Category Archives: Blog

Your blog category

ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ ಸ್ಟೀವ್ ಸ್ಮಿತ್ – Kannada News | Steve Smith signs up for PSL 2026

ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ (Steve Smith) ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ (PSL 2026) ಕಣಕ್ಕಿಳಿಯಲಿದ್ದಾರೆ. ಅದು ಸಹ ಪಿಎಸ್​ಎಲ್​ನ ಹೊಸ ತಂಡವಾದ ಸಿಯಾಲ್ಕೋಟ್ ಸ್ಟಾಲಿಯನ್ಸ್ ಪರ ಎಂಬುದು ವಿಶೇಷ. ಅಂದರೆ ಈ ಬಾರಿಯ ಟೂರ್ನಿಯ ಮೂಲಕ ಸಿಯಾಲ್ಕೋಟ್ ಸ್ಟಾಲಿಯನ್ಸ್ ಫ್ರಾಂಚೈಸಿ ಪಾಕಿಸ್ತಾನ್ ಸೂಪರ್ ಲೀಗ್​ಗೆ ಎಂಟ್ರಿ ಕೊಡುತ್ತಿದೆ.

ಇದೀಗ ಈ ಫ್ರಾಂಚೈಸಿಯು ಸ್ಟೀವ್ ಸ್ಮಿತ್ ಅವರನ್ನು ನೇರ ಆಯ್ಕೆಯ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ. ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಸೀಸನ್​ನಲ್ಲಿ ಸ್ಮಿತ್ ಸಿಯಾಲ್ಕೋಟ್ ಸ್ಟಾಲಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅಷ್ಟೇ ಅಲ್ಲದೆ ಈ ತಂಡದ ನಾಯಕನಾಗಿಯೂ ಸ್ಟೀವ್ ಸ್ಮಿತ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡದ ಮುಖ್ಯ ಕೋಚ್ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್. ಇದೀಗ ಪೈನ್ ಸೂಚನೆಯ ಮೇರೆಗೆ ಸಿಯಾಲ್ಕೋಟ್ ಫ್ರಾಂಚೈಸಿಯು ಸ್ಟೀವ್ ಸ್ಮಿತ್ ಅವರನ್ನು ಮಾರ್ಕ್ಯೂ ಆಪ್ಷನ್ ಮೂಲಕ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್​ಗೆ ಸ್ಟೀವ್ ಸ್ಮಿತ್ ನಾಯಕನಾಗಿ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಸ್ಮಿತ್ ಅತ್ಯುತ್ತಮ ನಾಯಕ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಅದರಲ್ಲೂ ಸ್ಟೀವ್ ಸ್ಮಿತ್ ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ ಹಲವು ಟ್ರೋಫಿಗಳನ್ನು ಗೆದ್ದುಕೊಂಡಿದೆ.

ಅದರಲ್ಲೂ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಫ್ರೀಡಂ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗಾಗಿ ಸಿಯಾಲ್ಕೋಟ್ ಸ್ಟಾಲಿಯನ್ಸ್ ಫ್ರಾಂಚೈಸಿ ಕೂಡ ಸ್ಮಿತ್ ಅವರ ಮುಂದಾಳತ್ವದಲ್ಲೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

Published On – 8:59 am, Wed, 4 February 26

Source link

ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ – Kannada News | Rajamouli’s Big Call: No Two Part Film for Mahesh Babu’s ‘Varanasi’, Breaks Own Trend

ಒಂದು ಚಿತ್ರವನ್ನು ಎರಡು ಪಾರ್ಟ್​​ನಲ್ಲಿ ತರುವ ಟ್ರೆಂಡ್​​ನ ಭಾರತದಲ್ಲಿ ಹೆಚ್ಚು ಪ್ರಚಲಿತ ಮಾಡಿದ್ದು ನಿರ್ದೇಶಕ ರಾಜಮೌಳಿ (Rajamouli). ‘ಬಾಹುಬಲಿ’ ಬಳಿಕ ‘ಬಾಹುಬಲಿ 2’ ಚಿತ್ರಕ್ಕೆ ಕಾಯುವಂತೆ ಅವರು ಮಾಡಿದರು. ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಪ್ರಶ್ನೆಯೊಂದಿಗೆ ಮೊದಲ ಭಾಗ ಪೂರ್ಣಗೊಳಿಸಿದ್ದರೆ, ಎರಡನೇ ಪಾರ್ಟ್ ಅಲ್ಲಿ ಅದಕ್ಕೆ ಉತ್ತರ ನೀಡಿದರು. ಆ ಬಳಿಕ ಬಂದ ‘ಆರ್​​ಆರ್​​ಆರ್​’ ಚಿತ್ರವನ್ನು ಒಂದೇ ಭಾಗದಲ್ಲಿ ಪೂರ್ಣಗೊಳಿಸಲಾಯಿತು. ಈಗ ‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್​​​ ಅಲ್ಲಿ ತರಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.

‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್​ ಅಲ್ಲಿ ಮಾಡಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಆದರೆ, ಈಗ ಎಲ್ಲರೂ ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮಾಡಿ, ಅದಕ್ಕೆ ಅರ್ಥವೇ ಇಲ್ಲದಂತೆ ಮಾಡಿಯಾಗಿದೆ. ಕೆಲವರು ಮೊದಲ ಪಾರ್ಟ್ ರಿಲೀಸ್ ಮಾಡುತ್ತಾರೆ. ಹಿಟ್ ಆಗಿಲ್ಲ ಎಂದರೆ ಎರಡನೇ ಪಾರ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದನ್ನು ಮಾಡುವ ಗೋಜಿಗೂ ಹೋಗೋದಿಲ್ಲ. ಈ ಎಲ್ಲಾ ಕಾರಣದಿಂದ ಎರಡು ಪಾರ್ಟ್​​​ಗಳಲ್ಲಿ ಸಿನಿಮಾನ ಮಾಡುವ ಬಗ್ಗೆ ಪ್ರೇಕ್ಷಕರಿಗೂ ಅಸಮಾಧಾನ ಇದೆ. ಸದಾ ಪ್ರೇಕ್ಷಕರ ನಾಡಿಮಿಡಿತ ಅರ್ಥಿಸಿಕೊಳ್ಳೋ ರಾಜಮೌಳಿ ಈ ಬಾರಿ ಆ ಸಾಹಸಕ್ಕೆ ಕೈ ಹಾಕುತ್ತಿಲ್ಲ.

‘ವಾರಣಾಸಿ’ ಸಿನಿಮಾನ ಒಂದೇ ಪಾರ್ಟ್​ ಅಲ್ಲಿ ತರುವ ಆಲೋಚನೆ ಅವರಿಗೆ ಇದೆ. ಈ ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿರಲಿದೆಯಂತೆ. ಸಿನಿಮಾದ ಅವಧಿ ಹೆಚ್ಚಿದ್ದರೂ, ಎಲ್ಲವನ್ನೂ ಒಂದೇ ಪಾರ್ಟ್ ಅಲ್ಲಿ ಹೇಳುವ ನಿರ್ಧಾರಕ್ಕೆ ರಾಜಮೌಳಿ ಬಂದಿದ್ದಾರೆ. ಈ ನಿರ್ಧಾರ ಫ್ಯಾನ್ಸ್​​​ಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು

ಎರಡು ಪಾರ್ಟ್​​ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್​​ಗೆ ಈಗ ಅರ್ಥ ಉಳಿದುಕೊಂಡಿಲ್ಲ. ಪ್ರೇಕ್ಷಕರು ಇದನ್ನು ಹೇಟ್ ಮಾಡುತ್ತಿದ್ದಾರೆ. ಹೀಗಾಗಿ ತಾವೇ ಆರಂಭಿಸಿದ ಟ್ರೆಂಡ್​​ನ ರಾಜಮೌಳಿ ಅವರು ಬ್ರೇಕ್ ಮಾಡಿದ್ದಾರೆ. ಅವರಿಗೂ ಈ ಟ್ರೆಂಡ್ ರೇಜಿಗೆ ಮೂಡಿಸಿದೆ ಎನ್ನಲಾಗಿದೆ. ‘ವಾರಣಾಸಿ’ ಸಿನಿಮಾಗೆ ಮಹೇಶ್ ಬಾಬು ಹೀರೋ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಪಿಂಕ್ ಲೈನ್ ಮೆಟ್ರೋಗೆ ಬಂತು ಇನ್ನೊಂದು ರೈಲು – Kannada News | Bangalore Pink Line Metro: Second Train Arrives, April Launch Expected for Phase 1

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಪಿಂಕ್ ಲೈನ್ ಮೆಟ್ರೋಗೆ ಬಂತು ಇನ್ನೊಂದು ರೈಲು

ಬೆಂಗಳೂರು, ಫೆಬ್ರುವರಿ 04: ಬೆಂಗಳೂರಿಗರಿಗೆ ನಮ್ಮ ಮೆಟ್ರೋ ದಿಂದ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಎರಡನೇ ರೈಲು ಯಶಸ್ವಿಯಾಗಿ ಆಗಮಿಸಿದ್ದು, ಅದರ ಬೋಗಿಗಳು ಕೊತ್ತನೂರು ಡಿಪೋಗೆ ತಲುಪಿವೆ. ಇದರಿಂದ ಪಿಂಕ್ ಲೈನ್ ಯೋಜನೆ ಇನ್ನೊಂದು ಮಹತ್ವದ ಹಂತ ತಲುಪಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್​ನಲ್ಲಿ ಸಂಚಾರ ಆರಂಭ

