Category Archives: Blog

Your blog category

‘ಜನ ನಾಯಗನ್’ ಸಿನಿಮಾಕ್ಕೆ ಅಂದುಕೊಳ್ಳದೆ ಸಿಕ್ತು ‘ಗೋಲ್ಡನ್ ಟೈಮ್?’ – Kannada News | Is this good time to release Thalapathy Vijay’s Jana Nayagan movie

ತಮಿಳುನಾಡಿನ (Tamil Nadu) ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಉತ್ತಮ ಶೇಕಡಾವಾರು ಮತದಾನ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಮತ್ತು ಅವರ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಚುನಾವಣಾ ಫಲಿತಾಂಶಕ್ಕೆ ಇನ್ನೂ ಹತ್ತು ದಿನಗಳು ಬಾಕಿ ಇದೆ. ಮತದಾನ ಮುಗಿದ ಕಾರಣ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ತೊಲಗಿದೆ ಎನ್ನಲಾಗುತ್ತಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ವಿಜಯ್ ರಾಜಕೀಯಕ್ಕೆ ಧುಮುಕಿದ್ದರಿಂದ ‘ಜನ ನಾಗಯನ್’ ಅವರ ಕೊನೆಯ ಸಿನಿಮಾ ಎನ್ನಲಾಗಿತ್ತು. ಆದರೆ ಕೆಲವು ರಾಜಕೀಯ ಪ್ರಭಾವಗಳಿಂದಾಗಿ ಅವರ ಸಿನಿಮಾ ಕಳೆದ ನಾಲ್ಕು ತಿಂಗಳಿಂದ ಬಿಡುಗಡೆ ಆಗದೆ ಡಬ್ಬದಲ್ಲೇ ಸಿಲುಕಿದೆ.

‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿಯು ಕೊನೆ ಕ್ಷಣದಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನಿರಾಕರಿಸಿತು. ನ್ಯಾಯಾಲಯದಲ್ಲಿ ಅನುಮತಿ ದೊರಕಿತಾದರೂ, ಸಿಬಿಎಫ್​ಸಿ ಭಾರಿ ಪ್ರಯತ್ನ ನಡೆಸಿ ಸಿಕ್ಕ ಅನುಮತಿಯ ಮೇಲೆ ತಡೆ ಆದೇಶ ತಂದಿತು. ಕಳೆದ ನಾಲ್ಕು ತಿಂಗಳಿಂದಲೂ ಸಿನಿಮಾದ ನಿರ್ಮಾಪಕರು ಅವರ ಕಾನೂನು ತಂಡ ‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣ ಪತ್ರ ಕೊಡಿಸಲು ನಾನಾ ಪ್ರಯತ್ನ ಮಾಡುತ್ತಿದ್ದರೂ ಸಹ ಅದು ಯಶಸ್ವಿ ಆಗಿಲ್ಲ. ಆದರೆ ಈಗ ಮತದಾನ ಮುಗಿದಿರುವ ಕಾರಣ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ಮೊದಲು ಬಿಡುಗಡೆ ಆಗಿದ್ದರೆ ಅದು ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು, ವಿಜಯ್​​ಗೆ ಹೆಚ್ಚಿನ ಜನ ಬೆಂಬಲ ಲಭ್ಯವಾಗಬಹುದು ಎಂಬ ಕಾರಣದಿಂದಾಗಿಯೇ ಸಿನಿಮಾ ಬಿಡುಗಡೆ ಆಗದಂತೆ ಕೆಲ ರಾಜಕೀಯ ಶಕ್ತಿಗಳು ತಡೆದಿದ್ದವು ಎಂಬುದು ಗುಟ್ಟೇನೂ ಅಲ್ಲ. ಇದಕ್ಕೆ ಸಿಬಿಎಫ್​​ಸಿಯನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿತ್ತು. ಈಗ ವಿಜಯ್ ರಾಜಕೀಯ ಎದುರಾಳಿಗಳ ಉದ್ದೇಶ ಈಡೇರಿದ್ದು, ಈಗ ಸಿನಿಮಾ ಬಿಡುಗಡೆ ಆದರೂ ಸಹ ಎದುರಾಳಿಗಳಿಗೆ ಯಾವುದೇ ಹಾನಿ ಇಲ್ಲ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ

ಆದರೆ ಚುನಾವಣಾ ಫಲಿತಾಂಶಗಳು ಹೊರಬೀಳುವ ಮೊದಲೇ ಈ ಚಿತ್ರ ಬಿಡುಗಡೆಯಾದರೆ ಚಿತ್ರತಂಡಕ್ಕೆ ಲಾಭವಾಗಲಿದೆ. ಒಂದು ವೇಳೆ ಫಲಿತಾಂಶದ ನಂತರ ಸಿನಿಮಾ ಬಿಡುಗಡೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಹಿನ್ನಡೆಯಾದರೆ ಅದು ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ದೃಶ್ಯಗಳು ಸೋರಿಕೆಯಾಗಿ ಈಗಾಗಲೇ ಸಿನಿಮಾದ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದೆ. ಈಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಚಿತ್ರತಂಡ ಸೆನ್ಸಾರ್ ಕ್ಲಿಯರೆನ್ಸ್ ನಿರೀಕ್ಷೆಯಲ್ಲಿದೆ.

