Category Archives: Blog

Your blog category

Bangaluru rain: ಬೆಂಗಳೂರಲ್ಲಿ ಧಾರಾಕಾರ ಮಳೆ; ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ! – Kannada News | Bengaluru Heavy Rain: Roads Turn Into Lakes, Motorists Struggle Amid Severe Waterlogging

ಬೆಂಗಳೂರು, ಜೂನ್​​ 14: ನಗರದಲ್ಲಿ (bengaluru) ಕಳೆದೆರಡು ದಿನಗಳಿಂದ ಮಳೆ (Rain) ಚುರುಕುಗೊಂಡಿದೆ. ನಿನ್ನೆ ಸಂಜೆಯೂ ಮಳೆ ದರ್ಶನವಾಗಿದ್ದು, ಇಂದು ಮತ್ತೆ ಮಳೆ ಎಂಟ್ರಿಕೊಟ್ಟಿದೆ. ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ
  • ಮಳೆಯಿಂದ ಟ್ರಾಫಿಕ್ ಜಾಮ್​, ವಾಹನ ಸವಾರರ ಪರದಾಟ
  • ಧಾರಾಕಾರ ಮಳೆಯಿಂದ ಕೆರೆಯಂತಾದ ಹಲವು ರಸ್ತೆಗಳು

ಎಲ್ಲೆಲ್ಲಿ ಮಳೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಶುರುವಾಗಿದೆ. ನಗರದ ಮೆಜೆಸ್ಟಿಕ್, ಟೌನ್ ಹಾಲ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಶಿವಾಜಿನಗರ, ಫ್ರೀಡಂಪಾರ್ಕ್, ಗಾಂಧಿನಗರ, ಚಾಮರಾಜಪೇಟೆ, ಕಾರ್ಪೊರೇಷನ್, ಚಿಕ್ಕಪೇಟೆ, ರಾಜಾಜಿನಗರ, ವಿಜಯನಗರ, ಶಾಂತಿನಗರ ಹಾಗೂ ಮಡಿವಾಳ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂಗಾರು ಚುರುಕು; ಯೆಲ್ಲೋ ಅಲರ್ಟ್​ ಘೋಷಣೆ

ಮಧ್ಯಾಹ್ನವಿದ್ದ ಜಿಟಿ ಜಿಟಿ ಮಳೆ, ಸಂಜೆ ಆಗುತ್ತಿದ್ದಂತೆ ಬಿರುಸು ಪಡೆದುಕೊಂಡಿದ್ದು ಮಹಾನಗರವನ್ನು ಮತ್ತಷ್ಟು ಕೂಲ್ ಮಾಡಿದೆ. ಆದರೆ, ಈ ದಿಢೀರ್ ಮಳೆಯಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೆರೆಯಂತೆ ತುಂಬಿ ತುಳುಕುತ್ತಿರುವ ರಸ್ತೆಗಳು

ಇನ್ನು ಧಾರಾಕಾರ ಮಳೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿವೆ. ರಸ್ತೆಗಳ ಮೇಲೆ ಮೊಣಕಾಲುದ್ದ ನೀರು ನಿಂತಿರುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ದಿಢೀರ್ ಮಳೆಗೆ ಸಿಲುಕಿದ ನೂರಾರು ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ಕೆ.ಆರ್. ಮಾರ್ಕೆಟ್ ಫ್ಲೈಓವರ್ ಕೆಳಗೆ ನಿಂತು ಆಶ್ರಯ ಪಡೆದರು. ಜನಸಾಮಾನ್ಯರು ಛತ್ರಿ ಹಿಡಿದು ಮಳೆಯಲ್ಲೇ ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ – Kannada News | Home remedies that help keep away houseflies from home

ಮಾನ್ಸೂಸ್‌ ಸೀಸನ್‌ನಲ್ಲಿ ಮಳೆಯೊಂದಿಗೆ ಹಾವು, ಸೊಳ್ಳೆಗಳ ಕಾಟವೂ ಹೆಚ್ಚಿರುತ್ತದೆ. ನೊಣಗಳು (houseflies) ಇದಕ್ಕೆ ಹೊರತಿಲ್ಲ. ಹೌದು ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ನೊಣಗಳ ಹಾವಳಿ ಕೂಡ ಹೆಚ್ಚಾಗುತ್ತದೆ. ತೇವಾಂಶವುಳ್ಳ ಪ್ರದೇಶಗಳಲ್ಲಿ ನೊಣಗಳು ಹೆಚ್ಚಾಗಿ ಬೆಳೆಯುತ್ತವೆ. ಮಳೆಗಾಲದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಇವು ಆಹಾರ ಮತ್ತು ಪಾನೀಯಗಳನ್ನು ಕಲುಷಿತಗೊಳಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ  ಅನೇಕರಿಗೆ ಮನೆಯಲ್ಲಿ ಹಾವಳಿಯಿಡುವ ಈ ನೊಣಗಳನ್ನು ತೊಡೆದುಹಾಕುವುದು ತುಂಬಾನೇ ಕಷ್ಟ. ಹೀಗಿರುವಾಗ ಕೆಲವೊಂದು ಮನೆಮದ್ದುಗಳ ಸಹಾಯದಿಂದ ನೊಣಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ ಈ ಮನೆಮದ್ದುಗಳು:

ಉಪ್ಪು ನೀರು:
ಒಂದು ಲೋಟಕ್ಕೆ ಎರಡು ಟೀ ಚಮಚ ಉಪ್ಪು ತುಂಬಿಸಿ ನೀರು ಸೇರಿಸಿ. ಈಗ, ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ವಿವಿಧ ಪ್ರದೇಶಗಳಲ್ಲಿ ಸಿಂಪಡಿಸಿ. ಈ ನೀರನ್ನು ಸಿಂಪಡಿಸಿದ ಪ್ರದೇಶಗಳಲ್ಲಿ ನೊಣಗಳು ಸುಳಿದಾಡುವುದಿಲ್ಲ.