ಒಟ್ಟು 21.26 ಕಿಲೋಮೀಟರ್ ಉದ್ದದ ಈ ಪಿಂಕ್ ಲೈನ್ ಮಾರ್ಗದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ವಿಭಾಗವಿದ್ದು, ಈ ಭಾಗದಲ್ಲಿ ಈಗಾಗಲೇ ಪರೀಕ್ಷಾ ಕಾರ್ಯಗಳು ಆರಂಭವಾಗಿವೆ. ಎಲಿವೇಟೆಡ್ ಮಾರ್ಗದಲ್ಲಿ ಒಟ್ಟು ಆರು ಸ್ಟೇಷನ್‌ಗಳು ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ರೈಲಿನ ತಾಂತ್ರಿಕ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ. ಈ ಮಾರ್ಗವನ್ನು ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಉಳಿದ 13.76 ಕಿಲೋಮೀಟರ್ ಅಂಡರ್‌ಗ್ರೌಂಡ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲಾ ಕೆಲಸಗಳು ಪೂರ್ಣಗೊಂಡ ಬಳಿಕ ವರ್ಷದ ಅಂತ್ಯಕ್ಕೆ ಸಂಪೂರ್ಣ ಪಿಂಕ್ ಲೈನ್ ಉದ್ಘಾಟಿಸುವ ಉದ್ದೇಶ ಬಿಎಂಆರ್‌ಸಿಎಲ್ ಹೊಂದಿದೆ. ಶೀಘ್ರದಲ್ಲೇ ಹೊಸ ರೈಲುಗಳ ಜೋಡಣೆ ಬಳಿಕ ಟ್ರ್ಯಾಕ್ ಪರೀಕ್ಷೆ ಆರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:45 am, Wed, 4 February 26

Source link

ದೆಹಲಿಯಲ್ಲಿ ಉದ್ಯಮಿಯನ್ನು ಹೆಲ್ಮೆಟ್​​ನಿಂದ ಹೊಡೆದು ಕೊಂದ ಮೂವರು ಡೆಲಿವರಿ ಏಜೆಂಟ್​ಗಳು – Kannada News | Delhi Entrepreneur Murder: Delivery Agents Helmet Attack Kills Businessman in Connaught Place

ನವದೆಹಲಿ, ಫೆಬ್ರವರಿ 04: ರಾತ್ರಿ ಪಾರ್ಟಿಗೆಂದು ಹೋಗಿದ್ದ ಉದ್ಯಮಿಯೊಬ್ಬರನ್ನು ಮೂವರು ಡೆಲಿವರಿ ಏಜೆಂಟ್​​ಗಳು ಸೇರಿ ಹೆಲ್ಮೆಟ್​ನಿಂದ ಹೊಡೆದು ಕೊಲೆ(Murder)ಮಾಡಿರುವ ಘಟನೆ ದೆಹಲಿಯ ಕನ್ನಾಟ್ ಪ್ಲೇಸ್​​ನಲ್ಲಿ ನಡೆದಿದೆ. ಜನವರಿ 3 ರ ರಾತ್ರಿ ಈ ಘಟನೆ ನಡೆದಿದೆ. ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಜನವರಿ 19 ರಂದು ಅವರು ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಗುಪ್ತಾ ಅವರ ರಕ್ತದ ಕಲೆಗಳಿಂದ ಕೂಡಿದ ಬಟ್ಟೆಗಳನ್ನು ವಿಧಿವಿಜ್ಞಾನ ತಂಡ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಿಸಲಾಗಿದೆ. ಮೂವರು ದಾಳಿಕೋರರು ಗುಪ್ತಾಗೆ ಹೆಲ್ಮೆಟ್‌ಗಳಿಂದ ಗುದ್ದಿ, ಬಳಿಕ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಜನಪ್ರಿಯ ಶಾಪಿಂಗ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ರಕ್ತಸಿಕ್ತವಾಗಿ ಅವರನ್ನು ಬಿಟ್ಟು ಹೋಗಿದ್ದರು.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಜನವರಿ 3 ರಂದು ರಾತ್ರಿ, ಕನ್ನಾಟ್ ಪ್ಲೇಸ್‌ನ ಪಾದಚಾರಿ ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವ ಕುರಿತು ಪೊಲೀಸ್ ತಂಡಕ್ಕೆ ಕರೆ ಬಂದಿತು. ಗುಪ್ತಾ ಗಂಭೀರ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಪ್ತಾ ಅವರಿಗೆ ಹೊರಗಿನಿಂದ ಹೆಚ್ಚು ಗಾಯಗಳಾದಂತೆ ಕಾಣದಿದ್ದರೂ ತಲೆಯ ಒಳಗೆ ರಕ್ತಸ್ರಾವವಾಗಿರಬಹುದು ಎಂದು ಪೊಲೀಸರು ಕಂಡುಕೊಂಡರು, ಆದರೆ ಗುಪ್ತಾ ಅವರು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಕಾರಣದಿಂದಾಗಿ, ಕ್ರೂರ ಹಲ್ಲೆಯ ಹಿಂದಿನ ಕಾರಣವನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ: ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು

ಜನವರಿ 4 ರಂದು ಗುಪ್ತಾ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮತ್ತು ಮರುದಿನ ಅವರಿಗೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಆ ನಂತರ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅವರ ಕುಟುಂಬ ಸದಸ್ಯರು ಭಾವಿಸಿದ್ದರು, ಆದರೆ ಅವರು ಜನವರಿ 19 ರಂದು ನಿಧನರಾದರು. ದೆಹಲಿಯ ಪಹರ್‌ಗಂಜ್‌ನಲ್ಲಿ ಎರಡು ಅಂಗಡಿಗಳನ್ನು ನಡೆಸುತ್ತಿರುವ ಶಿವಂ ಅವರ ತಂದೆ ಅನಿಲ್ ಕಾಂತ್ ಗುಪ್ತಾ, ತಮ್ಮ ಮಗನನ್ನು ಕೊಂದ ಸವಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಅನಿಲ್ ಕಾಂತ್ ಅವರ ಮಗ ಜನವರಿ 2 ರಂದು ಸಂಜೆ ಪಾರ್ಟಿಯಲ್ಲಿ ಭಾಗವಹಿಸುವುದಾಗಿ ಹೇಳಿ ಲಕ್ಷ್ಮಿ ನಗರದಿಂದ ಹೊರಟು ಹೋಗಿದ್ದರು. ನಾನು ಪದೇ ಪದೇ ಕರೆ ಮಾಡುತ್ತಲೇ ಇದ್ದೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ನಂತರ, ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಂದ ನನಗೆ ಕರೆ ಬಂತು ಎಂದು ಉದ್ಯಮಿಯ ತಂದೆ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕೆಜಿಎಫ್ 3 ಟೀಸರ್ ರಿಲೀಸ್’; ಹೀಗೂ ಟ್ರೋಲ್ ಮಾಡಬಹುದು

‘ಕೆಜಿಎಫ್ 3’ ಸಿನಿಮಾ ಟೀಸರ್ ರಿಲೀಸ್ ಆಗಿದೆ! ಹಾಂಗತ ಇದು ನಿಜ ಎಂದುಕೊಳ್ಳಬೇಡಿ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ‘ಧುರಂಧರ್ 2’ ಚಿತ್ರವನ್ನು ಟ್ರೋಲ್ ಮಾಡಲು ಬಳಸಲಾಗುತ್ತಿದೆ. ‘ಧುರಂಧರ್ 2’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮೊದಲ ಭಾಗದ ಎಂಡ್ ಕಾರ್ಡ್​​​ನಲ್ಲಿ ತೋರಿಸಿದ ದೃಶ್ಯಗಳನ್ನೇ ಟೀಸರ್ ಎಂದು ಬಿಡಲಾಗಿದೆ. ಹೀಗಾಗಿ, ‘ಕೆಜಿಎಫ್ 2’ ಎಂಡ್ ಕಾರ್ಡ್ ಅಲ್ಲಿ ಬರೋ ‘ಕೆಜಿಎಫ್ 3’ ಬಗೆಗಿನ ಹಿಂಟ್​ನ ಯಶ್ ಫ್ಯಾನ್ಸ್ ‘ಕೆಜಿಎಫ್ 3 ಟೀಸರ್ ಬಿಡುಗಡೆ’ ಎಂಬ ಕ್ಯಾಪ್ಶನ್ ನೀಡಿ ವೈರಲ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

Source link

8ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದಲೇ ಅತ್ಯಾಚಾರ, ಗರ್ಭಿಣಿಯಾದಾಗ ಕೃತ್ಯ ಬಹಿರಂಗ – Kannada News | Deoria Shocked as Schoolgirl’s Pregnancy Exposes Alleged Assault by Classmates

