Category Archives: Blog

Your blog category

ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ – Kannada News | This is why Gilli Nata did not meet Darshan after Bigg Boss Kannada 12

ಕಳೆದ ವರ್ಷ ಬಿಡುಗಡೆ ಆದ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ (Gilli Nata) ಅವರು ಒಂದು ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆದಾಗ ಗಿಲ್ಲಿ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಬಿಗ್ ಬಾಸ್ ಮುಗಿದ ಬಳಿಕ ದರ್ಶನ್ (Darshan) ಅವರನ್ನು ಗಿಲ್ಲಿ ನಟ ಭೇಟಿ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆ ಬಗ್ಗೆ ಸ್ವತಃ ಗಿಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ನಾನು ಡೆವಿಲ್ ಸಿನಿಮಾ ನೋಡಿಲ್ಲ. ಶೀಘ್ರದಲ್ಲೇ ನಾನು ಅದನ್ನು ನೋಡುತ್ತೇನೆ. ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾ ಎಂಬುದನ್ನು ನಾನು ಕೇಳಿ ನೋಡಿದೆ. ಪ್ರಯತ್ನ ಮಾಡಿದೆ. ಆದರೆ ಸದ್ಯಕ್ಕೆ ಅವಕಾಶ ಇಲ್ಲ ಅಂತ ಗೊತ್ತಾಯಿತು. ಅವರನ್ನು ನಾನು ಅಲ್ಲಿ ನೋಡುವುದಕ್ಕಿಂತ ಮನೆಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಳ್ಳಬೇಕು’ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟಿಸಿದ ಬಿಸಿಸಿಐ – Kannada News | Indian Cricket Player Contracts: BCCI Abolishes A+ Grade, New Men’s and Women’s List

ಟಿ20 ವಿಶ್ವಕಪ್ ನಡುವೆ ಬಿಸಿಸಿಐ (BCCI), ಪುರುಷ ಹಾಗೂ ಮಹಿಳಾ ತಂಡಗಳ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದೆ. ಅದರಂತೆ ಪುರುಷರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಒಟ್ಟು 30 ಆಟಗಾರರು ಸೇರಿದ್ದರೆ, ಮಹಿಳೆಯರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ 21 ಆಟಗಾರ್ತಿಯರು ಸೇರಿದ್ದಾರೆ. ಆದರೆ ಈ ಬಾರಿ ಗ್ರೇಡ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಬಿಸಿಸಿಐ, A+ ಗ್ರೇಡ್ ಅನ್ನು ರದ್ದುಗೊಳಿಸಿದೆ. ಉಳಿದಂತೆ A,B,C ಗ್ರೇಡ್​ನಲ್ಲಿ 30 ಆಟಗಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಎ ಗ್ರೇಡ್​ನಲ್ಲಿ ಮೂವರು ಆಟಗಾರರು ಸೇರಿದ್ದರೆ, ಬಿ ಗ್ರೇಡ್‌ನಲ್ಲಿ 11 ಆಟಗಾರರು ಮತ್ತು ಸಿ ಗ್ರೇಡ್‌ನಲ್ಲಿ 16 ಆಟಗಾರರು ಸೇರಿದ್ದಾರೆ.

ಈ 3 ಆಟಗಾರರಿಗೆ ಎ ಗ್ರೇಡ್

ಎ ಗ್ರೇಡ್‌ನಲ್ಲಿ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್, ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಆಲ್​ರೌಂಡರ್ ರವೀಂದ್ರ ಜಡೇಜಾ ಸೇರಿದ್ದಾರೆ. ಅದರಂತೆ ಈ ಮೂವರು ಆಟಗಾರರು ಅತ್ಯಧಿಕ ಸಂಭಾವನೆ ಪಡೆಯಲಿದ್ದಾರೆ. ಬಿ ಗ್ರೇಡ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್ ಸೇರಿದ್ದಾರೆ.

ರೋಹಿತ್, ಕೊಹ್ಲಿಗೆ ಹಿಂಬಡ್ತಿ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಹಿಂದೆ ಎ+ ಗ್ರೇಡ್‌ನಲ್ಲಿದ್ದರು. ಆದಾಗ್ಯೂ, ಇಬ್ಬರೂ ಆಟಗಾರರು ಟಿ20 ಮತ್ತು ಟೆಸ್ಟ್ ಸ್ವರೂಪಗಳಿಂದ ನಿವೃತ್ತರಾಗಿದ್ದು, ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಇದರ ಪರಿಣಾಮವಾಗಿ ಈ ಇಬ್ಬರಿಗೆ ಹಿಂಬಡ್ತಿ ನೀಡಲಾಗಿದೆ.

ಪುರುಷರ ಕೇಂದ್ರ ಒಪ್ಪಂದ ಪಟ್ಟಿ

ಗ್ರೇಡ್ ಎ: ಶುಭ್​ಮನ್ ಗಿಲ್, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ

ಗ್ರೇಡ್ ಬಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್.

ಗ್ರೇಡ್ ಸಿ: ತಿಲಕ್ ವರ್ಮಾ, ಅಕ್ಸರ್ ಪಟೇಲ್, ಶಿವಂ ದುಬೆ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಆಕಾಶ್ ದೀಪ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಧ್ರುವ್ ಜುರೈಲ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ಮತ್ತು ಸಾಯಿ ಸುದರ್ಶನ್

ಮಹಿಳಾ ತಂಡದ ಹೊಸ ಕೇಂದ್ರ ಗುತ್ತಿಗೆ ಪಟ್ಟಿ

ಗ್ರೇಡ್-ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ.

ಗ್ರೇಡ್-ಬಿ: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ.

ಗ್ರೇಡ್-ಸಿ: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Mon, 9 February 26

Source link

ಪ್ರಧಾನಿ ಮೋದಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ – Kannada News | BJP Files Police Complaint Over Congress Flex Targeting PM Modi in Bengaluru, Row Over ‘Trump Fear’ Remark

ಬೆಂಗಳೂರು, ಫೆಬ್ರವರಿ 9: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಾಕಿದ್ದ ಕೆಲವು ಫ್ಲೆಕ್ಸ್‌ಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಫ್ಲೆಕ್ಸ್‌ಗಳಲ್ಲಿ, ‘ಟ್ರಂಪ್‌ಗೆ ಹೆದರಿದ ಮೋದಿ’ ಮತ್ತು ‘ಚೀನಾಗೆ ಹೆದರಿದ ಮೋದಿ’ ಎಂದು ಫ್ಲೆಕ್ಸ್​​ಗಳಲ್ಲಿ ನಮೂದಿಸಲಾಗಿತ್ತು. ಮೋದಿ ಅವರ ನಡೆಯಿಂದ ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಫ್ಲೆಕ್ಸ್‌ಗಳ ವಿರುದ್ಧ ಬಿಜೆಪಿ ಆಕ್ರೋಶಗೊಂಡಿದ್ದು, ಪೊಲೀಸ್ ದೂರು ದಾಖಲಿಸಿದೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಮಾಜಿ ಎಂಎಲ್ಸಿ ತುಳಸಿ ಮುನಿರಾಜು ಗೌಡ ಸೇರಿದಂತೆ ಕೆಲವು ಬಿಜೆಪಿ ನಾಯಕರು ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿಗೆ ಈ ಕುರಿತು ಔಪಚಾರಿಕ ದೂರು ಸಲ್ಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು? – Kannada News | Lakkundi Nagavi Link: Gadag Hidden Gold, Siddhi Purusha Caves and Ancient Mysteries

