All posts by nagaraj11081993

ಮಂಗಳೂರಿನಲ್ಲಿ ನಿಲ್ಲದ ವಂದೇ ಭಾರತ್ ರೈಲು​​: ನಿಂತು ಟಾಟಾ ಮಾತ್ರ ಮಾಡ್ಬೇಕಾ ಎಂದು ಕರಾವಳಿಗರು ಆಕ್ರೋಶ – Kannada News | Bengaluru Madgaon Vande Bharat train has no stop in Mangaluru: Sparks Outrage on coastal residents

ಮಂಗಳೂರು, ಫೆಬ್ರವರಿ 25: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್‌ನ ಹಳಿ ವಿದ್ಯುದೀಕರಣ ಪೂರ್ತಿ ಆಗಿದೆ. ಇನ್ನೇನು ಕಡಲನಗರಿಗೆ ವಂದೇ ಭಾರತ್ ರೈಲು (Vande Bharat) ಸಂಚಾರ ಮಾಡುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮಂಗಳೂರಿಗೆ (Mangaluru) ರೈಲ್ವೆ ಇಲಾಖೆ ಬಿಗ್‌ ಶಾಕ್‌ ನೀಡಿದೆ. ವಂದೇ ಭಾರತ್ ರೈಲು ಮಂಗಳೂರು ಮೂಲಕವೇ ಹಾದು ಹೋದರೂ ಇಲ್ಲಿ ನಿಲುಗಡೆ ನೀಡದಿರುವುದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಹೆಬ್ಬಾಗಿಲನ್ನೇ ಮರೆತ ವಂದೇ ಭಾರತ್ ರೈಲು

ಕರಾವಳಿ ತೀರದಲ್ಲಿ ಕರ್ನಾಟಕದ ಹೆಬ್ಬಾಗಿಲೆಂದೇ ಪ್ರಸಿದ್ಧಿ ಪಡೆದ ಮಂಗಳೂರಿಗೆ ಎರಡು ವಂದೇ ಭಾರತ್ ರೈಲು ನೀಡುವುದಾಗಿ ಇತ್ತಿಚೇಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದರು. ಆದರೆ ಇದೀಗ ಮಂಗಳೂರು ಉಡುಪಿಗೆ ಈ ವಂದೇ ಭಾರತ್ ರೈಲು ಕೈ ತಪ್ಪುವ ಶಂಕೆ ಎದುರಾಗಿದೆ. ಯಶವಂತಪುರ-ಮಡಗಾಂವ್ ನಡುವೆ ಪ್ರಸ್ತಾವಿತ ವಂದೇ ಭಾರತ್ ರೈಲು ಮಂಗಳೂರು ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದರೂ ನಗರದಲ್ಲಿ ನಿಲುಗಡೆ ನೀಡದಿರುವುದು ರೈಲ್ವೆ ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ರೈಲು ನಿಲ್ದಾಣದಲ್ಲಿ ನಿಂತು ಕೇವಲ ಟಾಟಾ ಮಾತ್ರ ಮಾಡಬೇಕಾ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ರೈಲು ವೇಳಾಪಟ್ಟಿ ಹೀಗಿದೆ

ದಕ್ಷಿಣ-ಪಶ್ಚಿಮ ರೈಲ್ವೆಯ ಕಾರ್ಯಾಚರಣೆ ವಿಭಾಗ ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆಗೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ. ಪ್ರಸ್ತಾವನೆಯಂತೆ ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ.

ಮರಳಿ ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುವಂತೆ ಯೋಜಿಸಲಾಗಿದೆ. ಆದರೆ ಈ ವೇಳಾಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ನಿಲ್ದಾಣಕ್ಕೆ ಮಾತ್ರ ನಿಲುಗಡೆ ಸೂಚಿಸಲಾಗಿದೆ. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಯಾವುದೇ ನಿಲುಗಡೆ ಇಲ್ಲ. ಬದಲಾಗಿ ಪಡೀಲ್ ಮೂಲಕ ರೈಲು ಹಾದು ಹೋಗಲಿದೆ. ಹೀಗಾಗಿ ಕರಾವಳಿಯ ಪ್ರಮುಖ ವಾಣಿಜ್ಯ, ಶಿಕ್ಷಣ ಹಾಗೂ ಆರೋಗ್ಯ ಕೇಂದ್ರವಾದ ಮಂಗಳೂರಿಗೆ ನಿಲ್ದಾಣ ನೀಡದಿರುವುದು ಪ್ರಯೋಜನವಿಲ್ಲದ ಸೇವೆ ಎಂಬ ಟೀಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಕೇವಲ ಮಂಗಳೂರು ಮಾತ್ರವಲ್ಲ ಉಡುಪಿ, ಕಾರವಾರಗಳಂತಹ ಜಿಲ್ಲಾ ಕೇಂದ್ರಗಳಲ್ಲು ನಿಲುಗಡೆ ನೀಡದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳ ರೈಲು ಬಳಕೆದಾರರು, ಸಂಸದರು ಹಾಗೂ ರೈಲ್ವೆ ಸಚಿವರಿಗೆ ಟ್ವಿಟ್ಟರ್ ಮೂಲಕ ಹಕ್ಕೊತ್ತಾಯ ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನ ರೈಲ್ವೆ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅನ್ಯಕೋಮಿನ ಹುಡುಗರಿಂದ ಸಂಕೇತ್ ಕೊಲೆ: ಸಹಾಯಕ್ಕೆ ಬಂದು ಹತ್ಯೆಯಾದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಟಿಟ್ಟ ಗೆಳೆಯ – Kannada News | Shivamogga SSLC Sanketh Murder Case: Friend Girsh Reveals Incident