ಡಿಯೋರಿಯಾ, ಫೆಬ್ರವರಿ 04: ಎಂಟನೇ ತರಗತಿ ಬಾಲಕಿ(Girl) ಮೇಲೆ ಆಕೆಯ ಸಹಪಾಠಿಗಳೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಡಿಯೋರಿಯಾದಲ್ಲಿ ನಡೆದಿದೆ. ಆಕೆಗೆ ಮಾದಕದ್ರವ್ಯ ಕೊಟ್ಟು ಅತ್ಯಾಚಾರವೆಸಗಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿಯಾದಾಗ ಕೃತ್ಯ ಬೆಳಕಿಗೆ ಬಂದಿದೆ. ಎರಡು ತಿಂಗಳ ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಅಪ್ರಾಪ್ತ ವಯಸ್ಕ ಗರ್ಭಿಣಿಯಾಗಿದ್ದಾಳೆಂದು ದೃಢಪಟ್ಟ ನಂತರ ಈ ಭಯಾನಕ ಅಪರಾಧ ಬೆಳಕಿಗೆ ಬಂದಿದೆ.

ನವೆಂಬರ್​​ನಲ್ಲಿ ಈ ಘಟನೆ ನಡೆದಿತ್ತು, ಅಂದು ಶಿಕ್ಷಕರ ಅನುಪಸ್ಥಿತಿಯ ಲಾಭ ಪಡೆದು ಆಕೆಯ ತರಗತಿಯ ಕೆಲವು ಹುಡುಗರು ಪ್ರಸಾದ್ ಎಂದು ಹೇಳಿ ಮತ್ತು ಬರುವ ಔಷಧಿ ಬೆರೆಸಿದ್ದ ಸಿಹಿತಿಂಡಿಯನ್ನು ಕೊಟ್ಟಿದ್ದರು. ಆಕೆಗೆ ನಿದ್ರಾಜನಕ ಔಷಧಿ ಬೆರೆಸಿದ್ದ ಲಡ್ಡು ಕೊಡಲಾಗಿತ್ತು.

ಆಕೆ ಕ್ರಮೇಣ ಪ್ರಜ್ಞಾಹೀನಳಾದಳು, ಆರೋಪಿಗಳು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಮುಂದಾದರು. ಅವರು ಅವಳನ್ನು ಶಂಕಿತರಲ್ಲಿ ಒಬ್ಬರಿಗೆ ಸೇರಿದ ಹತ್ತಿರದ ಮನೆಗೆ ಕರೆದೊಯ್ದರು, ಅಲ್ಲಿ ಅವಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳು.

ದುಷ್ಕರ್ಮಿಗಳು ಆಕೆಗೆ ಬೆದರಿಕೆ ಹಾಕಿದರು, ತಾವು ಕೃತ್ಯವನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಿದ್ದೇವೆ ಮತ್ತು ಅವಳು ಹೊರಗೆ ಮಾತನಾಡಿದರೆ ಅದನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತೇವೆ ಎಂದು ಹೇಳಿಕೊಂಡರು. ಭಯಭೀತರಾದ ವಿದ್ಯಾರ್ಥಿನಿ ಎರಡು ತಿಂಗಳ ಕಾಲ ಇದನ್ನು ರಹಸ್ಯವಾಗಿಟ್ಟಳು.
ಹುಡುಗಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತದ್ದಳು, ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಈ ಕೃತ್ಯ ಬೆಕಿಗೆ ಬಂದಿದೆ.

ಮತ್ತಷ್ಟು ಓದಿ: ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ

ಆಕೆಯ ಪೋಷಕರು ಅವಳನ್ನು ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಕರೆದೊಯ್ದರು, ಮತ್ತು ಫಲಿತಾಂಶಗಳು ಅವರನ್ನು ದಿಗ್ಭ್ರಮೆಗೊಳಿಸಿತ್ತು. ಅಪ್ರಾಪ್ತ ವಯಸ್ಕಳು ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಬಳಿಕ ಆಕೆ ನಡೆದಿದ್ದೆಲ್ಲವನ್ನು ಪೋಷಕರಿಗೆ ವಿವರಿಸಿದ್ದಾಳೆ.