ನಿಂಬೆ ಮತ್ತು ಲವಂಗ: ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ತಿರುಳಿನಲ್ಲಿ ಲವಂಗವನ್ನು ಅಂಟಿಸಿ. ಈ ನಿಂಬೆ ಹೋಳುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ ಮತ್ತು ನೊಣಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಇರಿಸಿ. ನಿಂಬೆ ಮತ್ತು ಲವಂಗದ ವಾಸನೆಯು ನೊಣಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತದೆ.

ಕರ್ಪೂರ ಪುಡಿ: ಬಹುತೇಕ ಎಲ್ಲರ ಮನೆಯಲ್ಲೂ ಕರ್ಪೂರ ಇದ್ದೇ ಇರುತ್ತವೆ. 4 ರಿಂದ 8 ಕರ್ಪೂರ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ. ನಂತರ ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನೊಣಗಳು ಹೆಚ್ಚಾಗಿ ಬರುವ ಕಡೆ ಸಿಂಪಡಿಸಿ. ನೀವು ಹೀಗೆ ಮಾಡಿದರೆ, ಒಂದೇ ಒಂದು ನೊಣ ಮನೆಯೊಳಗೆ ಕಾಣಿಸುವುದಿಲ್ಲ.

ತುಳಸಿ ಎಲೆ ಪೇಸ್ಟ್: ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ನೀವು ಹೀಗೆ ಮಾಡಿದರೆ, ಮನೆಯೊಳಗೆ ನೊಣಗಳು ಕಾಣಿಸಿಕೊಳ್ಳುವುದಿಲ್ಲ.

ದಾಲ್ಚಿನ್ನಿ ಪುಡಿ: ನೊಣಗಳನ್ನು ತೊಡೆದುಹಾಕಲು ದಾಲ್ಚಿನ್ನಿ ಕೂಡ ತುಂಬಾ ಉಪಯುಕ್ತವಾಗಿದೆ. ಮೊದಲು, ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ. ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಈ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಿ. ದಾಲ್ಚಿನ್ನಿಯ ವಾಸನೆಯು ನೊಣಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಗಿಡಗಳನ್ನು ನೆಡುವುದು ಉತ್ತಮ

ಬೆಳ್ಳುಳ್ಳಿ ಮತ್ತು ಪುದೀನ ರಸ: ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಕುದಿಸಿ, ನೀರನ್ನು ಸೋಸಿ, ಪುದೀನಾ ಎಣ್ಣೆಯೊಂದಿಗೆ ಬೆರೆಸಿ ಸ್ಪ್ರೇ ಮಾಡಿ. ಈ ಮಿಶ್ರಣವನ್ನು ಮನೆಯ ಮೂಲೆಗಳು, ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಸಿಂಪಡಿಸಿ. ಬೆಳ್ಳುಳ್ಳಿ ಮತ್ತು ಪುದೀನದ ಬಲವಾದ ವಾಸನೆಯು ನೊಣಗಳು ಮತ್ತು ಸೊಳ್ಳೆಗಳನ್ನು ತೊಡೆದು ಹಾಕಲು ತುಂಬಾನೇ ಸಹಕಾರಿಯಾಗಿದೆ.

ಮನೆಯನ್ನು ಸ್ವಚ್ಛವಾಗಿಡಿ: ನೊಣಗಳು ಕಸ, ಆಹಾರದ ಅವಶೇಷಗಳು ಮತ್ತು ಸ್ವಚ್ಛವಲ್ಲದ ಪ್ರದೇಶಗಳತ್ತ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ, ನಿಮ್ಮ ಮನೆಯನ್ನು, ವಿಶೇಷವಾಗಿ ನಿಮ್ಮ ಅಡುಗೆಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಕಸಗಳನ್ನು ಆಗಾಗ್ಗೆ ವಿಲೇವಾರಿ ಮಾಡುತ್ತಿರಿ.

ಈ ಸಸ್ಯಗಳು ಪ್ರಯೋಜನಕಾರಿ: ತುಳಸಿ, ಪುದೀನ ಮತ್ತು ಲ್ಯಾವೆಂಡರ್‌ನಂತಹ ಕೆಲವು ಸಸ್ಯಗಳು ನೈಸರ್ಗಿಕ ಕೀಟ-ನಿವಾರಕ ಗುಣಗಳನ್ನು ಹೊಂದಿವೆ. ನೊಣಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಲು, ಕಿಟಕಿಗಳು ಅಥವಾ ಪ್ರವೇಶದ್ವಾರಗಳ ಬಳಿ ಪಾಟ್‌ಗಳಲ್ಲಿ ಈ ಸಸ್ಯಗಳನ್ನಿಡಿ. ಇದು ನೊಣಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಖುಷಿ ಪಟ್ಟ ರಮೇಶ ಜಾರಕಿಹೊಳಿ – Kannada News | BJP MLA Ramesh jarkiholi happy for Missed KPCC President to Hi Brother Satish Jarkiholi

ದಾವಣಗೆರೆ, (ಜೂನ್ 14): ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದಲ್ಲಿ ರೇಸ್​​ನಲ್ಲಿ ಸತೀಶ್ ಜಾರಕಿಹೊಳಿಗೆ (Satish Jarkiholi) ಕೊನೆ ಕ್ಷಣದಲ್ಲಿ ಕೈತಪ್ಪಿದೆ. ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಈ ಎರಡರಲ್ಲಿ ಒಂದು ಆಫರ್ ನೀಡಲಾಗಿತ್ತು. ಆದ್ರೆ, ಸತೀಸ್ ಜಾರಕಿಹಿಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ಹೈಕಮಾಂಡ್ ಅಂತಿಮವಾಗಿ ಸತೀಶ್ ಜಾರಕಿಹೊಳಿ ಬದಲಿಗೆ ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟಕಟ್ಟಿದೆ. ಇನ್ನು ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ  ರಮೇಶ್ ಜಾರಕಿಹೊಳಿ (Ramesh Jarkiholi) ಖುಷಿ ಪಟ್ಟಿದ್ದಾರೆ.