ವಿಜಯ್ ಅವರು ರಾಜಕೀಯ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಇದು ಅವರ ನಟನೆಯ ಕೊನೆಯ ಚಿತ್ರವೆಂದು ಪ್ರಚಾರ ಮಾಡಲಾಗಿತ್ತು, ಹೀಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಎಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಸ್ಥಾನ ವಿಧಾನಸಭೆಗೆ ಆತ್ಮಾಹುತಿ ಬಾಂಬ್ ಬೆದರಿಕೆ; 3 ಗಂಟೆ ಶೋಧ ಕಾರ್ಯಾಚರಣೆ – Kannada News | Suicide Bomb attack threat in Rajasthan Assembly House triggers 3 hour search

ಜೈಪುರ, ಏಪ್ರಿಲ್ 24: ರಾಜಸ್ಥಾನ ವಿಧಾನಸಭೆಯ (Rajasthan Assembly) ಅಧಿಕೃತ ಇಮೇಲ್ ಖಾತೆಗೆ ಬಾಂಬ್ ಬೆದರಿಕೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನದ ವಿಧಾನಸಭೆಯ ಆವರಣದಲ್ಲಿ ಸಮಗ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಬೆದರಿಕೆ ಇಮೇಲ್ ಅನ್ನು ಸ್ವೀಕರಿಸಲಾಗಿತ್ತು. ಬೆಳಿಗ್ಗೆ 9.15ರ ಸುಮಾರಿಗೆ ಬಂದ ಇಮೇಲ್‌ನಲ್ಲಿ ವಿಧಾನಸಭೆ ಕಟ್ಟಡದೊಳಗೆ ಮಧ್ಯಾಹ್ನ 1 ಗಂಟೆಗೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಹೀಗಾಗಿ, ಭದ್ರತಾ ಸಂಸ್ಥೆಗಳು ವಿಧಾನಸಭೆ ಕಟ್ಟಡದಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಿ ವಿವರವಾದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಬಾಂಬ್ ನಿಷ್ಕ್ರಿಯ ದಳ ಮತ್ತು ಇತರ ಭದ್ರತಾ ಸಿಬ್ಬಂದಿ ಸೇರಿದಂತೆ ತಂಡಗಳು ಸುಮಾರು 3 ಗಂಟೆಗಳ ಕಾಲ ಆವರಣದ ಸಂಪೂರ್ಣ ಪರಿಶೀಲನೆ ನಡೆಸಿದವು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ.

ಇದನ್ನೂ ಓದಿ: Assembly Elections 2026: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸಭೆ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಶೋಧ ಮುಗಿದ ನಂತರ ಮತ್ತು ಆವರಣವನ್ನು ಸುರಕ್ಷಿತವೆಂದು ಘೋಷಿಸಿದ ನಂತರವೇ ವಿಧಾನಸಭೆಯೊಳಗೆ ಜನರನ್ನು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಆವರಣದಾದ್ಯಂತ ಕಮಾಂಡೋಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿತ್ತು. ಶ್ವಾನ ದಳಗಳು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಉದ್ಯಾನಗಳು, ಪಾರ್ಕಿಂಗ್ ಪ್ರದೇಶಗಳು, ಕಾರಿಡಾರ್‌ಗಳು ಮತ್ತು ಕಚೇರಿ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಯಿತು.

