Category Archives: Blog

Your blog category

Sun Transit 2026: ಸೂರ್ಯ ಪೂರ್ವಾಷಾಢಾ ನಕ್ಷತ್ರದಿಂದ ಉತ್ತರಾಷಾಢಾಕ್ಕೆ ಸಂಚಾರ; ಈ ರಾಶಿಗೆ ಅದೃಷ್ಟದ ಸುರಿಮಳೆ! – Kannada News | Sun Transit 2026: Ravi Sanchara’s Auspicious and Inauspicious Effects on Zodiac Signs

ಸೂರ್ಯನು ಸದ್ಯ ಧನು ರಾಶಿಯ ಪೂರ್ವಾಷಾಢಾ ನಕ್ಷದಲ್ಲಿ ಇದ್ದು ಉತ್ತರಾಷಾಢಾ ನಕ್ಷತ್ರಕ್ಕೆ ಹೋಗುವನು. ಶುಕ್ರನ ಆಧಿಪತ್ಯದಿಂದ ತನ್ನ ಆಧಿಪತ್ಯಕ್ಕೆ ಹೋಗುವನು. ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಫಲವೂ ಉತ್ತಮವಾಗಿರಲಿದೆ. ಸೂರ್ಯನು ಯಾವೆಲ್ಲ ರಾಶಿಗೆ ಶುಭವನ್ನು ಕೊಡುವನು ಎನ್ನುವುದನ್ನು ನೋಡಬಹುದು. ಮುಖ್ಯವಾಗಿ, ಆತ್ಮವಿಶ್ವಾಸ, ಆರೋಗ್ಯ, ಸರ್ಕಾರಿ ಕಾರ್ಯ, ಸಂಪತ್ತು, ತಂದೆಗೆ ಸಂಧಿಸಿದ ಕಾರ್ಯಗಳು ಅಗುವ ಕಾರಣ ಸೂರ್ಯಾನುಗ್ರಹ ಬೇಕಾಗುತ್ತದೆ. ಗುರುವಿನ ದೃಷ್ಟಿಯೂ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.

ಮೇಷ ರಾಶಿ:

ಸರ್ಕಾರ ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ. ಹಂತ ಹಂತವಾಗಿ ಆದಾಯ ಹೆಚ್ಚಳ. ಅತಿವ್ಯಯ ತಪ್ಪಿಸಿ
ಭೂಮಿ ಅಥವಾ ಮನೆ, ಕಚೇರಿ, ಜಾಗ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ತೊಡೆ, ಸೊಂಟದ ಬಗ್ಗೆ ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಹೊಸ ವಿಷಯಗಳಿಗೆ ಒತ್ತು, ಪರೀಕ್ಷೆಯಲ್ಲಿ ಯಶಸ್ಸು ಆತ್ಮವಿಶ್ವಾಸದಿಂದ ಧೈರ್ಯ, ನಿರ್ಧಾರದಲ್ಲಿ ಸ್ಪಷ್ಟತೆ ಸಿಗಕಿದೆ.

ಮಿಥುನ ರಾಶಿ:

ಸಂಘಟನೆ, ಮಾರ್ಗದರ್ಶನ, ತರಬೇತಿಯ‌ ಉದ್ಯೋಗದಿಂದ ಲಾಭ. ಹಣಕಾಸಿಗೆ ಸಂಬಂಧಿಸದಂತೆ ಆದಾಯದಲ್ಲಿ ಸ್ಥಿರತೆ. ಭೂಮಿಯ ದಾಖಲೆ ಪರಿಶೀಲನೆ ಅಗತ್ಯ, ಲಾಭವೂ ಸಾಧ್ಯ. ಆರೋಗ್ಯ ರಕ್ಷಣೆಗೆ ವ್ಯಾಯಾಮ, ಆಹಾರ ಸಮತೋಲನವಿರಲಿ.
ವಿದ್ಯಾಭ್ಯಾಸದಲ್ಲಿ ಹಳೆಯ ವಿಚಾರಗಳು ಗಟ್ಟಿಯಾಗಲಿದೆ. ಆತ್ಮವಿಶ್ವಾಸ ಬೆಳವಣಿಗೆಯಾಗಿ ನಿರ್ಧಾರದಲ್ಲಿ ಸ್ಪಷ್ಟತೆ, ಪ್ರಶಂಸೆ ಪ್ರಾಪ್ತಿ.