ದಾವಣಗೆರೆಯಲ್ಲಿಂದು ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗದೇ ಇರುವುದು ಒಳ್ಳೆಯದಾಗಿದೆ. ಕಾರಣ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಆಧ್ಯಕ್ಷ ಆಗದೇ ಇರುವು ದೇವರೇ ಒಳ್ಳೆಯದನ್ನ ಮಾಡಿದ್ದಾನೆ. ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ನೀಡಿದ್ದರೇ ತೊಂದರೇ ನಮಗಾಗುತ್ತಿತ್ತು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿವಾದಾತ್ಮಕ ಹೇಳಿಕೆ: ಪ್ರೊ ಭಗವಾನ್ ವಿರುದ್ಧ ಕೇಸ್​ ಬುಕ್​​, ಕ್ಷಮೆ‌ ಕೇಳಬೇಕು ಎಂದ ಉಗ್ರಪ್ಪ – Kannada News | Controversial Remarks on Lord Rama: Case Filed Against Prof. K.S. Bhagawan, Ugrappa Demands Apology

ದಾವಣಗೆರೆ, ಜೂನ್​ 14: ‘ಶ್ರೀರಾಮ ದಶರಥನ ಮಗ ಅಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಕೆಎಸ್ ಭಗವಾನ್ (KS Bhagavan)​​ ವಿರುದ್ಧ ದಾವಣಗೆರೆ (davanagere) ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆಯ ಹರಿಹರ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ದೂರು ನೀಡಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು

  • ಶ್ರೀರಾಮನ ಬಗ್ಗೆ ಪ್ರೊ ಕೆಎಸ್ ಭಗವಾನ್​ ಅವಹೇಳನಕಾರಿ ಹೇಳಿಕೆ
  • ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ
  • ಪ್ರೊ ಕೆಎಸ್ ಭಗವಾನ್​​ ವಿರುದ್ಧ ಪ್ರಕರಣ ದಾಖಲು

ಸದ್ಯ ಹರಿಹರ ಗ್ರಾಮಾಂತರ ಪೊಲೀಸರು ಪ್ರೊ. ಕೆ.ಎಸ್. ಭಗವಾನ್​ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಂ 196(1)(a) ಮತ್ತು 299ರ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜನರ ಬಳಿ ಕ್ಷಮೆ‌ ಕೇಳಬೇಕು: ಮಾಜಿ ಸಂಸದ ವಿಎಸ್ ಉಗ್ರಪ್ಪ ಆಗ್ರಹ

ಇನ್ನು ವಿಚಾರವಾಗಿ ಬಾಗಲಕೋಟೆಯಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರತಿಕ್ರಿಯಿಸಿದ್ದು, ಭಗವಾನ್ ಅವರು ವಯಸ್ಸಿನ ಕಾರಣ‌ವೊ, ತಿಕ್ಕಲುತನವೊ ಗೊತ್ತಿಲ್ಲ. ಏನೇನೋ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅವರನ್ನು ನಾನು ಅನೇಕ ಸಾರಿ ಇಗ್ನೋರ್‌ ಮಾಡಬೇಕು ಅಂತಿದ್ದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬಗ್ಗೆ ಕೆಟ್ಟ ರೀತಿ ಮಾತಾಡಿದ್ದಾನೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ. ಭಗವಾನ್ ಅಂತ‌ ಹೆಸರು ಇಟ್ಟುಕೊಂಡು ಮನಸಾ ಇಚ್ಛೆ ಮಾತಾಡುತ್ತಾನೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ‘ಶ್ರೀರಾಮ ದಶರಥನ ಮಗ ಅಲ್ಲ’: ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರೊ. ಭಗವಾನ್

ಗಾಂಧೀಜಿ ಬಯಸಿದ್ದು ಗಾಂಧಿ ರಾಜ್ಯವಲ್ಲ, ರಾಮರಾಜ್ಯ. ಗಾಂಧಿಗಿಂತ ದೊಡ್ಡ ಮನುಷ್ಯನಾ ನೀನು? ಸೋ ಕಾಲ್ಡ್ ಇಂಟಲೆಕ್ಚುವಲ್ ಅಂತ ತೋರಿಸಿಕೊಳ್ಳುತ್ತಿರುವ ಭಗವಾನ್ ಈ ರೀತಿ ಮಾತಾಡಬಾರದು. ವಾಲ್ಮೀಕಿ‌ ಸಮಾಜದ‌ ಮೇಲೆ ಸಿಟ್ಟಿದ್ದರೆ ಈ‌ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ನಮ ಭಾವನೆಗೆ ಧಕ್ಕೆ ಮಾಡಿದ್ದೀರಿ ಈ ದೇಶದ ಜನರ ಬಳಿ ಕ್ಷಮೆ‌ ಕೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.

ನಡೆದಿದ್ದೇನು?

ಜೂನ್ 9 ರಂದು ಹರಿಹರದ ‘ಪ್ರೊ. ಬಿ. ಕೃಷ್ಣಪ್ಪ ಮೈತ್ರಿವನ’ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರೊ. ಕೆ.ಎಸ್. ಭಗವಾನ್, ಶ್ರೀರಾಮನ ಜನನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನೀವು ಪೂಜೆ ಮಾಡುವ ಶ್ರೀರಾಮ ತನ್ನ ತಂದೆಗೆ ಹುಟ್ಟಿದವನಲ್ಲ. ರಾಜ ದಶರಥ ಪುತ್ರಕಾಮೇಷ್ಟಿ ಯಾಗ ಮಾಡಿದಾಗ, ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕಿತ್ತು. ರಾಣಿ ಪುರೋಹಿತರೊಂದಿಗೆ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ, ನಿಮ್ಮ ದೇವರು ಅಪ್ಪನಿಗೆ ಹುಟ್ಟಿದ ಮಗ ಅಲ್ಲ”. ಹೀಗೆ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup 2026: ಪಾಕ್ ವಿರುದ್ಧ ಅಗ್ರಸ್ಥಾನಕ್ಕೇರುವ ಸನಿಹದಲ್ಲಿ ದೀಪ್ತಿ ಶರ್ಮಾ