ಶಿವಮೊಗ್ಗ, (ಫೆಬ್ರವರಿ 25): ಶಿವಮೊಗ್ಗದಲ್ಲಿ (Shivamogga) ಅನ್ಯಕೋಮಿನ ಅಪ್ರಾಪ್ತರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (Sanketh) ಎನ್ನುವಾತನನ್ನು ಹತ್ಯೆ ಮಾಡಿದ್ದಾರೆ. ಶಾಲೆಯಲ್ಲಿ ವಿಶೇಷ ಕ್ಲಾಸ್ ಮುಗಿಸಿ ರಾತ್ರಿ 8 ಗಂಟೆ ಹೊತ್ತಿಗೆ ಮನೆಗೆ ತೆರಳುವಾಗ ಘಟನೆ ನಡೆದಿದೆ. ಸಂಕೇತ್‌ನ ಸ್ನೇಹಿತ ಗಿರೀಶ್ ಜೊತೆಗೆ ಅನ್ಯಕೋಮಿನ ಮೂವರು ಅಪ್ರಾಪ್ತರು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ಸಂಕೇತ್‌ನ ಎದೆಗೆ ಗುದ್ದಿದ್ದಾರೆ. ಪರಿಣಾಮ ಸಂಕೇತ್ ಮೃತಪಟ್ಟಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಯಾವುದೇ ಕೋಮುಗಲಭೆ ಆಗಬಾರದು ಎಂದು ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಇನ್ನು ತನ್ನ ಸಹಾಯಕಕ್ಕೆ ಬಂದು ಸಂಕೇತ್ ಸಾವನ್ನಪ್ಪಿರುವ ಬಗ್ಗೆ ಗಿರೀಶ್ ಟಿವಿ9 ಜತೆ ಮಾತನಾಡಿ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಟ್ಟಿದ್ದಾನೆ.

ಇದನ್ನೂ ನೋಡಿ: ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಹತ್ಯೆ: ಕೊಲೆಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ

Source link

ಬೆಂಗಳೂರಿಗರೇ ಗಮನಿಸಿ: ಪೂರ್ವ, ದಕ್ಷಿಣ ವಲಯಗಳ ಈ ಭಾಗಗಳಲ್ಲಿ ನಾಳೆ ನೀರು ಸರಬರಾಜು ವ್ಯತ್ಯಯ – Kannada News | Bengaluru will face a 24 hour water supply disruption in its East and South zones on February 26

ಬೆಂಗಳೂರು, ಫೆಬ್ರವರಿ 25: ಕಾವೇರಿ 5ನೇ ಹಂತದ ಯೋಜನೆಯಡಿ ಹೊಸ EMF ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯ ಹಿನ್ನೆಲೆ ಫೆಪ್ರವರಿ 26ರ ಗುರುವಾರ (ನಾಳೆ) ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ವಲಯಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿ ಹಿನ್ನೆಲೆ ಪಂಪಿಂಗ್​​ ಕಾರ್ಯ ನಡೆಯದ ಕಾರಣ ಈ ಭಾಗದ ನಿವಾಸಿಗಳು 24 ಗಂಟೆಗಳ ನೀರು ಪೂರೈಕೆ ವ್ಯತ್ಯಯಕ್ಕೆ ಸಿದ್ಧರಾಗಬೇಕಾಗಿದೆ. ಈ ಕಾರ್ಯದಲ್ಲಿ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸಾರ್ವಜನಿಕರನ್ನು ಆಗ್ರಹಿಸಿದ್ದು,
ಅನಾನುಕೂಲತೆಗಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ನೀರು ಸರಬರಾಜಲ್ಲಿ ವ್ಯತ್ಯಯ?

ಪೂರ್ವ ಬೆಂಗಳೂರು (ಮಹದೇವಪುರ ವಲಯ ಹಾಗೂ ಸುತ್ತಮುತ್ತ):

  • ವೈಟ್‌ಫೀಲ್ಡ್
  • ಕಡುಗೋಡಿ
  • ಹೂಡಿ
  • ಗರುಡಾಚಾರ್​​ಪಾಳ್ಯ
  • ದೊಡ್ಡನೆಕ್ಕುಂದಿ
  • ಮುನ್ನೇಕೊಳಲ (ಮಾರತಹಳ್ಳಿ ಪ್ರದೇಶ)
  • ನಲ್ಲೂರುಹಳ್ಳಿ
  • ಸಿದ್ದಾಪುರ
  • ನಾಗೊಂಡನಹಳ್ಳಿ
  • ರಾಮಗೊಂದನಹಳ್ಳಿ
  • ಚನ್ನಸಂದ್ರ

ದಕ್ಷಿಣ ಬೆಂಗಳೂರು:

  • ಬನಶಂಕರಿ (ವಿವಿಧ ಹಂತಗಳು)
  • ಕುಮಾರಸ್ವಾಮಿ ಲೇಔಟ್
  • ಪೂರ್ಣಪ್ರಜ್ಞ ಲೇಔಟ್
  • ಅಂಜನಾಪುರ
  • ಗೊಟ್ಟಿಗೆರೆ
  • ಬೇಗೂರು
  • ಕಲ್ಲಹಳ್ಳಿ
  • ಕುಡ್ಲು
  • ಕೊಡಿಚಿಕ್ಕನಹಳ್ಳಿ