ಇದನ್ನೂ ಓದಿ: ಬಿಹಾರ ವಿಧಾನಸಭೆಗೆ ಬಾಂಬ್ ಬೆದರಿಕೆ; ತೀವ್ರ ಶೋಧ ಕಾರ್ಯಾಚರಣೆ ಆರಂಭ

ಮುನ್ನೆಚ್ಚರಿಕೆ ಕ್ರಮವಾಗಿ, ವಿಧಾನಸಭೆಯೊಳಗೆ ಇದ್ದ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಕರ್ತವ್ಯಕ್ಕಾಗಿ ಆಗಮಿಸುತ್ತಿದ್ದವರನ್ನು ಮುಖ್ಯ ದ್ವಾರದಲ್ಲಿ ನಿಲ್ಲಿಸಲಾಯಿತು. ಯಾವುದೇ ಅನುಮಾನಾಸ್ಪದ ಸಂಗತಿ ಕಂಡುಬಂದಿಲ್ಲ. ಅಧಿಕಾರಿಗಳು ಇಮೇಲ್‌ನ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಗರದ ಸೂಕ್ಷ್ಮ ಸ್ಥಳಗಳಲ್ಲಿಯೂ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮನೆಗೆ ಹೋಗ್ಬಿಡಿ; ಸ್ಟೇಡಿಯಂ ತೊರೆಯುವಂತೆ ಫ್ಯಾನ್ಸ್​ಗೆ ಸನ್ನೆ ಮಾಡಿದ ಆಕಾಶ್ ಅಂಬಾನಿ – Kannada News | Mumbai Indians’ Biggest IPL Loss: Akash Ambani Walks Out Mid Match, Video Viral

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಾರೂ ನಿರೀಕ್ಷಿಸದ ಪ್ರದರ್ಶನ ನೀಡಿತು. ಇದಕ್ಕೆ ಫಲವಾಗಿ ಐಪಿಎಲ್ ಇತಿಹಾಸದಲ್ಲೇ ಮುಂಬೈ ತಂಡ ಅತಿದೊಡ್ಡ ಸೋಲು ಅನುಭವಿಸಿತು. ತನ್ನ ಹಿಂದಿನ ಪಂದ್ಯದಲ್ಲಿ 99 ರನ್​ಗಳ ದಾಖಲೆಯ ಗೆಲುವು ದಾಖಲಿಸಿದ್ದ ಮುಂಬೈ, ಅದರ ನಂತರದ ಪಂದ್ಯದಲ್ಲೇ ಹೀನಾಯ ಸೋಲು ಅನುಭವಿಸಿತು. ತನ್ನ ತವರು ಮೈದಾನದಲ್ಲೇ ಮುಂಬೈ ತಂಡ ಈ ರೀತಿಯ ಪ್ರದರ್ಶನ ನೀಡಿದ್ದು, ತಂಡದ ಮಾಲೀಕ ಆಕಾಶ್ ಅಂಬಾನಿಯನ್ನು ಸಹ ಅಸಮಾಧಾನಗೊಳ್ಳುವಂತೆ ಮಾಡಿತು. ಹೀಗಾಗಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಆಕಾಶ್, ಆಟದ ಮಧ್ಯದಲ್ಲೇ ಕ್ರೀಡಾಂಗಣದಿಂದ ಎದ್ದು ಹೊರನಡೆದರು. ತಾವು ಹೊರಹೋಗುವುದರ ಜೊತೆಗೆ ಮುಂಬೈ ತಂಡದ ಅಭಿಮಾನಿಗಳನ್ನು ಸಹ ಮನೆಗೆ ಹೋಗುವಂತೆ ಕೈಸನ್ನೆ ಮಾಡಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Source link

ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ – Kannada News | Madikeri Tanal Ashram Wedding: Maina Finds New Life and Family in Heartwarming Kodava Ceremony

ಬದುಕಿನಲ್ಲಿ ಎಲ್ಲವೂ ಮುಗಿಯಿತು, ಎಲ್ಲರನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎನ್ನುವ ಭಾವನೆಯಲ್ಲಿ ಅನಾಥಾಶ್ರಮಕ್ಕೆ ಬರುತ್ತಾರೆ. ಆದರೆ ಅಂತಹ ಆಶ್ರಮವೊಂದರಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಯುವತಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹಸೆಮಣೆ ಏರುವ ಮೂಲಕ ತುಂಬು ಕುಟುಂಬವನ್ನು ಕೂಡಿದ್ದಾರೆ.

ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು. ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು. 

ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾ ಅವರ ಮದುವೆ ಸಂಭ್ರಮ ಮನೆ ಮಾಡಿತ್ತು. ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು.

ಮೊಹಮ್ಮದ್ ಅವರು ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ಮಾತ್ರ ವಿಶೇಷ. ಹಿಂದೂ- ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ. 

ಮೈನಾ ಮತ್ತು ಪೂವಣ್ಣ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದರು. ನವಜೋಡಿಗೆ ಅಕ್ಷತೆ ಹಾಕಿ, ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ಬಂಧು ಬಳಗ ಎಲ್ಲರೂ ಸಾಕ್ಷಿಯಾದರು.

ತನ್ನವರು ಯಾರೂ ಇಲ್ಲ, ನನ್ನದೆನ್ನುವ ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಇದೀಗ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು, ನವಜೋಡಿಯ ಬದುಕು ಖುಷಿಯಾಗಿರಲಿ ಎಂಬುವುದು ಎಲ್ಲರ ಆಶಯವಾಗಿದೆ. 