Source link

Video: ಮೊದಲ ಬಾರಿಗೆ ಕ್ಯಾಬ್ ಬುಕ್ ಮಾಡಿದ ತಾಯಿ, ಗೆದ್ದಂತೆ ಸಂಭ್ರಮಿಸಿದ ಮಗಳು – Kannada News | Mother learns to book a cab under daughter’s guidance

ಹೆತ್ತವರು (parents) ತಮ್ಮ ಮಕ್ಕಳಿಗೆ ಜೀವನ ಅನುಭವಗಳನ್ನು ಹೇಳಿ ಕೊಡುತ್ತಾರೆ. ಮಕ್ಕಳ ಯಶಸ್ಸು, ಸಾಧನೆಯನ್ನು ಕಂಡು ಖುಷಿ ಪಡುತ್ತಾರೆ. ಆದರೆ ಈ ಮಕ್ಕಳು ಕೂಡ ತಮ್ಮ ತಾಯಿ ತಂದೆಗೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಬಳಕೆ ಹೇಗೆ ಮಾಡುವುದೆಂದು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಹಿಳೆಯೊಬ್ಬಳು ತನ್ನ ಮಗಳ ಸಹಾಯದಿಂದ ಕ್ಯಾಬ್ ಬುಕ್ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು , ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಮಾಲಿನಿವ್ಲಾಗ್ಸ್ (malini_ki_duniya) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಇತ್ತೀಚೆಗೆ ಅಮ್ಮ ತನಗಾಗಿ ಕ್ಯಾಬ್ ಬುಕ್ ಮಾಡುವುದು ಹೇಗೆಂದು ಕಲಿತರು. ಅಂದಿನಿಂದ ಅವರನ್ನು ತಡೆಯುವವರು ಯಾರಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಬುಕಿಂಗ್ ಅಪ್ಲಿಕೇಶನ್ ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿದ್ದಾಳೆ. ಮಗಳು ಪ್ರತಿ ಹಂತದಲ್ಲೂ ತನ್ನ ತಾಯಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಂತಹ ಅದ್ಭುತ ಕ್ಷಣ. ನನ್ನ ತಾಯಿ ಈಗಷ್ಟೇ ಕ್ಯೂಆರ್ ಕೋಡ್‌ಗಳನ್ನು ಬಳಸಿ ಹೇಗೆ ಪಾವತಿಸಬೇಕೆಂದು ಕಲಿತರು ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸದ್ದನ್ನು ಕಲಿಯುವುದರಲ್ಲಿ ಇರುವ ಖುಷಿಯೇ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಓಡುವ ಕುದುರೆ ಪ್ರತಿಮೆ ಮನೆಯಲ್ಲಿ ಇಡುವ ಮುನ್ನ ಈ ವಿಷಯ ತಿಳಿದಿರಲಿ – Kannada News | Vastu Secrets: Running Horse Statue’s Power for Growth and Positive Vibes at Home

ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಆ ಪೈಕಿ ‘ಓಡುವ ಕುದುರೆಯ ಪ್ರತಿಮೆ’ಗೆ (Running Horse Statue) ವಾಸ್ತು ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪ್ರಗತಿ, ನಿರಂತರ ಬೆಳವಣಿಗೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ನೋಡಲಾಗುತ್ತದೆ. ಇದೇ ಕಾರಣಕ್ಕಾಗಿ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಇದನ್ನು ಮನೆಯಲ್ಲಿ ಅಥವಾ ಕಚೇರಿಯ ಮೇಜಿನ ಮೇಲೆ ಇಡಲು ಇಷ್ಟಪಡುತ್ತಾರೆ. ಈ ಪ್ರತಿಮೆಯನ್ನು ಇಡಬೇಕಾದ ಸರಿಯಾದ ದಿಕ್ಕು ಮತ್ತು ಅದರಿಂದ ಸಿಗುವ ಅದ್ಭುತ ಪ್ರಯೋಜನಗಳ ವಿವರ ಇಲ್ಲಿದೆ.

ಪ್ರತಿಮೆಯನ್ನು ಇಡಲು ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಓಡುವ ಕುದುರೆಯ ಪ್ರತಿಮೆಯನ್ನು ಇಡಲು ದಕ್ಷಿಣ ದಿಕ್ಕು (South Direction) ಅತ್ಯಂತ ಶ್ರೇಷ್ಠ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಅಥವಾ ಕಚೇರಿಯ ದಕ್ಷಿಣ ಭಾಗದಲ್ಲಿ ಈ ವಿಗ್ರಹವನ್ನು ಸ್ಥಾಪಿಸುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗುವುದರ ಜೊತೆಗೆ ವ್ಯವಹಾರದಲ್ಲಿ ಅಪಾರ ಯಶಸ್ಸು ಲಭಿಸುತ್ತದೆ ಎಂಬ ಬಲವಾದ ನಂಬಿಕೆಯಿದೆ.

ನಿರಂತರ ಸ್ಫೂರ್ತಿ ಮತ್ತು ಕಠಿಣ ಪರಿಶ್ರಮದ ಸಂಕೇತ:

ನಿಮ್ಮ ಮನೆಯಲ್ಲಿ ಓಡುವ ಕುದುರೆಯ ಪ್ರತಿಮೆಯನ್ನು ಇಟ್ಟುಕೊಂಡರೆ, ಅದು ನಿಮ್ಮನ್ನು ಸದಾ ಜಾಗೃತರನ್ನಾಗಿಡುತ್ತದೆ ಮತ್ತು ನಿಮ್ಮ ಗುರಿಗಳತ್ತ ಮುನ್ನಡೆಯಲು ನಿರಂತರವಾಗಿ ತಳ್ಳುತ್ತದೆ. ದಿನವಿಡೀ ಓಡುವ ಕುದುರೆಯನ್ನು ನೋಡುವುದರಿಂದ, ಜೀವನದಲ್ಲಿ ಯಶಸ್ಸು ಸಾಧಿಸಲು ನಾವು ಸದಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂಬ ಅಂಶ ನಮಗೆ ನೆನಪಾಗುತ್ತಿರುತ್ತದೆ. ಇದೇ ಕಾರಣಕ್ಕೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯುನ್ನತ ಯಶಸ್ಸಿನ ಸಂಕೇತವಾಗಿ ನೋಡಲಾಗುತ್ತದೆ.

ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ:

ವಾಸ್ತು ಶಾಸ್ತ್ರದ ಪ್ರಕಾರ, ಕುದುರೆಯನ್ನು ಕೇವಲ ಪ್ರಾಣಿಯನ್ನಾಗಿ ನೋಡದೆ ಶಕ್ತಿ, ಧೈರ್ಯ, ವೇಗ ಮತ್ತು ಶೌರ್ಯದ ಸಾಕಾರ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಕುದುರೆಯ ಪ್ರತಿಮೆಯನ್ನು ನಮ್ಮ ಆಸುಪಾಸಿನಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮೊಳಗಿನ ಆತ್ಮವಿಶ್ವಾಸ ಹಠಾತ್ತಾಗಿ ಹೆಚ್ಚಾಗುತ್ತದೆ. ಇದು ಮನಸ್ಸಿನಲ್ಲಿರುವ ನಕಾರಾತ್ಮಕ ಯೋಚನೆಗಳನ್ನು ದೂಡಿ, ಸಕಾರಾತ್ಮಕ ಚಿಂತನೆಗಳು ಮೂಡುವಂತೆ ಮಾಡುತ್ತದೆ.

ವೃತ್ತಿಜೀವನದಲ್ಲಿ ಅಪ್ರತಿಮ ಬೆಳವಣಿಗೆ:

ಈ ವಿಗ್ರಹವನ್ನು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳುವುದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ, ಯಾವುದೇ ಪ್ರಯತ್ನದಲ್ಲೂ ಸುಲಭವಾಗಿ ಯಶಸ್ಸು ಸಿಗುತ್ತದೆ ಎಂದು ವಾಸ್ತು ತಜ್ಞರು ನಂಬುತ್ತಾರೆ. ಇದರ ಧನಾತ್ಮಕ ಉಪಸ್ಥಿತಿಯು ಜೀವನದಲ್ಲಿ ನಿಂತುಹೋದ ಪ್ರಗತಿಯ ಹಾದಿಯನ್ನು ಮರಳಿ ತೆರೆಯುತ್ತದೆ ಮತ್ತು ಆರ್ಥಿಕ ಸುಧಾರಣೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮನೆಯ ವಾತಾವರಣದಲ್ಲಿ ಪಾಸಿಟಿವ್ ವೈಬ್ಸ್:

ವಾಸ್ತು ಪ್ರಕಾರ, ಓಡುವ ಕುದುರೆಯ ಪ್ರತಿಮೆಯು ಮನೆಯಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿಯನ್ನು ಹೊರದಬ್ಬಿ, ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಅದ್ಭುತವಾಗಿ ಸಹಾಯ ಮಾಡುತ್ತದೆ. ಇದು ಮನೆಗೆ ಉತ್ತಮ ಕಂಪನಗಳನ್ನು ತರುವ ಮೂಲಕ ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ನೆಲೆಸುವಂತೆ ಮಾಡುತ್ತದೆ.

ಪ್ರತಿಮೆ ಇಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು:

ಕುದುರೆ ಪ್ರತಿಮೆಯನ್ನು ಇಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮುರಿದ, ಬಿರುಕು ಬಿಟ್ಟ ಅಥವಾ ಹಾನಿಗೊಳಗಾದ ಕುದುರೆ ಪ್ರತಿಮೆಯನ್ನು ಇಡಲೇಬಾರದು, ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ಪ್ರತಿಮೆಯನ್ನು ಯಾವಾಗಲೂ ಧೂಳು ಹಿಡಿಯದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ರೂಮಿಗೆ ಪ್ರವೇಶಿಸಿದ ತಕ್ಷಣ ಸುಲಭವಾಗಿ ಕಣ್ಣಿಗೆ ಕಾಣುವಂತಹ ಪ್ರಮುಖ ಸ್ಥಳದಲ್ಲಿ ಇಡುವುದು ಅತ್ಯಂತ ಸೂಕ್ತವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪು ಸುಂದರಿಗೆ ಮತ್ತೆ ಡಿಮ್ಯಾಂಡ್! ಟೊಮೆಟೊ ಬೆಳೆದ ರೈತರಿಗೆ ಜಾಕ್‌ಪಾಟ್ – Kannada News | Tomato Price Hike Boosts Farmer Income as Demand Rises at APMC Markets

ಕೋಲಾರ, ಜೂನ್​ 14: ವಾತಾವರಣದಲ್ಲಿನ ಏರುಪೇರು, ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಸೇರಿದಂತೆ ಹಲವು ಕಾರಣಗಳಿಂದ ಬೇಡಿಕೆ ಕಳೆದುಕೊಂಡಿದ್ದ ‘ಕಿಚನ್ ಕ್ವೀನ್’ ಟೊಮೆಟೊಗೆ (Tomato) ಇದೀಗ ಮತ್ತೆ ಭರ್ಜರಿ ಬೇಡಿಕೆ ಬಂದಿದೆ. ಕೋಲಾರ (kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅಬ್ಬರ ಜೋರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ ಮತ್ತೆ ಶುರುವಾಯ್ತು ಟೊಮೆಟೊ ಸೀಸನ್​​
  • 15 ಕೆಜಿ ಟೊಮೆಟೊಗೆ 500 ರಿಂದ 550 ರೂ.ಗೆ ಮಾರಾಟ
  • ರೈತರ ಮುಖದಲ್ಲಿ ಮಂದಹಾಸ

ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ ಏರಿಕೆ

ಕಳೆದ ಎರಡು ಮೂರು ತಿಂಗಳಿಂದ ಟೊಮೆಟೊ ಬೆಲೆ ಕುಸಿದಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರಣದಿಂದ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮ ನೆಲಕಚ್ಚಿದ ಪರಿಣಾಮ ಟೊಮೆಟೊ ಬೆಲೆ ಕೂಡ ಕುಸಿದಿತ್ತು. ಅದರ ಜೊತೆಗೆ ಮಿತಿಮೀರಿದ ಬಿಸಿಲ ತಾಪಮಾನದಿಂದಾಗಿ ಟೊಮೆಟೊ ಬೆಳೆ ಹಾಳಾಗಿ ರೈತರು ಕಂಗಾಲಾಗಿದ್ದರು. ಆದರೆ ಈಗ ಟೊಮೆಟೊ ಸೀಸನ್ ಶುರುವಾಗಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಬೆಲೆ ಏರಿಕೆ ಕಂಡಿದೆ.