ಸಿಂಹ ರಾಶಿ:

ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಹಣಕಾಸು ಸ್ಥಿರವಾಗುವ ಕಾರಣ ಮನಸ್ಸೂ ಸ್ಥಿರವಾಗಲಿದೆ. ಕೃಷಿ ಭೂಮಿ ಮತ್ತು ಮನೆ ಖರೀದಿಗೆ ಯಶಸ್ಸಿನ ಹೆಜ್ಜೆ.ಆರೋಗ್ಯದಲ್ಲಿ ಉಷ್ಣತೆ, ಸೊಂಟ, ಹೆಗಲು ನೋವಾಗಲಿದ್ದು ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಪರೀಕ್ಷೆ ಫಲಕಾರಿಯಾಗಲಿದೆ.
ಆತ್ಮವಿಶ್ವಾಸವಿದ್ದರೆ ಸಾಮಾಜಿಕ ಗೌರವದಿಂದ ತೃಪ್ತಿ.

ಧನು ರಾಶಿ:

ಉದ್ಯೋಗದಲ್ಲಿ ನಾಯಕತ್ವ, ಹೊಣೆಗಾರಿಕೆಯನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಹಣಕಾಸಿನಲ್ಲಿ ಹಂತ ಹಂತವಾಗಿ ವೃದ್ಧಿಯಿಂದ ನೆಮ್ಮದಿ ನಿಮ್ಮದು. ಚರಾಸ್ತಿಯ ಖರೀದಿಯನ್ನು ಮಾಡಲು ಒತ್ತಡ ಬರಲಿದೆ. ಆರೋಗ್ಯದಲ್ಲಿ ಉಷ್ಣತೆ, ರಕ್ತದೊತ್ತಡ ಅಧಿಕವಗಲಿದ್ದು, ಆಹಾರದ ಬಗ್ಗೆ ಜಾಗ್ರತೆ ಇರಲಿ. ವಿದ್ಯಾಭ್ಯಾಸದಲ್ಲಿ ಅಧ್ಯಯನ ಸುಸಂಪನ್ನವಗಲಿದೆ.
ಆತ್ಮವಿಶ್ವಾಸವಿದ್ದು ಧೈರ್ಯ, ಒತ್ತಡವಿಲ್ಲದೇ ಎಲ್ಲವನ್ನೂ ಸಾಧಿಸುವಿರಿ.

– ಲೋಹಿತ್ ಹೆಬ್ಬಾರ್

Source link

Bengaluru: ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ; ಪ್ರಯಾಣಿಕರು ಬದುಕಿದ್ದೇ ಪವಾಡ! – Kannada News | Auto Accident in Mahalakshmi Layout, Bengaluru Caught on CCTV

ಬೆಂಗಳೂರು, ಜನವರಿ 11: ರಸ್ತೆಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಆಟೋ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ನಾಲ್ಕನೇ ಕ್ರಾಸ್​​ನಲ್ಲಿ ನಡೆದಿದೆ. ಪಲ್ಟಿಯಾದ ರಭಸಕ್ಕೆ ಆಟೋದಿಂದ‌ ಪ್ರಯಾಣಿಕ ಹಾರಿ ಬಿದ್ದಿದ್ದರೆ, ಗ್ಲಾಸ್​​ ಒಡೆದು ಚಾಲಕ ಹೊರ ಬಂದಿದ್ದಾನೆ. ನೀರು ಲೀಕೇಜ್ ಆಗಿ ರಸ್ತೆಯಲ್ಲಿ ಗುಂಡಿ ಆಗಿದ್ದರೂ ಅದರ ಸುತ್ತ ಯಾವುದೇ ಬ್ಯಾರಿಕೇಡ್​​ ಹಾಕದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

In Pics: ಪ್ರಧಾನಿ ಮೋದಿ ಸೋಮನಾಥ ಭೇಟಿ, ಓಂಕಾರ ಪಠಣ, ಆಗಸದಲ್ಲಿ ಡ್ರೋನ್​ಗಳ ಝಲಕ್, ಎಲ್ಲೆಲ್ಲೂ ಶಿವಭಕ್ತಿ ಮಯ – Kannada News | Swabhiman Parv at Somnath: PM Modi Recalls a Thousand Years of Resistance, shares pictures