ಸಂತ್ರಸ್ತೆಯ ತಾಯಿಯ ಔಪಚಾರಿಕ ದೂರಿನ ಮೇರೆಗೆ, ಲಾರ್ ಪೊಲೀಸರು ಜನವರಿ 31 ರಂದು ಎಫ್‌ಐಆರ್ ದಾಖಲಿಸಿದರು. ಪ್ರಮುಖ ಆರೋಪಿ ಶುಭಂ ಸೈನಿ ಮತ್ತು ಅಪ್ರಾಪ್ತ ವಯಸ್ಕ ಸಹಚರನನ್ನು ಬಂಧಿಸಲಾಗಿದೆ  ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಂತೋಷ್ ಕುಮಾರ್ ದೃಢಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಕಠಿಣ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:16 am, Wed, 4 February 26

Source link

Bengaluru Air Quality: ಬೆಳಗಾವಿ, ಉಡುಪಿಯ ಗಾಳಿಯೂ ಉಸಿರಾಡಲು ಯೋಗ್ಯವಲ್ಲ! – Kannada News | Bangalore Air Pollution Crisis: Bengaluru Air quality is poor, Udupi and Belagavi’s AQI is unhealthy

ಬೆಳಗಾವಿ, ಉಡುಪಿಯ ಗಾಳಿಯೂ ಉಸಿರಾಡಲು ಯೋಗ್ಯವಲ್ಲ!

ಬೆಂಗಳೂರು, ಫೆಬ್ರುವರಿ 03: ಬೆಂಗಳೂರಿನ ವಾಯು ಗುಣಮಟ್ಟ  (Bengaluru Air Quality) ದಿನಕ್ಕೊಂದು ರೀತಿ ಬದಲಾಗುತ್ತಿದೆ. ಅದರೊಂದಿಗೆ ಬೆಳಗಾವಿ ಮತ್ತು ಉಡುಪಿಯ ಏರ್ ಕ್ವಾಲಿಟಿ ಸಹ 200ಕ್ಕೆ ಹತ್ತಿರವಾಗುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಬೆಳಗಾವಿಯ ಏರ್ ಕ್ವಾಲಿಟಿಯಲ್ಲಿ ಏಕಾಏಕಿ ಕುಸಿತ

ಕೆಲ ದಿನಗಳಿಂದಲೂ ಏರಿಕೆ ಕಾಣುತ್ತಿದ್ದ ಬೆಳಗಾವಿಯ ಏರ್ ಕ್ವಾಲಿಟಿ, ಇಂದು 170ಕ್ಕೆ ಹೋಗಿ ತಲುಪಿದೆ. ಉಡುಪಿಯ AQI 166 ಆಗಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿ ಇಂದು 142ಕ್ಕೆ ಇಳಿದಿರುವ ವಾಯು ಗುಣಮಟ್ಟ ಜನರಲ್ಲಿ ಭರವಸೆ ಮೂಡಿಸಿದೆ.ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಸೂಕ್ಷ್ಮಾಣುಗಳಿಂದಲೂ ಜೀವಕ್ಕೆ ಹಾನಿ

PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ.

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅನಿವಾರ್ಯವಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –142
  • ಮಂಗಳೂರು-169
  • ಮೈಸೂರು –144
  • ಬೆಳಗಾವಿ – 170
  • ಕಲಬುರ್ಗಿ-152
  • ಶಿವಮೊಗ್ಗ – 157
  • ಬಳ್ಳಾರಿ – 153
  • ಹುಬ್ಬಳ್ಳಿ- 158
  • ಉಡುಪಿ –166
  • ವಿಜಯಪುರ –157

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಷ್ಣುವರ್ಧನ್​​​ಗೆ ನಾನ್​ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?

ಇತ್ತೀಚೆಗೆ ಧನಂಜಯ್ (Dhananjay) ಅವರ ಆಹಾರ ಕ್ರಮ ಚರ್ಚೆಗೆ ಕಾರಣ ಆಗಿದ್ದು ಗೊತ್ತೇ ಇದೆ. ಲಿಂಗಾಯತ ಸಮುದಾಯಕ್ಕೆ ಸೇರಿ ಅವರು ನಾನ್ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಆದರೆ, ಧನಂಜಯ್ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮನ್ನು ತಾವು ಅವರು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಅವರ ಊಟದ ಪದ್ದತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದೇ ಹೇಳಬಹುದು.

ವಿಷ್ಣುವರ್ಧನ್ ಅವರು ನಾನ್​​ವೆಜ್ ತಿನ್ನುತ್ತಿದ್ದರು. ಅವರು ಬ್ರಾಹ್ಮಣ ಕುಟುಂಬದವರಾದರೂ ಆಹಾರ ಪದ್ಧತಿಯನ್ನು ತಮ್ಮಿಷ್ಟದಂತೆ ರೂಢಿಸಿಕೊಂಡರು. ಈ ವಿಷಯವನ್ನು ಅನೇಕರು ವಿವರಿಸಿದ್ದು ಇದೆ. ಹಿರಿಯ ನಿರ್ದೇಶಕ ಎಚ್. ಆರ್. ಭಾರ್ಗವ್ ಮತ್ತು ರಾಜೇಂದ್ರ ಸಿಂಗ್ ಬಾಬು ಈ ಬಗ್ಗೆ ಮಾತನಾಡಿದ್ದರು. ವಿಷ್ಣುಗೆ ಈ ಅಭ್ಯಾಸ ಹೇಗೆ ಆರಂಭ ಆಯಿತು, ಇದನ್ನು ಕಲಿಸಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡುವ ಕೆಲಸವನ್ನು ಇವರುಗಳು ಮಾಡಿದ್ದರು.