ಒಂದು ಮೂಟೆ ಟೊಮೆಟೊಗೆ 550 ರೂ.ಗೆ ಏರಿಕೆ

10ರಿಂದ 15 ರೂ ಬೆಲೆ ಇದ್ದ ಕೆಜಿ ಟೊಮೆಟೊ ಇದೀಗ 30 ರಿಂದ 40 ರೂ.ಗೆ ಏರಿಕೆಯಾಗಿದೆ. ಅಂದರೆ 150 ರಿಂದ 200 ರೂ ಇದ್ದ 15 ಕೆಜಿಯ ಒಂದು ಮೂಟೆ ಟೊಮೆಟೊ ಈಗ 500 ರಿಂದ 550 ರೂ.ಗೆ ಏರಿಕೆಯಾಗಿದೆ. ಪರಿಣಾಮ ಟೊಮೆಟೊ ಬೆಳೆದ ರೈತರು ಪುಲ್​ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ

ಹೊರ ರಾಜ್ಯಗಳಲ್ಲಿ ಸ್ಥಳೀಯವಾಗಿ ಟೊಮೆಟೊ ಸಿಗುತ್ತಿದ್ದ ಕಾರಣ ಬೆಲೆ ತೀವ್ರ ಕುಸಿತ ಕಂಡಿತ್ತು. ಆದರೆ ಈಗ ಹೊರ ರಾಜ್ಯಗಳಿಂದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಬಂದಿದೆ. ದೆಹಲಿ, ನಾಸಿಕ್​, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್​, ಹರಿಯಾಣ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಜೂನ್​ನಿಂದ ಸೆಪ್ಟೆಂಬರ್​ವರೆಗೂ ಕೋಲಾರದಲ್ಲಿ ಟೊಮೆಟೊ ಸುಗ್ಗಿ ಹಬ್ಬ ಶುರುವಾಗಲಿದೆ. ಕಾರಣ ಹೊರ ರಾಜ್ಯಗಳಲ್ಲಿ ಮಳೆಯ ಪರಿಣಾಮ ಸ್ಥಳೀಯವಾಗಿ ಟೊಮೆಟೊ ಬೆಳೆ ಇರುವುದಿಲ್ಲ. ಹಾಗಾಗಿ ದೇಶದ ಬಹುತೇಕ ಎಲ್ಲಾ ರಾಜ್ಯಗಳ ವ್ಯಾಪಾರಸ್ಥರು ಟೊಮೆಟೊ ಖರೀದಿಗೆ ಕೂಡ ಕೋಲಾರದ ಮಾರುಕಟ್ಟೆ ಕಡೆ ಮುಖ ಮಾಡುತ್ತಾರೆ, ಹಾಗಾಗಿ ಸಹಜವಾಗಿಯೇ ಇಲ್ಲಿ ಬೇಡಿಕೆ ಹೆಚ್ಚಾಗುತ್ತದೆ.

ಟೊಮೆಟೊ ಬೆಲೆ ಸಾವಿರ ಗಡಿದಾಟುವ ಸಾಧ್ಯತೆ

ಇನ್ನು ಮೊದಲೆಲ್ಲಾ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯುವ ಟೊಮೆಟೊ ರಪ್ತಾಗುತ್ತಿತ್ತು. ಆದರೆ ಈಗ ದಕ್ಷಣ ಕರ್ನಾಟಕದ ಭಾಗದ ಎಲ್ಲಾ ಜಿಲ್ಲೆಯಲ್ಲಿ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲಾ ಜಿಲ್ಲೆಗಳಿಂದಲೂ ಟೊಮೆಟೊ ತಂದು ರೈತರು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ಉತ್ತಮ ಇಳುವರಿ ಕೂಡ ಬಂದರೆ ರೈತರಿಗೆ ಈ ಬಾರಿ ಟೊಮೆಟೊ ಸುಗ್ಗಿ ಅಂದರೆ ತಪ್ಪಾಗೋದಿಲ್ಲ. ಇನ್ನು ಎರಡು ಮೂರು ತಿಂಗಳು ಟೊಮೆಟೊಗೆ ಉತ್ತಮ ಬೆಲೆ ಇರಲಿದ್ದು, ಮುಂದಿನ ಒಂದು ತಿಂಗಳಲ್ಲಿ ಬೆಲೆ ಸಾವಿರ ಗಡಿದಾಟುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಟೊಮೆಟೊ ವ್ಯಾಪಾರಿಯಾದ ಮುನಿರೆಡ್ಡಿ.

ಇದನ್ನೂ ಓದಿ: ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ!