ಮಾಹಿತಿ ಪ್ರಕಾರ ಗುರುವಾರ ಬೆಳಿಗ್ಗೆ 6 ಗಂಟೆಗೆ ಪಂಪ್​​ ಕಾರ್ಯ ಸ್ಥಗಿತವಾಗಲಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಮರುಪ್ರಾರಂಭ ನಡೆಯಲಿದೆ. ಆ ಬಳಿಕ ಮನೆಗಳಿಗೆ ನೀರು ತಲುಪಲು ಹಾಗೂ ಒತ್ತಡ ಸಾಮಾನ್ಯಗೊಳ್ಳಲು ಇನ್ನೂ 3–6 ಗಂಟೆಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಗತ್ಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಮತ್ತು ಅನಗತ್ಯವಾಗಿ ನೀರಿನ ಬಳಕೆಯನ್ನು ಮಾಡದಂತೆ ಸೂಚಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಅಭಾವವನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಮಗ್ರ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪಾರಂಪರಿಕ ನೀರು ಪೂರೈಕೆ ವ್ಯವಸ್ಥೆಯಿಂದ ಹೊರಬಂದು, ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಸ್ನೇಹಿ ಹೆಜ್ಜೆ ಇಟ್ಟಿದೆ ಎಂದೂ ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸವೇ ಇಲ್ಲ: ಯಾಕೆ ಗೊತ್ತಾ? – Kannada News | Why cheetahs dont attack humans understanding their nature and anatomy

ಚೀತಾಗಳು (Cheetahs) ಮನುಷ್ಯರ ಮೇಲೆ ದಾಳಿ ಮಾಡಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಇದಕ್ಕೆ ಮುಖ್ಯವಾದ ಕಾರಣಗಳು ಅವುಗಳ ದೇಹದ ರಚನೆ ಮತ್ತು ಅವುಗಳ ಸ್ವಭಾವದಲ್ಲಿವೆ. ಚೀತಾಗಳ ದವಡೆಗಳು ಚಿಕ್ಕದಾಗಿರುತ್ತವೆ ಮತ್ತು ಅವುಗಳ ಹಲ್ಲುಗಳು ಮನುಷ್ಯನಂತಹ ದೊಡ್ಡ ಗಾತ್ರದ ಪ್ರಾಣಿಯನ್ನು ಕೊಲ್ಲುವಷ್ಟು ಬಲವಾಗಿರುವುದಿಲ್ಲ. ಇವುಗಳ ನಖಗಳು (ಉಗುರು) ನಾಯಿಗಳ ನಖಗಳಂತೆ ಇರುತ್ತವೆ (Non-retractable). ಇವು ಕೇವಲ ಓಡುವಾಗ ವೇಗಕ್ಕೆ ಹಿಡಿತ ನೀಡಲು ಬಳಕೆಯಾಗುತ್ತವೆಯೇ ಹೊರತು, ಬೇಟೆಯನ್ನು ಸೀಳಲು ಅಥವಾ ಗಾಯಗೊಳಿಸಲು ಹುಲಿ-ಸಿಂಹಗಳ ನಖಗಳಂತೆ ಚೂಪಾಗಿರುವುದಿಲ್ಲ.

ಚೀತಾಗಳು ಸಾಮಾನ್ಯವಾಗಿ ತಮ್ಮ ಗಾತ್ರಕ್ಕಿಂತ ಚಿಕ್ಕದಾದ ಅಥವಾ ಸಮನಾದ ಪ್ರಾಣಿಗಳನ್ನು (ಉದಾಹರಣೆಗೆ ಜಿಂಕೆ, ಮೊಲ) ಬೇಟೆಯಾಡುತ್ತವೆ. ನಿಂತಿರುವ ಮನುಷ್ಯನು ಚೀತಾಗಿಂತ ಎತ್ತರವಾಗಿ ಕಾಣುತ್ತಾನೆ. ಹೀಗಾಗಿ, ಚೀತಾಗಳು ಮನುಷ್ಯನನ್ನು ತನಗಿಂತ ದೊಡ್ಡ ಮತ್ತು ಅಪಾಯಕಾರಿ ಪ್ರಾಣಿ ಎಂದು ಭಾವಿಸುತ್ತವೆ. ಚೀತಾಗಳು ತುಂಬಾ ನಾಚಿಕೆ ಸ್ವಭಾವದ ಪ್ರಾಣಿಗಳು. ಮನುಷ್ಯರನ್ನು ಕಂಡ ಕೂಡಲೇ ಅವು ಎದುರಿಸುವ ಬದಲು ಅಲ್ಲಿಂದ ಓಡಿ ಹೋಗಲು ಬಯಸುತ್ತವೆ.

ಇಲ್ಲಿದೆ ನೋಡಿ ಪೋಸ್ಟ್​​;

ಚೀತಾಗೆ ಒಂದು ಸಣ್ಣ ಗಾಯವಾದರೂ ಅದು ಅದರ ಸಾವಿಗೆ ಕಾರಣವಾಗಬಹುದು. ಯಾಕೆಂದರೆ, ಗಾಯಗೊಂಡರೆ ಅದಕ್ಕೆ ವೇಗವಾಗಿ ಓಡಲು ಸಾಧ್ಯವಾಗುವುದಿಲ್ಲ, ಓಡಲು ಸಾಧ್ಯವಾಗದಿದ್ದರೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮನುಷ್ಯರಂತಹ ಪ್ರಾಣಿಗಳೊಂದಿಗೆ ಹೋರಾಡಿ ಸುಮ್ಮನೆ ಅಪಾಯ ಮೈಮೇಲೆ ಎಳೆದುಕೊಳ್ಳಲು ಅವು ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ

ಚೀತಾಗಳನ್ನು ಸಾವಿರಾರು ವರ್ಷಗಳಿಂದ ಮನುಷ್ಯರು ಪಳಗಿಸುತ್ತಾ ಬಂದಿದ್ದಾರೆ. ಪ್ರಾಚೀನ ಈಜಿಪ್ಟ್ ಮತ್ತು ಭಾರತದ ರಾಜರುಗಳು ಚೀತಾಗಳನ್ನು ಬೇಟೆಗಾಗಿ ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಈ ದೀರ್ಘಕಾಲದ ಒಡನಾಟದಿಂದಾಗಿ ಮನುಷ್ಯರ ಬಗ್ಗೆ ಅವುಗಳಿಗೆ ಸ್ವಲ್ಪ ಮಟ್ಟದ ಸಹನೆ ಮತ್ತು ಹೊಂದಾಣಿಕೆ ಬೆಳೆದಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಕಾಡಿನಲ್ಲಿರುವ ಚೀತಾಗಳು ಮನುಷ್ಯರಿಂದ ದೂರವಿರಲು ಪ್ರಯತ್ನಿಸುತ್ತವೆ. ಪ್ರಾಣಿ ಸಂಗ್ರಹಾಲಯಗಳಲ್ಲಿ ಅಥವಾ ಮನುಷ್ಯರು ಸಾಕಿದ ಚಿರತೆಗಳು ಕೆಲವೊಮ್ಮೆ ಹೆದರಿದಾಗ ಅಥವಾ ಪ್ರಚೋದನೆಗೊಳಗಾದಾಗ ಪರಚಬಹುದು ಅಥವಾ ಕಚ್ಚಬಹುದು. ಆದರೆ, ಅವುಗಳು ಮನುಷ್ಯರನ್ನು ಸಾಯಿಸುವ ಉದ್ದೇಶದಿಂದ ದಾಳಿ ಮಾಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ – Kannada News | Samarjit Lankesh gets Best Debut Actor Filmfare award for Gowri Movie

ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮ್‌ಫೇರ್ ಪ್ರಶಸ್ತಿ (Filmfare awards) ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. ‘ಗೌರಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸಮರ್ಜಿತ್‍ ಲಂಕೇಶ್‍ (Samarjit Lankesh) ಅವರು ‘ಅತ್ಯುತ್ತಮ ನವನಟ’ ಪ್ರಶಸ್ತಿ ಪಡೆದುಕೊಂಡರು. ವಿಶೇಷ ಏನೆಂದರೆ, ಲಂಕೇಶ್‍ ಕುಟುಂಬಕ್ಕೆ ಸಿಗುತ್ತಿರುವ ಮೂರನೆಯ ಫಿಲ್ಮ್​ಫೇರ್ ಪ್ರಶಸ್ತಿ ಇದು. ಈ ಮೊದಲು ಲಂಕೇಶ್ ಮತ್ತು ಇಂದ್ರಜಿತ್ ಲಂಕೇಶ್ ಅವರು ಕೂಡ ಫಿಲ್ಮ್​ಫೇರ್ ಪ್ರಶಸ್ತಿ ಪಡೆದಿದ್ದರು.

ಕನ್ನಡದ ಜನಪ್ರಿಯ ಸಾಹಿತಿ ಹಾಗೂ ‘ಲಂಕೇಶ್ ‍ಪತ್ರಿಕೆ’ ಸಂಪಾದಕರಾಗಿದ್ದ ಪಿ. ಲಂಕೇಶ್‍ ಅವರು 1980ರಲ್ಲಿ ‘ಎಲ್ಲಿಂದಲೋ ಬಂದವರು’ ಸಿನಿಮಾದ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ (ದಕ್ಷಿಣ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ಲಂಕೇಶ್‍ ಅವರು ಚಿತ್ರರಂಗದಲ್ಲೂ ನಿರ್ದೇಶಕರಾಗಿ ಹೆಸರು ಮಾಡಿದ್ದರು. ‘ಪಲ್ಲವಿ’, ‘ಅನುರೂಪ’, ‘ಖಂಡವಿದೆಕೋ ಮಾಂಸವಿದೆಕೋ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಲಂಕೇಶ್‍ ಪುತ್ರ ಇಂದ್ರಜಿತ್‍ ಲಂಕೇಶ್‍ ಅವರು ‘ತುಂಟಾಟ’ ಸಿನಿಮಾ ಮೂಲಕ ನಿರ್ದೇಶಕರಾದರು. ನಂತರ ‘ಮೋನಾಲಿಸಾ’, ‘ಐಶ್ವರ್ಯ’, ‘ಹುಡುಗ ಹುಡುಗಿ’, ‘ಲವ್‍ ಯೂ ಆಲಿಯಾ’, ‘ಶಕೀಲಾ’, ‘ಗೌರಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದರು. ಉಪೇಂದ್ರ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಐಶ್ವರ್ಯ’ ಚಿತ್ರದ ನಿರ್ದೇಶನಕ್ಕಾಗಿ ಅವರು ‘ಅತ್ಯುತ್ತಮ ನಿರ್ದೇಶನ’ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು.

ಈಗ ಲಂಕೇಶ್‍ ಕುಟುಂಬದ 3ನೇ ತಲೆಮಾರಿನ ಸಮರ್ಜಿತ್‍ ಅವರು ಚೊಚ್ಚಲ ಅಭಿನಯದ ಸಿನಿಮಾಗೆ ಪ್ರಶಸ್ತಿ ಪಡೆದಿದ್ದಾರೆ. ‘ಗೌರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸಮರ್ಜಿತ್‍ ಅವರು ಮೊದಲ ಚಿತ್ರದಲ್ಲೇ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: 70ನೇ ಫಿಲ್ಮ್​ಫೇರ್ ಪ್ರಶಸ್ತಿ: ಕನ್ನಡದಲ್ಲಿ ಅವಾರ್ಡ್ ಗೆದ್ದವರ ಪಟ್ಟಿ ಇಲ್ಲಿದೆ..