ವಿಷ್ಣುವರ್ಧನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಸಣ್ಣ ವಯಸ್ಸಿನಿಂದಲೇ ಮಿತ್ರರು. ರಾಜೇಂದ್ರ ಅವರ ಮನೆಗೆ ವಿಷ್ಣು ತೆರಳುತ್ತಿದ್ದರು ಮತ್ತು ಅಲ್ಲಿ ಊಟವನ್ನು ಮಾಡುತ್ತಿದ್ದರು. ಆಗ ರಾಜೇಂದ್ರ ಅವರ ಮನೆಯಲ್ಲಿ ಮಾಡುತ್ತಿದ್ದ ಮಾಂಸಾಹಾರದ ಊಟದ ರುಚಿಯನ್ನು ವಿಷ್ಣು ಸವಿಯುತ್ತಿದ್ದರು. ಹಾಗೆ ಅವರಿಗೆ ಮಾಂಸಾಹಾರ ಸೇವನೆ ಅಭ್ಯಾಸ ಆಯಿತು. ಇದನ್ನು ಅವರಿಗೆ ಯಾರೂ ಕಲಿಸಿರಲಿಲ್ಲ. ಭಾರತಿ ವಿವಾಹ ಆದ ಬಳಿಕ ಮನೆಯಲ್ಲೇ ನಾನ್ ವೆಜ್ ಅಡುಗೆ ಮಾಡುತ್ತಿದ್ದರಂತೆ.

ಇನ್ನು, ಆರ್ ಭಾರ್ಗವ್ ಅವರು ವಿಷ್ಣುವರ್ಧನ್ ಜೊತೆ ಕೆಲವು ಸಿನಿಮಾ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ವಿಷ್ಣು ಜೊತೆ ಅವರಿಗೆ ಸಾಕಷ್ಟು ಆಪ್ತತೆ ಇತ್ತು. ಅವರು ವಿಷ್ಣುನ ಹತ್ತಿರದಿಂದ ಬಲ್ಲವರಾಗಿದ್ದರು. ಹೀಗಾಗಿ, ಅವರ ಬಗ್ಗೆ ತಮಗೆ ತಿಳಿದ ವಿಚಾರ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’; ಧನಂಜಯ್

ಅವರು ಹೇಳುವ ಪ್ರಕಾರ ಒಮ್ಮೊಮ್ಮೆ ನಾನ್ ವೆಜ್, ಸ್ಮೋಕಿಂಗ್​​ನ ಆರು ತಿಂಗಳು ಬಿಟ್ಟು ಬಿಡುತ್ತಿದ್ದರಂತೆ. ವಿಷ್ಣು ಕೆಲವೊಮ್ಮೆ ತಾವು ಶುದ್ಧ ಸಸ್ಯಹಾರಿ ಎನ್ನುತ್ತಿದ್ದರಂತೆ. ಆಮೇಲೆ ಇನ್ಯಾವಾಗಲೋ ನಾನ್ ವೆಜ್ ತಿನ್ನುತ್ತಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕರ್ಣ’ ಧಾರಾವಾಹಿಗೆ ಎಂಟ್ರಿ ಆಯ್ತು ಹೊಸ ಪಾತ್ರ; ಇನ್ಮುಂದೆ ಮತ್ತಷ್ಟು ಟ್ವಿಸ್ಟ್ – Kannada News | Karna Serial: Revenge Arcs and New Character Riya Shake Up Plot

‘ಕರ್ಣ’ ಧಾರಾವಾಹಿ  (Karna Serial) ಹೊಸ ಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಇಷ್ಟು ದಿನ ಕರ್ಣ ಧಾರಾವಾಹಿಯಲ್ಲಿ ಎಲ್ಲ ಗೆಲುವು ವಿಲನ್​​ದೇ ಆಗುತ್ತಿತ್ತು. ಆದರೆ, ಈಗ ಕರ್ಣನ ಗೆಲುವಿನ ಸಮಯ. ಧಾರಾವಾಹಿಯಲ್ಲಿ ಕರ್ಣನಿಗೆ ರಿವೇಂಜ್ ತೆಗೆದುಕೊಳ್ಳುವ ಸಮಯ ಬಂದಿದೆ. ಇದರ ಜೊತೆಗೆ ಹೊಸ ಪಾತ್ರಧಾರಿಯ ಎಂಟ್ರಿ ಕೂಡ ಆಗಿದೆ. ಇದು ಸಾಕಷ್ಟು ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.