Published On – 3:28 pm, Fri, 24 April 26

Source link

ಬಿಳಿ ಶರ್ಟ್, ಖಾಕಿ ಪ್ಯಾಂಟ್‌: ಡ್ರೆಸ್ ಕೋಡ್ ಪಾಲಿಸಿ ಮತ ಹಾಕಿ ವಿಜಯ್​ಗೆ ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳು – Kannada News | Tamil celebrities who voted for TVK Thalapathy Vijay by wearing white shirt khaki pant dress code

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ (ಏಪ್ರಿಲ್ 23) ನಡೆದ ಮತದಾನವು ಅತ್ಯಂತ ಶಾಂತಿಯುತವಾಗಿ ಜರುಗಿತು. ಕಾಲಿವುಡ್ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಆದರೆ ಈ ಬಾರಿಯ ಚುನಾವಣೆಯಲ್ಲಿ (Tamil Nadu Election) ಒಂದು ವಿಶೇಷ ಸಂಗತಿ ಎಲ್ಲರ ಗಮನ ಸೆಳೆಯಿತು. ಹಲವಾರು ಯುವ ನಟರು ಮತ್ತು ಸೆಲೆಬ್ರಿಟಿಗಳು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬಂದಿದ್ದು, ಇದು ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ನೀಡಿದ ಬೆಂಬಲ ಎಂದು ವಿಶ್ಲೇಷಿಸಲಾಗುತ್ತಿದೆ.

ನಟ ವಿಜಯ್ ಅವರ ರಾಜಕೀಯ ಪ್ರವೇಶದ ನಂತರದ ಮೊದಲ ಚುನಾವಣೆ ಇದಾಗಿದ್ದು, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಒಂದು ನಿರ್ದಿಷ್ಟ ಡ್ರೆಸ್ ಕೋಡ್ ಅನುಸರಿಸುತ್ತಿದ್ದಾರೆ. ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಅನ್ನು ಟಿವಿಕೆ ಪಕ್ಷದ ಕಾರ್ಯಕರ್ತರು ಬಳಸುತ್ತಿದ್ದಾರೆ. ಮತದಾನದ ದಿನದಂದು ಅನೇಕ ಸೆಲೆಬ್ರಿಟಿಗಳು ಇದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಅವರ ರಾಜಕೀಯ ಹಾದಿಗೆ ಬೆಂಬಲ ಸೂಚಿಸಿದಂತೆ ತೋರುತ್ತಿದೆ.

ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರ ಪರವಾಗಿ ಬಹಿರಂಗ ಪ್ರಚಾರ ಮಾಡದೇ ಇರಬಹುದು. ಆದರೆ ಬಿಳಿ ಶರ್ಟ್ ಅಥವಾ ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬರುವ ಮೂಲಕ ಪರೋಕ್ಷವಾಗಿ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸೂಚಿಸಿದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಅರ್ಥ ಆಗಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಚಿಯಾನ್ ವಿಕ್ರಮ್, ಸಿಂಬು, ಪ. ರಂಜಿತ್, ಸಿಬಿ ಸತ್ಯರಾಜ್, ಜೈ, ವಿಜಯ್ ಕುಮಾರ್, ಅರುಣ್ ವಿಜಯ್, ಐಶ್ವರ್ಯಾ ರಜನಿಕಾಂತ್ ಸೇರಿದಂತೆ ಹಲವರು ಇದೇ ಡ್ರೆಸ್​ ಕೋಡ್​ ಅನುಸರಿಸಿದ್ದಾರೆ. ಹಾಗಾಗಿ ಇವರೆಲ್ಲರೂ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬುದು ಅಭಿಮಾನಿಗಳು ಅಭಿಪ್ರಾಯ. ಈ ಕುರಿತು ಹಲವು ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್

ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಅವರು ರಾಜಕೀಯದ ಕಣದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮದೇ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಅವರು ಚುನಾವಣೆಗೆ ನಿಂತಿದ್ದಾರೆ. ಮೇ 4ರಂದು ಫಲಿತಾಂಶ ಪ್ರಕಟ ಆಗಲಿದೆ. ಮೊದಲ ಪ್ರಯತ್ನದಲ್ಲೇ ವಿಜಯ್ ಅವರಿಗೆ ಗೆಲುವು ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಅಭಿಮಾನಿಗಳು ಮತ್ತು ಬೆಂಬಲಿಗರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಓಹ್ ಈಗ ಸಿಕ್ದೆ ನೋಡು, ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹೆಂಡತಿಯನ್ನು ಮತಗಟ್ಟೆಯಲ್ಲಿ ಕಂಡ ಪತಿ ಮಾಡಿದ್ದೇನು? – Kannada News | West Bengal: Missing Wife Found at Polling Booth, Husband’s Election Day Confrontation Drama