‘ಗೌರಿ’ ಸಿನಿಮಾ ಬಳಿಕ ಕಳೆದ ವರ್ಷ ಬಿಡುಗಡೆಯಾಗಿದ್ದ ‘ವೃಷಭ’ ಪ್ಯಾನ್‍ ಇಂಡಿಯಾ ಸಿನಿಮಾದಲ್ಲೂ ಸಮರ್ಜಿತ್‍ ನಟಿಸಿದರು. ಈ ಸಿನಿಮಾದಲ್ಲಿ ಮೋಹನ್​​ಲಾಲ್ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಈಗ ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ಒಂದು ಕನ್ನಡ ಮತ್ತು ಒಂದು ಹಿಂದಿ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಣಜಿ ಟ್ರೋಫಿ ಫೈನಲ್: ಕರ್ನಾಟಕದ ಆಟಗಾರನ ಜೊತೆ ಕಾಲ್ಕೆರೆದು ಜಗಳಕ್ಕಿಳಿದ ಜೆಕೆ ನಾಯಕ – Kannada News | Ranji Final Shocker: Paras Dogra and Aneesh KV’s On Field Fight. Karnataka vs J&K Drama

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2025- 26ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಎರಡನೇ ದಿನದಾಟದಂದು ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ, ಜೆಕೆ ನಾಯಕ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಪರಾಸ್ ಡೋಗ್ರಾ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದನ್ನು ಗಮನಿಸಿದ ಅಂಪೈರ್​ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್‌ನ 100 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಸಿದ್ಧ್ ಕೃಷ್ಣ ಎಸೆತವನ್ನು ಪರಾಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಆಡಿದರು. ಅಲ್ಲಿದ್ದ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ತಡೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಗೆರೆ ದಾಟಿತು. ಈ ನಡುವೆ ಸಿಲ್ಲಿ ಪಾಯಿಂಟ್‌ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಕೆವಿ ಅನೀಶ್ ಹಾಗೂ ಪರಾಸ್ ಡೋಗ್ರಾ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದೆ. ಇದೇ ವೇಳೆ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಕ್ಕಿ ಹೊಡೆದಿದ್ದಾರೆ. ಪರಿಸ್ಥಿತಿ ಕೈಮೀರಿ ಅಂತಕ್ಕೆ ಸಾಗಿದೆ.

ಈ ಹಂತದಲ್ಲಿ, ಮಾಯಾಂಕ್ ಅಗರ್ವಾಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ, ಸ್ವಲ್ಪ ಸಮಯದವರೆಗೆ ವಾದ ಮುಂದುವರೆಯಿತು. ಕೊನೆಗೆ, ಅಂಪೈರ್‌ಗಳು ಮಧ್ಯಪ್ರವೇಶಿಸಿ ಡೋಗ್ರಾ ಮತ್ತು ಅನೀಶ್ ಅವರನ್ನು ಬೇರ್ಪಡಿಸಿದರು. ಘಟನೆಯ ನಂತರ, ಅಂಪೈರ್‌ಗಳು ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಅವರೊಂದಿಗೆ ಮಾತನಾಡಿ, ಫೀಲ್ಡಿಂಗ್ ತಂಡ ಶಿಸ್ತನ್ನು ಪಾಲಿಸುವಂತೆ ಎಚ್ಚರಿಸಿದರು. ನಂತರ, ಪರಾಸ್ ಡೋಗ್ರಾ ಅನೀಶ್ ಕೆವಿ ಅವರ ಬಳಿ ಕ್ಷಮೆಯಾಚಿಸಲು ಪ್ರಯತ್ನಿಸಿದರು. ಆದರೆ ಬದಲಿ ಫೀಲ್ಡರ್ ಅನೀಶ್ ಕ್ಷಮೆಯಾಚನೆಯನ್ನು ಸ್ವೀಕರಿಸಲು ಆಸಕ್ತಿ ತೋರಲಿಲ್ಲ. ಅಂಪೈರ್ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು.

Source link

ಚೆನ್ನಾಗಿದ್ದವಳು ಸಡನ್ನಾಗಿ ಹೆಂಗೆ ಸತ್ತೋದ್ಲು ಸರ್: ಮಿನಿಸ್ಟರ್ ಮುಂದೆ ಶೃತಿ ಪತಿ ಗೋಳಾಟ – Kannada News | Hassan Maternal Death Case:Shruthi Husband Tears Infront of Minister krishna byre gowda

ಹಾಸನ, (ಫೆಬ್ರವರಿ 25): ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಎನ್ನುವ ಮಹಿಳೆ ಹೆರಿಗೆಗೆಂದು ಹಾಸನದ ಹಿಮ್ಸ್ ಆಸ್ಪತ್ರೆ (Hims Hospital) ದಾಖಲಾಗಿದ್ದರು. ಆದ್ರೆ, ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಶೃತಿ (30) ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಸಂಬಂಧಿಕರು ಹಾಗೂ ಪತಿ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆದ ಹಾಸನ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿದೆ. ಈ ವೇಳೆ ವೈದ್ಯಾಧಿಕಾರಿಗಳು ಸಚಿವರಿಗೆ ಶೃತಿ ಸಾವಿನ ಬಗ್ಗೆ ಮಾಹಿತಿ ನೀಡಿದರು.

ಇನ್ನು ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ದೂರು ನೀಡಿದರು. ಅರೋಗ್ಯವಾಗಿದ್ದ ಪತ್ನಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ನನ್ನ ಪತ್ನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಸಚಿವರ ಎದುರು ಪತಿ ಪುನೀತ್ ಕಣ್ಣೀರಿಟ್ಟರು. ಈ ವೇಳೆ ಸಚಿವರು ಮೃತ ಮಹಿಳೆ ಕುಟುಂಬ ಸದಸ್ಯರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದ್ದು, ಘಟನೆ ಸಂಬಂಧ ಸೂಕ್ತ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರು.

ಶೃತಿ ಪತಿ ಪುನೀತ್, ಸಚಿವ ಕೃಷ್ಣಬೈರೇಗೌಡ ಕಣ್ಣೀರಿಟ್ಟು ಗೋಳಾಡಿದ್ದು,ಈ ಪ್ರಸಂಗ ಅಲ್ಲಿದ್ದವರ ಕಣ್ಣು ಒದ್ದೆಯಾಗುವಂತೆ ಮಾಡಿತು.