ಕರ್ಣನ ಸಹೋದರ ಸಂಜಯ್ ತುಂಬಾನೇ ಮೆರೆಯುತ್ತಿದ್ದ. ತಂದೆ ಜೊತೆ ಸೇರಿ ಸಾಕಷ್ಟು ಕೆಟ್ಟ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದ. ಆತ ಕೊಬ್ಬಿನಿಂದ ಮೆರೆಯುತ್ತಿದ್ದ. ಈತನಿಗೆ ಈಗ ಪಾಠ ಕಲಿಸೋ ಸಮಯ ಬಂದೇ ಬಿಟ್ಟಿದೆ. ಹೌದು, ಸಂಜಯ್​​ಗೆ ಪಾಠ ಕಲಿಸಲು ರಿಯಾ ಬಂದಿದ್ದಾಳೆ. ಇಬ್ಬರೂ ಒಂದೇ ಆಟೋ ಏರುವ ಪರಿಸ್ಥಿತಿ ಬಂದಿದೆ. ಅಲ್ಲಿಂದ ಇವರ ಪ್ರೇಮ ಪ್ರಸಂಗ ಆರಂಭ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಸಂಜಯ್ ತುಂಬಾನೇ ಕೆಟ್ಟವನು. ಆತನ ಬಳಿ ಪ್ರೀತಿಗೆ ಜಾಗವೇ ಇಲ್ಲ. ಆತನ ಮನಸ್ಸಲ್ಲಿ ಇರೋದು ಕೇವಲ ದ್ವೇಷ ಮಾತ್ರ. ಈ ದ್ವೇಷವನ್ನು ತೆಗೆದು ಹಾಕಲು ಕರ್ಣ ಸಾಕಷ್ಟು ಪ್ರಯತ್ನಿಸಿದ. ಆದರೆ, ಅದು ಯಶಸ್ವಿ ಆಗಲೇ ಇಲ್ಲ. ಈ ಕಾರಣದಿಂದಲೇ ಕರ್ಣ ಈ ಮಾರ್ಗ ಉಪಯೋಗಿಸಿರಬಹುದು ಎಂದು ಅನೇಕರು ಊಹಿಸುತ್ತಾ ಇದ್ದಾರೆ.

ಇದನ್ನೂ ಓದಿ: ಕರ್ಣನ ಟಾರ್ಚರ್​​ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ

ಸಂಜಯ್ ಹಾಗೂ ರಿಯಾ ಲವ್​​​ಸ್ಟೋರಿ ನೋಡಲು ವೀಕ್ಷಕರು ಕಾದಿದ್ದಾರೆ. ಈಗಾಗಲೇ ಕರ್ಣನ ರಮೇಶ್​​ಗೆ ಪಾಠ ಕಲಿಸೋ ಕೆಲಸ ಆಗುತ್ತಿದೆ. ರಮೇಶ್ ಕೆಟ್ಟ ಕೆಲಸಗಳು ಬಯಲಿಗೆ ಬಂದಿವೆ. ಈಗ ಕರ್ಣನ ರಿವೇಂಜ್ ಎಪಿಸೋಡ್ ಸಾಕಷ್ಟು ಗಮನ ಸೆಳೆಯುತ್ತಿದೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಸಂಜಯ್ ಬೈಕ್ ಹಾಳಾಗಿತ್ತು. ಆತ ಅದನ್ನು ಸರಿಮಾಡಿಸಿಕೊಂಡು ಕಚೇರಿಗೆ ತೆರಳಿದ್ದಾನೆ. ಈ ವೇಳೆ ಬೈಕ್ ಮತ್ತೆ ಕೈ ಕೊಟ್ಟಿದೆ. ಆಗ ಆಟೋ ಹಿಡಿಯಲು ಹೋದಾಗ ರಿಯಾಳ ಭೇಟಿ ಆಗಿದೆ.

ಕರ್ಣ ಧಾರಾವಾಹಿಯಲ್ಲಿ ಕರ್ಣನು ನಿತ್ಯಾಳನ್ನು ಮದುವೆ ಆಗಿದ್ದಾನೆ. ಆತನಿಗೆ ನಿಧಿ ಮೇಲೆ ಪ್ರೀತಿ ಇದೆ. ಇದು ಇನ್ನೂ ರಿವೀಲ್ ಆಗಿಲ್ಲ. ಇದು ರಿವೀಲ್ ಆದ ಬಳಿಕ ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್​​​ಗಳನ್ನು ಪ್ರೇಕ್ಷಕ ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link