ಕೋಲ್ಕತ್ತಾ, ಏಪ್ರಿಲ್ 24: ಓಹ್ ಈಗ ಸಿಕ್ದೆ ನೋಡು ಎಲ್ಲಿದ್ದೆ ಇಷ್ಟು ದಿನ? ಇದು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಪತ್ನಿಯನ್ನು ಮತಗಟ್ಟೆಯಲ್ಲಿ ಕಂಡಾಗಿ ಪತಿ ಕೇಳಿದ ಪ್ರಶ್ನೆ ಇದು. ಪಶ್ಚಿಮ ಬಂಗಾಳ(West Bengal)ದಲ್ಲಿ ಏಪ್ರಿಲ್ 23ರಂದು ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತ್ನಿಯನ್ನು ಪತಿ ಕಂಡಿದ್ದಾರೆ.

ತಾರಾಬರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 25/238 ರ ಹೊರಗೆ ಒಬ್ಬ ವ್ಯಕ್ತಿ ಅತಿಯಾದ ಬಿಸಿಲನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಓಡಾಡುತ್ತಿದ್ದ. ಬೆವರಿನಿಂದ ಮೈ ನೆನೆದಿದ್ದರೂ ಅವರ ಕಣ್ಣುಗಳು ಮಾತ್ರ ಮತಗಟ್ಟೆಯ ಒಳಗೆ ಬರುವ ಪ್ರತಿಯೊಬ್ಬ ಮಹಿಳೆಯ ಮುಖವನ್ನೂ ಜಾಲಾಡುತ್ತಿದ್ದವು.

ಮಧ್ಯಾಹ್ನ ಸರಿಯಾಗಿ 2 ಗಂಟೆಯ ಸಮಯ. ಒಬ್ಬ ಮಹಿಳೆ ಕೈಯಲ್ಲಿ ಮತದಾರರ ಗುರುತಿನ ಚೀಟಿ (Voter ID) ಹಿಡಿದು ಸಂಭ್ರಮದಿಂದ ಮತಗಟ್ಟೆಯತ್ತ ಹೆಜ್ಜೆ ಹಾಕಿದಳು. ಅವಳು ಹತ್ತಿರ ಬರುತ್ತಿದ್ದಂತೆಯೇ, ಗಂಟೆಗಟ್ಟಲೆ ಹಸಿದ ಹುಲಿಯಂತೆ ಕಾಯುತ್ತಿದ್ದ ಆ ವ್ಯಕ್ತಿ ಒಮ್ಮೆಗೆ ಅವಳ ಮೇಲೆ ಎರಗಿದ, ಹಿಂದಿನಿಂದ ಅವಳ ಕೂದಲನ್ನು ಹಿಡಿದು ಎಳೆದ ಆತ, ಎಲ್ಲರ ಮುಂದೆ ಅವಳನ್ನು ನಿಂದಿಸಲು ಶುರು ಮಾಡಿದ.

ಮತಗಟ್ಟೆಯಲ್ಲಿ ಭದ್ರತೆಗೆ ನಿಂತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (CAPF) ಸಿಬ್ಬಂದಿ ಕೂಡಲೇ ಧಾವಿಸಿ ಬಂದು ಮಹಿಳೆಯನ್ನು ಆತನ ಹಿಡಿತದಿಂದ ಬಿಡಿಸಿದರು. ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂತು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಆ ಮಹಿಳೆಯ ಪತಿ, ಎರಡು ವರ್ಷಗಳ ಹಿಂದೆ ಆಕೆ ಮನೆ ಬಿಟ್ಟು ಓಡಿಹೋಗಿದ್ದಳು. ಇನ್ನೊಬ್ಬ ಪುರುಷನೊಂದಿಗೆ ಹೊಸ ಜೀವನ ಆರಂಭಿಸಿದ್ದ ಆಕೆ ಪತಿಯ ನೆನಪೇ ಇರಲಿಲ್ಲ.

ಮತ್ತಷ್ಟು ಓದಿ: Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಅವಳನ್ನು ಪತ್ತೆಹಚ್ಚಲು ಆತ ಬಳಸಿದ ತಂತ್ರ ನಿಜಕ್ಕೂ ಅದ್ಭುತವಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಕಟ್ಟುನಿಟ್ಟಿನ ಚುನಾವಣಾ ನಿಯಮಗಳ ಪ್ರಕಾರ, ಮತದಾನ ಮಾಡಲು ಆಕೆ ತನ್ನ ಹಳೆಯ ವಿಳಾಸದ ಮತಗಟ್ಟೆಗೆ ಬರಲೇಬೇಕು ಎಂದು ಆತ ಲೆಕ್ಕ ಹಾಕಿದ್ದ. ಆತನ ಲೆಕ್ಕಾಚಾರ ಹುಸಿಯಾಗಲಿಲ್ಲ; ಮತದಾನದ ಹಕ್ಕು ಚಲಾಯಿಸಲು ಬಂದ ಪತ್ನಿ ಪತಿಯ ಬಲೆಗೆ ಬಿದ್ದಿದ್ದಳು.