ಒಟ್ಟಾರೆ ಟೊಮೆಟೊ ರೈತರಿಗೆ ಅದೃಷ್ಟದ ಬೆಳೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಳ್ಳೆಯ ಬೆಲೆ ಬಂದರೆ ಅದೃಷ್ಟ, ಒಂದು ವೇಳೆ ಬೆಲೆ ಕೈಕೊಟ್ಟರೆ ಭಾರಿ ನಷ್ಟ ಎನ್ನುವಂತಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದಿನ ಎರಡು ಮೂರು ತಿಂಗಳು ಟೊಮೆಟೊ ಬೆಳೆದ ರೈತರಿಗೆ ಬಂಪರ್ ಲಾಭ ಸಿಗೋದ್ರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:59 pm, Sun, 14 June 26

Source link

ಸಂಗೀತ ಮಾಡುವಾಗ ಮೇಣದ ಬತ್ತಿ ಹಚ್ಚುವುದೇಕೆ ಎಆರ್ ರೆಹಮಾನ್ – Kannada News | Why AR Rahman light candle while composing music

ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman), ಹಲವು ದಶಕಗಳಿಂದಲೂ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಬಹಳ ವರ್ಸಟೈಲ್ ಸಂಗೀತ ನಿರ್​ದೇಶಕರಾಗಿರುವ ರೆಹಮಾನ್, ಭಾರತ ಕಂಡ ಈ ವರೆಗಿನ ಅತ್ಯುತ್ತಮ ಸಂಗೀತ ನಿರ್ದೇಶಕ ಎಂದು ಖುದ್ದು ಜಾವೇದ್ ಆಖ್ತರ್ ಬಣ್ಣಿಸಿದ್ದಾರೆ. ಅದಕ್ಕೆ ಕಾರಣವೇನು ಎಂದು ಸಹ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅಂದಹಾಗೆ ಈ ವರೆಗೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿರುವ ಎಆರ್ ರೆಹಮಾನ್, ಪ್ರತಿಬಾರಿ ಸಂಗೀತ ನೀಡುವಾಗಲೂ ಕೋಣೆಯಲ್ಲಿ ಮೇಣದಬತ್ತಿಯೊಂದನ್ನು ಹಚ್ಚುತ್ತಾರಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ…

ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ತಂತ್ರಜ್ಞಾನ ಬಳಸಿದ ಮೊದಲ ಸಂಗೀತ ನಿರ್ದೇಶಕ ಎಆರ್ ರೆಹಮಾನ್. ರೆಹಮಾನ್ ಅವರ ಸ್ಟುಡಿಯೋನಲ್ಲಿ ಕಂಪ್ಯೂಟರ್‌ಗಳು, ಸಿಂಥಸೈಜರ್‌ಗಳು ಮತ್ತು ಅತ್ಯಾಧುನಿಕ ರೆಕಾರ್ಡಿಂಗ್ ಯಂತ್ರಗಳಿಂದ ತುಂಬಿರುತ್ತದೆ. ಈ ‘ಯಾಂತ್ರಿಕ’ ವಾತಾವರಣದಲ್ಲಿ ಸ್ವಲ್ಪ ‘ನೈಜ’ ಅಥವಾ ನೈಸರ್ಗಿಕ ಅಂಶ ಇರಲಿ ಎಂದು ಅವರು ಮೇಣದಬತ್ತಿಯನ್ನು ಬೆಳಗುತ್ತಾರಂತೆ ಎಆರ್ ರೆಹಮಾನ್. ಆ ಉರಿಯುವ ಜ್ಯೋತಿಯು ಯಂತ್ರಗಳ ಜಗತ್ತಿನ ಹೊರತಾದ ಜೀವಂತಿಕೆಯನ್ನು ನೆನಪಿಸುತ್ತದೆ ಎಂಬ ಕಾರಣಕ್ಕೆ ರೆಹಮಾನ್ ಅವರು ಮೇಣದ ಬತ್ತಿ ಉರಿಸುತ್ತಾರಂತೆ.

ಅಂದಹಾಗೆ ಈ ಮೇಣದ ಬತ್ತಿ ಉರಿಸಲು ಕೇವಲ ಒಂದು ಕಾರಣವಿಲ್ಲ ಬದಲಿಗೆ ಹಲವು ಕಾರಣಗಳಿವೆ. ರೆಹಮಾನ್ ಅವರಿಗೆ ತಮ್ಮ ಸ್ಟುಡಿಯೋ ಕೇವಲ ಕೆಲಸ ಮಾಡುವ ಜಾಗವಲ್ಲ, ಅದು ಒಂದು ರೀತಿಯ ಆರಾಧನಾ ತಾಣ ಮತ್ತು ಧ್ಯಾನ ಕೇಂದ್ರ. ಮೇಣದಬತ್ತಿಯ ಬೆಳಕು ಅಲ್ಲಿನ ವಾತಾವರಣವನ್ನು ಶಾಂತಗೊಳಿಸಿ, ಆಧ್ಯಾತ್ಮಿಕ ಕೇಂದ್ರೀಕೃತವಾಗಲು ಸಹಾಯ ಮಾಡುತ್ತದೆ. ಇಂತಹ ಮನಸ್ಥಿತಿಯಲ್ಲಿ ಸಂಗೀತ ಸಂಯೋಜನೆ ಮಾಡುವುದರಿಂದ ಅದಕ್ಕೆ ಒಂದು ವಿಶಿಷ್ಟ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆ.

ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ರೆಹಮಾನ್ ಅವರು ಹಗಲಿನ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ರಾತ್ರಿಯ ನಿಶ್ಯಬ್ಧತೆಯು ಸೃಜನಶೀಲತೆಗೆ ಹೆಚ್ಚು ಸಹಕಾರಿ. ಮೇಣದಬತ್ತಿಯ ಮಂದ ಬೆಳಕು ಆ ಶಾಂತ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಿ, ಸಂಗೀತದ ಆಳವಾದ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂಬುದು ಅವರ ನಂಬಿಕೆ. ಕೆಲವೊಮ್ಮೆ ಅವರು ಈ ಮೇಣದಬತ್ತಿಯನ್ನು ಒಂದು ನಿರ್ದಿಷ್ಟ ಗುರಿಯ ಸಂಕೇತವಾಗಿ ಬಳಸುತ್ತಾರೆ. ಮೇಣದಬತ್ತಿ ಉರಿಯುವ ಅವಧಿಯೊಳಗೆ ಒಂದು ನಿರ್ದಿಷ್ಟ ಕೆಲಸವನ್ನು ಅಥವಾ ಸಂಗೀತದ ಭಾಗವನ್ನು ಪೂರ್ಣಗೊಳಿಸುವ ಗುರಿಯನ್ನು ಅವರು ಇಟ್ಟುಕೊಳ್ಳುತ್ತಾರೆ ಎಂದು ಆಶಾ ಭೋಂಸ್ಲೆ ಈ ಹಿಂದೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ – Kannada News | Modi in Nice: Bharat Innovates 2026 Summit Unites Indian Startups & Global Investors