ಗದಗ, ಫೆಬ್ರವರಿ 09: ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ ಪುರುಷರಿಗೆ ಹಾಲು ಕೊಟ್ಟು ಬರ್ತಿತ್ತಂತೆ. ಈ ರೋಚಕ, ವಿಸ್ಮಯ ಚಿನ್ನದ ನಿಧಿಯ ಗುಹೆಯೊಳಗೆ ನಿಜಕ್ಕೂ ರಹಸ್ಯ ಅಡಗಿದೆ.

ಬಗೆದಷ್ಟು ಬಯಲಾಗುತ್ತಿವೆ ಐತಿಹಾಸಿಕ ಲಕ್ಕುಂಡಿ ರಹಸ್ಯ

ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲೆಯಲ್ಲಿನ ಹತ್ತಾರು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿಯನ್ನ ರಾಜಧಾನಿ ಮಾಡಿಕೊಂಡು ಅರಸರು ಆಳ್ವಿಕೆ ಮಾಡಿದ್ದರು. ಅಪಾರ ಪ್ರಮಾಣದಲ್ಲಿ ಚಿನ್ನವನ್ನ ಸಂಗ್ರಹ ಮಾಡಿದ್ದರು. ಟಂಕಸಾಲೆಯಲ್ಲಿ ನಾಣ್ಯಗಳ ಮುದ್ರಣ ಮಾಡುತ್ತಿದ್ದರು. ಅರಸ ಮನೆತನಗಳು ಕಪ್ಪತ್ತಗುಡ್ಡದಿಂದ ಚಿನ್ನ ತಗೆದಯುತ್ತಿದ್ದರು. ರಾಜ, ಮಹರಾಜ ಆಳ್ವಿಕೆಯ ಸಮಯದಲ್ಲಿ ಇಂದ್ರನ ಅಮರಾವತಿಗಿಂತಲು ಸಂಪತ್ತು ಇತ್ತು ಎಂದು ಇತಿಹಾಸಗಾರು ಹೇಳುತ್ತಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

ಈ ಇತಿಹಾಸಿ ಸತ್ಯ ಅನ್ನೋದು ಒಂದೊಂದಾಗಿ ಸಾಬೀತಾಗುತ್ತ ಹೊರಟಿದೆಯಾ ಅನ್ನೋ ಅನುಮಾನ ಬರುತ್ತಿದೆ. ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಂಪತ್ತು ಆಯ್ತು, ಕಪ್ಪತ್ತುಡ್ಡದ ನಿಗೂಢ ಗುಹೆಗಳ ಸಂಪತ್ತು ಆಯ್ತು. ಐತಿಸಹಾಸಿ ದೇವಸ್ಥಾನಗಳ ಸಂಪತ್ತು ರಹಸ್ಯ ಬಯಲಾಯ್ತು. ಆದರೂ ಜಿಲ್ಲೆಯ ಸಿರಿಸಂಪತ್ತಿನ ರಹಸ್ಯ ಮಾತ್ರ ಇನ್ನೂ ಅಂತ್ಯವಾಗಿಲ್ಲ.

ಇದೀಗ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೂ ನಾಗಾವಿ ಗುಡ್ಡದ ಗುಹೆಗೆ ಸಂಬಂಧ ಇದೆಯಂತೆ. ಗದಗ ತಾಲೂಕಿನ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ದೇವಸ್ಥಾನದ ಬಳಿಯ ಗುಡ್ಡದಲ್ಲಿ ನಿಗೂಢ, ವಿಸ್ಮಯ ಗುಹೆ ಇದೆ. ಈ ಗುಹೆಯಲ್ಲಿ ರಹಸ್ಯ ಬಾವಿ ಇದೆ. ಆ ಬಾವಿಯಲ್ಲಿ ಅರಿಶಿನ ಹಾರ, ನಿಂಬೆಹಣ್ಣು ಬಿಟ್ಟರೆ ಅದು ಲಕ್ಕುಂಡಿಯ ಸಿದ್ದರ ಬಾವಿಯಲ್ಲಿ ಗೋಚರ ಆಗುತ್ತೆ. ಲಕ್ಕುಂಡಿಯ ಮುಸ್ಕಿನಬಾವಿಗೂ ನಾಗಾವಿ ಗುಹೆಗೆ ಲಿಂಕ್ ಇದೆ. ಗುಹೆಯಲ್ಲಿ ಅಪಾರ ಪ್ರಮಾಣ ಚಿನ್ನದ ನಿಧಿ ಇದೆ. ನಿಧಿಗೆ ಸರ್ಪಕಾವಲು ಕಾಯುತ್ತಿದೆ ಎಂದು ಈ ಹಿಂದೊಮ್ಮೆ ಗುಹೆಯಲ್ಲಿ ಹೋಗಿ ಬಂದಿರುವ ಗ್ರಾಮದ ಹಿರಿಯರು ಗೋವಿಂದರಡ್ಡಿ ಮರಡ್ಡಿ ಅವರ ಮಾತು.

ಸಿದ್ದಿ ‌ಪುರಷರಿಗೆ ಹಾಲು ನೀಡುತ್ತಿದ್ದ ಕಾಮಧೇನು

ನಾಗಾವಿಯ ನಿಗೂಢ ಗುಹೆ. ಇಲ್ಲಿ ಸಿದ್ಧಿಪುರುಷರು ವಾಸವಾಗಿದ್ರಂತೆ. ನಿತ್ಯ ನಸುಕಿನ ಜಾವ ಭಜನೆ, ಜಾಗಟೆ, ಶಂಕ ನಾದದ ಶಬ್ದ ಗ್ರಾಮಕ್ಕೆ ಕೇಳಿಸುತ್ತಿತ್ತಂತೆ. ಆಗ ಸಿದ್ಧರು ಭಜನೆ ಮಾಡ್ತಾಯಿದ್ದಾರೆ. ನಸುಕಾಯಿತು ಎಲ್ಲರೂ ಏಳಿ ಅಂತ ಹೇಳ್ತಾಯಿದ್ರಂತೆ. ಆ ಗುಹೆಯಲ್ಲಿ ಬಾವಿ ಇದೆ ಬಾವಿಯ ನೀರಿನಿಂದ ದೀಪ ಹಚ್ಚಿ ತಪಸ್ಸು ಮಾಡುತ್ತಿದ್ರು. ಗುಹೆಯಲ್ಲಿದ್ದ ಸಿದ್ದರಿಗೆ ನಿತ್ಯ ಒಂದು ಹಸು ಹೋಗಿ ಹಾಲು ನೀಡಿ ಬರುತ್ತಿತ್ತು.