ಸೋಮನಾಥ ದೇವಾಲಯದ ಇತಿಹಾಸವು ಹೋರಾಟ ಮತ್ತು ವಿಜಯೋತ್ಸವದ ಅದ್ಭುತ ಕಥೆಯಾಗಿದೆ. ಮೊಹಮ್ಮದ್ ಘಜ್ನಿ 1026 ರಲ್ಲಿ ದೇವಾಲಯದ ಮೇಲೆ ಮೊದಲ ಪ್ರಮುಖ ದಾಳಿಯನ್ನು ನಡೆಸಿದ್ದ. ಆ ದಾಳಿ ನಡೆದು ಸಾವಿರ ವರ್ಷಗಳು ಕಳೆದಿವೆ. ಭಾರತ ತನ್ನ ಪರಂಪರೆಯನ್ನು ಎಂದಿಗೂ ಮರೆಯುವುದಿಲ್ಲ. ಸೋಮನಾಥವು ನಮ್ಮ ಅಚಲ ನಂಬಿಕೆಯ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ವಿದೇಶಿ ಆಕ್ರಮಣಕಾರರು ಇದನ್ನು ಹಲವಾರು ಬಾರಿ ನಾಶಮಾಡಲು ಪ್ರಯತ್ನಿಸಿದ್ದರು, ಆದರೆ ಪ್ರತಿ ಬಾರಿಯೂ ದೇವಾಲಯವು ಇನ್ನೂ ಹೆಚ್ಚಿನ ಭವ್ಯತೆಯಿಂದ ಎದ್ದು ನಿಂತಿತ್ತು. ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದ್ದರು. 1951 ರಲ್ಲಿ, ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇದನ್ನು ಸಾರ್ವಜನಿಕರಿಗೆ ಅರ್ಪಿಸಿದರು. 2026 ಈ ಐತಿಹಾಸಿಕ ಪುನಃಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

Source link

Video: ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ – Kannada News | An elderly couple visited the beach for the first time and enjoyed its beauty.

ನಮ್ಮ ಅಜ್ಜ ಅಜ್ಜಿಯಂದಿರಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಹೀಗಾಗಿ ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಇದ್ಯಾವುದನ್ನು ಎಂಜಾಯ್ ಮಾಡಿದವರೇ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕರೆದುಕೊಂಡು ಹೋದರಷ್ಟೇ ಅವರ ಹಿಂದೆಯೇ ಪುಟಾಣಿ ಮಕ್ಕಳಂತೆ ಬರುತ್ತಾರೆ. ಇದೀಗ ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್ (beach) ನೋಡಲು ಬಂದಿದ್ದಾರೆ. ಹೌದು, ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ, ಅಲೆಗಳನ್ನು ನೋಡುತ್ತಾ ಖುಷಿ ಪಡುತ್ತಿರುವ ವೃದ್ಧ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ದಿವ್ಯಾ ತಾವ್ಡೆ (@shortgirlthingss) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿರುವ ಈ ವಿಡಿಯೋ ವೃದ್ಧ ದಂಪತಿ ಮೊದಲ ಬಾರಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿರುವುದಾಗಿದೆ. ರಜಾದಿನದಂದು ಸಮುದ್ರ ವೀಕ್ಷಿಸಲು ತೆರಳಿದ್ದಲ್ಲ. ದಶಕಗಳಿಂದ ಅವರು ಕಿವಿಗಳಿಂದಷ್ಟೇ ಕೇಳಿದ್ದ ಸಮುದ್ರದ ಅಲೆಗಳ ಸದ್ದನ್ನು ಸ್ವತಃ ನೋಡಲು ತೆರಳಿದ್ದರು. ನನ್ನ ಅಜ್ಜ ಅಜ್ಜಿ ಸಮುದ್ರ ತೀರದಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಕೆಲವು ಕ್ಷಣಗಳು ಹೃದಯದಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ವೃದ್ಧ ದಂಪತಿ ಕೈಕೈ ಹಿಡಿದು ಸಮುದ್ರದಲ್ಲಿ ನಿಂತುಕೊಂಡಿದ್ದಾರೆ. ತಮ್ಮ ಪಾದಗಳ ಮೇಲೆ ಅಲೆಗಳು ಅಪ್ಪಳಿಸುತ್ತಿದ್ದಂತೆ ಅವರ ಖುಷಿಯೂ ಮುಖದಲ್ಲಿ ವ್ಯಕ್ತವಾಗಿದೆ. ಈ ಹಿರಿಜೀವ ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಗೆ ತೊಟ್ಟಿರುವುದನ್ನು ಕಾಣಬಹುದು.