ಇದನ್ನೂ ಓದಿ: ಮುದಾದ ಮಗುವಿಗೆ ಜನ್ಮ: ಕರುಳ ಬಳ್ಳಿ ಕಣ್ತುಂಬಿಕೊಳ್ಳುವ ಮೊದಲೇ ತಾಯಿ ದುರಂತ ಸಾವು

Source link

ನಕಲಿ ಕಾನೂನು ಡಿಗ್ರಿ ತೋರಿಸಿ ಪಾಕಿಸ್ತಾನದ ಹೈಕೋರ್ಟ್​ನಲ್ಲಿ 5 ವರ್ಷ ನ್ಯಾಯಾಧೀಶರಾದ ವ್ಯಕ್ತಿ! – Kannada News | Pakistan Judge With Fake Law Degree Served The High Court For 5 Years

ಇಸ್ಲಮಾಬಾದ್, ಫೆಬ್ರವರಿ 25: ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಹಗರಣವೊಂದು ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತನ್ನ ನ್ಯಾಯಾಧೀಶರಲ್ಲಿ ಒಬ್ಬರಾದ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನು ವಜಾಗೊಳಿಸುವ ಕುರಿತು ವಿವರವಾದ 116 ಪುಟಗಳ ತೀರ್ಪನ್ನು ನೀಡಿದೆ. ಪಾಕಿಸ್ತಾನದ (Pakistan) ನ್ಯಾಯಾಧೀಶರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ (IHC) 5 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಅವರು ನಕಲಿ ಕಾನೂನು ಪದವಿ ಹೊಂದಿದ್ದಾರೆಂದು ಯಾರಿಗೂ ತಿಳಿಯದಂತೆ ತೀರ್ಪುಗಳನ್ನು ನೀಡಿದ್ದರು. ಅವರು ನಕಲಿ ಡಿಗ್ರಿ ಸರ್ಟಿಫಿಕೆಟ್ ಹೊಂದಿದ್ದಾರೆಂದು ಬಯಲಾಗಿದ್ದು ಹೇಗೆ ಗೊತ್ತಾ?

ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ 5 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದರೂ ಅವರು ಕಾನೂನು ಪದವಿಯನ್ನು ಹೊಂದಿರಲಿಲ್ಲ. ಆದ್ದರಿಂದ, ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿ ಕಾನೂನುಬದ್ಧವಾಗಿ ಅಮಾನ್ಯವಾಗಿದೆ. ಇಸ್ಲಮಾಬಾದ್ ಹೈಕೋರ್ಟ್ ಫೆಬ್ರವರಿ 23ರ ಸೋಮವಾರದಂದು ವಿವರವಾದ 116 ಪುಟಗಳ ತೀರ್ಪನ್ನು ನೀಡಿತು. ಹೈಕೋರ್ಟ್ ನ್ಯಾಯಾಧೀಶರಲ್ಲಿ ಒಬ್ಬರಾದ ಅವರನ್ನು ಜಡ್ಜ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಜಹಾಂಗಿರಿ ಅವರನ್ನು ಡಿಸೆಂಬರ್ 2020ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಿಷೇಧಿಸಲಾಯಿತು.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಯುದ್ಧ ನಾನು ನಿಲ್ಲಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯ್ತಿದ್ರು ಎಂದ ಟ್ರಂಪ್

ತಾರಿಕ್ ಮೆಹಮೂದ್ ಜಹಾಂಗಿರಿ ಮೊದಲು 1988ರಲ್ಲಿ ನಕಲಿ ದಾಖಲಾತಿ ಸಂಖ್ಯೆಯ ಅಡಿಯಲ್ಲಿ ತಮ್ಮ ಎಲ್ಎಲ್.ಬಿ. ಭಾಗ-I ಪರೀಕ್ಷೆಗೆ ಹಾಜರಾಗಿದ್ದರು. ನಂತರ ಅವರು ಅನ್ಯಾಯದ ವಿಧಾನಗಳನ್ನು ಬಳಸಿ ಸಿಕ್ಕಿಬಿದ್ದರು ಮತ್ತು 1989ರಲ್ಲಿ ಹೊರಡಿಸಲಾದ ವಿಶ್ವವಿದ್ಯಾಲಯದ ಅನರ್ಹತೆಯ ಸುತ್ತೋಲೆಯ ಮೂಲಕ ಮೂರು ವರ್ಷಗಳ ಕಾಲ ನಿಷೇಧಿಸಲ್ಪಟ್ಟರು.

ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮೂಲ ದಾಖಲೆಗಳನ್ನು ಆಧರಿಸಿ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ನ್ಯಾಯಾಲಯ ಹೇಳಿದೆ. ಜಹಾಂಗಿರಿ 1988ರಲ್ಲಿ ನಕಲಿ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅವರು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡುಬಂದಿತು. 1989ರಲ್ಲಿ ವಿಶ್ವವಿದ್ಯಾನಿಲಯವು ಅವರನ್ನು 3 ವರ್ಷಗಳ ಕಾಲ ನಿಷೇಧಿಸಿತ್ತು. ಅದಾದ ಮುಂದಿನ ವರ್ಷ, ಅವರು ಇಮ್ತಿಯಾಜ್ ಅಹ್ಮದ್ ಎಂಬ ಇನ್ನೊಬ್ಬ ವಿದ್ಯಾರ್ಥಿಗೆ ನಿಯೋಜಿಸಲಾದ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ತಾರಿಕ್ ಜಹಾಂಗಿರಿ ಎಂಬ ಹೆಸರಿನಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದರು.

ಇದನ್ನೂ ಓದಿ: ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!