ಪೋಲೀಸರು ಆತನನ್ನು ವಶಕ್ಕೆ ಪಡೆದಾಗ ಆತ ಒಂದು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾನೆ, ಈಕೆಯ ವೋಟರ್ ಐಡಿಯಲ್ಲಿರುವ ನನ್ನ ಹೆಸರನ್ನು ಮೊದಲು ಅಳಿಸಿಹಾಕಿ, ಅದು ಅಳಿಸಿಹೋಗುವವರೆಗೆ ಈಕೆಗೆ ಮತ ಹಾಕಲು ಬಿಡಬೇಡಿ ಎಂದು ಕಿರುಚಾಡಿದ್ದ. ಆದರೆ ಚುನಾವಣಾ ಸಿಬ್ಬಂದಿ ಆತನ ಬೇಡಿಕೆಯನ್ನು ತಿರಸ್ಕರಿಸಿ, ಮಹಿಳೆಗೆ ಮತ ಚಲಾಯಿಸಲು ಅವಕಾಶ ನೀಡಿದರು.

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:17 pm, Fri, 24 April 26

Source link

ತಮನ್ನಾ ಭಾಟಿಯಾ ದೇಹದ ಬಗ್ಗೆ ಕೀಳು ಹೇಳಿಕೆ, ಕಾಲಿಗೆ ಬೀಳಲು ರೆಡಿ ಎಂದ ನಟ – Kannada News | Annu Kapoor said he is ready to touch the feet of Tamannah Bhatia

ಅನ್ನು ಕಪೂರ್ (Annu Kapoor), ಬಾಲಿವುಡ್​ ಮತ್ತು ಹಿಂದಿ ಟಿವಿ ರಂಗದ ಬಲು ಹಿರಿಯ ನಟ. ರಾಜ್​ಶ್ರೀ ಪಾನ್ ಮಸಾಲ ಜಾಹೀರಾತುಗಳಿಂದ ಅಂತೂ ಭಾರಿ ಜನಪ್ರಿಯತೆಯನ್ನು ಅನ್ನು ಕಪೂರ್ ಪಡೆದುಕೊಂಡಿದ್ದಾರೆ. ಒಂದಿಲ್ಲೊಂದು ಸಂದರ್ಶನ, ಪಾಡ್​​ಕಾಸ್ಟ್​​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಅನ್ನು ಕಪೂರ್, ಇತರೆ ನಟ-ನಟಿಯರ ಬಗ್ಗೆ ಮಾತನಾಡುವುದು ತುಸು ಹೆಚ್ಚು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿದ್ದರು. ನೆಟ್ಟಿಗರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಹಿರಿಯ ನಟ ಅನ್ನು ಕಪೂರ್ ಒಂದು ಸಂದರ್ಶನದಲ್ಲಿ ತಮನ್ನಾ ಅವರ ‘ಆಜ್ ಕಿ ರಾತ್’ ಐಟಂ ಹಾಡಿನ ಬಗ್ಗೆ ಮಾತನಾಡುತ್ತಾ, ಅವರ ದೇಹವನ್ನು ಹಿಂದಿಯಲ್ಲಿ ‘ದೂಧಿಯಾ ಬದನ್’ (ಹಾಲಿನಂಥ ಮೈಮಾಟ) ಎಂದು ಬಣ್ಣಿಸಿದ್ದರು. ಹಿಂದಿಯಲ್ಲಿ ಇದು ತುಸು ಅಶ್ಲೀಲ ಅರ್ಥ ನೀಡುವ ಮಾತಾಗಿದೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು ಮತ್ತು ಅನೇಕರು ಇದನ್ನು ‘ಅಶ್ಲೀಲ’, ಮಹಿಳೆಯ ಬಗ್ಗೆ ಅಗೌರವ ಎಂದು ಟೀಕಿಸಿದ್ದರು.

