತರು ರೇಷ್ಮೆ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಸಮಸ್ಯೆ, ವಾತಾವರಣದಲ್ಲಿನ ಏರುಪೇರಿನ ಪರಿಣಾಮವಾಗಿ ರೇಷ್ಮೆ ಬೆಳೆಗಾರರ ಸಂಖ್ಯೆ ಕ್ಷೀಣಿಸುತ್ತಿದೆ.

ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಹೇಳಿದ್ದಿಷ್ಟು

ಮೊದಲೆಲ್ಲಾ ಒಂದು ಟನ್ ರೇಷ್ಮೆ​ ಉತ್ಪಾದನೆ ಮಾಡುತ್ತಿದ್ದ ರೈತರು ಈಗ 400 ರಿಂದ 500 ಕೆಜಿ ರೇಷ್ಮೆ ಉತ್ಪಾದನೆ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇರುವ ಹಿನ್ನೆಲೆ ಜೊತೆಗೆ ರೇಷ್ಮೆ ಬೆಲೆ ಕೂಡ ಉತ್ತಮ ಬೆಲೆ ಕಾಪಾಡಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಯತ್ತ ರೈತರು ಒಲವು ತೋರಿದಲ್ಲಿ ಉತ್ತಮ ಆದಾಯ ಗಳಿಸಬಹುದು ಅನ್ನೋದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಮಾತು.

ಲಕ್ಷಾಂತರ ರೂ ಸಂಪಾದನೆ ಮಾಡಲು ಅವಕಾಶವಿದೆ: ಆಂಜನೇಯರೆಡ್ಡಿ

ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಗೆ ಒಳ್ಳೆಯ ಬೆಲೆ ಸಿಗುತ್ತಿದ್ದು, ರೇಷ್ಮೆ ಬೆಳೆಗಾರರು ಲಕ್ಷ ಲಕ್ಷ ಹಣ ಸಂಪಾದನೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆಯಿಂದ ರೈತರಿಗೆ ರೇಷ್ಮೆ ಬೆಳೆ ಬೆಳೆಯಲು ಸಹ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಅನ್ನೋದು ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ ಮಾತು.

ಇದನ್ನೂ ಓದಿ: ನಮ್ಮ ಕೋಲಾರದಲ್ಲಿ ತಯಾರಾಗುವ ಹೆಲಿಕಾಪ್ಟರ್​​ಗಳ ವಿಶೇಷತೆ ಏನು? ತಿಳಿದುಕೊಳ್ಳಿ

ಸದ್ಯ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿದ್ದು, ಇತ್ತೀಚೆಗೆ ರೇಷ್ಮೆ ಬೆಳೆಯಿಂದಲೇ ದೂರ ಸರಿಯಬೇಕು ಎಂದುಕೊಂಡಿದ್ದ ರೈತರಿಗೆ ಈ ಬೆಲೆ ಏರಿಕೆ ಹೊಸ ಉತ್ಸಾಹವನ್ನು ತುಂಬಿದೆ. ರೇಷ್ಮೆ ಬೆಳೆಗಾರರಿಗೆ ಪ್ರೇರಣೆ ನೀಡುವಲ್ಲಿ ಈ ಉತ್ತಮ ಬೆಲೆ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ. ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗೆ ಬೇಕಾದ ಸಹಕಾರ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಜೆಪಿ ಶಾಸಕ ಬೆನ್ನಲ್ಲೇ ಗದಗ ASI ಲೋಕಾಯುಕ್ತ ಬಲೆಗೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ – Kannada News | Gadag Police Station ASI caught taking Rs 5 thousand bribe by Lokayukta

ಗದಗ, (ಫೆಬ್ರವರಿ 25): ಲೋಕಾಯುಕ್ತ (Lokayukta) ಅಧಿಕಾರಿಗಳ ದಾಳಿ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಸದ್ಯ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ. ಇದರ ಬೆನ್ನಲ್ಲೇ ಇದೀಗ ಗದಗ (Gadag)  ಶಹರ ಠಾಣೆ ASI ಚನ್ನಬಸಪ್ಪ ಇಂಗಳಳ್ಳಿ ಸಹ ಲೋಕಾಯುಕ್ತ ಬಲೆಬಿದ್ದಿದ್ದಾರೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚ 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್​​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರು ಪಿಟಿಷನ್ ಅರ್ಜಿ ವಿಚಾರಣೆಗೆ ಸುಮಾರು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವೀರೇಶ ಪೂಜಾರ್ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆ, ಇಂದು (ಫೆಬ್ರವರಿ 25) ಪೊಲೀಸ್ ಠಾಣೆಯಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್​​ಹ್ಯಾಂಡ್ ಆಗಿ ಲಾಕ್​ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಾಳಿ ಮಾಡಿದೆ.

ಇದನ್ನೂ ಓದಿ: ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಪಾಲಾದ ಬಿಜೆಪಿ ಶಾಸಕ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ PDO

ಇನ್ನೊಂದೆಡೆ ಚಿಕ್ಕಮಗಳೂರಿನಲ್ಲೂ ಸಹ ಲೋಕಾಯುಕ್ತ ದಾಳಿ ನಡೆಸಿದ್ದು, ಲಂಚ ಪಡೆಯುವಾಗ ಪಿಡಿಓ ಬಲೆಗೆ ಬಿದ್ದಿದ್ದಾರೆ. ಸೈಟ್​​ ಒಂದಕ್ಕೆ ಎನ್​​ಒಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ಹಣ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಂಜುಂಡಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ತಿಮ್ಮಶೆಟ್ಟಿ ಎನ್ನುವರು ಲೋಕಾಯಯಕ್ತ ಪೋಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ಮಾಡಿ ರೆಡ್​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಇದೇ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಾಸಕ ಡಾ. ಚಂದ್ರು ಲಮಾಣಿ ಅವರು ಸುಮಾರು ಐದು ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್​ ಹ್ಯಾಂಡ್​ ಆಗಿ ಲಾಕ್​ ಆಗಿದ್ದರು. ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಇಂತಹ ಘಟನೆಗಳಿಂದ ಎಚ್ಚರಗೊಳ್ಳದ ಕೆಲ ಲಂಚಬಾಕ ಅಧಿಕಾರಿಗಳು ಜನರಿಂದ ಲಂಚ ಸ್ವೀಕರಿಸುವುದನ್ನು ಮುಂದುವರಿಸಿದ್ದಾರೆ. ಇನ್ನು ಲಂಚಬಾಕ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಹ ಸಮರ ಸಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link