ತೀರ್ಪಿನಲ್ಲಿ, ಜಹಾಂಗಿರಿ ಅವರಿಗೆ ಮೂಲ ದಾಖಲೆಗಳನ್ನು ಮತ್ತು ಲಿಖಿತ ಉತ್ತರವನ್ನು ನೀಡಲು ಹಲವು ಅವಕಾಶಗಳನ್ನು ನೀಡಿದ್ದರೂ ಅವರು ದಾಖಲೆ ನೀಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯುವಕನನ್ನ ಹತ್ಯೆಗೈದು ಹೈವೇನಲ್ಲಿ ಶವ ಬಿಸಾಡಿದ ದುಷ್ಕರ್ಮಿಗಳು: ಸಾಕ್ಷ್ಯನಾಶಕ್ಕೆ ಮಾಡಿದ್ದೇನು ಗೊತ್ತಾ? – Kannada News | Hubballi: young man Brutaly murder; The perpetrators threw the body on the road

ಹುಬ್ಬಳ್ಳಿ, ಫೆಬ್ರವರಿ 25: ಯುವಕನ್ನು ಬರ್ಬರವಾಗಿ ಹತ್ಯೆಗೈದ (murder) ದುಷ್ಕರ್ಮಿಗಳ ಗ್ಯಾಂಗ್ ಶವವನ್ನ ರಸ್ತೆಯಲ್ಲಿ ಎಸೆದು ಹೋಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಗದಗ ರಸ್ತೆಯಲ್ಲಿರುವ ಐಟಿಸಿ ಗೋದಾಮಿನ ಬಳಿ ಕೃತ್ಯ ನಡೆದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಮಂಜುನಾಥ ಗಾಣಿಗೇರ(29) ಕೊಲೆಯಾದ ಯುವಕ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕ್ಷ್ಯನಾಶಕ್ಕೆ ಮಾಡಿದ್ದೇನು ಗೊತ್ತಾ?

ಮಂಜುನಾಥ ಗಾಣಿಗೇರ ಕೊಲೆಗೆ ಸದ್ಯ ನಿಖರ ಮಾಹಿತಿ ತಿಳಿದುಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿರುವ ದುಷ್ಕರ್ಮಿಗಳು, ಬೇರೆಡೆ ಕೊಂದು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಶವ ಸಾಗಣೆ ಮಾಡಿದ್ದಾರೆ.

ಇದನ್ನೂ ಓದಿ: ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ: ಡಿಸಿಪಿ ಹೇಳಿದ್ದೇನು?

ಇನ್ನು ರಸ್ತೆಯಲ್ಲಿ ಹೋಗುತ್ತಿದ್ದವರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಶವವನ್ನು ಸ್ಥಳಾಂತರ ಮಾಡಲಾಗಿದೆ.

ವಿಷಪ್ರಾಶನದಿಂದ ಆಸ್ಪತ್ರೆ ಸೇರಿದ್ದ ಮಹಿಳೆ ಹಸೀನಾ ಬೇಗಂ ಸಾವು

ವಿಷಪ್ರಾಶನದಿಂದ ಆಸ್ಪತ್ರೆ ಸೇರಿದ್ದ ಮಹಿಳೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಸೀನಾ ಬೇಗಂ ಮೃತ ಮಹಿಳೆ. ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ನಿವಾಸಿ. ಖಾಸಗಿ ಬ್ಯಾಂಕ್ ಮ್ಯಾನೇಜರ್ ಶ್ಯಾಮಸುಂದರ್ ಬದಾಮಿ ವಿರುದ್ಧ ಸಂಬಂಧಿಕರು ವಿಷಪ್ರಾಶನ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ; ಯುವತಿಗೆ ಲವ್​ ಮ್ಯಾರೇಜ್ ಮಾಡಿಸಿದ್ದಕ್ಕೆ ನಡೀತಾ ಹಲ್ಲೆ?

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 7 ವರ್ಷದ ಹಿಂದೆ ಪತಿ, ಮಗನ ಜೊತೆ ಹುಬ್ಬಳ್ಳಿಗೆ ಬಂದಿದ್ದ ಹಸೀನಾಗೆ ಶ್ಯಾಮಸುಂದರ್ ಬ್ಯಾಂಕ್​ನಲ್ಲಿ ಹೌಸ್​​ ಕೀಪಿಂಗ್ ಕೆಲಸ ನೀಡಿದ್ದರು. ಇದೇ ನೆಪದಲ್ಲಿ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸ್ತಿದ್ದ. 4 ದಿನಗಳ ಹಿಂದೆ ಹಸೀನಾ ಬೇಗಂ ಮನೆಗೆ ಬಂದಿದ್ದ ಶ್ಯಾಮಸುಂದರ್, ಲೈಂಗಿಕವಾಗಿ ಬಳಸಿಕೊಂಡು, ಹಲ್ಲೆ ನಡೆಸಿ ವಿಷ ಕುಡಿಸಿ ಹೋಗಿದ್ದ ಆರೋಪ ಕೇಳಿಬಂದಿತ್ತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 4 ದಿನಗಳಿಂದ ಹಸೀನಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್ – Kannada News | India was allegedly compromised and sold to US and Soviet’s spies, says Sudhanshu Trivedi

ನವದೆಹಲಿ, ಫೆಬ್ರುವರಿ 25: ಜವಾಹಾರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದ ವೇಳೆ ಭಾರತದ ಪೂರ್ಣ ನಿಯಂತ್ರಣವು ಅಮೆರಿಕ ಹಾಗೂ ರಷ್ಯನ್ ಗುಪ್ತಚರ ಸಂಸ್ಥೆಗಳ ಕೈಯಲ್ಲಿತ್ತು. ವಿದೇಶೀ ಬೇಹುಗಾರರಿಗೆ ದೇಶವನ್ನೇ ಮಾರಿಬಿಟ್ಟಿದ್ದರು ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ಭಾರತದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಅಮೆರಿಕಕ್ಕೆ ಪ್ರಧಾನಿಗಳು ಶರಣಾಗಿದ್ದಾರೆ. ಒಪ್ಪಂದದ ಮೂಲಕ ಭಾರತೀಯ ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಬಾರಿ ಬಾರಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ವಕ್ತಾರರು ತಿರುಗೇಟು ಕೊಟ್ಟಂತಿದೆ.

ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಾಕಿರುವ ಸುಧಾಂಶು ತ್ರಿವೇದಿ, ನೆಹರೂ, ಇಂದಿರಾ ಕಾಲದಲ್ಲಿ ದೇಶದ ಭದ್ರತೆಯನ್ನು ಅದೆಷ್ಟರಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿತ್ತು ಎನ್ನುವ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಆಲಿಪ್ತ ನೀತಿ ಹೊಂದಿದ್ದರೂ ಅಮೆರಿಕದ ಸಿಐಎ ಹಾಗೂ ಸೋವಿಯತ್​ನ ಕೆಜಿಬಿ ನಿಯಂತ್ರಣದಲ್ಲಿ ವ್ಯವಸ್ಥೆ ಇತ್ತು. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿರಲಿಲ್ಲ, ಶರಣಾಗತಿಯಾಗಿತ್ತು ಎಂದು ಬಿಜೆಪಿ ವಕ್ತಾರರು ತಮ್ಮ ಏಳು ಟ್ವೀಟ್​ಗಳ ಸರಣಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ

‘ನೆಹರೂ ಅವರ ಪ್ರಧಾನಿ ಕಾರ್ಯಾಲಯವು ಸಿಐಎ ಪಾಲಿಗೆ ಓಪನ್ ಬುಕ್ ಆಗಿತ್ತು. ಅವರ ವಿಶೇಷ ಸಹಾಯಕರಾದ ಎಂ.ಒ. ಮಥಾಯ್ ಅವರು ಅಮೆರಿಕದ ಆಸ್ತಿಯಾಗಿದ್ದರು. ಪ್ರತಿಯೊಂದು ದಾಖಲೆಯನ್ನೂ ಲ್ಯಾಂಗ್ಲೇಗೆ (ಸಿಐಎ ಮುಖ್ಯ ಕಚೇರಿ) ನಕಲು ಮಾಡಿ ಕಳುಹಿಸಲಾಗುತ್ತಿತ್ತು. ಭಾರತದ ಯಾವುದೇ ದಾಖಲೆ ಬೇಕೆಂದರೂ ತೆಗೆಯಬಲ್ಲೆವು ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿಕೊಳ್ಳುತ್ತಿದ್ದುಂಟು. ಭಾರತದ ಹೃದಯಭಾಗವೇ ಅಮೆರಿಕದ ಆಸ್ತಿಯಾಗಿತ್ತು’ ಎಂದು ಡಾ| ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

ಅಮೆರಿಕದವು ನೆಹರೂ ಪ್ರಧಾನಿ ಕಾರ್ಯಾಲಯದ ಮೇಲೆ ಕಣ್ಣಿಟ್ಟಿದ್ದರೆ, ರಷ್ಯಾದವರೇನು ಹಿಂದುಳಿದಿರಲಿಲ್ಲ. ರಷ್ಯಾದ ಕೆಜಿಬಿ (ಗುಪ್ತಚರ ಏಜೆನ್ಸಿ) ಭಾರತೀಯ ಸರ್ಕಾರದ ಪ್ರತಿಯೊಂದು ವಿಭಾಗದಲ್ಲೂ ಜನರನ್ನು ಇಟ್ಟಿತ್ತು. ಟ್ರೇಡ್ ಮಿಷನ್, ಸಾಂಸ್ಕೃತಿಕ ಸಂಬಂಧ ಇವೆಲ್ಲವೂ ಹೊರಗೆ ಕಾಣಿಸಲು ಇದ್ದ ಮುಖವಾಡ. ರಷ್ಯಾಗೆ ಬೇಹುಗಾರರು ಬೇಕಿರಲಿಲ್ಲ. ಇಡೀ ಸಿಸ್ಟಂ ಅನ್ನೇ ಅವರು ಕೊಂಡುಕೊಂಡಿದ್ದರು ಎಂದು ಬಿಜೆಪಿ ವಕ್ತಾರರು ಆಪಾದಿಸಿದ್ದಾರೆ.

ಇಂದಿರಾ ಅವಧಿಯಲ್ಲಿ ಸಿಐಎ ಪ್ರತೀ ಮೂಲೆಯನ್ನೂ ಹೊಕ್ಕಿತ್ತು. ಸಿಐಎಯಿಂದ ಹಣ ಪಡೆಯುತ್ತಿದ್ದರು. ಕಾಂಗ್ರೆಸ್ಸಿಗೆ ಕೋಟಿಗಟ್ಟಲೆ ಹಣ ಹರಿದು ಹೋಗುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿಗೆ ಒಂದು ಬಂಡಲ್ ಹೋಗಿ ತಲುಪಿತ್ತು. ವಿದೇಶೀ ಲಂಚಕ್ಕಾಗಿ ದೇಶವನ್ನು ಮಾರಿದ್ದರು ಎಂದು ರಾಜ್ಯಸಭಾ ಸಂಸದರೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ

1976ರಲ್ಲಿ ಸೋವಿಯತ್​ಗೆ ಸಹಾಯವಾಗುವಂತೆ ರುಬಲ್ ಎದುರು ರುಪಾಯಿ ಮೌಲ್ಯವನ್ನು ಬದಲಿಸಿದ್ದರು ಇಂದಿರಾ ಗಾಂಧಿ. ಇದು ನೆಹರೂ ಹಾಗೂ ಇಂದಿರಾ ಆಡಳಿತದಲ್ಲಿ ದೇಶದ ಹಿತಾಸಕ್ತಿ ಬಲಿಕೊಟ್ಟ ಕಥೆ ಎಂದು ಡಾ. ಸುಧಾಂಶು ತ್ರಿವೇದಿ ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link