ಇದನ್ನೂ ಓದಿ:ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹಿರಿ ಜೀವಕ್ಕೆ ಇದಕ್ಕಿಂತ ಖುಷಿ ಇನ್ನೇನಿದೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ಮೂಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದಕ್ಕಾಗಿಯೇ ನಾನು ನನ್ನ ಇಂಟರ್‌ನೆಟ್‌ ಬಿಲ್‌ಗಳನ್ನು ಪಾವತಿಸುತ್ತೇನೆ. ನನ್ನ ದಿನವನ್ನು ಭಾವನಾತ್ಮಕ ಮತ್ತು ಸಂತೋಷಕರವಾಗಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:05 am, Sun, 11 January 26

Source link

ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್ – Kannada News | X admits its mistakes over grok generated obscene content, says it will comply with Indian law

ನವದೆಹಲಿ, ಜನವರಿ 11: ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಆದ ಎಕ್ಸ್​ನಲ್ಲಿ ಇತ್ತೀಚೆಗೆ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲ ಕಂಟೆಂಟ್ ಅನ್ನು ಸೃಷ್ಟಿಸುತ್ತಿರುವ ಪ್ರಕರಣ ಜಾಗತಿಕವಾಗಿ ಪಿಡುಗಾಗಿ ಪರಿಣಿಸಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಗ್ರೋಕ್ (Grok AI) ಮೂಲಕ ಸೃಷ್ಟಿಯಾಗುತ್ತಿರುವ ಅಶ್ಲೀಲ ಕಂಟೆಂಟ್ ಅನ್ನು ಅಳಿಸಬೇಕೆಂದೂ ಮತ್ತು ಭಾರತೀಯ ಕಾನೂನು ನಿಯಮಗಳಿಗೆ ಬದ್ಧವಾಗಿರಬೇಕೆಂದೂ ಎಕ್ಸ್​ಗೆ ಸರ್ಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಎಕ್ಸ್ (ಹಿಂದಿನ ಟ್ವಿಟ್ಟರ್) ತನ್ನಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ.

ಸರ್ಕಾರದ ಆದೇಶದಂತೆ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ 3,500 ಕಂಟೆಂಟ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಈ ಅಶ್ಲೀಲ ಕಂಟೆಂಟ್ ಸೃಷ್ಟಿಗೆ ಕಾರಣವಾದ ಸುಮಾರು 600 ಅಕೌಂಟ್​ಗಳನ್ನು ಡಿಲೀಟ್ ಮಾಡಲಾಗಿದೆ. ಇನ್ಮುಂದೆ ಅಶ್ಲೀಲ ಇಮೇಜ್​ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದೂ ಎಕ್ಸ್ ತಿಳಿಸಿದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

ಎಕ್ಸ್ ಬಳಕೆದಾರರಿಂದ ಗ್ರೋಕ್ ದುರುಪಯೋಗ

ಗ್ರೋಕ್ ಎಂಬುದು ಎಐ ಚಾಟ್​ಬೋಟ್ ಅಪ್ಲಿಕೇಶನ್. 2023ರಲ್ಲಿ ಇದರ ಬಿಡುಗಡೆಯಾಗಿದ್ದು. ಇದರಲ್ಲಿ ಗ್ರೋಕ್ ಇಮ್ಯಾಜಿನ್ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿದೆ. ಇದನ್ನು ಬಳಸಿ ವಯಸ್ಕರ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದು. ಪೇಯ್ಡ್ ಗ್ರಾಹಕರಿಗೆ ಈ ಫೀಚರ್ ಲಭ್ಯ ಇದೆ. ಆದರೆ, ಎಕ್ಸ್ ಬಳಕೆದಾರರಿಗೆ ಈ ಚಾಟ್​ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ಕೊಡಲಾಗಿದೆ. ಎಕ್ಸ್ ಪೋಸ್ಟ್​ಗಳಲ್ಲಿ ಗ್ರೋಕ್​​ಗೆ ಟ್ಯಾಗ್ ಮಾಡಿ ಬೇಕಾದ್ದನ್ನು ಕಮ್ಯಾಂಡ್ ಮಾಡಬಹುದು. ಪೋಸ್ಟ್ ಆಗಿರುವ ಒಬ್ಬ ವ್ಯಕ್ತಿ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದರೆ ಅದನ್ನೂ ಮಾಡುತ್ತದೆ. ಆದರೆ ಎಕ್ಸ್​ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ.