ಆ ಹಸು ಮನೆಗೆ ಹೋದಾಗ ಹಾಲು ಕೊಡುತ್ತಿರಲಿಲ್ಲ. ಹೀಗಾಗಿ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ ಕೋರಿಯವರ ಮನೆತನದ ವ್ಯಕ್ತಿ ಒಂದು ದಿನ ಹಸುವಿನೊಂದಿಗೆ ಗುಹೆಗೆ ಹೋಗಿದ್ದಾನೆ. ಅಲ್ಲಿಯ ಸಿದ್ದರನ್ನ ನೋಡಿ ನಾನು ಇಲ್ಲೇ ಇರ್ತಿನಿ ಅಂದಿದ್ದಾನೆ. ಹಸು ಮರಳಿ ಮನೆ ಬಂದಿದೆ ಆದರೆ ದನ ಕಾಯಲು ಹೋದ ಮನುಷ್ಯ ಮಾತ್ರ ಮರಳಿ ಬಂದಿಲ್ಲ. ಆ 20 ವರ್ಷದ ಬಳಿಕ ತಾಯಿನ್ನ ನೋಡಬೇಕೆಂದು ಸಿದ್ದರ ಕೇಳಿ ಹೋಗ್ತಾನೆ. ಸಿದ್ದರು ಇಲ್ಲಿಯ ಸಂಪತ್ತು ತೆಗೆದುಕೊಂಡು ಹೋಗಬೇಡ. ಸಂಪತ್ತು ಇರುವ ಬಗ್ಗೆ ಯಾರಿಗೂ ಹೇಳ ಬೇಡ ಅಂದಿದ್ರಂತೆ. ಆತ ಮನೆಗೆ ಹೋದಾಗ ತಾಯಿ ಗುರುತು ಹಿಡಿದಿಲ್ಲ. ಹೀಗಾಗಿ ಗ್ರಾಮದ ಕೆಲವರಿಗೆ ತಾನು ಗುಹೆಯಲ್ಲಿ ಇದೆ ಅಂತಾ ಹೇಳಿದ್ದಾನೆ. ಗುಹೆಯ ರಹಸ್ಯದ ಬಗ್ಗೆಯೂ ಗ್ರಾಮದಲ್ಲಿ ಮಾಹಿತಿ ನೀಡಿದ್ದಾನೆ. ನಂತರ ಗುಹೆಗೆ ಬಂದಿದ್ದಾನೆ ಆದರೆ ಸಿದ್ದರು ಗುಹೆಗೆ ಬಂದ್ರೆ ಮರಳಿ ನಿಂಗೆ ಹೋಗಲು ಆಗೋದಿಲ್ಲವೆಂದಿದ್ದಾರೆ.‌ ಆ ಗುಹೆಯಲ್ಲಿ ಹೋದ ವ್ಯಕ್ತಿ ಮರಳಿ ಬಂದಿಲ್ವಂತೆ. ಹೀಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ಲಕ್ಕುಂಡಿ ಗ್ರಾಮಕ್ಕೆ ಹಾಗೂ ನಾಗಾವಿ ಗ್ರಾಮಕ್ಕೆ ಲಿಂಕ್ ಇದೆ. ಒಟ್ಟಿನಲ್ಲಿ ಸಿದ್ದಿ ಪುರುಷರು ವಾಸ ಮಾಡಿರುವ ಗುಹೆಯಲ್ಲಿ ಅಪಾರ ಪ್ರಮಾಣದ ನಿಧಿ ಇರುವ ಅನುಮಾನ ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎವರಿಒನ್ ವಾಂಟ್ಸ್ ದಿಸ್: ಒಂದೇ ಸಿನಿಮಾದಲ್ಲಿ ಹಲವು ಭಾಷೆ; ಆದರೆ ಡಬ್ಬಿಂಗ್ ಅಲ್ಲ – Kannada News | Everyone Wants This movie getting ready for release in multiple languages

ಈಗ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಬರುತ್ತಿವೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಆದರೆ ಒಂದೇ ಸಿನಿಮಾದಲ್ಲಿ ಹಲವು ಭಾಷೆ ಬಳಸಿ ಅದನ್ನು ದೇಶಾದ್ಯಂತ ಬಿಡುಗಡೆ ಮಾಡುವ ಪ್ಲ್ಯಾನ್ ಸಿದ್ಧವಾಗಿದೆ. ಹೌದು, ‘ಎವರಿಒನ್ ವಾಂಟ್ಸ್ ದಿಸ್’ (Everyone Wants This) ಸಿನಿಮಾ ತಂಡ ಈ ರೀತಿ ಮಾಡಲು ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಯುವ ಉದ್ಯಮಿ ನೇಹೇಶ್ ಪೋಲ್ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.

‘ಎವರಿಒನ್ ವಾಂಟ್ಸ್ ದಿಸ್’ ಸಿನಿಮಾದ ಮೂಲಕ ಚಿತ್ರಪ್ರೇಮಿಗಳಿಗೆ ಒಂದು ಸುಂದರ ಸಿನಿಮ್ಯಾಟಿಕ್ ಅನುಭವ ನೀಡಬೇಕು ಎಂಬುದು ನೇಹೇಶ್ ಪೋಲ್ ಅವರ ಆಸೆ. ಈ ಸಿನಿಮಾವನ್ನು ತಮ್ಮದೇ ‘ರ‍್ಯಾಡಿಕಲ್ ಕಾನ್ಸೆಪ್ಟ್ಸ್ ಸ್ಡುಡಿಯೋ’ ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಹಾಗೂ ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ನಾಯಕನಾಗಿಯೂ ನಟಿಸುತ್ತಿದ್ದಾರೆ.

ಬಹುಭಾಷೆಯಲ್ಲಿ ಮೂಡಿಬಂದ ‘ಎವರಿಒನ್ ವಾಂಟ್ಸ್ ದಿಸ್’ ಸಿನಿಮಾದ ಹಾಡು:

ಸಾಗರ್‌ ಮೂರ್ತಿ ಅವರು ಛಾಯಾಗ್ರಹಣ ಮತ್ತು ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಕೆ. ಬಾಲಸುಬ್ರಮಣ್ಯಂ ಅವರು ಕೆಲಸ ಮಾಡಿದ್ದಾರೆ. ದೀಪಿಕಾ ಮಾಚ್‌ಮೊಂಡ ಅವರ ಕಲಾ ನಿರ್ದೇಶನ, ಶ್ರೀಧರ್‌ ವೀರ್ ಅವರ ವಸ್ತ್ರ ವಿನ್ಯಾಸ ಈ ಸಿನಿಮಾಗಿದೆ. ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಹಾಡಿನ ಬಿಡುಗಡೆ ಮಾಡಲಾಯಿತು.