ಅನ್ನು ಕಪೂರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ‘ಇಂಗ್ಲಿಷ್‌ನಲ್ಲಿ ‘ಮಿಲ್ಕಿ ಬಾಡಿ’ ಎಂದರೆ ಯಾರೂ ಆಕ್ಷೇಪಿಸುವುದಿಲ್ಲ, ಆದರೆ ನಾನು ಹಿಂದಿಯಲ್ಲಿ ಹೇಳಿದ್ದಕ್ಕೆ ಜನರಿಗೆ ಸಮಸ್ಯೆಯಾಗಿದೆ. ನಮ್ಮ ಸ್ವಂತ ಭಾಷೆಯಲ್ಲಿ ಹೇಳಿದ್ದು ಹೆಚ್ಚು ಚುಚ್ಚಿದಂತೆ ಕಾಣುತ್ತದೆ’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ‘ನಾನು ಅವರ ದೇಹವನ್ನು ಕೇವಲ ಶ್ಲಾಘಿಸಿದ್ದೇನೆಯೇ ಹೊರತು ಯಾವುದೇ ಕೆಟ್ಟ ದೃಷ್ಟಿಯಿಂದ ಅಥವಾ ಕಾಮದ ದೃಷ್ಟಿಯಿಂದ ನೋಡಿಲ್ಲ. 71 ವರ್ಷದ ವ್ಯಕ್ತಿಯಾದ ನನಗೆ ಅವರ ವಯಸ್ಸಿನ ಮಕ್ಕಳಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಪುತ್ರನೊಟ್ಟಿಗೆ ತಮನ್ನಾ ಭಾಟಿಯಾ ಮಾತುಕತೆ

‘ಈ ಹೇಳಿಕೆಯಿಂದ ನಟಿ ತಮನ್ನಾ ಅವರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸಲು ತಮಗೆ ಯಾವುದೇ ಮುಜುಗರವಿಲ್ಲ. ಒಂದು ವೇಳೆ ಅವರು ನಾನು ಆ ರೀತಿ ಹೇಳಿದ್ದೇನೆಯೇ ಎಂದು ಕೇಳಿದರೆ, ಹೌದು ಎಂದು ಒಪ್ಪಿಕೊಳ್ಳುತ್ತೇನೆ. ನಿಮಗೆ ಅದರಿಂದ ನೋವಾಗಿದ್ದರೆ ನಾನು ನಿಮ್ಮ ಪಾದ ಮುಟ್ಟಿ ಕ್ಷಮೆಯಾಚಿಸುತ್ತೇನೆ. ನನ್ನ ಉದ್ದೇಶ ತಪ್ಪಾಗಿಲ್ಲದಿರುವಾಗ ನನಗೆ ಕ್ಷಮೆ ಕೇಳಲು ಹಿಂಜರಿಕೆಯಿಲ್ಲ’ ಎಂದು ಹೇಳಿದ್ದಾರೆ.

‘ಸ್ತ್ರೀ 2’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ‘ಆಜ್ ಕಿ ರಾತ್’ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ನೃತ್ಯವನ್ನು ಹೊಗಳು ಭರದಲ್ಲಿ ಅನ್ನು ಕಪೂರ್ ಈ ವಿವಾದಾತ್ಮಕ ಶಬ್ದಗಳನ್ನು ಬಳಸಿದ್ದರು. ಅಲ್ಲದೆ, ತಮನ್ನಾ ಅವರ ಹಾಡು ಮತ್ತು ಅವರ ಮೈಮಾಟವನ್ನು ನೋಡಿ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದು ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್​​ – Kannada News | Two Delivery Boys Arrested for Harassing a Female Pedestrian in Bengaluru

ಬೆಂಗಳೂರು ಏಪ್ರಿಲ್​​ 24: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯ ಜೊತೆ ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ (Bengaluru) ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರು ಆನ್‌ಲೈನ್ ಗ್ರೋಸರಿ ಡೆಲಿವರಿ ಕೆಲಸ ಮಾಡಿಕೊಂಡಿದ್ದವರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನ ಮಾರುತಿನಗರದ ಕೋಗಿಲು ಮುಖ್ಯ ರಸ್ತೆಯಲ್ಲಿ ಆರೋಪಿಗಳು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದರು.

ಬೈಕ್​​ನಲ್ಲಿ ತೆರಳುತ್ತಿದ್ದ ಆರೋಪಿಗಳು ಪಾದಚಾರಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​​ ಆಗಿತ್ತು. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯಲಹಂಕ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ (ಸುಮೋಟೋ ಕೇಸ್​​) ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಸಿಂಗನಾಯಕನಹಳ್ಳಿ ನಿವಾಸಿ ಹರೀಶ್ ಮತ್ತು ಆವಲಹಳ್ಳಿ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ತುಮಕೂರು ಜಿಲ್ಲೆಯ ಪಾವಗಡ ಮೂಲದವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗದ ಹಿನ್ನೆಲೆ ನಗರಕ್ಕೆ ಬಂದು ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್!