ಹಲವು ದೇಶಗಳು ಈ ವಿಚಾರದಲ್ಲಿ ಎಕ್ಸ್ ಮೇಲೆ ಕುಪಿತಗೊಂಡಿವೆ. ಇಂಡೋನೇಷ್ಯಾ ದೇಶ ಗ್ರೋಕ್ ಅನ್ನೇ ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು ಗ್ರೋಕ್ ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇಸ್ಟೋರ್​ಗಳಿಂದ ಗ್ರೋಕ್ ಆ್ಯಪ್ ಅನ್ನು ತೆಗೆದುಹಾಕುವಂತೆಯೂ ಆ್ಯಪಲ್ ಮತ್ತು ಗೂಗಲ್​ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್​ಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜನವರಿ 2ರಂದು ಭಾರತ ಕೂಡ ಎಕ್ಸ್​ಗೆ ಎಚ್ಚರಿಕೆ ನೀಡಿತ್ತು. ಇದೀಗ ಎಕ್ಸ್ ತನ್ನ ತಪ್ಪು ಒಪ್ಪಿಕೊಂಡು, ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್ ಅನ್ನು ಬ್ಲಾಕ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ತಂಡದಿಂದ ಹೊರಬಿದ್ದ ರಿಷಭ್ ಪಂತ್: ಯುವ ಆಟಗಾರ ಆಯ್ಕೆ – Kannada News | Dhruv Jurel replaced Rishabh Pant in Team India’s Squad for ODI series

ಭಾರತ ಏಕದಿನ ತಂಡ : ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

Source link

ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ? – Kannada News | Shocking Twist in Bengaluru Marital Case: Wife Accused of Three Marriages

ಬೆಂಗಳೂರು, ಜನವರಿ 11: ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಜೊತೆಗೆ ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಪತಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್​​ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರೋಪಿ ಪತಿ ಮಂಜುನಾಥ್​ ಹೆಂಡತಿ ವಿರುದ್ಧವೇ ಬಿಗ್​​ ಬಾಂಬ್​​ ಸಿಡಿಸಿದ್ದಾರೆ.

ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್​ ಗಂಭೀರ ಆರೋಪ ಮಾಡಿದ್ದು, ಹಲವು ಮದುವೆಗಳು ಅವಳಿಗಾಗಿವೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್​​, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡಿದ್ದಳು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೋಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್​​ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ; ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು

ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ಈಗಾಗಲೇ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್​​ ತನ್ನ ವಿರುದ್ಧ ಕಂಪ್ಲೇಂಟ್​​ ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್​​ಗೆ ಕೊಡಿಸಿದ್ದೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್​​ ಹೇಳಿದ್ದಾರೆ.

ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿರೋದು ಕೂಡ ಫೇಕ್​​ ದಾಖಲೆಗಳನ್ನು ನೀಡಿ. ಅಲ್ಲದೆ ರೌಡಿಶೀಟರ್ ಓರ್ವನಿಂದ ತನಗೆ ಧಮ್ಕಿ ಕೂಡ ಹಾಕಿಸಿದ್ದಾಳೆ ಎಂದು ಆರೋಪಿಸಿ ಮಂಜುನಾಥ್​​ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ – Kannada News | Kavya Shaiva takes revenge against Gilli Nata in Bigg Boss Kannada Season 12