ನೀಸ್ (ಫ್ರಾನ್ಸ್), ಜೂನ್ 14: ಐದು ದಿನಗಳ ಐರೋಪ್ಯ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್​ನ ಎರಡನೇ ಅತಿದೊಡ್ಡ ನಗರಿ ನೀಸ್​ಗೆ ಆಗಮಿಸಿದ್ದಾರೆ. ಇಲ್ಲಿ ಅವರು ಹೂಡಿಕೆದಾರರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ನೀಸ್ ನಗರದಲ್ಲಿ ನಡೆಯಲಿರುವ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಸಮಾವೇಶದ ಉದ್ಘಾಟನೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾಗತಿಕ ಹೂಡಿಕೆದಾರರು ಹಾಗೂ ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು. ಭಾರತದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಮಹತ್ವದ ಸಮಾವೇಶ ಇದಾಗಿದೆ. ಪ್ರಧಾನಿ ನಡೆಸಿದ ಈ ಸಂವಾದದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಉಪಸ್ಥಿತರಿದ್ದರು.

ಪ್ರಮುಖ ಉದ್ಯಮಿಗಳ ಭಾಗವಹಿಸುವಿಕೆ

ಪ್ರಧಾನಿ ಮೋದಿ ಅವರೊಂದಿಗೆ ನಡೆದ ಈ ಸಂವಾದದಲ್ಲಿ ಓಯೋ ರೂಮ್ಸ್ (OYO Rooms) ಸಿಇಒ ರಿತೇಶ್ ಅಗರ್ವಾಲ್ ಮತ್ತು ಪ್ರಮುಖ ಭಾರತೀಯ ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಜಾಗತಿಕ ಹೂಡಿಕೆದಾರರು ಹಾಗೂ ನಾವೀನ್ಯತೆ (Innovation) ವಲಯದ ಮುಖಂಡರು ಭಾಗವಹಿಸಿದ್ದರು. ಭಾರತ ಮತ್ತು ಫ್ರಾನ್ಸ್ ನಡುವೆ ಪ್ರಸ್ತುತ ನಡೆಯುತ್ತಿರುವ ‘ಇಂಡೋ-ಫ್ರೆಂಚ್ ನಾವೀನ್ಯತೆ ವರ್ಷ’ದ (India-France Year of Innovation) ಭಾಗವಾಗಿ ಈ ಸಮಾವೇಶ ಆಯೋಜನೆಗೊಂಡಿದ್ದು, ಎರಡೂ ದೇಶಗಳ ತಾಂತ್ರಿಕ ಪಾಲುದಾರಿಕೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ಸಮಾವೇಶದ ಅಜೆಂಡಾಗಳು

ಕೇಂದ್ರ ಶಿಕ್ಷಣ ಸಚಿವಾಲಯದ ಉಸ್ತುವಾರಿಯಲ್ಲಿ ಜೂನ್ 14 ರಿಂದ ಜೂನ್ 16 ರವರೆಗೆ ನಡೆಯಲಿರುವ ಈ ಮೂರು ದಿನಗಳ ಬೃಹತ್ ಸಮಾವೇಶದಲ್ಲಿ ಹಲವು ನಿರೀಕ್ಷೆಗಳು ಮತ್ತು ಕಾರ್ಯಕ್ರಮಗಳಿವೆ. ಭಾರತದ 120 ಕ್ಕೂ ಹೆಚ್ಚು ಮುಂಚೂಣಿಯ ‘ದೀಪ್-ಟೆಕ್’ (Deep-tech) ಸ್ಟಾರ್ಟ್‌ಅಪ್‌ಗಳು ತಮ್ಮ ತಂತ್ರಜ್ಞಾನವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಿವೆ.

ಭಾರತದ ಪ್ರತಿಷ್ಠಿತ ಐಐಟಿಗಳು (IITs) ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಜಗತ್ತಿನ ವಿವಿಧ ದೇಶಗಳ 500 ಕ್ಕೂ ಹೆಚ್ಚು ಪ್ರಮುಖ ಹೂಡಿಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹಾಗೂ ಜಾಗತಿಕ ಸಿಇಒಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸೆಮಿಕಂಡಕ್ಟರ್‌ಗಳು, ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ (Space Tech), ಬಯೋಟೆಕ್ನಾಲಜಿ, ಹೆಲ್ತ್‌ಕೇರ್ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ 13 ಪ್ರಮುಖ ಭವಿಷ್ಯದ ತಂತ್ರಜ್ಞಾನ ವಲಯಗಳ ಮೇಲೆ ಈ ಸಮಾವೇಶ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಮ್ಯಾಕ್ರಾನ್ ಜೊತೆ ದ್ವಿಪಕ್ಷೀಯ ಮಾತುಕತೆ

ನಿನ್ನೆ ಶನಿವಾರವಷ್ಟೇ ಫ್ರಾನ್ಸ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು, ಭಾರತ್ ಇನ್ನೋವೇಟ್ಸ್ ಸಮಾವೇಶವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ತದನಂತರ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಹಾಗೂ ರಕ್ಷಣೆ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚಿಸಲಿದ್ದಾರೆ.

ಐದು ದಿನಗಳ ಯುರೋಪ್ ಪ್ರವಾಸದ ಮೊದಲ ಹಂತವಾಗಿ ಫ್ರಾನ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಇಲ್ಲಿನ ಕಾರ್ಯಕ್ರಮಗಳ ಬಳಿಕ ಸ್ಲೋವಾಕಿಯಾ ದೇಶಕ್ಕೆ ತೆರಳಲಿದ್ದಾರೆ. ತದನಂತರ ಜೂನ್ 16-17 ರಂದು ಎವಿಯನ್‌ನಲ್ಲಿ ನಡೆಯಲಿರುವ ಜಿ-7 (G7) ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತೆ ಫ್ರಾನ್ಸ್‌ಗೆ ಮರಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link