ರೇಣುಕಾಂಬ ಸ್ಟುಡಿಯೋದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ನಿರ್ದೇಶಕ, ನಟ ನೇಹೇಶ್ ಪೋಲ್, ‘2026ರಲ್ಲಿ 3 ಸಿನಿಮಾಗಳನ್ನು ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಈಗಿನ ಸಿನಿಮಾವು 90 ನಿಮಿಷವಾಗಿರುತ್ತದೆ. ದುಡ್ಡಿನ ಆಸೆಗಾಗಿ ವಜ್ರ ದರೋಡೆ ಮಾಡಿದಾಗ, ಅದರಿಂದ ಆಗುವ ಅನಾಹುತಗಳನ್ನು ಕಾಮಿಡಿ ಮತ್ತು ಥ್ರಿಲ್ಲರ್ ಮಾದರಿಯಲ್ಲಿ ಮನರಂಜನೆಯೊಂದಿಗೆ ತೋರಿಸಲಾಗುತ್ತಿದೆ’ ಎಂದರು.

ಇದನ್ನೂ ಓದಿ: ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಅಕ್ಷರಾ ಸುರೇಶ್ ಅವರು ನಾಯಕಿಯಾಗಿ ನಟಿಸಿರುವುದು ಮಾತ್ರವಲ್ಲದೇ ಸಿನಿಮಾಗೆ ಕಥೆ ಬರೆದು ಕ್ರಿಯೇಟೀವ್ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ‘ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಸಾಹಿತ್ಯ ಬಳಸಿಕೊಳ್ಳಲಾಗಿದೆ. ಒಟ್ಟು ಆರು ಹಾಡುಗಳು ಇರಲಿದೆ. ಪೇಪರ್ ವರ್ಕ್‌ನಂತೆಯೇ ಚಿತ್ರೀಕರಣ ನಡೆಸಿ, ಅಲ್ಲಿಯೇ ಸಂಕಲನವನ್ನು ಒಟ್ಟಿಗೆ ಮಾಡಲಾಗುವುದರಿಂದ ಸಮಯ ಉಳಿತಾಯವಾಗುತ್ತದೆ’ ಎಂದು ಅಕ್ಷರಾ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು – Kannada News | Delhi Police registered FIR over circulation of former Army chief MM Naravane’s unpublished book

ನವದೆಹಲಿ, ಫೆಬ್ರವರಿ 9: ಈ ಬಾರಿಯ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತದ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಸಂಗತಿಗಳನ್ನು ಚರ್ಚಿಸಲು ಅನುಮತಿ ಕೋರಿದ್ದರು. ಅದಕ್ಕೆ ಅನುಮತಿ ಸಿಗದೇ ಇದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಎಂ.ಎಂ. ನರವಾಣೆ ಅವರ ಆ ಅಪ್ರಕಟಿತ ಆತ್ಮಚರಿತ್ರೆಯನ್ನು ಪಿಡಿಎಫ್​ ರೂಪದಲ್ಲಿ ಆನ್​ಲೈನ್​ನಲ್ಲಿ ಎಲ್ಲೆಡೆ ಹಂಚಲಾಗುತ್ತಿದೆ ಎಂಬ ಕುರಿತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಪೂರ್ವ-ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳುವ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಹರಡುತ್ತಿರುವ ಮಾಹಿತಿಯನ್ನು ಗಮನಿಸಿದ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಪುಸ್ತಕದ ಪ್ರಕಟಣೆಗೆ ಅಗತ್ಯವಾದ ಅನುಮತಿಯನ್ನು ಸಂಬಂಧಿತ ಅಧಿಕಾರಿಗಳಿಂದ ಇನ್ನೂ ಪಡೆಯಬೇಕಾಗಿದೆ ಎಂದು ಕೂಡ ಆನ್‌ಲೈನ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಮೆಸರ್ಸ್ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಶೀರ್ಷಿಕೆಯ ಪುಸ್ತಕದ ಪಿಡಿಎಫ್ ಆವೃತ್ತಿಯು ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಲವು ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಸಿದ್ಧಪಡಿಸಿದ ಪುಸ್ತಕದ ಮುಖಪುಟವನ್ನು ಮಾರಾಟಕ್ಕೆ ಬಂದಿರುವಂತೆ ಪ್ರದರ್ಶಿಸಿವೆ. ಇದು ಕಾನೂನು ಉಲ್ಲಂಘನೆಯಾಗಿದೆ.

ಇನ್ನೂ ಅನುಮೋದನೆ ಪಡೆಯದ ಪ್ರಕಟಣೆಯನ್ನು ಒಳಗೊಂಡ ಈ ಸೋರಿಕೆ ಅಥವಾ ಉಲ್ಲಂಘನೆಯ ಬಗ್ಗೆ ವಿವರವಾದ ಮತ್ತು ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಈಗ ನಡೆಯುತ್ತಿದೆ ಮತ್ತು ವಿಷಯವು ಸಾರ್ವಜನಿಕ ವಲಯಕ್ಕೆ ಹೇಗೆ ತಲುಪಿತು ಎಂಬುದನ್ನು ಗುರುತಿಸಲು ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹಿ ಸ್ನೇಹಿತ; ಕೇಂದ್ರ ಸಚಿವ ರವನೀತ್ ಬಿಟ್ಟುಗೆ ರಾಹುಲ್ ಗಾಂಧಿ ಲೇವಡಿ, ಸಂಸತ್ ಹೊರಗೆ ವಾಗ್ವಾದ

ಫೆಬ್ರವರಿ 4ರಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಚರಿತ್ರೆಯನ್ನು ಉಲ್ಲೇಖಿಸಿ, 2020ರಲ್ಲಿ ಭಾರತ-ಚೀನಾ ಸಂಘರ್ಷದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯನ್ನು ಬಿಟ್ಟುಕೊಟ್ಟರು ಮತ್ತು ಜನರಲ್‌ಗೆ ಅದರ ಹೊಣೆಯನ್ನು ವರ್ಗಾಯಿಸಿದರು ಎಂದು ಹೇಳಿದ್ದರು. ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಆ ಆತ್ಮಚರಿತ್ರೆಯನ್ನು ಎತ್ತಿ ಹಿಡಿದು ಮೋದಿ ಸರ್ಕಾರ ಬೇರೆ ರೀತಿಯಲ್ಲಿ ಹೇಳಿಕೊಂಡರೂ ಈ ‘ಪುಸ್ತಕ’ ಅಸ್ತಿತ್ವದಲ್ಲಿದೆ ಎಂದು ಭಾರತದ ಯುವಕರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಉಖ್ರುಲ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ – Kannada News | Fresh violence erupts in Manipur Ukhrul Over 20 Houses Set Ablaze in Litan Village