ಯಲಹಂಕದಿಂದ ಬಾಗಲೂರು ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಹತ್ತಿರ ಹೋಗಿ ಅಸಭ್ಯವಾಗಿ ಸ್ಪರ್ಶಿಸಿ ಆರೋಪಿಗಳು ಕಿರುಕುಳ ನೀಡಿದ್ದರು. ಈ ಘಟನೆ ಆರೋಪಿಗಳ ಸ್ಕೂಟರ್ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಂತರ ಬೆಳಕಿಗೆ ಬಂದಿತ್ತು. ಯುವತಿ ಮತ್ತೊಬ್ಬಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ಪಕ್ಕದಿಂದ ಹಾದು ಹೋಗುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು. ಹೀಗಿದ್ದರೂ ಘಟನೆ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಸ್ಕೂಟರ್‌ನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ, ಕೂಡಲೇ ಬಂದು ಅಪಾಯ ತಪ್ಪಿಸಿದ ಪೊಲೀಸ್ – Kannada News | Swift Action: Cop Saves Woman and Child After Escalator Slip

ಜೈಪುರ, ಏಪ್ರಿಲ್ 24: ಜೈಪುರದ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್​ ಹತ್ತುವಾಗ ಕೈಯಲ್ಲಿದ್ದ ಮಗು ಸಮೇತ ಮಹಿಳೆಯೊಬ್ಬರು ಬೀಳೋಕಾದ ಘಟನೆ ನಡೆದಿದೆ. ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಬ್ಯಾಗ್ ಇದ್ದುದರಿಂದ ಅವರಿಗೆ ಎಸ್ಕಲೇಟರ್‌ನ ಹ್ಯಾಂಡಲ್ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮಗುವಿನೊಂದಿಗೆ ಹಿಂದಕ್ಕೆ ಬೀಳಲು ಪ್ರಾರಂಭಿಸಿದರು.

ಅವರು ಕೆಳಕ್ಕೆ ಬಿದ್ದರೆ ಮಗು ಮತ್ತು ತಾಯಿ ಇಬ್ಬರಿಗೂ ಗಂಭೀರ ಗಾಯಗಳಾಗುವುದು ನಿಶ್ಚಿತವಾಗಿತ್ತು. ಕೆಳಗೆ ನಿಂತಿದ್ದ ಪೊಲೀಸ್ ಮಹಿಳೆಯನ್ನು ಕಂಡ ತಕ್ಷಣ, ಒಂದು ಕ್ಷಣವೂ ವ್ಯರ್ಥ ಮಾಡದೆ ಎಸ್ಕಲೇಟರ್ ಕಡೆಗೆ ಓಡಿದರು. ಅವರು ಎಸ್ಕಲೇಟರ್ ಮೇಲೆ ಹತ್ತುವ ಬದಲು, ಮಹಿಳೆ ಕೆಳಕ್ಕೆ ಉರುಳದಂತೆ ತಡೆಯಲು ಕೆಳಗಿನಿಂದಲೇ ಜಿಗಿದು ಆಕೆಯನ್ನು ಭದ್ರವಾಗಿ ಹಿಡಿದರು.

ಅಲ್ಲಿ ನೆರೆದಿದ್ದ ಪ್ರಯಾಣಿಕರು ಕೆಲವು ಸೆಕೆಂಡುಗಳ ಕಾಲ ಉಸಿರು ಬಿಗಿಹಿಡಿದು ನೋಡುತ್ತಿದ್ದರು. ತಕ್ಷಣ ಎಸ್ಕಲೇಟರ್ ಅನ್ನು ನಿಲ್ಲಿಸಿ, ಮಹಿಳೆಯನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತರಲಾಯಿತು. ಎಸ್ಕಲೇಟರ್ ಬಳಸುವಾಗ ಸಣ್ಣ ಮಕ್ಕಳನ್ನು ಎತ್ತಿಕೊಂಡಿದ್ದರೆ ಅಥವಾ ಕೈಯಲ್ಲಿ ಹೆಚ್ಚು ಬ್ಯಾಗ್‌ಗಳಿದ್ದರೆ ಹೆಚ್ಚಿನ ಜಾಗರೂಕತೆ ವಹಿಸಿ, ಸಾಧ್ಯವಾದಷ್ಟು ಲಿಫ್ಟ್ ಬಳಸಲು ಆದ್ಯತೆ ನೀಡಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು? – Kannada News | MC Sudhakar on CET Exam Janivara Issue

ಬೆಂಗಳೂರು, ಏಪ್ರಿಲ್ 24: ನಗರದ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂಬ ಆರೋಪಗಳ ಕುರಿತು ಸಚಿವ ಎಂ.ಸಿ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಯಾವುದೇ ಅಧಿಕೃತ ವರದಿ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಆರೋಪಗಳು ನಿಜವೆಂದು ಸಾಬೀತಾದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಪರೀಕ್ಷೆಗಳನ್ನು ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ, ಮತ್ತು ಸಿಬ್ಬಂದಿಯನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿ ಅತಿರೇಕದ ವರ್ತನೆ ತೋರಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ವ್ಯವಸ್ಥೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.

 

Source link