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗಿಲ್ಲಿ ನಟ ಅವರು ಮೊದಲಿನಿಂದಲೂ ಆ್ಯಕ್ಟೀವ್ ಆಗಿದ್ದಾರೆ. ಕಾವ್ಯಾ ಶೈವ (Kavya Shaiva) ಜೊತೆ ಅವರಿಗೆ ಸ್ನೇಹ ಇದೆ. ಆದರೂ ಗಿಲ್ಲಿಯಿಂದ ಕಾವ್ಯಾಗೆ ಹಲವು ಬಾರಿ ಕಿರಿಕಿರಿ ಆಗಿದ್ದುಂಟು. ಇಷ್ಟು ದಿನಗಳ ಕೋಪವನ್ನು ಕಾವ್ಯಾ ಅವರು ಈಗ ತೀರಿಸಿಕೊಂಡಿದ್ದಾರೆ. ಗಿಲ್ಲಿಗೆ ಅವರು ಶಿಕ್ಷೆ ನೀಡಿದ್ದಾರೆ. ಕಾವ್ಯಾ ಮಾತ್ರವಲ್ಲದೇ ಮ್ಯೂಟೆಂಟ್ ರಘು ಕೂಡ ಹೀಗೆಯೇ ಮಾಡಿದ್ದಾರೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಅವರಿಗೂ ಗಿಲ್ಲಿಯೇ ಟಾರ್ಗೆಟ್ ಆಗಿದ್ದಾರೆ. ಅಂದಹಾಗೆ, ಇದೆಲ್ಲವೂ ನಡೆದಿರುವುದು ಭಾನುವಾರದ (ಜನವರಿ 11) ಸಂಚಿಕೆಯಲ್ಲಿ. ತುಂಬ ಫನ್ ಆಗಿರುವ ಈ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಬಾರಿ ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ – Kannada News | Optical Illusion: A challenge for your eyes; Find the dog hiding in this park in just 15 seconds.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಕಣ್ಣು ಹಾಯಿಸಿದ್ದಲೆಲ್ಲಾ ಮೆದುಳಿಗೆ ವ್ಯಾಯಾಮ ನೀಡುವ ಒಗಟಿನ ಆಟಗಳೇ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುವುದಲ್ಲದೇ, ಒಗಟು ಬಿಡಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಎಂದು ಪರೀಕ್ಷಿಸುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವ ಟ್ರಿಕ್ಕಿ ಒಗಟು ಇಲ್ಲಿದೆ. ಈ ಉದ್ಯಾನವನದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ನಾಯಿಯನ್ನು ಪತ್ತೆ ಹಚ್ಚಬೇಕು. ಈ ಕಠಿಣ ಒಗಟನ್ನು ಬಿಡಿಸಲು ಇರುವ ಕಾಲಾವಕಾಶ 15 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.

ಈ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳೇ ಹಾಗೆ, ನಮಗೆ ಕಾಣುವುದೇ ಒಂದು. ಅದರಲ್ಲಿ ಅಡಗಿರುವುದೇ ಇನ್ನೊಂದು ಆಗಿರುತ್ತದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಉದ್ಯಾನವನವೊಂದು ಕಾಣಿಸುತ್ತದೆ. ರೆಂಬೆ ಕೊಂಬೆಗಳನ್ನು ಚಾಚಿ ನಿಂತಿರುವ ಎರಡು ಮರವನ್ನು ಕಾಣಬಹುದು. ಈ ಮರದಲ್ಲಿ ಎಲೆಗಳು ಒಣಗಿ ಉದುರಿ ಹೋಗಿವೆ. ನೆಲದ ಮೇಲೆ ಬಿದ್ದಿರುವ ಒಣ ಎಲೆಗಳ ರಾಶಿಯನ್ನು ಕಾಣಬಹುದು. ಇದೆಲ್ಲದರ ನಡುವೆ ನಾಯಿಯೊಂದು ಅಡಗಿ ಕುಳಿತಿದೆ. ಈ ಶ್ವಾನವನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಕಣ್ಣು ಬಿಟ್ಟು ಚಿತ್ರ ನೋಡಿ ನಾಯಿಯನ್ನು ಪತ್ತೆ ಹಚ್ಚಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ

ನಿಮ್ಮ ಕಣ್ಣಿಗೆ ನಾಯಿ ಕಾಣಿಸಿತೇ?

ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರಗಳನ್ನು ನೋಡಿದಾಗಲು ಹಾಗೆಯೇ ಅನಿಸುತ್ತದೆ. ಈ ಉದ್ಯಾನವನದಲ್ಲಿರುವ ಶ್ವಾನವನ್ನು ಹುಡುಕುವುದು ಸುಲಭವೆನಿಸಿದರೂ ಟ್ರಿಕ್ಕಿಯಾಗಿದೆ. ನೀವು ಈ ಒಗಟು ಬಿಡಿಸುವಲ್ಲಿ ಸೋತಿದ್ದೀರಾ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಉದ್ಯಾನವನದಲ್ಲಿ ನಾಯಿ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂಝಿಲೆಂಡ್ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಔಟ್

Source link