ಉಖ್ರುಲ್, ಫೆಬ್ರವರಿ 9: ಮಣಿಪುರದಲ್ಲಿ (Manipur) ನೂತನ ಮುಖ್ಯಮಂತ್ರಿಯಾಗಿ ಖೇಮ್ಚಂದ್ ಸಿಂಗ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉಖ್ರುಲ್ ಜಿಲ್ಲೆಯ ಲಿಟಾನ್ ಗ್ರಾಮದಲ್ಲಿ ತಂಗ್ಕುಲ್ ನಾಗಾ ಸಮುದಾಯಕ್ಕೆ ಸೇರಿದ 20 ಮನೆಗಳಿಗೆ ಕುಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾನುವಾರ ತಂಗ್ಕುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ಈ ಗ್ರಾಮದಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದೇಶದ ಪ್ರಕಾರ, 2 ಸಮುದಾಯಗಳಾದ ತಂಗ್ಖುಲ್ ಮತ್ತು ಕುಕಿ ನಡುವೆ ಶಾಂತಿ ಮತ್ತು ನೆಮ್ಮದಿಗೆ ಭಂಗವಾಗುವ ಸಾಧ್ಯತೆಯಿರುವುದರಿಂದ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರದೇಶದಲ್ಲಿ ಒಟ್ಟಾರೆ ಭದ್ರತೆಯನ್ನು ಪುನಃಸ್ಥಾಪಿಸಲು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ಚುವರಿ ಭದ್ರತಾ ಪಡೆಗಳನ್ನು ಕೋರಿದ್ದಾರೆ. ಇದರಲ್ಲಿ ಅಸ್ಸಾಂ ರೈಫಲ್ಸ್‌ನ 4 ಕಾಲಮ್‌ಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 2 ಹೆಚ್ಚುವರಿ ಕಂಪನಿಗಳು, 8 ಬಿಹಾರ ರೆಜಿಮೆಂಟ್‌ನ 4 ಕಾಲಮ್‌ಗಳು ಮತ್ತು 4ನೇ ಮಹಾರ್ ರೆಜಿಮೆಂಟ್‌ನ ಸಿಬ್ಬಂದಿ ಸೇರಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ

ಶನಿವಾರ ರಾತ್ರಿ ಲಿಟಾನ್ ಗ್ರಾಮದಲ್ಲಿ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ 7ರಿಂದ 8 ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ನಂತರ ಈ ಪ್ರದೇಶದಲ್ಲಿ ಮೊದಲು ಹಿಂಸಾಚಾರ ಭುಗಿಲೆದ್ದಿತು. ಮೊದಲು ಈ ಸಮಸ್ಯೆಯನ್ನು ಸಂತ್ರಸ್ತರ ಕಡೆಯವರು ಮತ್ತು ಲಿಟಾನ್ ಸರೀಖಾಂಗ್ ಮುಖ್ಯಸ್ಥರ ನಡುವೆ ಇತ್ಯರ್ಥಪಡಿಸಲಾಯಿತು. ಎರಡೂ ಕಡೆಯವರು ಮಾತುಕತೆಯ ಮೂಲಕ ವಿಷಯವನ್ನು ಪರಿಹರಿಸಲು ಒಪ್ಪಿಕೊಂಡವು. ಭಾನುವಾರ ಸಭೆ ನಿಗದಿಯಾಗಿತ್ತು, ಆದರೆ ಅದು ನಡೆಯಲಿಲ್ಲ.

ಅದರ ಬದಲು ಹತ್ತಿರದ ಸಿಕಿಬಂಗ್‌ನ ಗ್ರಾಮಸ್ಥರು ಲಿಟಾನ್ ಸರೀಖಾಂಗ್ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿದರು. ಲಿಟಾನ್ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಮೂಲಕ ಹಾದುಹೋಗುವಾಗ ಗುಂಪು ಹಲವಾರು ಸುತ್ತು ಗುಂಡು ಹಾರಿಸಿತ್ತು. ಭಾನುವಾರ ರಾತ್ರಿ 2 ಬುಡಕಟ್ಟು ಗುಂಪುಗಳು ಗ್ರಾಮದಲ್ಲಿ ತೀವ್ರವಾದ ಕಲ್ಲು ತೂರಾಟ ನಡೆಸಿದ್ದರಿಂದ ನಿಷೇಧಾಜ್ಞೆಗಳನ್ನು ವಿಧಿಸಲಾಯಿತು.

ಇದನ್ನೂ ಓದಿ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಇಬ್ಬರು ಸೈನಿಕರ ಸಾವು

ನಿನ್ನೆ ಮಧ್ಯರಾತ್ರಿ ಲಿಟಾನ್ ಸರೀಖಾಂಗ್‌ನಲ್ಲಿ ಕುಕಿ ಉಗ್ರಗಾಮಿಗಳು ತಂಗ್ಖುಲ್ ನಾಗಾ ಸಮುದಾಯದ ಸದಸ್ಯರಿಗೆ ಸೇರಿದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹತ್ತಿರದ ಪ್ರದೇಶದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಕೆಲವು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಇದರಿಂದ 21 ಮನೆಗಳು ಸುಟ್ಟುಹೋಗಿವೆ, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಿರಂತರ ಹಿಂಸಾಚಾರದ ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇಂದು ಬೆಳಿಗ್ಗೆ ಮಣಿಪುರದ ಮುಖ್ಯಮಂತ್ರಿ ಖೇಮ್‌ಚಂದ್ ಸಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಸಂಯಮ ಮತ್ತು ಶಾಂತಿಗಾಗಿ ಮನವಿ ಮಾಡಿದರು. “ಉಖ್ರುಲ್ ಜಿಲ್ಲೆಯಲ್ಲಿ ನಡೆದ ದುರದೃಷ್ಟಕರ ಲಿಟಾನ್ ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಬೇಗನೆ ಚೇತರಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ವೈದ್ಯಕೀಯ ಸಹಾಯವನ್ನು ಭರವಸೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.

“ತಪ್ಪು ತಿಳುವಳಿಕೆಯಿಂದ ಉಂಟಾದ ಈ ಘಟನೆ ಈಗ ನಿಯಂತ್ರಣದಲ್ಲಿದೆ. ಎಲ್ಲಾ ಸಮುದಾಯಗಳು ಸಂಯಮದಿಂದ ವರ್ತಿಸಬೇಕು, ಕಾನೂನಿನ ನಿಯಮವನ್ನು ಎತ್ತಿಹಿಡಿಯಬೇಕು ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ದರೋಡೆ ಭೇದಿಸಿದ ಪೊಲೀಸ್​: ದಿಢೀರ್ ಶ್ರೀಮಂತರಾಗಲು ಹೋಗಿ ಜೈಲು ಪಾಲು – Kannada News | Bangaluru: Madanayakanahalli Police Crack Ramdev Jewelers Robbery; 5 Arrested for Gunpoint Heist

ನೆಲಮಂಗಲ, ಫೆಬ್ರವರಿ 09: ಅದು ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ದರೋಡೆ (Robbery). ಗನ್ ಹಿಡಿದು ಚಿನ್ನಾಭರಣದ ಅಂಗಡಿಗೆ ನುಗಿದ್ದ ಗ್ಯಾಂಗ್ ಸಿಕ್ಕಸಿಕ್ಕ ಒಡವೆಗಳನ್ನ ದೋಚಿ ಪರಾರಿಯಾಗಿದ್ದರು. ಆರೋಪಿಗಳ ಬೆನ್ನತ್ತಿದ್ದ ಮಾದನಾಯಕನಹಳ್ಳಿ ಪೊಲೀಸರು ಘಟನೆ ನಡೆದ ಕೇವಲ ಏಳು ದಿನದಲ್ಲಿ ಹೆಡೆಮುರಿ ಕಟ್ಟಿದ್ದಾರೆ (Arrest).

ಬಂಧಿತರು

ಅನೂಪ್ ಸಿಂಗ್, ರವಿ, ಅಂಕಿತ್, ಅರುಣ್, ಅನೂಪ್ ರಾಮ್​​ ಬಂಧಿತರು. ಬಂಧಿತರೆಲ್ಲಾ ರಾಜಸ್ತಾನಿ ಮೂಲದವರು. ದರೋಡೆ ನಂತರ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ದರೋಡೆ ಪ್ರಕರಣಗಳು: ಬೆಂಗಳೂರಿನಲ್ಲಿ ಗನ್​ ತೋರಿಸಿ ಬಂಗಾರದ ಅಂಗಡಿ ಲೂಟಿ

ಕಳೆದ ವಾರವಷ್ಟೇ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪುರದ ರಾಮ್ ದೇವ್ ಜ್ಯವೆಲರ್ಸ್​​ನಲ್ಲಿ ಈ ಭಯಾನಕ ದರೋಡೆ ನಡೆದಿತ್ತು. ದರೋಡೆಕೋರರು ಗನ್ ತೋರಿಸಿ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸದ್ಯ ಐವರು ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲಿಸರು ಬಂಧಿಸಿದ್ದಾರೆ.

ದರೋಡೆ ಪಕ್ಕಾ ಪ್ಲ್ಯಾನ್​​ 

ಇನ್ನು ಈ ಆರೋಪಿಗಳಲ್ಲಿ ಅಂಕಿತ್ ಮಾದನಾಯಕನಹಳ್ಳಿ ವಾಸವಿದ್ದ. ಕಚೋರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಎಷ್ಟು ದಿನ ಈ ರೀತಿ ಜೀವನ ಸಾಗಿಸುವುದು ಎಂದು ನಿರ್ಧರಿಸಿದ್ದ ಆತ ದರೋಡೆ ಪ್ಲ್ಯಾನ್​​ ಮಾಡಿದ್ದ. ಇತನಿಗೆ ರವಿ ಎಂಬಾತ ಸಾಥ್​ ನೀಡಿದ್ದ. ರವಿ ರಾಜಸ್ಥಾನದಲ್ಲಿದ್ದು, ಆತನ ಬಳಿ ಪಿಸ್ತೂಲ್ ಕೂಡ ಇತ್ತು. ಇದನ್ನೇ ಬಂಡವಾಳ‌ ಮಾಡಿಕೊಂಡಿದ್ದ ಆರೋಪಿಗಳು ದರೋಡೆ ಮಾಡಲು ಪ್ಲ್ಯಾನ್ ಮಾಡಿದ್ದರು.

ಪ್ಲ್ಯಾನ ಪ್ರಕಾರ ಜನವರಿ 27ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ರಾಮ್ ದೇವ್ ಜ್ಯುವೆಲರ್ಸ್​​​ಗೆ ನುಗಿದ್ದ ದರೋಡೆಕೋರರು ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದರು. ಖದೀಮರ ಕೈಚಳಕ ಸಿಸಿಟಿ ಟಿವಿಯಲ್ಲಿ ಸೆರೆ ಆಗಿತ್ತು. ಇನ್ನು ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದರು.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ!

ಒಟ್ಟಿನಲ್ಲಿ ಆರೋಪಿಗಳ ಬೆನ್ನತ್ತಿದ್ದ ಮಾದನಾಯಕನಹಳ್ಳಿ ಪೊಲೀಸರು ಇದೀಗ ಎಲ್ಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನ ಕಸ್ಟಡಿಗೆ ಪಡೆದಿರುವ ಮಾದನಾಯಕಹಳ್ಳಿ ಪೊಲಿಸರು ವಿಚಾರಣೆ ನಡೆಸಿದ್ದಾರೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:46 pm, Mon, 9 February 26

Source link

ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು – Kannada News | Man from Bangalore behind Anthropic’s new AI product that effected the fall of Indian IT stocks

ಬೆಂಗಳೂರು, ಫೆಬ್ರುವರಿ 9: ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಐಟಿ ಸೆಕ್ಟರ್​ನ ವಿವಿಧ ಸ್ಟಾಕ್​ಗಳು ಕಳೆದ ಕೆಲ ದಿನಗಳಿಂದ ಬಹಳ ಹಿನ್ನಡೆ ಕಾಣುತ್ತಿವೆ. ನಿಫ್ಟಿ ಐಟಿ ಇಂಡೆಕ್ಸ್ ಇವತ್ತು ಸೋಮವಾರ ಪಾಸಿಟಿವ್ ಆಗಿದ್ದರೂ ಕಳೆದ ವಾರದಿಂದ ಶೇ. 7ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ. ಐಟಿ ಸ್ಟಾಕ್​ಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಬರೋಬ್ಬರಿ ಎರಡೂವರೆ ಟ್ರಿಲಿಯನ್ ರುಪಾಯಿಗಳಷ್ಟು ನಷ್ಟ ಆಗಿದೆ.

ಐಟಿ ಸ್ಟಾಕ್​ಗಳು ನಿರ್ದಿಷ್ಟವಾಗಿ ಕುಸಿಯಲು ಕಾರಣಗಳಿಲ್ಲದಿಲ್ಲ. ಎಐ ಟೆಕ್ನಾಲಜಿಯೇ ಈಗ ಭಾರತದ ಐಟಿ ಸೇವೆಗಳಿಗೆ ಮುಳುವಾಗುವಂತಿದೆ. ಇತ್ತೀಚೆಗೆ ಆದ ಎರಡು ಬೆಳವಣಿಗೆಗಳು ಐಟಿ ಸೆಕ್ಟರ್ ಬಗ್ಗೆ ಹೂಡಿಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡಿವೆ. ಒಂದು, ಆಂಥ್ರೋಪಿಕ್ ಎನ್ನುವ ಕಂಪನಿಯು ಹೊಸ ಆಟೊಮೇಶನ್ ಟೂಲ್​ಗಳನ್ನು ರೂಪಿಸಿದೆ. ಮತ್ತೊಂದು, ಪಲಂಟಿರ್ ಕಂಪನಿಯು ಎಸ್​ಎಪಿ ಅಳವಡಿಕೆಯನ್ನು ಬಹಳ ತ್ವರಿತವಾಗಿ ಮಾಡಬಲ್ಲ ಎಐ ಪ್ಲಾಟ್​ಫಾರ್ಮ್ ಅನ್ನು ಬಿಡುಗಡೆ ಮಾಡಿದೆ.

ಈ ಎರಡು ಬೆಳವಣಿಗೆಗಳು ಐಟಿ ಸರ್ವಿಸ್ ಉದ್ಯಮವನ್ನೇ ತಲ್ಲಣಗೊಳಿಸಿವೆ. ಹೆಚ್ಚಿನ ಐಟಿ ಪ್ರಾಜೆಕ್ಟ್​ಗಳಿಗೆ ಸಂಬಂಧ ಪಟ್ಟ ಬೆಳವಣಿಗೆಯೇ ಇದು. ಹೀಗಾಗಿ, ಐಟಿ ಸೆಕ್ಟರ್​ಗೆ ಷೇರು ಮಾರುಕಟ್ಟೆಯಲ್ಲಿ ಹಿನ್ನಡೆಯಾಗತೊಡಗಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಆಂಥ್ರೋಪಿಕ್ ಹಿಂದಿನ ರೂವಾರಿ ಬೆಂಗಳೂರು ವ್ಯಕ್ತಿ ರಾಹುಲ್ ಪಾಟೀಲ್

ಎಐ ಸ್ಟಾರ್ಟಪ್ ಆದ ಆಂಥ್ರೋಪಿಕ್ ಇದೀಗ ಹೊಸ ಕ್ಲಾಡ್ ಎಐ ಆವೃತ್ತಿ ಬಿಡುಗಡೆ ಮಾಡಿದೆ. ಎಐ ಏಜೆಮಂಟ್ ಆದ ಇದು ಬೆಕ್ಕಸ ಬೆರಗಾಗುವಂತಹ ಕೆಲಸಗಳನ್ನು ನಿರ್ವಹಿಸಬಲ್ಲುದು. ಯಾವುದೇ ಉದ್ಯಮವಾದರೂ, ಲೀಗಲ್ ಕಾಂಟ್ರಾಕ್ಟ್ ಅನ್ನು ಪರಾಮರ್ಶಿಸುವುದರಿಂದ ಹಿಡಿದು ಕೋಡ್ ಮ್ಯಾನೇಜ್ ಮಾಡುವುದು, ಡಾಕ್ಯುಮೆಂಟ್ ನಿರ್ವಹಿಸುವುವರೆಗೂ ಮನುಷ್ಯರ ನೆರವಿಲ್ಲದೇ ಪೂರ್ಣ ವರ್ಕ್​ಫ್ಲೋಗಳನ್ನು ನಿರ್ವಹಿಸಬಲ್ಲುದು.

ಆಂಥ್ರೋಪಿಕ್​ನ ಈ ಅದ್ಬುತ ಎಐ ಕೋವರ್ಕರ್ ಅಥವಾ ಎಐ ಏಜೆಂಟ್​ನ ಅಭಿವೃದ್ಧಿ ಹಿಂದೆ ರಾಹುಲ್ ಪಾಟೀಲ್ ಇದ್ದಾರೆ. 2025ರ ಅಕ್ಟೋಬರ್ ತಿಂಗಳಲ್ಲಷ್ಟೇ ರಾಹುಲ್ ಪಾಟೀಲ್ ಅವರು ಆಂಥ್ರೋಪಿಕ್​ಗೆ ಸಿಟಿಓ ಆಗಿ ನೇಮಕವಾಗಿದ್ದರು. ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಪಾಟಲ್ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಮೈಕ್ರೋಸಾಫ್ಟ್, ಓರೇಕಲ್, ಅಮೇಜಾನ್ ಕೈನೆಸಿಸ್, ಸ್ಟ್ರೈಪ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಂತರ ಆಂಥ್ರೋಪಿಕ್​ಗೆ ಸಿಟಿಒ ಆಗಿ ಸೇರಿದ್ದಾರೆ. ಬಹಳ ಕ್ಷಿಪ್ರಗತಿಯಲ್ಲಿ ಕ್ಲಾಡ್ ಎಐನ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಅನೇಕ ಐಟಿ ಸರ್ವಿಸ್ ಕಂಪನಿಗಳ ಬ್ಯುಸಿನೆಸ್​ಗೆ ಖೋತಾ ಆಗುವಂತೆ ಮಾಡಿದ್​ದಾರೆ.

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಪಲಂಟಿರ್​ನ ಎಐ ಪ್ರಾಡಕ್ಟ್ ಬಲು ಉಪಯುಕ್ತ

ಪಲಂಟಿರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಎಐ ಟೂಲ್ ಉದ್ಯಮ ವಲಯದ ಗಮನ ಸೆಳೆದಿದೆ. ಕಂಪನಿಗಳಿಗೆ ಎಸ್​ಎಪಿ ಮೈಗ್ರೇಶನ್ ಮಾಡಲು ಸಾಮಾನ್ಯವಾಗಿ ಕೆಲ ವರ್ಷಗಳೇ ಆಗುತ್ತವೆ. ಆದರೆ, ಪಲಂಟಿರ್​ನ ಎಐ ಟೂಲ್​ನಿಂದ ಎಸ್​ಎಪಿ ಮೈಗ್ರೇಶನ್ ಅನ್ನು ಕೆಲವೇ ವಾರಗಳಲ್ಲಿ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Teddy Day 2026 Date: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ – Kannada News | Valentine’s Week 2026: Know about the history and significance of Teddy Day

ಪ್ರತಿ ವರ್ಷ ಫೆಬ್ರವರಿ 10 ರಂದು ಅಂದರೆ ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನದಂದು ಟೆಡ್ಡಿ ಡೇ (Teddy Day) ಆಚರಿಸಲಾಗುತ್ತದೆ. ಈ ದಿನವು ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲಿರುವ ಒಂದು ವಿಶೇಷ ಸಂದರ್ಭವಾಗಿದೆ, ಟೆಡ್ಡಿ ಬೇರ್‌ಗಳು ಮುದ್ದಾದ ಉಡುಗೊರೆ ಮಾತ್ರವಲ್ಲ, ಭಾವನೆಗಳು ಮತ್ತು ಭಾವನೆಗಳ ಸಂಕೇತವೂ ಆಗಿದೆ. ಹಾಗಾಗಿ ಹೆಚ್ಚಿನವರು ತಮ್ಮ ನೆಚ್ಚಿನ ವ್ಯಕ್ತಿಗೆ ಈ ದಿನದಂದು ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ವ್ಯಾಲೆಂಟೈನ್‌ ವೀಕ್‌ನಲ್ಲಿ ಟೆಡ್ಡಿ ಡೇ ಆಚರಿಸುವುದೇಕೆ? ಈ ವಿಶೇಷ ದಿನದ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಟೆಡ್ಡಿ ಡೇ ಏಕೆ ಆಚರಿಸಲಾಗುತ್ತದೆ?

ಟೆಡ್ಡಿ ಬೇರ್‌ಗಳು ಪ್ರೀತಿ, ವಾತ್ಸಲ್ಯ ಮತ್ತು ಬಾಲ್ಯದ ಮುಗ್ಧತೆಯನ್ನು ಪ್ರತಿನಿಧಿಸುವಂತ ಒಂದು ಸಾಫ್ಟ್‌ ಟಾಯ್‌ ಅಂತಾನೇ ಹೇಳಬಹುದು. ಇದು ಒತ್ತಡವನ್ನು ಕಡಿಮೆ ಮಾಡಲು, ಸಂತೋಷವನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ದಂಪತಿಗಳು ಮತ್ತು ಪ್ರೇಮಿಗಳು ಟೆಡ್ಡಿಯನ್ನು ಪ್ರೀತಿ ಮತ್ತು ಕಾಳಜಿಯ ಸಂಕೇತವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಪ್ರೇಮಿಗಳು ಟೆಡ್ಡಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಟೆಡ್ಡಿ ಡೇ ಇತಿಹಾಸವೇನು?

ನವೆಂಬರ್ 14, 1902 ರಂದು, ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್, ಮಿಸ್ಸಿಸ್ಸಿಪ್ಪಿಯ ಕಾಡಿಗೆ ಬೇಟೆಯಾಡಲು ಹೋಗಿದ್ದರು. ಅವರೊಂದಿಗೆ ಸಹಾಯಕ ಹೋಲ್ಟ್ ಕೊಲಿಯರ್ ಕೂಡಾ ಇದ್ರು. ಇಲ್ಲಿ ಕೊಲಿಯರ್ ಗಾಯಗೊಂಡ ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ನಂತರ ಅವರು ಕರಡಿಗೆ ಗುಂಡು ಹಾರಿಸಲು ರಾಷ್ಟ್ರಪತಿಗಳಿಂದ ಅನುಮತಿ ಕೋರಿದರು. ಆದರೆ ಗಾಯಗೊಂಡ ಕರಡಿಯನ್ನು ನೋಡಿದಾಗ ಅಧ್ಯಕ್ಷ ರೂಸ್ವೆಲ್ಟ್ ಅವರ ಹೃದಯ ಕರಗಿ, ಕರಡಿಯನ್ನು ಕೊಲ್ಲಲು ನಿರಾಕರಿಸಿದರು. ನಂತರ ನವೆಂಬರ್ 16 ರಂದು, ದಿ ವಾಷಿಂಗ್ಟನ್ ಪೋಸ್ಟ್‌ನ ವ್ಯಂಗ್ಯಚಿತ್ರಕಾರ ಕ್ಲಿಫರ್ಡ್ ಕೆ ಬೆರ್ರಿಮನ್ ಅವರು ನಡೆದ ಈ ಘಟನೆಯನ್ನು ಆಧರಿಸಿ ವ್ಯಂಗ್ಯಚಿತ್ರವನ್ನು ರಚಿಸಿದರು.

ಆಟಿಕೆ ತಯಾರಿಕಾ ಉದ್ಯಮಿ ಮಾರಿಸ್ ಮಿಚ್ಟಮ್ ಪತ್ರಿಕೆಯಲ್ಲಿ ಈ ವ್ಯಂಗ್ಯ ಚಿತ್ರವನ್ನು ನೋಡಿ ಕರಡಿ ಮರಿಯ ಆಕಾರದ ಆಟಿಕೆ ಮಾಡುವ ಬಗ್ಗೆ ಯೋಚಿಸಿದರು. ಅವರು ಅದನ್ನು ತಮ್ಮ ಪತ್ನಿ ರೋಸ್ ಅವರೊಂದಿಗೆ ವಿನ್ಯಾಸಗೊಳಿಸಿದರು ಮತ್ತು ಆ ಆಟಿಕೆಗೆ ‘ಟೆಡ್ಡಿ ಬೇರ್‌ʼ ಎಂದು ಹೆಸರಿಟ್ಟರು. ಟೆಡ್ಡಿ ಎಂಬ ಹೆಸರು ಇಡಲು ಕಾರಣವೆಂದರೆ ಅಧ್ಯಕ್ಷ ರೂಸ್ವೆಲ್ಟ್ ಅವರ ಅಡ್ಡ ಹೆಸರು ಟೆಡ್ಡಿ, ಆ ಆಟಿಕೆಗೆ ಟೆಡ್ಡಿ ಎಂಬ ಹೆಸರಿಡುವ ಮೂಲಕ ಆಟಿಕೆಯನ್ನು ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಸಮರ್ಪಿಸಿದರು. ನಂತರ ಅದು ಬಹಳ ಜನಪ್ರಿಯವಾಯಿತು. ಅದಲ್ಲದೆ ಟೆಡ್ಡಿ ಬೇರ್ ಪ್ರೀತಿಯ ಸಂಕೇತವಾಯಿತು ಮತ್ತು ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನನವಾದ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲು ಪ್ರಾರಂಭಿಸಲಾಯಿತು.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ

 ಟೆಡ್ಡಿ ಡೇ ಮಹತ್ವವೇನು?

  • ಪ್ರೇಮಿಗಳ ದಿನಕ್ಕೆ ನಾಲ್ಕು ದಿನಗಳ ಮೊದಲು ಆಚರಿಸಲಾಗುವ ಟೆಡ್ಡಿ ಡೇ ನಿಮ್ಮ ಪ್ರೇಮಿಯ ಮುಖದಲ್ಲಿ ನಗು ತರಿಸಲು ಸೂಕ್ತವಾದ ದಿನವಾಗಿದೆ. ಈ ದಿನವನ್ನು ಮುದ್ದಾದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಆಚರಿಸಲಾಗುತ್ತದೆ, ಇದು ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಸಂಬಂಧವನ್ನು ಸಂಕೇತಿಸುತ್ತದೆ.
  • ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಡೇಯಂದು ದಂಪತಿಗಳು, ಪ್ರೇಮಿಗಳು ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Mon, 9 February 26

Source link